Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನನ್ನ ಪ್ರೀತಿಯ ನಾಯಿ ರಾಮು
ನನಗೆ ಜೀವನ ಹೇಳಿದ ರಾಮು
ಪ್ರೀತಿ ಹೇಳಿಕೊಟ್ಟ ರಾಮು
ತಾನು ವುರಿದು ಬೇರೆಯವರಿಗೆ ಕುಶಿ ಕೊಡುವ ಪ್ರಣಿ ನನ್ನ ರಾಮು
- Praveen Kirsur
13 Apr 2020, 09:35 pm
ಮನೆಯ ಮಹಡಿಯ ಮೇಲೆ ನಿಂತು
ಹೇಳಿದಳು ಗೆಳತಿ ಪೋನಿನಲ್ಲಿ
ಕರೋನ ಬಂದಿದೆ ಗೆಳೆಯ
ರಸ್ತೆಯ ಮೇಲೆ ಅಲೆಯಬೇಡವೆಂದು
ರಸ್ತೆಯ ಮಧ್ಯ ನಿಂತು
ಹೇಳಿದನು ಗೆಳಯ
ಅಲೆದಾಡಿ ಬರುವೆನು
ನಿನ್ನ ಬಳಿ ಅಲ್ಲೇ ಇರು ಎಂದು
ಓಡೋಡಿ ಬಾಗಿಲ ಹಾಕಿ
ಹೇಳಿದಳು ಗೆಳತಿ
ಕರೋನ ಹೋಗುವರೆಗು
ಮನೆಗೆ ಬರಬೇಡವೆಂದು
ಗೆಳೆಯ ಕೇಳಿದನು ಕೋಪದಲ್ಲಿ
ನಮ್ಮಿಬ್ಬರ ಪ್ರೀತಿ ಇಷ್ಟೇನಾ ಎಂದು
ಅರ್ಥ ಮಾಡಿಕೋ ಕೋತಿ
ಕರೋನಕ್ಕೆ ಪ್ರೀತಿ ಗೊತ್ತಿಲ್ಲ ಎಂದು.
- lakshman
13 Apr 2020, 08:17 pm
ಕೊರೋನಾ ಕವಿತೆ
ಕಿರೀಟ ಧರಿಸಿ
ರಾಜರ ಹಾಗೆ - ಬಂದಿದ್ದಿ
ಗಡಿ ದಾಟಿ, ಸಮುದ್ರ ಉಲ್ಲಂಘಿಸಿ
ಸದ್ದಿಲ್ಲದೇ ನುಗ್ಗಿದ್ದಿ
ರಾಜರುಗಳ ಹಾಗೆ ಪಾಲಿಸುವುದನ್ನು ಮರೆತು,
ದೇಶ ಧರ್ಮ ಜಾತಿ ನೀತಿ ಸಿರಿತನ ಬಡತನಗಳ ಲೆಕ್ಕಿಸದೆ.
ಪೀಡಿಸುವುದೇ ನಿನ್ನ ಧರ್ಮ
ಅಂತ ನಿರ್ದಾಕ್ಷಿಣ್ಯವಾಗಿ ಸಾರಿದ್ದಿ.
ಈಗ ಎಲ್ಲೆಲ್ಲೂ ಇದೊಂದೇ ಸುದ್ದಿ-
ಹತ್ತೊಂಭತ್ತರ "ಕೋವಿದ"
ಇಪ್ಪತ್ತಕ್ಕೂ ಕೈಕಾಲು ಚಾಚಿದ್ದಿ
ಬಾಚಿದ್ದಿ ಜೀವಗಳ ರಾಶಿ ರಾಶಿ.
ನುಗ್ಗಿ ಬರುವಾಗ ಪೌರತ್ವದ ಹಂಗಿಲ್ಲ
ನಿನಗೆ - ಪ್ರತಿಭಟನೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ
ಊರಿಂದೂರಿಗೆ ಹೋಗುವಂತಿಲ್ಲ ಬೇರಾರೂ
ದೂರ ದೂರ ಸರಿಸಿಬಿಟ್ಟಿದ್ದಿ .
