Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಹುಚ್ಚು ಮನಸ್ಸಿನ ಮರ್ಕಟ
ಮೃಗಗಳ ಬಂಧಿಸಿ ನೋಡುವ ನೋಟ
ಬಂದಾಗ ಅವನಿಗೆ ನಂಜಿನ ಕಾಟ
ತನ್ನ ಗೂಡೊಳು ತಾನಿರಲು ಅವನಿಗೇ ಸಂಕಟ ?
ಪ್ರಕೃತಿ ಎದುರು ವಿಕೃತಿ ಮೆರೆವ ಮನುಷ್ಯ
ಅವನ ಅಳಿಸಲು ಪ್ರಕೃತಿಗೆ ಸಾಕು ನಿಮಿಷ
ಸ್ವಾರ್ಥದ ಬದುಕಿಗೇಕೆ ಇಷ್ಟು ಆವೇಷ
ಸಾವಿನಂಚಿನಲೂ ಜಾತಿ, ಮತಗಳ ಸಂಘರ್ಷ
ಬಿತ್ತಿ ಹೋದವರು ಯಾರೋ ಮನುಜ
ಜಾತಿ, ಮತ, ಭೇದಗಳೆಂಬ ವಿಷ ಬೀಜ
ಬೆಳೆದು ಹಣ್ಣಾಗಿದೆ ತಿಂದವ ಕಕ್ಕುವನು ವಿಷ.. ಸಹಜ
ವಿಷ ವೃಕ್ಷವ ಕಡಿಯದೆ ಹಣ್ಣ ತಿಂದವನಿಗೇಕೆ ಸಜ?
ಅವಿವೇಕದಿಂದ ಅವನತಿಗೆ
ಆವೇಶದಿಂದ ವಿನಾಶದಂಚಿಗೆ
ಕೊಂಡೊಯ್ಯುವರು ಮನುಕುಲವ ಮೆರವಣಿಗೆ
ಮಾಡಿಕೊಂಡಂತೆ ಸಿದ್ಧತೆ ತಮ್ಮ ಶವ ಯಾತ್ರೆಗೆ
- Tribhuvan
07 Apr 2020, 04:27 am
ನಾನು ಒಂದು ಕವನ ಬರೆಯಲು
ಪ್ರಾರಂಭಿಸಿದೆ ನಿನ್ನ ಮೇಲೆ
ಅವತ್ತು ಜಾತ್ರೆಯಲ್ಲಿ ಸೀರೇನೂಟ್
ನೀ ಸಿಕ್ಕಿದೆ ನನಗೆ ವರವಾಗಿ....
ನಾ ಕಾಯುವೆ ಸದಾ
ನಿನ್ನ ಪುಟ್ಟ ಹೃದಯದ ಪ್ರೀತಿಗಾಗಿ
ಬಿಗಿ ಹಿದಿದ್ಕೊಂಡಿರುವೆ ಜೀವವ
ನೀ ಬರುವ ಆ ಸುಗಮದ ದಿನಕ್ಕಾಗಿ.....
ಈ ಮೌನ ಯಾವಾಗ
ಮುರಿದು ನಿಲ್ಲುವುದೋ
ನೀ ಹೇಳುವ ಮಾತಾಗಿ
ನನ್ನ ಜೀವ ಬಿಗಿಡಿದು ಕಾಯುವುದು..
ನೀ ಬಂದು ಹೇಳಿಬಿಡು ಒಮ್ಮೆ
ಆ ಸುಂದರವಾದ ಪ್ರೀತಿಯ ಸಿಹಿ ಮಾತನ್ನ...
ಮರುಕ್ಷಣ ನಾ ಬರುವೆ
ನೀ ನಡೆಯುವ ದಾರಿಯಲ್ಲೆ
ನಾ ಬರುವೆ ಜೊತೆ ಜೊತೆಯಲ್ಲಿ.....
