Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಒಳ್ಳೆಯವರಿಗೆ ಕಾಲ ಈ ಲೋಕದೊಳಗೆ ಇಲ್ಲ

ಒಳ್ಳೆಯವರಿಗೆ ಕಾಲ ಈ ಲೋಕದೊಳಗೆ ಇಲ್ಲ
ತುಂಬಿ ತುಳುಕುತಿದೆಯಲ್ಲ ಕೆಟ್ಟ ಹುಳಗಳ ಜಾಲ..
ಹೊತ್ತಿ ಉರಿಯುತಿದೆಯಲ್ಲ ಪಾಪಿಗಳ ಜ್ವಾಲ
ಸುಟ್ಟು ಭಸ್ಮವಾಯಿತಲ್ಲ ಮನುಷ್ಯ ಧರ್ಮವೆಲ್ಲ..

ಬೇಡು ಕೊಂಡ್ರೆ ಯಾವ ಕೆಲಸ ನಡೆಯೋದಿಲ್ಲ
ದುಡ್ಡು ಕೊಟ್ರೆ ಎಂಥ ಕೆಲಸನೂ ನಿಲ್ಲೋದಿಲ್ಲ..
ಹೆಗ್ಗಣಗಳಂತೆ ಮಾಡಿಕೊಂಡವ್ರೆ ರಾಶಿ ರಾಶಿ ಬಿಲ
ತಲೆತಲಾಂತರಗಳು ಮುಕ್ಕುವಷ್ಟು ತುಂಬಿ ಇಡುವರಲ್ಲ..
ಎಲ್ಲೆಲ್ಲೂ ಕಟ್ಟಿಕೊಂಡವ್ರೆ ದೊಡ್ಡ ದೊಡ್ಡ ಕುಳಗಳ ಬಲ
ನ್ಯಾಯ ದೇವತೆಗೂ ಮಣ್ಣು ಮುಕ್ಕಿಸಿ ಮೆರಿತಾರಲ್ಲ..
ಗುಣವನ್ನು ಮಖಾಡೆ ಮಲಗಿಸಿದರಲ್ಲ
ಹಣವನ್ನು ಗುಡಿಸಿ ಗುಂಡಾಂತರ ಮಾಡಿದರಲ್ಲ..
ನಾವು ನಮ್ಮವರು ಅನ್ನೋದೆಲ್ಲ ನುಚ್ಚು ನೂರಾಗಿ ಮಣ್ಣು ಸೇರಿತಲ್ಲ..

ಪೊಳ್ಳು ಮಾತಾನಾಡಿ ಅರಮನೆ ಆಳುವರಲ್ಲ
ನೆರಳು ಇಲ್ಲದವರಿಗೆ ಸಣ್ಣ ಸೂರು ನೀಡಲಿಲ್ಲ..
ದೇಶದ ಕಥೆ ಕಿಂಚಿತ್ತೂ ಕೇಳೋದಿಲ್ಲ
ವೇಷ ಹಾಕ್ಕೊಂಡು ಮನುಷ್ಯರನ್ನ ಕಿತ್ತು ತಿನ್ತಾರಲ್ಲ..
ನೊಂದು ಬೆಂದವರಿಗೆ ಸಾಲ ಮರಣ ತಪ್ಪಲಿಲ್ಲ
ನುಂಗಿ ನೀರು ಕುಡಿವವರ ಕಪಟನಾಟಕ ನಿಲ್ಲಲಿಲ್ಲ.
ಅಧಿಕಾರ ದಾಹಕ್ಕಾಗಿ ಹೆಣಗಳ ಸಂತೆ ಮಾಡ್ತಾರಲ್ಲ
ಹೆಣ್ಣಿನ ಮೋಹಕ್ಕಾಗಿ ಸುಳ್ಳಿನ ಕಂತೆ ಕಟ್ತಾರಲ್ಲ..

ದೇವರು ದಿಂಡ್ರು ಅಂದ್ರೆ ಚಿನ್ನದ ಕಾಣಿಕೆ ನೀಡ್ತಾರಲ್ಲ
ಕೂಳು ಇಲ್ಲದೆ ನರಳುವವರಿಗೆ ಅನ್ನ ಕೊಡದೆ ಸಾಯಿಸ್ತಾರಲ್ಲ..
ದ್ವೇಷ ಮೋಸದ ಬೆಂಕಿ ಆರಿಸುವವರು ಯಾರು ಇಲ್ಲ
ಪ್ರೀತಿ ಸ್ನೇಹದ ಕಿಡಿ ಹೊತ್ತಿಸುವವರು ಎಲ್ಲೂ ಇಲ್ಲ..

