Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹನಿ.....ಮುತ್ತು !!!

ಬದುಕಿಸುವ ಕನಸೇ ಕೊನೆಯವರೆಗೂ
ಕೈ ಹಿಡಿದು ನಡೆಸು
ಮಲಗಿರುವ ನಿನ್ನಯ ನಿರೀಕ್ಷೆಯಲ್ಲಿ
ತೂತು ಬಿದ್ದ ನಕ್ಷತ್ರಗಳ ವರ್ಣಸುತ
ಬಡ ಭಾವನೆಗಳ ಪೋಣಿಸುತ್ತಾ
ಮೌನದ ಕತ್ತಿಯಲ್ಲಿ
ಚುಚ್ಚಿ ಚುಚ್ಚಿ ಕೊಲ್ಲದಿರು
ಮಾತಿನ ಬಂದೂಕಿಗೆ ಎದೆಯೊಡ್ಡಿ
ನಿಂತಿರುವೆ ಗುರಿಯಿಡು ಹೃದಯದ
ಬಂಡೆಗೆ ಛಿದ್ರವಾಗಲಿ...........

- bindhu

07 Mar 2020, 03:37 pm

ಕೀರ್ತಿ ವರ್ಣನೆ

ಆ ನಿನ್ನ ಕೋಮಲವಾದ ಕೇಶರಾಶಿ ನೋಡು ನೋಡುತ್ತಲೇ ನಾ ನಿನ್ನ ಮುಡಿಗೆ ಹೂ ಅದೇ.!!

ನಿನ್ನ ಆಕಾಶವೆಂಬ ರೂಪದಲ್ಲಿ ನಾ ನಕ್ಷತ್ರವಾಗುವ ಹಂಬಲ..!

ಆ ನಿನ್ನ ಕನ್ನಡಿಯಲ್ಲಿ ನಾ ಬಿಂಬಿಸುವ ಹಂಬಲ.!!

ಆ ನಿನ್ನ ಕಣ್ ನೋಟ ನಾನ್ ನಾನು ಮತ್ತೆ ಮತ್ತೆ ನೋಡುವಂತೆ ಮಾಡಿತು..!!

ಆ ನಿನ್ನ ಕಿವಿ ಓಲೆಗಳಿಗೆ ನಿನ್ನಿಂದಲೇ ಹೊಳಪು ಅ ಹೊಳಪಿಗೆ ಮನಸೋತೆ.!!

ನಿನ್ನ ಇಂಪಾದ ಸ್ವರ ಕೇಳುವ ಕಾತುರನಾಗಿದೆನೆ.!!

ನಿನ್ನ ಕಣ್ ರೆಪ್ಪೆಗಳು ನಿಸರ್ಗದ ಚೆಲುವೆಯಂತೆ ಕಂಗೊಳಿಸುತ್ತಿವೆ.!!

ಆ ನಿನ್ನ ನಗು ಬೆಳದಿಂಗಳ ಚಂದ್ರನ ಹೊಳಪಿನಂತೆ ಕಂಗೊಳಿಸುತ್ತಿವೆ..!!

ಆ ನಿನ್ನ ತಿಲಕವು ನಿಸರ್ಗದಲ್ಲಿ ಉದಯಿಸುವ ಸೂರ್ಯನಂತೆ ಕಂಗೊಳಿಸುತ್ತಿದೆ..!!

ಆ ನಿನ್ನ ನಿರ್ಮಲವಾದ ಹಸ್ತದಲ್ಲಿ ಪುಸ್ತಕ ನಾನಾಗಲೇ..!!

ನಿನ್ನ ಕಾಲ್ಗೆಜ್ಜೆ ಸಪ್ಪಳ ಕೇಳುವ ಹಂಬಲ..!!

ನಾ ಕೋಡುವ ಉಡುಗೊರೆ ಅ ಕಾಲ್ಗೆಜ್ಜೆ....!!!

ನಾ ನಿನ್ನ ನೋಡಿ ಮತ್ತೊಮ್ಮೆ ವರ್ಣಕನಾದೆ..!!

