Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ತಾಯಿಯ ಕೊರಗು

1,3,5,7,9 ಸಾಲು ಮಗ ಹುಟ್ಟಿದ ನಂತರ
2,4,6,8,10 ತಾಯಿಯ ಗರ್ಭ ದಲ್ಲಿದ ಸಾಲು

ಹುಟ್ಟು ಹಬ್ಬ ಹುಟ್ಟ ಹಬ್ಬ ಏಕೆ ಕುಣಿಯುವೆ?
ತಾಯಿಯ ನೋವಿನ ಸ್ಪರ್ಶ ತಿಳಿಯಾ...ದಿರುವೆ
ನೀನು ಉಟ್ಟ ಆ ಮಿಣ ಮಿಣ ಬಟ್ಟೆ.
ಹಿಡಿ ಅನ್ನಕಾಗಿ ಕಾಯುತ್ತಿತ್ತು ತಾಯಿಯ ಹೊಟ್ಟೆ.
ಹಣವನ್ನು ಕುಡಿದು ಕುಪ್ಪಳಿಸಿದೆ ಖರ್ಚಿನಲ್ಲಿ...
ನಿನಗೇನು ಆಗದಂತೆ ಹರಕೆ ಕಟ್ಟಿದಳು ಚರ್ಚಿನಲ್ಲಿ..
ಮಿತಿಮೀರಿ ದಾಟಿಹೋಗುತಿರುವೆ ಪ್ರಾಯದಲ್ಲಿ.
ಜಾರಿಬಿದ್ದ ಸಂಕಟದ ನೋವು ಗಾಯದಲ್ಲಿ.
ಊಟ ರುಚಿಯಿಲ್ಲ ಎಂದು ತಟ್ಟೆ ಎಸೆದ ಕೋಪ.
ಹಸಿವುತಾಳಲಾರದೆ ಬಟ್ಟೆ ಇಸ್ತರಿಗಾಗಿ ಗಂಜಿಯ ನೆಪ

- ABG creation

10 Apr 2020, 11:11 pm

ಮೌನಿ...

ನೊಂದ ಮನಸ್ಸಿನ ಮಾತು
ಯಾವಾಗಲೂ ಚೂರಿಯ ಇರಿತವಾಗಿರುತ್ತದೆ...
ಕಾರಣ,,,‌ ಹೇಳಕ್ಕಾಗದೇ ಇರುವ ಎಷ್ಟೋ ನೋವುಗಳು ಮನಸ್ಸಲ್ಲಿ ಕುದಿಯುತ್ತಿರುತ್ತವೆ..
✍️.ರಾಮ್...

- ರಾಮ್

10 Apr 2020, 11:05 pm

ಕನ್ನಡ ಸಾಂಗ್,,,,, ಬವಣೆ,, ಬಾವನೆ

ನಿಮ್ಮಿಂದ ದೂರಾಗಿ ಇರಲಾರೆನೂ,,,,
ಇನ್ನೆಂದು ನಿಮ್ಮನ್ನು ಬಿಡಲಾರೆನೂ,,,,
ಕಣ್ಣಲ್ಲೇ ನೀನೂ ಕುತಿದ್ದ ಮೇಲೆ
ಬೆಕಿಲ್ಲಾ ಇನ್ನು ಕಣ್ಣಾ ಮುಚ್ಚಾಲೆ,,,
ನಾ ಕೂಗಲೇ ನಿನ್ನನ್ನು,,,
ಅದೇ ನೀನು ಅದೇ ನಾನು
ಅತಿಯಾಯ್ತು ಪ್ರೀತಿ ಇನ್ನನೂ
ಮುದ್ದಾದ ನಿನ್ನ ಶೈಲಿನೇ ಭಿನ್ನ ನೀನ್ನೋನೇ ನಾನು ಇನ್ನೊಂದೇ ಚೆನ್ನ ಮೆಚ್ಚೋದೆ ಬೇಡ ಇನ್ಯಾರು ನಿನ್ನ ಹೇ,,,,, ನೆನಪಿನ ನಿನ್ನ ಈ ಕಿಲಿಯಿಂದ ಕನಸಿನ ಖಜಾನೆ ಒಂದ ತೆರೆಯುವ ಯತ್ನ ತುಂಬಾನೇ ಚೆಂದ ಹೇ,,,,
ಯಾರಿಲ್ಲ ನಿನ್ನಂತೆ ಇನ್ನ್ಯಾರೂ ಬರದಂತೆ ಬಾ ನನ್ನ ಸ್ವರದಂತೆ ಎಂದೆಂದಿಗೂ ನನ್ನ ಜೊತೆ

