Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಅರ್ಥವಾಗದ ಜೀವನ ನಮ್ಮದಲ್ಲ
ಬಯಸಿದ್ದೆಲ್ಲ ಇಲ್ಲಿ ಸಿಗುವುದಿಲ್ಲ
ಬಿಡಬೇಡ ನಿನ್ನ ಚಲ
ಸಾಧಿಸಿ ತೋರಿಸು ಬಾ ಒಂದು ಸಲ
✍️ವಿ.ಶಿವಾನಂದ
- Shivanand V Anandadavar
15 Apr 2020, 11:40 am
ಕವಿ ನಾನಲ್ಲ ಎಂದೇ
ಕವನ ನಾವೊಂದು ಬರೆದೆ
ಬರೆಯುವ ಸಾಲಿನಲ್ಲಿ ನೀನೇ ಇದ್ದೆ
ಕಾಣದೇ ಹೀಗೇಕೆ ಮರೆಯಾದೆ
✍️ವಿ.ಶಿವಾನಂದ
- Shivanand V Anandadavar
15 Apr 2020, 11:39 am
ಅ ಅವಳೊಳಗಿನ ನನ್ನವಳು
ಆ ಅಂತರ್ಯವ ಕಂಡವಳು
ಇ ಇದ್ದರೂ ಇರದವಳು
ಈ ಈದಿನದ ಮುತ್ತಿವಳು
ಉ ಉದ್ಭವಿಸಿದ ಸುಂದರಿ
ಊ ಊರ್ವಶಿಯ ಸೋದರಿ
ಋ ಋಷಿಯಾದೆ ಅವಳ ನೋಟಕೆ
ಎ ಎದೆಯಾಳದ ಮೇನಕೆ
ಏ ಏದುಸಿರಿನ ಕನ್ನಿಕೆ
ಐ ಐಸಿರಿಯ ನನ್ನಾಕೆ
ಒ ಒಂದಾದ ಚಂದಕೆ
ಓ ಓ ಎನ್ನುವ ನಾಚಿಕೆ
ಔ ಔತಣವಿದೆ ನನ್ನ ಹೃದಯದಲ್ಲಿ
ಅಂ ಅಂಬರದಾಚಿನ ಊರಿನವಳೇ
ನಿನಗಿದೋ ಕರೆಯೋಲೆ
✒️ಸತೀಶ್ ಕಳುವರಹಳ್ಳಿ
- ಸತೀಶ್ ಕುಮಾರ್ ಕಳುವರಹಳ್ಳಿ
15 Apr 2020, 09:53 am
ಜಾತಿ ಜಾತಿಗೆ ಒಂದೊಂದು ಬೀದಿ ಊರಿನಲಿ
ಗುಡಿ, ಮಠ, ಶ್ಮಶಾನಗಳು ಜಾತಿಗಳ ಹೆಸರಲಿ
ಮಡಿವಂತಿಕೆಯ ನೆಪದಲ್ಲಿ ಕಟ್ಟಿಹರು ಬೇಲಿ
ಕುರುಡು ನಂಬಿಕೆ ಸಾಕು ಶೋಷಣೆ ಅಂತ್ಯವಾಗಲಿ
ಮನುಷ್ಯ ಮನುಷ್ಯನ ನಡುವೆ ಏಕೆ ಅಂತರ
ಸಾಕು ಈ ಜಾತಿ, ಮತ, ಧರ್ಮಗಳ ಅಬ್ಬರ
ಅಳಿದು ಹೋಗಲಿ ಅಸಮಾನತೆಯ ಕಂಧರ
ಕತ್ತಲೆ ಸರಿದು ಬೆಳಗಲಿ ಜಗವು ನಿತ್ಯ ನಿರಂತರ
ಮನಸ್ಸು ಮನಸ್ಸುಗಳಲ್ಲಿ ಭಾವೈಕ್ಯತೆ ಮೂಡಲಿ
