Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಜೀವನವೆಂಬುದು ಬನಲ್ಲಿಬರೋ ಚಂದ್ರನಂತೆ
ಸುಖವು ತಿಂಗಳಿಗೊಮ್ಮೆ ಬರೋ ಹುಣ್ಣಿಮೆಯಂತ್ತೆ ದುಃಖವು ಮಾಸಕ್ಕೊಮೆ ಬರೋ ಅಮಾವಾಸ್ಯೆಯಂತ್ತೆ
ಸುಖ ಬಂದಾಗ ಹಿಗ್ಗದಂತ್ತೆ
ದುಃಖ ಬಂದಾಗ ಕುಗ್ಗದಂತ್ತೆ
ಬಾಳಿದರೆ ಬದುಕು ಸುಖಮಯವಂತ್ತೆ.......
✍️ಲಿಖಿತ್. ಎo.........
- likith
09 Apr 2020, 08:00 pm
ಬೆಳಿಯ ಬೇಕು ಎಂದು ತುಳಿಯ ಬೇಡಾ
ತುಳಿಯ ಬೇಕು ಎಂದು ಬೆಳಿಯ ಬೇಡಾ
ಬೆಳಿಯುವರನು ನೋಡಿ ಕೋರಗ ಬೇಡಾ
ಕೋರಗಿ ಮರುಗಿ ಸಮಯ ಕಳಿಯ ಬೇಡಾ
✍️ವಿ.ಶಿವಾನಂದ
- Shivanand V Anandadavar
09 Apr 2020, 06:29 pm
ಗಲ್ಲೆನ್ನ ಗೆಜ್ಜಿಯ ಸೊಲ್ಲೆತ್ತ ಗುಬ್ಬಿಯ
ಬೀಲ್ಲಿನ ಕಣ್ಣಾಗ ಬಿಟ್ಟೆ ನಲ್ಲಿನ ಬಾಣ
ನಲ್ಲನಗೂಡಿಗೆ ಪ್ರೀತಿ ಕಲ್ಲೊಡದೆ ಯಾಕ ಮಂಜಿ
ಮ್ಯಾಲ ಹರಿದು ಬಂದಾಂಗ ಕಲ್ಲರೋಣ
ಮಾಯದ ಮಂಜಿ ಹಾಯಿ ಮಂಜಿ
ಮರಡಿ ಹಾದ್ಯಾಗ ಇಣಕ ಸಂಪೀಗಿ
ಬೆಳ್ಳಿನಗೆಯ ಮಂಜಿ ನವಿಲಗಣ್ಣ ಮಂಜಿ
ಬೇಡೆಂದರ ಬಿಡದ ಕಂಪಿಟ್ಟ ಕೇದಗಿ
ಹಸಿರಂತ ಮಂಜಿ ಉಸಿರಂತ ಮಂಜಿ
ಮುಸಿನಕ್ಕ ಮುತ್ತಿನ ಹೊನ್ನ ರಂಜಿ
ಹಾಲಂತ ಮಂಜಿ ಬೇಲೂರ ಬಾಲೆ ಮಂಜಿ
ಹಳೆಜನ್ಮದಾಗಿನ ಎದೆರಾಣಿ ಸಂಜಿ
ಕಂಜಾದ ಮ್ಯಾಲ ಹುಟ್ಟಿದ ಮಂಜಿ
ಮುಂಜಾನ ಮುತ್ತಾಗಿ ಹೊಳೆದೀ
ಸಂಜ್ಯಾದ ಮ್ಯಾಲ ಜೊನ್ನರೆಯಾಗ ಘನಿಸ
ಬಂಗಾರ ಗುಡಿಸಲಾಗ ಬೆಳೆದೀ
ಬೆಳ್ಳಾನ ಬೆಳಿಗ್ಗೆ ಬೆಳ್ಗುದರೆ ಮ್ಯಾಲೇರಿ
ಕುಳಿತು ಬರುವ ರಾಣಿ ಮಂಜಿ
ತಳ್ಳಿ ಎದೆ ಮದಿಲ ಒಳನುಗ್ಗಿದೆ ತೂರಿ