- ಸುರೇಶ್ ಟಿ ವಿ

05 Mar 2018, 06:14 pm

ಅಮ್ಮ

*ಅಮ್ಮಾ....*

ಅಮ್ಮನ ಕುರಿತೊಂದು
ಕವಿತೆ ಬರೆಯುವ ಆಸೆಯಲ್ಲಿ
ನಾನು ಲೇಖನಿ ಹಿಡಿದು ಕುಲಿತೆ..!!

ನನ್ನ ಭೂಮಿಗೆ ತರುವ ಮೊದಲೇ
ನನಗಾಗಿ ಕಷ್ಟ ಪಟ್ಟ ಅವರ
ನೆನೆಯುವಾಗಲೇ ನಾನು ಅತ್ತು ಬಿಟ್ಟೆ..!!

ಬರೆಯೋ ಆಸೆಯು ನಿರಾಸೆ
ಆದಂತೆ ಕೈ ಜಾರಿ ಬಿದ್ದ ಲೇಖನಿಯ
ಮುದ್ದಿಸಿತು ನನ್ನಯ ಕಂಬನಿ..!!

➖➖➖➖➖➖➖
*✍

- Salman Saleem

05 Mar 2018, 12:38 am

ಮುದ್ದು ಮನಸೇ...

ಮುದ್ದು ಮನಸೇ
ಮಾತಾಡಬೇಕಿದೆ
ನನ್ನ ಬಳಿ ಒಮ್ಮೆ...

ಏಕೋ ಗೊತ್ತಿಲ್ಲದ ಕನಸೊಂದು
ಕಾಡುತ್ತಿದೆ ಬೆಂಬಿಡದೆ
ಕಾಣದ ಕಂಬನಿ ಜಾರುವ ಮುನ್ನ
ನನ್ನನ್ನೊಮ್ಮೆ ನೀ ಸೇರಬಾರದೆ!

ಬಲೆಗೆ ಸಿಕ್ಕ ಮೀನಿನಂತೆ
ಒದ್ದಾಡುತ್ತಿದೆ ಮುಗ್ದ ಮನಸು...
ಕಾರಣ ತಿಳಿಸದೇ ಬಳಿ ಬಾರದೇ
ನನ್ನ ಬಳಿ ಏಕೀ ಮುನಿಸು!

ತಿಳಿದು ತಿಳಿಯದೆ ಮಾಡಿದ ತಪ್ಪಿಗೆ
ಸನಿಹವಿರದೇ ಸತಾಯಿಸುವೆ ನನ್ನನು..
ಮನ್ನಿಸಿ ಮತ್ತೆ ಪ್ರೀತಿಸಿಬಿಡು
ಕಳೆದುಕೊಳ್ಳಲಾರೆ ಇಂದಿಗೂ ನಾ ನಿನ್ನನು!

- ಪ್ರಿಯಾಂಕ

04 Mar 2018, 10:18 pm

ಕಾಡದಿರು ಗೆಳೆಯ ಇನ್ನು ನಿ ಎನ್ನ.......

ನೀನಿ ಪ್ರೀತಿಯ ಮಾತುಗಳೇ ಸುಳ್ಳಾಗಿದೆಯಲ್ಲೋ,
ನಾನಿಟ್ಟ ಪ್ರೀತಿಯ ಭರವಸೆಗಳೆಲ್ಲ ಮಣ್ಣಾಯಿತಾಲ್ಲೋ....

ನೀನೇ ಹುಟ್ಟಿಸಿದ ಪ್ರೀತಿಯ ,ನೀನೇ ಚಿವಿಟಿದೆಯಲ್ಲೋ ಏಕೋ ........

ಈ ಮನಸಿನ ಕನ್ನಡಿಯ ಒಡೆದಿರುವೆ ,ನಾ ಆ ನೋವ ತಡೆಯಲಾಗದಂತೆ ,ಪ್ರಾಣವ ಬಿಡಲಾಗದಂತೆ ಭಾಸವಾಗುತ್ತಿದೆಯಲ್ಲೋ ....

