Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕೊರೊನಾ ಮಾರಿ

ಕೊರೊನಾ ಮಾರಿಯೆ! ಮಸಣದ ಮಾಯೆಯೆ!
ಯಮನ ಮಗಳೆ! ಸಾವಿನ ಗುತ್ತಿಗೆಧಾರಿನಿಯೇ!
ಮನು ಕುಲದ ಮೇಲೆ ಎಷ್ಟು ಜನುಮಗಳ ದ್ವೇಷ?
ಬಡವ-ಬಲ್ಲಿದ, ದೀನ-ದಲಿತರ ಮೇಲೆ ಏಕೆ ರೋಷ?

ಬಡವರ ಕಷ್ಟದ ಒಂದೊಪ್ಪತ್ತು ತುತ್ತಿನ ಅನ್ನ ಕಸಿದೆ
ಅನ್ನ ಅರಸಿ ಹೋದವರ ಬಾಳಿಗೆ ಬೇತಾಳಿನಿಯಾದೆ
ಹೊಂಚು-ಸಂಚು ಮಾಡಿ ತೋಡಿದೆ ಸಾವಿಗೆ ಖೆಡ್ಡ
ಮಕ್ಕಳು-ಮರಿ, ಮುದಕ-ತದಕರ ಬೀಳಿಸಿದೆ ಅಡ್ಡಡ್ಡಾ

ಏ ಮಾರಿ,
ನೀ ಸೈಲಂಟ್ ಭೂಮರಾಂಗ್ ಕಿಲ್ಲರ್ ಹೇಡಿ
ದಮ್ಮ ಇದ್ರೆ ಎದುರಿಗೆ ಬಂದ ಯುದ್ಧ ಮಾಡು
ನಮ್ಮವರನ ಕೊಲ್ಲಾಲು ನಮ್ಮವರನ್ನೇ ಗುರಾಣಿ ಮಾಡಿ
ನಮ್ಮ ಲಾಕಡೌನ್ ಪ್ಲಾನಗೆ ನೀ ನಡೆ ನಡೆ ನಿನ್ನ ಮನೆಕಡೆ

ಏ ಮಾರಿ...,
ಮಂಗಳನ ಅಂಗಳದಲಿ ರೋಬಟ್ ಇಳಸಿವಿ
ಎಕೆ ೪೭, ಪಿರಂಗಿ ನಳಿಕೆಗಳಿಗೆ ಗುಂಡು ತುಂಬಿವಿ
೧೦೦ ಭಾರಿ ಭೂಮಿ ಸುಡುವಷ್ಷು ಅಣುಬಾಂಬ ಇಟ್ಟಿವಿ
ಒಂದ ಬಾರಿ ನೀ ಕಣ್ಣಿಗೆ ಬಿದ್ರ ಉಡಿಸ ಮಾಡಿಬಿಡತಿವಿ

- Siddugouda

31 Mar 2020, 08:08 am

ಗೆದ್ದಲು ...

ಬದುಕೆಂಬ ಬಂಡಿಗೆ
ಬಡತನದ ಗೆದ್ದಲು ಹಿಡಿದಾಗ.....
ಎಲ್ಲರೂ ತಿರಸ್ಕಾರ ಭಾವದಿಂದ ನೋಡುವರು.
ಗೆದ್ದಲು ಹೊದ್ದು
ಗೆದ್ದು ಬಂದಾಗ ಪುರಸ್ಕಾರ ಸನ್ಮಾನ
ಕೊಡುವರು.

ಧರ್ಮದ ಮಾರ್ಗದಿ ಗೆದ್ದು
ಬಂದವರಿಗೆ ಬೆನ್ ತಟ್ಟಿ ಪ್ರೋತ್ಸಾಹಿಸಿ
ಅಧರ್ಮದ ಮಾರ್ಗದಿ ಗೆದ್ದು
ಬಂದವರಿಗೆ ಒದ್ದು ಬುದ್ದಿ ಕಲಿಸಿ.

ಹಣ ಹಣ ಎಂದು ಹೆಣವಾಗುವ ಬದಲು
ಗುಣವಂತನಾಗಿ ಬಾಳಲು ಕಲಿ ಮೊದಲು
ಹಣಕ್ಕೆ ಕೊಡುವ ಬೆಲೆ
ಗುಣಕ್ಕೆ ಕೊಟ್ಟರೆ ....
ಈ ಧರೆಯೆ ಸ್ವರ್ಗದ ನೆಲೆ.