- ದೀಪವಿ

10 Apr 2020, 10:56 pm

ಸಂಬಂಧಗಳ ಬೇಡಿಯೊಳಗೆ

ಹಾರಾಡಿದ ಕನಸು
ಮುದುಡಿ ಮಲಗಿದೆ
ಕೊನೆ ಮೊದಲಿಲ್ಲದ
ಈ ಬದುಕಿನಲಿ

ಬಂದಿಯಾಗಿಹ ಭಾವ
ಕಾಡುತಿದೆ ಇಂದು
ಸೆರೆಯಿಂದ ಹೊರಗೆ
ಬರುವ ಬಾಗಿಲೆಲ್ಲಿದೆ

ಸಂಬಂಧಗಳ ಬೇಡಿಯೊಳಗೆ
ಬಿಗಿದಿರುವೆ ಕೊಂಡಿಯಾಗಿ
ಅದರೂ ಹೊರ ಬರುವೆ
ಬರುವ ಬಾಗಿಲೆಲ್ಲಿದೆ


ಮುಖವಾಡ ಯಾಕಿನ್ನು
ಮೂರು ದಿನದಿ ಜೀವಕೆ
ರೆಕ್ಕೆ ಮೂಡಿದರೆ
ಹಾರುವ ಮತ್ತೆ, ಇಲ್ಲವಾದರೆ .....ತ್ತೆ

- suresh veera

10 Apr 2020, 10:46 pm

--ನೆನಪು--?

ನೆನಪುಗಳ
ನೆನಪಲ್ಲಿ
ನೆನಪಾದ
ನೆನಪೊಂದು
ನೆನಪಿರುವವರೆಗೂ
ನೆನಪಿರಲಿ
ನನ್ನ ......ನೆನಪು...?

- ABG creation

10 Apr 2020, 09:23 pm

ಸಣ್ಣ ಹೃದಯದ ಮಾತು : ❤❤

ನಂಬಿಕೆ ಹರಡಲಿ
ವಿಶ್ವಾಸ ಬೆಳಗಲಿ
ದ್ವೇಷವೆಂಬ ಕತ್ತಲು ಸರಿದು
ಪ್ರೀತಿಯ ಬೆಳಕು ಹರಿಯಲಿ.....

ಸಹೋದರತೆ ಹರಡಲಿ
ವಾತ್ಸಲ್ಯತೆ ಬೆಳಗಲಿ
ಜಾತಿವಾದವೆಂಬ ಕತ್ತಲು ಸರಿದು
ಮಾನವೀಯತೆಯ ಬೆಳಕು ಹರಿಯಲಿ.....

ಧರ್ಮ ಹರಡಲಿ
ನ್ಯಾಯವು ಬೆಳಗಲಿ
ಭ್ರಷ್ಟತೆ ಎಂಬ ಕತ್ತಲು ಸರಿದು
ಅಭಿವೃದ್ಧಿಯ ಬೆಳಕು ಹರಿಯಲಿ.....

ಆತ್ಮ ವಿಶ್ವಾಸ ಹರಡಲಿ
ಆಶಾ ಜ್ಯೋತಿ ಬೆಳಗಲಿ
ಅಜ್ಞಾನವೆಂಬ ಕತ್ತಲು ಸರಿದು
ವಿಜ್ಞಾನದ ಬೆಳಕು ಹರಿಯಲಿ.....

