Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮದ್ದು

ನಿನ್ನ ಹೆಜ್ಜೆಗೆ
ನಾನೇ ಗೆಜ್ಜೆ

ಆ ಗೆಜ್ಜೆಯಿಂದ
ಬರುವ ಸದ್ದು,

ನನ್ನ ಪ್ರೇಮರೋಗಕ್ಕೆ
ಮದ್ದು

- Bheemashi KD

05 Mar 2020, 07:38 am

ದನಗಾಹಿ

ಜಿಡ್ಡುಗಟ್ಟಿದ ಅಂಗಿ
ಬೆವರು ಮೈಯ್ಯ ಕಮಟು
ತಲೆತುಂಬ ಸುತ್ತಿದ
ರಕ್ಷಣೆಗೆಂದೆ ಮುಂಡಾಸು
ಹರಿದದ್ದ ಮರೆಮಾಚಿ
ಗಂಟಿಕ್ಕಿ ಉಟ್ಟ ಬಿಳಿಕಚ್ಚೆ
ಹಿಮ್ಮಡ ಸವೆದ ಕಿತ್ತ ಉಂಗುಷ್ಠದ ಚಪ್ಪಲಿ
ಕೈಯಲ್ಲಿ ಹಿಡಿದೊಂದು
ಡೊಂಕು ಧನಕೋಲು
#ನಿತ್ಯದಿವು #ರೂಪರೇಖು #ಜೊತೆಗೆ ತನ್ನ #ಕರಿನೆರಳು

ಸರಗುಣಿಕೆ ಬಿಚ್ಚಿ ಬಿಟ್ಟು ಅಟ್ಟಿದ
ಹಸುವಿನ ಕೊರಳ ಅಗ್ಗ
ದನಪಾಲನೆಂಬುದಕೆ ಸಾಕ್ಷಿಗೆ
ಹಿಂಡ ಮೇಯಿಸಲು
ಅಡದಿ ಹೊಲದ ಮೇವಿನ ಲೆಕ್ಕ ಕೇಳತ
ಕರೆಕಲ್ಲ ತನಕ ಬಿದ್ದ ಸಗಣಿಯ
ಎತ್ತಿ ತಂದು ಹಿತ್ತಲಲ್ಲಿ
ಕೋಳಿ ಕೆದರುತ್ತಿದ್ದ ತಿಪ್ಪಗಾಕಿ
ಮತ್ತೊಮ್ಮೆ ಅಡಿಕೆ ಎಲೆ ಹೊಗೆ ಸೊಪ್ಪ
ಅಜ್ಜಿಗಂಟಲಿ ಮೆದ್ದು
ಹಾಲ ಕರುಗೆ ಹುಲ್ಲಿಡೆಂದು ಹೇಳಿ
#ಹೊಂಟ #ಪರಿಯಲಿತ್ತು ಕಾಳಜಿ
ಮಮತೆ,ರಕ್ಷಣೆ,ಜ್ವಾಪಾನ

ಐನೋರ ಅಂಗಡಿಗಾಕಿ
ಹಲ್ಲುಜೋಳ ಅಡಿಕೆಲೆ ಅಜ್ಜನ ತಂಭಾಕ
ತಂದು ಸವರ್ಧ ಅಜ್ಜಿಗಿಟ್ಟು
ಸೋಮಾರ ಸ್ನಾನಕೆ ಅಂಗಿ
ಕೈ ಹೊಲಿಗೆ ಹಾಕಿಡೆನುತ
ಕಲ್ಲು ವಲದ ಕಳೆ ಅರವತ್ತುವ ತೊಗರಿ
ಯರಿ ಬೆಳೆ ಅಂಗಲ
ಊರಗೌಡ್ರು ಎಷ್ಟುಸಲ
ಹೇಳಿ ಕಳುಹಿದರು ನಿಲ್ಲಿಸದೆ ಇಳಿವಯದಲ್ಲೂ
ಎತ್ತಿನ ಹುಲ್ಲು ತಾನ ಹೊತ್ತು
ಪಡಸಾಲೆ ಹೆಣ ಮಲಗಿದ
ಮಗನ ಬೈದು ಜತೆಗಾರರು
ದನನಿಲ್ಲುತಿಲ್ಲ ಎಂದು ಕರೆಯೇ
#ಕೋಲ ಊರುತ #ಬದುಕ ದಾರಿಯ ಹಿಂದಿಕ್ಕುವ
ಕಾಯಕದ ಜೀವ ಸಾಗತಿತ್ತ

