Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರಕೃತಿ....

ಓ‌ ಪ್ರಕೃತಿ ಮಾತೆಯೆ,
ಈ ಜಗದೊಳು ನೀನೆ ಎಲ್ಲಾ,
ನೀನಿಲ್ಲದೆ ಇಲ್ಲಿ ಏನೂ ಇಲ್ಲ ,
ಈ ದುರಾಸೆ ಜನರಿಂದ ನಿನಗೇನೂ ಬೇಕಿಲ್ಲ,
ಆದರೆ ಈ ಜಗಕೆ ನೀನಿಲ್ಲದೆ ಗತಿಯಿಲ್ಲ......

.... ತಿಪ್ಪೇಸ್ವಾಮಿ....

- tippu

28 Mar 2020, 02:07 pm

ಕೊರೊನಾ ಕೊರೊನಾ

ಕೊರೊನಾ ನಿನಗೆ
ಕರುಣೆ ಇಲ್ಲವೇ?
ಮಾರಣಹೋಮ ನಡೆಸುತ್ತಿರುವೆ

ಮಂಗಳನ ಅಂಗಳಕ್ಕೆ ಕಾಲಿಡುವ ಕಾಲದಲ್ಲಿ
ಮನೆಯ ಅಂಗಳಕ್ಕೆ ಕಾಲಿ ಡದಂತೆ ಮಾಡಿದೆ
ವಿಶ್ವದೆಲ್ಲೆಡೆ ನಿನ್ನ ಭಯ ಹರಡಿದೆ
ನಿನಗೆ ಕರುಣೆ ಇಲ್ಲವೇ

ಶಾಲಾ ಕಾಲೇಜು ಆಫೀಸ್ ಗಳಿಗೆ ರಜೆ
ಹೊರಗೆ ಬರದಂತೆ ಸಜೆ
ಜನರಿಂದ ದೂರಾಗಿಸಿ ದೇ ಮಜೆ
ನಿನಗೆ ಕರುಣೆ ಇಲ್ಲವೇ?

ಹಾದಿ ಬೀದಿ ಗಳೆಲ್ಲ ಖಾಲಿ
ನಿಂತಿದೆ ಕಾರು ಬೈಕ್ ರೈಡ್ ಜಾಲಿ
ಬಡವರಿಗೆ ಸಿಗದಂತೆ ಮಾಡಿದೆ ಕೂಲಿ
ನಿನಗೆ ಕರುಣೆ ಇಲ್ಲವೇ?

ಭಯ ಭೀತಿಯಲ್ಲಿದೆ ಜನರ ಜೀವನ
ಕೆಮ್ಮಿದರೂ .. ಸೀನಿದರೂ ನೀನಿರುವೆ ಎಂಬ ಅನುಮಾನ
ಹೇ! ಹೆಮ್ಮಾರಿ ನಿಲ್ಲಿಸು ನಿನ್ನ ಯಾನ

ಷೇರು ಮಾರುಕಟ್ಟೆ ಬಿದ್ದೋಗಿದೆ
ಜಗತ್ತಿನ ಆರ್ಥಿಕತೆ ನೆಲಕಚ್ಚಿದೆ
ಅಗತ್ಯ ವಸ್ತುಗಳ ಬೆಲೆ ಗನಕ್ಕೇರುತ್ತಿದೆ
ನಿನಗೆ ಕರುಣೆ ಇಲ್ಲವೇ?

ದೇವಸ್ಥಾನಗಳ ಬಾಗಿಲು ಮುಚ್ಚಿವೆ
ದೇವರು ವೈದ್ಯರ ರೂಪದಲ್ಲಿ ಜನರ ಆರೈಕೆ ಮಾಡುತ್ತಿದ್ದಾರೆ
ನಿನಗೆ ದೇವರ ಭಯವಿಲ್ಲವೇ?

ನಿನ್ನ ನಿಯಂತ್ರಿಸಲು ನಾನಾ ಕಸರತ್ತು
ದೇಶಕ್ಕೆ ಲಾಕ್ ಡೌನ್ ಎಂಬ ಷರತ್ತು
ಕೊ ರೊನಾ ನಿಲ್ಲಿಸು ನಿನ್ನ ಕರಾಮತ್ತು.
lakshman madival
8197706289



http://bit.ly/MookaManasu

- lakshman

28 Mar 2020, 12:05 pm

ಹೆಣ್ಣಿನ ಗೌರವ

ಹೆಣ್ಣನ್ನು ಗೌರವಸುವ

ಗುಣವಿಲ್ಲದವನಿಗೆ,

ಅವಳನ್ನು ಪ್ರೀತಿಸುವ

ಯೋಗ್ಯತೆಯೂ ಇಲ್ಲ,,,,ದೇವ್

- ದೇವು,,,,,,ಕನ್ನಡಿಗ

27 Mar 2020, 10:35 pm

ಏಳುಸುತ್ತಿನ ಕೋಟೆ

ಏಳುಸುತ್ತಿನ ಕೋಟೆ ಲೈಟ ಬೆಳಕಿಗೆ ಸಿಕ್ಕಿ
ಈಗ ಫಳಫಳನೆ ಹೊಳೆಯುತಿದೆ
ಹಳ್ಳಿ ಸೇವಂತಿ ಘಮಾಡಿಸತವ ಕಂಪನಿಕ್ಕಿ
ದರಕಟ್ಟೆ ಹೂವ್ವ ಮಾರಳೆಯುತಿದೆ

