Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೆರಣೆ

ನಂಬಿಕೆ ಹರಡಲಿ...
ವಿಶ್ವಾಸ ಬೆಳಗಲಿ..
ದ್ವೇಷವೆಂಬ ಕತ್ತಲು ಸರಿದು,
ಪ್ರೀತಿಯ ಬೆಳಕು ಹರಿಯಲಿ…

ಸಹೋದರತೆ ಹರಡಲಿ…
ವಾತ್ಸಲ್ಯತೆ ಬೆಳಗಲಿ…
ಜಾತೀವಾದವೆಂಬ ಕತ್ತಲು ಸರಿದು,
ಮಾನವೀಯತೆಯ ಬೆಳಕು ಹರಿಯಲಿ..

ಧರ್ಮ ಹರಡಲಿ..
ನ್ಯಾಯವು ಬೆಳಗಲಿ…
ಭ್ರಷ್ಟತೆಯೆಂಬ ಕತ್ತಲು ಸರಿದು,
ಅಭಿವೃಧಿಯ ಬೆಳಕು ಹರಿಯಲಿ…

ಆತ್ಮವಿಶ್ವಾಸ ಹರಡಲಿ ..
ಆಶಾಜ್ಯೋತಿ ಬೆಳಗಲಿ ..
ಅಜ್ಞಾನವೆಂಬ ಕತ್ತಲು ಸರಿದು ,
ವಿಜ್ಞಾನದ ಬೆಳಕು ಹರಿಯಲಿ ..
ಗುರು.

- Guru.B

19 Mar 2020, 11:23 pm

ಕಾಮಿಸ್ವಾಮಿ ಮತ್ತು ದೇವ ಪಟ್ಟ

ಪಟ್ಟದಿ ಕಟ್ಟಳೆಯ ಕಟ್ಟುವಾಗಾ
ತಪ್ಪನಾ ಮಾಡಿದಲ್ಲಿ ಅಟ್ಟೀ
ನಾಯಿಯನ ಅಟ್ಟಿದಂತೆನುವ ರೂಢಿ ಮಾತು
ಭಕ್ತಗಿವಿಗಳಲಿ ಗುನಗುಟ್ಟೀ

ಪಿಂಡ ಬಿಡಿಸಿ  ಪಟ್ಟದೇವರಿಂದಾ
ಬದುಕಿದ್ದಾಗಲೆ ತಾಯ್ತಂದೆಗೆ ಅಲ್ಲ ಕಂದಾ
ಪಡೆದ ಹುಟ್ಟು ಸಾಮಾಜಿಕಾ
ಆರಳಿದು ತೊಟ್ಟು ಮೂರರ ಮುಕುಟಾ

ಬಿದ್ದು ಕಾಲಿಗೊ ಮುಂದಿನ ನೆಲಕೊ
ಕೊಟ್ಟ ಹತ್ತಿಪ್ಪತ್ತ ರೂಪಾಯೆ
ಇಟ್ಟಿಗೆ ಜೆಲ್ಲಿ ಸಿಮೆಂಟು ಕಬ್ಬಿಣ ಮರಳಾಗೀ
ಬದಲಾಗಿ ಇಟ್ಟ ಹೆಸರೆ ಮಠ

ಜೀವವಿಲ್ಲದ ವಸ್ತುಗಳ ಗಾಳಾ
ಜೀವಕೆ ದೊರೆತಂತೆಲ್ಲಾ ತುಸು ಬಹಳಾ
ಮೋಹದ ಮಾಹೆ ಹುಟ್ಟುವಳಾ
ಭಕ್ತರನ್ನವ ಗಂಟಿಕ್ಕಿ ಪೀಳಿಗೆಗೆ ಕಟ್ಟುವಳಾ

ಬಾಲಂಗೋಚಿಗಳಿಗೆ ತಿಳಿದಿತ್ತೊ
ತಿಳಿಯದಿತ್ತೊ ಬಲ್ಲವರ್ಯಾರು?
ಬೇಕಿತ್ತಷ್ಟೆ ಪಟ್ಟಭದ್ರತೆಯ ಊಳಿಗಾ
ನಂಬಿಕೆ ಭಕ್ತಕಡಲ ಕತ್ತಹಿಸುಕಿ

ಗುರಿಧ್ವೇಯ ದಾರಿದಿಕ್ಕ ತಪ್ಪೀ
ಎತ್ತಲೋ ಹೊರಡುವದು ಧರ್ಮದೋಣೀ
ನೆಲ ಎಚ್ಚರೆದ್ದು ಬೀಸಿ ಬಿರುಗಾಳಿಕ್ಕೀ
ಮುಳುಗು ತೇಲಿನ ಆಟವದು ಏಣೀ

ಬಲ್ಲವರು ಯಾರು ಪ್ರಕೃತಿ ಗುಟ್ಟಾ
ಇದಿರು ಈಜುವ ಧೈರ್ಯ ಯಾರಿಗುಂಟು?
ಆರಳಿದವ ತೇಲಿ ಪಡೆದ ದೈವ ಪಟ್ಟಾ
ಉಳಿದವಗಿದ್ದೇ ಇದೆ ಕಾಮಿಪಟ್ಟಾ



