Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಣ್ಮನ

ಹಚ್ಚ ಹಸಿರಾದ ಕಾನನ
ಹಕ್ಕಿಗಳ ಕಲರವ
ಮುಚ್ಚು ಮರೆ ಇಲ್ಲದ ಆಕಾಶ
ಹಾರುತಿಹ ಹಕ್ಕಿಗಳು
ಝುಳು ಝುಳು ಹರಿವ ನದಿ
ಹರಿಣಿ ಜಲಧಾರೆ
ಬಣ್ಣ ಬಣ್ಣದ ಹೂದೋಟ
ಕಣ್ಮನಕೆ ಸವಿಯೂಟ
ಕಂಪನ ತರಿಸಿದ ತಂಗಾಳಿ
ಬೆಸೆದ ಎದೆಗಳು
ಮುಳುಗತಿಹ ಹೊನ್ನ ಸೂರ್ಯ
ಶಶೋದಯಕೆ ತೆರೆದುಕೊಳ್ಳುವ
ಸವಿ ಸವಿ ಕನಸಗಳು

- samna

27 Mar 2020, 07:19 am

ಮರೆಯಲಾಗದ ನಿನ್ನ ನೆನಪು

ಹೇ ಕೇಳ ನನ್ನ ಒಡೆಯ..ನಿನ್ನ ನೆನಪು ನನ್ನ ಬೀಡ ದಂಗ ಕಾಡ್ತಾ ಇದೇ ವಶಿ ನನ್ನ ಸಂಗಡ ಕುಂತು ಕಷ್ಟ ಸುಖ ಮಾತಾಡ್ಬೇಕು ಅಂತ ನಿಂಗ ತಿಳೀತಾ ಇಲ್ವಾ ಹೇಳ ನನ್ನ ದೇವ್ರು.
ನಿನ್ನ ನೆನಪು ನನ್ನ ಬೀಡ ದಾಂಗ ಕಾಡ್ತಾ ಇದೆ ಒಮ್ಮ್ಯರ ನನ್ನ ಬೆಟ್ಟಿ ಆಗು .ಅಟ್ಟಿ ಮೇಲೆ ಕುಂತು ಕಷ್ಟ ಸುಖ ಮಾತಾಡವುನು .
✍️ಮರೆಯಲಾಗದ ನಿನ್ನ ನೆನಪು.

- Iramma Iramma

26 Mar 2020, 04:14 pm

...ಮೌನವಾಗಿತ್ತು ನನ್ನ ಮನ...

ನಾ ಬರೆಯುವ ಆಸೆ
ಸುಂದರವಾದ ಪುಟ್ಟ ಕವನ
ಅದಕ್ಕೆ ನಾ ಹೋದೇನು
ಏಕಾಂತವಿರುವ ಪುಟ್ಟ ವನ....

ಜೋರಾಗಿ ಬೀಸಿತು
ತಂಪಾದ ತಂಗಾಳಿ
ವಿರಳಗೊಂಡಿತು ನನ್ನ
ಸುಂದರವಾದ ತನುಮನ....

ಕೇಳದಂತಹ ಸುಗಮಧುರ
ಶಬ್ದದ ಗೀತೆಗಳ ಸಂಗೀತ
ಪುಟ್ಟ ಗಿಡ-ಮರಗಳಲ್ಲಿ
ಸುಂದರವಾದ ಸ್ವರಗಳ ಕಲರವ.....

ನಾ ಬರೆಯಲು ಬಂದ
ಪುಟ್ಟ ಕವನ
ನನ್ನನ್ನೇ ನಾ ಮರೆತು ಹೋದೆನು
ಮೌನವಾಗಿತ್ತು ನನ್ನ ಮನ......

- Ajay

25 Mar 2020, 06:21 pm

ಬಂತು ನೋಡು ಯುಗಾದಿ

ಯುಗ ಯುಗದ ಆದಿ
ನವ ಯುಗಕೆ ಹಾದಿ
ಬಂತು ನೋಡು ಯುಗಾದಿ!!
ನವ ಉಲ್ಲಾಸದಿಂದ
ನವ ಉತ್ಸಾಹದಿಂದ
ಬಂತು ನೋಡು ಯುಗಾದಿ!!

