Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮೌನವಾಗು ಒಮ್ಮೆ ಮೌನವಾಗು,,,,

ಮೌನವಾಗು ಒಮ್ಮೆ ಮೌನವಾಗು,,,,
ಮೌನವಾಗು ಒಮ್ಮೆ ಮೌನವಾಗು,,,,   



    .   - ಹಂಸ ✍️✍️✍️

- ಹಂಸವೇಣಿ

03 Mar 2020, 08:05 pm

ಹನಿಗವನ

ಒಡನಾಡಿಗಳ ಸಹಿಸುವ
ಗುಣವಂತನೀತ
ಹೊಗಳಿಕೆ ತೆಗಳಿಕೆಗೆ
ತಲೆಕೆಡಿಸಿಕೊಳ್ಳದಾತ
ಅಲುಗಾಡದ ಮೇರು ಪರ್ವತ
ಬಸಂತ

ಅಡಿಯಿಡುವೆಡೆಯೆಲ್ಲ ಜಯ
ಸದಾ ಚಿಂತನೆಯಲ್ಲೆ ತನ್ಮಯ
ಎದುರಾಳಿಗೆ ಇವಳೆಂದರೆ ಭಯ
ಹೊಗಳಿಕೆಯೆ ಇವಳಿಗೆ ಅಭಯ
ಶ್ರೇಯ

ಬಳ್ಳಿಯಂತ ಚಂದ
ಸುಮತ ಮಕರಂದ
ಮೌನವೇ ಇವಳಿಗೆ ಅಂದ
ಬೃಂದ

ಮಾತಿನಲಿ ಸಿರಿವಂತ
ಬದಲಾಗದ ಮೇರು ಸಂತ
ಏರಿಳಿತವಿಲ್ಲದ ಪಂಡಿತ
ಹೇಮಂತ

ಜಗ್ಗದ ಕುಗ್ಗದ ಸರದಾರ
ಎಲ್ಲಿಯು ನಿಲ್ಲದ ಸವಾರ
ಅಂಜಿಕೆಯಿಲ್ಲದ ದೀರ
ನಾಮದಲ್ಲೆ ನಂಜನು ಹೊತ್ತ ಈಶ
ನಂಜುಡೇಶ

ಮನೆಯಲ್ಲಿ ಇವನೇ ಅಗ್ರಜ
ತರಗತಿಯಲಿ ಇವನಿದ್ದರೆ ಮಜ
ಹರಟೆ ಗುಂಪಿನ ರಾಜ
ಪೃಥ್ವಿ ರಾಜ

ಇವಳ ನಡೆ- ನುಡಿಯಲಿಲ್ಲ ಹುಸಿ
ಸದಾ ಮಾಡುವಳು ಕಲಿಕೆಗೆ ಕಸಿ
ಸರ್ವರ ಸೆಳೆವಳು ಸ್ನೇಹದ ಬಲೆ ಬೀಸಿ
ಬಿಳಿಯರೊಡನೆ ಸೆಣಸಿದಳು ಆ ಝಾನ್ಸಿ
ಪರಿಕ್ಷೆಯೊಡನೆ ಹೋರಾಡುತಿಹಳು ಈ ಝಾನ್ಸಿ

ತರಗತಿಯಲಿ ಇವನೇ ಕುಬ್ಜ
ಪಠ್ಯೇತರಗಳಲ್ಲಿ ಅಗ್ರಜ
ಪಡೆವನು ಅನಿಯಮಿತ ರಜಾ
ಗಣನೆಗಿಲ್ಲ ನೀಡುವ ಸಜಾ
ಹೊಳೆಯುವುದು ವದನಾರವಿಂದ
ಅರವಿಂದ

ಅಡಿಯಿಡುವೆಡೆಯೆಲ್ಲ ಶೀತ
ಗೈರಾಜರಿಗೆ ಚಿರಪರಿಚಿತ
ಸಾಧನೆಗೆ ಅಪರಿಚಿತ
ಅಂಜೂರದಂತ ಲಿಖಿತ
ಋಷಿಯಂತೆ ನಿಶ್ಚಿಂತ
ರಿಷಿತ

