Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬಣ್ಣದ ಲೋಕ

ನಂಬಿ ಬಂದವರಾರೋ
ನಟಿಸಿ ನಿಂತವರಾರೋ
ಬಣ್ಣ ಹಚ್ಚಿದವರಾರೋ
ಬವಣೆ ನೀಡಿದವರಾರೋ
ಮನಸ ಮೆಚ್ಚಿದವರಾರೋ
ಮನಸೇ ಇಲ್ಲದವರಾರೋ
ಪ್ರೀತಿ ನೀಡಿದವರಾರೋ
ಪ್ರೀತಿಸಿದಂತೆ ನಟಿಸಿದವರಾರೋ
ಇಲ್ಲಿ ಯೋಗ್ಯರಾರೋ
ಇಲ್ಲಿ ಅಯೋಗ್ಯರಾರೋ
ಬಣ್ಣದ ಲೋಕದಲ್ಲಿ,
ಬಣ್ಣದ ಲೋಕದಲ್ಲಿ,
ಬಣ್ಣದ ಮಾತುಗಳನಾಡಲರಿಯದೇ
ಭಾವುಕರಾಗಿ ಕಣ್ಣೀರ ಹರಿಸಿದವರಾರೋ
ನಿಷ್ಕಲ್ಮಶ ನಿಷ್ಠೆಯಿಂದ ವಂಚಿತರಾದವರಾರೋ

- Pareeni

15 Dec 2023, 01:23 pm

- Nuage Laboratoire

15 Dec 2023, 12:28 pm

ದೇವರು...

ದೇವರನ್ನು ಸೇರಲು ಹಲವಾರು ದಾರಿಗಳಿವೆ. ನೀವು ನಿಮಗೆ ಸರಿಯೆನಿಸಿದ ದಾರಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಕರ್ಮಯೋಗ,
ಜ್ಞಾನಯೋಗ,
ರಾಜಯೋಗ,
ಭಕ್ತಿಯೋಗಗಳೆಲ್ಲವು ನಿಶ್ಚಿತವಾಗಿ ದೈವವನ್ನು ಸೇರುತ್ತವೆ. ನಿಮಗೆ ಸೂಕ್ತವಾದ ದಾರಿಯನ್ನು ನೀವು ಆಯ್ಕೆ ಮಾಡಿಕೊಳ್ಳಿರಿ...

ದೇವರನ್ನು ಸೇರಲು ಹಲವಾರು ದಾರಿಗಳಿವೆ. ನೀವು ನಿಮಗೆ ಸರಿಯೆನಿಸಿದ ದಾರಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಕರ್ಮಯೋಗ, ಜ್ಞಾನಯೋಗ, ರಾಜಯೋಗ, ಭಕ್ತಿಯೋಗಗಳೆಲ್ಲವು ನಿಶ್ಚಿತವಾಗಿ ದೈವವನ್ನು ಸೇರುತ್ತವೆ. ನಿಮಗೆ ಸೂಕ್ತವಾದ ದಾರಿಯನ್ನು ನೀವು ಆಯ್ಕೆ ಮಾಡಿಕೊಳ್ಳಿ.

- Guru M G

13 Dec 2023, 11:42 pm

- Neetha Jain

10 Dec 2023, 03:26 pm

- sandy

08 Dec 2023, 12:50 pm

ಅವಳು

ನನ್ನ ನಿಷ್ಕಲ್ಮಶ ಪ್ರೀತಿ ಯನ್ನು ತಿರಸ್ಕರಿಸಿದವಳು
ಆದರೆ,
ಅವನ ಮೋಸದ ಪ್ರೀತಿಯಲ್ಲಿ ಸಿಲುಕಿ ಕಣ್ಣೀರಲ್ಲಿ ಕೈ ತೊಳೆಯುತ್ತಿರವಳು ................................................................................................................................ (ಅB..)

- ಅB..

07 Dec 2023, 08:04 pm

ಮುಕ್ತರಾಗೋಣ ಬನ್ನಿರಿ

ಮುಕ್ತರಾಗೋಣ ಬನ್ನಿರಿ
ಸದಾ ಶಾಂತರಾಗೋಣ ಬನ್ನಿರಿ
ಭಕ್ತಿ ಮಾರ್ಗದ ಮೂಲಕ || ಪ ||

ಸಮಾಧಾನಿಯಾಗಲು ಅತ್ತಿಂದಿತ್ತ
ಹರಿಯುವ ಮನವನು ನಿಲ್ಲಿಸಿ
ಸದಾ ನಮ್ಮೊಳಗೆ ಇರಿಸಬೇಕು || ೧ ||

ಕಾಮ ಕ್ರೋಧ, ಮದ, ಮತ್ಸರ,ಮೋಹ, ಲೋಭವನ್ನು
ಕಡಿಮೆ ಮಾಡುತ್ತ ಸಾಗಬೇಕು, ಇದನ್ನು ಸಾಧಿಸಲು
ನಿರಂತರ ಛಲ ಮತ್ತು ಆಸಕ್ತಿ ಬೇಕು || ೨ ||

ನಂತರ ದಯೆ, ಪ್ರೀತಿ, ಕರುಣೆ, ವಾತ್ಸಲ್ಯವೆಂಬ
ಪೈರು ಬೆಳೆಯಬೇಕು
ಬೆಳೆದರಷ್ಟೆ ಸಾಲದು ಪೋಷಿಸಬೇಕು || ೩ ||

