Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

...................?

ಕನಸಿನಲ್ಲಿ ನೀನು ಬಂದಂತೆ
ಕಣ್ಣಿನಲ್ಲೇ ನೀನು ಕರೆದಂತೆ
ಕಿವಿಯಲ್ಲೇನೋ ಪಿಸು ನುಡಿದಂತೆ
ನಗುವೇ ಯಾಕೆ ಏನು ತಿಳಿಯದಂತೆ

ನಿನ್ನ ಕೈ ಹಿಡಿದು
ಒಂದೆರಡು ಕವನ ನುಡಿದು
ಅಪ್ಪುಗೆಯ ಬಯಸುವೆನು
ನೀನು ಒಪ್ಪಿದರೆ..
ನಿನ್ನ ಕೈ ಹಿಡಿದು
ಬರೆಯುವೆನು ಕಾಗದದ ಮೇಲೆ
ನನ್ನ ಎಲ್ಲಾ ಭಾವನೆಗಳ ಸುರಿದು
ತಿದ್ದಿ ಬಿಡು ನಾ ತಪ್ಪಿದರೆ
ಅಪ್ಪಿ ಬಿಡು ನೀ ಒಪ್ಪಿದರೆ

ಹೃದಯ ಬರೆದ ಕವನ ಸಂಕಲನಕ್ಕೆ
ನಿನ್ನ ಮೌನವೇ ಮುನ್ನುಡಿ...
ನಿನ್ನ ನೆನಪುಗಳೇ ಪರಿವಿಡಿ
ನಿನ್ನ ಕನಸುಗಳೆ ಪುಟವಿಡಿ
Written By:-MS ಯಾದವ್.

- M S Yadav

25 Apr 2020, 03:02 pm

ಕನ್ನಡ..‌.

ಹಾಯ್, ಹಲೋ ಪರದೇಶಿ ವ್ಯಾಮೋಹ ಬಿಡಿ.
ಯಾವ್ ಭಾಷೆಗೂ ಕಮ್ಮಿ ಇಲ್ಲ ನಮ್ಮ ಕನ್ನಡ ನುಡಿ.
ಕನ್ನಡ ನಾಡು ಎಂದಿಗೂ ಮರೆಯಲಾಗದ ಗಂಧದ ಗುಡಿ.
ಏನೇ ಬಂದರೂ ನೀ ಕನ್ನಡಕ್ಕಾಗಿಯೇ ಮಡಿ.
ಕನ್ನಡವ ಎಂದಿಗೂ ಹೃದಯದಲ್ಲಿಯೇ ಸೇರೆ ಹಿಡಿ.
ಕಾವೇರಿಯನ್ನು ಕಣ್ಣೀಗೋತ್ತಿ ಕೈ ಮುಗಿದು ಕುಡಿ.
ಕನ್ನಡತಾಯಿಯ ತಲೆ ಮೇಲೆ ಹೋತ್ತು ನಡಿ.
ಕನಸು ಕಾಣುವಾಗಲು ಕನ್ನಡವನ್ನೇ ಮಿಡಿ.
ಉಸಿರೋದರು ಕಾಯಿ ನೀ ಕನ್ನಡದ ಗಡಿ.
ಅರಿಶಿಣ-ಕುಂಕುಮ ಎಷ್ಟು ಚೆಂದ ಕನ್ನಡಕ್ಕೆ ನೋಡಿ.
ಮಾಡಿಹುದು ಕನ್ನಡಿಗರ ಮನಸ ಮೋಡಿ.
ಕನ್ನಡಕ್ಕೆ ಅವಮಾನವಾದರೆ ಎದ್ದು ನಿಲ್ಲವುದು ಹೃದಯದ ನಾಡಿ.
ಕನ್ನಡ ಯಾವಾಗಲೂ ಬೆಂಕಿಯ ಕಿಡಿ.
ಕರ ಮುಗಿದು ಹೇಳುವೆ ನಾನೆಂದಿಗೂ ಕನ್ನಡದ ಕುಡಿ....

- Chaitra Kulkarni

25 Apr 2020, 12:41 pm

ನನ್ನ ಮುದ್ದು ಕಂದ

ಓ ಮುದ್ದು ಕಂದ ನೀ ಬಂದೆ ಸಡಗರ ಸಂಭ್ರಮ ತಂದೆ
ತಂದೆ ತಾಯಿ ಎಣಿಸುವ ಭಾಗ್ಯ ತಂದೆ
ಅಪ್ಪ ಅಮ್ಮ ಎಂದು ನೀನೆಂದೆ ತೊದಲು ದನಿಯಲ್ಲಿ

- ರಘು

25 Apr 2020, 05:05 am

ಕಣ್ಣೀರು...

ನೀನೊಂದು ಬಾರಿ
ಮನಸಾರೆ ಅತ್ತುಬಿಡು
ನನ್ನೊಲವ ನೆನೆದು,
ನಿನ್ನ ಕಣ್ಣೀರು
ಹೊಳೆಯಾಗಿ ನನ್ನ ಕೊಚ್ಚಲಿ..!
ಇಲ್ಲವೇ, ಅದರಲ್ಲೇ
ನೆನಪುಗಳೆಲ್ಲವೂ ನೆಲ ಕಚ್ಚಲಿ..!

~ ಸಿದ್ದು ಗುಂಡ

- - ಸಿದ್ದು ಕನ್ನಡಿಗ

24 Apr 2020, 11:03 pm

ಕೊರೋನ

ಜಗತ್ತು ಕಂಡಿರದ ರೋಗಕ್ಕೆ
ಔಷಧಿಯ ನೀಡುವರು ಯಾರು?
ಜನರು ಮಾಡಿರದ ಪಾಪಕ್ಕೆ
ಕ್ಷಮಯ ನೀಡುವರು ಯಾರು?