ಎಲ್ಲೆಲ್ಲಿಯು ಪಡೆವಳು ಮಾನ್ಯ
ಎಂದೆಂದಿಗು ಇವಳು ಅನನ್ಯ
ಸದಾ ಕಾಯುವಳು ಗೌಪ್ಯತೆಯನ್ನ
ಚೈತನ್ಯ

ಏನೇನು ಅರಿಯದ ಕೂಸು
ಮೂಗಿನ ಮೇಲೆಯೆ ಮುನಿಸು
ಸದಾ ಮಾಡುವಳು ಕಸರತ್ತು
ಪಡೆಯಲು ಯಶಸ್ಸು
ಚೈತನ್ಯ

ನಡೆಯಲಿ ಸೌಮ್ಯವತಿ
ನುಡಿಯಲಿ ಪರಿಣಿತಿ
ನೋಟದಲಿ ಗಂಭೀರವತಿ
ಹೊಂದಿರುವಳು ಸಾಧನೆಗೆ ಪರಿಮಿತಿ
ಶ್ರಾವಂತಿ

ನಗುಮೊಗದ ಸುಂದರಿ
ಹಡೆದವರ ಮುದ್ದಿನ ಕುವರಿ
ಹೊರಟಿಹಳು ಸಾಧನೆಯ ಸವಾರಿ
ಇವಳು ತರಗತಿಯ ಉಷ
ಅನುಷ

ಇವಳು ಸದ್ಗುಣಗಳ ಕುಂಚ
ಮುನಿಸಿ ಎಲ್ಲೋ ಕೊಂಚ
ಕಿರುನಗೆಯಿಂದಲೆ
ಸೆಳೆವಳು ಸರ್ವರ ಮನ
ಕಾಂಚನ

ನಡೆನುಡಿಯಲಿ ಸದಾ ಅನೃತ
ಹಡೆದವರ ಮುದ್ದಿನ ಸುತ
ಹೊಂದಿರುವನು ಸುಂದರ ವದನ
ಚಂದನ

ಅಭಿನಂದನೆಗೆ ದೂರ
ನೋಟದಲಿ ಸುಂದರ
ಮನೆಯವರ ಮುದ್ದಿನ ಕಲಶ
ಅಭಿಲಾಷ

ಸರ್ವಕು ಇವಳೇ ಆಧಾರ
ನೋಡಲಿವಳು ಬಲು ಸಪೂರ
ಅಡಿಗಡಿಗೆ ಅರಸುವಳು ಕಾರ್ಯ
ಸಹಪಾಠಿಗಳೆ ಇವಳ ಧೈರ್ಯ
ಐಶ್ವರ್ಯ

ಪರ್ವತವೇರುವ ಆಸೆ
ಪ್ರಯತ್ನ ಚೇತನ ಮೂರು ತಾಸೆ
ಸಾಧನೆ ಕೇವಲ ಅರ್ಧಾಂಶ
ತರಗತಿಯಲಿ ಇವನೆ ಭಾಷ
ಲೋಕೇಶ್

ಚಂಚಲವಾದ ಮನಸ್ಸು
ಪೂರೈಸಲು ತಂದೆಯ ಕನಸು
ಶಿಕ್ಷಣವೇ ಇವನ ಅಸ್ತ್ರ
ಹಿಡಿಯಲೊಂದಿನ ಶಸ್ತ್ರಾಸ್ತ್ರ
ತಂದೆಯ ಮೆಚ್ಚಿನ ಸನ್
ನಿತಿನ್

ಬದಲಾಗದ ರೀತಿ ನೀತಿ
ನೆನೆವರೆದೆಯಲಿ ಸೃಷ್ಟಿ ಭೀತಿ
ಮರೆಯಲಾಗದ ಮೂರುತಿ
ಪ್ರೀತಿ

ನಡೆನುಡಿಯಲಿ ಸೌಮ್ಯ
ಅದೃಷ್ಟವೆ ಅಗಮ್ಯ
ಸಾಧನೆಯಲಿ ಅಗಣ್ಯ
ಹಡೆದವರ ಪುಣ್ಯ
ನವ್ಯ

ಇವನು ಆರಡಿಯ ಗನ್
ಹಿಡಿದಿಹನು ಮೂರಿಂಚಿನ ಪೆನ್
ಪರಿಗಣಿಸನು ಯಾವುದೆ ಕಾನೂನ್
ಸಾಧನೆಯಲಿ ಸದಾ ಮೂನ್
ನಿತಿನ್