ಯಾರ ಅಂಗು ತನಗಿಲ್ಲದೆ
ಪ್ರೀತಿ ಗೌರವ ಸ್ವಾಭಿಮಾನ ಮನೆಬಾಳ್ವೆ
ಧನಗಾಹಿಗೆ ಇದ್ದದ್ದು
ಆಸಿಗೆಯಷ್ಟು ಕಾಲಚಾಚಿ ಹೊದ್ದದ್ದು
ಊರ ಉಸಬರಿ ಇನಿತಿಲ್ಲ
ತಮ್ಮನಾಗಿ ಕಾಸ ಮಲ್ಲಜ್ಜ
ಕಷ್ಟಹಂಚಿಕೊಳ್ಳಲು
ಪತ್ನಿ ಹನುಮಜ್ಜಿ ಮಕ್ಕಳು ಮರಿ
ಇವಿಷ್ಟೆ ಪ್ರಪಂಚ ಇದರಾಚೆಗೆ
ಬಡಿಗೇರ ಅನುಸೂಯಕ್ಕ
ಶಂಕ್ರಣ್ಣ ಹುಚ್ಚಲ್ಲದ ಹುಚ್ಚಿ ಕಾಳವ್ವ
ಸಣ್ಣಕಲ್ಲು ಮುಳ್ಳು
ಹಾದಿಗೆ ತೆಗೆದಿರಿಸಿ ಸೆಗಣಿಹಿಡಿತಿದ್ದ
ಕಾಯಕದ ಪರಮೇಶಜ್ಜ
ಕಟ್ಟಿದ ಹಸು ಎಮ್ಮೆ ಗಳೆ ಸ್ನೇಹಿ
#ಕಾಯಕಯೋಗಿಯೇ ತಾನೆನಿಸಿ #ಬದುಕಿನನೇಕ
ಪಾತ್ರ ನಿಭಾಯಿಸಿದ್ದ

ಬಿಸಿಲು ಮಳೆಗೆ ಅಳುಕಲಿಲ್ಲ
ಬಡ ಬದುಕಿಗಂತೂ
ಕಿಂಚಿತ್ತೂ ಜಗ್ಗಲಿಲ್ಲ
ಸುತ್ತಿ ಮಲೆ ಸೀಮೆ ದುಡಿದ ಜೀವ
ಉಡುಪಿ ಆಸುಪಾಸೆಲ್ಲ
ಮದುವೆಗೂ ಮುಂಚೆ
ಸಂಸಾರ ರಕ್ಷಣೆ ಹೊಣೆ ನಿಬಾಯಿಸಿ
ಮೂಗಬಸವನ ನಂಬಿ
ಮನೆ ಮಂದಿಗೆಲ್ಲ ಪ್ರೀತಿ ಹಂಚಿ
ಊರತೇರು ಬರಲು
ಕಾಡ ಖುಷಿ ಹಕ್ಕಿಯಂತಾಗಿ
ಉದ್ದದ ಬಾಕಿ ಚೀಟಿ ದಿನಸಿ
ಸಾಮಾನ ಹೊತ್ತು ಪರಿ
ದ್ಯಾಮಪ್ಳ ಮನೆಯಲಿ
ಮಾಡಿಸಿದ ಹೋಳಿಗೆಯ ಹೊದಿಸಿ
ಬಸವಣ್ಣನ ಗುಡಿಗೆ
ಆಚರಿಸಿ ದ ಹಬ್ಬ ಇನ್ನ ಕನಸಷ್ಟೇ
#ಕೂಡು ಮನೆಗೆ ನೀಡೆ #ತಾನಾಗಿ ಸಂಸ್ಕಾರ
ನೆಡೆದಿತ್ತ ವಿಭೂತಿ ಹೆಜ್ಜೆಹಾಕಿ