ಬಳ್ಳಿ ಬೇರತೊಟ್ಟ ಜಾಜಿಮಂಜಿ
ನೆರಳಂತ ಮಂಜಿ ಬಿಸಿಲಂತ ಮಂಜಿ
ಬೆರಳಿಗೆ ಬೆರಳಚ್ಚಿ ಮುಂಗುರುಳ ಮುತ್ತಿಕ್ಕಿ
ಕೆರಳ ಬಿಸಿಲಾಗ ಕರಗಿ ಹಸಿರಾದ ಮಂಜಿ
ತರಳೆ ಮಂಜಿ ತುಂತುರ ಮಂಜಿ
ಪುಟ್ಟ ಹಸುಳೆ ಮಂಜಿ ಬೆಟ್ಟಹರಿಣಿ ಮಂಜಿ
ಕುಪ್ಪಳಿಸಿ ಕುಣಿದಾಕೆ ಕಪ್ಪ ಬೇಡಿದಾಕೆ
ಹಸಿರ ಸಿಂಗಾರ ಇಬ್ಬನಿ ಮುತ್ತಿನರಳ ಮಂಜಿ
ಮಳೆಬಿಲ್ಲ ಬಣ್ಣ ಮೈಗುಟ್ಟು ಕಾಡಿದಾಕೆ
ಮುತ್ತಿಟ್ಟ ಮಂಜಿ ತುತ್ತಿಟ್ಟ ಮಂಜಿ
ಹೆಂಚಿನ ಮನೆಯಾಗ ಬಿಚ್ಚಿದ ಬಾಳಸಂಚಿ
ಬಿತ್ತಿ ಬೆಳೆಯೊ ಮಂಜಿ ಹತ್ತಿ ಹೂಮಂಜಿ
ಕಂಚೀನ ತಟ್ಟ್ಯಾಗ ಕೂಡಿ ಉಣ್ಣಾಕೆ ಹಂಚಿ
ಮಂಜಿ ಮಂಜಿ ನನ್ನ ಕಣ್ಣಂಚ ಮಂಜಿ
ಸಂಜೀವಿನಿ ತಂದಾಕಿ ಮರುಜೀವ ಹೊಯ್ದಾಕಿ
ಸಂಜೀಗಿ ನೆನಪಿಟ್ಟ ಗುಲಗಂಜಿ ಮಂಜಿ
ಗಂಜೀಯ ಬದಕಿಗ ಮಂಜ ಸುರಿದಾಕಿ
ಕಲ್ಲೀನ ಮಂಜೀ ಮುಳ್ಳಿನ ಮಂಜಿ
ತಲ್ಲಣಿಸ ತುಟಿಮುತ್ತ ಮುಂಗುರುಳ ಚುಚ್ಚಿ
ಎಲ್ಲಿ ಹೋದೆ ಮಂಜಿ ಮಲ್ಲೆ ಹೂ ಮಂಜಿ
ಕಲ್ಲಾಗ ಕೆತ್ತಿಸಿ ಹೆಸರ ಇಬ್ಬನಿಯ ಹನಿಮುಚ್ಚಿ
ಕ್ಷಾತ್ರಸನಾ ಇಕ್ಷ್ವಾಕು
- samna
09 Apr 2020, 02:32 pm
ಒಂದು ದಿನ ಮುಂಜಾವಿನಲಿ
ಮಂಜಿನ ಹನಿಗಳ ನಡುವೆ
ಯಾರೋ ಒಬ್ಬ ಸುಂದರ ತರುಣ
ಹೂ ಗುಚ್ಚಗಳ ಹಿಡಿದು ಬರುತ್ತಿದ್ಧ ನನ್ನತ್ತ
ಇನ್ನೇನು ತನ್ನ ಹೃದಯ ಸಂದೇಶವನ್ನು ಬಿಚ್ಚಿ
ಹೇಳುತ್ತಾನೇನೂ ಎನ್ನುವ ಹೂತ್ತಿಗೆ
ಹರಿದಿತ್ತು ನನ್ನ ಚಿತ್ತ ಬೇರತ್ತ
ಒಮ್ಮೆಲೆ ಎಂತಹ ಸುಂದರ ಚಿತ್ರಣ ಅಂದರೆ ಅಷ್ಟರಲ್ಲಿ ನನ್ನ ಗಡಿಯಾರ ಕೊಗಿತ್ತು
ಆಗ ತಿಳಿಯಿತು ಕನಸು ಇದಾಗಿತ್ತು.....