ಮೇಲು, ಕೀಳೆಂಬ ಭೇದ ಭಾವವು ಅಳಿಯಲಿ
ಎಲ್ಲರೂ ಒಂದಾಗಿ ಮಾನವೀಯತೆ ಉಳಿಯಲಿ
ನಾವೆಲ್ಲರೂ ಒಂದೇ ಈ ಸೃಷ್ಟಿಯ ನಿಯಮದಲಿ
ಮಾತು ಮಾತಲ್ಲಿ ಜಾತಿ ವಿಷಕಾರುವವರು
ಸಮಾಜ ಒಡೆದು ಅಸ್ತಿತ್ವ ಉಳಿಸಿಕೊಳ್ಳುವರು
ಬೇಡ ಜಾತಿಗೊಂದು ಪಕ್ಷ, ಜಾತಿಗೊಬ್ಬನಾಯಕರು
ಒಂದೇ ಕುಲ, ಒಂದೇ ನೆಲ ಎಲ್ಲರೂ ಸಮಾನರು
- Tribhuvan
15 Apr 2020, 02:10 am
ಶತಮಾನದ ಕಾಳಕತ್ತಲೆಯ ಹೆಣ ಉರುಳಿ
ಬೆಳಕದು ಬೆತ್ತಲಾದರು ನಿಲ್ಲತಿಲ್ಲ ನನ್ನ ಜನರ ಭ್ರಮೆ
ಹುಟ್ಟಿಲ್ಲದಾಗಿದೆ ನೆಡೆದ ಹಾದಿ ಸುತ್ತಿಸುರುಳಿ
ಮೈತೊಳೆದು ನಿಂತಿದ್ದಾನೆ ಈಗ ಸ್ವಚ್ಛಂದ ಬುದ್ಧ
ಕಡಲಾಚೆ ನೆಲ ಸುತ್ತಿ ಎದೆನೆತ್ತರ ಒಳಿತೆತ್ತಿ
ವಿಧಿಗಳೆಂಬ ಹೋರಿಯ ಕಟ್ಟಿ ಕಟ್ಟಳೆನೇಗಿಲ ಹರಿಸಿ
ಕೊರೆದೆ ತಮದ ಗರ್ಭ ಜ್ಞಾನಬುಗ್ಗೆ ಎತ್ತಿ
ಕರಡು ಸಂವಿಧಾನದಿ ಒಳದ್ವನಿಯಾಗಿಟ್ಟೆ ಮೊರೆಸಿ
ಶಿಲ್ಪಿ ನೀನಾದೆ ಕಲ್ಪಕಲ್ಪಗಳನೆ ಕಟೆದ ಅಪರಂಜಿ
ಬುದ್ಧಬಸವಪುಲೆ ಅಟೆಲ್ ಜೀ ಈಗ ಅಚ್ಚಿಗಿಟ್ಟ ಅಕ್ಷರ
ಸಮತೆ ಸ್ವತಂತ್ರ ಸೋದರತೆ ನೆಲದ ಕಾರಂಜಿ
ಇದೊ ನವ ಇನೋದಯ ಮೂಡಣದಿ ಗೋಚರ
ತೊಯ್ಯತಿಲ್ಲ ಕಿರಣ ಭರತ ಭುವಿತೇರ
ಕೇಳತಿಲ್ಲ ಸಮತೆಕೂಗು ನಿಂತಿಲ್ಲ ಹಣದ ಸೋಗು
ಒಳಜಾಲದ ಸುಳಿಗತ್ತಲಲಿ ಗೋಳಿಡಿತ ಪೂರ
ಹತ್ತಿದೆ ನ್ಯಾಯದ ಬೇಲಿಗೆ ಗಾಢನಿದಿರೆ ತೂಗು
ಈಗಲು ಕಾಯುತ್ತಿದ್ದೇನೆ ಮೀರದೆ ನಿನ್ನದಾರಿ
ಪ್ರಬುದ್ಧರಾಮ ಹಚ್ಚಿಕೊಟ್ಟ ಚಿಕ್ಕದೊಂದು ಹಣತೆ ಹಿಡಿದು
ಶಿಕ್ಷಣಸಂಘಟನೆ ಹೋರಾಟಗಳ ಅಸ್ತ್ರತೋರಿ
ಹಚ್ಚೇ ಹಚ್ಚುತ್ತೇನೆ ಸಮತೆಬೆಳಕ ಪಂಜ ಹಿಡಿದು
- samna
14 Apr 2020, 11:12 pm
