ಅಂತರಂಗದೊಳು ಇಣುಕಿ ಕಂಡೆ ನನ್ನದೇ ಪ್ರತಿಬಿಂಬ
ಒಳ ಹೊಕ್ಕು ನೋಡಲು ವಿವರಿಸಲಾಗದು ಅನುಭವ
ಕಂಡದ್ದು ನೋಡಿದ್ದೆಲ್ಲವೂ ನನ್ನದಾಗಲಿ ಎಂದೆ ನಾನು
ಅರಿಯದಾದೆ ಆ ನಾನು ಈ ದೇಹದೊಳು ಎಲ್ಲಿರುವನು
ಪ್ರೀತಿಯಿಂದ ಕರೆದರೆ ಮುಖ ಕಮಲ ಅರಳುವುದು
ದ್ವೇಷದಿಂದ ಕರೆದರೆ ಮುಖ ಕೆಂಪೇರಿ ಉರಿವುದು
ತನ್ನವರ ಬಿಗಿದಪ್ಪಿ, ಪರರ ಕಂಡೊಡನೆ ದೂರ ಸರಿದು
ಒಂದೇ ದೇಹದೊಳು ಹಲವು ಮುಖಭಾವ ಇಹುದು
ಮೂಳೆ, ಮಾಂಸ, ನರ, ರಕ್ತಗಳಿಂದ ತುಂಬಿದ ದೇಹ
ಅದೇಕೋ ಹೆಣ್ಣು,ಹೊನ್ನು,ಮಣ್ಣಿಗಾಗಿ ತೀರದ ದಾಹ
ಕ್ಷಣಿಕ ಈ ಬದುಕು ಹೊತ್ತು ಸಾಗುವ ಸಮಯ ಪ್ರವಾಹ
ಸುಳಿಗೆ ಸಿಕ್ಕಿ ಈಜಲು ಆಗದವನಿಗೂ ಏನೋ ಮೋಹ
ನಾನು,ನನ್ನದು,ನನ್ನವರೆಂಬ ಹುಚ್ಚು ಭ್ರಮೆ ಇಲ್ಲಿ
ಮೊದಲು ನೀನು ಯಾರೆಂಬ ನಿಜವನು ನೀ ತಿಳಿ
ಕ್ಷಣಿಕ ಸುಖಃಕ್ಕಾಗಿ ಕೊಡಬೇಡ ಬದುಕನ್ನು ಬಲಿ
ಬಲಿಯಾದರೆ ಜೀವ ಸೇರುವುದು ಯಾವ ತೀರದಲ್ಲಿ..?
ನಿನ್ನ ಜೀವನ
ನಮಗೆ ಸ್ಪೂರ್ತಿ ಯು
ನಿನ್ನ ಮಾತುಗಳೇ ದಾರಿ ದೀಪವು.,
ಸ್ವಾಭಿಮಾನದಿ ಬದುಕ ಕಲಿಸಿದ
ಭೀಮ ಜ್ಯೆ ಭೀಮ
ನಿನಗೆ ನಮ್ಮ ಅನಂತ ನಮನ....
ವಿದ್ಯೆ ಕಲಿಯಲು ಹೋದ ನಿನ್ನ
ಒದ್ದು ಮೂಲೆಯಲಿ ಕುಳಿಸಿದರು
ಬಾಯಾರಿಕೆಗೆ ನೀರು ಕುಡಿಯಲು
ಹೋದ ನಿನ್ನ ತಳ್ಳಿ ದರು
ಬಿಡದೇ ನಿನ್ನ ಸ್ವಾಭಿಮಾನವ
ತೋರಿಕೊಟ್ಟೆ ದಾರಿ ದೀಪವ
ದಿಟ್ಟ ಹೆಜ್ಜೆ ಯನಿಟ್ಟು
ಆನೆಯಂತೆ ನುಗ್ಗಿ ನೀ
ನಮ್ಮ ಹಾದಿಯ ಮಾಡಿದೆ ಸುಗಮ
ಸ್ವಾಭಿಮಾನದೀ ಬದುಕ ಕಲಿಸಿದ
ಭೀಮ ಜ್ಯೆ ಭೀಮ
ನಿನಗೆ ನಮ್ಮ ಅನಂತ ನಮನ
ಅಸಮಾನತೆ ಯೆಂಬ ಹೀನ ಧಗೆಯಲಿ
ನೊಂದು ಬೆಂದವರಿಗೆ ಆಸರೆಯಾಗಿ
ಭರತ ಖಂಡದ ಎಲ್ಲಾ ಹೆಣ್ಣು ಮಕ್ಕಳಿಗೆ
ಗೌರವಾನ್ವಿತ ಬದುಕ ತೋರಿದೆ
ಸಂವಿಧಾನದೀ ಅದನು ಹೇಳಿದೆ.
ನೀ ಬಂಧು...! ದೀನ ದಲಿತರಿಗೆ
ನೀ ಅಣ್ಣ...! ಭರತ ಮಾತೆಯ ಹಂಗಳೆಯರಿಗೆ
ನೀ ಸ್ಫೂರ್ತಿ...! ದೇಶ ಕಟ್ಟುವ ಛಲವಂತರಿಗೆ.
ನೀ ಬೆಳಕು..! ಎಲ್ಲಾ ನೊಂದ ದಲಿತ ಕುಲಕೆ.
ನಮ್ಮ ಬಾಳಿಗೊಂದು ಅರ್ಥ ಕೊಟ್ಟೆ
ನಾವೂ ಮನುಜರೆಂದು ತಿಳಿಸಿಕೊಟ್ಟೆ..
ಅನಂತ ನಮನ ನಿನಗೆ ಜ್ಯೆ ಭೀಮ
ನಿನಗೆ ನಮ್ಮ ಅನಂತ ನಮನ
ದೇಶವೆಂದರೇ ಅಖಂಡ ಭಾರತ
ಪ್ರಜೆಗಳೆಂದರೇ ಪ್ರಭುಗಳು
ನಮ್ಮನ್ನಾಳುವವರ ನಾವೇ ಆರಿಸಲು
ದಾರಿ ತೋರಿಸಿದ ದಿವ್ಯ ಚೇತನ
ಆಧುನಿಕ ಭಾರತದ ಓ ಪಿತಾಮಹಾ.....!
ಸಂವಿಧಾನದಿ ಎಲ್ಲವ ಕೊಟ್ಟೆ
ಸಮಾನತೆಯ ಮಂತ್ರವ ಸಾರಿದೆ
ಭೀಮ ಜ್ಯೆ ಭೀಮ
ನಿನಗೆ ನಮ್ಮ ಅನಂತ ನಮನ
ನಿನಗೆ ನಮ್ಮ ಅನಂತ ನಮನ