Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಮ್ಮ

ಎದೆಯೆಲ್ಲಾ ಬತ್ತು.,
ಕಣ್ಣೀರೆಲ್ಲಾ ಇಂಗಿ,
ಮಾತೆಲ್ಲಾ ಮುಗಿದು,
ಜೀವ ಜೊತೆ ಬೇಡ
ಎಂದೆನಿಸಿ
ಕೊನೆಯ ಹೆಜ್ಜೆ ಇಡಬೇಕೆನುವಾಗ.
ಬಿಗಿದಪ್ಪಿ, ಮುತ್ತಿಟ್ಟು
ಚ್ಯೆತನ್ಯ ತುಂಬಿ..
ಮತ್ತೆ ಎದೆ ಯೆತ್ತಿ
ಬದುಕ ಎದುರಿಸಲು
ಧ್ಯೆರ್ಯ ತುಂಬುವಾಕೆ....

- Shrinivas

10 Apr 2020, 02:17 pm

ಸ್ನೇಹ.

ನನಗೆ ಇರುವುದು ಕೆಲವೆ ಸ್ನೇಹಿತರಾದರು .
ಅವರು ನನ್ನ ಕಷ್ಟ ಸುಖ ನೋವು ನಲಿವುಗಳನ್ನರಿತವರು.
ಮುಂದೆ ನಗಿಸಿ ಹಿಂದೆ ಚೊರಿ ಹಾಕುವ ನೂರು ಸ್ನೇಹಿತರಿಗಿಂತ, ಮನಸ್ಸಲ್ಲೇ ಬೆಟ್ಟದಷ್ಟು ಪ್ರೀತಿ ಇಟ್ಟಿರುವ ಒಬ್ಬ ಗೆಳೆಯ ಸಾಕು.

ಸಿದ್ದು....

- Siddu Siddesh

10 Apr 2020, 01:58 pm

ಭಾವನೆ

ಬಾರದ ಸಮಯಕ್ಕೆ ಕಾಯುತ್ತಿರುವ ಮನಸ್ಸು,
ನನಸಾಗದೇ ಉಳಿದಿವೆ ಅದೆಷ್ಟೋ ಕನಸು ಗಳು,
ಮೌನದ ನೆನಪಿನೊಂದಿಗೆ ಸಾಗುತ್ತಿದೆ
ಜೀವನದ ಪಯಣವು,
ಆ ಪಯಣದಾಚೆಯಲ್ಲಿವೆ ಸಾವಿರಾರು
ಭಾವನೆಗಳು....!

- Megha

10 Apr 2020, 01:04 pm

ಪ್ರೀತಿಯ ಬಂಧನ

ತನ್ನ ಪಾಡಿಗೆ ತಾನಿದ್ದ ಒಂದು ಪುಟ್ಟ ಹೃದಯಕ್ಕೆ ,
ಪರಿಚಯ ವಾಯಿತು ಇನ್ನೊಂದು ಪುಟ್ಟ ಹೃದಯ
ಪುಟ್ಟ ಹೂವಿನಂತೆ,
ಆದರೆ, ಆ ಪುಟ್ಟ ಹೃದಯಕ್ಕೆ ತಿಳಿದಿರಲಿಲ್ಲ
ಆ ಪುಟ್ಟ ಹೂವಿನಲ್ಲಿ ಮುಳ್ಳುಗಳ ರಾಶಿಯೇ ತುಂಬಿದೆ ಎಂದು,
ಬಂಧಿಯಾಯಿತು ಏನು ಅರಿಯದ ಆ ಪುಟ್ಟ ಹೃದಯ ಜೇಡರ ಬಲಿಯಂತೆ...!
ಕೊನೆಗೂ ಅಥ೯ವಾಗಲಿಲ್ಲ ಆ ಪುಟ್ಟ ಹೃದಯಕ್ಕೆ ಆ ಹೂವಿನಲ್ಲಿ
ಮುಳ್ಳಿನ ರಾಶಿಯೇ ಇದೆ ಎಂದು,
ಒದಾಡಿ , ನರಳಾಡಿ ,ಸಿಲುಕಿ ಹೋಯಿತು ಆ ಪ್ರೀತಿ ಎಂಬ ಬಂಧನಕ್ಕೆ..!

