Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನವನು

ನನ್ನವನೆ ನೀನು ನಿನ್ನವಳೆ ನಾನು
ಸುಮದುರ ಈ ಜೀವನ
ಏನ್ಭೆಕು ನಿಂಗೆ ಕೇಳಮ್ಮ ನಂಗೆ
ನಾ ನಿನ್ನ ಪ್ರೀತಿ ದಾಸ ಆಗ್ಬಿಟ್ಟಂಗೆ...

ನೀನಿಷ್ಟ ನಂಗೆ ಹೇಳೋದೆಂಗೆ
ಮರೆತೋದೆ ನನ್ನೆ ಬರೀ ನಿಂದೆ ಗುಂಗೆ
ಪ್ರೀತಿ ಬಿದ್ ಮೇಲೆ ಆಗೋದೆ ಇಂಗೆ
ನೀ ನನ್ನ ಮುದ್ದು ಚೆಂದದ ಗೂಂಬೆ

ನಿನ ಮಾತು ಚೆಂದ ನೀನಿನ್ನು ಅಂದ
ನಿನ ಪ್ರೀತಿಯಿಂದ ನನಗಾನಂದ
ನನಗೊಂದು ಆಸೆ ನೀ ಕೇಳು ಕೊಸೆ
ನಮ ಪ್ರೀತಿಗಾಗಲಿ ದಿನವು ಹೂಸ ಆರಂಭ...

- RoopaGowtham

10 Apr 2020, 04:17 pm

ತಾಯಿ ಮತ್ತು ಪ್ರಕೃತಿ

ಹೆಜ್ಜೆ ಗಳು ನೆಡೆದ
ಹನಿ ಹನಿಯ ಕುರುಹಿನ ದಿಬ್ಬಣ...
ನಟ್ಟನಡು ಹಡೆದ
ಬಾನೊಳ ಮೂಡಿಹ ಮೂಢಣ...
     
ಚೇಳಗುಡ್ಡದ ಮೇಲೆ
ಚೇಷ್ಟೆಗಾಳಿಯಲಿ ತೇಲತಿಹ ಮಾತು
ಹಕ್ಕಿಮೊರೆತದ ಮೇಳ
ಇಕ್ಕಿಹೋಯಿತ ಮನಕ ಮೆಲ್ವಾತು

ಬಿಂದಿ ಕಂಕಳಲೆ ನೆಟ್ಟಗೆ
ಏರತ್ತಿದ ಬ್ರತುಕು ನೀರಡಕಿದ ಗುರುತು
ಗೋಕಟ್ಟೆ ಮಣ ಕಟ್ಟಿಗೆ
ನೆತ್ತಿಗೆ ಹೊತ್ತಪರಿ ಬಡ್ಡೆಕಲ್ಲದು ಹೇಳಿತು

ಗಿರಿಶಿಖರ ಸ್ನೇಹದಲೆ
ಬೆಳೆದ ಜೀವ ಕಾನನದ ಕವುಜದಂತೆ
ಮುಗ್ಧತೆಯ ಕಡಲಲೆ
ಪ್ರೀತೀ ಅಲೆಗಳಿಡಿಸಿ ಕರುಳ ನಿರಂತರ

ಹಕ್ಕಿಯಾಗಿ ಹಾರುರೆಕ್ಕೆ
ಬಿಚ್ಚಿದ ಸ್ವಚ್ಛಂದದ ಒಂದು ಮುಗಿಲು
ಕೆಂಗಲ ನುಂಗುಬಿಸಿಲ
ಬಗ್ಗಿಸಿದ ಕಾಯಕಕೆ ಅದೊಂದು ದಿಗಿಲು

ದೇವರಗುಡ್ಡದಿ ಅಲೆವ
ಗಾಳಿಯಂತೆ  ತಿರುಗಿ ಕಾಯ್ದ ಹಸುಹಿಂಡು
ಕಣ್ಣಿಗೆ ಬೆಳ್ಳಕ್ಕಿ ಸಾಲಂತೆ
ಬೆಟ್ಟದಡಿ ಊರಿಗೆ ವಿಸ್ಮಿತ ಕಣ್ಣ ಗಂಡು

ಮುಗಿಲೆ ಕರಗಿ ಮಳೆಯ
ಸುಯ್ಲ ತೊಯ್ಯತ ಹನಿ ಹನಿಯ ಬೊಗಸೆಗೆ ತೂಗಿ 
ಆನಿಕಲ್ಲ ಹಿಡಿದು ನುಂಗುತ
ಮಳೆಗೆಳತಿಯ ಕೂಡಾಡಿದ ಪ್ರಕೃತ

ಸರಿಕರೆದುರ ಗೌರಿ
ಹಿರಿಕರ ಮುಂದೆ ರತ್ನೆಯಂತೆ ಓರಗೆತನಕೆ ಇಂದ್ರೆಯಂತೆ
ಸ್ವಾಭಿಮಾನ ತಡೆವಿದರೆ ನಾಗೆಯಂತೆ
ಹಳ್ಳ ಹರಿಸಿದ ಹೆಜ್ಜೆ ನೆನಪ ದೇವತೆ

- samna

10 Apr 2020, 03:46 pm

ಯಾವ ತೀರದಲ್ಲಿ...!!!

