Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕರೋನಾ

ಜಗದಾಗ ಎಂತಹ ರೋಗ ಬಂತು ನೋಡಿರಣ್ಣ..
ಮುಗ್ಧ ಜನರ ಪ್ರಾಣವ ಹೀರುತಿಹುದಣ್ಣ.
ರೋಗಕ ಬಡವ ಶ್ರೀಮಂತರೆನ್ನುವ ಭೇದವಿಲ್ಲ ನೋಡಿರಣ್ಣ.
ಇನ್ನಾದರು ತಿಳಿದುಕೋ ಆ ದೇವರ ಮುಂದ ಯಾವುದು ದೊಡ್ಡದಲ್ಲ ಎಂಬುದನ್ನ...

- smiley

21 Apr 2020, 09:51 am

ಮೊದಲ ಕವನ.

ಮೊಳಕಿತು ಪ್ರೇಮ ಮೊದಲ ನೋಟದಿ
ಮಿಡಿಯುತ್ತಿದೆ ನಿನ್ನ ಗೆಜ್ಜೆನಾದ ಹೃದಯದಲಿ
ಯಾರಿಗೆ ಹೇಳಲಿ ನನ್ನ ಪ್ರೇಮ ನಾದವ
ಓ ಚೆಲುವೇ!

- kempayya

20 Apr 2020, 07:48 pm

ಕೈ ತುತ್ತು

ಮೋಡಗಳಿಂದ ಮರೆಯಾಗಿರುವ ಚಂದಿರನೆ
ಬೇಗನೆ ಚೆಲ್ಲು ನಿನ್ನ ಹೂಳಪನ್ನು
ಹುಣ್ಣಿಮೆ ಚಂದಿರನು ಯಾರು ತಾರೆ ಕಾಣರು
ಅದು ತಾರಾವ್ಯೂಹದ ಹೂಯಳಪಿಗಿಂದ ಚೆಂದ
ಚಂದ್ರನ ಬೆಯತಳದಿಂಗಳಲ್ಲಿ ನಮ್ಮ ಅಮ್ಮನ
ಪ್ರೀತಿಯ ಕೈ ತುತ್ತು ಎಲ್ಲಕ್ಕಿಂತಲೂ ಶ್ರೇಷ್ಠ

ಅಣ್ಣ ತಮ್ಮರ ಆ ತರಳೆಗಳು ಸೋದರಿಯರ ಭಾವನೆಯು ಇದರೂಟ್ಟಿಗೆ ಅಜ್ಜಿಯ ಸಿಟ್ಟು
ಕದ್ದು ಮುಚ್ಚಿ ಮಾಡುವ ಆ ಬಾಲ್ಯದ ತುಂಟಾದ
ಎಷ್ಟು ಕೋಟಿ ಕೂಟ್ಟರು ಸಿಗದು ಅಲ್ಲವೇ...

- RoopaGowtham

20 Apr 2020, 07:42 pm

ನನ್ನವನು....‌‌

ನಗುಮುಗದ ರಾಜ
ಕೋಪವಂದಿಷ್ಟು ಇಲ್ಲ
ಎಂದುಕೊಂಡರೆ ಕೋಪದೊಳಗೆ
ಬಿದ್ದು ವರಳಾಡುವಷ್ಟು ದೀರ......

ಕನಸುಗಳೆ ಇಲ್ಲದ ಚೋರ
ಅಂದು ಕೊಂಡರೆ ಗಂಟು ಕಟ್ಟಿ
ಅಟ್ಟದ ಮೇಲೆ ಆಸೆಗಳ
ಮುಟೆಗಳನ್ನೆ ಇಟ್ಟಿದ ಅರಸ.....

ಪೀತಿಯೆ ಇಲ್ಲ ವೆಂದು
ಮೌನವಾಗಿದ್ದರೆ
ಪ್ರೀತಿಯ ಕಡಲೋಳಗೆ
ದಿನವು ಸಾಗುತಿರುವ ಮುದ್ದು ಚೋರ......

- ರಾಗಸಿರಿ....

