ಮದದಿಂದ ಮೆರೆದಿರುವ
ಮನುಜನ ಅಂದಕಾರವ ತೊರೆದು
ನಿನ್ನಿಂದ ನಾನಲ್ಲ ನನ್ನಿಂದ ಜಗವು ಎಂದು
ಮತ್ತೆ ಮತ್ತೆ ಸಾರುತಿದೆ ಈ ಕಾಲ.....
ಮನುಜನ ಬುದ್ದಿವಂತಿಕೆ ಅತಿಯಾಗಿ
ಜಗವೆ ತಲ್ಲಣಗೊಂಡು ಅಳುಕುತಿರುವಾಗ
ಹೀಗೊಂದು ಒಣಗಿ ಬಿದ್ದ ಮರದೊಳಗೆ ಮತ್ತೆ ಚಿಗುರಿ ಅರಳಿದ ಹೂವೊಂದು ನುಡಿಯುತ್ತಿತ್ತು.....
ನಿನೆಷ್ಟೆ ಬೆಳೆದು ಮೆರೆದರು
ನನ್ನ ಮುಂದೆ ತಲೆ ಬಾಗಲೆಬೇಕು
ನನ್ನ ತನವನ್ನು ನಾನೆಂದು ಬಿಡೆನು
ನಾನು ಮತ್ತೆ ಮರಳಿ ಪಡೆದು ಕೊಳ್ಳುವೆ ತನ್ನ ತನವನ್ನು ಎಂದು ಪ್ರಕ್ರೃತಿ ನಗನಗುತ ಅರಳಿ ಮನುಜನ ಅಹಂಕಾರಕ್ಕೆ ಪೆಟ್ಟೊಂದು ಕೊಟ್ಟು ಬುದ್ದಿಮಾತನ್ನು ಹೇಳುತ್ತಿದೆ.........
ಈ ಪರಿಯ ಸೋಬಗು.......
ಜಗದ ಅಳುವಲ್ಲಿ ಜನರ ಕರ್ಮುಪಲವೆ ತುಂಬಿದೆ ಅರಿತು ಬಾಳು ನೀ ಓ ಮನುಜ........
ಅಕ್ಕ ಎಂದರೆ ಮಾಯವಾಗುವುದು ದುಃಖ
ತಾಯಿಯಂತೆ ಸಲಹುವಳು ಅಕ್ಕ
ತಂದೆಯಂತೆ ಗದರಿಸುವಳು ಅಕ್ಕ
ಸ್ನೇಹಿತರಂತೆ ಕಾಡಿಸುವಳು ಅಕ್ಕ
ಜೀವನದ ಮೊದಲ ಸ್ನೇಹಿತೆ ಎರಡನೆ ತಾಯಿ ಅಕ್ಕ.
ತವರು ಮನೆಯ ಕೀರ್ತಿ ಗಂಡನ ಮನೆಯ ಸ್ಪೂರ್ತಿ
ಬಾಲ್ಯದಲ್ಲಿ ನಮಗೆ ಆಸರೆಯಾಗುವಳು ಪೂರ್ತಿ
ಸಹನೆಯ ಮೂರ್ತಿಯವಳು
ಬೆಳದಿಂಗಳ ಜ್ಯೋತಿಯವಳು
ಬೇರೆಯವರ ಕಷ್ಟಕ್ಕೆ ಸದಾ ಮಿಡಿಯುವವಳು
ಕರುಣೆಗೆ ಇನ್ನೊಂದು ಹೆಸರೆ ಇವಳು
ತನ್ನ ಪ್ರೀತಿಯಿಂದಲೇ ತುಂಬಿಸುವಳು ನಮ್ಮೆಲ್ಲರ ಹೊಟ್ಟೆ
ಅವಳ ಪ್ರೀತಿಗೆ ಅಡ್ಡ ಕಟ್ಟಬಾರದು ಕಟ್ಟೆ
ಅವಳೆ ಮನೆಯ ನಂದಾದೀಪ
ಅವಳಿಂದಲೇ ಕಳೆಯುವುದು ನಮ್ಮೆಲ್ಲರ ಪಾಪ
ನಿಮ್ಮ ಪ್ರೀತಿಯ ತಮ್ಮ:
M.S. ಯಾದವ್
ಬಿಜಿ ಎಲ್ಲಾರೂ ಬಿಜಿ ಸೂರ್ಯ ಹುಟ್ಟುಕ್ಕೆ ಸೂರ್ಯ ಮುಳುಗೊಕ್ಕೆ ಮದ್ಯೆ ಇರೋದು 12 ಗಂಟೆ ಮಾತ್ರಾ ಅಬ್ಬಬ್ಬಾ ಅಂದ್ರೆ ಏನು ಆಗಬಹುದು ಆಗಿದೆ ಇರೋದು ಅನಕೊಳ್ಳೊದು ಅದುಕೋಡಿದು ಆಗಿದೆ ಇರೋದು ಎಲ್ಲಾ ನಮ್ಮ ಕೈಯಲ್ಲಿ ಇಲ್ಲಾ
ಹೇ ಮನವೆ ನೀ ಏಕೆ
ಅಳುತಿರುವೆ ಒಂಟಿಯಾಗಿ
ನಿನ್ನ ಒಂದು ಮುಗ್ದ ನಗುವ
ನೋಡಲು ಕಾದು ಕುಳಿತಿಹವು
ಅದೆಷ್ಟೋ ಕಣ್ಗಳು.
ಇನ್ನೊಬ್ಬರ ಖುಷಿಗಾಗಿ ನೀ
ನಗು
ನಿನ್ನೆಲ್ಲಾ ನೋವ ಮರೆತು.
ನಟನೆಯ ಜೀವನಕ್ಕೆ ಹೆಚ್ಚು ಬೆಲೆ
ವಾಸ್ತವ ಜೀವನದಲ್ಲಿ.
ನಿನ್ನ ಅಂತರಾಳದ ನೋವು ಕಷ್ಟಗಳಿಗೆ
ಇಲ್ಲಿ ಸಿಗುವುದಿಲ್ಲಾ ಬೆಲೆ.
ಎಷ್ಟೆಂದು ಕಳೆದುಕೊಳ್ಳುವೆ
ನಿನ್ನ ಕಣ್ಣೀರ ಹನಿಗಳನ್ನ.
ಹೇ ಮನವೆ ನೀ ನಕ್ಕುಬಿಡು
ಮತ್ಯಾರು ನಿನ್ನ ನಗು ಎಂದು
ಹೇಳದಂತೆ.
ನಿನ್ನ ನಗುವಿನಿಂದ ಅದೆಷ್ಟೋ
ನಿನ್ನ ನೋವುಗಳು ಕಣ್ಮರೆಯಾಗಿರಲಿ
ಯಾರಿಗೂ ತಿಳಿಯದಂತೆ