 

- samna

19 Mar 2020, 02:05 pm

ಬರೀ ಕಲ್ಪನೆ

ಸುಂದರ ಕತ್ತಲಲಿ ಕವಿ ನಾನಾಗಿರುವೆ ನಿನ್ನಿಂದಲೆ...
ತುಸು ಬಂದು ತಿಳಿಸುವೆಯಾ ನಿನ್ನ ಪರಿಚಯವನ್ನು...
ಕವಿ ಕಂಡ ಕನಸಿನ ಪ್ರತಿ ಸಾಲಿನಲ್ಲು ನೀನದೆ ವರ್ಣನೆ ಅದನ್ನೋಮ್ಮೆ ನೀ ಬಂದು ವಿವರಿಸುವೆಯಾ...
ಸುಂದರ ತಾರೆಗಳು ತಿಳಿಸುತ್ತಿವೆ ನೀನ್ನ ಕಣ್ಣೋಟವನ್ನು...
ತಂಪು ತಂಗಾಳಿಯು ನೀಡುತಿದೆ ನೀ ಬರುವ ಸೂಚನೆಯನ್ನು...
ನೀ ಬಂದು ನಿಂತು ತುಸು ಉಸಿರು ಸೋಂಕಿಸಿ
ಮರು ಜೀವವ ನೀಡೆನಗೆ...❤❤❤

- Chaitra Kulkarni

18 Mar 2020, 11:24 pm

ನನೊಳಗಿರುವ ನಾನು

ನನಂತೆ ಕಂಡ ಆ ಬಿಂಬ ಅರೆ ಬಿಂಬವೇ
ಇಲ್ಲ ನನೊಳಗಿರುವ ನಾನು ಅವಳು

ಒಂದು ದಿಕ್ಕಲಿ ಅವಳ ನಗು
ಮತೊಮ್ಮೆ ಮುನಿಸು
ಮಗದೊಮ್ಮೆ ಮೌನ

ಯಾಕೆಂದು ಪ್ರಶ್ನಿಸಿದೆ ಉತ್ತರವೆಂದು ಅವಳು
ತೋರಿದಳು ತನ್ನ ಬೆರಳ ಚಾಚಿ ನನ್ನ ಎದುರು


- ಹಂಸ ಕುಲಾಲ್✍️✍️✍️

- ಹಂಸವೇಣಿ

18 Mar 2020, 11:13 pm

...ಹುಚ್ಚು ಹೃದಯ...

ನಿನ್ನ ಜೊತೆಗೆ ನಾನು
ಇರುವ ಆಸೆ ಎಂದೆಂದೂ
ನಿನ್ನ ಆ ಹುಚ್ಚು ಪ್ರೀತಿಯನ್ನು
ನಾ ಸವಿಯುವಾಸೆ ಮೂಡುತ್ತಿದೆ...

ನನ್ನ ಕಣ್ಣಿನ ರೆಪ್ಪೆ ಮುಚ್ಚಲೂ
ಕಾಡುವ ಕನಸ್ಸು ನಿನ್ನೊಳವು
ಮಾತು ಬರದ ಪಿಸು ಮಾತಿಗೆ
ಸ್ವರದ ಸಾಲುಗಳೇ ನೀನಾಗಬೇಕು.....

ನನ್ನ ಕಣ್ಣಿನ ರೆಪ್ಪೆ ತೆರೆದ ಕ್ಷಣವೇ
ತಿಳಿಯಬೇಕು ನಿನ್ನ ಹೃದಯಕ್ಕೆ
ಪೂರ್ಣ ವಿರಾಮ ನೀಡದ ನನ್
ಈ ಕಾಟಕ್ಕೆ ನೀನೇ ಹಾಕುದಾರನಾಗಬೇಕು....

ನಿನ್ನ ಆ ನಗು ಯವಾಗಲ್ಲು
ನನ್ನ ನಗುತ ಇರಬೇಕು
ನಿನ್ನ ಮುದ್ದು ಮನಸ್ಸಿಗೆ
ನಾನೇ ಯುವರಾಣಿಯಾಗಿರಬೇಕು....

ನಿನ್ನ ನೋಟಕ್ಕೆ ನಾನೇ ಶರಣಾಗಿರುವೆ
ಇನ್ನು ಕಾಡುವ ಆಸೆಯೇ ನಿನಗೆ
ನಿನ್ನ ಕಣ್ಣುವೆಂಬ ಬಲೆಯೊಲಿಗೆ ಬಚ್ಚಿಟಿಬಿಟ್ಟೆ
ಈ ಹುಚ್ಚು ಹೃದಯ ನೀನೇ ಬೇಕೆಂದು ಬಯಸುತ್ತಿದೆ...