ಡೈರಿಗ ಹಾಲ ಮಾರಿ
ಉಣಲೊತ್ತು ಸಾಕಿ ಸಲಹಿ
ಕಚ್ಚೆಒಳ ಕಟ್ಟಿದ ರೊಕ್ಕ ಗಂಟು ಬಿಚ್ಚಿ
ಜೀವತೇದ ಓದಿಸಿದ ಪರಿ
ನೋವುಣ್ಣುತಿದೆ ನೆನಪು
ಕಣ್ಣೀರು ಬರಿಸಿ
ಇನ್ನೂ ಸಾಕುವ ಭಾಗ್ಯ
ಸಿಗದೆ ಹೋಯಿತೆನಿಸಿ
ಅದ್ಯಾದೊ ಚಿಕನಗುನ್ಯ ಕಾಲ ಹಿಡಿದು
ಮೂಲೆ ಬಿದ್ದ ನೆಲಕಚ್ಚಿದ
ಕಾಲದ ಯಮ
ಸರಗುಣಿಕೆ ಹಗ್ಗ ದೊಟ್ಟಿಗೆ
ಕೋಗಿಲೆಯಂತೆ
ಜೀವವದು ಹಾರಿ
#ಮೂಗಬಸವೇಶನ ನೆನೆನೆದು ಆತ್ಮ
#ಲೋಕ ತೆರಳಿತೋ

ಹೀಡೇರದ ಕನಸಾಗಿ
ಉಳಿದ ಬದುಕಿಗೆ ಸಂಸಾರಕೆ
ನೆಮ್ಮದಿ ಗೆ ಪ್ರೀತಿಗೆ
ಸ್ವಾಭಿಮಾನ ಕೆ
ದೈವ ಭಕ್ತಿ ಗೆ ಕಾಯಕಕೆ ಗೌರವಕೆ
ಒಂದು ಜೀವನ ಪಾಠವಾಗಿ ಉಳಿದ
ಸವೆಸಿ ತುಂಬು ಬದುಕ
ಎದೆಗೆ ಬಿತ್ತಿದ
ದುಡಿಮೆಯಲೆ ಕೈಲಾಸವೆಂದು
ಬರಿದನಗಾಹಿ ತಾನಲ್ಲ
ಕಾದದ್ದು ಮಕ್ಕಳು ಮರಿಯೆಂಬ
ನಿಜದನಗಳೆ ನಾವೆಂದು
ಅರಿವಾಗುವ ಹೊತ್ತಿಗೆ
ಸತ್ತು ವರುಷ ಹನ್ನೆರಡಾತು
#ಕರುಣಾಳು ಮೂಗಬಸವೇಶ ಆತ್ಮಕ #ಚಿರಶಾಂತಿ ಕರುಣಿಸ

- samna

04 Mar 2020, 05:50 pm

ಅನಿಸಿಕೆ

ಪಂಡಿತ-ಪಾಮರರ
ಸಂಗಮ ತಾಣ
ಸರಿಗಮಪ ಸೀಸನ್ ೧೭ರ
ಸಂಗೀತ ಸಂಸ್ಥಾನ

ಹೊಸ ಚಿಗುರು -ಹಳೆಬೇರು
ಕನ್ನಡ ಕಗ್ಗದ ಮುತ್ತು
ಹಂಸಲೇಖ- ಅರ್ಜುನಜನ್ಯರು
ಕನ್ನಡ ಸರಿಗಮಪದ ಸ್ವತ್ತು

