Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೇ ಕರೋನಾ, ನೀ ಮಾಡಿದ್ದು ಸರಿನಾ ?

ನಗರೀಕರಣವ ಕಡಿಮೆ ಮಾಡಿದೆ ,
ಮಾಲಿನ್ಯವ ಮಟ್ಟ ಹಾಕಿದೆ,
ಹೇ ಕರುನಾ ,ನೀ ಮಾಡಿದ್ದು ಸರಿನಾ ?
ಲಕ್ಷಲಕ್ಷವೆಲ್ಲ ನಿನ್ನೆದುರು ಲಕ್ಷ್ಯವಿಲ್ಲದಾಯ್ತು,
ಭಕ್ಷ್ಯ ಭೋಜನ ಗಳೆಲ್ಲ ಕನಸಿನ ಮಾತಾಯ್ತು,
ಹೇ ಕರೋನಾ, ನೀ ಮಾಡಿದ್ದು ಸರಿನಾ ?
ಮಕ್ಕಳಲ್ಲಿ ಮಮತೆಯ ಬೆಳೆಸಿದೆ ,
ದೇಶ ಬಿಟ್ಟಿದ್ದವರ ಮರಳಿ ಗೂಡು ಸೇರಿಸಿದೆ ,
ಹೇ ಕರೋನಾ ,ನೀ ಮಾಡಿದ್ದು ಸರಿನಾ ?
ಅಪಘಾತ ಗಳೆಲ್ಲವೂ ಕಡಿಮೆಯಾಯಿತು ,
ವಿಮೆ ಮೊತ್ತವು ಹಾಗೆ ಉಳಿಯಿತು,
ಜಿಡಿಪಿ ಬಿದ್ದೇಹೋಯ್ತು,ಖಜಾನೆ ಖಾಲಿಯಾಯ್ತು,
ಅಭಿವೃದ್ಧಿ ಕಾರ್ಯ ನಿಂತೇ ಹೋಯ್ತು.
ಹೇ ಕರೋನಾ ,ನೀ ಮಾಡಿದ್ದು ಸರಿನಾ ?
@ ಚಿದಾನಂದ ಬಿ ಎಸ್

.,,,

- chidananda chida

04 Apr 2020, 03:19 pm

ಪರಿಧಿ

ಮೇರೆಗಳಿಲ್ಲದೇ ಪಸರಿಸಿದ ಅಂಬರವೆಲ್ಲ
ಸಾವಿರ ತಾರೆಗಳಿಂದ ತುಂಬಿಹುದಲ್ಲ
ನಮ್ಮ ಮೀರುವವರು ಇಲ್ಲಿಲ್ಲ
ಎಂಬ ಭ್ರಮೆಯೇ ಅವುಗಳ ತಲೆಯ ತುಂಬೆಲ್ಲ
ನೇಸರನು ಕಾಣದಂತೆ ಈ ಭುವಿಗೆಲ್ಲ
ಮರೆಮಾಚಬಲ್ಲವೇ ಆ ತಾರೆಗಳೆಲ್ಲ?

ನಲಿಯುತಲಿ ಸಾಗುತಿಹವು ನದಿಗಳೆಲ್ಲ
ಕಡಲಸೇರುವ ಕನಸನೊಂದ ಕಾಣುತಿಹವಲ್ಲ
ದಶದಿಕ್ಕುಗಳಿಂದ ನುಗ್ಗಿ ಬರುತಲಿರುವುವೆಲ್ಲ
ಭೋರ್ಗರಿಸುತಲೇ ಓಡುತಲಿವೆಯಲ್ಲ
ಕಡಲ ಕಂಡೊಡನೆ ಅಪ್ಪಳಿಸಿಹವಲ್ಲ
ಸೀಳಬಲ್ಲವೇ ಆ ಕಡಲ ಅವೆಲ್ಲ?

ದುರಾಸೆ ಎಂಬುದೇ ತುಂಬಿಹುದಲ್ಲ
ಮನುಜನೆಂಬ ಪ್ರಾಣಿಯ ತಲೆಯ ತುಂಬೆಲ್ಲ
ತಿಳಿದಿಹನು ತನ್ನದೇ ಇಲ್ಲಿರುವುದೆಲ್ಲ
ಮರೆತಿಹನು ಅದಾವುದೂ ಅವನದಲ್ಲ
ಮಾತೆ ಮುನಿದರೆ ತನಗುಳಿಗಾಲವಿಲ್ಲ.
ಅರಿಯುವನೇ ಸತ್ಯವನಿದನೆಲ್ಲ?

