ನಿನ್ನ ಜೀವನ
ನಮಗೆ ಸ್ಪೂರ್ತಿ ಯು
ನಿನ್ನ ಮಾತುಗಳೇ ದಾರಿ ದೀಪವು.,
ಸ್ವಾಭಿಮಾನದಿ ಬದುಕ ಕಲಿಸಿದ
ಭೀಮ ಜ್ಯೆ ಭೀಮ
ನಿನಗೆ ನಮ್ಮ ಅನಂತ ನಮನ....
ವಿದ್ಯೆ ಕಲಿಯಲು ಹೋದ ನಿನ್ನ
ಒದ್ದು ಮೂಲೆಯಲಿ ಕುಳಿಸಿದರು
ಬಾಯಾರಿಕೆಗೆ ನೀರು ಕುಡಿಯಲು
ಹೋದ ನಿನ್ನ ತಳ್ಳಿ ದರು
ಬಿಡದೇ ನಿನ್ನ ಸ್ವಾಭಿಮಾನವ
ತೋರಿಕೊಟ್ಟೆ ದಾರಿ ದೀಪವ
ದಿಟ್ಟ ಹೆಜ್ಜೆ ಯನಿಟ್ಟು
ಆನೆಯಂತೆ ನುಗ್ಗಿ ನೀ
ನಮ್ಮ ಹಾದಿಯ ಮಾಡಿದೆ ಸುಗಮ
ಸ್ವಾಭಿಮಾನದೀ ಬದುಕ ಕಲಿಸಿದ
ಭೀಮ ಜ್ಯೆ ಭೀಮ
ನಿನಗೆ ನಮ್ಮ ಅನಂತ ನಮನ
ಅಸಮಾನತೆ ಯೆಂಬ ಹೀನ ಧಗೆಯಲಿ
ನೊಂದು ಬೆಂದವರಿಗೆ ಆಸರೆಯಾಗಿ
ಭರತ ಖಂಡದ ಎಲ್ಲಾ ಹೆಣ್ಣು ಮಕ್ಕಳಿಗೆ
ಗೌರವಾನ್ವಿತ ಬದುಕ ತೋರಿದೆ
ಸಂವಿಧಾನದೀ ಅದನು ಹೇಳಿದೆ.
ನೀ ಬಂಧು...! ದೀನ ದಲಿತರಿಗೆ
ನೀ ಅಣ್ಣ...! ಭರತ ಮಾತೆಯ ಹಂಗಳೆಯರಿಗೆ
ನೀ ಸ್ಫೂರ್ತಿ...! ದೇಶ ಕಟ್ಟುವ ಛಲವಂತರಿಗೆ.
ನೀ ಬೆಳಕು..! ಎಲ್ಲಾ ನೊಂದ ದಲಿತ ಕುಲಕೆ.
ನಮ್ಮ ಬಾಳಿಗೊಂದು ಅರ್ಥ ಕೊಟ್ಟೆ
ನಾವೂ ಮನುಜರೆಂದು ತಿಳಿಸಿಕೊಟ್ಟೆ..
ಅನಂತ ನಮನ ನಿನಗೆ ಜ್ಯೆ ಭೀಮ
ನಿನಗೆ ನಮ್ಮ ಅನಂತ ನಮನ
ದೇಶವೆಂದರೇ ಅಖಂಡ ಭಾರತ
ಪ್ರಜೆಗಳೆಂದರೇ ಪ್ರಭುಗಳು
ನಮ್ಮನ್ನಾಳುವವರ ನಾವೇ ಆರಿಸಲು
ದಾರಿ ತೋರಿಸಿದ ದಿವ್ಯ ಚೇತನ
ಆಧುನಿಕ ಭಾರತದ ಓ ಪಿತಾಮಹಾ.....!
ಸಂವಿಧಾನದಿ ಎಲ್ಲವ ಕೊಟ್ಟೆ
ಸಮಾನತೆಯ ಮಂತ್ರವ ಸಾರಿದೆ
ಭೀಮ ಜ್ಯೆ ಭೀಮ
ನಿನಗೆ ನಮ್ಮ ಅನಂತ ನಮನ
ನಿನಗೆ ನಮ್ಮ ಅನಂತ ನಮನ
ಕಾಡುವುದು ನೆನಪು ಗೆಳೆಯ
ಮರೆಯಲ್ಹೇಗೆ ನಿನ್ನ ನನ್ನಿನಿಯ
ಅಮಲೇರಿಸುತಿವೆ ನಿನ್ನ ನೆನಪುಗಳು
ಸುತ್ತಿಬರುತಲಿವೆ ಒಡನಾಡಿದ ಕ್ಷಣಗಳು
ಮರೆತಷ್ಟು ನೆನಪಾಗುತಿವೆ ನಿನ್ನ ನುಡಿಗಳು
ಮನ ಬಯಸುತಿದೆ ನಿನ್ನ ಸಾನಿಧ್ಯ
ಆದರೆ ಅದೆಲ್ಲಿ ಸಾಧ್ಯ!
ಹುಣ್ಣಿಮೆ ಚಂದ್ರನ ಬೆಳದಿಂಗಳ ಹೊಳಪು ನಿನ್ನದು,
ಕಾಮೋ೯ಡದ ಬಾನಂಚಿನಲ್ಲೂ ಕಾಣಸಿಗುವ
ಮೊಗ ನಿನ್ನದು,
ಕಲ್ಮಶವಿಲ್ಲದ ತಿಳಿಯಾದ ಮನಸ್ಸು ನಿನ್ನದು,
ನೀರಿನ ಅಲೆಯಲ್ಲೂ ಅಳಿಸಿ ಹೋಗದ ಗುಣ ನಿನ್ನದು,
ನಿನ್ನ ವಣಿ೯ಸಲು ಪದಗಳು ಸಾಲುತ್ತಿಲ್ಲ,
ನಿನ್ನ ಪ್ರೀತಿಗೆ ಕೊನೆಯೇ ಇಲ್ಲ...!