20 Apr 2020, 03:28 pm

ಜಗಕೆ‌ ನಾ ನೆಂಟ

ಬಿಟ್ಟು ಬಿಡದ
ಹುಟ್ಟು ಸಾವಿನ ನಂಟ
ತಿಳಿದರೂ, ಇಲ್ಲದಿದ್ದರೂ
ಈ ಜಗಕೆ ನಾ ನೆಂಟ

ಮುಗಿದ ಮೇಲೆ
ಜೀವನದ ಆತಿಥ್ಯದೂಟ
ಬುವಿಯಿಂದ ಹೋಗಬೇಕು
ಕಳಚಿ ದೇಹದ ಗೂಟ

- ಶ್ರೀಕಾವ್ಯ

20 Apr 2020, 12:07 pm

ಪ್ರೀತಿಯೆಂಬ ಬತ್ತಿ ಇಟ್ಟು

ಸ್ನೇಹ ಅನ್ನೋದು ಗುಡಿ ಮಾಡಿ
ಪ್ರೀತಿ ಅನ್ನುವ ದೇವರ ಮಾಡಿ
ಸ್ನೇಹವೆಂಬ ಹಣತೆ ಇಟ್ಟು
ಪ್ರೀತಿಯೆಂಬ ಬತ್ತಿ ಇಟ್ಟು
ಸ್ನೇಹಿತರ ಜೊತೆ ನಾ ದೀಪ ಹಚ್ಚಿದೆ ಇಲ್ಲಿ ಮನಸಿಟ್ಟು
ಕಾಪಾಡ ಬೇಕು ಎಲರೂ ಮನಸಿಟ್ಟು

✍️ವಿ.ಶಿವಾನಂದ

- Shivanand V Anandadavar

20 Apr 2020, 12:39 am

ಪೃಥ್ವಿತಾಯಿ

         ಪೃಥ್ವಿತಾಯಿ

ಚಿಗುರಿಡತ ಬ್ರಹ್ಮ ಹಸಿರ
ಜೀವಜಂತಿಗಿತ್ತೆನೀ ಉಸಿರ
ಲತೆವೃಕ್ಷ ಕಾಡ ಫಲಪುಷ್ಪ ಧಾನ್ಯತೂಗಿ
ಖಗಮೃಗ ಮನುಜ ಹಸಿವನೀಗಿ
       ಸಲಹಿದ ಪೃಥ್ವಿಯೇ ನಿನಗೆ ಕೋಟಿವಂದನೆ
ಚಾಗಿಸದೆ ಜೀವ ಸಂಕುಲ
ನೋಯಿಸದೆ ದೇವಬಸಿರ
ನಗತಾರೋಗ್ಯದಿ ಮನುಕುಲ
ಶಾಂತಿಚೈತನ್ಯ ಬಾಳತಳಿರ
       ತಳೆಸಿದ ಪೃಥ್ವಿಯೇ ನೀ ಎಮ್ಮ ಪ್ರಾಣದೈವ
ಜೀವಭಾವದ ಸೆಲೆ ನೀ
ಸಹನ ಸಹಿಷ್ಣತಗೆ ನೆಲೆ ನೀ
ಬ್ರಹ್ಮಶಕ್ತಿಯಿಂ ವೃದ್ಧಿಸಿ
ಕೋಟಿಜೀವ ಗರ್ಭಧರಿಸಿ
       ನಿನಗಿದೋ ನಿನ್ನೊಡಲ ಮಕ್ಕಳ ವಂದನೆ
ಒಡಲಹಸಿವ ನೀಗಲು
ವಿಶ್ವದೆಲ್ಲ ಮಡಿಲ ಮಕ್ಕಳ
ಪಿಡಿದು ನಿಂತಿರ್ಪೆ ನೀ
ದೈವನ್ನಾದಿ ದ್ರವ್ಯಂಗಳ
       ತುತ್ತಿಡುವ ತಾಯೇ ಬ್ರಹ್ಮಸುತೆಯೇ ವಂದನೆ
ಮಣ್ಣವ್ವೆ ನಿನ್ನ ಎದೆಯಿಂ
ಉದಿಸ ನದನದಿ ಜಲಧಾರೆ
ಮಣ್ಣಿಡಿಸಿ ಅಪ್ರಿಯಂ
ಯುಗ ತೊಯ್ಯಲಿ ಜೊನ್ನರೆ
     ಬೆಳಗು ಪೃಥ್ವಿಯೇ ನಿನಗೆ ಕೋಟಿವಂದನೆ
ಎರ್ದೆಮನ ಶರೀರಗಳೊಳಿಟ್ಟು
ಸಂಸ್ಕಾರ ಪ್ರಕೃತಿಕ ಶುದ್ಧಿಯ
ಮನುಜ ರಕ್ತರಕ್ತದಲೆ ತಳೆಸಿಟ್ಟು
'ವಸುದೈವಕಂ'ಮಾತೃಬುದ್ದಿಯ
       ಹೆತ್ತತಾಯ ಪೃಥ್ವಿಯೇ ನಿನಗೆ ಕೋಟಿವಂದನೆ