@ಕಂಪಾ

- KN PATIL

04 Apr 2020, 03:07 pm

ಒಡೆದ ಹೃದಯ

ಬಾವನೆ ಅರ್ತ ಮಾಡಿಕೂಳದ ಮನಸು ಬಾಡಿದ ಹೂವಿನ ತರ,,,,,,,,,,

- Banadayya Vishwakarma

04 Apr 2020, 02:33 pm

ಮತ್ಸರಬಳ್ಳಿ

ಕೊಚ್ಚೆಯೆ ಹರಿದ ಇಚ್ಛೆಯೆ ತಳೆದ
ಹೆಚ್ಚಿತ ಬಳ್ಳಿ ಸ್ವಾರ್ಥ ತುಂಬಿ ಅಳ್ಳಿ
ಮುಚ್ಚಿ ನಗಲೊ ಸುಚ್ಚಿ ಕೊಲ್ಲಲೊ
ಮೈತುಂಬ ತಳೆದಿತ ಮುಳ್ಳಕಳ್ಳಿ

ಹೂವ್ವೆಂದ ಮುಡಿಯೆ ಬತ್ತಿಸಿ ಬದುಕ
ಇಡುಹೆಜ್ಜೆಗಳ ತೊಡರ ಗೆಡವಿ
ಕೂಡೆಂಬೊಲವ ಕಡಿದು ಇತ್ತು ನೋವ
ಬುಡಕೊಳೆಸಿ ಆಸರೆಯ ಕೆಡವಿ

ಸತ್ತ ಹಸುಗಳೆಷ್ಟ ವಿಷದೆಲೆ ಮೆದ್ದು ?
ವೃಕ್ಷಮೈ ಮುರಿದ ಸರ್ಪದಾಸರ
ಒಣನಗೆ ನಕ್ಕಿತೆಷ್ಟ ಕಂಡು ಹಣಹದ್ದು  ?
ನಡೆಕಲಿಸುವ ನಳ್ಳಿದು ಮತ್ಸರ

ಸಾಕಿ ಒಡಲಲಿ ವಿಷಚಿಂತನೆ ಹಾವಚೇಳ
ಹರಿಬಿಟ್ಟು ಕೊಲ್ಲಿಸಿದೆ ಪ್ರೀತಿಜಿಂಕೆಯ
ಹೀರಿ ಹಬ್ಬಿ ಮಂದನಗೆ ಕಣ್ಣೀರುಗೋಳ
ಅರಳಿಟ್ಟಿದೆ ಹೂವ್ವ ಕುಹಕನಗೆಯ

ಹಬ್ಬಿಸಲು ಹಾಲಚಂದ್ರನೆಡೆಗೆ ಬಿಂದಿಗೆ ಹಾಲ
ಚೆಲ್ಲಿದರು ಕೊರಲ ಹಿಚಕಿದೆ ಮಾಲಿಯ
ಪ್ರೇಮ ಬೇಡಿದ ಹಸ್ತಕ ಹೊಯ್ದಿದೆ ಹಾಲಹಲ
ಎದೆಮನ ಸುಟ್ಟ ಲತೆಇದು ಬೇಲಿಯ

- samna

04 Apr 2020, 02:30 pm

ಒಲವ ಒರತೆ ಬತ್ತಿತೆ

ಬೊಗಸೆ‌ ತುಂಬ
ಪ್ರೀತಿ ತುಂಬಿ
ನಗುವ ಹರಡಿ
ನೋವ ಮುದುಡಿ
ಹರಿದ ಒಲವ
ಒರತೆ ಬತ್ತಿತೆ?

ಮನದ ಹೊಸ್ತಿಲಲಿ
ಮನದುಂಬಿ ಬರಮಾಡಿ
ಬಿಡಿಸಿದ ರಂಗವಲ್ಲಿ
ರೇಖೆ ಚೆದುರಿ
ಬಣ್ಣ ಮಾಸಿ
ಎದೆಯ ಹಿಂಡಿತೆ?

ಎದೆಗೂಡ ಬಾಗಿಲಲ್ಲಿ
ಸಂಭ್ರಮಿಸಿ ಕಟ್ಟಿದ
ತಳಿರ ತೋರಣದ
ಎಲೆಯು ಒಣಗಿ
ದಾರ ಕಳಚಿ ಮಣ್ಣ ಸೇರಲು
ದ್ವಾರ ಮುಚ್ಚಿತೆ?

