Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸಂತೋಷ

ಬಾನಂಗಳದಿ ನಾ ಕುಳಿತಾಗ,
ನೆನಪಿನ ಅಲೆಯೊಂದು ಕೇಳಿತು,
ಏನನ್ನು ನೆನೆಯುತ್ತಿರುವೆ ಎಂದು,
ಬಾನಂಗಳದಿ ನಾ ಕುಳಿತಾಗ,
ನೆನಪಿನ ಅಲೆಯೊಂದು ಕೇಳಿತು,
ಏನನ್ನು ನೆನೆಯುತ್ತಿರುವೆ ಎಂದು,

ತುಸು ನಕ್ಕು ನಾನು ಉತ್ತರಿಸಿದೆ,
"*ಸಂತೋಷ"* ಎಂಬ ನಿಧಿ ಯನ್ನು
ಹುಡುಕುತ್ತಿರುವೆ ಎಂದು..

ಮೇಘಾ.. ✍✍

- Megha

08 Apr 2020, 10:19 am

ತುಟಿಯ ಅಂಚಲ್ಲಿ

ಎನ್ನನ್ನು ಹೇಳಲಿ ಎನ್ನೆದು ಹೇಳಲಿ
ನಗುವ ತುಟಿಯ ಅಂಚಲ್ಲಿ
ಯಾರಿಗು ಕಾಣದ ನೋವಿನ ಸುಳಿ ಇದೇ
ಕೂಗಿ ಹೇಳಿದರು ದೇವರೆ ನಿನಗೆ ಕೇಳಿಸಲ್ಲಿಲ್ಲವೆ
ಕೇಳಿಸಿದರು ಕೇಳಿಸದಂತ್ತೆ ಇರುವೆ
ಎನ್ನನ್ನು ಹೇಳಲಿ ಎನ್ನೆದು ಹೇಳಲಿ

- Karthik Sharma

08 Apr 2020, 08:25 am

ತಪ್ಪಿದ ಅನಾಹುತ

ಒಂದು ಸುಂದರ ಸಂಜೆ
ಬಂದನ ಮೀರಿ ಹೊರಟನು ಆಚೆ
ಸತಿ-ಸುತರ ಕೂಡಿ ಗಾಡಿಯ ಏರಿ
ಹೊರಟನು ವೇಗದ ಎಲ್ಲೆಯ ಮೀರಿ

ಉರಿದು-ಉರಿದು ದಣಿದ ನೇಸರ
ಸೇರುತಲಿದ್ದನು ಪಶ್ಚಿಮ ದಿಕ್ಕಿನ ಊರ
ಕಾಲನಂತೆ ಕೂಡಿದ ಮೋಡಗಳು
ಕಾರುತಲಿದ್ದವು ಮಳೆಹನಿಗಳು

ಇಹಲೋಕದ ಕಣ್ಣ
ತಪ್ಪಿಸುವ ತವಕದಲಿ
ಸಾಗುತಲಿದ್ದನು ಜಾಣ
ಅಂಕುಡೊಂಕಿನ ಹಾದಿಯಲಿ

ಸಣ್ಣನೆ ತಿರುವಿನಲಿ
ಗಾಡಿಯು ಜರ್ರನೆ ಜಾರುತಲಿ
ತಿರುಗಿತು ಚಕ್ರದ ರೀತಿಯಲಿ
ಬಿದ್ದವು ಮನಗಳು ಭೀತಿಯಲಿ

ದೂರದ ನೋವಿಗೆ ಮರುಗುವ ಜೀವ
ಅರಿಯದೆ ಹೋಯಿತು ಕಂದನ ನೋವ
ದಾರೀಹೋಕನು ದಾವಿಸಿ ಬಂದ
ನೋಂದ ಮನಕೆ ಧೈರ್ಯವ ತಂದ

ಅಂತು ತಂಪಿನ ಗಾಳಿಯು ಬೀಸಲು
ಮೋಡವು ಹಾರಿ ದೂರಕೆ ಜಾರಲು
ಮನೆಯನು ತಲುಪಿದ ಮನಗಳು
ಚಿಂತೆಯಲಿ ಮುಳುಗಿದವು.