- samna

19 Apr 2020, 11:11 pm

ಬಡವರ ಕಣ್ಣೀರು

ಶೀರ್ಷಿಕೆ

ಬಡವರ ಕಣ್ಣೀರು
"""""""""''''''''"""""""""""""
ಗುಡಿಸಲೆಂಬ ಅರಮನೆಯಲ್ಲಿ,
ಬಡತನವೆಂಬ ಸೆರಮನೆಯಲ್ಲಿ,
ಹಸಿವು ಎಂಬ ಶಿಕ್ಷೆಯನ್ನು
ಅನುಭವಿಸುತ್ತಿರುವ
ಬಡ ಜೀವ ನಾನು.

ಹಸಿದ ಹೊಟ್ಟೆಗಿಂದು.
ಬಸಿದ ಗಂಜಿಯೂ ದೊರೆಯದೆ,
ಚಿಂದಿ ಆಯುವ ಬದುಕಾಗಿದೆ
ನನ್ನದು.

ಬಿಸಿಲ ಧಗೆಯಲ್ಲಿ ಬೆಂದು.
ಮಸಣದ ಹೊಗೆಯಂತೆ ನೊಂದು.
ಈ ಬಂಜರು ಭೂಮಿಯಲ್ಲಿ ನಿಂದು.
ಮಳೆರಾಯ ಬಾರಯ್ಯ ಎಂದು.
ಆಗಸದಿ‌ ಅಂಗಲಾಚಿದರೇನು,
ದೊರೆಯದು ಒಂದ್ಹಿಡಿ ಮಣ್ಣು.

ಕಣ್ಣಂಚಲ್ಲಿ ಬತ್ತಿದ ಕಣ್ಣೀರು
ಮರೆಯಾಗಿ,
ಜಿನುಗುತ್ತಿದೆ ರಕ್ತದ ಹನಿಯಾಗಿ,
ಬಡವನ ಕೊರಗನ್ನು ಕೇಳಲಾರೆಯಾ ನೀ,
ಹಸಿದ ಹೊಟ್ಟೆಗೆ ಹಸಿವಿನಿಂದಲೇ
ಮರಣವೇಕಯ್ಯ.

ತನ್ನ ಮಗನ ಜೀವನ ಪ್ರಜ್ವಲವಾಗಿರಲೆಂದು,
ಹಡೆದ ನನ್ನ ತಾಯಿ ನೆನೆದರೆ,
ಬಡತನವೆಂಬ ಸುಳಿಯಲ್ಲಿ ಸಿಲುಕಿ,
ದುರ್ಬಲವಾಗುತ್ತಿರುವುದನ್ನು
ನೋಡಲಾಗದೆ ಅಸುನೀಗಿದಳು
ಅವಳು.

ಮುಂದೊಂದು ದಿನವಾದರೂ ಈ ಬಡವನಿಗೆ ದಾರಿ ಕಾಣುವುದೆಂದು,
ಅರಿತು ಮನೆಯ ಜಗಲಿಯಲ್ಲಿ
ಕುಳಿತು ಸಾವಿಗಾಗಿ ಕಾದಿರುವೆ ನಾ . . ! !

ರಚನೆ :-
ನೆನಪಿನ ನಾವಿಕ - ಸಂತೋಷ್ ಜೀತು.

- ಸಂತೋಷ್//ಜೀತು

19 Apr 2020, 01:55 pm

ಜಗದ ಅಳಿವು ಉಳಿವು....

