Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಆನಂದಮಯ

ಆಂತರಂಗದಲ್ಲಡಗಿಹ ಆನಂದವೆಂಬ
ಜ್ಯೋತಿರ್ಮಯ ಭಾವಕೆ ಪರದೆಯ
ಹಾಕಿಕೊಳ್ಳಲೇಕೆ !

ಮತಧರ್ಮವ ಪ್ರತಿಪಾದಿಸುತ ಸ್ವಾರ್ಥ
ಲಾಲಸೆಯಲಿ ತಮದತ್ತ ಎಲ್ಲರ ತಳ್ಳುತಾ
ನೀ ಮಾತ್ರ ಸಂತಸ ಹೊಂದಬೇಕೆ !

ಅವಿದ್ಯಾವಂತರೆಂಬ ಮುಖೇಡಿನವೋ
ದರ್ಪಕ್ಕೆ ಹೆದರಿದ ಸೊಗಲಾಡಿತನವೋ ನಿನಗೆಲ್ಲರೂ ಸೇವಕರಂತಿಹರು !

‌‌‌ನಾಯಿಗಳಿಗೆ ಮೂಳೆಯೆಸೆದಂತೆ ಕಾಲಬು
ಡದಲಿರುವ ಅವರೊಂದು ದಿನ‌ ‌ಎಚ್ಚರ
ವಾದರೆ ನಿನಗೆಂದೂ ಬಾಗಲಾರರು !

ವಿದ್ಯೆಯೊಂದು ಸ್ವಾಭಿಮಾನದ ಮೆರುಗ
ಹೊದಿಸುವುದು ಎಂದೂ ತಲೆತಗ್ಗಿಸದಂತೆ
ನಡೆಯುವರವರು !!
ಶಕುಂತಲಾಮೂರ್ತಿ
"""""""""""""""""""""""""""

- Shaku Thanks Amma Shaku

21 Apr 2020, 06:42 pm

ಆಕೆ

ಆಕೆಯ ಬೆರಳುಗಳಿಗೂ ಉಗುರುಗಳಿಗೂ ನಿಮಿಷಕ್ಕೊಮ್ಮೆ ಅದೆಂತಹ ಜಗಳ.
ಅದು ಅವಳ ಕಿವಿಯ ಮೇಲೆ ಕುಡುವುದಿಲ್ಲ.
ಅದನೆತ್ತಿ ಅಲ್ಲಿ ಕುಡಿಸುವತನ ಆಕೆ ಬಿಡುವುದಿಲ್ಲ.
ಇದನ್ನು ನೋಡಿದ ಮೇಲೆ ನನ್ನ ಮನಸ್ಸು ನನ್ನ ಬಳಿ ಉಳಿಯುವುದಿಲ್ಲ...

- smiley

21 Apr 2020, 05:54 pm

...ಮುದ್ದಿನ ಸೊಸೆ...

ನಿನ್ನ ಒಂದು ನೋಟ ಸಾಕು
ನನ್ನೇನೇ ನಾ ಕಳೆದು ಹೋಗಲ್ಲು
ನಿನ್ನ ಆ ನಗು ಸಾಕು
ಇಡೀ ಜಗತ್ತನ್ನೇ ನಾ ಮರೆಯಲು

ನಿನ್ನ ಒಂದು ಹೆಸರು
ಸಾಕು ನಾ ಉಸಿರಾಡಲು
ನಿನ್ನ ಮುದ್ದಾದ ಮಾತುಗಳು
ಸಾಕು ನಾ ಬದುಕಲು...

ನಿನ್ನ ಒಂದು ಸ್ವರ್ಶ ಸಾಕು
ಈ ಜನುಮ ಕಲಿಯಲು
ನಿನ್ನ ಒಂದು ಅಣತಿ
ಸಾಕು ನನ್ನನೆ ನಾ ಅಡಿಯಲು.....

ಹೇ ಮನಸ್ಸೇ ನಾ ಏನೇ
ಮಾಡಿದ್ರು ನಿನ್ನ ಪ್ರೀತಿಗಾಗಿಯೇ
ಹೇ ಪುಟ್ಟ ಮನಸ್ಸೇ ನನ್ನ ಮನಸ್ಸನ
ನೀ ಬೇಗ ಬಂದು ಸೇರುವಿಯಾ....

ಈ ಬದುಕು ನಿನ್ನಗಾಗಿ
ಬವಣೆ ನಿನ್ನಗಾಗಿ
ನನ್ನ ಪ್ರೀತಿ ಸುಳ್ಳಾದರೆ
ಈ ಜಗತ್ತೇ ಸುಳ್ಳು ಅಲ್ಲವೇ.....

ನನ್ನ ಅಮ್ಮನ ಮುದ್ದಿನ ಸೊಸೆಯೇ
ನಂದಾದೀಪವೇ ನೀ ಬಂದು ಬೆಳಗುವೆಯಾ
ನನ್ನ ಅರಮನೆಯ ದೀಪವಾ
ನೀ ಬರುವೆಂದು ನಾ ಎದುರು ನೋಡುವೆ....