*ವಿಕೆ*

- Vasanth Kumar.G.H

07 Mar 2020, 03:25 pm

ವಿರಹ ಗೀತೆ

ಮುಂಜಾನೆಯ ತಂಪಿನಲ್ಲಿ
ಮುಸ್ಸಂಜೆಯ ಮಾತಿನಲ್ಲಿ
ಮೋಡವೆ ಇರದ ಗಗನ
ಮಳೆಯನ್ನು ಸುರಿಸಬಹುದು

ಜೀವವೇ ಹೀರಿದ ಹೃದಯ
ಪ್ರೀತಿಯನ್ನು ಆಶ್ರಯಿಸುವ ಓ ಮನುಜ
ವಿರಹ ಗೀತೆಯನ್ನು
ರಾಗವಾಗಿ ಹಾಡಬಹುದು

ಬಿರುಕು ಬೀಳದ ಮುಗ್ಧವಾದ
ಮನಸ್ಸುಗಳೊತ್ತು ಜೀವನದಲ್ಲಿ
ಬಡತನದಲ್ಲಿ ಬೆಂದ ಹೃದಯ
ಬೂದಿ ಆಗದೇ ಕರಿ ಇದ್ದಿಲು ಆಗಿ ಉಳಿಯಬಹುದು

ಬಂಧನಗಳು ಬೇಲಿ ಕೊರಳಿಗೆ
ಹಗ್ಗವಾಗಿ ಬಿಗಿಯುವ ಮುನ್ನವೆ
ಪರಿಚಯವಾದರೂ ಈ ಕಣ್ಣಲ್ಲಿ ನೀರಾಗಿ
ಕಣ್ಮರೆಯಾದರೂ ಕಾಲಕ್ಕೆ ಬದ್ದರಾಗಿ
ವಿಧಿವಶರಾದರು............

- bindhu

07 Mar 2020, 03:17 pm

ಕುಣಿಯೋ ಆಸೆ

ನಿನ್ನ ಜೊತೆ ಕುಣಿಯೋ ಆಸೆ ,
ಆದ್ರೆ ನನಗೆ ಕುಣಿಯೋದಿಕ್ಕೆ ಬರೋಲ್ಲ
ಎಂಬುದೇ ನಿರಾಸೆ ,....
ನಿನ್ನ ಅಪ್ಪಿಕೊಂಡು ಮುದ್ದಾಡೋ ಆಸೆ ,
ಆದ್ರೆ ನನ್ನ ಸತಾಯಿಸಿ
ಮಾಡ್ತಿಯಲ್ಲೇ ನಿರಾಸೆ ......
ನೀ ಮಾಡೋ ಬಿರಿಯಾನಿ ತಿನ್ನುವ ಆಸೆ
ಆದರೆ ನಿನಗೆ ಮ್ಯಾಗಿ ಬಿಟ್ಟರೆ ಬೇರೆ
ಏನು ಮಾಡೋಕೆ ಬರಲ್ಲ
ಅನ್ನೋದೇ ನಿರಾಸೆ ....
ನಿನ್ನ ಜೊತೆಗೂಡಿ ಬಾಳೋ ಆಸೆ ,
ಆದರೆ
ನಾ ಇಲ್ಲಿಯವರೆಗೂ ಕಂಡಿದ್ದು ಕನಸು ಎಂಬುದೇ ನಿರಾಸೆ .....

- ದೇವು,,,,,,ಕನ್ನಡಿಗ

07 Mar 2020, 02:56 pm

ಅಳೋ ನೋವಿಗೆ ನಗೋ ಮದ್ದಿದೆ

ಅಳೋ ನೋವಿಗೆ
ನಗೋ ಮದ್ದಿದೆ!!
ನಿನ್ನ ಅಳು ಎಂಬ
ಹೊಳೆ ಬತ್ತಿ ಹಸಿರಾಗಿದೆ!!
ನೀನು ನಕ್ಕಾಗ
ನಕ್ಷತ್ರ ಹೊಳೆದಂತಿದೆ!!
ಖುಷಿ ಎಂಬ ಮೆರವಣಿಗೆ
ಹೊರಟಾಗಿದೆ!!
ಬಾಳೊಂದು ಬಂಗಾರದ
ಗಣಿಯಾಗಿದೆ!!
ಸಂತಸದ ಮೊಗ್ಗರಳಿ
ಹೂವಾಗಿದೆ!!
ಕಣ್ಣೀರು ಹೊಳೆ ಹೊಳೆವ
ಮುತ್ತಾಗಿದೆ!!
ಅಳೋ ನೋವಿಗೆ
ನಗೋ ಮದ್ದಿದೆ!!

