Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮನಸ್ಸು ಸ್ವಚ್ಚಗೊಳಿಸಿ
ನಿರೆರೆಯದಿದ್ದರೂ
ಮನದಾಳದಲಿ ಇಳಿದ ಬೇರುಗಳ
ಕಿತ್ತು ಎಸೆದು ಬಿಟ್ಟರು
ಮತ್ತೆ ಬೇರು ಬಿಡುವ ಬಿಳಲುಗಳು.
ಕಿದ್ವಾಯಿರಾಜಶೇಖರ್.
- Raj Raj
12 Mar 2020, 08:08 pm
ಕಳೆದುಕೊಂಡ ಪ್ರೀತಿಗೆ ಕಾಯೋ ಪ್ರತಿ ಹೃದಯವು ಆ ಇನ್ನೊಂದು ಹೃದಯಕ್ಕೆ ಒಳ್ಳೆಯದನ್ನೆ ಬಯಸುತ್ತಾ ಇರುತ್ತದೆ ಮತ್ತೆ ಆ ಹೃದಯ ಸಿಗುತ್ತೆ ಎಂಬ ನಂಬಿಕೆ ಮೇಲೆ ಈ ಪುಟ್ಟ ಹೃದಯ ಜೀವನ ಸಾಗಿಸುತ್ತಾ ಇರುತ್ತದೆ. ಇಂತಿ ನಿಮ್ಮ ಈರಮ್ಮ✍️
- Iramma Iramma
12 Mar 2020, 07:08 pm
ನೀ ನಡೆವ ಹಾದಿಯಲ್ಲಿ
ಕಲ್ಲಿರಲಿ ಮುಳ್ಳೇ ಇರಲಿ
ನೀ ಸಾಗಿ ತೀರಲೇಬೇಕು
ಈ ಬಾಳ ಪಯಣದಲಿ!!
ಸುಖ ದುಃಖ ಎಂಬ ತಿರುವು
ನೂರಾರು ಎದುರು ಬರಲು
ನೀ ಹೆಜ್ಜೆ ಇಡಲೇಬೇಕು
ಮುನ್ನಡೆದು ಸಾಗಲೇಬೇಕು!!
ಬದುಕಲ್ಲಿ ಗೆಲುವು ಎನ್ನುವ
ಶಿಖರವನು ಏರುವಾಗ
ಸೋಲೆಂಬ ಊರಗೋಲ
ಕೈಯಲ್ಲಿ ಹಿಡಿದಿರಬೇಕು!!
ಬೋಧನೆಯು ಏನೇ ಇರಲಿ
ಹುಟ್ಟನ್ನು ಅರಿಯಲಾರೆ!!
ಸಾಧನೆಯು ಸಾವಿರ ಬರಲಿ
ಸಾವನ್ನು ಗೆಲ್ಲಲಾರೆ!!
ಬದುಕೆಂಬ ಗುಟ್ಟನೆಂದು
ನೀ ಮೆಟ್ಟಿ ನಿಲ್ಲಲಾರೆ!!
ಹೆಜ್ಜೆ ಗುರುತ ಅಳಿಸಿದರೂ
ಪಯಣಿಸದೇ ಇರಲಾರೆ!!
- ಪಿ.ಜಿ.ಜ್ಯೋತಿ
12 Mar 2020, 04:12 pm
ನಿನ್ನ ಮುಗ್ದ ಮೊಗದ ನಗುವಲ್ಲಿ
ಹುದುಗಿಹುದು ನೂರು ಮಲ್ಲಿಗೆಯ
ಸೊಗಸು ಚೆಲುವೆ..
ತುಟಿಯಂಚಿನ ಮುಗಳ್ನಗು
ಹರಡುವುದು ಸಮ್ಮೋಹಕ ಪರಿಮಳವನ್ನು
ಅಂದದ ಮೊಗವೊಂದು ಸುಂದರ
ಹೂಬನವೆಂದು ಸಾರಿ..
***
ನೊಂದ ಮನಕೆ
ನಲ್ನುಡಿಗಳನು ಸಿಂಪಡಿಸಿ,
ಇನಿಯ ಮಾತುಗಳಿಂದ
ಎರೆದು ತಂಪನು ಹೃದಯಕೆ
ಮಮತೆಯಲಿ ಆರಿಸಿದೇ ಮನದುರಿಯನು
ಚಿಗುರಿಸಿದೆ ನೀ
ನಲಿವಿನೆಲೆಯ ನನ್ನೊಳು
ಕ್ಷಣದಲ್ಲಿ ಓ ಗೆಳತಿ..
***
ಕತ್ತಿ ಅಲುಗಿನ ಆ ಮೊನಚು ಕಂಗಳು
ಬಹಳ ಚೂಪಾಗಿವೆ ಕಾಮನೆಯಲಿ..
