Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಡೆಯಲಿ ನನ್ನ ದೇಹ ಮೆರವಣಿಗೆ.
ನಿಮ್ಮ ಮನಸ್ಸಿನ ಗಲ್ಲಿಗೆ.
ನಾಡ ದೇಶದ ಹಾದಿಗೆ.
ನನ್ನ ಪ್ರೀತಿ ಪಾತ್ರರ ಹೃದಯದ ಆ ಬೀದಿಗೆ.
ಅಳ ಬೇಡ ಅರಳಿ ನಿಲ್ಲು ನನ್ನ ಜೀವದ ಸಾವಿಗೆ.
ಛಲದ ಹಾದಿಗೀದಿಗೆ ಎದ್ದು ನಿಲ್ಲು ಮೆಲ್ಲಗೆ.
ಸಾವಿನ ಆ ಘಳಿಗೆಗೆ.
ನೋವು ತಾ ನೀ ಚಂದ್ರಕೆ.
- Abhishek yogi
31 Mar 2020, 07:59 pm
ಓ ನನ್ನ ಪ್ರೀತಿಯ ಒಲವಿನ ಗೆಳೆತಿಯೆ
ಹಿಡಿತವಿಲ್ಲದ ಮನಸ್ಸಿನಿಂದ ಏನೆಂದು ಬರೆಯಲಿ
ಬಾರದ ಮಾತುಗಳಿಂದ ಏನೆಂದು ಹೇಳಲಿ
ನಾ ಹೇಳುವ ಮಾತೊಂದು ಪ್ರೀತಿಯಲಿ
- GangaramHGadad
31 Mar 2020, 07:22 pm
ಪದಗಳಿಗೆ ಸಿಗದ ಓ ನನ್ನ ದೇವತೆ
ಯಾರಿಗೂ ಸಾಟಿಯಿಲ್ಲ ನೀ ತೋರಿಸುವ ಮಮತೆ
ಮೋಸವಿಲ್ಲ ನೀನು ತೋರಿಸುವ ಪ್ರೀತಿಯಲ್ಲಿ..
ಕಪಟವಿಲ್ಲ ನೀನು ತಿನ್ನಿಸುವ ತುತ್ತಿನಲ್ಲಿ ..
ದುರಾಸೆಯಿಲ್ಲ ನಿನ್ನ ತ್ಯಾಗದಲ್ಲಿ..
ಕೋಟಿ ನಮನ ನನ್ನ ಕವಿತೆಯಲ್ಲಿ......
- GangaramHGadad
31 Mar 2020, 07:15 pm
ನಾ ಕಣ್ಣು ಬಿಟ್ಟು ಜಗತ್ತು ನೋಡುವ ಹೊತ್ತಿಗೆ ಅಪ್ಪ, ಬಿದಿರಿನ ರಥವೇರಿ ಪಶ್ಚಿಮ ದಿಗಂತದಲಿ ಅಸ್ತಂಗತನಾಗಿದ್ದ.
ಅಪ್ಪ ಇರುವಷ್ಡು ದಿವಸ ಊರಜನರ ಮಾನ ಮುಚ್ಚುವ ಕೆಲಸವನ್ನು ನಿಯತ್ತಾಗಿ ನೀಗಿಸಿದ್ದ.
ಬಟ್ಟೆ ಹರಿದ ಮೇಲೆ ಊರ ಜನ ಅಪ್ಪನನ್ನು ಮರತೇ ಹೋಗಿದ್ದರು.
ಅಪ್ಪನ ಹೆಸರಲ್ಲಿ ಯಾರೂ ಒಂದು ತುತ್ತು ಅನ್ನ ಕೊಡುವದಿಲ್ಲ ಎಂಬ ಸತ್ಯ ಅವ್ವಳಿಗೆ ತಿಳಿದು ಹೋಗಿತ್ತು.
ಅಜ್ಜಿ-ಅವ್ವ , ಹಾವು ಮುಂಗುಸೀಯ ಪಾತ್ರವನ್ನು ಯಾವ ತಪ್ಪೂ ಇಲ್ಲದಂತೆ ಮಾಡಿ ಮುಗಿಸಿದ್ದರು.