ರಂಗು ರಂಗಿನ ಭಾವದ
ಅರಮನೆಯ ಕಟ್ಟಿದ
ಪ್ರೀತಿ ಪ್ರೇಮದನುರಾಗ
ಕರುಣೆ, ನಂಬಿಕೆಯ
ತಳಪಾಯ, ಸ್ಥಂಭ ಕಳಚಿ
ಮನವೇ ಕುಸಿಯಿತೆ?

- ಶ್ರೀಕಾವ್ಯ

03 Apr 2020, 11:34 pm

ಸಾಹಿತ್ಯ ಆಸೆ

ಸಾಹಿತ್ಯದ ಆಸೆ ಉಕ್ಕುತಿವುದು
ಕಥೆ ಕವನ ಕಾದಂಬರಿ ಯೇಂತಹ
ಬರಹಕೆ ಮನ ಹಂಬಲಿಸುತಿವುದು /
ಎನ್ನ ಆಸೆ ನೋಡಿ ಇಂದಿನ ಮೋಬೈಲ್
ಟಿವಿ ವ್ಯೆಂಗ್ಯ ಮಾಡುತ ಹೇಳುತ್ತಿರುವುದು/
ನನ್ನ ಉಪಯೋಗಿಸಿದರೆ ಮನ ಸಂತೃಪ್ತಿ ಗೊಳ್ಳುವುದು/
ನಿನ್ನ ಸಾಹಿತ್ಯ ಮೂಲೆ ಸೇರುವುದು /
ಎನ್ನ ಮನ ಎರಡರ ನಡುವೆ ಸೇರಿ ಚಂಚಲಿತಾಗೊಳ್ಳುತಿರುವುದು /
ಮನರಂಜನೆ ಇರುವ ಮೋಬೈಲ್ ಟಿವಿ ಇರುವಾಗ ಸಾಹಿತ್ಯವೆ ಕೆ ಎನ್ನುತ್ತಿರುವುದು /
ಮತ್ತೆ ಬಂದು ಸಾಹಿತ್ಯ ಕಿವಿಯಲ್ಲಿ ಗುನುಗುತಿರುವುದು ,/
ನಿನ್ನ ಮನರಂಜನೆಯ ಮೋಬೈಲ್ ಟಿವಿ ಎಂಬ ಗಿಡದ ಬೇರು ನಾನು ಏನ್ನುತಿರುವು/
ಬೇರು ಕಡಿದು ಬಿಸಾಡಿದ ರೆ ನನ್ನಿಂದ ಸಿಗುವ ಸಂತೃಪ್ತಿ ನಿನ್ನ ಕಳೆದು ಹೋಗುವುದು /
ಬೇರಿಲ್ಲದಾ...ನಿನ್ನ ಮನ ಒಣಗಿ ಹೋಗುವುದು/
ತನ್ನ ಜೊತೆ ಕರೆದು ಪ್ರತಿ ದಿನ ಯುಗಾದಿ ಎಂತಹ ಪರಿಸರ ಕೊಡುವುದಾಗಿ ಹೇಳುತ್ತಿರುವುದು /
ಸಾಹಿತ್ಯ ದಾಸೆಗೆ ಮತ್ತೆ ಮನ ಉಕ್ಕುತಿರುವುದು .....

- KHASIM NADAF

03 Apr 2020, 11:25 pm

ಅಜ್ಞಾತ

ಹರಡಿಹುದು ಎಲ್ಲೆಲ್ಲೂ ಮನುಕುಲದ ಮಾರಿ
ಹುಡುಕುತಿಹೆವು ನಾವಿಲ್ಲಿ ಬದುಕಿಗೊಂದು ದಾರಿ
ನರಳುತಿಹನು ನರನು ಉಳಿವಿಗಾಗಿ ಎಲ್ಲೆಲ್ಲೂ ಚೀರಿ
ಸಿಗಬಹುದೇ ಪರಿಹಾರ ಸಂಕಟವನೆಲ್ಲ ಮೀರಿ

ರುದ್ರತಾಂಡವದಿ ತಾ ನರ್ತಿಸುತಿಹುದು
ಮರಣಮೃದಂಗವನೇ ಬಾರಿಸುತಿಹುದು
ನರನ ಮುಂದೆ ರಣಕೇಕೆಯ ಹಾಕುತಿಹುದು
ಮಸಣಕೆಲ್ಲರನು ತಾ ಎಳೆದೊಯ್ಯುತಿಹುದು