ಇಂತಿ ನಿಮ್ಮ ಗೆಳೆಯ :
ಡಿ ಜೆ ವಿಶಾಲ

- Vishal Hiremath

10 Apr 2020, 08:15 pm

ಕಾಣುವ ಮನಸ್ಸಿಗೆ

ಕಾಣುವ ಮನಸ್ಸಿಗೆ ಆಸೆಯೇ ಬಂದರು
ಭಾರದ ಆಸೆಯೂ ನಿಂತರು
ನಿಂತ ನೀರಿಗೆ ಬೆಲೆ ಕೊಡೋರು
ಹರಿಯುವ ನೀರಿಗೆ ಕೊಚ್ಚಿ ಹೋದರು

✍️ವಿ.ಶಿವಾನಂದ

- Shivanand V Anandadavar

10 Apr 2020, 05:08 pm

ನನ್ನವನು

ನನ್ನವನೆ ನೀನು ನಿನ್ನವಳೆ ನಾನು
ಸುಮದುರ ಈ ಜೀವನ
ಏನ್ಭೆಕು ನಿಂಗೆ ಕೇಳಮ್ಮ ನಂಗೆ
ನಾ ನಿನ್ನ ಪ್ರೀತಿ ದಾಸ ಆಗ್ಬಿಟ್ಟಂಗೆ...

ನೀನಿಷ್ಟ ನಂಗೆ ಹೇಳೋದೆಂಗೆ
ಮರೆತೋದೆ ನನ್ನೆ ಬರೀ ನಿಂದೆ ಗುಂಗೆ
ಪ್ರೀತಿ ಬಿದ್ ಮೇಲೆ ಆಗೋದೆ ಇಂಗೆ
ನೀ ನನ್ನ ಮುದ್ದು ಚೆಂದದ ಗೂಂಬೆ

ನಿನ ಮಾತು ಚೆಂದ ನೀನಿನ್ನು ಅಂದ
ನಿನ ಪ್ರೀತಿಯಿಂದ ನನಗಾನಂದ
ನನಗೊಂದು ಆಸೆ ನೀ ಕೇಳು ಕೊಸೆ
ನಮ ಪ್ರೀತಿಗಾಗಲಿ ದಿನವು ಹೂಸ ಆರಂಭ...

- RoopaGowtham

10 Apr 2020, 04:17 pm

ತಾಯಿ ಮತ್ತು ಪ್ರಕೃತಿ

ಹೆಜ್ಜೆ ಗಳು ನೆಡೆದ
ಹನಿ ಹನಿಯ ಕುರುಹಿನ ದಿಬ್ಬಣ...
ನಟ್ಟನಡು ಹಡೆದ
ಬಾನೊಳ ಮೂಡಿಹ ಮೂಢಣ...
     
ಚೇಳಗುಡ್ಡದ ಮೇಲೆ
ಚೇಷ್ಟೆಗಾಳಿಯಲಿ ತೇಲತಿಹ ಮಾತು
ಹಕ್ಕಿಮೊರೆತದ ಮೇಳ
ಇಕ್ಕಿಹೋಯಿತ ಮನಕ ಮೆಲ್ವಾತು

ಬಿಂದಿ ಕಂಕಳಲೆ ನೆಟ್ಟಗೆ
ಏರತ್ತಿದ ಬ್ರತುಕು ನೀರಡಕಿದ ಗುರುತು
ಗೋಕಟ್ಟೆ ಮಣ ಕಟ್ಟಿಗೆ
ನೆತ್ತಿಗೆ ಹೊತ್ತಪರಿ ಬಡ್ಡೆಕಲ್ಲದು ಹೇಳಿತು

ಗಿರಿಶಿಖರ ಸ್ನೇಹದಲೆ
ಬೆಳೆದ ಜೀವ ಕಾನನದ ಕವುಜದಂತೆ
ಮುಗ್ಧತೆಯ ಕಡಲಲೆ
ಪ್ರೀತೀ ಅಲೆಗಳಿಡಿಸಿ ಕರುಳ ನಿರಂತರ

ಹಕ್ಕಿಯಾಗಿ ಹಾರುರೆಕ್ಕೆ
ಬಿಚ್ಚಿದ ಸ್ವಚ್ಛಂದದ ಒಂದು ಮುಗಿಲು
ಕೆಂಗಲ ನುಂಗುಬಿಸಿಲ
ಬಗ್ಗಿಸಿದ ಕಾಯಕಕೆ ಅದೊಂದು ದಿಗಿಲು

