ಕನಸಿನಲ್ಲಿ ನೀನು ಬಂದಂತೆ
ಕಣ್ಣಿನಲ್ಲೇ ನೀನು ಕರೆದಂತೆ
ಕಿವಿಯಲ್ಲೇನೋ ಪಿಸು ನುಡಿದಂತೆ
ನಗುವೇ ಯಾಕೆ ಏನು ತಿಳಿಯದಂತೆ
ನಿನ್ನ ಕೈ ಹಿಡಿದು
ಒಂದೆರಡು ಕವನ ನುಡಿದು
ಅಪ್ಪುಗೆಯ ಬಯಸುವೆನು
ನೀನು ಒಪ್ಪಿದರೆ..
ನಿನ್ನ ಕೈ ಹಿಡಿದು
ಬರೆಯುವೆನು ಕಾಗದದ ಮೇಲೆ
ನನ್ನ ಎಲ್ಲಾ ಭಾವನೆಗಳ ಸುರಿದು
ತಿದ್ದಿ ಬಿಡು ನಾ ತಪ್ಪಿದರೆ
ಅಪ್ಪಿ ಬಿಡು ನೀ ಒಪ್ಪಿದರೆ
ಹೃದಯ ಬರೆದ ಕವನ ಸಂಕಲನಕ್ಕೆ
ನಿನ್ನ ಮೌನವೇ ಮುನ್ನುಡಿ...
ನಿನ್ನ ನೆನಪುಗಳೇ ಪರಿವಿಡಿ
ನಿನ್ನ ಕನಸುಗಳೆ ಪುಟವಿಡಿ
Written By:-MS ಯಾದವ್.
ಹಾಯ್, ಹಲೋ ಪರದೇಶಿ ವ್ಯಾಮೋಹ ಬಿಡಿ.
ಯಾವ್ ಭಾಷೆಗೂ ಕಮ್ಮಿ ಇಲ್ಲ ನಮ್ಮ ಕನ್ನಡ ನುಡಿ.
ಕನ್ನಡ ನಾಡು ಎಂದಿಗೂ ಮರೆಯಲಾಗದ ಗಂಧದ ಗುಡಿ.
ಏನೇ ಬಂದರೂ ನೀ ಕನ್ನಡಕ್ಕಾಗಿಯೇ ಮಡಿ.
ಕನ್ನಡವ ಎಂದಿಗೂ ಹೃದಯದಲ್ಲಿಯೇ ಸೇರೆ ಹಿಡಿ.
ಕಾವೇರಿಯನ್ನು ಕಣ್ಣೀಗೋತ್ತಿ ಕೈ ಮುಗಿದು ಕುಡಿ.
ಕನ್ನಡತಾಯಿಯ ತಲೆ ಮೇಲೆ ಹೋತ್ತು ನಡಿ.
ಕನಸು ಕಾಣುವಾಗಲು ಕನ್ನಡವನ್ನೇ ಮಿಡಿ.
ಉಸಿರೋದರು ಕಾಯಿ ನೀ ಕನ್ನಡದ ಗಡಿ.
ಅರಿಶಿಣ-ಕುಂಕುಮ ಎಷ್ಟು ಚೆಂದ ಕನ್ನಡಕ್ಕೆ ನೋಡಿ.
ಮಾಡಿಹುದು ಕನ್ನಡಿಗರ ಮನಸ ಮೋಡಿ.
ಕನ್ನಡಕ್ಕೆ ಅವಮಾನವಾದರೆ ಎದ್ದು ನಿಲ್ಲವುದು ಹೃದಯದ ನಾಡಿ.
ಕನ್ನಡ ಯಾವಾಗಲೂ ಬೆಂಕಿಯ ಕಿಡಿ.
ಕರ ಮುಗಿದು ಹೇಳುವೆ ನಾನೆಂದಿಗೂ ಕನ್ನಡದ ಕುಡಿ....
ದೈವನ ಕಂಡವರು ಯಾರು
ಅಂದ್ರೆ
ಆ ದೈವನ ಪರಮಭಕ್ತನಾಗಿರುತ್ತಾನೆ.
ಲೋಕವ ಗೆದ್ದವರು ಯಾರು
ಅಂದ್ರೆ
ಆ ಲೋಕದ ವೀರವಿಜಯನಾಗಿರುತ್ತಾನೆ.
ರಕ್ತವ ನೀಡುವರು ಯಾರು
ಅಂದ್ರೆ
ಈ ಅಪ್ಪಟ ಕನ್ನಡಿಗನಾಗಿರುತ್ತಾನೆ.
ಏಕೆಂದರೆ,
ಕನ್ನಡಿಗನ ರಕ್ತದ ಕಣ-ಕಣಗಳಲ್ಲೂ ತಾಯಿಯ
"ಸತ್ಯ ಪ್ರೀತಿ ತ್ಯಾಗ" ಎನ್ನುವ ಗುಣಗಳು ಇರುತ್ತದೆ.
ದೇಹದ ಅಂಗವಾಗಿ...
ಮನಸಿನ ಸೇತುವೆಯಾಗಿ...
ಕಷ್ಟಕ್ಕೆ ನೀರಾಗಿ ಸುರಿಸಿ ...
ಸಂತಸಕ್ಕೆ ಹೂವಾಗಿ ಅರಳಿಸಿ..
ತೆರೆದಾಗ ಪ್ರಕೃತಿಯ ನೈಜ ಘಟನೆ ತಿಳಿಸಿ..
ಮುಚ್ಚಿದಾಗ ಕನಸುಗಳ ಜೋಕಾಲಿಯಲಿ ತೇಲಿಸಿ ....
ಮಾನವನ ಜತೆ ಸಾಯೋವರೆಗೆ ಇರುವ ನೀನು.....
ಬಿಳಿಯ ಕಡಲಿನ..... ಕತ್ತಲೆಯ ಸೂರ್ಯ...