ಸದಾ ಪಾಲಿಸುವನು ಮೌನ
ಗಳಿಸನು ಒಂದಿಷ್ಟು ಜ್ಞಾನ
ಇವನ ಗಣನೆಗಿಲ್ಲ ವಿಜ್ಞಾನ
ದಿನವು ಮಾಡುತ ಭೋಜನ
ಅಡಿಗಡಿಗೆ ತುಂಬಿದೆ ಅಚೇತನ
ಚೇತನ

ನಾಮದಲ್ಲಿದೆ ಸಿರಿ
ಸುಂದರ ಕೇಶಸಿರಿ
ಸುಂದರವಾದ ಸ್ತ್ರೀ
ಇವಳಿಗೆ ಕಂಬನಿ ಫ್ರೀ
ಚಂದುಶ್ರಿ

- ಶಕುಂತಲಾ

03 Mar 2020, 06:25 pm

ಗೋಡೆಗಳು

ಮನೆ ಮನಗಳ ನಡುವಿನ ಕಂಪೌಂಡ ಗೋಡೆಗಳು ಎತ್ತರಕ್ಕೇರುತ್ತೀವೆ
ಹೊಲ ಗದ್ದೆಗಳ ಬದುವಿನ ಮೇಲೆ ಜಾಲಿಗಿಡಗಳು ಸಾಲು ಹೆಚ್ಚುತಿವೆ
ಜಾತಿ ಜಾತಿ ಗಳ ನಡುವೆ ಧರ್ಮ ಧರ್ಮಗಳ ನಡುವೆ ಅಪನಂಬಿಕೆಯ ಅಟ್ಟಹಾಸ
ನದಿ, ಹಳ್ಳ, ಕೊಳ್ಳಗಳು ದಿಕ್ಕು ಕಾಣದೇ ದಿಕ್ಕೇಟ್ಟು ದಿಕ್ಕಾಪಾಲಾಗಿ ಹರಿಯುತಿವೆ
ಗೋಪುರ,ಗುಂಬಜ, ಮೀನಾರ ಗಳು ನೆಲದ ಕಡೆ ಮುಖ ಮಾಡಿವೆ
ಮುಖ ಚಹರೆಗಳ ಮೇಲೆ ಮುಖ ಮರೆ ಮಾಚುವ ಮುಖವಾಡಗಳ ವಿಕೃತ ನಗೆಯ ತಕತೈ
ಸ್ನೇಹ,ಪ್ರೀತಿ,ಪ್ರೇಮ, ಬಾಂಧವ್ಯಗಳ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತೀವೆ
ಹೃದಯ ಹೃದಯಗಳ ನಡುವೆ ಬೆಸೆಯುವ ಸೇತುವೆಗೆ ಬಿರುಕು ಹೆಚ್ಚುತಿದೆ.

- Siddugouda

03 Mar 2020, 12:25 pm

ಪ್ರೀತಿ

ನನ್ನ ಎದೆಯಾಳದಲ್ಲಿ
ಅರಳಿದ ಹೂವು ನೀನು
ಪ್ರೀತಿಯ ಅಂಕುರಿಸಿದೆ ಸಾಗರದಷ್ಟು

ಮನದಂಗಳದಲ್ಲಿ ಮೋಹದ ಮಳೆ ಸುರಿಸಿ ಕಣ್ಣಂಚಿನಲ್ಲಿ ಕಿರುನಗೆಯ ಬೀರಿ
ಲೋಕದ ಪರಿಯಲ್ಲಿ ಚಿತ್ತಾರ ಮೂಡಿಸಿದೆ ನನ್ನ ಹೃದಯದ ಅಂತರಾಳದಲ್ಲಿ

ನನ್ನ ಜೀವನವನ್ನು ಮಿನುಗುವ ಹಾಗೆ
ಮನೆ-ಮನಗಳಲ್ಲಿ ದೀಪ ಹಚ್ಚುವ ತಾರೆಯು ನೀನು

ನನ್ನೆದೆಯ ಕನಸಿನ ಕುಸುಮವೇ
ನನ್ನೊಳಗಿನ ಭಾವನೆಗಳ
ಹಂಚಿಕೊಳ್ಳಲು ಆತುರ ಹೆಚ್ಚಾಗಿ
ಕಾತುರದಿಂದ ಕಾಯುತಿರುವೆ
ಸಪ್ತಪದಿ ತುಳಿಯುವ ಆ ಘಳಿಗೆ.. !!!