ಶಾರದ

- ಶಕುಂತಲಾ

07 Apr 2020, 10:53 pm

ಸಂಗಾತಿ

ಜೀವನದ ಉದ್ದಕ್ಕು ಸುಖ ದುಃಖದಲ್ಲಿ
ನೋವು ನಲಿವಿನಲ್ಲಿ ಬೆರಳಿದು ನಡೆವ
ಜೀವ ಒಂದೇ ಬಾಳ ಸಂಗಾತಿ

ಜರಿವ ಜನರೆದುರಲ್ಲಿ ನನ್ನ ನೆರಳು ನೀನು
ಕೂರಗುವ ಮನಕೆ ಸಾತ್ವಂನ ನಿನ ಮಾತು
ಹೆದರುವ ಹೃದಯಕೆ ಧೈರ್ಯವೇ ನಿನ ಅಪ್ಪುಗೆ
ಹೇ ಸಂಗಾತಿ ನೀ ಇರು ನನ ಜೊತೆಗೆ ನಾ ಇರುವೆ ತೆಪ್ಪಗೆ ಇದಕಿದೆಯೆ ನಿನ್ನ ಒಪ್ಪಿಗೆ...

- RoopaGowtham

07 Apr 2020, 10:16 pm

bacchitta rahasya

ಭಯದಿಂದ ನೆಮ್ಮದಿ ಹೋಗಿ
ಮನೆಯಲ್ಲಿ ಇರುವ ಸಂಚು
ಹೆಚ್ಚಾಗಿದೆ ಬೆಂಕಿಯ ತಾಪ
ಎಲ್ಲೆಲ್ಲೂ ಸೇಡಿನ ಕೋಪ

ನಿಶಬ್ದವಾಗಿ ಏನು ನಡೆಯೋದು ಇಲ್ಲ ಇನ್ನು
ನಿಶಬ್ದ ಆದರುನು ಸಂಚಿ ಒಂದು ಶಬ್ದವಿನ್ನು
ಮುಂಚಿದ್ದ ನಗುವಿನ ಹಾಸ್ಯ
ಈಗದು ಬಚ್ಚಿಟ್ಟ ರಹಸ್ಯ

ಹಿಂದೆ ನಡೆದ ಕಥೆಯ ಕೇಳಿ
ಸಂಚಿನದು ಬೆಂಕಿಯ ಚಾಳಿ
ಕೂಡಿಟ್ಟ ಈ ರಹಸ್ಯ
ಇದುವೇ ಬಚ್ಚಿಟ್ಟ ರಹಸ್ಯ

- smitha mukund

07 Apr 2020, 09:12 pm

ಲೈಫ್

ಬಣ್ಣ-ಬಣ್ಣ,ಲೋಕದಲ್ಲಿ.
ಬಣ್ಣವಿನೂೕತಿನೆಲೇ,ನೀನಿಲಿೢ.
ನೆರೆ-ಹೊರೆ ವಣ೯ನವನರಿ,ನೀನಿಲಿೢ.
ಕುಶಲ-ಶುಭ್ರ ನೋಡದಿ,ನೀನಿಲಿೢ.
ನವ್ಯ-ಹಸಿರು,ಕ್ಷಣ ನೀನ ಕೈಯಲ್ಲಿ.

- Soniya Badawadagi

07 Apr 2020, 08:25 pm

ಆರಕ್ಷಕ

ಯಾರವನು ? ಯಾರವನು ?
ಅರೆ ನೆಮ್ಮದಿ ಜೀವನ ನಡೆಸುವವನು
ಅರೆಬೆಂದ ಅನ್ನವ ತಿಂದವನು
ಬಿಸಿಲಿನಲ್ಲೂ ಎದೆಗುಂದದೆ ರಸ್ತೆಯಲ್ಲಿ ನಿಂತವನು
ಜೋರು ಸಪ್ಪಳದ ಬೂಟಿನವನು
ಯಾರವನು ? ಯಾರವನು ?
ಸೇವಾ ಧರ್ಮಕ್ಕೆ ಸೇರಿದವನು
ಖಾಕಿ ಜಾತಿಯ ಮಗನಿವನು
ಮಂತ್ರದಂಡದ ಲಾಠಿಯವನು
ಕಳ್ಳ-ಕಾಕರಿಗೆ ಘಾಟಿ ಇವನು
ಯಾರವನು ? ಯಾರವನು ?
ಕರೋನಾ ಬಂದಾಗಲೂ ಮೇಹುನಾ
ಎಂದು ಕೆಲಸಕ್ಕೆ ಹೊಂಟವನು
ಕರ್ತವ್ಯಕ್ಕಾಗಿ ಮನೆ-ಮಠ ಬಿಟ್ಟವನು
ಖದೀಮರ ಪಾಲಿನ ಕೆಟ್ಟವನು
ಸದಾ ನಿಮ್ಮ ಸೇವೆಯಲ್ಲಿ
ಕರ್ನಾಟಕ ರಾಜ್ಯದ ಆರಕ್ಷಕನು,ಆರಕ್ಷಕನು.

