Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಜೈ ಭುವನೇಶ್ವರಿ

ಸಿರಿಗನ್ನಡ ನಾಡಿನ ಕರಿ ಕನ್ನಡಿಗನಾಗಿ ಮರು ಜನ್ಮವ ಕರುಣಿಸು ಕರುನಾಡ ಮಾತೆ .... ..... ಮಲೆನಾಡ ಮಧು ಮಗಳೇ ಹಣೆಗೆ ಶ್ರೀ ಗಂಧದ ತಿಲಕ ತೊರೆದುಧಾಧರೆ ನಿನ್ನೊಡಲ ಅಧೆ ನಮಗೆ ನರಕ .... ..... ತಿರುಕನಾಗಿ ಜನ್ಮ ಕೊಡು ಕರುಣೆ ತೋರುವ ತಾಯೇ ಸಿರಿನುಡಿಯ ಕಲಿತರೆ ಅದೇ ನನ್ನ ಬಾಗ್ಯ .... ... ತೇರನೆಳೆಯುವೆ ನಿನ್ನ ಬಾರೆ ಭುವನೇಶ್ವರಿ , ಮರೆತ್ಹೇನಾಧರೆ ನಿನ್ನ ನಾ ತೊರೆಯುವೆನು ನನ್ನ ..,

- Iranna Shirol

01 Mar 2020, 09:47 am

3.ಹಿತ ವಚನಗಳು.

ತಂದೆ--ತಾಯಿಯ ಸೇವೆ/ಗುರುಲಿಂಗ ಜಂಗಮರ ಸೇವೆ ನೀ ಮಾಡಿ ಪುನಿತನಾದೊಡೆ/ಸದ್ಗತಿ ದೊರಕುವುದು ನೋಡ ಶ್ರೀ ಷಡಕ್ಷರದೇವ//

ಆಸೆಯಿರಲಿ ಮನುಜ/ದುರಾಸೆ ಬೇಡ
ಅತಿಯಾಸೆ ನೀ ಪಟ್ಟಲ್ಲಿ/
ನಿರಾಸೆ ಕಟ್ಟಿಟ್ಟ ಬುತ್ತಿ ನೋಡ ಶ್ರೀ ಷಡಕ್ಷರದೇವ//

ಸತ್ಯದ ನಡೆಯಲಿ/ಶಿವನ ಸ್ಮರಿಸದ ಮನುಜಗೆ
ಮುಕ್ತಿಯ ದಾರಿ/
ದೊರಕದು ನೋಡ ಶ್ರೀ ಷಡಕ್ಷರದೇವ//

ಕಿದ್ವಾಯಿ ರಾಜಶೇಖರ್.

- Raj Raj

29 Feb 2020, 09:40 pm

ಮಧುರ ಬಾಂಧವ್ಯ

ಹೆತ್ತವರ ನೆರಳಿಲ್ಲದೆ ಕಗ್ಗತ್ತಲೆಯ ಕಾರ್ಮೋಡ ದೀ ಕಾಣದ ಮುಸ್ಸಂಜೆ ದೀಪವ ನೆನೆದು ಕಂಬನಿ ಮಿಡಿಯುತ ನಿಂತಿರಲು ನಾನು ಬದುಕ ಕಲಿಸಿದ ಜನನಿ ಒಲವ ನೀಡಿದ ಹೃದಯ ಇಂದಿಲ್ಲ ನನ್ನ ಜೊತೆಗೆ ನಶ್ವರದ ಜೀವನವ ನೆನೆನೆನೆದು ಅಳುವಾಗ ಕಣ್ಣೊರೆಸುವ ತಾಯಾಗಿ ಜಗಮರೆಸೂ ಮಗುವಾಗಿ ನನ್ನೊಳಗೆ ನೀವು ನೆಲೆಸಿದ್ದೀರಿ ಶಾಶ್ವತವಾಗಿ ತಂಗಿಗೆ ನೆರಳಾಗಿ ಅವಳ ಉಸಿರು ತಾವಾಗಿ ನನ್ನ ಮನದೊಳಗೆ ಮೂಡ್ ಇದಿರಿ ಸದ್ಗುರು ವಾಗಿ ಕಹಿ ನೋವುಗಳ ತೊರೆದು ನೀವು ಒಪ್ಪಿ ಕರೆದರೆ ಜೀವಿಸುವೆ ನು ನಿಮ್ಮೊಳಗೆ ಸುಖವಾಗಿ 2 ಮನಸುಗಳ ನಡುವೆ ಮಧುರ ಬಾಂಧವ್ಯದ ಒಡವೆ ಹೊಳೆಯುತ್ತಿರ ಲೀ ನಮ್ಮ ಮನ ಒಂದಾಗಿ ಸಿಗಿ ನೆನಪೊಳಗೆ

- nagamani Kanaka

29 Feb 2020, 06:06 pm

ಮೌನರಾಗ....

