Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

love

ಕುಡಿಯೋ ನಿರಿಗು ಸಪ್ರೆಟ ರೆಟ ಇಧೆ
ಅದ್ಕೆ ಪ್ರೀತಿ ಕುಡಾ ರೋಡಲ್ಲಿ ಸೀಲ್ ಇಧೆ
ಪುರ್ ಲವ್ ಸಿಗೋದು ಕಾಸ್ಟ್ ಆಗಿದೆ
ಸಿಕಿದೇಲ್ಲಾ ಬರಿ ಇಲ್ಲಿ ದುಡ್ಡಿಗೆ

- Madesh Upper

23 Dec 2023, 09:07 pm

ಹೇ ಹೃದಯ ವಾಸಿಯೇ
ಸೂರ್ಯನನ್ನೇ ಸುಡುವ
ಆ ನಿನ್ನ ಕಿರುನೋಟ.....
ಬೆಳದಿಂಗಳನ್ನೇ ನಾಚಿಸೋ
ಆ ನಿನ್ನ ಕಿರುನಗೆ...
ನೋಡಿ ನಾಚುತಿದೆ ಈ ನನ್ನ ಮನವು...
ತಿರುಗಿ ನೋಡಬೇಡಿ ನೀ
ನೋಡಿದರೆ ನೀ ತಿರುಗಿ,
ಮರೆತಂತಿದೆ ನನಗೀಗ ಈ ಜಗವು....

-

23 Dec 2023, 05:11 pm

ಕಣ್ಣೀರು

ಪ್ರೀತಿಗೂ ಕಣ್ಣೀರಿಗೂ ಇರುವ
ನಂಟು..,


ಎಷ್ಟೇ ಪ್ರಯತ್ನಿಸಿದರೂ
ಬಿಡಿಸಲಾರದ ಕಂಗ್ಗಂಟು..!!

ಬಿಡಿಸಲೆತ್ನಿಸಿದವರೂ ಲೆಕ್ಕವಿಲ್ಲದಷ್ಟೂ
ಜನ..!!

ಕೊನೆಗೆ ಅವರಿಗೂ ಕಾದಿದ್ದು
ಕೂಡ..,

ಕೇವಲ ಕಣ್ಣೀರೆಂಬ
ಬಹುಮಾನ..!!

- Subhas Subhas

22 Dec 2023, 11:10 pm

ಪ್ರೀತಿ

ಪ್ರೀತ್ಸೋ ಪ್ರೀತಿನ
ಪ್ರೀತಿಯಿಂದ ಪ್ರೀತಿಗಾಗಿಯೆ
ಪ್ರೀತಿಗೋಸ್ಕರ ಪ್ರೀತಿಸಿ...,
ಪ್ರೀತಿಸಿದ ಪ್ರೀತಿಯನ್ನು
ಪ್ರೀತಿಯಿಂದ ಪ್ರೀತಿಸಿದಲ್ಲಿ
ಪ್ರೀತಿ ಪ್ರೀತಿಯನೆ
ಪ್ರೀತಿಗೋಸ್ಕರ ಪ್ರೀತಿಸುತ್ತದೆ...,
ಪ್ರೀತಿಸುವವರ ಪ್ರೀತಿನ
ಪ್ರೀತಿಯಿಂದ ಪ್ರೀತ್ಸಿ
ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಮಾಡಿ...,
ಪ್ರೀತಿನ ಪ್ರೀತಿಯಿಂದನೆ
ಪ್ರೀತಿಸುತ್ತಾನೆ ಪ್ರೀತಿಸಿದರೆ
ಪ್ರೀತಿ ಪ್ರೀತಿಯನೆ
ಪ್ರೀತಿಮಾಡುತ್ತದೆ...,
ಪ್ರೀತಿನ ಪ್ರೀತಿಯಿಂದನೆ
ಪ್ರೀತಿಮಾಡಿ ಪ್ರೀತಿನ
ಪ್ರೀತಿಸುತ್ತಾನೆ ಪ್ರೀತಿಸಿ...,