ನಮ್ಮಲ್ಲಿರುವ ಕೀಳರಿಮೆ ಕಿತ್ತೊಗೆದು
ನಾವು ಪರಮಾತ್ಮನ ಎಳೆಯೆಂದು ತಿಳಿಯುವ
ಜ್ಞಾನ ಈ ಮನಕೆ ಬರಬೇಕು || ೪ ||

ಬಸವಾದಿ ಶರಣರ ವಚನಗಳು ಮತ್ತು
ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿ‌ಯವರ
ನುಡಿಗಳು ಮುಕ್ತಿ ಮಾರ್ಗದ ಪಠ್ಯಕ್ರಮಗಳು || ೫ ||

ನಮ್ಮ ಜ್ಞಾನ ಗುರುವಿಗೆ ನಮಿಸಿ
ಶುದ್ಧಗೊಳಿಸಿದ ಮನದಲಿ
ಅವರ ನುಡಿಗಳನ್ನು ಇಳಿಸಬೇಕು || ೬ ||

ಬೆಳಕಿನಂತೆ ವಿಶಾಲವಾಗಬೇಕು ಈ ಮನ
ಬೆಳಕಿನಂತೆ ಸ್ವಚ್ಛವಾಗಬೇಕು, ಬೆಳಕಿನಂತೆ
ಏನನ್ನು ಅಂಟಿಸಿಕೊಳ್ಳದೆ , ನಾನು ನಾನಾಗಿರಬೇಕು || ೭||

ಸಾಧನೆಯಲ್ಲಿ ಆಕಸ್ಮಿಕ ಕ್ಲೇಶಗಳು ಮನಕೆ ತಾಗಿದರೆ
ಗಾಳಿಗೆ ಮರ ಅಲ್ಲಾಡಿ, ಮತ್ತೆ ಸ್ಥಿರವಾದಂತೆ
ಮತ್ತೆ ಮನ ಸುಧಾರಿಸಿ, ಸ್ಥಿರವಾಗಿಸಗಬೇಕು || ೮ ||

ಸಾಧಿಸಿದೆನೆಂದು ತಿಳಿದು ನಿಂತು ನೀರಾಗಬಾರದು
ಸಾಧನೆಯು ಹರಿಯುವ ನೀರಿನ ಹಾಗೆ
ಪರಮಾತ್ಮನಲ್ಲಿ ಲೀನವಾಗುವರೆಗೂ ನಿರಂತರವಾಗಿರಬೇಕು || ೯ ||

ಆಯುಷ್ಯವೆಂಬ ತೈಲ ತೀರುವ ಮುನ್ನ
ಭಕ್ತಿ ಪಥದಲ್ಲಿ ಸಾಗಿ
ಆತ್ಮಜ್ಞಾನ ಮಾಡಿಕೊಳ್ಳಬೇಕು || ೧೦ ||

ದಿನ, ತಿಂಗಳು, ವರ್ಷಗಳು ಕಳೆದಂತೆ
ಮನ ಶಾಂತಿ ಸಮಾಧಾನವಾದ ನಂತರವೂ
ಜಾಗೃತಿಯಿಂದ ಪೋಷಿಸಬೇಕು. || ೧೧ ||

- Hema Morab

06 Dec 2023, 06:55 pm

ನನ್ನ ನಿಷ್ಕಲ್ಮಶ ಪ್ರೀತಿ ಯನ್ನು ತಿರಸ್ಕರಿಸಿದವಳು
ಆದರೆ,
ಅವನ ಮೋಸದ ಪ್ರೀತಿಯಲ್ಲಿ ಸಿಲುಕಿ ಕಣ್ಣೀರಲ್ಲಿ ಕೈ ತೊಳೆಯುತ್ತಿರವಳು ................................................................................................................................ (ಅB..)

- ಅB..

05 Dec 2023, 09:06 pm

ಸೈನಿಕನ ಜೀವನ

ಸೈ ತನ್ನದೇ ಆದ ಮೇಲೆ ಇಲ್ಲ ಒಮ್ಮೆ ಕ್ಕಾಡು ಒಮ್ಮೆ ಮನೆ ಒಮ್ಮೆ ಮರಳುಗಾಡು ಮೇಲೆ ಇಲ್ಲದ ಜೀವನ ಇವನದು ಹುಟ್ಟಿಸಿದ ತಾಯಿ ಒಬ್ಬಳು ರಕ್ಷಣೆ ಮಾಡೋ ತಾಯಿ ಒಬ್ಬಳು.

ಮಡದಿಯ ಪ್ರೇಮ ಒಂದು ಕಡೆ ದೇಶ ದ ಪ್ರೇಮ ಒಂದು ಕಡೆ ಯಾವ ಕಡೆ ಬಾಗುವುದೋ ತಿಳಿಯದಾಗಿದೆ

ಒಮ್ಮೆ ಸಲಹೆ ಕೊಡಿ ಸ್ನೇಹಿತರೆ

- navi

30 Nov 2023, 11:45 am

ಜಾಣರು ದಡ್ಡರು

ಅವ ಅಂದು ಕಂಡ ಆ ಕನಸ
ಇವ ಇಂದು ಕಂಡ ಈ ಕನಸ
ಇವರಿಬ್ಬರು ಕಂಡ ಕನಸು
ನನಸಾಗಿ ಉಳಿಯಿತು
ಇವರಿಬ್ಬರ ಮಧ್ಯೆ ದ್ವೇಷ ಬೆಳೆಯಿತು
ಒಬ್ಬ ಸ್ವಚ್ಛಂದವ ಇನ್ನೊಬ್ಬ ರಕ್ಕಸಮಯವ

- ಸಿ ಮಾರುತಿಯ ಸಾಲುಗಳು

30 Nov 2023, 05:20 am