ನಗರೀಕರಣವ ಕಡಿಮೆ ಮಾಡಿದೆ ,
ಮಾಲಿನ್ಯವ ಮಟ್ಟ ಹಾಕಿದೆ,
ಹೇ ಕರುನಾ ,ನೀ ಮಾಡಿದ್ದು ಸರಿನಾ ?
ಲಕ್ಷಲಕ್ಷವೆಲ್ಲ ನಿನ್ನೆದುರು ಲಕ್ಷ್ಯವಿಲ್ಲದಾಯ್ತು,
ಭಕ್ಷ್ಯ ಭೋಜನ ಗಳೆಲ್ಲ ಕನಸಿನ ಮಾತಾಯ್ತು,
ಹೇ ಕರೋನಾ, ನೀ ಮಾಡಿದ್ದು ಸರಿನಾ ?
ಮಕ್ಕಳಲ್ಲಿ ಮಮತೆಯ ಬೆಳೆಸಿದೆ ,
ದೇಶ ಬಿಟ್ಟಿದ್ದವರ ಮರಳಿ ಗೂಡು ಸೇರಿಸಿದೆ ,
ಹೇ ಕರೋನಾ ,ನೀ ಮಾಡಿದ್ದು ಸರಿನಾ ?
ಅಪಘಾತ ಗಳೆಲ್ಲವೂ ಕಡಿಮೆಯಾಯಿತು ,
ವಿಮೆ ಮೊತ್ತವು ಹಾಗೆ ಉಳಿಯಿತು,
ಜಿಡಿಪಿ ಬಿದ್ದೇಹೋಯ್ತು,ಖಜಾನೆ ಖಾಲಿಯಾಯ್ತು,
ಅಭಿವೃದ್ಧಿ ಕಾರ್ಯ ನಿಂತೇ ಹೋಯ್ತು.
ಹೇ ಕರೋನಾ ,ನೀ ಮಾಡಿದ್ದು ಸರಿನಾ ?
@ ಚಿದಾನಂದ ಬಿ ಎಸ್
ಮೇರೆಗಳಿಲ್ಲದೇ ಪಸರಿಸಿದ ಅಂಬರವೆಲ್ಲ
ಸಾವಿರ ತಾರೆಗಳಿಂದ ತುಂಬಿಹುದಲ್ಲ
ನಮ್ಮ ಮೀರುವವರು ಇಲ್ಲಿಲ್ಲ
ಎಂಬ ಭ್ರಮೆಯೇ ಅವುಗಳ ತಲೆಯ ತುಂಬೆಲ್ಲ
ನೇಸರನು ಕಾಣದಂತೆ ಈ ಭುವಿಗೆಲ್ಲ
ಮರೆಮಾಚಬಲ್ಲವೇ ಆ ತಾರೆಗಳೆಲ್ಲ?
ನಲಿಯುತಲಿ ಸಾಗುತಿಹವು ನದಿಗಳೆಲ್ಲ
ಕಡಲಸೇರುವ ಕನಸನೊಂದ ಕಾಣುತಿಹವಲ್ಲ
ದಶದಿಕ್ಕುಗಳಿಂದ ನುಗ್ಗಿ ಬರುತಲಿರುವುವೆಲ್ಲ
ಭೋರ್ಗರಿಸುತಲೇ ಓಡುತಲಿವೆಯಲ್ಲ
ಕಡಲ ಕಂಡೊಡನೆ ಅಪ್ಪಳಿಸಿಹವಲ್ಲ
ಸೀಳಬಲ್ಲವೇ ಆ ಕಡಲ ಅವೆಲ್ಲ?
ದುರಾಸೆ ಎಂಬುದೇ ತುಂಬಿಹುದಲ್ಲ
ಮನುಜನೆಂಬ ಪ್ರಾಣಿಯ ತಲೆಯ ತುಂಬೆಲ್ಲ
ತಿಳಿದಿಹನು ತನ್ನದೇ ಇಲ್ಲಿರುವುದೆಲ್ಲ
ಮರೆತಿಹನು ಅದಾವುದೂ ಅವನದಲ್ಲ
ಮಾತೆ ಮುನಿದರೆ ತನಗುಳಿಗಾಲವಿಲ್ಲ.
ಅರಿಯುವನೇ ಸತ್ಯವನಿದನೆಲ್ಲ?
ಸಾಹಿತ್ಯದ ಆಸೆ ಉಕ್ಕುತಿವುದು
ಕಥೆ ಕವನ ಕಾದಂಬರಿ ಯೇಂತಹ
ಬರಹಕೆ ಮನ ಹಂಬಲಿಸುತಿವುದು /
ಎನ್ನ ಆಸೆ ನೋಡಿ ಇಂದಿನ ಮೋಬೈಲ್
ಟಿವಿ ವ್ಯೆಂಗ್ಯ ಮಾಡುತ ಹೇಳುತ್ತಿರುವುದು/
ನನ್ನ ಉಪಯೋಗಿಸಿದರೆ ಮನ ಸಂತೃಪ್ತಿ ಗೊಳ್ಳುವುದು/
ನಿನ್ನ ಸಾಹಿತ್ಯ ಮೂಲೆ ಸೇರುವುದು /
ಎನ್ನ ಮನ ಎರಡರ ನಡುವೆ ಸೇರಿ ಚಂಚಲಿತಾಗೊಳ್ಳುತಿರುವುದು /
ಮನರಂಜನೆ ಇರುವ ಮೋಬೈಲ್ ಟಿವಿ ಇರುವಾಗ ಸಾಹಿತ್ಯವೆ ಕೆ ಎನ್ನುತ್ತಿರುವುದು /
ಮತ್ತೆ ಬಂದು ಸಾಹಿತ್ಯ ಕಿವಿಯಲ್ಲಿ ಗುನುಗುತಿರುವುದು ,/
ನಿನ್ನ ಮನರಂಜನೆಯ ಮೋಬೈಲ್ ಟಿವಿ ಎಂಬ ಗಿಡದ ಬೇರು ನಾನು ಏನ್ನುತಿರುವು/
ಬೇರು ಕಡಿದು ಬಿಸಾಡಿದ ರೆ ನನ್ನಿಂದ ಸಿಗುವ ಸಂತೃಪ್ತಿ ನಿನ್ನ ಕಳೆದು ಹೋಗುವುದು /
ಬೇರಿಲ್ಲದಾ...ನಿನ್ನ ಮನ ಒಣಗಿ ಹೋಗುವುದು/
ತನ್ನ ಜೊತೆ ಕರೆದು ಪ್ರತಿ ದಿನ ಯುಗಾದಿ ಎಂತಹ ಪರಿಸರ ಕೊಡುವುದಾಗಿ ಹೇಳುತ್ತಿರುವುದು /
ಸಾಹಿತ್ಯ ದಾಸೆಗೆ ಮತ್ತೆ ಮನ ಉಕ್ಕುತಿರುವುದು .....