- Megha

10 Apr 2020, 10:16 am

ಚೆಲುವೆ

ಯಾರೇ ನೀನು ಚೆಲುವೆ
ನನ್ನ ನೋಡಿ ನೋಡಿ ನಗುವೆ
ನಿನ್ನ ಅಂದಕ್ಕೆ ನಾ ಯಂದೋ ಸೋತಿರುವೆ
ನಾ ಹತ್ತಿರ ಬಂದಂತ್ತೆ ನೀ ದೂರ ಹೋಗುವೆ


-ಲಿಖಿತ್. ಎo.....

- likith

10 Apr 2020, 07:57 am

ಬರಿಯಲು

ಕಂಗಳು ಕನಸು ಹುಡುಕಲು
ಬಯಸಿದ ಪ್ರೀತಿ ಉಳಿಸಲು
ಸ್ನೇಹದ ದಾರಿ ತಿಳಿಸಲು
ಮನಸ್ಸಿನ ಬಾಗಿಲು ತೆರೆಯಲು
ಇಲ್ಲಿ ಈ ಕವನ ಬರೆಯಲು

-:ವಿ.ಶಿವಾನಂದ:- ✍️

- Shivanand V Anandadavar

10 Apr 2020, 07:09 am

ಆ ವಿಷಯ

ಸಮಯ ಕಲಿಸಿತು ಹೊಸ ವಿಷಯ
ಮನುಜ ಅದನ್ನು ನೀನು ಅರ್ಹತೆಯ
ಕಾರಣವಿಲ್ಲದೆ ನೀ ದೂರಾದೆಯ
ಮರೆಯುವುದು ಹೇಗೆ ಆ ವಿಷಯ

✍️ವಿ.ಶಿವಾನಂದ

- Shivanand V Anandadavar

10 Apr 2020, 07:00 am

ಅಮ್ಮ ಅಮ್ಮ

ಬದುಕಿನ ಪಯಣದಲ್ಲಿ ಸಿಹಿ ಕಹಿನೆನಪುಗಳು
ಸಿಹಿ ಎಲ್ಲಾ ಒಂದೆಡೆಗೆ ಕಹಿ ಎಲ್ಲಾ ಒಂದೆಡೆಗೆ
ತಕ್ಕಡಿ ಮಾತ್ರ ಯಾಕೋ ವಾಲುವುದು ಕಹಿಯೆಡೆಗೆ
ಕಹಿಯ ತೂಕ ಸಿಹಿಗಿಂತಲೂ ಹೆಚ್ಚೇನೋ...

ನಮಗಿಷ್ಟ ಬಾಲ್ಯದ ಜೀವನ ಯಾಕೆ ಬರುತ್ತದೆ ಯೌವ್ವನ ಬೇಡೆಂದರು ಬರುತ್ತದೆ ವೃಧ್ಧಾಪ್ಯ
ಮಕ್ಕಳ ಮೊಮ್ಮಕ್ಕಳ ಕಯ್ಯ ಪಿಯ್ಯ ಇರಿಸು ಮುರಿಸು ಸಹಿಸುವ ಹೂತ್ತಿಗೆ ಜೀವನ ಸಾಕು ಸಾಕಯ್ಯ....

ಒಮ್ಮೆ ನಾ ಕೇಳಿದೆ ಮುಂದಿನ ಜನ್ಮವಿದ್ದರೆ ನೀ ಏನಾಗ ಬಯಸುವೆ ಎಂದು
ಅದಕೆಂದಳು ನನ್ನ ಗೆಳತಿ ನಾನಗುವೆ ಸುಂದರ ಪಕ್ಷಿ
ಮತ್ತೆ ಅವಳು ನನ್ನ ಕೇಳಿದಳು ನೀನು ಎಂದು ನಾನಂದೆ...ನಾನಗ ಬಯಸುವೆ ನನ್ನ ಅಮ್ಮನಿಗೆ ಅಮ್ಮ ಎಂದು....