ಚೈತ್ರ ಶುದ್ಧ ಪಾಡ್ಯ ದಿನ
ಈ ಸೃಷ್ಠಿಯ ಮೊದಲ ದಿನ
ಬಂತು ನೋಡು ಯುಗಾದಿ!!
ನಭ ಚುಕ್ಕಿ ಗ್ರಹಗಳ ಕೂಟ
ಬದಲಾದ ಚಲನಾ ನೋಟ
ಬಂತು ನೋಡು ಯುಗಾದಿ!!

ನವ ಪರ್ವಕಿದೋ
ಚಿರ ಚೇತನವ ತುಂಬಿ
ಬಂತು ನೋಡು ಯುಗಾದಿ!!
ಸಂತಸದಿ ನಿಂದು
ಸಂಭ್ರಮದಿ ಮಿಂದು
ಬಂತು ನೋಡು ಯುಗಾದಿ!!

ಗೆಲುವನ್ನು ಭರಿಸಿ
ಸೋಲನ್ನು ಮರೆಸಿ
ಬಂತು ನೋಡು ಯುಗಾದಿ!!
ಸಿಹಿ ಕಹಿಯು ಬೆರೆತು
ಬದುಕನ್ನು ಅರಿತು
ಬಂತು ನೋಡು ಯುಗಾದಿ!!

ಹೊಂಬೆಳಕ ತಂದ
ನೇಸರನ‌ ಚೆಂದ
ಬಂತು ನೋಡು ಯುಗಾದಿ!!
ಚಿಗುರೆಲೆಯ ಸ್ಪರ್ಷ
ವನಸಿರಿಗೆ ಹರ್ಷ
ಬಂತು ನೋಡು ಯುಗಾದಿ!!

ಭೂರಮೆಯ ಚೆಲುವು
ಅರಳಿರುವ ಸುಮವು
ಬಂತು ನೋಡು ಯುಗಾದಿ!!
ದುಂಬಿಗಳ ಬಂಧ
ಹೂ ಬನದ ತುಂಬ
ಬಂತು ನೋಡು ಯುಗಾದಿ!!

ಹೊಸ ವರ್ಷದ ಆರಂಭ
ಎಲ್ಲೆಲ್ಲೂ ಪ್ರಾರಂಭ
ಬಂತು ನೋಡು ಯುಗಾದಿ!!
ಬೇವು ಬೆಲ್ಲ ಹಂಚಿರೆಲ್ಲ
ಸುಖ ದುಃಖ ಮರೆಸಿರೆಲ್ಲ
ಬಂತು ನೋಡು ಯುಗಾದಿ!!

- ಪಿ.ಜಿ.ಜ್ಯೋತಿ

25 Mar 2020, 02:12 pm

ಯುಗಾದಿ ಹಬ್ಬದ ಶುಭಾಶಯಗಳು

ಬೇವು ಬೆಲ್ಲವನ್ನು ಸವಿದು
ಸಿಹಿ ಕಹಿಯನ್ನು ಸಮನಾಗಿ ಹಂಚಿಕೊಂಡು
ಏಳು ಬೀಳುಗಳನ್ನು ಲೆಕ್ಕಿಸದೆ ನಲಿದು
ನಮ್ಮೆಲ್ಲರನ್ನು ಸಮಾನ ಮನಸ್ಸಿನಿಂದ ಮುನ್ನಡೆಸಲು ಮರಳಿ ಬಂದಿದೆ ಹೊಸ ಸಂವತ್ಸರ.
ಬಂಧೂ - ಮಿತ್ರರು ಒಟ್ಟುಗೂಡಿ ಒಂದೆಡೆಗೆ ಸೇರಿ.
ರಂಗವಲ್ಲಿ, ಮನೆಯನ್ನು ತೋರಣಗಳಿಂದ ಸಿಂಗರಿಸೋಣ ಬನ್ನಿ.
ಎಣ್ಣೆಯ ಜಳಕವನ್ನು ಮಾಡಿ.
ದೇವರಿಗೆ ಪೂಜೆಯನ್ನು ವಿಧಿ -ವಿಧಾನಗಳಿಂದ ಪೂರ್ಣಗೊಳಿಸಿ.
ಬೇವು ಬೆಲ್ಲವನ್ನು ಸೇವಿಸಿ, ಮನೆ ಮಂದಿಗೆಲ್ಲ ಮತ್ತು ಮಿತ್ರರಿಗಲ್ಲ ಹಂಚಿ ಯುಗಾದಿ ಹಬ್ಬ ಆಚರಿಸಿ
ಎಲ್ಲರಿಗೂ ಒಳ್ಳೆದಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ .
ಮತ್ತೊಮ್ಮೆ ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

