ಬಾಳ ಪಯಣದಿ ನೂರು ನೆನಪುಗಳ ಸಾಲು
ಪಯಣವ ಸಿಹಿ ಗೋಳಿಸುವ ಕೆಲವೊಂದು ನೆನಪುಗಳು ಮನದಿ ಗಾಯ ಉಳಿಸುವ ಹಲವು ನೆನಪುಗಳ ಗುರುತು.
ಅವಳ ಕಣ್ಣ ಸೆರೆಯಲ್ಲಿ ಸೆರೆಗೊಂಡ ಮೊದಲ ಪ್ರೀತಿಯ ನೆನಪು, ಪ್ರೀತಿಯ ಪಿಸು ಮಾತಿನಲ್ಲಿ ನಾ ಮರೆಯದ ಆ ನೆನಪು.
ಪ್ರೀತಿಯ ಮಾಯೆಯಲ್ಲಿ ಸಿಲುಕಿದ ಪುಟ್ಟ ಹೃದಯ ಜೇನಿನ ಸಿಹಿ ನಗುವ ನೋಡಿ ಮೋಸವಾಗಿ ಹೋದೆಯಾ
ನೋವೇಂಬ ನಶೆಯಲ್ಲಿ ನರಳಿಹೇ ಇದೇನು ನನ್ನ ವಿಧಿಯ
ಕಣ್ಣ ಬೆವರ ಹನಿಯ ಒರೆಸದೇ ಎಲ್ಲಿ ಹೋದೆ ನನ್ನ ಪ್ರಿಯ
ಬದುಕೆಲ್ಲ ಬರಿದು ನಿನ್ ಇಲ್ಲದೇ
ಹಿಂದೆ ತಿರುಗಿ ನೋಡೇನು ನಾನು
ಬರಿ ನೋವಿನ ಗುರುತುಗಳೇ ನನ್ನ ದಾರಿಯೆಲ್ಲ
ಆದರೂ ಸುಖವಾಗಿ ಬಾಳುವೆ ಕಾರಣ
ನಿನ್ನ ಮದುರ ನೆನಪುಗಳೇ ನನ್ನ ಹೃದಯವೇಲಾ.
ನಾನು ನನ್ನೊಳಗಿನ ಕವಿತೆ ಸಾಯಲು ಬಿಡುವದಿಲ್ಲ
ಫಿನಿಕ್ಸ ಪಕ್ಷಿಯಂತೆ ನನ್ನ ಕವಿತೆ ಆಕಾಶಕ್ಕೆ ನೆಗೆಯುತ್ತದೆ
ಬಿಲ್ಲಿಗೆ ಜಗ್ಗಿ ಕಟ್ಟಿದ ಬಾಣದಂತೆ ನುಗ್ಗುತ್ತದೆ
ಗನ್ ಒಳಗೆ ರೆಡಿಯಾಗಿ ಕುಳಿತ ಗುಂಡಿನಂತೆ ಸಿಡಿಯುತ್ತದೆ
ಜಿಂಕೆಯಂತೆ ಟನ್ ಟನ್ ಎಂದು ನೆಗೆ-ನೆಗೆದು ಕುಪ್ಪಳಿಸಿ ಓಡುತ್ತದೆ
ಮೂರಡಿ ಆರಡಿ ತೆಗ್ಗನಲಿ ಹುದುಗಿಸಿ ಬಳೆದು ಮಣ್ಣೆಳೆದರೂ ಮೇಲೆದ್ದು ಬರುವದು ನನ್ನ ಕವನ
ಬೊಡ್ಡೆಗಚ್ಚಿ ಕಡೆದು ಎಸೆಡ್ ಸುರುವಿದರು ಚಿಗುರೊಡೆದು ಮತ್ತೆ ಮೊಗ್ಗು ಹೂ ಕಾಯಿ ಹಣ್ಣು ಬಿಡುವುದು ನನ್ನ ಕವನ
ನನ್ನ ಕವನದ ಸಮಾದಿ ಮೇಲೆ ಜಾಲಿ ಮರ ನೆಟ್ಟರೂ ಸಮಾದಿಯಿಂದ ಎದ್ದು ಗುಲಾಬಿ ಹೂವಾಗಿ ಅರಳುವುದು
ನಾನು ಗೆಲುವನ್ನು ಒಪ್ಪಿಕೊಳಲ್ಲ,
ಸೋಲನ್ನು ಲೆಕ್ಕ ಮಾಡಲ್ಲ .