- RoopaGowtham
09 Apr 2020, 01:14 pm
ನಾನು ನನ್ನದೇನು ಇಲ್ಲ
ದೇಹ ಆತ್ಮ ನನ್ನದಲ್ಲ
ನಾನು ಎನ್ನುವ ಅಹಂಕಾರ
ಯಾಕೆ ನನ್ನ ತೊರೆಯುತ್ತಿಲ್ಲ
ತಂದೆ ತಾಯಿ ಕೊಟ್ಟ ಜನ್ಮ
ಹೆಸರು ಯಾರೋ ಇಟ್ಟರಣ್ಣ
ಕಲಿತ ವಿದ್ಯೆ ಅರಿತ ಕಸುಬು
ಯಾವುದು ನನ್ನದಲ್ಲ
ನಾನು ಎನ್ನುವ ಅಹಂಕಾರ
ಯಾಕೆ ನನ್ನ ತೊರೆಯುತ್ತಿಲ್ಲ
ಸತ್ತ ಮೇಲೆ ದೇಹ ಆತ್ಮ
ಎರಡು ಬೇರೆ ಆಗುವಂತೆ
ಮೂರು ದಿನ ದುಃಖವಂತೆ
ಮತ್ತೆ ಅವರಿಗವರದೇ ಚಿಂತೆ
ನನ್ನವರು ಯಾರು ಇಲ್ಲ
ನನ್ನದೆಂದು ಏನು ಇಲ್ಲ
ಇಂತಿ ನಿಮ್ಮ ಸ್ನೇಹಿತ :
ಡಿ ಜೆ ವಿಶಾಲ
- Vishal Hiremath
09 Apr 2020, 12:20 pm
ಆ ದಿನ ನನಗನಿಸಿತು,
ನೀನು ಯಾವತ್ತಿಗೂ ನನ್ನವನೇ ಎಂದು,
ಆ ದಿನ ನನಗನಿಸಿತು,
ನೀನು ಯಾವತ್ತಿಗೂ ನನ್ನವನೇ ಎಂದು,
ಆದರೆ,
ಇವತ್ತು ತಿಳಿಯಿತು ನಿನ್ನ ಹೃದಯ
ಬೇರೆಯವರಿಗೆ ಮೀಸಲು ಎಂದು..
- Megha
09 Apr 2020, 10:04 am
ದೇವರ ಗುಡಿಗೆ ಶಿಲೆಯ ಶೃಂಗಾರ
ಕೋಗಿಲೆಗೆ ತನ್ನ ಕಂಠವೆ ಶೃಂಗಾರ
ನವಿಲಿಗೆ ಅದರ ರೆಕ್ಕೆಯೆ ಶೃಂಗಾರ
ಹೆಣ್ಣಿಗೆ ಅವಳ ಅಂದವೆ ಶೃಂಗಾರ
ಹೂ ವಿಗೆ ಅದರ ಪರಿಮಳವೆ ಶೃಂಗಾರ
ಹಾಗೆ ನನ್ನ ನಿನ್ನ ಬಾಳಿನಲ್ಲಿ ಪ್ರೀತಿಯೆ ಶೃಂಗಾರ.....
- ಲಿಖಿತ್. M......
- likith
09 Apr 2020, 09:56 am
ಪ್ರೀತಿಯೆಂಬ ಸೆರೆಯಂಚಿನಲ್ಲಿ,
ಬಂಧಿಯಾದ ಪುಟ್ಟ ಹೃದಯ ನನ್ನದು,
ಆ ಬಂಧನದ ಕಣಂಚಿನಲ್ಲಿ,
ಸೆರೆ ಹಿಡಿದ ವಿಶಾಲ ಹೃದಯ ನಿನ್ನದು..!
M...!
- Megha
09 Apr 2020, 09:20 am
ಜೀವನದಲ್ಲಿ ಜಿಗುಪ್ಸೆಗೊಳಗಾದಾಗ,
ಕಣ್ಣ ಮುಂದೆ ಬರುವುದು ಎರಡು ಅಂಶಗಳು ಮಾತ್ರ,,,
ಒಂದು ನಮ್ಮ ವರೆಂದು ತಿಳಿದು ಅತಿಯಾಗಿ ನಂಬಿ
ಮೋಸ ಹೋದಾಗ,
ಇನ್ನೊಂದು ಬದುಕಿನಲ್ಲಿ ಅತಿಯಾದ
ಕನಸುಗಳನ್ನು ಇಟ್ಟು ಕೊಂಡಾಗ
ನನಸಾಗದೇ ಉಳಿದಾಗ...!
ಮೇಘಾ✍
- Megha
09 Apr 2020, 08:50 am
ನವಮಾಸ ನನ್ನನು ಗರ್ಭದಲ್ಲಿ ರಕ್ಷಿಸಿದವಳು ಬೆಳದಿಂಗಳ ತೋರಿಸಿ ಊಟ ಮಾಡಿಸಿದವಳು.....
ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳಿದವಳು
ನನ್ನ ಸಾಧನೆಗೆ ಗುರಿ ತೋರಿದವಳು.....
ಕಷ್ಟವನ್ನೆಲ ತನಾಗಿತುಕೊಂಡು ಸುಖವನೆಲ್ಲ ನನಗೆ ಕೊಟ್ಟವಳು
ಇವಳ ಬಗ್ಗೆ ಹೇಳಲು ಸಾಲದು ಕೋಟಿ ಪದಗಳು.....
ಇವಳೇ ನನ್ನ ಪ್ರೀತಿಯ ತಾಯಿ.............
- ಲಿಖಿತ್.ಎಂ...
- likith
09 Apr 2020, 07:13 am