ಕನಕಾಂಬರಿ ಬಿರಿಕಣ್ಣ ತೆರೆದು ಮೌನದಲಿ
ದೇವ ಪಾದದಲಿ ಮಾತ ಸವಿತಿದೆ
ಮನುಜ ಬಟ್ಟೆ ಉಟ್ಟದ್ದು ಬೀಮ ಹಿಡಿಂಬನ ತರಿದದ್ದು
ತಿಪ್ಪೆರುದ್ರ ನ್ಯಾಯತಕ್ಕಡಿ ತೂಗಿದೆ

ಮೌರ್ಯಹೆಜ್ಜೆ ತುಳಿದ ಖಿಣಿ ಖಿಣಿ
ಬೆನ್ನ ಖತ್ತೀಗೆ ಬಲಿ ಕೋಟೆಸಿಂಗ ಮದಕರಿ
ಹೈದರನ ಎದೆಗೆ ಇಟ್ಟು ನಡಕ ಧ್ವನಿ
ಎಸ್ಸೆನ್ನರ ವರ್ಧನ ಬದುಕಿಟ್ಟ ಕೋಟೆಧರಿ

ಕಿಚ್ಚಹಬ್ಬೀ ಸುಬ್ಬರಾಯರ ದುರ್ಗಾಸ್ತಮಾನ
ಕಾಯುತಿಹ  ಓಬವ್ವನ ವನಕೆ ಕಿಡಿಕಾರಿದೆ
ಸೀಳಿ ಅಸಂಸ್ಕೃತಿ ಉಳಿಸುತ ಹೆಣ್ಣಮಾನ
ದುಂಬಿ ಗುಯ್ ಗುಟ್ಟಿದಂತೆ  ಪುತ್ಥಳಿ ನುಡಿದಿದೆ

- samna

27 Mar 2020, 08:49 pm

ಪ್ರಕೃತಿ ಮಾತೆ......

ಓ‌ ಪ್ರಕೃತಿ ಮಾತೆಯೆ...
ಕ್ಷಮಿಸಿ ಬಿಡು ನಮ್ಮ,
ಇದು ನಾವು ಮಾಡಿದಾ ಕರ್ಮ,
ಅರಿಯದಾದೆವು ನಾವು,
ಈ ಜಗದಿ‌ ಏಲ್ಲಾ ಜೀವಿಗೂ ಉಂಟು ಸ್ವಾತಂತ್ರ್ಯ,
ಎಲ್ಲಾ ಪ್ರಾಣಿ ಪಕ್ಷಿಗಳ ಕಟ್ಟಿ ಹಾಕಿ ಮಾಡಿದೆವು ಕುತಂತ್ರ,
ಅದಕಾಗಿ ನೀ ಮಾಡಿದೆ ನಮ್ಮ ಬಾಳು ಅತಂತ್ರ ಅತಂತ್ರ....
ಇನ್ನಾದರೂ ತಿಳಿಸಿಯಬೇಕಿದೆ ಜಗವು,
ಜಗದೊಡತಿಯು ಮಾತೆ ಪ್ರಕೃತಿಯು,
ಆಕೆಯೊಲುಮೆ ಇಲ್ಲದಿರೆ,
ಜಗವೆಲ್ಲಾ ವಿಕೃತಿಯು......
........ತಿಪ್ಪೇಸ್ವಾಮಿ......

- tippu

27 Mar 2020, 07:52 pm

ಅಣ್ಣಾ

ನಮ್ಮ ಅಣ್ಣಾ ನ ಪ್ರೀತಿ ಅನ್ನೋದು ಅಮ್ಮನ ಮಡಿಲು ಇದ್ದಾಗೆ.
ಅಕ್ಕರೆಯ ಅರಸ ಅವನು
ಗುಣದಲ್ಲಿ ಚಿನ್ನ-ಬಂಗಾರ ಅವನು
ನನ್ನ ಶಕ್ತಿ ಅವನು.
ಏನೆ ಆಗಲಿ ಎನೆ ಬರಲಿ ನಿನ್ನ ಜೊತೆ ನಾನ ಇದೀನಿ ಅನ್ನುವ ದೈರ್ಯ ಅವನು
ನಡಿಗೆಯಲ್ಲಿ ವಿರತನ ಶುರತನ ವನ್ನೂ ಮೀರಿಸಿದಾತಾನು ಅವನು.
✍️ ಅಣ್ಣಾ ನಿನಗೆ ನನ್ನ ಕೋಟಿ ಕೋಟಿ ನಮನಗಳು