ಸ್ವಕೀಯ- ಪರಕೀಯದ ಭೇದವಿಲ್ಲದೇ
ಸಲೀಸಾಗಿ ಜನರನ್ನು - ತಬ್ಬುವ ಬದಲಾಗಿ ದಬ್ಬುವುದೇ
ಕ್ಷೇಮ ಮೂಗು ಮುಚ್ಚಿಕೊಂಡು - ಅಂತ ಸಾರಿದ್ದಿ.
ಅಹಂಕಾರದ ಅಡಿಪಾಯಕ್ಕೆ ಅಪಾಯದ
ಬಿಸಿ ಮುಟ್ಟಿಸಿದ್ದಿ
ಯುವಾನ್ ಯೂರೋ ಡಾಲರ್ ಮತ್ತೆಲ್ಲಾ
ದುಡ್ಡುಗಳ ಠೇಂಕಾರದ ಘರ್ಜನೆಗಳೆಲ್ಲಾ
ಅದೆಷ್ಟು ಟೊಳ್ಳಂದು ತೋರಿದ್ದಿ- ಮುಲಾಜಿಲ್ಲದೇ.
ದಿನ ಕಳೆದಂತೆ ಖಂಡದಿಂದ ಖಂಡಕ್ಕೆ ಜಿಗಿಯುತ್ತಾ
ಬಲಶಾಲಿಗಳ ಬತ್ತಳಿಕೆಯ ಖಂಡಾಂತರ ಕ್ಷಿಪಣಿ
ಭಂಡಾರಗಳು ನಾಚಿ ನೀರಾಗುವಂತೆ ಮಾಡಿದ್ದಿ.
ಪ್ರಣಾಳದಲ್ಲಿಯೇ ಜೀನು, ಡಿ.ನ್.ಎ ಗಳ ಬೆರೆಸಿ
‘ಜೀವ' ನಿರ್ಮಿಸಿ ಸೃಷ್ಟಿಕರ್ತನಿಗೆ ಸರಿಸಾಟಿಯೆಂಬಂತೆ
ಬೀಗಿದವರು ಇಂದು ತಮ್ಮ ಕೈಗಂಟಿದೆಯೋ ಸಾವಿನ
ಬೀಜ ಎಂಬಂತೆ ಉಜ್ಜಿ ಉಜ್ಜಿ ಕೈ ತೊಳೆದುಕೊಳ್ಳುತ್ತಾ
ಅವರದ್ದೇ ಒಂದು ಕೈ ಇನ್ನೊಂದಕ್ಕೆ ತಗುಲಿದರೆ ಎಲ್ಲಿ
ರೋಗ ಬಂದೀತೆಂದು ಅಂಜಿ ಅಂಜಿ ನೀರಾಗುವಂತೆ ಮಾಡಿದ್ದಿ.
ದಿನ ರಾತ್ರಿ ಎನ್ನದೆ ಚೆಲ್ಲಾಪಿಲ್ಲಿಯಾಗಿರುತ್ತಿದ್ದ ಮನೆ
ಮಂದಿ ಆಹಾ ಅದೆಷ್ಟು 'ಸುಭಗ'ರಾಗಿಬಿಟ್ಟಿದ್ದಾರೆ.
ಅಪ್ಪ ಅಮ್ಮ ಅಜ್ಜ ಅಜ್ಜಿ ಅಣ್ಣ ತಂಗಿ ಎಲ್ಲಾ
ಏಕಕಾಲದಲ್ಲಿ ಒಂದೇ ಸೂರಿನಡಿ -
ಅದೆಷ್ಟು ಮಜಾ -'ಕೂಡಿ ಉಣ್ಣುವ
- ಕೂಡಿ ಆಡುವ' ಹಳೆಗಾಲದ
ಮೌಲ್ಯಗಳಿಗೆ ಮರುಜೀವ !
ಆಹಾ ಮಧುರ ಕ್ಷಣಗಳು ಸುಮಧುರ ನೆನಪುಗಳು !