- chidananda chida

07 Apr 2020, 04:56 pm

ಹೃದಯದ ಕನಸು

ಏಕಾಂಗಿಯಾಗಿದ್ದ ನನ್ನ ಪುಟ್ಟ ಹೃದಯವಿಂದು,
ಅಪಾಯದಲ್ಲಿ ಸಿಲುಕಿ ನರಳಾಡುತ್ತಿದೆ.
ಇನ್ನೂ ತಿಳಿಯಲಿಲ್ಲ ನೀ ಯಾರೆಂದು,
ಬಂದು ಉತ್ತರಿಸುವೆಯಾ ಈ ನನ್ನ ಮನ ಕೇಳುವ
ಪ್ರಶ್ನೆ ಗಳಿಗಿಂದು..?
ಮೌನಿಯಾಗಿದೆ ನನ್ನ ಮನವಿಂದು,
ಎಷ್ಟು ಹೇಳಿದರೂ ಸಾಕಾಗುತಿಲ್ಲ ಸಾಂತ್ವನ ವನ್ನು.
ಒಮ್ಮೆ ಯಾದರೂ ಬರುವೆಯಾ? ಕಣ್ಣೆದುರಿಗಿಂದು,
ಬಂದರೆ ನಮಿಸುವೆನು ಆ ನಿನ್ನ ಕರಗಳನ್ನು.
ನಮಿಸಿ ಕೇಳುವೆನು ಜೊತೆಗಿರುವೆಯಾ ಹೀಗೆ ಎಂದಿಗೂ...!
ಒಂದು ಕ್ಷಣ ಒಪ್ಪಿಕೊಂಡರೆ ಕೈ ಮುಗಿದು ತಲೆ ಬಾಗುವೆನು
ಆ ಸ್ರಷ್ಟಿಕತ೯ನಿಗಿಂದು..!

Megha.

- Megha

07 Apr 2020, 04:14 pm

ಕವಿಯ ಕವಿತೆ

ಸುಂದರವೆನಿಸುವ ಅದೆಷ್ಟೋ ಕವನಗಳಿಗೆ,
ಸ್ಫೂರ್ತಿಯಾಗುವ ಕವಿಯ ಬರಹಗಳು
ಬರೆಯುವಾಗ ಅದೆಷ್ಟು ಬಾರಿ ಹರಿದು ಹಾಕಿರುವನೋ ಹಾಳೆಗಳ ರಾಶಿಯನ್ನು,
ಅದೆಷ್ಟು ನೆನಪಿಸಿಕೊಳ್ಳುವನೋ ಕವನಕ್ಕೆ
ಮಂದಹಾಸ ಬೀರುವ ಶಬ್ದಗಳನ್ನು,

ಆದರೂ ಆ ಕವನಗಳಿಗೆ ಮೆಚ್ಚುಗೆ ಬಾರದ
ಗಳಿಗೆಯಲ್ಲಿ ಮೌನಿಯಾದ ಅದೆಷ್ಟೋ ಕವಿಗಳ
ಕವನಗಳ ಸಾಲುಗಳು..!


Megha..

- Megha

07 Apr 2020, 01:43 pm

ಪ್ರೇಮದಾ ಪರಿ

ನಮ್ಮೀ ನಡುವಲಿ ಪ್ರೀತಿಯೇ ಸೇತುವೆ
ಎಲ್ಲಾ ಕಲಿಸಿರೋ ಪ್ರೇಮದ ಪಾಠವೇ
ಕನಸಿನಲಿ ನಾ ನೊಂದೆನು
ಅರಿಯದೆ ಏನೊಂದನು
ಹೇಳಿಬಿಡು ನೀನೆ ಈಗ ಆ ಕಾರಣ.
ನಮ್ಮೀ ನಡುವಲಿ ಪ್ರೀತಿಯೇ ಸೇತುವೆ۔۔۔۔۔

ಹರಿಯುವ ನದಿಗಳು ಸಾಗರ ಸೇರುವ ವೇಗವ ಕಾದಿವೆ ,
ಪ್ರೀತಿಯ ಅಲೆಗಳು ನನ್ನಲಿ ಸೇರಿ ಕಲರವ ಮಾಡಿವೆ,
ನಮ್ಮೀ ನಡುವಲಿ ಪ್ರೀತಿಯೇ ಸೇತುವೆ۔
ಎಲ್ಲಾ ಕಲಿಸಿರೋ ಪ್ರೇಮದ ಪಾಠವೇ........

- chidananda chida

07 Apr 2020, 07:35 am