- Ajay
06 Apr 2020, 10:20 pm
ಮಗುವಿನ ಬಾಯಿಯಲ್ಲಿ ಜನಿಸಿದ ಮೊದಲ ಮಾತು ಸಾವು ಬಂದರು ಸಾವಿ ಇಲ್ಲದ
ಈ ಮಾತು
ನೂರುಕಾಲ ಸ್ಪೂರ್ತಿ ತುಂಬುವ ಮಾತು
ಮನದ ಭಾವನೆಗಳನ್ನು ಮುದುಡು ಗೂಡಿಸುವ ಮಾತು
ತನ್ನ ಮಾತುಗಳನ್ನು ಕೇಳದಿದ್ದಾಗ ಕಣ್ಣೀರು
ಬರಿಸುವ ಮಾತು
ಆ ಮಾತೇ ❤❤❤ ಅಮ್ಮ
................. ಮದನ್ ರಮೇಶ್
- MadhanR
06 Apr 2020, 07:19 pm
ಕಳೆದು ಹೋದ ಮನಸಿನ ಮಾತೂಂದು
ಹುಡುಕಾಲಾಗದು ಎಂದೆಂದು
ಕಡೆಗಣಿಸಿದ ಪ್ರೀತಿಯನು ಮತ್ತೆ ಬಯಸಿದರು
ಸಿಗಲಾರದು ಮತ್ತೆಂದಿಗೊ
ಕೂಡಿಟ್ಟ ದುಡ್ಡು ಕಳ್ಳರ ಪಾಲು
ಬಚ್ಚಿಟ್ಟ ಪ್ರೀತಿ ಕನಸಿನ ಪಾಲು
ಹೇಳಿಟ್ಟ ಕೇಳಿಟ್ಟ ಬಾಯ್ಬಿಟ್ಟ ಪ್ರೀತಿ
ಪ್ರೀತಿಸಿದ ಪ್ರೇಮಿಗಳ ಪಾಲು
ನಾನೆಂದೂ ಹೇಳಿದ ಹುಚ್ಚು ನುಡಿಯೊಂದು
ಬೇರೂಬ್ಬರ ಮನಸಿನ ನೋವು ಕಳೆಯಿತು
ಅವರೆಂದೂ ಆಡಿದ ಬಿಚ್ಚು ನುಡಿಗಳು
ನನ ಮನಸಿನ ಕಿಚ್ಚು ತಣಿಸಿತು....
ಮರೆತರು ಮರೆಯತಂತೆ ನೆನೆದರು ಕುಂತರು ನಿಂತರು ಬಿಡದೆ ಕಾಡುತಿದೆ ನನ್ನ ಒಲವೆ
ನನ್ನ ಪ್ರೀತಿಯ ಆಸರೇ ನೀನು
ನನ್ನೂಲವೆ......
- RoopaGowtham
06 Apr 2020, 05:24 pm
ಕಾಣದ ಕಡಲೊಂದು ಬಡಿದಿದೆ ಮನದಲ್ಲಿ
ಕಡಲಿನ ರಭಸಕ್ಕೆ ಒದ್ದಾಡಿದೆ ಮನಸ್ಸು ಮೀನಿನಂತೆ
ದಡದಲ್ಲಿನ ಮೀನು ಹೇಗೆ ನೀರು ಸೇರಲು ಬಯಸುವುದೂ ಹಾಗೆ ನಾ ಕಾದಿರುವೆ ನಿನ್ನ ಸೇರಲು...
ಕಪ್ಪೆ ಚಿಪ್ಪಿನ ಒಳಗಿರುವ ಮುತ್ತಿನಂತೆ ಮನಸ್ಸು
ಒಡೆದರೆ ಚಿಪ್ಪು ಸಿಗಲಾರದು ಮುತ್ತು
ಮತ್ತಿನಿಂದ ಹೂರ ಹೋದ ಪ್ರೀತಿ ಮನಸ್ಸನ್ನು ಸೇರಲಾರದು ಎಂದಿಗೊ ಇದೇ ಮನಸಿನ ತಾಕತ್ತು
ಪ್ರೀತಿ ಮನಸಿಗೆ ಚಾರ್ಜರ್ ಇದ್ದಂತೆ
ಇನಿಯ ಮನಸಿನ ಸಿಮ್ ಕಾರ್ಡನಂತೆ
ಇದೆರಡು ಇದ್ದರೆ ಮನಸ್ಸು ಈಗಿನ
ಒಳ್ಳೆಯ ಸ್ಮಾರ್ಟ ಪೋನಿನಂತೆ..