- lakshman

30 Mar 2020, 09:47 pm

#ಅಹಮಾಗ್ನಿ#

ಮನದೊಳಗೆ ಮಾಯೆದಿ ಹುಟ್ಟಿ
ಅಹಮಗ್ನಿಯೆಂಬುದು ಎದೆಮೊಗ್ಗ ಸುಡತ
ತನಬಳ್ಳಿಗೂ ಚಾಚು ಉರಿತಟ್ಟಿ
ಉಸಿರ ಬೆರಕಿಲೆ ಉರಿತಿದೆ ಜೀವ ಹಿಂಡತ

ನಗೆಹಕ್ಕಿಯು ರೆಕ್ಕೆಬಡಿವ ಅಣಿ ಇಟ್ಟು
ನೆಮ್ಮದಿ ಕಡಲೇರಲೆ ತಳೆತಿದೆ ಹೊರಹೊಸಿಲಿಗೆ
ಮಮತೆಹರಿಣಿ ಹೊಂಡತಿದೆ ಬಿಟ್ಟು
ಬಯಸಿ ಯಾವದೊ ಶಾಂತವೃಕ್ಷದ ಟಿಸಿಲಿಗೆ

ಉರಿತಾಳದಿಷ್ಟಂದ ಅಂದುಕೊಂಡಿದ್ದೆ
ಆಗಾಗ ಪ್ರೀತನೀರ ಎರಚುತ್ತಿದ್ದೆ ಅಗ್ನಿ ಹಿಂಗತಿಲ್ಲ
ಚಿತ್ತಶಾಂತಕೆ ರೇಖು ಕರಗುತ್ತದೆಂದಿದ್ದೆ
ಎದೆಕಂಬಳಿ ಮುಚ್ಚಿ ಅಪ್ಪಿದರು ಸಹ ಕುಗ್ಗತಿಲ್ಲ

ಕಟ್ಟಿಕೊಂಡ ಭ್ರಮೆಹುತ್ತ ಕೆಡವಿ
ಮನಸ ಸುಡುವದ ಬಿಟ್ಟು ತಳೆಬಾರದೇ ಒಲವೇ?
ಒಳಗಿಗೆ  ತೊಟ್ಟು ಬೆಳಗ ಒಡವಿ
ಪ್ರೀತಿತೊರೆಯಾಗಿ ಹರಿಬಾರದೆ ನನ್ನೊಲವೇ?

- samna

30 Mar 2020, 07:05 pm

ಸೀತೆಯ ಮನದ ಪ್ರಶ್ನೆ

ನನ್ನೀ ಸ್ವಾಮೀಯ ಪಾದಗಳಿಗೆ ಈ ಭೂಜಾತೆಯ ಪ್ರಣಾಮಗಳು,

ರಘುಕುಲ ತಿಲಕರಿಂದ ಈ ಜಾನಕಿ ಮನದಿ ಅಡಗಿರುವ ಪ್ರಶ್ನೆಗೆ ಉತ್ತರ ಇಂದಾದರೂ ದೊರಕುವುದೇ ಪ್ರಭು ?

ತಾವು ಒಮ್ಮೆ ಆಜ್ಞೆ ನೀಡುವಿರಾ ಸ್ವಾಮೀ ಅಂತರಂಗದ ಜ್ವಾಲಾಮುಖಿಗೆ ಮತಷ್ಟು ಸಮಯ ನೀಡಲು ಮನ ಒಪ್ಪುತ್ತಿಲ್ಲ,

ನನಗೆ ತಿಳಿದಿದೆ ಪ್ರಭು ನನ್ನ ಸ್ವಾಮಿಗೆ ನನ್ನ ಮೇಲೆ ಒಂದಷ್ಟು ಸಂಶಯವಿಲ್ಲವೆಂದು ಆದರೂ ಅಗ್ನಿಯೊಳಗೆ ನನ್ನ ಪ್ರವೇಶವ ವಿರೋದಿಸಲಿಲ್ಲವೇಕೆ ತಾವು ಪ್ರಭು?