ಅಪ್ಪನ ಮೂರು ಪಳಿಯುಳಕೆಗಳನ್ನು ಅವ್ವ ಹೆಗಲ ಮೇಲೆ, ಟೊಂಕದಲ್ಲಿ, ಕೈಯಲ್ಲಿ, ಹಿಡಿದು ಸಾಗಿದ್ಲು.
ಸೂರ್ಯ ನೆತ್ತಿ ಏರಿ ಪಶ್ಚಿಮದಲ್ಲಿ ಡುಮಕಿ ಹೊಡೆಯುವವರೆಗೆ ಅವ್ವ ಕರಿ ನೆಲದ ಸೇವೆ ಮಾಡಿದ್ಲು.
ತಾಯಿ ಸತ್ತ ಮೇಲೆ ತವರಿಗೆ ಎಂದೂ ಹೋಗಬಾರದವ್ವ ಎಂಬ ಪದ ಜೋಕಾಲಿ ತೂಗಿಕೊಂಡು ಹಾಡುತ್ತಿತ್ತು.
ಅವ್ವಳ ಅಣ್ಣಂದಿರು ಐಸ ಮಾತ ಹೇಳಿ ನೈಸಾಗಿ ಗುಬ್ಬಿ ಗೂಡು ಕಿತ್ತು ರಸ್ತೆಗೆ ಎಸೆದಿದ್ದರು.
ಮೂರು ತುತ್ತಿನ ಚೀಲ ತುಂಬಿಸಲು ಅವ್ವ ಬಿಸಿಲಿಗೆ ಮೈ ಒಡ್ಡಿ ಕಪ್ಪು ಸುಂದರಿಯಾಗಿದ್ಲು.
ನಮ್ಮ ಮೂರು ಜನರ ಬದುಕು ಕಟ್ಟಿಕೊಳ್ಳಲು ಅವ್ವ ಕಲ್ಲು ಮಣ್ಣು ಹೊತ್ತಿದ್ದಳು.
ಅಪ್ಪ ಬಾನಂಗಳದ ನಕ್ಷತ್ರವಾಗಿದ್ರೆ ಅವ್ವ ನಮ್ಮ ಜೊತೆ ಇರುವ ಜೀವಂತ ಕಪ್ಪು ನಕ್ಷತ್ರವಾದಳು.
- Siddugouda
31 Mar 2020, 05:32 pm
ಮನವೃಕ್ಷ ಟಿಸಿಲ
ಸೀಳಿ ಹಾರಿ
ನಭದಲಿ ನಗತಲಿದ್ದ
ಚಿಕ್ಕಿಮೊಗ್ಗ
ಕುಕ್ಕಿತುಟಿರಸ ಹೀಂಟಿ
ಆಸೆಗನಸಾ
ರೆಕ್ಕೆ ಕಟ್ಟಿಕೊಂಡು
ಎದೆಯೊಳು
ದೀಪಹಚ್ಚಿಕೊಂಡ
ಚೇಕಡಿ ಹಕ್ಕಿ ನಾ
- samna
31 Mar 2020, 03:06 pm
ಅಂದು ಯುವಕರು ಮನೆಯಲ್ಲಿಯೇ
ಕುಳಿತರೆ ಹೇಳುತ್ತಿದ್ದರು ನೀನೊಬ್ಬ ಸೋಮಾರಿ....
ಇಂದು ಅದೇ ಹಿರಿಯರು ಹೇಳುತ್ತಿದ್ದಾರೆ
ಹೊರಗಡೆ ಹೋಗಬೇಡ ಇದೆ ಕರೊನಾ ಹೆಮ್ಮಾರಿ.....
ಜಗದ ಜನತೆಯಲ್ಲಾ ಹಾಕುತ್ತಿದ್ದಾರೆ
ಚೀನಾ ದೇಶಕ್ಕೆ ಛೀಮಾರಿ......
ಏನಾದರೂ ಆಗಲಿ ಮನೆಯಿಂದ
ಹೊರಗೆ ಕಲಿಡಬೇಡಿ ಯಾಮರಿ....
