ಜೀವನದಲ್ಲಿ ಜಿಗುಪ್ಸೆಗೊಳಗಾದಾಗ,
ಕಣ್ಣ ಮುಂದೆ ಬರುವುದು ಎರಡು ಅಂಶಗಳು ಮಾತ್ರ,,,
ಒಂದು ನಮ್ಮ ವರೆಂದು ತಿಳಿದು ಅತಿಯಾಗಿ ನಂಬಿ
ಮೋಸ ಹೋದಾಗ,
ಇನ್ನೊಂದು ಬದುಕಿನಲ್ಲಿ ಅತಿಯಾದ
ಕನಸುಗಳನ್ನು ಇಟ್ಟು ಕೊಂಡಾಗ
ನನಸಾಗದೇ ಉಳಿದಾಗ...!
ನವಮಾಸ ನನ್ನನು ಗರ್ಭದಲ್ಲಿ ರಕ್ಷಿಸಿದವಳು ಬೆಳದಿಂಗಳ ತೋರಿಸಿ ಊಟ ಮಾಡಿಸಿದವಳು.....
ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳಿದವಳು
ನನ್ನ ಸಾಧನೆಗೆ ಗುರಿ ತೋರಿದವಳು.....
ಕಷ್ಟವನ್ನೆಲ ತನಾಗಿತುಕೊಂಡು ಸುಖವನೆಲ್ಲ ನನಗೆ ಕೊಟ್ಟವಳು
ಇವಳ ಬಗ್ಗೆ ಹೇಳಲು ಸಾಲದು ಕೋಟಿ ಪದಗಳು.....
ನಾ ಬರೆದ ಮೊದಲ ಕವನ
ನಿನ್ನನು ಕಂಡ ನಾನೇ ಪಾವನ.....
ತಕ್ಷಣವೇ ಬರೀಬೇಕೇನಿಸಿತು ಒಂದು ಕವನ
ನೀ ತೆರೆದೆ ನನ್ನ ಮನದ ಬಾಗಿಲಿನ.....
ಹೇಳು ನೀ ನನಗೆ ಪ್ರೀತಿ ಎಂದರೆ ಇದೇನಾ
ನಿನ್ನೆ ಸ್ಮರಿಸುತಿರುವೆ ಸದಾ ನಾ.....
ನನ್ನ ಕನಸಿನ ಕನ್ನಡಿಯ
ನೀ ಚೂರು ಮಾಡಿ ಹೋದೆಯಲ್ಲೇ
ನನ್ನ ಹೃದಯದ ಅರಮನೆಯ
ರಾಜಕುಮಾರಿಯೇ.
ಚಿದ್ರವಾದ ಕನ್ನಡಿಯನ್ನ ಚೂರುಗಳನ್ನಾ
ಜೋಡಿಸಲಾಗುತ್ತಿಲ್ಲಾ.
ನೀನಿಲ್ಲಾದಾ ಬದುಕಿಗೆ
ಅರ್ಥವಿಲ್ಲಾ.
ನನ್ನ ಮೂಖ ರೋಧನೆಯ
ಕೇಳುವವರಾರಿಲ್ಲಾ.
ಎತ್ತ ನೋಡಿದರು ನೀನೆ
ಕಾಣುತಿಹೆಯಲ್ಲಾ.
ಮನದ ಕಣ್ಣೀರ ಜೊತೆಗೆ
ಬಿಂಬವೇ ಮಾಯವಗುತಿಹುದಲ್ಲಾ.
ನಾ ಮರೆಯೋ ಮುನ್ನ
ನೀ ಬಂದು ಸೇರು ನನ್ನಾ.
ನಿನ್ನನ್ನು ದೇವರಂತೆ ಪೂಜಿಸುವೆ
ನಿನ್ನಲ್ಲಿ ಯಾವುದೇ ಬೇಡಿಕೆಯು ನನಗಿಲ್ಲ
ಮಗುವಿನಂತೆ ನಿನ್ನ ಪ್ರೀತಿಸುವೆ
ತಾಯಿ ನಾ ನಿನಗಲ್ಲ
ಹಿಂದೆ ಬಂದಾಗಲೆಲ್ಲ ಹೊರದೂಡಿದೆನಲ್ಲ
ನೀನಿಲ್ಲದ ಬದುಕು ಚಂದವೇನಲ್ಲ
ಅನಿಸುವುದು ಆಗಾಗ್ಗೆ ನೀನಿಲ್ಲದೆ ನನಗೆ ಬದುಕಿಲ್ಲ
ಆದರೂ ಬದುಕುವುದು ಅನಿವಾರ್ಯ ಬೇರೆ ದಾರಿಯಿಲ್ಲ!