ಅಟ್ಟ ಸೇರಿದ್ದ ಅಲ್ಲಾವುದ್ದಿನನ ದೀಪ
ಹಣತೆಗಳಿಗೆಲ್ಲ ಗಂಟೆ ಜಾಗಟೆಗಳ
ಸಂಭ್ರಮದ ಹಿಮ್ಮೇಳ
ಅಜ್ಜಿಕಾಲದ ಗಂಟುಮೂಟೆಯ ಹಳೆಯ
ನಾರು ಬೇರುಗಳಿಗೆಲ್ಲಾ ಕಷಾಯವಾಗುವ ಪುಣ್ಯಕಾಲ.
ಕಲಿತು ಮರೆತಿದ್ದ ಸ್ತೋತ್ರ ಮಂತ್ರಗಳು ನೂರಾರು
ವಾಟ್ಸಾಪಿನ ಬೋಧನೆ ಸಂಶೋಧನೆಗಳು-
ಓ ಅದೆಷ್ಟು ಉಪಯುಕ್ತ- ಬಲವಂತ
“ಹೊರಬೀಗದ" ಪರ್ವಕಾಲದಲ್ಲಿ ಕಾಲಕ್ಷೇಪದ
ಅನನ್ಯ ಸಾಧನ ನಿಕ್ಷೇಪ.
ಎಲ್ಲವನ್ನೂ ಎಲ್ಲರನ್ನೂ ನೆಟ್ಟಗಾಗಿಸಿ ಬಿಟ್ಟಿದ್ದೇನೆ
ಅಂತ ಅಹಂ ಇರಬಹುದು ನಿನಗೆ- ಹೇಳುತ್ತಿದ್ದೇನೆ
ಬುದ್ಧಿ ಕಲಿಸಿದೆ ಇವರಿಗೆ ಅಂತ ಬೀಗುತ್ತಾ
ಇಂದಲ್ಲ ನಾಳೆ ನೀನು ಹೊರಟು ಹೋಗುತ್ತಿ
ಕಾಲ ನಿಲ್ಲುವುದಿಲ್ಲ. ಉಳಿದ ನಾವೆಲ್ಲ ನಿನಗೆ
ಬಲಿಯಾದವರಿಗೆ ಸುಂದರ ಸ್ಮಾರಕ ನಿರ್ಮಿಸಿ
ಅಮೃತಶಿಲೆಗಳ ಮೇಲೆ ಶೋಕಶಾಸನ ಬರೆಸಿ
ಅಶ್ರುಭರಿತ ಭಾಷಣಗಳ ದಿನಾಚರಣೆ ಮಾಡುತ್ತೇವೆ.
ಮತ್ತು
ಮೊದಲಿನಂತೆ ಆಗಿಬಿಡುತ್ತೇವೆ- ಬೀಗಮುಕ್ತ.
ನಲಿಯುತ್ತೇವೆ ನಲಿಕಾಮುಕ್ತ
ಶುನಕ ಪುಚ್ಛದ ಹಾಗೆ ಎಗ್ಗಿಲ್ಲದೇ ಮತ್ತೆ.
ರಮೇಶ್ ಚಿಪಳೂಣಕರ್
- ramesh
13 Apr 2020, 07:42 pm
ಅರ್ಥವಿಲ್ಲಾ ಬದುಕಿಗೆ
ಸ್ವಾರ್ಥವಿಲ್ಲಾ ಮನಸ್ಸಿಗೆ
ಕತ್ತಲು ಬೇಕು ಕನಸಿಗೆ
ಯೋಚನೆ ಬೇಕು ಕವಿಗೆ
✍️ವಿ.ಶಿವಾನಂದ
- Shivanand V Anandadavar
13 Apr 2020, 04:44 pm
ಹಾಡೊಂದು ಹಾಡುವ ಆಸೆ
ದಯಮಾಡಿ ಕೇಳು ನೀ ಮನಸೆ
ಸಿಗುವುದು ಅಲ್ಲಲ್ಲಿ ಸೊಗಸೆ
ನಾ ಹೇಳುವುದು ಇಲ್ಲಿ ಕನಸೆ
✍️ವಿ.ಶಿವಾನಂದ
- Shivanand V Anandadavar
13 Apr 2020, 04:39 pm
ಮಳೆಬಿಲ್ಲ ಮಿಂಚನಿಕ್ಕಿ
