Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಏಕಾಂಗಿಯಾಗಿದ್ದ ನನ್ನ ಪುಟ್ಟ ಹೃದಯವಿಂದು,
ಅಪಾಯದಲ್ಲಿ ಸಿಲುಕಿ ನರಳಾಡುತ್ತಿದೆ.
ಇನ್ನೂ ತಿಳಿಯಲಿಲ್ಲ ನೀ ಯಾರೆಂದು,
ಬಂದು ಉತ್ತರಿಸುವೆಯಾ ಈ ನನ್ನ ಮನ ಕೇಳುವ
ಪ್ರಶ್ನೆ ಗಳಿಗಿಂದು..?
ಮೌನಿಯಾಗಿದೆ ನನ್ನ ಮನವಿಂದು,
ಎಷ್ಟು ಹೇಳಿದರೂ ಸಾಕಾಗುತಿಲ್ಲ ಸಾಂತ್ವನ ವನ್ನು.
ಒಮ್ಮೆ ಯಾದರೂ ಬರುವೆಯಾ? ಕಣ್ಣೆದುರಿಗಿಂದು,
ಬಂದರೆ ನಮಿಸುವೆನು ಆ ನಿನ್ನ ಕರಗಳನ್ನು.
ನಮಿಸಿ ಕೇಳುವೆನು ಜೊತೆಗಿರುವೆಯಾ ಹೀಗೆ ಎಂದಿಗೂ...!
ಒಂದು ಕ್ಷಣ ಒಪ್ಪಿಕೊಂಡರೆ ಕೈ ಮುಗಿದು ತಲೆ ಬಾಗುವೆನು
ಆ ಸ್ರಷ್ಟಿಕತ೯ನಿಗಿಂದು..!
Megha.
- Megha
07 Apr 2020, 04:14 pm
ಸುಂದರವೆನಿಸುವ ಅದೆಷ್ಟೋ ಕವನಗಳಿಗೆ,
ಸ್ಫೂರ್ತಿಯಾಗುವ ಕವಿಯ ಬರಹಗಳು
ಬರೆಯುವಾಗ ಅದೆಷ್ಟು ಬಾರಿ ಹರಿದು ಹಾಕಿರುವನೋ ಹಾಳೆಗಳ ರಾಶಿಯನ್ನು,
ಅದೆಷ್ಟು ನೆನಪಿಸಿಕೊಳ್ಳುವನೋ ಕವನಕ್ಕೆ
ಮಂದಹಾಸ ಬೀರುವ ಶಬ್ದಗಳನ್ನು,
ಆದರೂ ಆ ಕವನಗಳಿಗೆ ಮೆಚ್ಚುಗೆ ಬಾರದ
ಗಳಿಗೆಯಲ್ಲಿ ಮೌನಿಯಾದ ಅದೆಷ್ಟೋ ಕವಿಗಳ
ಕವನಗಳ ಸಾಲುಗಳು..!
Megha..
- Megha
07 Apr 2020, 01:43 pm
ನಮ್ಮೀ ನಡುವಲಿ ಪ್ರೀತಿಯೇ ಸೇತುವೆ
ಎಲ್ಲಾ ಕಲಿಸಿರೋ ಪ್ರೇಮದ ಪಾಠವೇ
ಕನಸಿನಲಿ ನಾ ನೊಂದೆನು
ಅರಿಯದೆ ಏನೊಂದನು
ಹೇಳಿಬಿಡು ನೀನೆ ಈಗ ಆ ಕಾರಣ.
ನಮ್ಮೀ ನಡುವಲಿ ಪ್ರೀತಿಯೇ ಸೇತುವೆ۔۔۔۔۔
ಹರಿಯುವ ನದಿಗಳು ಸಾಗರ ಸೇರುವ ವೇಗವ ಕಾದಿವೆ ,
ಪ್ರೀತಿಯ ಅಲೆಗಳು ನನ್ನಲಿ ಸೇರಿ ಕಲರವ ಮಾಡಿವೆ,
ನಮ್ಮೀ ನಡುವಲಿ ಪ್ರೀತಿಯೇ ಸೇತುವೆ۔
ಎಲ್ಲಾ ಕಲಿಸಿರೋ ಪ್ರೇಮದ ಪಾಠವೇ........