- Ajay

21 Apr 2020, 04:34 pm

ನೆನಪು

ಹೇ ನೆನಪೇ,
ದರಿದ್ರವಾದ ದಟ್ಟಡವಿಯಲ್ಲಿ,
ಏಕಾಂಗಿಯಾಗಿ ಅಲೆದಾಡುವಾಗ,
ಬೆನ್ನಟ್ಟಿದ ಬೇತಾಳ ದಂತೆ ಹಿಂಬಾಲಿಸುತ್ತಿರುವೆ,
ನಾ ಎಲ್ಲಿ ಹೋದರೂ, ಎಲ್ಲಿ ಬಂದರೂ,
ಕಣ್ಮರೆಯಾಗಿಬಿಡು ಒಂದು ಬಾರಿ
ನನಗೂ ಹೇಳದೆ,
ಮರೆಯಾಗಿಬಿಡು ಯಾರಿಗೂ ಕಾಣದೆ..!

- Megha

21 Apr 2020, 12:25 pm

ಜಗಕೆ ಬೇಡದವ

ಹಣೆ ಬರಹದ ನತಾದೃಷ್ಟ
ಬಗೆದು ಕೊಂಡರು
ಹೂರಬರದ ರಕ್ತ
ಹಿಂಡಿ ಹಿಪ್ಪೆಯಾದ ದೇಹ
ಬಡಕಲು ಬದುಕು
ಬೆಲೆಯಿರದ ಬಾಳು
ಕಾಣದಾದ ಬೆಳಕು
ಬರಿ ಅಂಧಕಾರ
ಜಗದ ನಿರುತ್ತರ
ಪಡೆಯಲಾಗದ ಪ್ರೀತಿ
ನಿಸ್ಸಂದೇಹವಾಗಿ ನಾ
ಜಗಕೆ ಬೇಡದವ....

- suresh veera

21 Apr 2020, 11:35 am

ಕನ್ನಡ

ಕನ್ನಡ ನಾಡಿನ ವೀರರೇ
ಕರಿಮುಗಿಲ ಶೂರರೇ
ಕರೆತನ್ನಿ ಕನ್ನಡವ
ಕಂಗೊಳಿಸಿ ಕರ್ನಾಟಕವ

- Naveen r Mogaveera

21 Apr 2020, 11:06 am

ನನ್ನ ಅವಲೋಕನ

ಕನ್ನಡದ ಕಂದ
ನೀನೆಂದು ಚೆಂದ
ನೀ ನಗುತಿರಲು
ನನಗಾನಂದ

ಕಲ್ಕಟ್ಟೆ

- Naveen r Mogaveera

21 Apr 2020, 10:55 am

ಕರೋನಾ

ಜಗದಾಗ ಎಂತಹ ರೋಗ ಬಂತು ನೋಡಿರಣ್ಣ..
ಮುಗ್ಧ ಜನರ ಪ್ರಾಣವ ಹೀರುತಿಹುದಣ್ಣ.
ರೋಗಕ ಬಡವ ಶ್ರೀಮಂತರೆನ್ನುವ ಭೇದವಿಲ್ಲ ನೋಡಿರಣ್ಣ.
ಇನ್ನಾದರು ತಿಳಿದುಕೋ ಆ ದೇವರ ಮುಂದ ಯಾವುದು ದೊಡ್ಡದಲ್ಲ ಎಂಬುದನ್ನ...

- smiley

21 Apr 2020, 09:51 am

ಮೊದಲ ಕವನ.

ಮೊಳಕಿತು ಪ್ರೇಮ ಮೊದಲ ನೋಟದಿ
ಮಿಡಿಯುತ್ತಿದೆ ನಿನ್ನ ಗೆಜ್ಜೆನಾದ ಹೃದಯದಲಿ
ಯಾರಿಗೆ ಹೇಳಲಿ ನನ್ನ ಪ್ರೇಮ ನಾದವ
ಓ ಚೆಲುವೇ!

- kempayya

20 Apr 2020, 07:48 pm

ಕೈ ತುತ್ತು

ಮೋಡಗಳಿಂದ ಮರೆಯಾಗಿರುವ ಚಂದಿರನೆ
ಬೇಗನೆ ಚೆಲ್ಲು ನಿನ್ನ ಹೂಳಪನ್ನು
ಹುಣ್ಣಿಮೆ ಚಂದಿರನು ಯಾರು ತಾರೆ ಕಾಣರು
ಅದು ತಾರಾವ್ಯೂಹದ ಹೂಯಳಪಿಗಿಂದ ಚೆಂದ
ಚಂದ್ರನ ಬೆಯತಳದಿಂಗಳಲ್ಲಿ ನಮ್ಮ ಅಮ್ಮನ
ಪ್ರೀತಿಯ ಕೈ ತುತ್ತು ಎಲ್ಲಕ್ಕಿಂತಲೂ ಶ್ರೇಷ್ಠ

ಅಣ್ಣ ತಮ್ಮರ ಆ ತರಳೆಗಳು ಸೋದರಿಯರ ಭಾವನೆಯು ಇದರೂಟ್ಟಿಗೆ ಅಜ್ಜಿಯ ಸಿಟ್ಟು
ಕದ್ದು ಮುಚ್ಚಿ ಮಾಡುವ ಆ ಬಾಲ್ಯದ ತುಂಟಾದ
ಎಷ್ಟು ಕೋಟಿ ಕೂಟ್ಟರು ಸಿಗದು ಅಲ್ಲವೇ...

- RoopaGowtham

20 Apr 2020, 07:42 pm