ಎ ಜಿ ಶರಣ್

- ಎ ಜಿ ಶರಣ್

03 Mar 2020, 07:51 am

ನಿರ್ಲಕ್ಷದ ಶಿಕ್ಷೆ

ಯಾರು ಅರಿವರು ಈ ತಾತ್ಸಾರದ ನೋವನ್ನು
ನಾನೇನು ಅಪರಾಧ ಮಾಡಿದೆ ಈ ನಿರ್ಲಕ್ಷದ ಶಿಕ್ಷೆ
ಪಡೆಯಲು,

ಪಣ ತೋಟು ಊಳಿಗೆ ಮಾಡಿದರು ನಿನ್ನ
ಲಕ್ಷ ಮಾಡರು, ಕಷ್ಟಕೆ ನೇರವಾಗಿ ಹೆಗಲು ನೀಡಿದರು
ಕೊರತೆಗಳ ಕಾಣುವರು,

ಉಸಿರ ಹಂಚಿ ಜೀವ ನೀಡಿದ ಜೀವದಾತನೆ ನಿನ್ನ ಊಪೇಕ್ಷೇ ಮಾಡುವ ಬಾಳು ನರಕವೆ ಹೌದು,
ಆಸೆಯ ಮನದಿ ಸ್ನೇಹವ ಅಪೇಕ್ಷಿಸಿದೆ
ನನ್ನ ಅಸಡ್ಡೆ ಮಾಡಿದರು,

ವಸ್ತುಗಳ ಪ್ರೀತಿಸಿ ವ್ಯಕ್ತಿಗಳ ಉಪಯೋಗಿಸೊ ಕಟುಕರಾದರು ಇಂದಿನ ಜನರು,

ನಿಜ ಪ್ರೀತಿಯ ತೋರಿ ನಿಜ ಸ್ನೇಹವ ಕೋಟವನಿಗೆ
ಅನಾದರದ ಅನುರಾಗವೆ ಕೊಡುಗೆ.

ಕಿರಣ್ ಕ್ರೀಸ್

- Kris

03 Mar 2020, 07:50 am

ದೇವಸೊಗಾ

ಕೆನ್ನೆಗುಳಿ ಮಲ್ಲೆನಗು
ನಿನ್ನ ಪಿಸುನುಡಿವ ತುಟಿಜೇನ ರೆಕ್ಕೆ..
ಸನ್ನೆಮುಂಗುರುಳು
ನನ್ನ ಕರೆದಚ್ಚಿವೆ ನಿನ್ನೊಲವ ಸ್ಪರ್ಶಕ್ಕೆ..

ಕಪ್ಪುಕೆರಳ ಜಡೆನಾಗರ
ಹೆಪ್ಪಿದ ಹಾಲಂತ ಚಂದ್ರಮೊಗಾ..
ಮುಗ್ಧತೆ ಹೂ ತಾಮರ
ಮೌನರಳಿ ನೀನೊ ದೇವಸೊಗಾ..

ಎದೆಕೂಗಿ ಕಣ್ಣುಕರೆವಾ
ಕಣ್ಣರೆಪ್ಪೆ ನಿನ್ನ ಮುಚ್ಚಿತೆರೆವಾ..
ನಿನ್ನ ನಡೆಯೊ ಹರಿವಾ
ನದಿನವಿಲೊ ಸ್ವರ್ಗತೆರೆವಾ..

ಮಲೆತ ಮನಕೆ ಮೊಗ್ಗಿರಿಸಿ
ಕಲೆತೆನೀ ಎದಿಒಲವ ಸುರಿದಾ..
ಮಳೆನೆನಪ ನೀ ಸೆಲೆಬರಿಸಿ
ಇಳೆನಕ್ಕ ಹೂಹಸಿರು ಬಿರಿದಾ..