ನಮ್ಮ ದೇಶದ ಪ್ರಧಾನಿ ಜನತೆಯಲ್ಲಿ
ಹೇಳುತ್ತಿದ್ದಾರೆ ಸಾರಿ ಸಾರಿ.....
ನೀವೆಲ್ಲಾ ಮನೆಯಲ್ಲಿ ಇದ್ದರೆ ತೋರಿಸಬಹುದು ಕೋರೋನ ವೈರಸಗೆ ದಾರಿ ..... basavaraj p m
- Basavaraj Nayak
31 Mar 2020, 03:00 pm
ಓ ನನ್ನ ಪ್ರೀತಿಯ ಒಲವಿನ ಗೇಳತಿಯೇ
ಹಿಡಿತವಿಲ್ಲದ ಮನಸ್ಸಿನಿಂದ ಏನೆಂದು ಹೋಗಳಲಿ
ಬಾರದ ಮಾತುಗಳಿಂದ ಏನೆಂದು ಬರೆಯಲಿ
ಸಾಕದ ಮೌನಕ್ಕೆ ಅರ್ಥ ಕಲ್ಪಿಸುವವಳು ನೀನಾದರೆ
ನಾನು ಹೇಳುವ ಮಾತೊಂದು ಪ್ರೀತಿಯಲಿ
- GangaramHGadad
31 Mar 2020, 11:38 am
ಕೊರೊನಾ ಮಾರಿಯೆ! ಮಸಣದ ಮಾಯೆಯೆ!
ಯಮನ ಮಗಳೆ! ಸಾವಿನ ಗುತ್ತಿಗೆಧಾರಿನಿಯೇ!
ಮನು ಕುಲದ ಮೇಲೆ ಎಷ್ಟು ಜನುಮಗಳ ದ್ವೇಷ?
ಬಡವ-ಬಲ್ಲಿದ, ದೀನ-ದಲಿತರ ಮೇಲೆ ಏಕೆ ರೋಷ?
ಬಡವರ ಕಷ್ಟದ ಒಂದೊಪ್ಪತ್ತು ತುತ್ತಿನ ಅನ್ನ ಕಸಿದೆ
ಅನ್ನ ಅರಸಿ ಹೋದವರ ಬಾಳಿಗೆ ಬೇತಾಳಿನಿಯಾದೆ
ಹೊಂಚು-ಸಂಚು ಮಾಡಿ ತೋಡಿದೆ ಸಾವಿಗೆ ಖೆಡ್ಡ
ಮಕ್ಕಳು-ಮರಿ, ಮುದಕ-ತದಕರ ಬೀಳಿಸಿದೆ ಅಡ್ಡಡ್ಡಾ
ಏ ಮಾರಿ,
ನೀ ಸೈಲಂಟ್ ಭೂಮರಾಂಗ್ ಕಿಲ್ಲರ್ ಹೇಡಿ
ದಮ್ಮ ಇದ್ರೆ ಎದುರಿಗೆ ಬಂದ ಯುದ್ಧ ಮಾಡು
ನಮ್ಮವರನ ಕೊಲ್ಲಾಲು ನಮ್ಮವರನ್ನೇ ಗುರಾಣಿ ಮಾಡಿ
ನಮ್ಮ ಲಾಕಡೌನ್ ಪ್ಲಾನಗೆ ನೀ ನಡೆ ನಡೆ ನಿನ್ನ ಮನೆಕಡೆ
ಏ ಮಾರಿ...,
ಮಂಗಳನ ಅಂಗಳದಲಿ ರೋಬಟ್ ಇಳಸಿವಿ
ಎಕೆ ೪೭, ಪಿರಂಗಿ ನಳಿಕೆಗಳಿಗೆ ಗುಂಡು ತುಂಬಿವಿ
೧೦೦ ಭಾರಿ ಭೂಮಿ ಸುಡುವಷ್ಷು ಅಣುಬಾಂಬ ಇಟ್ಟಿವಿ
ಒಂದ ಬಾರಿ ನೀ ಕಣ್ಣಿಗೆ ಬಿದ್ರ ಉಡಿಸ ಮಾಡಿಬಿಡತಿವಿ
- Siddugouda
31 Mar 2020, 08:08 am
ಬದುಕೆಂಬ ಬಂಡಿಗೆ
ಬಡತನದ ಗೆದ್ದಲು ಹಿಡಿದಾಗ.....
