ದೊಡ್ಡವರ ತಪ್ಪು ದೊಡ್ಡದಾಗಿ ಪ್ರಕಟವಾಗುತ್ತದೆ
ಅದೇ ತಪ್ಪು ನಾವು ಮಾಡಿದರೆ ಲೆಕ್ಕಕ್ಕಿಲ್ಲ
ತಪ್ಪಿಗೂ ದೊಡ್ಡಮನುಷ್ಯರು ಸಾಮಾನ್ಯರು ಎಂಬ ಬೇದ
ದೊಡ್ಡವರ ಚಿಕ್ಕ ಒಳ್ಳೆತನ ದೊಡ್ಡದಾಗಿ ಪ್ರಕಟ
ನಮ್ಮ ದೊಡ್ಡ ಒಳ್ಳೆಯತನ ಕಾಲಿಗೆ ಕಸ
ಒಳ್ಳೆಯದಕ್ಕೂ ದೊಡ್ಡಮನುಷ್ಯರು ಸಾಮಾನ್ಯರು ಎಂಬ ಬೇದ
ತಪ್ಪಿಗೂ ದೊಡ್ಡವರೇ ಬೇಕು ಒಳ್ಳೆಯದಕ್ಕೂ ದೊಡ್ಡವರೇ ಬೇಕು
ಓ ನನ್ನ ಮುದ್ದು ಗಿಳಿಯೆ
ನಿ ಎಕೆ ಹಾರುತಿಯೆ
ನನ್ನ ಎದೆಯಂಬ ಪುಟ್ಟ
ಗುಡಿಯ ಮಾಡಿರುವೆ ನಿನಗೆ
ಇದ್ದು ಬಿಡಬಾರದೆ ಅಲ್ಲೆ
ರಾಣಿಯಂತೆ.....
ಹೊತ್ ಹೊತ್ಗೆ ಕಾಳು ಕಡಿ
ತಂದಿಡುವೆ ನಿ ವಲ್ಲೆ ಅಂದರು
ನಿನ ಬಾಯಗೆ ಸುರಿವೆ
ಕತ್ತಲೆಯ ಈ ಲೋಕದಲ್ಲೀ
ಹಾರಿ ಹೋಗಿ ಹೇಗೆ ಬದುಕುವೆ ನೀ
ನನ್ನ ಅಗಲಿ ........
ದುಷ್ಟ ರಣಹದ್ದುಗಳು
ನಿನ್ನನ್ನು ಕೋಂದರೆ
ನನ್ನ ಗತಿ ಎನೆ ಮುದ್ದು ಗಿಳಿ...
ರೆಕ್ಕೆ ಬಂದಿತ್ತೆಂದು ಹಾರಿ ಹೋಗಬೇಡವೆ
ನನ್ನ ಎದೆಯ ಆಸರೆಯ ಅಗಲಿ.....
ಓ ನನ್ನ ಮುದ್ದು ಗಿಳಿಯೆ.....
ನಿನ್ನಿಂದ ಕಲಿತು ಆದೆ ನಾ ಪ್ರಾಮಾಣಿಕ,
ನಿನ್ನಲ್ಲಿರುವ ಒಬ್ಬ ದುಖಿಃತನಾದ ಮೌನಿಕ,
ಆದರು ನೀನು ನಮ್ಮನ್ನು ಸದಾ ಕಾಯುವ ರಕ್ಷಕ,
ನೀನು ಎಂದಿಗೂ ಬಿಡುವುದಿಲ್ಲ ನಿನ್ನ ರಕ್ಷಣೆಯ ಕಾಯಕ,
ನಿನ್ನಲ್ಲು ಇರುವ ಒಬ್ಬ ಆಸೆಯೆಂಬ ಒಳ್ಳೆಯ ಮಾಂತ್ರಿಕ,
ನಮ್ಮೆಲ್ಲರಿಗೆ ಅಭಯ ನೀಡುತ್ತ,ನಮ್ಮಯ ಸುಖಕ್ಕೆ ನಿನ್ನ ಸುಖ ಬಿಟ್ಟು ದುಡಿಯುತ್ತಿರುವ ನೀನೆ ಮಹಾನ್ ಶ್ರಮಿಕ,
ನಿನ್ನ ಪ್ರತಿಯೊಂದು ಕಷ್ಟದ ಹೆಜ್ಜೆಗು ಇದ್ದೆ ಇದೆ ನಮ್ಮ ಬಹುಪರಾಕ,
ನಿನೊಬ್ಬ ಈ ದೇಶದ ಚಿತ್ರಿಕ,
ನಿನ್ನ ಜೊತೆ ಮತ್ತೊಬ್ಬನಿರುವ ರೈತನೆಂಬ ನಾಯಕ,
ನಿಮ್ಮಿಬ್ಬರನ್ನು ಕಡೆಗಣಿಸಿದವನೆ ದೊಡ್ಡ ಮೂರ್ಖ
......(ಮುಂದುವರೆಯುವುದು ಅನಂತದವರೆಗೆ)
"ಯುವಕ ಆಗಲು ಪ್ರಯತ್ನಿಸು ಸೈನಿಕ"
ನನ್ನನು ಕನಿಷ್ಠವಾಗಿ ಕಂಡ ಮಾತ್ರಕ್ಕೆ
ನಿಮ್ಮ ಘನತೆ ಹೆಚ್ಚುವುದಿದ್ದರೆ ಅಷ್ಟಾದರು ಬದುಕು ಸಾರ್ಥಕಗೊಂಡಿದ್ದಕ್ಕೆ
ಹರ್ಷಿಸುತ್ತೇನೆಯೇ ಹೊರತು
ವ್ಯಕ್ತಿತ್ವಕ್ಕೆ ಕುಂದಾಯಿತೆಂದು ನಿಂದಿಸಲಾರೆ
ಪೂರ್ವಿಕರ ಗಂಟಾಗಲಿ
ಧನಿಕರ ನಂಟಾಗಲಿ ಇಲ್ಲದೆ
ಅಸ್ತಿತ್ವದುಳಿವಿಗೆ ಆಯ್ದುಕೊಂಡ ಜೀವನ
ನಿಮ್ಮ ದ್ರಷ್ಟಿಯಲ್ಲಿ ಕೇವಲವೆನಿಸಿದರೆ
ಸಂಕುಚಿತ ಮನೋಬಿಂಬವೇ ವಿನಹ
ಆಯ್ಕೆಯ ಅನಾರ್ಹತೆಯಲ್ಲ
ಅರಿವಿನೆಡೆಗೆ ಹರಿಯದ ಜಡ ಚಿತ್ತ
ಸೊಗಸಿಗು ತೆರೆಯದ ಅಂದತ್ವ
ವ್ಯಕ್ತಿ ವೈಕಲ್ಯಕ್ಕೆ ಸೃಷ್ಟಿ ಹೊಣೆಯಲ್ಲ
ಹೇಗೆಯೇ ಇರಲಿ ಆಂತರ್ಯ
ಹಣ ತೆರದಿದ್ದರೆ ಇಲ್ಲ ಔದಾರ್ಯ
ನನ್ನದು ವ್ಯವಹಾರಿಕ ಜಗತ್ತು
ಭಾವನೆಗಳಿಗಿಲ್ಲ ಕಾಸಿನ ಕಿಮ್ಮತ್ತು