- ಪಿ.ಜಿ.ಜ್ಯೋತಿ

07 Mar 2020, 07:35 am

ಪ್ರೀತಿತೋರಿದ ತಪ್ಪಿಗೆ

ಮುದ್ದಾಡಿದ ಮನಸ್ಸ
ಮೃಧುಗೊಳಿಸಿ ಅಟ್ಟೆಯ ಮಾಡಿ..
ಪ್ರೀತಿತೋರಿದ ಕರುಳಾ
ಒಸೆದು ಉಂಗುಷ್ಠದ ರೆಕ್ಕೆಮಾಡಿ..

ಬಸಿನೆತ್ತರ ಬಣ್ಣಕ್ಕೆಂದು
ಉಜ್ಜಿ ಉಜ್ಜಿ ಗಟ್ಟೆಂದು ಪಾಲೀಸಮಾಡಿ..
ಉಸಿರು ಸದ್ದಿಡತದೆಂದು
ಮೊನಚುಮೂಳೆ ಜಡಿದು ಬಿಗಿಮಾಡಿ..

ಎದೆಇದು ಮಿಡಿವದೆಂದು
ಬಾರಮೇಲ ಷೋಕಿಗೆ ಚಿತ್ರಹೂ ಮಾಡಿ..
ಮಾಂಸಖಂಡಗಳ ಮೀನ
ಒತ್ತಬಾರದೆಂದು ಹತ್ತಿಯಂತೆ ಹರಡಿ..

ಒಲವಿಗೆ ಆದವರ ಬದಕೆ
ಚಪ್ಪಟೆ ಎಬ್ಬಿಸಿ ಬಿಟ್ಟು ಬೂದಿದೂಳ..
ಮಾರಿಯರು ನೆಡೆದರೊ
ಮೆಟ್ಟುತ ಹೊರುವ ಚಪ್ಪಲಿಗಳ

- samna

05 Mar 2020, 07:22 pm

ಮದ್ದು

ನಿನ್ನ ಹೆಜ್ಜೆಗೆ
ನಾನೇ ಗೆಜ್ಜೆ

ಆ ಗೆಜ್ಜೆಯಿಂದ
ಬರುವ ಸದ್ದು,

ನನ್ನ ಪ್ರೇಮರೋಗಕ್ಕೆ
ಮದ್ದು

- Bheemashi KD

05 Mar 2020, 07:38 am

ದನಗಾಹಿ

ಜಿಡ್ಡುಗಟ್ಟಿದ ಅಂಗಿ
ಬೆವರು ಮೈಯ್ಯ ಕಮಟು
ತಲೆತುಂಬ ಸುತ್ತಿದ
ರಕ್ಷಣೆಗೆಂದೆ ಮುಂಡಾಸು
ಹರಿದದ್ದ ಮರೆಮಾಚಿ
ಗಂಟಿಕ್ಕಿ ಉಟ್ಟ ಬಿಳಿಕಚ್ಚೆ
ಹಿಮ್ಮಡ ಸವೆದ ಕಿತ್ತ ಉಂಗುಷ್ಠದ ಚಪ್ಪಲಿ
ಕೈಯಲ್ಲಿ ಹಿಡಿದೊಂದು
ಡೊಂಕು ಧನಕೋಲು
#ನಿತ್ಯದಿವು #ರೂಪರೇಖು #ಜೊತೆಗೆ ತನ್ನ #ಕರಿನೆರಳು

ಸರಗುಣಿಕೆ ಬಿಚ್ಚಿ ಬಿಟ್ಟು ಅಟ್ಟಿದ
ಹಸುವಿನ ಕೊರಳ ಅಗ್ಗ
ದನಪಾಲನೆಂಬುದಕೆ ಸಾಕ್ಷಿಗೆ
ಹಿಂಡ ಮೇಯಿಸಲು
ಅಡದಿ ಹೊಲದ ಮೇವಿನ ಲೆಕ್ಕ ಕೇಳತ
ಕರೆಕಲ್ಲ ತನಕ ಬಿದ್ದ ಸಗಣಿಯ
ಎತ್ತಿ ತಂದು ಹಿತ್ತಲಲ್ಲಿ
ಕೋಳಿ ಕೆದರುತ್ತಿದ್ದ ತಿಪ್ಪಗಾಕಿ
ಮತ್ತೊಮ್ಮೆ ಅಡಿಕೆ ಎಲೆ ಹೊಗೆ ಸೊಪ್ಪ
ಅಜ್ಜಿಗಂಟಲಿ ಮೆದ್ದು
ಹಾಲ ಕರುಗೆ ಹುಲ್ಲಿಡೆಂದು ಹೇಳಿ
#ಹೊಂಟ #ಪರಿಯಲಿತ್ತು ಕಾಳಜಿ
ಮಮತೆ,ರಕ್ಷಣೆ,ಜ್ವಾಪಾನ