ಕಣ್ಣ ಹನಿಯು ಕೂಡ ,ಏನೋ ಹೇಳ ಬಯಸಿದೆ ತಿಳಿಯದೆ ಮನಸ್ಸು ಬಾರವೆನಿಸ ತೊಡಗಿದೆ .......

ನೀ ಏಕೋ ನನ್ನೊಳ ಹೊಕ್ಕಿ ಪ್ರೀತಿ ಹೊಮ್ಮಿಸಿದೆ ,
ಇಂದು ನೀನೊಳ ನನ್ನ ಪ್ರೀತಿಯೇ ಕಾಣದೆ ಹೋಗಿದೆಯಲ್ಲೋ
......

ಪ್ರೀತಿ ಹುಚ್ಚು ಹಿಡಿದ ನಿನ್ನ ಆ ಪ್ರೀತಿ ಇಂದು ಏನಾಯ್ತೋ ....

ನೀನೇ ತಂಡ ಪ್ರೀತಿ ಮಗುವ ,ನೀನೇ ಕೊಂದು ಇಂದು ನಗುತ್ತಿರುವೆಯಲ್ಲೋ .....


ಈ ನನ್ನಪ್ರೀತಿಯ ಗೋರಿಯ ಮೇಲೆ ನಿಂತು ನೀ ಹೊಮ್ಮಸ್ಸಿನಿಂದ ನಕ್ಕು ,ನಲಿಯುತಿರುವೆಯಲ್ಲೋ .....


ನೀ ನನ್ನ ಎಂದು ಕಾಡಬೇಡ ಗೆಳೆಯ ಇಂದು ನಾನೇ ದೂರವಾಗಿ ಗೋರಿಯ ಒಳಗಿರುವೆ .....

- Acchu love

04 Mar 2018, 02:38 pm

ಕಾಡದಿರು ಹೀಗೆ ನನ್ನ..

ಮೌನದ ಕಾಡಲ್ಲಿ
ಅಲೆದಾಡುತ್ತಿರುವೆನು
ಏಕಾಂಗಿಯಾಗಿ....
ನೀ ಕಾಣಿಸದೆ
ಕನಸು ಖಾಲಿಯಾಗಿದೆ
ನಿದ್ದೆ ಅಲ್ಲೆಲ್ಲೋ ಅಡಗಿಕುಳಿತಿವೆ...
ಬರಬೇಕಾಗಿದೆ ನೀ ಎಲ್ಲಿದ್ದರೂ
ಬಂದುಬಿಡು ಒಮ್ಮೆ,
ಕಾಡಬೇಡ ಗೆಳೆಯ...

- ಪ್ರಿಯಾಂಕ

03 Mar 2018, 09:19 pm

ಬದುಕು...

ಮರೆಯಲಾಗದ
ನೂರೊಂದು ನೆನಪುಗಳು...
ಹೇಳಲಾಗದ
ಸಾವಿರಾರು ಭಾವನೆಗಳು...
ಬಚ್ಚಿಡಲಾಗದ
ಕೆಲವೊಂದು ಸಂಗತಿಗಳು...
ಹೇಳಿ ಕೇಳಿ ನಲಿದಾಡುವ
ಜೀವನ ಚಕ್ರವೇ....
ಈ ಬದುಕು....‌‌......

- ಪಿ.ಜಿ.ಜ್ಯೋತಿ

03 Mar 2018, 09:59 am

ಕನಸು ಕಾಣುವ

ಕನಸೊಂದನ್ನು ಕಾಣುವ
ಅಭಿಮಾನದಿಂದ ಮನೆಯೊಂದನ್ನು ಕಟ್ಟುವ
ತನು ಮನಗಳ ಅಂತರಕ್ಕೆ
ಸೇತುವೆಯನ್ನು ನಿಮಿ೯ಸುವ

ಸುರಿದು ಆಳಾಗುವ ಕನಸಿಗೆ
ಕೆರೆಯೊಂದನ್ನು ಕಟ್ಟುವ
ದಡದಲ್ಲಿ ಕುಳಿತು
ನೆನಪನ್ನು ಮತ್ತೇ ಮತ್ತೇ ನೆನೆಯುವ