- samna

03 Mar 2020, 07:08 am

ಬಿರುಗಾಳಿಯ ಜೊತೆ ಹೋರಾಡಿ

ಬಿರುಗಾಳಿಯ ಜೊತೆ ಹೋರಾಡಿ ನಾ ಸ್ಥಿರವಾಗಿ ನಿಂತಿರುವ ಹೂ ಬಳ್ಳಿಯು!!
ನಿನ್ನಾಸೆ ಮಲ್ಲಿಗೆಯ ಮೊಗ್ಗನ್ನು ಹೊತ್ತು
ಬಯಸಿ ಬಂದಿರುವೆ ನಿನ್ನ ಆಸರೆಯ!!

ಅಂಗೈಯ ಚಾಚಿ ನೀ ಬರಸೆಳೆದುಕೋ
ನಾ ಕಾದಿರುವೆ ನಿನ್ನ ಬಿಸಿ ಅಪ್ಪುಗೆಗೆ!!
ನೀ ಒಲವಿಂದ ಮುತ್ತಿಕ್ಕಿ ಮುದ್ದಿಸಲು
ಮೊಗ್ಗರಳಿ ಹೂವಾಗಿ ಘಮಿಸುವುದು!!

ನಿನ್ನ ಪ್ರಾಯದ ಇಬ್ಬನಿ‌ ಸೋಕಿರಲು
ನನ್ನ ಕೊರಳು ನಿನ್ನ ಬಳಸ ಬಂದಿಹುದು!!
ನಿನ್ನ ಸುತ್ತ ನಾ ಹಬ್ಬಿ ನನ್ನನ್ನು ನೀ ತಬ್ಬಿ
ಎಂದೆಂದೂ ಜೊತೆಯಾಗಿ ನಗುತಲಿರುವ!!

ಬಿಡದಂತೆ ಬಿಗಿಯಾದ ಅನುರಾಗವಿರಲು
ಬಿರುಗಾಳಿ ಬಂದರೂ ಪ್ರೀತಿ ಸೋಲದು!!
ದೊರೆತಿರುವ ಆಸರೆ ನೆಮ್ಮದಿ ತಂದಿರಲು
ಎಂದೆಂದೂ ಅಗಲುವ ಮಾತು ಬರದು!!

- ಪಿ.ಜಿ.ಜ್ಯೋತಿ

02 Mar 2020, 10:12 pm

ಗೆಣೆಕಾರ

ಎತ್ತ ಹೋದೆ ಎನ್ನ ಮುತ್ತಿನ ಗಣೆಕಾರ ಹೊತ್ತೊಯ್ಯಾ
ಇತ್ತ ಸಿಕ್ಕಿನ ಕತ್ತಲ ಬಲೆಗ/ರನ್ನಗೆಣೆಯ
ಹೊತ್ತು ಮುಳುಗ ಹೊತ್ತಿನ ಒಳಗ

- samna

02 Mar 2020, 11:55 am

ಮಠದ ಹುಡುಗ್ರು

ದಿಟಬಾಳ ಅರ್ಥದ ಗೆಲುವ ಹರಸಿ
ಮಠಕೆ ಬಂದವರು ದಿಕ್ತಟ ಊರೂರ ದಾಟೀ॥॰॰
ಕಟ್ಟಳೆ ಮೀರದೆ ಕಟ್ಟುನಿಟ್ಟ ನಡೆಸಿ
ವಟವೃಕ್ಷ ನೆರಳಿಗೆ ತಳೆದವರು ಮೊಳಕೆನಾಟೀ॥॰॰

ಗುರು ಪಂಚಾಕ್ಷರಿ ಇನಕಿರಣದಲಿ
ಅರಳುಗಟ್ಟಿಸಿಕೊಂಡವರು ಎದೆಮೊಗ್ಗ ಕ್ಷಾರ॥॰॰
ಅರಿವೆಂಬ ಸತ್ಯ ಸಾಕ್ಷಾತ್ಕಾರದಲಿ
ಎರಗುತ ಪದತಲಕೆ ಕಂಡವರು ಸಂಸ್ಕಾರ ॥॰॰