ಅಂತರಂಗದೊಳು ಇಣುಕಿ ಕಂಡೆ ನನ್ನದೇ ಪ್ರತಿಬಿಂಬ
ಒಳ ಹೊಕ್ಕು ನೋಡಲು ವಿವರಿಸಲಾಗದು ಅನುಭವ
ಕಂಡದ್ದು ನೋಡಿದ್ದೆಲ್ಲವೂ ನನ್ನದಾಗಲಿ ಎಂದೆ ನಾನು
ಅರಿಯದಾದೆ ಆ ನಾನು ಈ ದೇಹದೊಳು ಎಲ್ಲಿರುವನು..

ಪ್ರೀತಿಯಿಂದ ಕರೆದರೆ ಮುಖ ಕಮಲ ಅರಳುವುದು
ದ್ವೇಷದಿಂದ ಕರೆದರೆ ಮುಖ ಕೆಂಪೇರಿ ಉರಿವುದು
ತನ್ನವರ ಬಿಗಿದಪ್ಪಿ, ಪರರ ಕಂಡೊಡನೆ ದೂರ ಸರಿದು
ಒಂದೇ ದೇಹದೊಳು ಹಲವು ಮುಖಭಾವ ಇಹುದು..

ಮೂಳೆ, ಮಾಂಸ, ನರ, ರಕ್ತಗಳಿಂದ ತುಂಬಿದ ದೇಹ
ಅದೇಕೋ ಹೆಣ್ಣು,ಹೊನ್ನು,ಮಣ್ಣಿಗಾಗಿ ತೀರದ ದಾಹ
ಕ್ಷಣಿಕ ಈ ಬದುಕು ಹೊತ್ತು ಸಾಗುವ ಸಮಯ ಪ್ರವಾಹ
ಸುಳಿಗೆ ಸಿಕ್ಕಿ ಈಜಲು ಆಗದವನಿಗೂ ಏನೋ ಮೋಹ..

ನಾನು,ನನ್ನದು,ನನ್ನವರೆಂಬ ಹುಚ್ಚು ಭ್ರಮೆ ಇಲ್ಲಿ
ಮೊದಲು ನೀನು ಯಾರೆಂಬ ನಿಜವನು ನೀ ತಿಳಿ
ಕ್ಷಣಿಕ ಸುಖಃಕ್ಕಾಗಿ ಕೊಡಬೇಡ ಬದುಕನ್ನು ಬಲಿ
ಬಲಿಯಾದರೆ ಜೀವ ಸೇರುವುದು ಯಾವ ತೀರದಲ್ಲಿ..?

- Tribhuvan

10 Apr 2020, 03:23 pm

ಅಮ್ಮ

ಎದೆಯೆಲ್ಲಾ ಬತ್ತು.,
ಕಣ್ಣೀರೆಲ್ಲಾ ಇಂಗಿ,
ಮಾತೆಲ್ಲಾ ಮುಗಿದು,
ಜೀವ ಜೊತೆ ಬೇಡ
ಎಂದೆನಿಸಿ
ಕೊನೆಯ ಹೆಜ್ಜೆ ಇಡಬೇಕೆನುವಾಗ.
ಬಿಗಿದಪ್ಪಿ, ಮುತ್ತಿಟ್ಟು
ಚ್ಯೆತನ್ಯ ತುಂಬಿ..
ಮತ್ತೆ ಎದೆ ಯೆತ್ತಿ
ಬದುಕ ಎದುರಿಸಲು
ಧ್ಯೆರ್ಯ ತುಂಬುವಾಕೆ....

- Shrinivas

10 Apr 2020, 02:17 pm

ಸ್ನೇಹ.

ನನಗೆ ಇರುವುದು ಕೆಲವೆ ಸ್ನೇಹಿತರಾದರು .
ಅವರು ನನ್ನ ಕಷ್ಟ ಸುಖ ನೋವು ನಲಿವುಗಳನ್ನರಿತವರು.
ಮುಂದೆ ನಗಿಸಿ ಹಿಂದೆ ಚೊರಿ ಹಾಕುವ ನೂರು ಸ್ನೇಹಿತರಿಗಿಂತ, ಮನಸ್ಸಲ್ಲೇ ಬೆಟ್ಟದಷ್ಟು ಪ್ರೀತಿ ಇಟ್ಟಿರುವ ಒಬ್ಬ ಗೆಳೆಯ ಸಾಕು.