ಚೀತ್ಕರಿಸಿ ಬೊಬ್ಬಿರಿದು ಹಲುಬಿದರೂ ಇಲ್ಲಿ
ಕೇಳುವಾ ದೈವ ಕಿವಿಗೊಡುತಿಲ್ಲ ಅಲ್ಲಿ
ತಾ ಮಾಡಿಹ ಪಾಪಗಳಿಗೆ ಪರಿಹಾರವೆಲ್ಲಿ
ಅಸಹಾಯಕದಿ ಕುಳಿತಿಹನು ನರನು ಕೈಚೆಲ್ಲಿ.
@ಕಂಪಾ

- KN PATIL

03 Apr 2020, 10:06 pm

...ನನ್ನವರು ಯಾರು ಇಲ್ಲ...

ನಾನು ನಂದೇ ಎನ್ನುವುದು ಯಾವುದು ಇಲ್ಲ.
ದೇಹ ಆತ್ಮವೆಂಬುವುದೇ ನನ್ನದಲ್ಲ.
ನಾನು ನಮ್ಮದು ಅನ್ನೋ ಅಹಂಕಾರ
ಯಾಕೆ ಬೇಕು ಈ ಜಗತ್ತನಲ್ಲಿ...

ಅಪ್ಪ-ಅಮ್ಮ ಕೊಟ್ಟ ಜನ್ಮವಿದ್ದು
ಯಾರೋ ಜಾತಕ ನೋಡಿ ಹೆಸರಿಟ್ಟರೋ
ನಾವು ಕಲಿವ ವಿದ್ಯೆ-ಕೆಲಸ
ಒಂದ್ಕೊಂಡು ಸಂಬಂಧವಿಲ್ಲ...

ಸತ್ತ ಮೇಲೆ ದೇಹ ಆತ್ಮ
ಬೇರೆ ಆಗುವುದು
ಮೂರು ದಿನ ದುಃಖದ ನೋವು
ನಾಲ್ಕು ದಿನ ಅವರ ಚಿಂತೆ..

ನನ್ನವರು ಅನೋವರು ಯಾರು ಇಲ್ಲ
ನಮ್ಮದ್ದು ಅನ್ನೊದು ಯಾವುದು
ಕೊನೆಗೆ ಉಳಿಯುವುದಿಲ್ಲ....
ಇದ್ನ ತಿಳಿದವನು ಎಂದಿಗೂ ಸೋಲುವುದಿಲ್ಲ..

- Ajay

03 Apr 2020, 09:12 pm

ಕೃತಿಚೌರ್ಯ

ಕವಿಯೋರ್ವನ ಕಲೆಗೆ
ಅರಳಿದ ಕವಿತೆಗಳೆಲ್ಲ
ಭಾವನೆಯ ಸುವಾಸನೆಯನ್ನು
ಓದುಗರಿಗೆ ಪಸರಿಸುತ್ತಿತ್ತು,
ಕವಿಯಲ್ಲದವನ ಕಳ್ಳ
ಕೈಚಳಕದ ಮೋಡಿಗೆ ಬಲಿಯಾಗಿ
ಕದ್ದ ಕವಿತೆಗಳು ಉಳಿದದ್ದು
ಕೇವಲ ಕವಿತೆಯಾಗಿ
ಪ್ರಶಂಸೆಯ ಮಡಿಲೊಳಗೆ
ಬಿದ್ದು ಓಡಾಡಿ,ನರಳಾಡಿ,
ಕೊನೆಯುಸಿರೆಳೆದರೂ
ಕಡೆತನಕ ಅವನಿಂದ ಸಿಕ್ಕಿಲ್ಲ
ಕವಿ ಮತ್ತು ಕವಿತೆಗೊಂದು ಅರ್ಥ,

- ಅಕ್ಷತ

03 Apr 2020, 01:59 pm

ಪರಿಶುದ್ಧ ಪ್ರೀತಿ

ಕಾಡುವ
ದಟ್ಟ ದರಿದ್ರ
ಬಡತನದಲ್ಲಿ
ಮೊಗದಲ್ಲಿ
ಮೂಡುವ
ನಗುವಿಗೆ
ಶ್ರೀಮಂತಿಕೆ
ತುಸು ಜಾಸ್ತಿ,
ಅಹಂ ಇಲ್ಲ
ಆಡಂಭರವಿಲ್ಲ.
ಪರಿಶುದ್ದ
ಪ್ರೀತಿಯೇ ಎಲ್ಲಾ..

- ಅಕ್ಷತ

03 Apr 2020, 01:58 pm