ದಶರಥ ಪುತ್ರರಾದ ತಮ್ಮೊಡನೆ ಜನಕನ ಪುತ್ರಿ ಜಾನಕಿ ವನವಾಸದಿ ಹಿಂಬಾಲಿಸಿ ಬಂದಳು, ಆದರೆ ಅಂದು ಲಕ್ಷ್ಮಣನೊಡನೆ ಈ ಜಾನಕಿಯ ಕಳುಹಿಸಿದ್ದೀರಿ ನನ್ನೊಡನೆ ಬರುವ ಮನಸ್ಸು ಇರಲಿಲ್ಲವೇ ನಿಮಲ್ಲಿ ?

ಪ್ರಜೆಗಳ ನುಡಿಗೆ ತಪ್ಪದೆ ನಡೆವ ಆದರ್ಶ, ನಿಷ್ಠಾವಂತ ಪುರುಷರು ನನ್ನ ಸ್ವಾಮೀ, ನನ್ನೀ ನಿಷ್ಠೆಯ ಬಗ್ಗೆ ನಿಮ್ಮ ಮನಕ್ಕೆ ಅರಿವಿರಲಿಲ್ಲವೆ ಪ್ರಭು ?

ನೀವು ತ್ಯಜಿಸಿದ ಕ್ಷಣದಿಂದ ನಿಮ್ಮೀ ನಾಮವೇ ನನ್ನ ಉಸಿರ ಕಣದಿ ಬೆರೆತಿರಲು, ಅದರಲ್ಲಿ ನನ್ನ ತೃಪ್ತಿ ಅಡಗಿ ಹೋಗಿತ್ತು ಸ್ವಾಮೀ. ಆ ದಿನದಿ ಈ ಪ್ರಮೋದಿನಿಯ ಒಮ್ಮೆಯೂ ನೋಡಬೇಕು ಎಂದನಿಸಲಿಲ್ಲವೆ? ಅನಿಸಿದರೂ ನಿಮ್ಮ ದರುಶನ ಭಾಗ್ಯ ಪಡೆಯುವ ಅದೃಷ್ಟಳು ನಾನಲ್ಲವೇನು ಅಲ್ಲವೇ ಸ್ವಾಮೀ ?

ಪ್ರಭು ಜಗತ್ತು ನುಡಿಯುತಿದೆ ಇಂದು ಶ್ರಿ ರಾಮ ಚಂದ್ರ ಜಾನಕಿಯ ತೊರೆದ ಎಂದು ನಿಮ್ಮೀ ಅಂತರಾಳ ಹೇಳುತಿದೆಯಲ್ಲವೇ? ಸೀತೆಯೇ ಈ ರಾಮನನ್ನು ತೊರೆದು ನಡೆದಳೆಂದು.

- ಹಂಸ ಕುಲಾಲ್

- ಹಂಸವೇಣಿ

30 Mar 2020, 05:33 pm

ಅಣ್ಣ ತಂಗಿಯ ಒಡನಾಟ

ಅಣ್ಣನ ಮನವಂದು ಪುಟ್ಟ ಹೂದೋಟ ಅದರೊಳಗೆ ನಗೆ ತಂದ ತಂಗಿ ಎದ್ದೆ ಚಂದದ ಒಡನಾಟ ಅಂದು ಹಕ್ಕಿಗಳ ಹಾಡಂತೆ ನಮ್ಮ ತುಂಟಾಟ ಇಂದು ಸಿಹಿ ತುತ್ತ ನೀಡುತ್ತಿದೆ ಸವಿನೆನಪಿನ ಊಟ ಅವನ ಜೊತೆ ನಾನಿರಲು ನೋವೆಲ್ಲ ಕ್ಷಣದಲ್ಲೇ ಮಾಯದ ಮಾಟ ನಮಗರಿವಿಲ್ಲದೆ ಓಡುತಿಹುದು ಸಮಯದ ಓಟ ತಂಗಿಯ ರಸಭರಿತ ಜೀವನಕ್ಕೆ ಅವನದ್ದೇ ಪಾಠ ಅಣ್ಣನ ಸದ್ಭಾವ ಗುಣಗಳು ಸೃಷ್ಟಿಸಿವೆ ನನ್ನೊಳಗೆ ಮಾನವೀಯ ಮೌಲ್ಯಗಳ ಸ್ನೇಹಕೂಟ ನಂನ ಪ್ರೀತಿ ತುಂಬಿದ ಹೃದಯ ಸಾಮ್ರಾಜ್ಯದ ಸಿಂಹಾಸನದಲ್ಲಿ ಅವನೇ ಸಾಮ್ರಾಟ ಬಾನಂಚು ಬೆರಗಾಗಿ ತೆರೆದು ನೋಡುತ್ತಿದೆ ಅಣ್ಣ-ತಂಗಿಯರ ಮಧುರ ಬಾಂಧವ್ಯದ ಪುಟ ಅಣ್ಣನಿಗೆ ಶರಣಾಗಿ ಇಳೆ ಇತ್ತ ಬೇಡಿ ನೀಡುತ್ತಿದೆ ಜಗ ಸ್ಮರಿಸು ಇತಿಹಾಸ ಸಂರಚಿಸುವ ಖಾಲಿ ಹಾಳೆಗಳ ಸಂಪುಟ.

