ಯಾರವನು ? ಯಾರವನು ?
ಅರೆ ನೆಮ್ಮದಿ ಜೀವನ ನಡೆಸುವವನು
ಅರೆಬೆಂದ ಅನ್ನವ ತಿಂದವನು
ಬಿಸಿಲಿನಲ್ಲೂ ಎದೆಗುಂದದೆ ರಸ್ತೆಯಲ್ಲಿ ನಿಂತವನು
ಜೋರು ಸಪ್ಪಳದ ಬೂಟಿನವನು
ಯಾರವನು ? ಯಾರವನು ?
ಸೇವಾ ಧರ್ಮಕ್ಕೆ ಸೇರಿದವನು
ಖಾಕಿ ಜಾತಿಯ ಮಗನಿವನು
ಮಂತ್ರದಂಡದ ಲಾಠಿಯವನು
ಕಳ್ಳ-ಕಾಕರಿಗೆ ಘಾಟಿ ಇವನು
ಯಾರವನು ? ಯಾರವನು ?
ಕರೋನಾ ಬಂದಾಗಲೂ ಮೇಹುನಾ
ಎಂದು ಕೆಲಸಕ್ಕೆ ಹೊಂಟವನು
ಕರ್ತವ್ಯಕ್ಕಾಗಿ ಮನೆ-ಮಠ ಬಿಟ್ಟವನು
ಖದೀಮರ ಪಾಲಿನ ಕೆಟ್ಟವನು
ಸದಾ ನಿಮ್ಮ ಸೇವೆಯಲ್ಲಿ
ಕರ್ನಾಟಕ ರಾಜ್ಯದ ಆರಕ್ಷಕನು,ಆರಕ್ಷಕನು.
ಏಕಾಂಗಿಯಾಗಿದ್ದ ನನ್ನ ಪುಟ್ಟ ಹೃದಯವಿಂದು,
ಅಪಾಯದಲ್ಲಿ ಸಿಲುಕಿ ನರಳಾಡುತ್ತಿದೆ.
ಇನ್ನೂ ತಿಳಿಯಲಿಲ್ಲ ನೀ ಯಾರೆಂದು,
ಬಂದು ಉತ್ತರಿಸುವೆಯಾ ಈ ನನ್ನ ಮನ ಕೇಳುವ
ಪ್ರಶ್ನೆ ಗಳಿಗಿಂದು..?
ಮೌನಿಯಾಗಿದೆ ನನ್ನ ಮನವಿಂದು,
ಎಷ್ಟು ಹೇಳಿದರೂ ಸಾಕಾಗುತಿಲ್ಲ ಸಾಂತ್ವನ ವನ್ನು.
ಒಮ್ಮೆ ಯಾದರೂ ಬರುವೆಯಾ? ಕಣ್ಣೆದುರಿಗಿಂದು,
ಬಂದರೆ ನಮಿಸುವೆನು ಆ ನಿನ್ನ ಕರಗಳನ್ನು.
ನಮಿಸಿ ಕೇಳುವೆನು ಜೊತೆಗಿರುವೆಯಾ ಹೀಗೆ ಎಂದಿಗೂ...!
ಒಂದು ಕ್ಷಣ ಒಪ್ಪಿಕೊಂಡರೆ ಕೈ ಮುಗಿದು ತಲೆ ಬಾಗುವೆನು
ಆ ಸ್ರಷ್ಟಿಕತ೯ನಿಗಿಂದು..!
ಸುಂದರವೆನಿಸುವ ಅದೆಷ್ಟೋ ಕವನಗಳಿಗೆ,
ಸ್ಫೂರ್ತಿಯಾಗುವ ಕವಿಯ ಬರಹಗಳು
ಬರೆಯುವಾಗ ಅದೆಷ್ಟು ಬಾರಿ ಹರಿದು ಹಾಕಿರುವನೋ ಹಾಳೆಗಳ ರಾಶಿಯನ್ನು,
ಅದೆಷ್ಟು ನೆನಪಿಸಿಕೊಳ್ಳುವನೋ ಕವನಕ್ಕೆ
ಮಂದಹಾಸ ಬೀರುವ ಶಬ್ದಗಳನ್ನು,
ಆದರೂ ಆ ಕವನಗಳಿಗೆ ಮೆಚ್ಚುಗೆ ಬಾರದ
ಗಳಿಗೆಯಲ್ಲಿ ಮೌನಿಯಾದ ಅದೆಷ್ಟೋ ಕವಿಗಳ
ಕವನಗಳ ಸಾಲುಗಳು..!