ಇರಿಯುತ್ತವೆ ಎದುರಿನವರ ಎದೆಯ
ಸ್ಪುರಿಯುತ್ತಿವೆ ಪ್ರೇಮ ಅಮೃತ ಸುಧೆಯ..
- ಶ್ರೀಗೋ.
11 Mar 2020, 09:35 pm
ಮನದ ಮ೦ದಿರದಲ್ಲಿ ಬೆಳಗಿದ ಪ್ರೀತಿಯ ದೀಪ ನೀನು..
ಹೃದಯ ಸಮುದ್ರದಲ್ಲಿ ಸಿಕ್ಕ ಪ್ರೀತಿಯ ಮುತ್ತು ನೀನು...
ಕಣ್ಣ ಕೊಳದಲ್ಲಿ ಅರಳಿದ ಪ್ರೀತಿಯ ಪುಷ್ಪ ನೀನು...
ನೆನಪಿರಲಿ....
ದೀಪ ಆರದಿರಲಿ,ಮುತ್ತು ಒಡೆಯದಿರಲಿ,ಪುಷ್ಪ ಬಾಡದಿರಲಿ.....
- ದೇವು,,,,,,ಕನ್ನಡಿಗ
11 Mar 2020, 08:31 pm
ಗಿಡ-ಬಳ್ಳಿ, ಹೂ-ಹಣ್ಣು ಪ್ರಕೃತಿಯ ಮಡಿಲಲ್ಲಿ
ಸಾವಿರಾರು ಜೀವಕೋಟಿ ಭೂದೇವಿಯ ಒಡಲಲ್ಲಿ
ಎಷ್ಟೊಂದು ಕ್ರೌರ್ಯ ದೌರ್ಜನ್ಯ ಮನುಷ್ಯನ ಮನದಲಿ
ಪ್ರಕೃತಿಯ ಬೆಳಸಿ ಉಳಿಸುವ ಛಲವು ಮೂಡಲಿ.
ಕಿದ್ವಾಯಿರಾಜಶೇಖರ್.
- Raj Raj
11 Mar 2020, 08:10 pm
ಬಂದಿದೆ ಬಂದಿದೆ ಕೊರೊನ
ಬೀಸಿದೆ ತನ್ನಯ ಜಾಲನ
ಚೀನಾದ ದ್ವೇಷದ ಜ್ವಾಲಗೆ
ದೇಶದೇಶಗಳಲ್ಲಿ ರೋಗಗಳ ಸರಮಾಲೆ
ಮಾಂಸ ತಿನ್ನಂಗಿಲ್ಲ
ಮೊಟ್ಟೆ ನುಂಗಗಿಲ್ಲ
ಬಾರ್ ಗೆ ಕಾಲಿಡಂಗಿಲ್ಲ
ಮಾಲ್ ಗೆ ಹೋಗಂಗಿಲ್ಲ
ನಮಗೆಲ್ಲ ಇದಾವಾ ಕರ್ಮ
ಅರಿತಿಲ್ಲ ನಾವೆಲ್ಲ ಚೀನಾದವರ ಮರ್ಮ !!
ಕಿದ್ವಾಯಿ ರಾಜಶೇಖರ್.
- Raj Raj
11 Mar 2020, 07:30 pm
ಮಗುವಂತೆ ಪುಟ್ಟ ಮನಸುವಳು
ಎಷ್ಟೇ ಕೋಪ ಬಂದರು ಕೋಪಿಸಿಕೊಳ್ಳದವಳು
ಎಷ್ಟೇ ನೋವು ಕೊಟ್ಟರು ಕ್ಷಮಿಸುವಳು
ತನ್ನ ಮುಗುಳು ನಗೆಯಲ್ಲಿ ಎಲ್ಲಾ ನೋವನ್ನು ಮರೆಸುವಳು
ದಿನ ನಿತ್ಯ ನಿನ್ನದೇ ಧ್ಯಾನ
ನಿನ್ನ ಜೊತೆ ಕಳೆದ ಪ್ರತಿಕ್ಷಣ
ನನ್ನನ್ನು ಕೊಲ್ಲುತ್ತಿದೆ ಆ ದಿನಗಲ್ಲು
ನಿನ್ನೇ ಬೇಕೆಂದು ಕೇಳುತ್ತಿದೆ ನನ್ನ ಮನ
ಮೌನಿಯಂತೆ ಒಂಟಿ ಮಾಡಿ ಹೋದೆ ನನ್ನ.....
ನಿತ್ಯ ಕಾಳಜಿ ಪ್ರೀತಿ ತೋರಿಸಿದ ನೀನು
ಮರೆಯಗಬಹುದೇ ನೀ ನನ್ನನು ಬಿಟ್ಟು
ಒಂಟಿಯಾಗಿ ಬಿಟ್ಟು ಹೋದೆ ನೀನು
ನಿನ್ನ ನೆನಪಲ್ಲಿ ನಾನು ಉಳಿದೆನು.....