- chidananda chida
07 Apr 2020, 07:35 am
ಹುಚ್ಚು ಮನಸ್ಸಿನ ಮರ್ಕಟ
ಮೃಗಗಳ ಬಂಧಿಸಿ ನೋಡುವ ನೋಟ
ಬಂದಾಗ ಅವನಿಗೆ ನಂಜಿನ ಕಾಟ
ತನ್ನ ಗೂಡೊಳು ತಾನಿರಲು ಅವನಿಗೇ ಸಂಕಟ ?
ಪ್ರಕೃತಿ ಎದುರು ವಿಕೃತಿ ಮೆರೆವ ಮನುಷ್ಯ
ಅವನ ಅಳಿಸಲು ಪ್ರಕೃತಿಗೆ ಸಾಕು ನಿಮಿಷ
ಸ್ವಾರ್ಥದ ಬದುಕಿಗೇಕೆ ಇಷ್ಟು ಆವೇಷ
ಸಾವಿನಂಚಿನಲೂ ಜಾತಿ, ಮತಗಳ ಸಂಘರ್ಷ
ಬಿತ್ತಿ ಹೋದವರು ಯಾರೋ ಮನುಜ
ಜಾತಿ, ಮತ, ಭೇದಗಳೆಂಬ ವಿಷ ಬೀಜ
ಬೆಳೆದು ಹಣ್ಣಾಗಿದೆ ತಿಂದವ ಕಕ್ಕುವನು ವಿಷ.. ಸಹಜ
ವಿಷ ವೃಕ್ಷವ ಕಡಿಯದೆ ಹಣ್ಣ ತಿಂದವನಿಗೇಕೆ ಸಜ?
ಅವಿವೇಕದಿಂದ ಅವನತಿಗೆ
ಆವೇಶದಿಂದ ವಿನಾಶದಂಚಿಗೆ
ಕೊಂಡೊಯ್ಯುವರು ಮನುಕುಲವ ಮೆರವಣಿಗೆ
ಮಾಡಿಕೊಂಡಂತೆ ಸಿದ್ಧತೆ ತಮ್ಮ ಶವ ಯಾತ್ರೆಗೆ
- Tribhuvan
07 Apr 2020, 04:27 am
ನಾನು ಒಂದು ಕವನ ಬರೆಯಲು
ಪ್ರಾರಂಭಿಸಿದೆ ನಿನ್ನ ಮೇಲೆ
ಅವತ್ತು ಜಾತ್ರೆಯಲ್ಲಿ ಸೀರೇನೂಟ್
ನೀ ಸಿಕ್ಕಿದೆ ನನಗೆ ವರವಾಗಿ....
ನಾ ಕಾಯುವೆ ಸದಾ
ನಿನ್ನ ಪುಟ್ಟ ಹೃದಯದ ಪ್ರೀತಿಗಾಗಿ
ಬಿಗಿ ಹಿದಿದ್ಕೊಂಡಿರುವೆ ಜೀವವ
ನೀ ಬರುವ ಆ ಸುಗಮದ ದಿನಕ್ಕಾಗಿ.....
ಈ ಮೌನ ಯಾವಾಗ
ಮುರಿದು ನಿಲ್ಲುವುದೋ
ನೀ ಹೇಳುವ ಮಾತಾಗಿ
ನನ್ನ ಜೀವ ಬಿಗಿಡಿದು ಕಾಯುವುದು..
ನೀ ಬಂದು ಹೇಳಿಬಿಡು ಒಮ್ಮೆ
ಆ ಸುಂದರವಾದ ಪ್ರೀತಿಯ ಸಿಹಿ ಮಾತನ್ನ...
ಮರುಕ್ಷಣ ನಾ ಬರುವೆ
ನೀ ನಡೆಯುವ ದಾರಿಯಲ್ಲೆ
ನಾ ಬರುವೆ ಜೊತೆ ಜೊತೆಯಲ್ಲಿ.....