ಬದುಕಲ್ಲಿನ ಸಂಬಂಧಗಳು ಪೋನಿನಲ್ಲಿನ ಆಪ್ ಗಳಂತೆ ಸೆಕ್ಯುರಿಟಿ ಹೊಂದಿಕೂಳ್ಳದೆ ಇದ್ದಲ್ಲಿ ಸಂಬಂಧಗಳು ಅನ್ ಇನ್ ಸ್ಠಾಲ್ ಆಗುತ್ತೆ ಮೊಬೈಲ್ ಆಪ್ ಗಳಂತೆ.....
ರೂಪಾಗೌತಮ್
- RoopaGowtham
06 Apr 2020, 05:01 pm
ಕಟ್ಟಿ ಕರೇವ
ಕಾಮಧೇನ ಕೊಟ್ಟಿಗೆ ತುಂಬಿ
ಕೈತೋಳಿಬೇಕ ನೀ ಹಾಲುತುಪ್ಪದೊಳಗಾ
ತಪ್ಪ ಬಾರದು ನೋಡಾ
ಹಾಲುಂಡ
ತನುವಲ್ಲಿ ಶಕ್ತಿಯೆ ತುಂಬಿ
ಎದೆ ತಳೆಬೇಕ ಅಮೃತಬಿಂದಾ
ಇಸ ಸುಳಿಕೂಡದು
ಕಂದ ನೀ ಕಾಣಾ
ಕಲ್ಲು ಕೊಣಚ
ಕೃಷ್ಣ ನಿರುವನ ಎಲ್ಲದಕಾ
ಕರ್ಮ ನೀ ಎಸಗು ಕಮಟು ಕರಗಿ
ಫಲಹೊತ್ತು ತರುವನಾ
ಶ್ರೀ ರಂಗನು
ತಡೆಗೋಡೆ
ಕೆಡವಿ ನುಗ್ಗು ಎಡರೇನೆ ಬರಲಿ
ಇಡದಿರು ನೆಲಕೆ ಮುಗ
ಮೈಬಗ್ಗಿಸಿ
ಕಾಯಕದೇವಗೆ ಶರಣಾಗು
ಹಸುವಾಗಿ ಪೊರೆವನಾ
ದೇವ ನಿನ್ನನು
- samna
06 Apr 2020, 04:29 pm
ಸಾಗುತಲಿಹ ಪಥವದು
ದುರ್ಗಮವಿಹುದು
ಸಾಧನೆಯ ಶಿಖರದೆಡೆಗೆ
ಸಾಗುತಲಿಹುದು
ಅಂಜಿಕೆಯೇಕೆ ಅಳುಕಿನ್ನೇಕೆ
ಕಾಲೆಳೆವವರ ತಳಮಳವೇಕೆ
ಕನಸೇ ಇರದ ಬದುಕಿನ್ನೇಕೆ
ಗುರಿ ತಲುಪಿದೊಡೆ ಹಾಕು ಕೇಕೆ
ಬೆದರಿ ಬಳಲಿ ಬಿಕ್ಕುತಲಿಹ
ಮನವದು ನೋವಲಿ ಬೇಯುವುದು
ಬಿರಿಯದ ಕುಗ್ಗದ ಒತ್ತಡಕ್ಕಳುಕದ
ಮನವದು ಜಯವನು ಕಾಣುವುದು
@ಕಂಪಾ
- KN PATIL
06 Apr 2020, 04:17 pm
ಕಳೆದು ಹೋದ ಕನಸುಗಳಷ್ಟು
ಮತ್ತೆ ಬಂದು ಕಾಡತೊಡಗಿವೆ
ಮರಳಿ ಯತ್ನವ ಮಾಡೆನುತ۔
ನಿನ್ನ ದಾರಿ ದೊಡ್ಡದಿದೆ ಮುಂದೆ
ತಲೆ ಎತ್ತಿ ನೋಡೆನುತ.
