Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿ

ಒಬ್ಬಳನ್ನು ನೋಡಿದ ತಕ್ಷಣ ಮನಸ್ಸಲ್ಲಿ ಭಾವನೆಗಳ ಅಲೆದಾಟ ಅಲೆದಾಡುವ ಮನಸುಗಳು ಒಬ್ಬಳನ್ನು ನೋಡಿದ ತಕ್ಷಣ ಅವಳನ್ನು ಇಷ್ಟಪಡುತ್ತೇವೆ ನೋಡಿದ ತಕ್ಷಣ ಹುಟ್ಟುವ ಪ್ರೀತಿಯು ಒಂದು ನಿಜವಾದ ಪ್ರೀತಿನೆ


ಅನು

- THALVAR HANUMANT

01 Mar 2020, 10:01 pm

ಅವಳೇ ಪ್ರೀತಿಯೇನ?

ನನ್ನ ಕತ್ತಲೆಯ ಬಾಳಲ್ಲಿ
ಹೊತ್ತಂದು ಹೊಂಬೆಳಕ ಹಚ್ಚಿಟ್ಟು
ಹೋದವಳ್ಯಾರ?॥॰॰॰॰

ಹಚ್ಚಿಟ್ಟ ಬೆಳಕಲ್ಲಿ ಭಿತ್ತಿಯ
ಬಚ್ಚಿಟ್ಟಿರಬಹುದೆಂದು ಹುಡುಕುತ್ತಲಿಹೆ
ನನ್ನೊಳಡಗಿದ ಅವಳ್ಯಾರ?॥॰॰॰॰

ನನ್ನ ತಬ್ಬಲಿ ಬದುಕಲ್ಲಿ
ಮಬ್ಬುಗತ್ತಲ ಕಪ್ಪುಮೋಡ ಕರಗಿಸಿ
ತಬ್ಬಿ ಮಳೆಬಿಲ್ಲಿಟ್ಟು ಹೋದವಳ್ಯಾರ?॥॰॰॰॰

ದಿಕ್ಕು ದೆಸೆ ತಿಳಿಯದಲ್ಲಿ
ಪ್ರೀತಿಕಡಲ ಹರಿಸಿ ದೋಣಿಮಾಡಿ
ದಡಕಚ್ಚಿ ಹೋದವಳ್ಯಾರ?॥॰॰॰॰

ತುಂಬಿದೆದೆಯ ಮಾತಮಲ್ಲಿ
ನಂಬಿಗೆ ಅಗೆದು ಮೊಗೆದಷ್ಟು ತುಂಬಿ
ನಗೆಚುಕ್ಕಿ ಆದವಳ್ಯಾರ?॥॰॰॰

ಹುಡುಕುತಿಹೆ ಏಕಾಂತದಲಿ
ಕುಳಿತು ಒಬ್ಬನೇ ಪಿಸುಗುಟ್ಟುತ
ಅವಳೇ ಪ್ರೀತಿಯೇನ?॥॰॰॰॰

- samna

01 Mar 2020, 07:17 pm

ಮನದಾಳದ ಮಾತುಗಳು

ಯಾರನ್ನಾದರೂ ಪ್ರೀತಿಸುತ್ತೇನೆ ಅನ್ನುವ ಬದಲು, ಇಷ್ಟ ಪಡುತ್ತಿದ್ದೇನೆ ಅನ್ನುವುದು ಸೂಕ್ತ. ಯಾಕ್0ದ್ರೆ ಪ್ರೀತಿ ನೋಡಿದಾಕ್ಷಣ ಹುಟ್ಟುವುದಿಲ್ಲ. ಎಲ್ಲ ರೀತಿಯಿ0ದಲೂ ಅರ್ಥ ಮಾಡಿಕೊ0ಡಮೇಲೆ ಪ್ರೀತಿ ಹುಟ್ಟುತ್ತದೆ.