ದೇವರಗುಡ್ಡದಿ ಅಲೆವ
ಗಾಳಿಯಂತೆ  ತಿರುಗಿ ಕಾಯ್ದ ಹಸುಹಿಂಡು
ಕಣ್ಣಿಗೆ ಬೆಳ್ಳಕ್ಕಿ ಸಾಲಂತೆ
ಬೆಟ್ಟದಡಿ ಊರಿಗೆ ವಿಸ್ಮಿತ ಕಣ್ಣ ಗಂಡು

ಮುಗಿಲೆ ಕರಗಿ ಮಳೆಯ
ಸುಯ್ಲ ತೊಯ್ಯತ ಹನಿ ಹನಿಯ ಬೊಗಸೆಗೆ ತೂಗಿ 
ಆನಿಕಲ್ಲ ಹಿಡಿದು ನುಂಗುತ
ಮಳೆಗೆಳತಿಯ ಕೂಡಾಡಿದ ಪ್ರಕೃತ

ಸರಿಕರೆದುರ ಗೌರಿ
ಹಿರಿಕರ ಮುಂದೆ ರತ್ನೆಯಂತೆ ಓರಗೆತನಕೆ ಇಂದ್ರೆಯಂತೆ
ಸ್ವಾಭಿಮಾನ ತಡೆವಿದರೆ ನಾಗೆಯಂತೆ
ಹಳ್ಳ ಹರಿಸಿದ ಹೆಜ್ಜೆ ನೆನಪ ದೇವತೆ

- samna

10 Apr 2020, 03:46 pm

ಯಾವ ತೀರದಲ್ಲಿ...!!!

ಅಂತರಂಗದೊಳು ಇಣುಕಿ ಕಂಡೆ ನನ್ನದೇ ಪ್ರತಿಬಿಂಬ
ಒಳ ಹೊಕ್ಕು ನೋಡಲು ವಿವರಿಸಲಾಗದು ಅನುಭವ
ಕಂಡದ್ದು ನೋಡಿದ್ದೆಲ್ಲವೂ ನನ್ನದಾಗಲಿ ಎಂದೆ ನಾನು
ಅರಿಯದಾದೆ ಆ ನಾನು ಈ ದೇಹದೊಳು ಎಲ್ಲಿರುವನು..

ಪ್ರೀತಿಯಿಂದ ಕರೆದರೆ ಮುಖ ಕಮಲ ಅರಳುವುದು
ದ್ವೇಷದಿಂದ ಕರೆದರೆ ಮುಖ ಕೆಂಪೇರಿ ಉರಿವುದು
ತನ್ನವರ ಬಿಗಿದಪ್ಪಿ, ಪರರ ಕಂಡೊಡನೆ ದೂರ ಸರಿದು
ಒಂದೇ ದೇಹದೊಳು ಹಲವು ಮುಖಭಾವ ಇಹುದು..

ಮೂಳೆ, ಮಾಂಸ, ನರ, ರಕ್ತಗಳಿಂದ ತುಂಬಿದ ದೇಹ
ಅದೇಕೋ ಹೆಣ್ಣು,ಹೊನ್ನು,ಮಣ್ಣಿಗಾಗಿ ತೀರದ ದಾಹ
ಕ್ಷಣಿಕ ಈ ಬದುಕು ಹೊತ್ತು ಸಾಗುವ ಸಮಯ ಪ್ರವಾಹ
ಸುಳಿಗೆ ಸಿಕ್ಕಿ ಈಜಲು ಆಗದವನಿಗೂ ಏನೋ ಮೋಹ..

ನಾನು,ನನ್ನದು,ನನ್ನವರೆಂಬ ಹುಚ್ಚು ಭ್ರಮೆ ಇಲ್ಲಿ
ಮೊದಲು ನೀನು ಯಾರೆಂಬ ನಿಜವನು ನೀ ತಿಳಿ
ಕ್ಷಣಿಕ ಸುಖಃಕ್ಕಾಗಿ ಕೊಡಬೇಡ ಬದುಕನ್ನು ಬಲಿ
ಬಲಿಯಾದರೆ ಜೀವ ಸೇರುವುದು ಯಾವ ತೀರದಲ್ಲಿ..?

- Tribhuvan

10 Apr 2020, 03:23 pm