ಯಾರಯ್ಯ ಯಾರು ಇದಕ್ಕೆ
ಪರಿಹಾರ ನೀಡುವರು ಯಾರು?

- Yesukumar

24 Apr 2020, 07:03 pm

ಕನ್ನಡಿಗನ ಕಿರು ಮಾತು

ದೈವನ ಕಂಡವರು ಯಾರು
ಅಂದ್ರೆ
ಆ ದೈವನ ಪರಮಭಕ್ತನಾಗಿರುತ್ತಾನೆ.
ಲೋಕವ ಗೆದ್ದವರು ಯಾರು
ಅಂದ್ರೆ
ಆ ಲೋಕದ ವೀರವಿಜಯನಾಗಿರುತ್ತಾನೆ.
ರಕ್ತವ ನೀಡುವರು ಯಾರು
ಅಂದ್ರೆ
ಈ ಅಪ್ಪಟ ಕನ್ನಡಿಗನಾಗಿರುತ್ತಾನೆ.
ಏಕೆಂದರೆ,
ಕನ್ನಡಿಗನ ರಕ್ತದ ಕಣ-ಕಣಗಳಲ್ಲೂ ತಾಯಿಯ
"ಸತ್ಯ ಪ್ರೀತಿ ತ್ಯಾಗ" ಎನ್ನುವ ಗುಣಗಳು ಇರುತ್ತದೆ.

- Yesukumar

24 Apr 2020, 06:47 pm

ನೀನು-ಬೆಳಕು

ನಾನು ತಿಳಿದಿದ್ದದ್ದು
ನೀನು ನಿಲುಕದ
ಆಗಸ ನಕ್ಷತ್ರದ
ಬೆಳಕೆಂದಷ್ಟೆ ..?

ನೀನು ಅಂಗೈಯೊಳಗೆ
ದೀವಟಿಗೆಯಾಗಿ
ದಾರಿ ತೋರಿ
ನಕ್ಕು ಬಿಟ್ಟೆ...!

- ಶ್ರೀಕಾವ್ಯ

23 Apr 2020, 09:48 pm

ಕಣ್ಣು. ❤️

ದೇಹದ ಅಂಗವಾಗಿ...
ಮನಸಿನ ಸೇತುವೆಯಾಗಿ...
ಕಷ್ಟಕ್ಕೆ ನೀರಾಗಿ ಸುರಿಸಿ ...
ಸಂತಸಕ್ಕೆ ಹೂವಾಗಿ ಅರಳಿಸಿ..
ತೆರೆದಾಗ ಪ್ರಕೃತಿಯ ನೈಜ ಘಟನೆ ತಿಳಿಸಿ..
ಮುಚ್ಚಿದಾಗ ಕನಸುಗಳ ಜೋಕಾಲಿಯಲಿ ತೇಲಿಸಿ ....
ಮಾನವನ ಜತೆ ಸಾಯೋವರೆಗೆ ಇರುವ ನೀನು.....
ಬಿಳಿಯ ಕಡಲಿನ..... ಕತ್ತಲೆಯ ಸೂರ್ಯ...

- ಶಿವ...

- SHIV...

23 Apr 2020, 08:45 pm

ಅಗೋಚರದಲ್ಲಿ ಗೋಚರ

ಒಂದು ಅಗೋಚರ ಕ್ರಿಮಿ ಕರೋನ,
ಇಡೀ ಬ್ರಹ್ಮಾಂಡಲ್ಲಿ ಗೋಚರ,
ಮನುಜ ಕುಲವೇ ಅಲ್ಲೊಲ ಕಲ್ಲೊಲ.

ಅಹಂಕಾರಿ ಮನುಜನಿಗೆ ಬುದ್ಧಿ ಹೇಳಿತು,
ಕುಟುಂಬವಂದೇ ನಿಮ್ಮ ಪ್ರಪಂಚವೆಂದಿತು,
ಹೊಸ ಆವಿಷ್ಕಾರಗಳಿಗೆ ತಳಹದಿ ಆಯಿತು,
ಮಂದಿರ-ಮಸೀದಿ-ಚರ್ಚ ದೂರು ಮಾಡಿತು

ಶುಚಿತ್ವವೇ ಮಡಿಯಂದು ಹೇಳಿತು,
ಮನೆಯ ಊಟವೇ ಒಳಿತೆಂದಿತು,
ಜಗದ ಎಲ್ಲ ಜೀವಿಗಳ ಮಹತ್ವ ಅರುಹಿತು,
ಜಾತಿ-ಮತ ಭೇದವು ಬರಿ ಮಾನವರಿಗಂದಿತು.

#ವಾಜು

- WadirajKulkarni

23 Apr 2020, 02:04 pm

ದೇಶದ ಪರಿಸ್ಥಿತಿ

"ಎಲ್ಲಿರುವನಯ್ಯಾ ಎಲ್ಲಿರುವನು
ಭಕ್ತರ ಕಾಯೋ ದೈವನೆಲ್ಲಿರುವನು?".

ದೇಶಕ್ಕಾದ ನಷ್ಟವ
ಜನರಿಗಾದ ಕಷ್ಟವ
ಜೀವಿಗಳಿಗಾದ ನೋವಿಗೆ
ಪರಿಹಾರವೆಂಬ ಔಷಧಿಯ
ಹಚ್ಚುವವನು ದೈವನಾದೊಡೆ,
"ಎಲ್ಲಿರುವನಯ್ಯಾ ಎಲ್ಲಿರುವನು
ಭಕ್ತರ ಕಾಯೋ ಆ ದೈವನೆಲ್ಲಿರುವನು?.

- Yesukumar

23 Apr 2020, 11:55 am