ಇಂತಿ ಮಲ್ಲೇಶ್

- mallesh

01 Mar 2020, 07:10 pm

ವೇಷಧಾರಿ

#ನಿಷ್ಠೆಜನರ ಕೆಟ್ಟೆವೆನಿಸಿ
ಕರಡಿಯ ಕುಣಿಸಿದನೋ ತೈತಕ ಕರಡಿಯ
ಕುಣಿಸಿದನೋ ॥ऽऽऽ

#ಭೇಧವನೆ ಬಗೆದಿರಿಸಿ
ಮೋಹಿತನೀತ ಲೋಲುಪನಾಗಿ
ವೇಷವ ತೊಟ್ಟನೋ ॥ऽऽऽ

#ಒಕ್ಕೊರಲ ಕತ್ತಹಿಸುಕಿ
ಕುರಿಮಂದೆಯ ಮಾಡಿ ಒಡೆದು
ಗಾಧೆಯ ಆಳಿದನೋ॥ऽऽऽ

#ಸಂಸ್ಕೃತಿ ಗರ್ಭ ಬಗೆದು
ರೊಕ್ಕದಾಸೆಗೆ ನೆಲದುಸಿರ ನಿತ್ಯವೂ
ಕೊಲ್ಲತಿಹನೋ॥ऽऽऽ

- samna

01 Mar 2020, 04:45 pm

ಜೈ ಭುವನೇಶ್ವರಿ

ಸಿರಿಗನ್ನಡ ನಾಡಿನ ಕರಿ ಕನ್ನಡಿಗನಾಗಿ ಮರು ಜನ್ಮವ ಕರುಣಿಸು ಕರುನಾಡ ಮಾತೆ .... ..... ಮಲೆನಾಡ ಮಧು ಮಗಳೇ ಹಣೆಗೆ ಶ್ರೀ ಗಂಧದ ತಿಲಕ ತೊರೆದುಧಾಧರೆ ನಿನ್ನೊಡಲ ಅಧೆ ನಮಗೆ ನರಕ .... ..... ತಿರುಕನಾಗಿ ಜನ್ಮ ಕೊಡು ಕರುಣೆ ತೋರುವ ತಾಯೇ ಸಿರಿನುಡಿಯ ಕಲಿತರೆ ಅದೇ ನನ್ನ ಬಾಗ್ಯ .... ... ತೇರನೆಳೆಯುವೆ ನಿನ್ನ ಬಾರೆ ಭುವನೇಶ್ವರಿ , ಮರೆತ್ಹೇನಾಧರೆ ನಿನ್ನ ನಾ ತೊರೆಯುವೆನು ನನ್ನ ..,

- Iranna Shirol

01 Mar 2020, 09:47 am

3.ಹಿತ ವಚನಗಳು.

ತಂದೆ--ತಾಯಿಯ ಸೇವೆ/ಗುರುಲಿಂಗ ಜಂಗಮರ ಸೇವೆ ನೀ ಮಾಡಿ ಪುನಿತನಾದೊಡೆ/ಸದ್ಗತಿ ದೊರಕುವುದು ನೋಡ ಶ್ರೀ ಷಡಕ್ಷರದೇವ//

ಆಸೆಯಿರಲಿ ಮನುಜ/ದುರಾಸೆ ಬೇಡ
ಅತಿಯಾಸೆ ನೀ ಪಟ್ಟಲ್ಲಿ/
ನಿರಾಸೆ ಕಟ್ಟಿಟ್ಟ ಬುತ್ತಿ ನೋಡ ಶ್ರೀ ಷಡಕ್ಷರದೇವ//

ಸತ್ಯದ ನಡೆಯಲಿ/ಶಿವನ ಸ್ಮರಿಸದ ಮನುಜಗೆ
ಮುಕ್ತಿಯ ದಾರಿ/
ದೊರಕದು ನೋಡ ಶ್ರೀ ಷಡಕ್ಷರದೇವ//

ಕಿದ್ವಾಯಿ ರಾಜಶೇಖರ್.

- Raj Raj

29 Feb 2020, 09:40 pm

ಮಧುರ ಬಾಂಧವ್ಯ

ಹೆತ್ತವರ ನೆರಳಿಲ್ಲದೆ ಕಗ್ಗತ್ತಲೆಯ ಕಾರ್ಮೋಡ ದೀ ಕಾಣದ ಮುಸ್ಸಂಜೆ ದೀಪವ ನೆನೆದು ಕಂಬನಿ ಮಿಡಿಯುತ ನಿಂತಿರಲು ನಾನು ಬದುಕ ಕಲಿಸಿದ ಜನನಿ ಒಲವ ನೀಡಿದ ಹೃದಯ ಇಂದಿಲ್ಲ ನನ್ನ ಜೊತೆಗೆ ನಶ್ವರದ ಜೀವನವ ನೆನೆನೆನೆದು ಅಳುವಾಗ ಕಣ್ಣೊರೆಸುವ ತಾಯಾಗಿ ಜಗಮರೆಸೂ ಮಗುವಾಗಿ ನನ್ನೊಳಗೆ ನೀವು ನೆಲೆಸಿದ್ದೀರಿ ಶಾಶ್ವತವಾಗಿ ತಂಗಿಗೆ ನೆರಳಾಗಿ ಅವಳ ಉಸಿರು ತಾವಾಗಿ ನನ್ನ ಮನದೊಳಗೆ ಮೂಡ್ ಇದಿರಿ ಸದ್ಗುರು ವಾಗಿ ಕಹಿ ನೋವುಗಳ ತೊರೆದು ನೀವು ಒಪ್ಪಿ ಕರೆದರೆ ಜೀವಿಸುವೆ ನು ನಿಮ್ಮೊಳಗೆ ಸುಖವಾಗಿ 2 ಮನಸುಗಳ ನಡುವೆ ಮಧುರ ಬಾಂಧವ್ಯದ ಒಡವೆ ಹೊಳೆಯುತ್ತಿರ ಲೀ ನಮ್ಮ ಮನ ಒಂದಾಗಿ ಸಿಗಿ ನೆನಪೊಳಗೆ

- nagamani Kanaka

29 Feb 2020, 06:06 pm

ಮೌನರಾಗ....

