ಅಂತರಂಗದೊಳು ಇಣುಕಿ ಕಂಡೆ ನನ್ನದೇ ಪ್ರತಿಬಿಂಬ
ಒಳ ಹೊಕ್ಕು ನೋಡಲು ವಿವರಿಸಲಾಗದು ಅನುಭವ
ಕಂಡದ್ದು ನೋಡಿದ್ದೆಲ್ಲವೂ ನನ್ನದಾಗಲಿ ಎಂದೆ ನಾನು
ಅರಿಯದಾದೆ ಆ ನಾನು ಈ ದೇಹದೊಳು ಎಲ್ಲಿರುವನು..
ಪ್ರೀತಿಯಿಂದ ಕರೆದರೆ ಮುಖ ಕಮಲ ಅರಳುವುದು
ದ್ವೇಷದಿಂದ ಕರೆದರೆ ಮುಖ ಕೆಂಪೇರಿ ಉರಿವುದು
ತನ್ನವರ ಬಿಗಿದಪ್ಪಿ, ಪರರ ಕಂಡೊಡನೆ ದೂರ ಸರಿದು
ಒಂದೇ ದೇಹದೊಳು ಹಲವು ಮುಖಭಾವ ಇಹುದು..
ಮೂಳೆ, ಮಾಂಸ, ನರ, ರಕ್ತಗಳಿಂದ ತುಂಬಿದ ದೇಹ
ಅದೇಕೋ ಹೆಣ್ಣು,ಹೊನ್ನು,ಮಣ್ಣಿಗಾಗಿ ತೀರದ ದಾಹ
ಕ್ಷಣಿಕ ಈ ಬದುಕು ಹೊತ್ತು ಸಾಗುವ ಸಮಯ ಪ್ರವಾಹ
ಸುಳಿಗೆ ಸಿಕ್ಕಿ ಈಜಲು ಆಗದವನಿಗೂ ಏನೋ ಮೋಹ..
ನಾನು,ನನ್ನದು,ನನ್ನವರೆಂಬ ಹುಚ್ಚು ಭ್ರಮೆ ಇಲ್ಲಿ
ಮೊದಲು ನೀನು ಯಾರೆಂಬ ನಿಜವನು ನೀ ತಿಳಿ
ಕ್ಷಣಿಕ ಸುಖಃಕ್ಕಾಗಿ ಕೊಡಬೇಡ ಬದುಕನ್ನು ಬಲಿ
ಬಲಿಯಾದರೆ ಜೀವ ಸೇರುವುದು ಯಾವ ತೀರದಲ್ಲಿ..?
ಎದೆಯೆಲ್ಲಾ ಬತ್ತು.,
ಕಣ್ಣೀರೆಲ್ಲಾ ಇಂಗಿ,
ಮಾತೆಲ್ಲಾ ಮುಗಿದು,
ಜೀವ ಜೊತೆ ಬೇಡ
ಎಂದೆನಿಸಿ
ಕೊನೆಯ ಹೆಜ್ಜೆ ಇಡಬೇಕೆನುವಾಗ.
ಬಿಗಿದಪ್ಪಿ, ಮುತ್ತಿಟ್ಟು
ಚ್ಯೆತನ್ಯ ತುಂಬಿ..
ಮತ್ತೆ ಎದೆ ಯೆತ್ತಿ
ಬದುಕ ಎದುರಿಸಲು
ಧ್ಯೆರ್ಯ ತುಂಬುವಾಕೆ....
ನನಗೆ ಇರುವುದು ಕೆಲವೆ ಸ್ನೇಹಿತರಾದರು .
ಅವರು ನನ್ನ ಕಷ್ಟ ಸುಖ ನೋವು ನಲಿವುಗಳನ್ನರಿತವರು.
ಮುಂದೆ ನಗಿಸಿ ಹಿಂದೆ ಚೊರಿ ಹಾಕುವ ನೂರು ಸ್ನೇಹಿತರಿಗಿಂತ, ಮನಸ್ಸಲ್ಲೇ ಬೆಟ್ಟದಷ್ಟು ಪ್ರೀತಿ ಇಟ್ಟಿರುವ ಒಬ್ಬ ಗೆಳೆಯ ಸಾಕು.
ತನ್ನ ಪಾಡಿಗೆ ತಾನಿದ್ದ ಒಂದು ಪುಟ್ಟ ಹೃದಯಕ್ಕೆ ,
ಪರಿಚಯ ವಾಯಿತು ಇನ್ನೊಂದು ಪುಟ್ಟ ಹೃದಯ
ಪುಟ್ಟ ಹೂವಿನಂತೆ,
ಆದರೆ, ಆ ಪುಟ್ಟ ಹೃದಯಕ್ಕೆ ತಿಳಿದಿರಲಿಲ್ಲ
ಆ ಪುಟ್ಟ ಹೂವಿನಲ್ಲಿ ಮುಳ್ಳುಗಳ ರಾಶಿಯೇ ತುಂಬಿದೆ ಎಂದು,
ಬಂಧಿಯಾಯಿತು ಏನು ಅರಿಯದ ಆ ಪುಟ್ಟ ಹೃದಯ ಜೇಡರ ಬಲಿಯಂತೆ...!
ಕೊನೆಗೂ ಅಥ೯ವಾಗಲಿಲ್ಲ ಆ ಪುಟ್ಟ ಹೃದಯಕ್ಕೆ ಆ ಹೂವಿನಲ್ಲಿ
ಮುಳ್ಳಿನ ರಾಶಿಯೇ ಇದೆ ಎಂದು,
ಒದಾಡಿ , ನರಳಾಡಿ ,ಸಿಲುಕಿ ಹೋಯಿತು ಆ ಪ್ರೀತಿ ಎಂಬ ಬಂಧನಕ್ಕೆ..!