ಸದ್ದು ಗದ್ದಲದಿಂದ ತುಂಬಿ
ಸದಾ ಜನಜಂಗುಳಿಯಿಂದ
ತುಂಬುತ್ತಿದ ಜಾಗ ಇಗ ಎಲ್ಲವು ಕಾಲಿ ಕಾಲಿ

ಕಾಲಿ ರಸ್ಥೆಯು ಮೌನವಾಗಿ ನುಡಿಮುತ್ತೊಂದು
ನುಡಿಯುವಂತೆ ಬಾಸವಾಗುತ್ತಿದೆ
ಹೇ ಮನುಜ ಅಂದು ನೀನು ನನ್ನನ್ನು ದುರುಪಯೋಗ ಪಡಿಸಿ ಕಲೂಶಿತ ಮಾಡದಿದ್ದರೆ ಇಂದು ನೀ ನನ್ನನ್ನು ತೊರೆದು ಬದುಕುವ ಕಾಲ ಬರುತ್ತಿರಲಿಲ್ಲ ಎಂದು........

ಹೀಗೊದು ಪ್ರಕ್ರೃತಿ ಸುಂದರಾವಾಗಿ ತನ್ನಂತರಾಳದ ನೋವನ್ನು ಸಂದ್ದಿಲ್ಲದೆ ನುಡಿಯುತ್ತಿದೆ ಕೇಳಿಕೊ ಮನವೆ ನನ್ನೊಡಲ ಚಿಗುರೊಡೆಯದ ಗಿಡಮರಬಳ್ಳಿಗಳೆಲ್ಲವನ್ನು ಕಡಿದು ನನ್ನನು ನಾಶ ಪಡಿಸಿದರಲ್ಲ
ಅಂದು ನೀನು ನನ್ನನ್ನು ಕಡಿಯದೆ ಬಿಟ್ಟಿದ್ದರೆ ಇಂದು ನೀನು ನಿನ್ನೊಡಲ ಕಂದಮ್ಮಗಳು
ಈ ಕೆಟ್ಟ ಗಾಳಿಯಿಂದ ನರಕ ಅನುಬವಿಸುವಂತೆ ಎಂದಿಗು ಆಗುತ್ತಿರಲಿಲ್ಲವೆಂದು........

ಸದಾ ಸದ್ದು ಮಾಡುತ್ತ ಹರಿಯುತ್ತ ಗಂಗೆ ಇಂದು ದೂರದಲ್ಲೆ ನಿಂತು ನಗತಾ ಹೀಗೊಂದು ಮಾತೊಂದ ನುಡಿಯುತಿಹಳು
ನನ್ನಿಂದ ನೀನು ಶುದ್ದನಾಗಬೇಕು ನನ್ನನೆ ಕಲುಷಿತ ಮಾಡಿದರೆ ನೀನೆಂದಿಗು ಶುದ್ದ ನಾಗಲಾರೆ ಎಂದು
ಈಗಲಾದರು ಅರಿತುಕೊ ಇನ್ನೆಂದಿಗು ಇಂತ ಕೆಟ್ಟ ಮನಸಿಂದ ಕೆಟ್ಟ ಕೆಲಸವನ್ನು ಎಂದಿಗು ಮಾಡದಿರು
ನಿನೆಷ್ಟೆ ಕಲುಷಿತ ಮಾಡಿದರೂ ನಾನು ನನ್ನ ತನವನ್ನು ಮತ್ತೆ ಮತ್ತೆ ಪಡೆದೆ ಪಡೆಯುವೆ ಎಂದು ಈಡಿ ಪ್ರಕ್ರೃತಿಯ
ಮನುಜ ಲೋಕದಮೇಲೆ ಹೊಸದೊಂದು ಪುಟವ ತೆರೆದು ಬದುಕು ಎಂದು ಸ್ವಚ್ಚಂದವಾಗಿ ಹೇಳುತ್ತಿವೆ........

ಅರಿತರು ಅರಿಯದ್ದಿದರು ಅರಿವು ಮುಡಿಸುವುದು ಈ ಜಗದ ನಿಯಮ ಅದನ್ನು ನೀ ಪಾಲಿಸೋ ಮನುಜ........
ಒಮ್ಮೆ ಹಿಂದೆ ತಿರುಗಿ ನೋಡು ನೀ ನಡೆದು ಬಂದ ದಾರಿ ನೀನೆ ಮಾಡಿದ ಕರ್ಮಪಲವೆ ಇಂದಿನ ಉಡುಗೊರೆ ನಿನ್ನಂದಾಗಿದೆ.........