- Ajay

18 Mar 2020, 07:41 pm

ಕಲ್ಪನಾ ಕವಿಯ ಬರಹ

ಎದೆಯೋಳಗಡಗಿವೆ ಅದೆಷ್ಟೋ ಪಿಸುಮಾತುಗಳು
ಕಾಣದೆ ಮುಚ್ಚಿಹೋಗಿವೆ ಅದೆಷ್ಟೋ ಸಿಹಿ ನೆನಪುಗಳು
ಕಾಡುತಿವೆ ಪ್ರತಿನಿತ್ಯ ನಿನ್ನ ಸುಂದರ ಕಣ್ಣೋಟಗಳು
ನನ್ನೆದೆಯ ಶಬ್ಧವೇ ಮೌನವಾಗಿಸುವ ನಿನ್ನ ಸಾಂತ್ವನದ ನುಡಿಗಳು
ನಿನ್ನೋಡನೆ ಪ್ರತಿನಿತ್ಯ ಅದೆಷ್ಟೋ ಹುಸಿಮುನಿಸುಗಳು
ನಿನ್ನ ಕಂಡಾಗ ಹಾರುವವು ಎದೆಯಲ್ಲಿ ಬಣ್ಣದ ಚಿಟ್ಟೆಗಳು
ತಂಗಾಳಿಯು ನೀಡುತಿದೆ ನಿನ್ನ ಬರುವಿಕೆಯ ನೀರಿಕ್ಷೆಗಳು
ಕಂಡೋಡನೆ ತನ್ನೆಡೆಗೆ ಆಕರ್ಷಿಸುವ ಹೋಳೆವ ನಯನಗಳು
ನಿನ್ನ ನೆನೆಯುತ ಬರೆದಿರುವೆ ಎಷ್ಟೋ ಕವಿತೆಗಳು
ಪ್ರತಿಕ್ಷಣವು ನಿನ್ನ ನೋಡ ಬಯಸಿದೆ ನನ್ನ ಕಣ್ಣುಗಳು.....❤❤❤

- Chaitra Kulkarni

18 Mar 2020, 02:55 pm

ಪ್ರೇಮದ ಕಂಬನಿ,,,,,,

ಹಸಿರು ಬಳ್ಳಿಯ ಮೇಲೆ ,,,,,
ಅರಳಿ ನಿಂತ ಮಲ್ಲಿಗೆ ಹೂ ಒಂದು ಹೇಳಿತು,,,,,,,,,
ನನ್ನ ಈ ಬದುಕು,,,
ಹೊತ್ತು ಮುಳುಗುವ ತನಕ ..

ಆದರೆ ನಾನು ತುಂಬಾ ಪ್ರೀತಿ ಮಾಡೋ ,,,
ನನ್ನ ಅಮ್ಮು ಹೇಳಿದ್ಲು
ನಮ್ ಪ್ರೀತಿನು ಇದೆ ತರಾ ಆಗುತ್ತೆನೂ ಅಂತ,,,,,,


- ದೀಪವಿ

18 Mar 2020, 12:11 am

ವೇದನೆ

ಬಾಲ್ಯದಲ್ಲಿ ವಿದ್ಯಾ ಸಿಗಲಿಲ್ಲ...
ಬದುಕಲ್ಲಿ ಐಶ್ವರ್ಯ ಬರಲಿಲ್ಲ..
ನೀ ಮತ್ತೇಕೆ ಇರುವೆ ಆಯಸ್ಸು..
ಜೊತೆ ಇರಲು ಒಪ್ಪುತ್ತಿಲ್ಲ ಮನಸ್ಸು...!!

- Harish Gowda

17 Mar 2020, 11:15 pm

ಸಿಹಿ ನೆನಪು

ಅಂದೊಮ್ಮೆ
ಬಚ್ಚಿಟ್ಟ ಸ್ನೇಹಿ ನೀ
ಇಂದೇಕೋ
ಕೈ ಚಾಚಿ ಹಾರಿಸಬೇಕೆಂಬ
ಬಯಕೆ

- ಹಂಸ ಕುಲಾಲ್ ✍️✍️✍️

- ಹಂಸವೇಣಿ

17 Mar 2020, 11:14 pm

ಶೀರ್ಷಿಕೆ ರಹಿತ

ನನ್ನೇ ನಾ ಮರೆವೇ ಕ್ಷಣಕ್ಕೆ ಒಲವೇ
ಜೊತೆಗಿರಲು ನೀ ನನೊಂದಿಗೆ
ಅದೆಷ್ಟು ಚಂದವೋ ನಿನ್ನ ಸಾನಿಧ್ಯ
ದೂರ ನಡೆದರೂ ಬಿಡದೇ ಕಾಡುವೆ
ಉಸಿರಾಗಿ ಈ ಸಂಗಾತಿ ಜೊತೆಗೆ ನಡೆವೆ,,,

ಪಾನಿಪೂರಿ ನಿನಗಾಗಿ

- ಹಂಸ ಕುಲಾಲ್ ✍️✍️✍️

- ಹಂಸವೇಣಿ

17 Mar 2020, 11:09 pm