ಪ್ರಾರಂಭದಲ್ಲಿ ಎಡವಿದರ ಪರಿಣಾಮವಿದು
ಫಲವೇನು ಪರಿತಪಿಸಿ,
ಸಮಯ ಸಾಕಷ್ಟಿದೆ ಮುಂದೆ ,ಸಾಗಲು
ಸಮಸ್ಯೆಗಳ ಪರಿಹರಿಸಿ.
ಗುರಿತೋರಲು ನಮ್ಮಲ್ಲೇ ನೀನಿರುವೆ ಆತ್ಮಗುರು,
ನಿನಗಿಂತ ಮತ್ಯಾರಿರುವರು ಈ ಜಗದಲಿ ಪರಮಗುರು.
ಸಂತೈಸಲು ಸಮಾಧಾನದಿ ಜೊತೆಗಾರರಲ್ಲಿ
ಸರಿಯಾರು ?
- chidananda chida
06 Apr 2020, 01:03 pm
ಅಂದು.........
ಹೆಣ್ಣು ಸಮಾಜದ ಕಣ್ಣು
ಮಾನ ಮರ್ಯಾದೆ ಇರುವತನಕ
ಕೈ ಹಿಡಿದ ಗಂಡನ ಬಾಳು ಬೆಳಗುವ ದಕ
ಕಾಪಾಡಿಕೊಂಡು ಬಂದಿದ್ದರು ಕೊನೆತನಕ.
ಇಂದು.........ಮನವಿ
ದೇಶ ವಿದೇಶ ಸುತ್ತಿ ವೇಷ ಬದಲಿಸಿಕೊಂಡು
ಜೀನ್ಸ್ , ಚೂಡಿದಾರ್ ಪೈಜಾಮ ತೊಟ್ಟು
ಕಾಲಲ್ಲಿ ಶೂ ಇಟ್ಟು
ಬಾನತ್ತ ಕೈ ಬೀಸಿ ನಡಿಬೇಡ
ಓ ಹೆಣ್ಣೇ ಭಾರತದ ಸಂಸ್ಕೃತಿ ಮರಿಬೇಡ.
ಎಂದೆಂದಿಗೂ .......ಇರಲಿ
ಮೈತುಂಬ ಬಟ್ಟೆಯುಟ್ಟು
ಕೈಯಲ್ಲಿ ಬಳೆ.ಹಣೆಯಲ್ಲಿ ಕುಂಕುಮದ ಬೊಟ್ಟು
ಕೊರಳಲ್ಲಿ ಕರ್ಮಣಿಯ ತಾಳಿ ಇರಬೇಕು
ಓ ಹೆಣ್ಣೇ ಭಾರತಾಂಬೆಯೆ ಕೀರ್ತಿ ತರಬೇಕು.
ನೆನಪಿರಲಿ.......
ಭಾರತೀಯ ನಾರಿ
ವಿಶ್ವ ಸಂಸ್ಕೃತಿಗೆ ರೂವಾರಿ.
Download Kannada Kavana app : https://goo.gl/9ZnKGJ
- lakshman
06 Apr 2020, 01:02 pm
ಕಾಲಚಕ್ರ ತಿರುಗದೆ ಇರುವುದೇ
ಕಾಲವು ಕಲಿಸದೆ ಬಿಡುವುದೇ
ಮಾಡಿದ ಪಾಪ ಮರುಕಳಿಸದೇ
ನಿನ್ನ ತಪ್ಪು ನಿನಗೆ ಅರಿವಾಗುವುದೇ
- Simple Living
06 Apr 2020, 12:54 pm