ತೂಗತಿತ್ತ ರೆಪ್ಪೆಮುಗಿಲ ತೊಟ್ಟಿಲಲ್ಲಿ
ಕರಿಕಪ್ಪ ಮೋಡವಿಕ್ಕಿ
ಸುರಿದಿತ್ತ ಚಿಕ್ಕಿಗಳ ಹನಿ ಮಳೆಯಲ್ಲಿ
ಅಕ್ಷಿ ಕಮಲಾಗಿ ನಿಗಿನಿಗಿ
ಅಗ್ನಿಕುಂಡದ ದಳಗಳ ಕಾರತಿತ್ತ
ಮನಮಡಿ ಉಟ್ಟುಬಿಗಿ
ಎದೆಪ್ರೇಮಜ ಯಜ್ಞ ಕುಳಿತಿತ್ತ
ತ್ರೈಲೋಕ್ಯ ಚೆಲುವಿಕೆ
ಚಿತ್ರಪಟವೊಂದ ಭಾವಗಾಳಿಗೆ ತೇಲತಿತ್ತ
ನಿಗ್ರಹತಪ್ಪಿ ಇಂದ್ರಿಕೆಯೇ
ಕಣ್ಣುಕೋರೈಸ ಮಾಯೆಗೆ ಸೋತಿತ
ಕಣ್ಣಕಾವಲ ರೆಪ್ಪೆಭಟ
ಮೋಹಜಾಲವೂಡಿ ಕಣ್ಣಧೋಣಿಯಲೆ ನಿಂತು
ಮತ್ಸ್ಯಕನ್ನಿಕೆಯ ದಿಟ
ಬಂಧಿಸಿಹನ ಎಣೆದಿಕ್ಕಿ ಒಲವತಂತು
- samna
13 Apr 2020, 02:10 pm
ಬದುಕಿದ್ದಾಗ ತಿರುಗಿ ನೋಡದ ಸಂಬಂಧಿಕರು
ಕಷ್ಟಕ್ಕೆ ಕೈ ಜೋಡಿಸದ ಸ್ನೇಹಿತರು
ನಮ್ಮ ಪರಿಸ್ಥಿತಿ ನೋಡಿ ಗೇಲಿ
ಮಾಡುವ ಹೊರಗಿನವರು
ಸತ್ತಾಗ ಮಾತ್ರ ನಾನಿದ್ದೆ ನನ್ನತ್ರ
ಹೇಳಿದ್ರೆ ಏನಾದ್ರು ಮಾಡಬಹುದಿತ್ತು ಎಂದು ಹೇಳಿ
ಬೀಗುವರು.
ಜೀವವಿದ್ದಾಗ ಸಿಗದ ಬೆಲೆ
ಸತ್ತಾಗ ಕರುಣೆ ಮೂಲಕ ತೋರುವರು.
ಬದುಕ್ಕಿದ್ದಾಗಲೆ ಬೆನ್ನೆಲುಬಾಗಿ
ನಿಂತಿದ್ದರೆ ಜೀವವಾದರು
ಉಳಿಯುತ್ತಿತ್ತು.
ಆ ಜೀವ ಮುಂದೆ ಅದೆಷ್ಟು ಜನರ
ನೆರವುಗಾಗುತ್ತೋ ಏನೋ?
✍️ಕನಸುಗಾರ
- varu
13 Apr 2020, 10:35 am
ತಾರೆಗಳ ಸಮೂಹದಲ್ಲಿ ಮಿನುಗುತಾರೆ ನೀನು
ಹೂಗುಚ್ಚದಲ್ಲಿನ ಸಿಹಿ ಜೇನು ನೀನು
ಸೂರ್ಯ ಚಂದ್ರರ ಹೂಳೆಯುವ ಕಾಂತಿ ನಿನ್ನದು
ರೆಂಬೆ ಊರ್ವಶಿಯರ ಮೈ ಮಾಟ ನಿನ್ನದು
ಕತ್ತಲೆಯಲ್ಲು ಬೆಳಕು ತರುವ ಹೂಳಪು ನೀ
ವ್ಯಸನದಲು ಮುದ ನೀಡುವ ಪ್ರೀತಿ ನಿನ್ನದು
ಕಣ್ಣೀರು ಒರೆಸಿ ಸಾಂತ್ವನ ಹೇಳುವ ಮನಸ್ಸು ನಿನ್ನದು ಅದಕೆ ನಾ ನಿನ್ನ ಪ್ರೀತಿಸುವೆ ಎಂದಿಗೂ..