ಐನೋರ ಅಂಗಡಿಗಾಕಿ
ಹಲ್ಲುಜೋಳ ಅಡಿಕೆಲೆ ಅಜ್ಜನ ತಂಭಾಕ
ತಂದು ಸವರ್ಧ ಅಜ್ಜಿಗಿಟ್ಟು
ಸೋಮಾರ ಸ್ನಾನಕೆ ಅಂಗಿ
ಕೈ ಹೊಲಿಗೆ ಹಾಕಿಡೆನುತ
ಕಲ್ಲು ವಲದ ಕಳೆ ಅರವತ್ತುವ ತೊಗರಿ
ಯರಿ ಬೆಳೆ ಅಂಗಲ
ಊರಗೌಡ್ರು ಎಷ್ಟುಸಲ
ಹೇಳಿ ಕಳುಹಿದರು ನಿಲ್ಲಿಸದೆ ಇಳಿವಯದಲ್ಲೂ
ಎತ್ತಿನ ಹುಲ್ಲು ತಾನ ಹೊತ್ತು
ಪಡಸಾಲೆ ಹೆಣ ಮಲಗಿದ
ಮಗನ ಬೈದು ಜತೆಗಾರರು
ದನನಿಲ್ಲುತಿಲ್ಲ ಎಂದು ಕರೆಯೇ
#ಕೋಲ ಊರುತ #ಬದುಕ ದಾರಿಯ ಹಿಂದಿಕ್ಕುವ
ಕಾಯಕದ ಜೀವ ಸಾಗತಿತ್ತ

ಯಾರ ಅಂಗು ತನಗಿಲ್ಲದೆ
ಪ್ರೀತಿ ಗೌರವ ಸ್ವಾಭಿಮಾನ ಮನೆಬಾಳ್ವೆ
ಧನಗಾಹಿಗೆ ಇದ್ದದ್ದು
ಆಸಿಗೆಯಷ್ಟು ಕಾಲಚಾಚಿ ಹೊದ್ದದ್ದು
ಊರ ಉಸಬರಿ ಇನಿತಿಲ್ಲ
ತಮ್ಮನಾಗಿ ಕಾಸ ಮಲ್ಲಜ್ಜ
ಕಷ್ಟಹಂಚಿಕೊಳ್ಳಲು
ಪತ್ನಿ ಹನುಮಜ್ಜಿ ಮಕ್ಕಳು ಮರಿ
ಇವಿಷ್ಟೆ ಪ್ರಪಂಚ ಇದರಾಚೆಗೆ
ಬಡಿಗೇರ ಅನುಸೂಯಕ್ಕ
ಶಂಕ್ರಣ್ಣ ಹುಚ್ಚಲ್ಲದ ಹುಚ್ಚಿ ಕಾಳವ್ವ
ಸಣ್ಣಕಲ್ಲು ಮುಳ್ಳು
ಹಾದಿಗೆ ತೆಗೆದಿರಿಸಿ ಸೆಗಣಿಹಿಡಿತಿದ್ದ
ಕಾಯಕದ ಪರಮೇಶಜ್ಜ
ಕಟ್ಟಿದ ಹಸು ಎಮ್ಮೆ ಗಳೆ ಸ್ನೇಹಿ
#ಕಾಯಕಯೋಗಿಯೇ ತಾನೆನಿಸಿ #ಬದುಕಿನನೇಕ
ಪಾತ್ರ ನಿಭಾಯಿಸಿದ್ದ