- nagamani Kanaka

30 Mar 2020, 03:33 pm

ಅನುಪಮ...

ನನ್ನ ಕಷ್ಟದಲ್ಲಿ ಸುಖದ ದಾರವನ್ನು ಪೋಣಿಸುವ ಪ್ರೇಯಸಿ
ನನ್ನ ಮನದ ಭಾವನೆಗಳನ್ನರಿತ ಮನದರಸಿ
ನನ್ನೇಲ್ಲಾ ಕೋಪದ ಕ್ಷಣಗಳನ್ನುಕಲಸಿ
ಅದರಲ್ಲಿ ತನ್ನ ಪ್ರೀತಿಯ ನೆನಪುಗಳ ಬೆರೆಸಿ
ಪ್ರತಿ ಸಮಯದಲ್ಲು ನನ್ನ ಯಶಸ್ಸಿಗೆ ಹರಸಿ
ತನ್ನ ಕಹಿ ಕ್ಷಣಗಳನ್ನೆಲ್ಲಾ ಒಂದು ಬದಿಗೆ ಸರಿಸಿ
ನನ್ನ ಪ್ರತಿ ತಪ್ಪುಗಳನ್ನು ಮನಸಾರೆ ಕ್ಷಮಿಸಿ
ಹೃದಯದಲ್ಲಿ ಅಚ್ಚಳಿಯದ ನೆನಪುಗಳ ಚಾಪು ಮೂಡಿಸಿ
ಈಗ ಹೋಗುತ್ತಿರುವಳು ನನ್ನನ್ನು ಹಿಂದಿರುಗಿ ನೋಡದೆ ಅಳಿಸಿ...❤❤❤

- Chaitra Kulkarni

30 Mar 2020, 01:24 pm

ನಿನೋಂದು ಮುಗಿಯದ ಮೌನ

ವರ್ಣಿಸಲು ಹೋದರೆ ವರ್ಣನೆಗೆ ನಿಲುಕದ ಗುಣ ನಿನ್ನದು...
ಬರಿಯಲು ಹೋದರೆ ಲೇಖನಿಯೆ ನಾಚುವ ಚೆಲುವು ನಿನ್ನದು...
ಮಾತುಗಳನ್ನು ಕೇಳುತ್ತಾ ಹೋದರೆ ಕೋಳಲ ನಾದವನ್ನೆ ಮೀರಿಸುವ
ಧನಿ ನಿನ್ನದು...
ನಗುವ ನೋಡುತ್ತಾ ಹೋದರೆ ಹುಣ್ಣಿಮೆ ಚಂದ್ರನ ಹೋಳಪನ್ನೆ ಮೀರಿಸುವ
ಮುದ್ದು ಮೋಗ ನಿನ್ನದು...
ಏನೆಂದು ಹೋಗಳಲಿ ಹೇಳು ನಿನ್ನ ಸೌಂದರ್ಯಕ್ಕೆ ಮಿನುಗುವ ತಾರೆಗಳು ನಾಚಿವೆ.‌..❤❤❤