ಕೋಪದಲಿ ರಾವಣನೂ ಮೀರುವ ರಾಕ್ಷಸಿ
ಕರುಣೆಯಲಿ ರಾಮನ ಅನುಯಾಯಿ
ಪ್ರೀತಿಯಲ್ಲಿ ನಿನಗೆ ನೀನೆ ಸಾಟಿ ನಿನಗಿಲ್ಲ ಪೈ ಪೋಟಿ ನೀ ನನ್ನ ಸಾರಥಿ....
- RoopaGowtham
13 Apr 2020, 08:08 am
ಅಂತರಂಗದೊಳು ಇಣುಕಿ ಕಂಡೆ ನನ್ನದೇ ಪ್ರತಿಬಿಂಬ
ಒಳ ಹೊಕ್ಕು ನೋಡಲು ವಿವರಿಸಲಾಗದು ಅನುಭವ
ಕಂಡದ್ದು ನೋಡಿದ್ದೆಲ್ಲವೂ ನನ್ನದಾಗಲಿ ಎಂದೆ ನಾನು
ಅರಿಯದಾದೆ ಆ ನಾನು ಈ ದೇಹದೊಳು ಎಲ್ಲಿರುವನು
ಪ್ರೀತಿಯಿಂದ ಕರೆದರೆ ಮುಖ ಕಮಲ ಅರಳುವುದು
ದ್ವೇಷದಿಂದ ಕರೆದರೆ ಮುಖ ಕೆಂಪೇರಿ ಉರಿವುದು
ತನ್ನವರ ಬಿಗಿದಪ್ಪಿ, ಪರರ ಕಂಡೊಡನೆ ದೂರ ಸರಿದು
ಒಂದೇ ದೇಹದೊಳು ಹಲವು ಮುಖಭಾವ ಇಹುದು
ಮೂಳೆ, ಮಾಂಸ, ನರ, ರಕ್ತಗಳಿಂದ ತುಂಬಿದ ದೇಹ
ಅದೇಕೋ ಹೆಣ್ಣು,ಹೊನ್ನು,ಮಣ್ಣಿಗಾಗಿ ತೀರದ ದಾಹ
ಕ್ಷಣಿಕ ಈ ಬದುಕು ಹೊತ್ತು ಸಾಗುವ ಸಮಯ ಪ್ರವಾಹ
ಸುಳಿಗೆ ಸಿಕ್ಕಿ ಈಜಲು ಆಗದವನಿಗೂ ಏನೋ ಮೋಹ
ನಾನು,ನನ್ನದು,ನನ್ನವರೆಂಬ ಹುಚ್ಚು ಭ್ರಮೆ ಇಲ್ಲಿ
ಮೊದಲು ನೀನು ಯಾರೆಂಬ ನಿಜವನು ನೀ ತಿಳಿ
ಕ್ಷಣಿಕ ಸುಖಃಕ್ಕಾಗಿ ಕೊಡಬೇಡ ಬದುಕನ್ನು ಬಲಿ
ಬಲಿಯಾದರೆ ಜೀವ ಸೇರುವುದು ಯಾವ ತೀರದಲ್ಲಿ..?
- Tribhuvan
13 Apr 2020, 03:05 am
ಮೋಡ ಸರಿದಾಗ ಕಂಡಿತು
ಮಿನುಗುವ ನಕ್ಷತ್ರ ...
ಮೋಡ ಸರಿದಾಗ ಕಂಡಿತು
ಮಿನುಗುವ ನಕ್ಷತ್ರ
ಮೋಡ ಮುಸುಕಿದಾಗ ಕಂಡಿತು
ಮಿಂಚಿದ ಸಿಡಿಲಿನ ಆಕ್ರೋಶದ ಹೊಡೆತ. ....
( ಚುಟುಕು ಸಾಹಿತ್ಯ )
- Vishal Hiremath
12 Apr 2020, 10:11 pm