- Ajay
06 Apr 2020, 10:20 pm
ಮಗುವಿನ ಬಾಯಿಯಲ್ಲಿ ಜನಿಸಿದ ಮೊದಲ ಮಾತು ಸಾವು ಬಂದರು ಸಾವಿ ಇಲ್ಲದ
ಈ ಮಾತು
ನೂರುಕಾಲ ಸ್ಪೂರ್ತಿ ತುಂಬುವ ಮಾತು
ಮನದ ಭಾವನೆಗಳನ್ನು ಮುದುಡು ಗೂಡಿಸುವ ಮಾತು
ತನ್ನ ಮಾತುಗಳನ್ನು ಕೇಳದಿದ್ದಾಗ ಕಣ್ಣೀರು
ಬರಿಸುವ ಮಾತು
ಆ ಮಾತೇ ❤❤❤ ಅಮ್ಮ
................. ಮದನ್ ರಮೇಶ್
- MadhanR
06 Apr 2020, 07:19 pm
ಕಳೆದು ಹೋದ ಮನಸಿನ ಮಾತೂಂದು
ಹುಡುಕಾಲಾಗದು ಎಂದೆಂದು
ಕಡೆಗಣಿಸಿದ ಪ್ರೀತಿಯನು ಮತ್ತೆ ಬಯಸಿದರು
ಸಿಗಲಾರದು ಮತ್ತೆಂದಿಗೊ
ಕೂಡಿಟ್ಟ ದುಡ್ಡು ಕಳ್ಳರ ಪಾಲು
ಬಚ್ಚಿಟ್ಟ ಪ್ರೀತಿ ಕನಸಿನ ಪಾಲು
ಹೇಳಿಟ್ಟ ಕೇಳಿಟ್ಟ ಬಾಯ್ಬಿಟ್ಟ ಪ್ರೀತಿ
ಪ್ರೀತಿಸಿದ ಪ್ರೇಮಿಗಳ ಪಾಲು
ನಾನೆಂದೂ ಹೇಳಿದ ಹುಚ್ಚು ನುಡಿಯೊಂದು
ಬೇರೂಬ್ಬರ ಮನಸಿನ ನೋವು ಕಳೆಯಿತು
ಅವರೆಂದೂ ಆಡಿದ ಬಿಚ್ಚು ನುಡಿಗಳು
ನನ ಮನಸಿನ ಕಿಚ್ಚು ತಣಿಸಿತು....
ಮರೆತರು ಮರೆಯತಂತೆ ನೆನೆದರು ಕುಂತರು ನಿಂತರು ಬಿಡದೆ ಕಾಡುತಿದೆ ನನ್ನ ಒಲವೆ
ನನ್ನ ಪ್ರೀತಿಯ ಆಸರೇ ನೀನು
ನನ್ನೂಲವೆ......
- RoopaGowtham
06 Apr 2020, 05:24 pm
ಕಾಣದ ಕಡಲೊಂದು ಬಡಿದಿದೆ ಮನದಲ್ಲಿ
ಕಡಲಿನ ರಭಸಕ್ಕೆ ಒದ್ದಾಡಿದೆ ಮನಸ್ಸು ಮೀನಿನಂತೆ
ದಡದಲ್ಲಿನ ಮೀನು ಹೇಗೆ ನೀರು ಸೇರಲು ಬಯಸುವುದೂ ಹಾಗೆ ನಾ ಕಾದಿರುವೆ ನಿನ್ನ ಸೇರಲು...