ಬಿಸಿಲು ಮಳೆಗೆ ಅಳುಕಲಿಲ್ಲ
ಬಡ ಬದುಕಿಗಂತೂ
ಕಿಂಚಿತ್ತೂ ಜಗ್ಗಲಿಲ್ಲ
ಸುತ್ತಿ ಮಲೆ ಸೀಮೆ ದುಡಿದ ಜೀವ
ಉಡುಪಿ ಆಸುಪಾಸೆಲ್ಲ
ಮದುವೆಗೂ ಮುಂಚೆ
ಸಂಸಾರ ರಕ್ಷಣೆ ಹೊಣೆ ನಿಬಾಯಿಸಿ
ಮೂಗಬಸವನ ನಂಬಿ
ಮನೆ ಮಂದಿಗೆಲ್ಲ ಪ್ರೀತಿ ಹಂಚಿ
ಊರತೇರು ಬರಲು
ಕಾಡ ಖುಷಿ ಹಕ್ಕಿಯಂತಾಗಿ
ಉದ್ದದ ಬಾಕಿ ಚೀಟಿ ದಿನಸಿ
ಸಾಮಾನ ಹೊತ್ತು ಪರಿ
ದ್ಯಾಮಪ್ಳ ಮನೆಯಲಿ
ಮಾಡಿಸಿದ ಹೋಳಿಗೆಯ ಹೊದಿಸಿ
ಬಸವಣ್ಣನ ಗುಡಿಗೆ
ಆಚರಿಸಿ ದ ಹಬ್ಬ ಇನ್ನ ಕನಸಷ್ಟೇ
#ಕೂಡು ಮನೆಗೆ ನೀಡೆ #ತಾನಾಗಿ ಸಂಸ್ಕಾರ
ನೆಡೆದಿತ್ತ ವಿಭೂತಿ ಹೆಜ್ಜೆಹಾಕಿ

ಡೈರಿಗ ಹಾಲ ಮಾರಿ
ಉಣಲೊತ್ತು ಸಾಕಿ ಸಲಹಿ
ಕಚ್ಚೆಒಳ ಕಟ್ಟಿದ ರೊಕ್ಕ ಗಂಟು ಬಿಚ್ಚಿ
ಜೀವತೇದ ಓದಿಸಿದ ಪರಿ
ನೋವುಣ್ಣುತಿದೆ ನೆನಪು
ಕಣ್ಣೀರು ಬರಿಸಿ
ಇನ್ನೂ ಸಾಕುವ ಭಾಗ್ಯ
ಸಿಗದೆ ಹೋಯಿತೆನಿಸಿ
ಅದ್ಯಾದೊ ಚಿಕನಗುನ್ಯ ಕಾಲ ಹಿಡಿದು
ಮೂಲೆ ಬಿದ್ದ ನೆಲಕಚ್ಚಿದ
ಕಾಲದ ಯಮ
ಸರಗುಣಿಕೆ ಹಗ್ಗ ದೊಟ್ಟಿಗೆ
ಕೋಗಿಲೆಯಂತೆ
ಜೀವವದು ಹಾರಿ
#ಮೂಗಬಸವೇಶನ ನೆನೆನೆದು ಆತ್ಮ
#ಲೋಕ ತೆರಳಿತೋ

ಹೀಡೇರದ ಕನಸಾಗಿ
ಉಳಿದ ಬದುಕಿಗೆ ಸಂಸಾರಕೆ
ನೆಮ್ಮದಿ ಗೆ ಪ್ರೀತಿಗೆ
ಸ್ವಾಭಿಮಾನ ಕೆ
ದೈವ ಭಕ್ತಿ ಗೆ ಕಾಯಕಕೆ ಗೌರವಕೆ
ಒಂದು ಜೀವನ ಪಾಠವಾಗಿ ಉಳಿದ
ಸವೆಸಿ ತುಂಬು ಬದುಕ
ಎದೆಗೆ ಬಿತ್ತಿದ
ದುಡಿಮೆಯಲೆ ಕೈಲಾಸವೆಂದು
ಬರಿದನಗಾಹಿ ತಾನಲ್ಲ
ಕಾದದ್ದು ಮಕ್ಕಳು ಮರಿಯೆಂಬ
ನಿಜದನಗಳೆ ನಾವೆಂದು
ಅರಿವಾಗುವ ಹೊತ್ತಿಗೆ
ಸತ್ತು ವರುಷ ಹನ್ನೆರಡಾತು
#ಕರುಣಾಳು ಮೂಗಬಸವೇಶ ಆತ್ಮಕ #ಚಿರಶಾಂತಿ ಕರುಣಿಸ

- samna

04 Mar 2020, 05:50 pm

ಅನಿಸಿಕೆ

ಪಂಡಿತ-ಪಾಮರರ
ಸಂಗಮ ತಾಣ
ಸರಿಗಮಪ ಸೀಸನ್ ೧೭ರ
ಸಂಗೀತ ಸಂಸ್ಥಾನ

ಹೊಸ ಚಿಗುರು -ಹಳೆಬೇರು
ಕನ್ನಡ ಕಗ್ಗದ ಮುತ್ತು
ಹಂಸಲೇಖ- ಅರ್ಜುನಜನ್ಯರು
ಕನ್ನಡ ಸರಿಗಮಪದ ಸ್ವತ್ತು

