ಓ ನನ್ನ ಸಖಿಯೆ ಆಗು ನೀ ಸತಿಯೆ
ಹೀಗೆ ನೀ ನನ್ನ ಸತಾಯಿಸುವುದು ಸರಿಯೆ.
ಕಪೋತ ಪಕ್ಷಿ ತಂದೈತೆ ನಿನಗಾಗಿ ಚಿಕ್ಕ ಸಂದೇಶ.
ಯುಗಯುಗಳ ಆದಿ ಆಗಮಿಸಿ ಬಂದು.
ಚೈತ್ರದ ಈ ಗಾಳಿ ತಂದೈತೆ ಒಲವು
ಮೋಡ ಕವಿದ ಗಗನ ನಯನ ನೀರ ಕಥನ
ನೀ ಅದಕೆ ಸಿಗದೆ ಹೋದೆ ಅದುವೆ ಅದಕೆ ಮಥನ..
ಅಂಬುಜನು ಬಂದ ಕೈಚಾಚಿ ಎಂದ
ನೀಡು ಅವಳನು ನನಗೆ, ತಗೋ ನೀ ಬ್ರಹ್ಮಾಂಡ
ಊರ ಕೆರೆ ಯಂಚಲ್ಲಿ ಬೆಳೆದ
ಆ ತಾವರೆ ನೀನಲ್ಲವೆ .
ನೀನಿಲ್ಲದೆ ನಾ ನಿಲ್ಲವೆ.
ಸಮುದ್ರ ಮಥನದ ಕಥೆಯಲ್ಲಿ ಬಂದ
ಶ್ರೀ ಹರಿ ಸತಿಯು ನೀನೆನಾ.
ಕಲಿಯುಗದ ಕೃಷ್ಣ ನಾ ನಿನಗೆ ಸಖಿಯೆ
ಕಲಿಯುಗ ರುಕ್ಮಿಣಿ ಆಗಲು ಏನು ಬಾಧೆ.
ಕಪೋತ ಪಕ್ಷಿ ತಂದೈತೆ ನಿನಗಾಗಿ ಚಿಕ್ಕ ಸಂದೇಶ.
ಯುಗಯುಗಳ ಆದಿ ಆಗಮಿಸಿ ಬಂದು.
ಚೈತ್ರದ ಈ ಗಾಳಿ ತಂದೈತೆ ಒಲವು
ಆ ಮನ್ಮಥನು ಸೋತಿಹನು ನಿನ್ನಲ್ಲಿ
ರತಿ ರಾಣಿ ಆಗಿರುವೆ ನೀ ನನ್ನಲ್ಲಿ.
ಗಂಡು ಹೆಣ್ಣು ಬರಗೆಟ್ಟಾಗ್ಲೇ ಮುದ್ದು ಮುದ್ದಾದ ಮಕ್ಕಳಾಗೋದು.
ಬಾರೆ ಬಾ ಬಾರೆ ನಕ್ಷತ್ರಗಳ ಮಹಿಷಿ.
ಇಳೆಗಿಳಿದು
ಈ ಭೂಮಿಯ ಪಾರಿಜಾತ ಹೂಗಳ ಮೇಲೆ
ಅಂದ್ವಾದ ಚಕ್ಕಚಂದ ಆಡೋಣ...
ನಡೆಯಲಿ ನನ್ನ ದೇಹ ಮೆರವಣಿಗೆ.
ನಿಮ್ಮ ಮನಸ್ಸಿನ ಗಲ್ಲಿಗೆ.
ನಾಡ ದೇಶದ ಹಾದಿಗೆ.
ನನ್ನ ಪ್ರೀತಿ ಪಾತ್ರರ ಹೃದಯದ ಆ ಬೀದಿಗೆ.
ಅಳ ಬೇಡ ಅರಳಿ ನಿಲ್ಲು ನನ್ನ ಜೀವದ ಸಾವಿಗೆ.
ಛಲದ ಹಾದಿಗೀದಿಗೆ ಎದ್ದು ನಿಲ್ಲು ಮೆಲ್ಲಗೆ.
ಸಾವಿನ ಆ ಘಳಿಗೆಗೆ.
ನೋವು ತಾ ನೀ ಚಂದ್ರಕೆ.
ಓ ನನ್ನ ಪ್ರೀತಿಯ ಒಲವಿನ ಗೇಳತಿಯೇ
ಹಿಡಿತವಿಲ್ಲದ ಮನಸ್ಸಿನಿಂದ ಏನೆಂದು ಹೋಗಳಲಿ
ಬಾರದ ಮಾತುಗಳಿಂದ ಏನೆಂದು ಬರೆಯಲಿ
ಸಾಕದ ಮೌನಕ್ಕೆ ಅರ್ಥ ಕಲ್ಪಿಸುವವಳು ನೀನಾದರೆ
ನಾನು ಹೇಳುವ ಮಾತೊಂದು ಪ್ರೀತಿಯಲಿ