ಬರೆಯಲು ಮನಸಾಯಿತು
ಒಂದು ಕವನ
ಅದಕ್ಕೆ ಹೊದೆನ ಏಕಾಂತದ ವನ....
ಆಗಲೇ ಜೋರಾಗಿ ಬಿಸಿತು ಪವನ
ಪುಳಕ ಗೊಂಡಿತು ನನ್ನ ತನುಮನ
ಮರೆತೇ ಹೋಯಿತು
ನಾ... ಬರೆಯಲು ಬಂದ ಕವನ..
ಅದಕ್ಕೆ ಆಯಿತು ನನ್ನ ಮನ ಮೌನ....ದೇವ್
ಪ್ರಕೃತಿಯು ನಮ್ಮೆಲ್ಲರ ಜೀವತ್ಮವಾಗಿದೆ......
ಪ್ರಕೃತಿಯು ದೇವರು ನಮ್ಮೆಲ್ಲರಿಗೆ ಕೊಟ್ಟ ಅಮೂಲ್ಯ, ಉದಾತ್ತ, ಅದ್ಭುತ ವಾದ ಕೊಡುಗೆ.
ಹರಿಯುವ ನದಿಗಳು
ಸುಂದರವಾದ ಕಣಿವೆಗಳು
ಅದ್ಭುತ ವಾದ ಪರ್ವತ ಶ್ರೇಣಿಗಳು
ಸುಂದರವಾಗಿ ಹಾಡುವ ಪಕ್ಷಿಗಳು
ಶಾಂತವಾಗಿ ಹರಿಯುವ ಸಾಗರಗಳು
ನೀಲಿ ಆಕಾಶ
ಕಾಲಕ್ಕೆ ತಕ್ಕಂತೆ ಧರೆ ಯನ್ನು ತಂಪಾಗಿಸಲು ಬೀಳುವ ಮಳೆ .
ಪಾರ್ವತಗಳು --ನಮ್ಮನ್ನು ರಕ್ಷಿಸುವ ರಕ್ಷಾ ಕವಚ.
ಸಸ್ಯಗಳು-ಬದುಕಲು ಆಹಾರವನ್ನು ನೀಡುತ್ತವೆ.
ಜಲ-ನಮ್ಮ ಜೀವಾತ್ಮ ವಾಗಿದೆ
ಧರಿತ್ರಿ--ನಮ್ಮನ್ನು ಉಲ್ಲಿಸಿಕೊಳ್ಳುವ ಮಾತೆ ಅವಳು.
ಈ ದಿವಸಕಂತ ಕಾದು ಸಾಕಾಯ್ತು ಯಜಮಾನ
ಬರುವೆ ಎಂದ ನಿನ್ನ ಪತ್ರ ತಲುಪಿ ಸ್ಯಾನೆ ದಿನ ಆಗದ
ಇನ್ನೂ ಬರಲಿಲ್ಲಾವ ನೀ ಯಾತಕ ನನ್ನ ಒಡೆಯ?
ಆ ಯುದ್ಧದ ಸಬ್ಧ (ಶಬ್ಧ) ಇನೆಷ್ಟು ನೀ ಕೇಳಬೇಕೊ ಯಜಮಾನ
ಹೇ ಆಕಿ ಏನವ್ವ ನಿನ್ನ ಗಂಡ ಬರೋ ದಾರಿ ಕಾದಯ
ಅಯ್ಯೋ ಮಗಳೆ ನಾ ನುಡಿದ್ದಿದೆ ಅಂದೆ ನಿನ್ನ ತಲೆಗೆ ಹೋಗಿತೆ
ಸೈನಿಕ ಅವ ಎಂದಿದರು ಆ ಮಣ್ಣಗೆ ಹೋಗಕ್ಕೆ ಅಂತಾನೆ ಇರುವ
ನೀ ಬಾರಿ ಸಣ್ಣಕಿ ಹಣೆ ಪಟ್ಟಿ ನಿನ್ನೇ ಬರೆದು ಕಂಡಿ
ಅವನ ಆರಿಸಕ್ಕ ಹೋದಿ ಅವ್ನ ಬಿಟ್ಟು ಬೇರೆ ಹುಡುಗನ ಕಟ್ಟಿಕೊಂಡು ನಡಿಯೋ ದಾರಿ ಎಷ್ಟ್ ಚಂದ ಇತ್ತೆ ಮಾರಾಯ್ತಿ,
ಈಗ ಗಂಡ ಒಂದು ಕೂಸೆಂದು ಮಹಾರಾಣಿ ಹಂಗ ಬಾಳ್ತ ಇದ್ದಿ
ನಿನ್ನ ಮಂಕು ಬುದ್ಧಿಗಿಷ್ಟು ಹೋಗು ಮನೆ ಕಡಿ ಯಾವ ಬಂದೂಕು ನುಂಗೀತೂ ನಿನ್ನವನ್ನ
ಹೇ ಅಜ್ಜವ್ವ ಅದೆಂತಾ ನುಡೀತಿ ಮುಚ್ಚು ನಿನ್ ಬಾಯ
ತು ತೂ ನನ್ ಯಜಮಾನ ಪತ್ರ ಬರೆದಾನ ಬರ್ತೀನಿ ಎಂದ
ಅದ್ಯಾಕೆ ಅಪಶಕುನ ಮಾತ ನುಡೀತಿ ಬಿಡ್ತು ಅನ್ನೆ ಅಜ್ಜವ್ವ
ನನ್ನವ ಬಾರಿ ಗಟ್ಟಿ ಅದಾನ ಮುಟ್ಟಿ ಉಳಿವರೆ ಯಜಮಾನನ
ದೇಶಕ್ಕೆ ಮಗನಾಗಕ ಹೋಗನ ನನ್ನ ಒಡೆಯ ಅದ ತಿಳಿ ನನ್ನ ಮರುಳೆ ಅಂದಿ ನೀ ಮರುಳೆ ಅಜ್ಜವ
ಬರುವ ನೀ ನನ್ ಜೊತೆ ಕೂತ್ ನೋಡು ನನ್ ಯಜಮಾನ ಓಡ್ ಬಂದಾನಾ ನಿನ್ ಕಣ್ಣ್ ಮುಂದಾಗೆ ನನ್ ಹೆಗಲ ಮೇಲೆ ಹೊತ್ತಿ ಹೋಗ್ತನಾ
ಎಂತದೆ ನೀ ಬೇರೆಯವ್ನ ಕಟ್ಟಿ ಬಾಳು ಚಂದ ಅಂತಿ
ಹೋಗ್ ಹೋಗೆ ಅಜ್ಜವ್ವ ನಾ ಈಗ ಮಹಾರಾಣಿನೇ
ಎಂತಕ ಅಂದಿ ಕೇಳೆ ಅಜ್ಜವ ನನ್ನವ ದೇಶಕ್ಕೆ ಮಹಾರಾಜ
ನಾ ಯಾರ್ ತಿಳಿದಿ ಸೈನಿಕನ ಹೆಂಡ್ರು ತಿಳಿತೆ ಅಜ್ಜವ್ವ
ಇನ್ನೂ ಜೋರ್ ಕೂಗಿನಿ ಕೇಳೆ ನಾ ಸೈನಿಕನ ಹೆಂಡ್ರು ಕಣೆ ಅಜ್ಜವ್ವ
- ಹಂಸ ಕುಲಾಲ್✍️✍️✍️
ಪ್ರತಿ ಸೈನಿಕನ ಹೆಂಡತಿ ಹೀಗೆ ಅವನ ದಾರಿ ಕಾಯುತ್ತಾಳೇನೋ, ಇವಳು ಕಾಯುವ ದಾರಿ ನಿರಾಸೆ ತರದಿರಲಿ ಅವಳ ನಂಬಿಕೆ ಎಂದು ಹುಸಿಯಾಗದಿರಲಿ ಬೇಡಿಕೊಳುವ.
ಜಾನಪದ ಶೈಲಿಯಲ್ಲಿ ಬರೆಯುವ ಹಂಬಲದ ದಾರಿಯಲ್ಲಿ.
ನಿಮ್ಮ ಅಭಿಪ್ರಾಯ ತಿಳಿಸಿ.
ನನ್ನ ಪ್ರೇಮದ ಸಿಂಧುವೇ
ಈ ಕಣ್ಣ ಹನಿಗೆ ಬಂಧು ನೀ
ಯಾಕೀ ಮೌನ ಸಾಕುಮಾಡು
ಒಮ್ಮೆ ಆಲಿಸೋ ಮನದ ಮಾತಾ