ವಿಖ್ಯಾತ ಜಯಹೋ ಮೊಳಗಿಸಿದ
ಕಂಚಿನ ಕಂಠ;ಕನ್ನಡಿಗರನ್ನ
ಜೇನ ಹನಿಯಲಿ ಮುಳುಗಿಸಿದ
ಮಧುರ ಕಂಠಗಳ ಸಮ್ಮಿಲನ

ನಾಕು ತಂತಿಯ ಮೀಟಿದ ಬೇಂದ್ರೆ
ಈ ನಾಲ್ವರಲ್ಲೆ ನೆಲೆಸವ್ರೆ
ಬವಣೆ ನೀಗಿಸಿ ,ಬಾಂದವ್ಯಸುಜ್ಞಾನವ
ಕರುನಾಡಲ್ಲಿ ಬೆಳೆಸ್ತಾವ್ರೆ

ಅಂದ-ಚಂದದ ವಯ್ಯಾರಿ
ಈ ಆಸ್ಥಾನದ ಸುಕುಮಾರಿ
ಅರ್ಜುನ್ ಜನ್ಯರ ಮದನಾರಿ
ಸರಿಗಮಪದ ನಿರೂಪಕಿ ಅನುಶ್ರೀ

ಮುದ್ದಣ್ಣ-ಮನೊರಮೆಯರ ಸಲ್ಲಾಪ;
ಏರಿ ಅಶ್ವಮೇಧಯಾಗದ ಸವಾರಿ
ಅರ್ಜುನ್ ಜನ್ಯ-ಅನುಶ್ರೀ ರ ಸಲ್ಲಾಪ;
ಏರಿ ಸರಿಗಮಪ ಸೀಸನ್ ೧೭ ರ ಅಂಬಾರಿ

ಸರಿಗಮಪ ವೇದಿಕೆಯೇರುವ ಆಸೆ
ಇಂದಿಗೂ ನನಗದು ಕನಸೆ
ರಾಗ,ತಾಳ ಲಯಗಳ ಅರಿವಿಲ್ಲದ ಅಬಲೆ
ಕಲಿಕೆಯ ಬಯಕೆ ಆಂತರ್ಯದಿ ಅವಿತಿದೆ



ಶಾರದ

- ಶಕುಂತಲಾ

04 Mar 2020, 05:27 pm

ನೇಗಿಲ ಜೀವಿ

ಬಿಸಿಲಗ್ನಿ ಸುರಿವ ಸರಿಗೇ
ಬಸಿತಿರೆ ಬೆವರು ಬಿಡನೀತ ಉಳಲಾ
ಉಸಿರ ಬಸಿದು ಧರೆ ಉಡುಗೇ
ಹಸಿರಿಸಿ ನಿಲಿಪ ತೆನೆದೂಗ ಮುಗಿಲಾ

ಬೆಳೆ ಕೊಚ್ಚಿ ಹರಿಯೆ ಝಳಕ ಒ
ಣಲಿಟ್ಟು ಸುಡೆ ಚಿಂತೆಬೀಳದೆ ಕುಳದ ಅಡಿಯಾ
ನೆಲನಂಬಿ ಪುನರಪಿ ದುಡಿದೆ
ಕಳೆಯುತ ಜಗದ ಹಸಿವ ನೇಗಿಲಯೋಗಿ ತಾನಾ

ಮಳೆಗರೆಯೆ ಮುಗಿಲ್ ಒಳೆರ್ದೆ
ಯೊಳಾವದೋ ಚೇತನಂ ನಿನಯ ಕುಣಿಸುವುದಾ
ಎಳೆಕರುವಿನೋಲ್ ಖುಷಿಕಡಲ
ಇಳೆನಗೆ ಕೊನರ ನೆಲಧಾತ್ರಿ ಕಣ್ಗಾಣಿಪುದಾ

ಧಾರೆಜಲ ಮೋಡ ಸುರಿಯೇ
ಬೆರೆತಿರೆ ಹಸಿಗೆಹಸಿ ಬೇರ ಪಚ್ಚೆಫಸಲನಾ
ಹರುಷವನೆಂತು ನುಡಿವುದು ಹ
ಹಸಿರರಸ ಕಾಯಕದ ಜೀವ ಕಟ್ಟಿಪಕನಸಾ

- samna

04 Mar 2020, 03:16 pm