ಕಪ್ಪೆ ಚಿಪ್ಪಿನ ಒಳಗಿರುವ ಮುತ್ತಿನಂತೆ ಮನಸ್ಸು
ಒಡೆದರೆ ಚಿಪ್ಪು ಸಿಗಲಾರದು ಮುತ್ತು
ಮತ್ತಿನಿಂದ ಹೂರ ಹೋದ ಪ್ರೀತಿ ಮನಸ್ಸನ್ನು ಸೇರಲಾರದು ಎಂದಿಗೊ ಇದೇ ಮನಸಿನ ತಾಕತ್ತು
ಪ್ರೀತಿ ಮನಸಿಗೆ ಚಾರ್ಜರ್ ಇದ್ದಂತೆ
ಇನಿಯ ಮನಸಿನ ಸಿಮ್ ಕಾರ್ಡನಂತೆ
ಇದೆರಡು ಇದ್ದರೆ ಮನಸ್ಸು ಈಗಿನ
ಒಳ್ಳೆಯ ಸ್ಮಾರ್ಟ ಪೋನಿನಂತೆ..
ಬದುಕಲ್ಲಿನ ಸಂಬಂಧಗಳು ಪೋನಿನಲ್ಲಿನ ಆಪ್ ಗಳಂತೆ ಸೆಕ್ಯುರಿಟಿ ಹೊಂದಿಕೂಳ್ಳದೆ ಇದ್ದಲ್ಲಿ ಸಂಬಂಧಗಳು ಅನ್ ಇನ್ ಸ್ಠಾಲ್ ಆಗುತ್ತೆ ಮೊಬೈಲ್ ಆಪ್ ಗಳಂತೆ.....
ರೂಪಾಗೌತಮ್
- RoopaGowtham
06 Apr 2020, 05:01 pm
ಕಟ್ಟಿ ಕರೇವ
ಕಾಮಧೇನ ಕೊಟ್ಟಿಗೆ ತುಂಬಿ
ಕೈತೋಳಿಬೇಕ ನೀ ಹಾಲುತುಪ್ಪದೊಳಗಾ
ತಪ್ಪ ಬಾರದು ನೋಡಾ
ಹಾಲುಂಡ
ತನುವಲ್ಲಿ ಶಕ್ತಿಯೆ ತುಂಬಿ
ಎದೆ ತಳೆಬೇಕ ಅಮೃತಬಿಂದಾ
ಇಸ ಸುಳಿಕೂಡದು
ಕಂದ ನೀ ಕಾಣಾ
ಕಲ್ಲು ಕೊಣಚ
ಕೃಷ್ಣ ನಿರುವನ ಎಲ್ಲದಕಾ
ಕರ್ಮ ನೀ ಎಸಗು ಕಮಟು ಕರಗಿ
ಫಲಹೊತ್ತು ತರುವನಾ
ಶ್ರೀ ರಂಗನು
ತಡೆಗೋಡೆ
ಕೆಡವಿ ನುಗ್ಗು ಎಡರೇನೆ ಬರಲಿ
ಇಡದಿರು ನೆಲಕೆ ಮುಗ
ಮೈಬಗ್ಗಿಸಿ
ಕಾಯಕದೇವಗೆ ಶರಣಾಗು
ಹಸುವಾಗಿ ಪೊರೆವನಾ
ದೇವ ನಿನ್ನನು
- samna
06 Apr 2020, 04:29 pm
ಸಾಗುತಲಿಹ ಪಥವದು
ದುರ್ಗಮವಿಹುದು
ಸಾಧನೆಯ ಶಿಖರದೆಡೆಗೆ
ಸಾಗುತಲಿಹುದು
ಅಂಜಿಕೆಯೇಕೆ ಅಳುಕಿನ್ನೇಕೆ
ಕಾಲೆಳೆವವರ ತಳಮಳವೇಕೆ
ಕನಸೇ ಇರದ ಬದುಕಿನ್ನೇಕೆ
ಗುರಿ ತಲುಪಿದೊಡೆ ಹಾಕು ಕೇಕೆ
ಬೆದರಿ ಬಳಲಿ ಬಿಕ್ಕುತಲಿಹ
ಮನವದು ನೋವಲಿ ಬೇಯುವುದು
ಬಿರಿಯದ ಕುಗ್ಗದ ಒತ್ತಡಕ್ಕಳುಕದ
ಮನವದು ಜಯವನು ಕಾಣುವುದು
@ಕಂಪಾ
- KN PATIL
06 Apr 2020, 04:17 pm