ಅಮ್ಮ ಆದರೆ ತಿಳಿಯುತ್ತದೆ ಮಗುವಿನ ಎಲ್ಲಾ ಪ್ರಶ್ನೆಗೆ ಉತ್ತರ ನಮಗೆ ತಿಳಿಯದ ಎಲ್ಲಾ ಪ್ರಶ್ನೆಯ ಉತ್ತರ ಅಮ್ಮ ನೀ ನಮ್ಮ ಐ ಲವ್ ಯು ಅಮ್ಮ
ಜಗವು ನೋಡಿದ ಮೊದಲ ದೈವ
ಬದುಕು ಕಂಡ ಮೊದಲ ಜೀವ
ನನ್ನ ಸಲಹಿದ ಧೀರೆ ನೀನು ಧೈರ್ಯ ನೀಡಿದ ಮಾತೆ ನೀನು
ಕಥೆಯ ಹೇಳುವ ಕಥೆಗಾರೆ ಲಾಲಿ ಹಾಡುವ ಗಾಯಕಿ ನೀನೆ
ನಿನ್ ಬಿಟ್ರೆ ಯಾರು ಇಲ್ಲಮ್ಮ ನೀನೆ ನನಗಲ್ಲಮ


ಐ ಲವ್ ಯು ಮಾ....

- RoopaGowtham

10 Apr 2020, 12:17 am

ಸಣ್ಣ ಪ್ರೀತಿ ನದಿ ನಾ

ಸಣ್ಣ ಪ್ರೀತಿ ನದಿ ನಾ
ಹಿರಿದಾದ ನಿನ್ನ ಪ್ರೀತಿ ಕಡಲ ಸೇರಿ
ನನ್ನ ನಾ ಕಾಣದಾದೇ
ಹುಡುಕಿದರೂ ನನಗೆ ನಾನೇ ಸಿಗುತ್ತಿಲ್ಲ

ನಾ ಹಿಂಗಿದೇನ ಮೋಹದ ಕಡಲಲಿ
ಹುಡುಕುವ ಅಸೇ ಕವಲೊಡೆದವರ
ಬಾಲ್ಯದ ದಿನ ಹುಡುಕಲು
ಹುಡುಕಿದರೂ ನನಗೆ ನಾನೇ ಸಿಗುತ್ತಿಲ್ಲ

- suresh veera

09 Apr 2020, 11:01 pm

ಕನಸಿನ ಮಾತು ✒✒

ಅವಳು ಹೆಜ್ಜೆ ಇಟ್ಟಲೆಲ್ಲಾ
ಮೂಡಿದೆ ರಂಗು ರಂಗಿನ ಚಿತ್ತಾರ
ಕಣ್ಣು ರೆಪ್ಪೆ ಮುಚ್ಚಿದರೆ
ಸಾಕು ಹೃದಯಕ್ಕೆ ಗುರಿ
ಇಟ್ಟ ಬಾಣ ಬಿಡುತ್ತದೆ.
ಅವಳ ಚಿತ್ರಾಕರ್ಷಕ ವಯ್ಯಾರ ....!

ಹೇ ಕೊಮಲಾಂಗಿಯೆ
ನೀ ಹತ್ತಿರ ಬರುತ್ತಿದ್ದಂತೆ
ಏರುತ್ತಿವುದು ಮೈಗೆ ಕಾವು
ಬಳಿ ಬಂದರೂ ಮಾತನಾಡಿಸದೆ
ಹಾಗೆ ಹೋಗಿ ಕೊಡಬೇಡ
ಈ ಮನಸ್ಸಿಗೆ ನೋವು. .....!

ಇಂತಿ ನಿಮ್ಮ ಗೆಳೆಯ :

ಡಿ ಜೆ ವಿಶಾಲ

- Vishal Hiremath

09 Apr 2020, 10:29 pm