- Chaitra Kulkarni

30 Mar 2020, 01:05 pm

ಚಂಚಲ ಮನಸ್ಸು

ಆಸೆಗಳ ಬೆನ್ನತ್ತಿ ಜೀವನದಲ್ಲಿ ಸಾಧಿಸಲು
ಓಡುವ ವಯಸ್ಸಲ್ಲಿ
ಪ್ರೀತಿ ಪ್ರೇಮ ಅಲ್ಲದೆ ದುಶ್ಚಟಗಳಿಗೆ ಬಲಿಯಾಗಿ
ಜೀವನವನ್ನ ಅದೆಷ್ಟೋ ಯುವಕ ಯುವತಿಯರು
ತಮ್ಮ ಜೀವನವನ್ನೆ ಹಾಳು ಮಾಡಿಕೊಳ್ಳುವ ಬದಲು
ತಮ್ಮ ಮನಸ್ಥಿತಿಯನ್ನು ತಮ್ಮ
ಹಿಡಿತದಲ್ಲಿಟ್ಟುಕ್ಕೊಂಡು
ಬದುಕಿನ ಕಡೆ ಗಮನ ಹರಿಸಿದರೆ
ಯಾರ ಜೀವನವೂ ಹಾಳಾಗುವುದಿಲ್ಲಾ.
ಆದರೆ ನಮ್ಮ ಚಂಚಲ ಮನಸ್ಸು
ನಮ್ಮ ಇಡೀ ಜೀವನವನ್ನೇ ಹಾಳು ಮಾಡಿ ಬಿಡುತ್ತದೆ.

✍️ಕನಸುಗಾರ

- varu

29 Mar 2020, 10:21 pm

ದೂರಸೇ

ನಮ್ಮೊಳಗಿದ್ದಾನೊಬ್ಬ ರಂಕ
ಎಷ್ಟೇ ಹೇಳಿದರೂ ಬಿಡ ನವನು ಬಿಂಕ
ಅಹಂ ತುಂಬಿಕೊಂಡಿದ್ದಾನೆ ಮಂಕ

ಇವನು ಬೆಣ್ಣೆ ತಿಂದ ಕೋತಿ
ಮೇಕೆ ಬಾಯಿಗೆ ವರೆಸಿದಂತವನ ನೀತಿ
ನಾನೇ ಶ್ರೇಷ್ಠ ನೆಂಬ ಭ್ರಾಂತಿ

ಕಂಡದ್ದೆಲ್ಲಾ ...ತನಗೆ ಬೇಕೆಂಬ ಗುಣ
ಮರೆತಿದ್ದಾನೆ ಪ್ರಕೃತಿ ಮಾತೆಯ ಋಣ
ಪ್ರಕೃತಿ ಸಿಡಿದೆದ್ದರೇ ಬೀದಿಯಲ್ಲಿ ನಮ್ಮ ಹೆಣ


ಅವನಿಂದ ಎಚ್ಚರವಾಗಿರಬೇಕು ನಾವೆಲ್ಲಾ
ಪ್ರಕೃತಿಯ ಉಳಿವೇ ನಮಗೆಲ್ಲಾ
ಉಳಿಸದಿದ್ದರೆ ಉಳಿಗಾಲವಿಲ್ಲ!

ಹಾಗಾದರೆ ಇವನ್ಯಾರು ?
ಎಲ್ಲಿಹುದು ಇವನೂರು?
ದುರಾಸೆ, ಸ್ವಾರ್ಥರ ಮನಸೇ ಇವನೂರು.

lakshman. madival.

- lakshman

29 Mar 2020, 09:12 pm

*_ತಂತ್ರಜ್ಞಾನದಿ ಮೆರೆದ ಜಗ....._*

ತಂತ್ರಜ್ಞಾನದಿ ಮೆರೆದ ಜಗ,
ನಿನ್ನೊಲುಮೆ ಮರೆಯಿತಲ್ಲಾ ಬೇಗ,
ಬಲ್ಲ ಸಮಾಜ ನಿನ್ನ ಕಡೆ ಗಮನ ಕೊಡಲಿಲ್ಲ,
ಅದಕಾಗಿ ನೀ ಅವನ ಕಟ್ಟಿ ಮನೆಯಲಿಟ್ಟೆಯಲ್ಲಾ....
ಸಾಕು ಮಾಡು ನೀ ಅವಗೆ ಕೊಟ್ಟ ಗುದ್ದು,
ಕೆಟ್ಟ ಮೇಲೆ ಬಂದಂತೆ ಬುದ್ಧಿ,
ಇನ್ನಾದರೂ ಅವ ಮೇಲೆ ಬರಲಿ ಎದ್ದು,
ಮುಂದೆಂದೂ ತೋರುತಿರುವ ನಿನ್ನ ಮೇಲೆ ಗೌರವವನ್ನ,
ಮರೆತೂ ಮರೆಯಲಾರ ಪ್ರಕೃತಿ ಮಾತೆ ನಿನ್ನ ಕರುಣೆಯನ್ನ....
.... ತಿಪ್ಪೇಸ್ವಾಮಿ.....

- tippu

29 Mar 2020, 01:53 pm