- Iramma Iramma

24 Mar 2020, 11:11 pm

# ಬಾ ಅತಿಥಿ

ಹೃದಯ ಪಡಸ್ಯಾಲೆ ಮ್ಯಾಗಾ
ನೆನಪ ಚಿತ್ರದಚಾಪೆಯ ನೆಲಕ ಹಾಸಿ
ಬಣ್ಣಕನಸ ಹರಡಿ ಬೆಳಗೀಗಾ
ಒಲವೆಂಬ ಅತಿಥಿಯ ಕರೆದು ಕುಳ್ಳಿರಿಸಿ

ಗೋಡೆಮೇಲಿನ ಚಿತ್ರಪಟ
ಕಸೂತಿಯ ಗುಂಡಿಗಾಜಿನ ಬಿಳಿಮೊಲ
ಇಳಿದು ಕೆಳಗೆ ಮೌನದಲಿ
ಆಡುತಿದೆ ಎದೆಹಕ್ಕೆಯ ತುಂಬ ಕಿಲಕಿಲ

ನೆತ್ತರ ಕಣದ ಅನುರಕ್ತ
ಬೆಳಕದೆ ಕಂಭದ ಮ್ಯಾಲೆ ಅಚ್ಚಿಟ್ಟ ದೀಪದಾ
ಬೆಳಕಬಳ್ಳಿ ತಾಳಿರೂಪ
ನೃತ್ತಿಸತಿದೆ ಕಪ್ಪುಶಿಲೆಯಂತ ನೆರಳಬಿಂಬದಾ

ಮಾಳಿಗೆಗೆ ಕರಲ ತುಂಬಿ
ಬಿದ್ದಮಳೆನೀರ ದಾಟಿಸಿ ಜಂತಿ ಸೋರದಂತೆ
ನೆಲೆಗಟ್ಟ ರೆಕ್ಕೆಯ ನಂಬಿ
ಹಾರಿಬಿಟ್ಟಿದೆ ಎದೆಹಕ್ಕಿಯ ನಭಹೊಕ್ಕಂತೆ

ಈಚಲದ ತೊಲೆ ಸಂದಿನಲಿ
ಮೆತ್ತಿದ್ದ ಸೆಗಣಿಧೂಳಕಸ ಸ್ವಚ್ಛಗೊಂಡು
ಬಣ್ಣ ತಳೆದಿದೆ ಬಿಳಿಹಾಲಿನಲಿ
ಕತ್ತಲೆಕರಗಿ  ದೀಪಉರಿ ಹೆಚ್ಚುಗೊಂಡು

ಹೊದಿಸಿದ್ದ ಹೆಂಚು ಹಾರಿ
ಛಾವಣಿ ಗೀಗ ರವುದೆಯೆ ಹೊತ್ತಿದೆ ನೆರಳ
ಹಾವುಗುಬ್ಬಿಗೂ ನೆಲೆತೋರಿ
ಬದುಕು ಪ್ರೀತಿ ಕಣ್ಣರಳಿಸಿ ಬೆಸೆದಿದೆ ಕರುಳ

ಮನದ ಮನೆಗೆ ಬಾ ಗೆಳತಿಯೇ
ಅಂಗಳ ಸಾರಿಸಿ ಚಿಕ್ಕಿರಂಗೋಲಿ ಬಣ್ಣಬರೆದು
ಚಂದಪ್ಪನೂಟ ಕೂತು ಉಣ್ಣಾಕ
ಅಂದವ ಹೊದ್ದು ಬೇರಬಿಡು ಕಣ್ಣಕೊರೆದು