ಸಿದ್ದು....

- Siddu Siddesh

10 Apr 2020, 01:58 pm

ಭಾವನೆ

ಬಾರದ ಸಮಯಕ್ಕೆ ಕಾಯುತ್ತಿರುವ ಮನಸ್ಸು,
ನನಸಾಗದೇ ಉಳಿದಿವೆ ಅದೆಷ್ಟೋ ಕನಸು ಗಳು,
ಮೌನದ ನೆನಪಿನೊಂದಿಗೆ ಸಾಗುತ್ತಿದೆ
ಜೀವನದ ಪಯಣವು,
ಆ ಪಯಣದಾಚೆಯಲ್ಲಿವೆ ಸಾವಿರಾರು
ಭಾವನೆಗಳು....!

- Megha

10 Apr 2020, 01:04 pm

ಪ್ರೀತಿಯ ಬಂಧನ

ತನ್ನ ಪಾಡಿಗೆ ತಾನಿದ್ದ ಒಂದು ಪುಟ್ಟ ಹೃದಯಕ್ಕೆ ,
ಪರಿಚಯ ವಾಯಿತು ಇನ್ನೊಂದು ಪುಟ್ಟ ಹೃದಯ
ಪುಟ್ಟ ಹೂವಿನಂತೆ,
ಆದರೆ, ಆ ಪುಟ್ಟ ಹೃದಯಕ್ಕೆ ತಿಳಿದಿರಲಿಲ್ಲ
ಆ ಪುಟ್ಟ ಹೂವಿನಲ್ಲಿ ಮುಳ್ಳುಗಳ ರಾಶಿಯೇ ತುಂಬಿದೆ ಎಂದು,
ಬಂಧಿಯಾಯಿತು ಏನು ಅರಿಯದ ಆ ಪುಟ್ಟ ಹೃದಯ ಜೇಡರ ಬಲಿಯಂತೆ...!
ಕೊನೆಗೂ ಅಥ೯ವಾಗಲಿಲ್ಲ ಆ ಪುಟ್ಟ ಹೃದಯಕ್ಕೆ ಆ ಹೂವಿನಲ್ಲಿ
ಮುಳ್ಳಿನ ರಾಶಿಯೇ ಇದೆ ಎಂದು,
ಒದಾಡಿ , ನರಳಾಡಿ ,ಸಿಲುಕಿ ಹೋಯಿತು ಆ ಪ್ರೀತಿ ಎಂಬ ಬಂಧನಕ್ಕೆ..!

- Megha

10 Apr 2020, 10:16 am

ಚೆಲುವೆ

ಯಾರೇ ನೀನು ಚೆಲುವೆ
ನನ್ನ ನೋಡಿ ನೋಡಿ ನಗುವೆ
ನಿನ್ನ ಅಂದಕ್ಕೆ ನಾ ಯಂದೋ ಸೋತಿರುವೆ
ನಾ ಹತ್ತಿರ ಬಂದಂತ್ತೆ ನೀ ದೂರ ಹೋಗುವೆ


-ಲಿಖಿತ್. ಎo.....

- likith

10 Apr 2020, 07:57 am

ಬರಿಯಲು

ಕಂಗಳು ಕನಸು ಹುಡುಕಲು
ಬಯಸಿದ ಪ್ರೀತಿ ಉಳಿಸಲು
ಸ್ನೇಹದ ದಾರಿ ತಿಳಿಸಲು
ಮನಸ್ಸಿನ ಬಾಗಿಲು ತೆರೆಯಲು
ಇಲ್ಲಿ ಈ ಕವನ ಬರೆಯಲು

-:ವಿ.ಶಿವಾನಂದ:- ✍️

- Shivanand V Anandadavar

10 Apr 2020, 07:09 am

ಆ ವಿಷಯ

ಸಮಯ ಕಲಿಸಿತು ಹೊಸ ವಿಷಯ
ಮನುಜ ಅದನ್ನು ನೀನು ಅರ್ಹತೆಯ
ಕಾರಣವಿಲ್ಲದೆ ನೀ ದೂರಾದೆಯ
ಮರೆಯುವುದು ಹೇಗೆ ಆ ವಿಷಯ

✍️ವಿ.ಶಿವಾನಂದ

- Shivanand V Anandadavar

10 Apr 2020, 07:00 am