ವಿಖ್ಯಾತ ಜಯಹೋ ಮೊಳಗಿಸಿದ
ಕಂಚಿನ ಕಂಠ;ಕನ್ನಡಿಗರನ್ನ
ಜೇನ ಹನಿಯಲಿ ಮುಳುಗಿಸಿದ
ಮಧುರ ಕಂಠಗಳ ಸಮ್ಮಿಲನ

ನಾಕು ತಂತಿಯ ಮೀಟಿದ ಬೇಂದ್ರೆ
ಈ ನಾಲ್ವರಲ್ಲೆ ನೆಲೆಸವ್ರೆ
ಬವಣೆ ನೀಗಿಸಿ ,ಬಾಂದವ್ಯಸುಜ್ಞಾನವ
ಕರುನಾಡಲ್ಲಿ ಬೆಳೆಸ್ತಾವ್ರೆ

ಅಂದ-ಚಂದದ ವಯ್ಯಾರಿ
ಈ ಆಸ್ಥಾನದ ಸುಕುಮಾರಿ
ಅರ್ಜುನ್ ಜನ್ಯರ ಮದನಾರಿ
ಸರಿಗಮಪದ ನಿರೂಪಕಿ ಅನುಶ್ರೀ

ಮುದ್ದಣ್ಣ-ಮನೊರಮೆಯರ ಸಲ್ಲಾಪ;
ಏರಿ ಅಶ್ವಮೇಧಯಾಗದ ಸವಾರಿ
ಅರ್ಜುನ್ ಜನ್ಯ-ಅನುಶ್ರೀ ರ ಸಲ್ಲಾಪ;
ಏರಿ ಸರಿಗಮಪ ಸೀಸನ್ ೧೭ ರ ಅಂಬಾರಿ

ಸರಿಗಮಪ ವೇದಿಕೆಯೇರುವ ಆಸೆ
ಇಂದಿಗೂ ನನಗದು ಕನಸೆ
ರಾಗ,ತಾಳ ಲಯಗಳ ಅರಿವಿಲ್ಲದ ಅಬಲೆ
ಕಲಿಕೆಯ ಬಯಕೆ ಆಂತರ್ಯದಿ ಅವಿತಿದೆ



ಶಾರದ

- ಶಕುಂತಲಾ

04 Mar 2020, 05:27 pm

ನೇಗಿಲ ಜೀವಿ

ಬಿಸಿಲಗ್ನಿ ಸುರಿವ ಸರಿಗೇ
ಬಸಿತಿರೆ ಬೆವರು ಬಿಡನೀತ ಉಳಲಾ
ಉಸಿರ ಬಸಿದು ಧರೆ ಉಡುಗೇ
ಹಸಿರಿಸಿ ನಿಲಿಪ ತೆನೆದೂಗ ಮುಗಿಲಾ

ಬೆಳೆ ಕೊಚ್ಚಿ ಹರಿಯೆ ಝಳಕ ಒ
ಣಲಿಟ್ಟು ಸುಡೆ ಚಿಂತೆಬೀಳದೆ ಕುಳದ ಅಡಿಯಾ
ನೆಲನಂಬಿ ಪುನರಪಿ ದುಡಿದೆ
ಕಳೆಯುತ ಜಗದ ಹಸಿವ ನೇಗಿಲಯೋಗಿ ತಾನಾ

ಮಳೆಗರೆಯೆ ಮುಗಿಲ್ ಒಳೆರ್ದೆ
ಯೊಳಾವದೋ ಚೇತನಂ ನಿನಯ ಕುಣಿಸುವುದಾ
ಎಳೆಕರುವಿನೋಲ್ ಖುಷಿಕಡಲ
ಇಳೆನಗೆ ಕೊನರ ನೆಲಧಾತ್ರಿ ಕಣ್ಗಾಣಿಪುದಾ

ಧಾರೆಜಲ ಮೋಡ ಸುರಿಯೇ
ಬೆರೆತಿರೆ ಹಸಿಗೆಹಸಿ ಬೇರ ಪಚ್ಚೆಫಸಲನಾ
ಹರುಷವನೆಂತು ನುಡಿವುದು ಹ
ಹಸಿರರಸ ಕಾಯಕದ ಜೀವ ಕಟ್ಟಿಪಕನಸಾ

- samna

04 Mar 2020, 03:16 pm

ಮರಳಿ ಬಾರದೂರಿಗೆ...