- samna

24 Mar 2020, 05:29 pm

ಬೆಂಗಳೂರಿಗರ ಪರಿಸ್ಥಿತಿ

ಹಳ್ಳಿಗಳಿಗೆ ಬರಲಾಗದ ಜನ...!
ಬೆಂಗಳೂರಲ್ಲಿ ಇರಲೊಪ್ಪದ ಮನ..!
ಕೆಲಸವಿಲ್ಲದೆ ಕೂತರೆ ಸಿಗುವುದೆ ಅನ್ನ..!
ಇನ್ನೇಗೆ ನಡೆಸುವುದು ಜೀವನ...!
ಅಟ್ಟಹಾಸ ಮಾಡುತ್ತಿದೆ ಕರೋನಾ...!
ಹೀಗೆ ಮುಂದುವರೆದರೆ ಆ ದೇವರೆ
ಕಾಪಾಡ ಬೇಕು ನಮನ್ನ.....!!

- Harish Gowda

23 Mar 2020, 09:57 pm

ಗೆಳೆಯನ ನೆನಪು.. ❤

ಒಂದು ದಿನ ಆ ಕರಾಳ ರಾತ್ರಿ...!!!

ಆ ರಾತ್ರಿಯ ಸಮಯದಲ್ಲಿ ಬರುವ ಚಂದಿರ
ನನ್ನ ಪಾಲಿಗೆ ಸತ್ತು ಹೋದಂತಿತ್ತು...

ಎಲ್ಲವೂ ಭಯದ ಶಬ್ದಕ್ಕೆ ಕಿವಿಗೊಡುವಂತಿತ್ತು..

ನನಗೆ ಜೀವವನ್ನು ನೀಡಿದ ಪುಣ್ಯಾತ್ಮನನ್ನು ಊರಿಗೂರೇ ನೆನೆಸುವಂತಿತ್ತು..

ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು..!!


ಸದ್ದು ನಿದ್ದೆ ಹೋಗಿ ಮೌನ ಎದ್ದು ನಿಂತಿತ್ತು..

ಅಂಧಕಾರವು ಬೆಳಕನ್ನು ಮೆಟ್ಟಿ ನಿಂತಿತ್ತು..

ನನ್ನ ಜೀವನದಲ್ಲಿ ವಿಧಿಯು ಗಹಗಹಿಸಿ
ನಗುತ ನಿಂತಿತ್ತು....

ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು.. !!


ಗೆಳೆಯನ ನೆನಪುಗಳು ಮನ ಕುಲುಕುತಿತ್ತು..

ಮನಸಿಗೆ ಮಂಕು ಕವಿದು ಸುಮ್ಮನೆ ಮಲಗಿತ್ತು..

ಅಂದು ನನ್ನ ಪ್ರಾಣ ಪಕ್ಷಿ ಹಾರಿ ಹೋದಂತಾಗಿತ್ತು..

ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು..!!


ಆಡಿ ನಲಿದ ದಿನಗಳು ಕಣ್ಣೆದುರು ನಿಂತಿತ್ತು..

ಮನಸ್ಸು ಮಗುವಿನಂತೆ ಬಿಕ್ಕಿ ಬಿಕ್ಕಿ ಅಳುತ್ತಿತ್ತು..

ಅಂದು ಮುಂಜಾನೆ ಸೂಸುವ ಗಾಳಿಯು
ಬಿರುಗಾಳಿಯಂತಾಗಿತ್ತು..

ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು...!!


ತಾಯಿಯ ಮುಖದಲ್ಲಿ ದುಃಖವು ತುಂಬಿ ತುಳುಕುತ್ತಿತ್ತು...

ಆ ನೋವ ಯಾವ ಜೀವವು ತಡೆಹಿಡಿಯದಂತಿತ್ತು..

ಮುಂಜಾನೆಯ ಹಕ್ಕಿಗಳ ಚಿಲಿಪಿಲಿ ಸದ್ದು
ಬದಿಗೆ ಸರಿದು ಸುಮ್ಮನೆ ನಿಂತಂತಿತ್ತು..

ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು..!!


ಬರಸಿಡಿಲು ಎದೆಗೆ ಅಪ್ಪಳಿಸಿದಂತಿತ್ತು..

ಬಿರುಗಾಳಿಗೆ ಸಿಲುಕಿ ತತ್ತರಿಸಿದಂತಿತ್ತು..