ಮರೆಯಲಾಗದವಳ ಬಗ್ಗೆ
ಬರೆಯಬಾರದು ಕವಿತೆ
ಹಳೆಯ ನೆನಪುಗಳ ಜೊತೆ
ನಾ ಮೌನಿಯಾಗಿ ಕುಳಿತೆ
ಅಂದು-ಇಂದುಗಳ ನಡುವೆ
ಕಳೆದ ದಿನಗಳು ಅದೆಷ್ಟೋ
ಅರ್ಥವಾಗದ ಈ ಬದುಕಿನಲ್ಲಿ
ಉಳಿದಿರುವುದು
ಕಹಿನೆನಪುಗಳು ಒಂದಿಷ್ಟು....

- krishna Billadi melbailu

29 Feb 2020, 05:07 pm

ನೀನೆ ನನ್ನ ಮನದ ಮಾಹಾರಾಜನು

ಅವನ ಹೃದಯದಲಿ ಹೇಗೆ ಕಟ್ಟಲಿ ಪ್ರೀತಿಯ ಗೂಡೊಂದನು
ಪ್ರತಿ ಕ್ಷಣಗಳು ಕಳೆಯುತಿವೆ ನಿನ್ನದೆ ನೆನಪಿನಂಗಳದಲಿ

ಹುಸಿಯಾಗದಿರಲಿ ನನ್ನ ಕನಸು ಆ ಕನಸೆ ಎಂಥ ಸೊಗಸು
ನಿನ್ನ ಹೆಜ್ಜೆಯಲಿ ಹೆಜ್ಜೆ ಹಾಕುವ ಬಯಕೆ ಮೂಡಿದೆ

ಶೃಂಗಾರದ ಹೊಸ ಕಾವ್ಯವು ನಿನ್ನ ಕಂಡಲೆ ಎದೆಯ ತುಂಬಿದೆ
ತಿರುಗಿ ತಿರುಗಿ ನಿನ್ನ ನೋಡುವಾಸೆ ನೋಡಿ ನಿನ್ನ ಮುದ್ದಾಡುವಾಸೆ

ಇಲ್ಲಿವರೆಗೂ ಸೋಲದ ನಾನು ನಿನಗೆ ಹೇಗೆ ಸೋಲೊಪ್ಪಿದೆ
ತಿಳಿಯದಾಗಿದೆ ನನ್ನ ಸೋಲಿನ ಮೂಲ ತಿಳಿದರು ಮತ್ತೆ ಸೋಲುವೆ ನಾ

ಅತ್ತ ಇತ್ತ ಎತ್ತ ಹೋದರು ಎದುರಾಗುತಿದೆ ನಿನ್ನ ಪ್ರತಿಬಿಂಬವು
ಕೇಳುವೆ ಆ ದೇವನಲ್ಲಿ ನಿನ್ನನೆ ನನ್ನ ಮನದ ಮಹಾರಾಜನಾಗಿ...

28/2/2020

- Irayya Mathad

29 Feb 2020, 12:23 am

ಹೃದಯವೆಂಬ ಖಾಲಿ ಹಾಳೆಯಲ್ಲಿ

ಹೃದಯವೆಂಬ ಖಾಲಿ ಹಾಳೆಯಲ್ಲಿ
ನೀ ಬರೆದೆ ಒಲವಿನ ಸಾಲುಗಳ!!
ಮನವೆಂಬ ಬಂಜರು ಬಯಲಿನಲ್ಲಿ
ನೀ ಬಿತ್ತಿದೆ ಸುಂದರ ಕನಸುಗಳ!!

ನಿಶ್ಯಬ್ಧವಾದ ಅಂತರಾಳದಲ್ಲಿ
ನೀ ನುಡಿಸಿದೆ ಸುಂದರ ವಾಧ್ಯಗಳ!!
ತುಟಿಯಂಚಿನ ಕಿರುನಗೆಯಲ್ಲಿ
ನೀ ಮರೆಸಿದೆ ಎಲ್ಲಾ ನೋವುಗಳ!!

ಬರವಸೆ ಕಾಣದ ಬಂಡೆದೆಯಲ್ಲಿ
ನೀ ತುಂಬಿದೆ ಹೊಸ ಭಾವಗಳ!!
ಕಾರ್ಮೋಡ ಸರಿಸಿ ಈ ಬದುಕಿನಲ್ಲಿ
ನೀ ಬಂದು ಸುರಿದೆ ಬೆಳದಿಂಗಳ!!

- ಪಿ.ಜಿ.ಜ್ಯೋತಿ

28 Feb 2020, 03:32 pm