ಯಾವುದು ನಿನ್ನಂದಲ್ಲ ಯಾವುದು ನಿನ್ನಿಂದಾಗಿಲ್ಲ ಎಲ್ಲವು
ಪ್ರಕ್ರೃತಿಯ ಉಡುಗೊರೆ ಅದನ್ನು ಪಡೆದು ಗೌರವಿಸಬೇಕು
ಅದರಮೇಲೆ ಮೆಟ್ಟಿನಿಲ್ಲುವುದಲ್ಲ............ ಆಗಲೆ ಒಳ್ಳೆತನಕ್ಕೆ ಸಿಗುವ ಫಲ ಸಿಗುವುದು......... ಹೀಗೊಂದು ಪರಿ......... ಒಡಲಂತಾರಾಳದ ಮಾತು.......

- ರಾಗಸಿರಿ....

19 Apr 2020, 01:41 pm

ಕಸದ ತೊಟ್ಟಿಯ ಹೆಣ್ಣು ಮಗು..

ಉಸಿರುಗಟ್ಟುತ್ತಿದೆ ಸುತ್ತಲಿನ
ದುರ್ವಾಸನೆಗೆ,
ಹೊತ್ತು ತಂದವರ್ಯರೋ
ನನ್ನ ಇಲ್ಲಿಗೆ.

ಬೆಳಕ ಕಾಣದ ಕಣ್ಣ ರೆಪ್ಪೆಗೆ
ಮುತ್ತಿರುವ ಇರುವೆಗಳ ಸಾಲು
ಮುದ್ದಿಸುತ್ತಿವೆಯೋ! ತಮ್ಮ ಹೊಟ್ಟೆ
ತುಂಬಿಸಿಕೊಳ್ಳುತ್ತಿವೆಯೋ
ತಿಳಿಯದಾದೆ ನಾನು.

ಅಮ್ಮನ ಸ್ಪರ್ಶವೊಂದೇ ಪರಿಚಯ
ನನಗೆ ಅವಳ ದನಿಯೇ ವಿಸ್ಮಯ ಕಿವಿಗೆ,
ಆದರೀಗ ನಾ ಕೇಳದಾದೆನು ಆ ಪ್ರೀತಿಯ
ಮಾತುಗಳನ್ನು!

ರುಧಿರ ತುಂಬಿದ ಗರ್ಭದಲ್ಲಿ
ತಂಪನೆರೆವ ತೊಟ್ಟಿಲಿತ್ತು ಕಣ್ಣ
ತೆರೆಯದಿದ್ದರೂನು ಮನಕೆ
ಲಾಲಿ ಹಾಡಿ ಮಲಗಿಸಿತ್ತು.

ಮುಳ್ಳಿನ ಹಾಸಿಗೆಯ ಮೇಲೆ
ಅಮ್ಮನ ಕೈ ಜಾರಿ ಬಿದ್ದಿರಬೇಕು ನಾನು,
ನೋವು ಕಾಣದ ನನಗೆ ಜೀವ
ಹೋಗುವಂತಿದೆ ಆದರೂ ಅಮ್ಮನ
ಮಡಿಲು ಕಾಣದಾದೇನು.

ಕಿವಿಯೊಡೆಯುವ ಸದ್ದು
ಯಾರೋ ನನ್ನ ಹಾಗೆ
ಕಳೆದುಹೋಗಿರಬೇಕು ಅಮ್ಮನಿಗಾಗಿ
ಅಳುತಿರಬೇಕು.

"ಹೂವಿನಂತ ಹೆಣ್ಣು ಮಗು
ಕಸದ ರಾಶಿಯಲ್ಲಿದೆ ಕ್ರಿಮಿ-ಕೀಟಗಳು
ಕಿತ್ತು ತಿನ್ನುತ್ತಿವೆ ಯಾರಾದರೂ
ಬನ್ನಿ" ಎಂದು.

ಹೆಣ್ಣು ಮಗು!?

ಕಸದ ರಾಶಿಗೆ ನನ್ನೆಸೆದ ಕೈಗಳು
ನಿನ್ನವೇನಾ ಅಮ್ಮ!

- ಚುಕ್ಕಿ

18 Apr 2020, 09:51 pm