ನಿನ್ನ ನೆನಪುಗಳು
ಮನದಲಿ ಇದ್ದರು
ಇಲ್ಲದಂತೆ ಕೂತಿರುವೆ
ನಿನ್ನಲ್ಲಿ ಮಾತನಾಡ
ಬೇಕೆಂದು ಹೃದಯ
ಚಡಪಡಿಸುಹುದು
ಆದರೆ ಮೆದುಳು ಬೇಡ
ಎಂದು ತಡೆಯುವುದು
ರಾತ್ರಿ ಮಲಗುವ ವೇಳೆ
ನಿನ್ನದೇ ನೆನಪು
ಮನಸು ಒಳಗೊಳಗೆ
ನೊಂದುಕೊಳ್ಳುತ್ತಿದೆ
ಮರೆಯುವ ಒಂದು
ಶಕ್ತಿ ನನ್ನಲ್ಲಿ ಇದ್ದಿದ್ದರೆ
ಯಾವುದೂ ಚಿಂತಿಸದೆ
ನನ್ನದೇ ಲೋಕದಲ್ಲಿ
ಮುಳುಗುತ್ತಿದ್ದೆ.
- azna
14 Apr 2020, 05:39 pm
ಹೇ ಮನಸೇ ತುಂಬಾ ಅಳುವೆ ಏಕೆ ..?
ನಿನ್ನ ದುಃಖ ನಿನಗೆ ಮಾತ್ರ ಕಾಣುವುದು.
ಹೇ ಮನಸೇ ಒಮ್ಮೆ ನಗು .ಅನೇಕ ಕಣ್ಣುಗಳು
ನಿನ್ನ ನಗುವಿಗಾಗಿ ಕಾದಿರುವುದು..!
- Stephan Sunil
14 Apr 2020, 03:47 pm
ನಾ ಆಡುತಿರಲು
ಹಕ್ಕಿ ಪಕ್ಷಿಗಳು
ಮೌನವಾಗಿ ಕುಳಿತಿವೆ
ನೀ ಕೇಳು ನಲ್ಲೆ
ಮನದ ನೋವು
ಹಾಗೆ ಮಲಗಿ
ನಿನ್ನ ರೂಪ ಕಾಡಿದೆ
ಬಾರೆ ನನ್ನ ಹೃದಯ ಕಾಂತೆ
ನಾಕೆ ದಿನದ
ನಿನ್ನ ಪ್ರೀತಿ
ನನಗೆ ನೀತಿ ಹೇಳಿ
ನನಗೆ ಏನೂ ನೀಡಿದೆ
ಸುಂದರ ಹೂವಿಗೆ
ನರಕ ಏಕೆ ಬಾಲೆ
ಬಾ ಬಾರೆ ನನ್ನ ಬಾಲೆ
ನೀ ಸೇರುಬಾ ನಲ್ಲೆ
- LachamannaM
14 Apr 2020, 01:24 pm
ಹೂವು ಮುಳ್ಳುಗಳ ದಾರಿಯೇ
ಪ್ರೀತಿ ಮಾಡಲು ಆಸೆಯೇ
ಸ್ನೇಹದಲ್ಲಿ ನಿರಾಸೆಯೇ
ಹೋದೆಯ ನೀ ಬಾರದೆಯೇ
✍️ವಿ.ಶಿವಾನಂದ
- Shivanand V Anandadavar
14 Apr 2020, 01:21 pm
ಏನೆಂದು ಹೇಳಲಿ ಇಲ್ಲಿ
ನಿನ್ನ ನೋಟ ಕಂಡಲ್ಲಿ
ಮರೆತುಹೋಯಿತು ಮಾತಲ್ಲಿ
ನೀ ಸೆರೆ ಅನಿಸಿದೆ ನನಗಿಲ್ಲಿ
- Shivanand V Anandadavar
14 Apr 2020, 01:19 pm