ಮರೆಯಲಾಗದವಳ ಬಗ್ಗೆ
ಬರೆಯಬಾರದು ಕವಿತೆ
ಹಳೆಯ ನೆನಪುಗಳ ಜೊತೆ
ನಾ ಮೌನಿಯಾಗಿ ಕುಳಿತೆ
ಅಂದು-ಇಂದುಗಳ ನಡುವೆ
ಕಳೆದ ದಿನಗಳು ಅದೆಷ್ಟೋ
ಅರ್ಥವಾಗದ ಈ ಬದುಕಿನಲ್ಲಿ
ಉಳಿದಿರುವುದು
ಕಹಿನೆನಪುಗಳು ಒಂದಿಷ್ಟು....

- krishna Billadi melbailu

29 Feb 2020, 05:07 pm

ನೀನೆ ನನ್ನ ಮನದ ಮಾಹಾರಾಜನು

ಅವನ ಹೃದಯದಲಿ ಹೇಗೆ ಕಟ್ಟಲಿ ಪ್ರೀತಿಯ ಗೂಡೊಂದನು
ಪ್ರತಿ ಕ್ಷಣಗಳು ಕಳೆಯುತಿವೆ ನಿನ್ನದೆ ನೆನಪಿನಂಗಳದಲಿ

ಹುಸಿಯಾಗದಿರಲಿ ನನ್ನ ಕನಸು ಆ ಕನಸೆ ಎಂಥ ಸೊಗಸು
ನಿನ್ನ ಹೆಜ್ಜೆಯಲಿ ಹೆಜ್ಜೆ ಹಾಕುವ ಬಯಕೆ ಮೂಡಿದೆ

ಶೃಂಗಾರದ ಹೊಸ ಕಾವ್ಯವು ನಿನ್ನ ಕಂಡಲೆ ಎದೆಯ ತುಂಬಿದೆ
ತಿರುಗಿ ತಿರುಗಿ ನಿನ್ನ ನೋಡುವಾಸೆ ನೋಡಿ ನಿನ್ನ ಮುದ್ದಾಡುವಾಸೆ

ಇಲ್ಲಿವರೆಗೂ ಸೋಲದ ನಾನು ನಿನಗೆ ಹೇಗೆ ಸೋಲೊಪ್ಪಿದೆ
ತಿಳಿಯದಾಗಿದೆ ನನ್ನ ಸೋಲಿನ ಮೂಲ ತಿಳಿದರು ಮತ್ತೆ ಸೋಲುವೆ ನಾ

ಅತ್ತ ಇತ್ತ ಎತ್ತ ಹೋದರು ಎದುರಾಗುತಿದೆ ನಿನ್ನ ಪ್ರತಿಬಿಂಬವು
ಕೇಳುವೆ ಆ ದೇವನಲ್ಲಿ ನಿನ್ನನೆ ನನ್ನ ಮನದ ಮಹಾರಾಜನಾಗಿ...

28/2/2020

- Irayya Mathad

29 Feb 2020, 12:23 am

ಹೃದಯವೆಂಬ ಖಾಲಿ ಹಾಳೆಯಲ್ಲಿ

ಹೃದಯವೆಂಬ ಖಾಲಿ ಹಾಳೆಯಲ್ಲಿ
ನೀ ಬರೆದೆ ಒಲವಿನ ಸಾಲುಗಳ!!
ಮನವೆಂಬ ಬಂಜರು ಬಯಲಿನಲ್ಲಿ
ನೀ ಬಿತ್ತಿದೆ ಸುಂದರ ಕನಸುಗಳ!!

ನಿಶ್ಯಬ್ಧವಾದ ಅಂತರಾಳದಲ್ಲಿ
ನೀ ನುಡಿಸಿದೆ ಸುಂದರ ವಾಧ್ಯಗಳ!!
ತುಟಿಯಂಚಿನ ಕಿರುನಗೆಯಲ್ಲಿ
ನೀ ಮರೆಸಿದೆ ಎಲ್ಲಾ ನೋವುಗಳ!!