- Iramma Iramma

27 Mar 2020, 04:01 pm

ನೋವುವಿನ ರಾತ್ರಿ

ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಬಿಕ್ಕಿ ಬಿಕ್ಕಿ ಅತ್ತ ರಾತ್ರಿ
ನೆನಪುಗಳ ಜೊತೆಗೆ ಜೀವನ ಮಾಡುತ್ತಿದೆ ಈ ನನ್ನ ಹೃದಯ
ರಾತ್ರಿ ಬಾನಿನ ನಲ್ಲಿ ಹುಟ್ಟುವ ಚುಕ್ಕಿ ಚಂದಿರ ನಿಗು ಗೊತ್ತು ಈ ನನ್ನ ನೋವು.
ನಿನಗೇಕೆ ಅರ್ಥವಾಗುತ್ತಿಲ್ಲ ಈ ನನ್ನ ಮನದ ನೋವು.
ಛೇ ಎಂತಹ ಪರಸ್ಥಿತಿ ನನ್ನದು ಸಾಕ ಎನಿಸಿದೆ ಈ ಜೀವನ . ✍️

- Iramma Iramma

27 Mar 2020, 03:44 pm

ಕಣ್ಮನ

ಹಚ್ಚ ಹಸಿರಾದ ಕಾನನ
ಹಕ್ಕಿಗಳ ಕಲರವ
ಮುಚ್ಚು ಮರೆ ಇಲ್ಲದ ಆಕಾಶ
ಹಾರುತಿಹ ಹಕ್ಕಿಗಳು
ಝುಳು ಝುಳು ಹರಿವ ನದಿ
ಹರಿಣಿ ಜಲಧಾರೆ
ಬಣ್ಣ ಬಣ್ಣದ ಹೂದೋಟ
ಕಣ್ಮನಕೆ ಸವಿಯೂಟ
ಕಂಪನ ತರಿಸಿದ ತಂಗಾಳಿ
ಬೆಸೆದ ಎದೆಗಳು
ಮುಳುಗತಿಹ ಹೊನ್ನ ಸೂರ್ಯ
ಶಶೋದಯಕೆ ತೆರೆದುಕೊಳ್ಳುವ
ಸವಿ ಸವಿ ಕನಸಗಳು

- samna

27 Mar 2020, 07:19 am

ಮರೆಯಲಾಗದ ನಿನ್ನ ನೆನಪು

ಹೇ ಕೇಳ ನನ್ನ ಒಡೆಯ..ನಿನ್ನ ನೆನಪು ನನ್ನ ಬೀಡ ದಂಗ ಕಾಡ್ತಾ ಇದೇ ವಶಿ ನನ್ನ ಸಂಗಡ ಕುಂತು ಕಷ್ಟ ಸುಖ ಮಾತಾಡ್ಬೇಕು ಅಂತ ನಿಂಗ ತಿಳೀತಾ ಇಲ್ವಾ ಹೇಳ ನನ್ನ ದೇವ್ರು.
ನಿನ್ನ ನೆನಪು ನನ್ನ ಬೀಡ ದಾಂಗ ಕಾಡ್ತಾ ಇದೆ ಒಮ್ಮ್ಯರ ನನ್ನ ಬೆಟ್ಟಿ ಆಗು .ಅಟ್ಟಿ ಮೇಲೆ ಕುಂತು ಕಷ್ಟ ಸುಖ ಮಾತಾಡವುನು .
✍️ಮರೆಯಲಾಗದ ನಿನ್ನ ನೆನಪು.

- Iramma Iramma

26 Mar 2020, 04:14 pm

...ಮೌನವಾಗಿತ್ತು ನನ್ನ ಮನ...

ನಾ ಬರೆಯುವ ಆಸೆ
ಸುಂದರವಾದ ಪುಟ್ಟ ಕವನ
ಅದಕ್ಕೆ ನಾ ಹೋದೇನು
ಏಕಾಂತವಿರುವ ಪುಟ್ಟ ವನ....

ಜೋರಾಗಿ ಬೀಸಿತು
ತಂಪಾದ ತಂಗಾಳಿ
ವಿರಳಗೊಂಡಿತು ನನ್ನ
ಸುಂದರವಾದ ತನುಮನ....

ಕೇಳದಂತಹ ಸುಗಮಧುರ
ಶಬ್ದದ ಗೀತೆಗಳ ಸಂಗೀತ
ಪುಟ್ಟ ಗಿಡ-ಮರಗಳಲ್ಲಿ
ಸುಂದರವಾದ ಸ್ವರಗಳ ಕಲರವ.....

ನಾ ಬರೆಯಲು ಬಂದ
ಪುಟ್ಟ ಕವನ
ನನ್ನನ್ನೇ ನಾ ಮರೆತು ಹೋದೆನು
ಮೌನವಾಗಿತ್ತು ನನ್ನ ಮನ......

- Ajay

25 Mar 2020, 06:21 pm