ಕಟ್ಟಿಗೆಯ ಸೀಳಿ ಕುಟ್ಟಿಸಿ ಭತ್ತವನು
ಭಾರಡಕಿ ಉಣಬಡಿಸಿ ದಾಸೋಹ ಕೃಪಾಕರ॥॰॰
ಗಟ್ಟಿಗೊಳ್ಳತ ಗೈದವರು ಕಬ್ಜವನು
ಕುಪ್ಪಳಿಸಿ ಕುಣಿದದ್ದು ನೆನಪೀಗ ಹಿತಕರ॥॰॰

ರನ್ನದ ಕೆಳೆಯರ ಅನ್ನದ ಒಡೆಯರ
ಚೆನ್ನೇಶ ನೆಲೆವೀಡು ಎದೆಮನದ ಹೊನ್ನರಳಿ॥॰॰
ಜ್ಞಾನಹಸಿವನೀಗಿ ಬದುಕ ಕಟ್ಟಿತೆಲ್ಲರ
ಕೊನರಿಟ್ಟಿದೆ ಕಲ್ಮಠ ಚಂದ್ರಶೇಖರ ಜೊನ್ನರಳಿ॥॰॰

- samna

02 Mar 2020, 11:42 am

ಉಳಿಗಾಲವೆಲ್ಲಿ ?

ಜವಾಬ್ದಾರಿಗಳು ಬೆನ್ನೇರಿ ಬೇತಾಳನಂತೆ
ಕಾಡುತ್ತಿರುವಾಗ ಕನಸಿನ ಕೈ ಹಿಡಿವುದು
ಹೇಗೆ, ಪ್ರತೀ ಹೆಜ್ಜೆಗೂ ಹೊಸತೊಂದು
ಸವಾಲು ಉದ್ಭವಿಸಿದಾಗ ಉತ್ತರ
ಹುಡುಕುವುದಾದರೂ ಹೇಗೆ!

ಆಗಸದಿ ತಾರೆಗಳ ನೋಡಿ
ನಗುವಷ್ಟರಲ್ಲಿ ನಿಂತ ನೆಲವು ಕುಸಿದು
ಹೋದರೆ ಪಾದವೆಲ್ಲಿ ಇಡುವುದು
ಹೆಜ್ಜೆಗಳ ಭಾರ ಹೇಗೆ ಹೊರುವುದು!

ಆಸೆ ಆಕಾಂಕ್ಷೆಗಳಿಗೆ ತಾವಿಲ್ಲ ಇಲ್ಲಿ
ಕೋಪ ತಾಪಗಳಿಗೆ ಉಳಿವಿಲ್ಲ ಇಲ್ಲಿ
ಕಣ್ಣ ಹನಿಯ ಒರೆಸುವ ಕೈ ನಂಜಾಗಿ
ಮಡಿದಾಗ, ಮಿಡಿವ ಹೃದಯ ನಾಳೆಗಳ
ಚಿಂತೆಯಲ್ಲಿ ಬಡಿತವನ್ನು ಮರೆತಾಗ!

ನನ್ನವರೆನ್ನುವವರ್ಯಾರಿಲ್ಲಿ ನೊಂದ
ಮನಕೆ ಉಸಿರುಗಟ್ಟುವಂತೆ ಒಲವ
ಚಿತೆಗೆ ಬೆಂಕಿ ಹಚ್ಚಿದಲ್ಲಿ? ನಂಬಿಕೆಯ
ನೆಂಟಸ್ತಿಕೆ ಏತಕಿಲ್ಲಿ ಸ್ವಾರ್ಥದಿಂದ ಹಗ್ಗ
ಎಣೆದು ಕೊರಳಿಗಾಕಿ ಕೊಲ್ಲುವಲ್ಲಿ!

ಬಿಂಕದ ಬದುಕಿಗೂ ಸುಂಕ ಸಲ್ಲಿಸಬೇಕಾದರೆ ಉಳಿಗಾಲವೆಲ್ಲಿ ನೋವು ನಲಿವುಗಳ ನಿತ್ಯ ದೊಮ್ಮರಾಟದಲ್ಲಿ!!

- ಚುಕ್ಕಿ

01 Mar 2020, 10:18 pm