ಬರವಸೆ ಕಾಣದ ಬಂಡೆದೆಯಲ್ಲಿ
ನೀ ತುಂಬಿದೆ ಹೊಸ ಭಾವಗಳ!!
ಕಾರ್ಮೋಡ ಸರಿಸಿ ಈ ಬದುಕಿನಲ್ಲಿ
ನೀ ಬಂದು ಸುರಿದೆ ಬೆಳದಿಂಗಳ!!

- ಪಿ.ಜಿ.ಜ್ಯೋತಿ

28 Feb 2020, 03:32 pm

ಅಮೂಲ್ಯವಾದದ್ದು...

ಸಾಗರದ ಆಳದಲ್ಲಿ
ದೊರೆಯಿತು...
ಬೆಲೆಬಾಳುವ
ಮುತ್ತು.....‌
ಅದಕ್ಕಿಂತಲೂ
ಅಮೂಲ್ಯವಾದದ್ದು...
ಅಮ್ಮನು ನೀಡಿದ
ಕೈ ತುತ್ತು.....

- ಪಿ.ಜಿ.ಜ್ಯೋತಿ

28 Feb 2020, 02:46 pm

ಸೊಬಗು

ಹೃದಯದಲ್ಲಿ ನೀನಿದ್ದರೆ ಮರೆತು ಬಿಡುತ್ತಿದೆ ಆದರೆ ಹೃದಯವೇ ನೀನಾಗಿದ್ದರೆ ಹೇಗೆ ಮರೆಯಲಿ ಹೂಗಳನ್ನೆ ನಾಚಿಸುವ ಒಯ್ಯಾರದ ತುಣುಕು ನೀನು ನಕ್ಷತ್ರಗಳನ್ನೇ ಮೀರಿಸುವ ಹೊಳೆವ ಮಿಣುಕು ನೀನು ಈಗ ಹೇಳು ನಾ ಹೇಗೆ ಮರೆಯಲಿ ನಿನ್ನ ನಾನು creat by sagi

- Sagi Sagar

28 Feb 2020, 10:50 am

ಏಕಾಂಗಿ

ಏಕಾಂಗಿ ಚಂದ್ರನ ಅಳುವಿಗೆ
ತಂಗಾಳಿ ಜೊತೆಯಾಗಿ
ಕೊರಗುವ ಮನಸಿನ ಕುಲುಮೆಗೆ
ನೆನಪುಗಳೇ ಬೆಂಕಿಯಾಗಿದೆ,
ಕಾಲದ ಕೊಡುಗೆ ಕೈಗುಡದೆ,
ಕಾಮನಬಿಲ್ಲಿನ ಕಾಂತಿಯು ಮಾಸಿದೆ.

ಯಾರು ಇಲ್ಲದ ಒಂಟಿ ಹೃದಯ ಸ್ನೇಹಕಾಗಿ ಕಾದಿದೆ ಮನವ ತೆರೆದು ಹೇಳೋ ತವಕವಿದರು
ಪದಗಳು ಮೌನವ ಕಾರಿದೆ
ಮೌನದ ಸಮರವಿದರು ಮಾತು ಹೊರಗೆ ಜಾರಿದೆ
ಕಣ್ಣ ತುಸು ಬೆವರ ಹನಿಯು ರೇಪೆಯಿಂದ ಹಾರಿದೆ.

ನೆನ್ನೇಗಳು ಬರಿದಾಗಿ,
ನೆನಪುಗಳು ಮರೆಯಗಿ,
ನನ್ನಗೆ ನನ್ನೇಂಬ ಪ್ರೀತಿಯು ನನ್ನಲಿ ಮೂಡಿದೆ
ಇಂದು ಹೊಸ ಬಾಳ ಚೈತನ್ಯವು ತುಂಬಿದೆ.

- Kris

28 Feb 2020, 09:36 am

ಗೆಳತಿ

ನಿನ್ನ ಮೇಲಿನಾಸೆ ಎಂದು ಕೊನೆಯಾಗದೆ 
ಕೊಂಚ ದೂರ ಆದ್ರೂ ಮನಸು ಅಳುತಲಿದೆ 
ಅಪ್ಪಿಕೊಳ್ಳೊ ಬೇಕು ಅನ್ನೊ ಕಲ್ಪನೆಗೆ 
ಕೈಯ ಚಾಚಿ ನಿಲ್ಲು ಈ ಜನುಮ ಸಾಕೆನೆಗೆ...

- beast riderrr

28 Feb 2020, 07:35 am