- Subhas Subhas

22 Dec 2023, 10:45 pm

ಜೀವನ



ಇದ್ದರೆ ಇರಬೇಕು ಜೀವನ ಇರುವೆಯ ಸಾಲಂಗೆ
ಸವಿಬೇಕು ವಿಷಯವ ಗುಂಪಿರುವೆ ಬೆಲ್ಲವ ಮೆದ್ದಂಗೆ
ಹಂಚಿ ತಿನಬೇಕು ಕಾಗೆ ಇಡಿ ಅನ್ನಕೆ ಬಳಗವ ಕರೆದಂಗೆ
ತ್ಯಾಗದ ಮನಸಿರಬೇಕು ಗೆದ್ದಲು ಹೂಳುವಂಗೆ

- Subhas Subhas

19 Dec 2023, 08:08 pm

ಭಾಗ್ಯವಂತರು

ಭಾಗ್ಯವಂತರು ನಾವು ಭಾಗ್ಯವಂತರು
ಭಾಗ್ಯವಂತರು ನಾವು ಭಾಗ್ಯವಂತರು

ಬಾಲ್ಯವನ್ನು ಜೇನಿನಂತೆ ಸವಿದವರು ನಾವು
ಕನ್ನಡಾಂಬೆಗೆ ಕಿರೀಟ ಇಟ್ಟವರನ್ನು
ಕಂಡವರು ನಾವು
ದೇವರ ಪ್ರತಿರೂಪ ಕಂಡವರು ನಾವು
ಭಾಗ್ಯವಂತರು ನಾವು ಭಾಗ್ಯವಂತರು

ಬಾನಲ್ಲಿ ಎನ್ನಾವರು ಸಾಧಿಸಿದ ವಿಜಯವನ್ನು ಕಂಡವರು ನಾವು
ಆ ಬಾನಿಗೆ ಓಕುಳಿ ಹಚ್ಚುವ
ಕಬ್ಬಿಗನನ್ನು ಕಂಡವರು ನಾವು
ಭಾಗ್ಯವಂತರು ನಾವು ಭಾಗ್ಯವಂತರು

ಪ್ರಕೃತಿಯ ಒಡಲನ್ನು ವ್ಯನಜೀವಿಗಳನ್ನು
ಕಂಡವರು ನಾವು
ಆರೋಗ್ಯಕರ ಆಹಾರ ಕಂಡವರು ನಾವು
ಮೇಲಕ್ಕೆ ತಡವಾಗಿ ಹೋಗುವವರನ್ನು ಕಂಡವರು ನಾವು
ನಿಜವಾಗಿಯು ಭಾಗ್ಯವಂತರು
ನಾವೇ ಭಾಗ್ಯವಂತರು


ನಿಖಿಲ್ ಟಿ ಆರ್.

- Nikhil

19 Dec 2023, 08:18 am

ಚಿಂತೆ

" ಓ... ಮನುಷ್ಯನೇ ನೀ ಏಕೆ
ಮಾಡುವೆ ಸುಮನೇ ಚಿಂತೆ
ಚಿಂತೆ ಮಾಡುವುದರಿಂದ
ಬಗ್ಗೆ ಹರಿಯುತ್ತಾ ಸಮಸ್ಯೆ
ಚಿಂತೆ ಅನ್ನುವುದು ಚಿಂತೆಯಂತೆ
ನೀನ ಅದು ಸುಟ್ಟು ಬೂದಿ ಮಾಡುತ್ತೆ
ಅದಕ್ಕೆ ಗುರು ಹಿರಿಯರು ಆಗಾಗ ಹೇಳುತ್ತಾರೆ
ಚಿಂತೆ ಮಾಡುವುದರಿಂದ
ಫಲ ಏನು ಸಿಗ್ಗದಯ್ಯ ಅದರ ಬದಲಿಗೆ
ಕಳೆದು ಕೊಳ್ಳುಬೇಕಾಗುತ್ತೆ
ಜೀವನದೋಳಗಿನ ನೆಮ್ಮದಿ ಅಯ್ಯಾ


ರಮೇಶ್ ಹಿಂಗೇ, ಬೀದರ್ ✍

- Ramesh Hinge

18 Dec 2023, 11:49 pm

ಜನಮರಳೋ.. ಜಾತ್ರೆ ಮರಳೋ .