ನಾನು ನಾನೆಂದೆ, ನನ್ನದೆಂದೆ, ನನ್ನವರೆಂದೆ ..!!
ತೀರದ ಬದುಕಿನ ಪಯಣದಲ್ಲಿ, ಕಾಣದೆ ಮಾಯವಾದೆ.. !!
ಬದುಕಿನ ದಾರಿ ತೋರಿಸಿ ದೂರವಾಗುತ್ತಿರಲು, ಅಂಜಿದೆ ಮನಸು ಮರಳಿ ಬಾರದೂರಿಗೆ ಕಳಿಸಲು..!!

- maheshganpur

04 Mar 2020, 12:54 pm

ಕತ್ತಲು ರಾತ್ರಿ

ಕತ್ತಲು ರಾತ್ರಿ ಇತ್ತು
ಅದು ಕೂಡ ನನ್ನ ಜೊತೆ ಇತ್ತು
ಏನು ಅದರ ಕಣ್ಣೋಟ ಇತ್ತು
ನಾನು ಅದರ ಮೇಲೆ ಇದ್ದೆ
ಅದು ನನ್ನ ಕೆಳಗೆ ಇತ್ತು
ತಪ್ಪಾಗಿ ತಿಳ್ಕೊಬೇಡಿ ನನ್ನ ದೋಸ್ತುಗಳೆ
ಅದು ನನ್ನ ಮೋಟರ್ ಬೈಕ್ ಇತ್ತು

- hanumanaik lamani

04 Mar 2020, 08:45 am

ಶುಭ ಮುಂಜಾನೆ,,,

ನಾಚಿ ಕರಗಿವುದು
ಮಂಜಿನ ಬಿಂದು
ಆ ನೇಸರನ
ಸ್ಪರ್ಶಕ್ಕೆ ಸೋತು
ನಾ ಕದ್ದು ಬಿಡಲೆಂಬ
ಬಯಕೆ

ಚಿವ್ ಗುಟ್ಟಿರುವ
ಹಕ್ಕಿಗಳೊಡನೆ ಸೇರಿ
ಅವ ಬರುವ ದಾರಿಗೆ
ಸ್ವಾಗತ ನೀಡೋ
ಬಯಕೆ

ಕಂಡ ಕ್ಷಣಕ್ಕೆ ಅರಿವಿಲ್ಲದೆ
ಅವನ ನಗೆಗೆ
ಪ್ರತಿ ನಗೆಯ ಚೆಲ್ಲೋ
ತಾವರೆಯೊಳಗೆ ಸೇರಿ
ನನ್ನೀ ನಗುವ ಅವನಿಗೆ
ರವಾನಿಸುವ
ಬಯಕೆ

- ಹಂಸ

- ಹಂಸವೇಣಿ

04 Mar 2020, 07:15 am

ಭಾವನೆಗಳೇ ಅಕ್ಷರಗಳಾದವು ,

ಮನದಾಳದ ನಿಶಬ್ದ ಪಿಸು ನುಡಿಯು
ಸಾಲು ಮಾತುಗಳಲ್ಲಿ ಇಣುಕಿ ನೋಡಲು
ಅದ್ಯಾವ ಭಾಷೆಯ ರಾಗ ಕೊಡಲಿ ನಾ
ಎಂದು ಮನ ಕ್ಷಣಕ್ಕೆ ಮೌನದಿ ಕುಳಿತಿರಲು ಭಾವನೆಗಳೇ ಅಕ್ಷರಗಳಾಗಿ ನುಡಿದು
ಸಾಲುಗಳಾಗಿ ಸಾಗಿ ನಡೆಯುತ್ತಿದೆ , . . .