ಚಪ್ಪರದ ಹಸಿರು ಹಾಸಿದರೇನೋ
ಬಣ್ಣದ ಚಿತ್ತಾರ ಚಿತ್ರಸಿದ್ದರೇನೋ
ಅಕ್ಷತೆ ಸಿಂಚನಾ ಶಿರದಲ್ಲಿ ಬಿದ್ದರೇನೋ
ಅವನೆಸರ ನನೊಡನೆ ಅಚ್ಚೆ ಒತ್ತಿಸಿದರೇನೋ

ನೋಡು ನಿನ್ನ ಬರುವಿಕೆಗಾಗಿ ಕಾಯುತ್ತಿರುವೆ
ನಿನ್ನವಳು ನಾ ಎಂದಿಗೂ ಇನಿಯಾ ಕಾಣದೆ ನಿನ್ನೀಡಬೇಕಾದ ಸಿಂಧೂರ ಕಾಯುತಿದೆ ಒಡೆಯನ
ನಿನ್ನ ಆಸರೆಯ ಬಯಸಿದೆ ಕೆನ್ನೆಯ ಹನಿ

ಹಸೇಮಣೆಯಲ್ಲೂ ಕಾಯುತ್ತಿರುವೆ
ಉಸಿಯಾಗಿಸದೆ ಬಾ ನನ್ನವನೆ
ತಿಳಿದಿಲ್ಲವೇ ನನ್ನ ನಿನ್ನ ಪರಿಣಯ
ಅಂದೇ ನಡೆದಿದೆ ಸಾಕ್ಷಿಗೆ ಈ ಮನವಿದೆ
ನಿನ್ನವಳ ಕರೆದೊಯ್ಯಲು ಧಾವಿಸು
ನನ್ನ ಪ್ರೇಮದ ಸಿಂಧುವೇ
ಕೊನೆವರೆಗೂ ಕಾಯುವಳು ನಿನ್ನೀ ಅರಸಿ,,, ಬರುವೆ ಅಲ್ಲವೇ?
*************
ಹಸೆಮಣೆ ಏರಿದ ಅವಳ ಮನ ಅವನಲ್ಲಿ ಇರಲು. ಹೇಗೆ ತಾನೇ ಮತ್ತೊಬ್ಬನಿಗೆ ತನ್ನ ಕೊರಳ ನೀಡುವಳು. ಒಂದು ನಂಬಿಕೆಯಲ್ಲಿ ಕೂತು ಕಾಯುತ್ತಿರುವಳು ಅವನ ಬರುವಿಕೆಗಾಗಿ. ಬರುವನೇ ಅವನು?