ಪ್ರಾರಂಭದಲ್ಲಿ ನಾ ಬರೆಯುವ ಕವನದಲ್ಲಿತ್ತು ಅಟ್ಟಹಾಸ...!
ನೀ ಪರಿಚಯ ವಾದಾಗ ಅನಿಸಿತು,
ಈ ಕವನವೊಂದು ಸುಂದರ, ಸಮಂಜಸ...!
ನಿನ್ನಿಂದ ನನ್ನ ಕವನಗಳಿಗೆ ಬಂದಿತು ಮಂದಹಾಸ..!
ನಾ ಕೇಳುವೆ ನಿನಗೊಂದು ಏನಿದು
ವಿಪಯಾ೯ಸ...!
ಹೇ ಹೃದಯವೇ ಕೇಳು,
ನಿನ್ನ ಪ್ರೀತಿಗೆ ಜೊತೆಯಾಗ ಬಯಸುವ ಒಡತಿ
ನಾನು,
ಒಂದು ವೇಳೆ ಆ ಪ್ರೀತಿಗೆ ಕೊಟ್ಟರೆ ಸಮ್ಮತಿ,
ಆಗುವೆನು ನಿನ್ನ ಪ್ರೀತಿಗೆ ಆಹುತಿ...!
ಇರುವೆನು ನಿನ್ನ ಜೊತೆಗೆ ಜನ್ಮ ಪೂತಿ೯...!
ಯಾರವನು ? ಯಾರವನು ?
ಅರೆ ನೆಮ್ಮದಿ ಜೀವನ ನಡೆಸುವವನು
ಅರೆಬೆಂದ ಅನ್ನವ ತಿಂದವನು
ಬಿಸಿಲಿನಲ್ಲೂ ಎದೆಗುಂದದೆ ರಸ್ತೆಯಲ್ಲಿ ನಿಂತವನು
ಜೋರು ಸಪ್ಪಳದ ಬೂಟಿನವನು
ಯಾರವನು ? ಯಾರವನು ?
ಸೇವಾ ಧರ್ಮಕ್ಕೆ ಸೇರಿದವನು
ಖಾಕಿ ಜಾತಿಯ ಮಗನಿವನು
ಮಂತ್ರದಂಡದ ಲಾಠಿಯವನು
ಕಳ್ಳ-ಕಾಕರಿಗೆ ಘಾಟಿ ಇವನು
ಯಾರವನು ? ಯಾರವನು ?
ಕರೋನಾ ಬಂದಾಗಲೂ ಮೇಹುನಾ
ಎಂದು ಕೆಲಸಕ್ಕೆ ಹೊಂಟವನು
ಕರ್ತವ್ಯಕ್ಕಾಗಿ ಮನೆ-ಮಠ ಬಿಟ್ಟವನು
ಖದೀಮರ ಪಾಲಿನ ಕೆಟ್ಟವನು
ಸದಾ ನಿಮ್ಮ ಸೇವೆಯಲ್ಲಿ
ಕರ್ನಾಟಕ ರಾಜ್ಯದ ಆರಕ್ಷಕನು,ಆರಕ್ಷಕನು.