ನಮ್ಮ ಸುಂದರ ಪ್ರೀತಿಗೆ
ಗಿಡ ಒಂದನ್ನು ನೇಡುವ
ಗೀರಿ ಶಿಖರದ ಎತ್ತರಕ್ಕೆ ಬೆಳೆಸಿ
ಎಲ್ಲರ ಉಸಿರಾಗಿ ಇರುವ

ಒಳೆದಾವು ನೀಲಿ ಕಡಲು
ಹರಿದಾವು ಪ್ರೀತಿಯ ಹೋನಲು
ನೀನ್ನ ಸುಂದರ ಕನಸಿಗೆ
ತಲೆ ಬಾಗಿ .........

- ak

02 Mar 2018, 09:10 pm

ಬಣ್ಣದಲ್ಲಿ ಬದುಕು

ಕಂಡೆವು ಜೀವನದಲಿ ಬಣ್ಣ ಹಲವು
ಇರುವುದು ಬಣ್ಣ ಮೂರು ನಮ್ಮ ಧ್ವಜದಿ
ಕಲಿಸಿದೆ ಶಾಂತಿ ಸಹನೆ ಬಳಿಯು
ಧೈರ್ಯವನು ಕೇಸರಿ
ಅಭಿವೃದ್ಧಿಯನು ಹಸಿರು
ನಮ್ಮ ಜೀವನದಲ್ಲಿದ್ದರೆ ಈ ಬಣ್ಣಗಳು
ಸುಂದರ ಸಮೃದ್ಧವಾಗುವುದು ಜೀವನ

ಏಳು ಬಣ್ಣದ ಕಾಮನಬಿಲ್ಲು ನೋಡಲು ಚಂದ
ಇರುವುದು ಹಲವು ಕಷ್ಟಗಳು ಜೀವನದಲಿ
ಜಯಿಸಿ ನಡೆದರೆ ನಮ್ಮ ಬದುಕು ಸುಂದರ
ಬಣ್ಣದ ಹಬ್ಬದ ಶುಭಾಶಯಗಳು

- ರಘು

02 Mar 2018, 08:02 pm

ನಿನ್ನಯ ಸ್ವತ್ತು..

ನನ್ನಾಕೆ ಕೊಟ್ಟಳು
ಕೆನ್ನೆಗೊಂದು ಮುತ್ತು..!
ನುಡಿದಳು ಹೀಗೆ ನಾಚುತ್ತಾ.,
ಗೆಳೆಯಾ.. ಎಂದಿದ್ದರೂ
ಇದು ನಿನ್ನಯ ಸ್ವತ್ತು...!!
~ ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

02 Mar 2018, 07:23 pm

ಮುಡಿಪಾದವು..✒️

ಸಿರಿಗೇರಿಯ ನೀರಲ್ಲಿ
ಮಿಂದಾಕೆ ನನ್ನವಳು.!
ಚಂದಿರನ ಹೋಲುವ
ಅಂದದ ಮೊಗದವಳು.!
ಪ್ರಕೃತಿಯ ಸಿರಿಯೆನ್ನೇ
ಕೇಶಕ್ಕೆ ಎರೆದವಳು.!
ಚುಕ್ಕಿಗಳನೇ ಕಿತ್ತು
ಹೂ ಮಾಡಿ ಮುಡಿದವಳು.!
ತೆಳುವಾದ ಹುಬ್ಬಲ್ಲೇ
ಕಣ್ಸನ್ನೆ ಮಾಡಿಹಳು.!
ಆ ಗಿಣಿಯಂತ ಮೂಗಲ್ಲಿ
ನತ್ತನ್ನು ಇಟ್ಟಿಹಳು..!
ನುಡಿಯುತಿರೆ ಮಾತು
ಕೋಗಿಲೆಯ ಧ್ವನಿಯವಳು.!
ನಡೆಯುತಿರೆ ಅವಳು
ಹಂಸದಂತೆ ಬಳುಕುವಳು.!
ಶರಣಾದವು ಅವಳಿಗೆ
ಮಳೆಬಿಲ್ಲ ಬಣ್ಣಗಳು..!
ಮುಡಿಪಾದವು ನಾನು
ಬರೆದಿರುವ ಕವನಗಳು..!

~ ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

02 Mar 2018, 07:04 pm