ಕೊನೆಗೂ ನನ್ನ ಒಂಟಿ ಮಾಡಿದೆ
ನನ್ನ ಹೃದಯವ ಕೊಳ್ಳೆ ಹೊಡೆದೆ
ನಿನ್ನನ್ನು ನಾ ಮರೆತೇನು
ಆದರೆ ಈ ನನ್ನ ಪುಟ್ಟಮನಸ್ಸು ನೀನೇ ಬೇಕುನ್ನುತ್ತಿದೆ.....
- Ajay
10 Mar 2020, 11:15 pm
ಹ್ಯಾಂಗ ಮರೆಯಲ್ಲಿ ನಾ ಚೆಲ್ವಿ ನಿನ್ನ
ಒಮ್ಯಾರ ಹೇಳೆ ನನ್ನ ಒಡತಿ ಅದ್ಯಾಂಗಂತ?
ಒಂದು ಮಾತಾಗ ಮರಿ ಅಂತೀಯಾ ನನ್ನ
ಬಾರೀ ದೊಡ್ ಮಂದಿ ಆದಿ ನೀ ಈಗ
ಇನ್ಯಕಾ ಈ ಹೈದ ನಿನ್ನ ಜೊತೆಯಾಗ ಅಲ್ಲಾ?
ಹೇ ಕೇಳೇ ಒಡತಿ ನೀಯ್ಯಾರಾ, ನಾಯ್ಯಾರ
ಅಂತಿದ್ವಿ ಆಗ ನೆನಪಾಯ್ತಿ ನಿಂಗ ಚೆಲ್ವಿ
ಆಮ್ಯಾಕ ನೀ ಏನಂದಿ ಮರೆತಾ, ಮಾರಾಯ್ತಿ?
ನೀನೇ ನನ್ ಉಸಿರು ನನ್ ಒಡೆಯ ನೀ
ನಾ ಎಂದು ಬಿಡಲ್ಲ ನಿನ್ನ ಈ ಜನುಮದಾಗ
ಗ್ಯಪ್ತಿ ಬಂತಾ ನಿನ್ ಮಾತು ಒಸಿ ಮಾತಾಡು
ಅಂಗೆಲ್ಲಾ ಹೇಳಿ ಇಪ್ಪಾಟಿ ಪೀರುತಿ ಕೊಟ್ಟಿ
ನೀ ಮರಿ ಅಂತಿ ಎಷ್ಟ್ ದಪ ಹೇಳುದ್ರು ನೀ
ಕೇಳಕಿಲ್ಲಾ ನಾ ಹೋಗ್ ಹೋಗ್ ಅಟ್ಟಿಗೆ
ಮರಿಯಾಕ ನಾ ನೀ ಅಲ್ಲಾ ನನ್ನೊಡತಿ
ಈ ಜನುಮಕ ನೀನೇ ನನ್ನ ಒಡತಿ
ನೀ ಏನ್ನಾರ ಹೇಳು ನಾ ಕೇಳೀನಿ ಅಂತ ತಿಳಿಬೇಡ
ಹ್ಯಾಂಗ ಮರೆಯಲ್ಲಿ ನಾ ಚೆಲ್ವಿ ನಿನ್ನ
ಒಮ್ಯಾರ ಹೇಳೆ ನನ್ನ ಒಡತಿ ಅದ್ಯಾಂಗಂತ
- ಹಂಸ ಕುಲಾಲ್✍️✍️✍️
ಮರೆತು ಬಿಡು ನನ್ನ ನೀ ಎಂದು ಹೇಳಿದ ಅವಳ ನುಡಿಗೆ ಅವನ ಮರು ಉತ್ತರ.
ಜಾನಪದ ಶೈಲಿ ಪ್ರಯತ್ನಿಸುವ ಹಂಬಲ ನನ್ನಲ್ಲಿ ಹೆಚ್ಚಾಯಿತು. ಆಗಾಗಿ ಈ ಪ್ರಯತ್ನ.
ನಿಮ್ಮ ಅಭಿಪ್ರಾಯ ತಿಳಿಸಿ.
- ಹಂಸವೇಣಿ
10 Mar 2020, 02:13 pm
ಮನದಾಳದ ಮಾತು ಬರಲಿಲ್ಲ ನನ್ನ ಮನದಿಂದ
ತುಟಿಯಂಚಿನ ಮಾತು ಬಾರದೆ ಹೋಯಿತು ತುಟಿಯಿಂದ
ನನ್ನ ಚೆಲುವೆ ಅರಿಯಲಿಲ್ಲ ನನ್ನ, ತನ್ನ ಮನದಿಂದ
ಬದುಕು ಬರಡಾಯಿತು, ನಾ ಪ್ರೀತಿಸಿದ ಪ್ರೀತಿಯಿಂದ......
- ದೇವು,,,,,,ಕನ್ನಡಿಗ
09 Mar 2020, 11:05 pm