- ಹಂಸ

- ಹಂಸವೇಣಿ

03 Mar 2020, 09:54 pm

ಉಚ್ಛ್ವಾಸಕ್ಕೆ ಸಪ್ತಸ್ವರ ನೀ

ಇಂದು ನಾನೇ ಶರಣಾಗಿರುವೇನೆ ನಿನೆದುರು
ಏ,, ಹೋಗೋ ಇನ್ನೂ ಕಾಡೋ ಆಸೆಯೇ
ನಿನ್ನ ಕಣ್ಣ ಬಲೆಯೊಳಗೆ ಬಚ್ಚಿಟಿಬಿಟ್ಟೆ
ಈ ಉಚ್ಛ್ವಾಸ ಸದಾ ನಿನ್ನ ಉಸಿರ ಬಯಸುತ್ತಿದೆ

- ಹಂಸವೇಣಿ

03 Mar 2020, 08:20 pm

ಒಲವತಾಯೀ ನಂದವರಧೀಶ್ವರೀ

ದಿಕ್ಕು ಗಾಣದೆ ಬಿಟ್ಟು ನಿಟ್ಟುಸಿರ
ಇಕ್ಕುತಿಹರ ತಾಯೆ ನಿತ್ಯ ಕಣ್ಣನೀರ||.....
ಚಿಕ್ಕಿಗಳನಿಟ್ಟು ಬಿಡಿಸಿ ನಿನ್ನ ಶ್ರೀಚಕ್ರ
ಮೊಕ್ಕತ ನಿತ್ಯಪೂಜೆಗೆ ನಿನ್ನ ಚಿತ್ರ||....
#ವಾತ್ಸಲ್ಯ ತಾಯೇ ಭಕ್ತವತ್ಸರ ಕಾಯೇ|.

ಮಂಕು ಮನಕೆ ಇತ್ತು ಚೇತನ
ಕೊಂಕು ಮನಕ ಬಿತ್ತಿ ವಿಜ್ಞಾನ||....
ಬಿಂಕದ ಮನಕೆ ಹಾಕಿ ಅಂಕುಶ
ಅಂಕೆಮೀರದಿಟ್ಟು ಧರ್ಮದಿಶ||....
#ಕರುಣೆಯ ಕಿರಣವೇ ಹರಹು ಬೆಳಗ|.

ಮಗ್ಗದ ಮನೆಗಳಲ್ಲಿ ಹಿಗ್ಗ ನಿರಿಸಿ
ಕುಗ್ಗಿಹೋಗದಂತ ಬದುಕ ಕಲಿಸಿ||.…..
ಸುಗ್ಗಿಯೆಂಬುದ ನಿತ್ಯವೂ ತರಿಸಿ
ಮೊಗ್ಗಿನ ನಗೆಯ ಮೊಗದಿ ಬಿರಿಸಿ||....
#ಪೊರೆವ ತಾಯೆ ಪ್ರೀತಿ ತೋರೆ||.

ಶುದ್ಧಿ ಯೆಂಬುದ ತನುವಿಗಿಟ್ಟು
ಬುದ್ಧಿಯೆಂಬುದ ಮನಸ್ಸಿಗಿಟ್ಟು||.....
ಅದ್ದಿದಂತಿರಿಸಿ ಸಂಸ್ಕರಬ್ಧಿಯೊಳ
ಮುದದಿ ನೀ ನೆಲಸೆ ಎದಿಒಳ||....
#ಒಲವವೇದವ ನಿರಿಸಿ ಸಲಹು ತಾಯೇ||.

- samna

03 Mar 2020, 08:13 pm