ಜನ ಮರಳೋ ಜಾತ್ರೆ ಮರಳೋ*


ಈಗೀಗ ಅವನ ನೋಡಿ

ಇವನು ,ಇವನ ನೋಡಿ

ಅವರು ಮನೆಯಲ್ಲಿ ಶುದ್ದ

ನೀರು, ಎಳನೀರು‌ ಉಚಿತವಾಗಿ

ಸಿಗುತ್ತಿದ್ದರೂ ದುಬಾರಿ ಹಣ ತೆತ್ತು

ಕುಡಿಯಲಾರಂಭಿಸಿದ್ದೇವೆ  ಕೋಕ್

ಪೆಪ್ಸಿ, ಅದೂ.. ಇದು..‌.


ಈಗೀಗ ಮನೆಯಲ್ಲಿ ಸಿರಿಧಾನ್ಯದ 

ಆರೋಗ್ಯಕ್ಕೆ ಪೂರಕವಾದ ಆಹಾರ

ಲಭ್ಯವಿದ್ದರೂ ಹುಡುಕಿಕೊಂಡು

ಹೋಗಿ ತಿನ್ನುತ್ತಿರುವೆವು ಫಿಜಾ, ಬರ್ಗರ್, ಗೋಬಿ ಮಂಚೂರಿ ಅದೂ.. ಇದು....


ಈಗೀಗ ಸಾಂಪ್ರದಾಯಿಕ 

ಉಡುಗೆಗಳನ್ನು ಕಡೆಗಣಿಸಿ

ಪ್ಯಾಶನ್ ಹೆಸರಲ್ಲಿ  ಅರೆಬರೆ

ಬಟ್ಟೆಗಳನ್ನು ತೊಡುತ್ತಿಹೆವು

ಮಿಡಿ ,ಮ್ಯಾಕ್ಸಿ ಅದೂ... ಇದು...


ಮನೆಯಲ್ಲಿ ಬಳಸದೇ ಬಿದ್ದ

ನೂರಾರು ವಸ್ತುಗಳಿದ್ದರೂ

ಕೊಳ್ಳುಬಾಕತನದಿಂದ 

ಖರೀದಿಸಲು ಅಲೆದಾಡುತ್ತಿರುವೆವು

ಎಡತಾಕುತ ,ಮಾಲ್ .ಮಾರ್ಟ್,

ಸೂಪರ್ ಬಜಾರ್ ಅದೂ.. ಇದು...


ಯಾರಿಗೂ ಚಿಂತನ ಮಂಥನ

ಮಾಡಲು ಪುರುಸೊತ್ತಿಲ್ಲ ಈಗೇನಿದ್ದರೂ

ಜನಮರಳೋ.. ಜಾತ್ರೆ ಮರಳೋ .

- Subhas Subhas

17 Dec 2023, 10:46 pm

ನೊಂದ ಮನಸ್ಸು

ಆಸೆಗಳ ಸಮಾಧಿ ಕಟ್ಟಿರುವೆನು

- KUMAR BELAKUD

16 Dec 2023, 05:49 pm

ಅಂದು ಇಂದು ಮುಂದೆ

ಅಂದು..ಹಸಿವಿದ್ದರೆ ಊಟ
ಗೆಲುವಿದ್ದರೆ ಓಟ
ಜೀವನದ ಅರಿವಿಗೆಂದೆ ಪಾಠ.

ಇಂದು..ಹಸಿವಿರದಿದ್ದರು ಊಟ
ಗೆಲುವಿಲ್ಲದಿದ್ದರು ಓಟ
ಜೀವನ ಅರಿವಾಗದಂತಹ ಪಾಠ.

ಮುಂದು..ಹಸಿವಾದರೆ ತಾನೆ ಊಟ
ಗೆಲ್ಲುವ ತಂತ್ರದ ಓಟ
ಜೀವವಿಲ್ಲದ ಯಂತ್ರಕೆ ಜೀವನ ‌ಪಾಠ.



- Subhas Subhas

15 Dec 2023, 10:13 pm