ಯಾಕೆಂದ್ರೆ...............
ನಂಗೆ ಗೆಲ್ಲಬೇಕೆಂಬ ಆಸೆ ಇಲ್ಲ ,
ಸೋಲುತಿನಿ ಅನ್ನೋ ನಿರಾಸೆ ಇಲ್ಲ .
ಇರೋದು ಒಂದೇ
ಗೆಲುವು -ಸೋಲಿನ ಮಧ್ಯದಲ್ಲಿ ಇರೋ ಜೀವನದ ಜೊತೆ ಹೋರಾಟ ಮಾಡಬೇಕು ಅನ್ನೋ ಸಿದ್ದಾಂತ ಮಾತ್ರ........
✍️ ವೇಣು ಸಿ. ಎ ✍️
ಕಳ್ಳತನದಿಂದ ಬಂದು ಮುತ್ತು ಕೊಡುತ್ತಾಳೆ ಕಳ್ಳಿ..... ಮುತ್ತುಕೊಟ್ಟ ಜಾಗದಲ್ಲಿ ಕೆರೆದಾಗ ಆಗುತ್ತೆ ಗುಳ್ಳಿ.... ಮತ್ತೆ ಮತ್ತೆ ಮುತ್ತು ಕೊಡಲು ಬರುತ್ತಾಳೆ ಮಳ್ಳಿ...... ಸಾಲದು ಅಂತ ಜೊತೆಗೆ ಕರೆದು ತರುತ್ತಾಳೆ ಕರುಳಬಳ್ಳಿ .....ಯಾರು ಇರಬಹುದು ಅಂತ ತಿರುಗಿ ನೋಡಿ ಬ್ಯಾಡ್ರಿ ಹೊಳ್ಳಿ..... ಅದು ನನಗೆ ಅಂತಲ್ಲ ನಿಮಗೆಲ್ಲರಿಗೂ ಮುತ್ತು ಕೊಡುತ್ತಾಳೆ ಸುಪನಾತಿ ಸೊಳ್ಳಿ......
ರೋಡ್ ಮೇಲೆ ಹೋಗ್ತಾ ಇತ್ತು ಒಂದು ಲಾರಿ...... ಅದರ ಮೇಲೆ ಹಾರುತ್ತಾ ಇತ್ತು ಒಂದು ಶಾರಿ.... ಜಿಗಿದು ಹಿಡಿದೆನು ನಾ ಆ ಶಾ ರೀ..
... ಎರಡೇಟು ಕೊಟ್ಲು ಆ....ನಾರಿ..... ಅಲ್ಲಿಂದ ಬಿದ್ದೆ ನಾನು ಕಾಲುಜಾರಿ........
ಪಲ್ಲವಿಯ ಅಡ್ಡಹೆಸರು ಪಲ್ಲು.... ಅವಳಿಗೆ ತುಂಬಾ ಚೆನ್ನಾಗಿದೆ ಹಲ್ಲು.... ಅದನ್ನು ನೋಡಿ ಬೀದಿನಾಯಿಗಳು ಸುರಿಸುತ್ತವೆ ಜೊಲ್ಲು ....ಪಕ್ಕದಲ್ಲಿ ನೀ ನಿಂತರೆ ಹೊಡೆಯೇಲ್ಲಾ ಅವರಿಗೆ ಕಲ್ಲು.....