ಜೀವದ ಹಂಗು ತೊರೆವ ಆಸೆ ನನಗೂ ಬಂದಂತಿತ್ತು..

ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು..!!


ಅಂದು ನನ್ನ ಜೀವನ ಜೀವವಿಲ್ಲದ ಬೊಂಬೆಯಾದಂತಾಗಿತ್ತು...

ಈ ಬೊಂಬೆಗೆ ಉಸಿರು ನೀಡಿದ ಗೆಳೆಯನಿಲ್ಲದಂತಾಗಿತ್ತು..

ಗೆಳೆಯನಿಲ್ಲದ ಜೀವನ ಇನ್ನೇಕೆ ಎಂದೇನಿಸಿತ್ತು..

ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು..!!


ಕೋಪ ತಾಪ ಸಿಟ್ಟು ಮುನಿಸು ಅಳು
ಎಲ್ಲವೂ ಬಂದಂತಿತ್ತು..

ಯಾರಿಗೇಳದ ಸಂಧರ್ಭ ನನಗೊದಗಿ ಬಂದಿತ್ತು..

ಊರಿಗೂರೆ ನನ್ನ ನೋಡುತ್ತ ನಿಂತಂತಿತ್ತು...

ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು..!!


ಗೆಳೆಯನನ್ನೊಮ್ಮೆ "ಪಪ್ಪ " ಎಂದು ಕೂಗೆಂದು
ನನ್ನ ಮನ ಹೇಳಿದಂತಿತ್ತು...

ಕೂಗಿದರೂ ನನ್ನ ಕೂಗು ಗೆಳೆಯನಿಗೆ ಕೇಳಿಸದಂತಿತ್ತು..

ಕೂಗಲೂ ಗಂಟಲಲ್ಲಿ ದನಿಯೇ ಇಲ್ಲದಂತಾಗಿತ್ತು..

ಅಂದು ನನ್ನ ಗೆಳೆಯನ ಉಸಿರು ನಿಂತಿತ್ತು..!!

- ಇಂತಿ ನಿನ್ನ ಉಸಿರು..
( Dad's lil princess

- AratiRajkumar

23 Mar 2020, 08:34 pm

ನನ್ನವನು

ಆಕಾಶದಲ್ಲಿ ನೀ ದೀಪಾವಾದೇ..
ಇರುಳಾಗಿ ನಾನು ನಿನಗಾಗಿ ಕಾದೇ...
ಈ ಮೌನಕೀಗ ಮಾಧುರ್ಯವಾದೇ..
ಹೊರತಾಗಿ ನಿನ್ನ ನಾ ಖಾಲಿಯಾದೇ...
ಸಿಹಿ ಕಹಿ ಏನಾದರೂ ಪ್ರತಿ ಕ್ಷಣ
ಜೊತೆಯಾಗಿರು... ಜೊತೆ ಜೊತೆಯಾಗಿರು...

- AratiRajkumar

23 Mar 2020, 02:06 pm

ಬದುಕಿನ ಕನ್ನಡಿ

ಅಂಧಕಾರನವ
ನಿಂದಿಸುವ ನಿಂದಕ,
ಅವನಿಂದಲೇ ಬದು
ಕು ಇಂದು ಸಾರ್ಥಕ,
ಅಂಧಕಾರದ ನಡುವೆ
ಹೊಳೆಯುವುದೇ ಕಾಯಕ,
ನಿಂದಕನವ ನೆಲೆಸುವ
ಯುಗ್ಮ ಕೇವಲ ಕ್ಷಣಿಕ,
ಹೊಳೆಯುತಿರು ಬಾಳಲಿ
ಅವ ನೆಲೆಸುವ ತನಕ.

ನಿಂದಕನವ
ಬದುಕಿನ ರಮಣೀಯ ಕನ್ನಡಿ,
ಓಡುವುದು ಅವನ ಕಂಡು
ಮನದಾಗ ಅಡಗಿಹ ರಾಡಿ,
ಅವನ ನುಡಿಗಳೇ ನಿನ್ನ
ಬದುಕಿಗೆ ದೈವ ನುಡಿ.

- Sunanda bai slv kavana channel

22 Mar 2020, 09:21 pm