ಎಲ್ಲರೂ ತಿರಸ್ಕಾರ ಭಾವದಿಂದ ನೋಡುವರು.
ಗೆದ್ದಲು ಹೊದ್ದು
ಗೆದ್ದು ಬಂದಾಗ ಪುರಸ್ಕಾರ ಸನ್ಮಾನ
ಕೊಡುವರು.
ಧರ್ಮದ ಮಾರ್ಗದಿ ಗೆದ್ದು
ಬಂದವರಿಗೆ ಬೆನ್ ತಟ್ಟಿ ಪ್ರೋತ್ಸಾಹಿಸಿ
ಅಧರ್ಮದ ಮಾರ್ಗದಿ ಗೆದ್ದು
ಬಂದವರಿಗೆ ಒದ್ದು ಬುದ್ದಿ ಕಲಿಸಿ.
ಹಣ ಹಣ ಎಂದು ಹೆಣವಾಗುವ ಬದಲು
ಗುಣವಂತನಾಗಿ ಬಾಳಲು ಕಲಿ ಮೊದಲು
ಹಣಕ್ಕೆ ಕೊಡುವ ಬೆಲೆ
ಗುಣಕ್ಕೆ ಕೊಟ್ಟರೆ ....
ಈ ಧರೆಯೆ ಸ್ವರ್ಗದ ನೆಲೆ.
- lakshman
30 Mar 2020, 09:47 pm
ಮನದೊಳಗೆ ಮಾಯೆದಿ ಹುಟ್ಟಿ
ಅಹಮಗ್ನಿಯೆಂಬುದು ಎದೆಮೊಗ್ಗ ಸುಡತ
ತನಬಳ್ಳಿಗೂ ಚಾಚು ಉರಿತಟ್ಟಿ
ಉಸಿರ ಬೆರಕಿಲೆ ಉರಿತಿದೆ ಜೀವ ಹಿಂಡತ
ನಗೆಹಕ್ಕಿಯು ರೆಕ್ಕೆಬಡಿವ ಅಣಿ ಇಟ್ಟು
ನೆಮ್ಮದಿ ಕಡಲೇರಲೆ ತಳೆತಿದೆ ಹೊರಹೊಸಿಲಿಗೆ
ಮಮತೆಹರಿಣಿ ಹೊಂಡತಿದೆ ಬಿಟ್ಟು
ಬಯಸಿ ಯಾವದೊ ಶಾಂತವೃಕ್ಷದ ಟಿಸಿಲಿಗೆ
ಉರಿತಾಳದಿಷ್ಟಂದ ಅಂದುಕೊಂಡಿದ್ದೆ
ಆಗಾಗ ಪ್ರೀತನೀರ ಎರಚುತ್ತಿದ್ದೆ ಅಗ್ನಿ ಹಿಂಗತಿಲ್ಲ
ಚಿತ್ತಶಾಂತಕೆ ರೇಖು ಕರಗುತ್ತದೆಂದಿದ್ದೆ
ಎದೆಕಂಬಳಿ ಮುಚ್ಚಿ ಅಪ್ಪಿದರು ಸಹ ಕುಗ್ಗತಿಲ್ಲ
ಕಟ್ಟಿಕೊಂಡ ಭ್ರಮೆಹುತ್ತ ಕೆಡವಿ
ಮನಸ ಸುಡುವದ ಬಿಟ್ಟು ತಳೆಬಾರದೇ ಒಲವೇ?
ಒಳಗಿಗೆ ತೊಟ್ಟು ಬೆಳಗ ಒಡವಿ
ಪ್ರೀತಿತೊರೆಯಾಗಿ ಹರಿಬಾರದೆ ನನ್ನೊಲವೇ?
- samna
30 Mar 2020, 07:05 pm