Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ದೊಡ್ಡಮನುಷ್ಯರು

ದೊಡ್ಡವರ ತಪ್ಪು ದೊಡ್ಡದಾಗಿ ಪ್ರಕಟವಾಗುತ್ತದೆ
ಅದೇ ತಪ್ಪು ನಾವು ಮಾಡಿದರೆ ಲೆಕ್ಕಕ್ಕಿಲ್ಲ
ತಪ್ಪಿಗೂ ದೊಡ್ಡಮನುಷ್ಯರು ಸಾಮಾನ್ಯರು ಎಂಬ ಬೇದ
ದೊಡ್ಡವರ ಚಿಕ್ಕ ಒಳ್ಳೆತನ ದೊಡ್ಡದಾಗಿ ಪ್ರಕಟ
ನಮ್ಮ ದೊಡ್ಡ ಒಳ್ಳೆಯತನ ಕಾಲಿಗೆ ಕಸ
ಒಳ್ಳೆಯದಕ್ಕೂ ದೊಡ್ಡಮನುಷ್ಯರು ಸಾಮಾನ್ಯರು ಎಂಬ ಬೇದ
ತಪ್ಪಿಗೂ ದೊಡ್ಡವರೇ ಬೇಕು ಒಳ್ಳೆಯದಕ್ಕೂ ದೊಡ್ಡವರೇ ಬೇಕು

- ನಾಗರಾಜ್

08 Dec 2017, 08:21 pm

ನಸುಕಿನ ಕನಸು

ಹುಸಿಯಲ್ಲ ನಿಜವಾಗ್ಲು
ನೀ ನನ್ನ ಸ್ವಪ್ನನದಲಿ
ಬಂದಿದ್ದೆ ಕಳೆದ ರಾತ್ರಿ
ಚಂದಿತ್ತು ಒಲವ ಜಾತ್ರಿ.

ನೀ ಬೇಕು ಎಂದೆನ್ನ
ಹಿತವಾಗಿ ಕೇಳಿದೆ
ಬಣ್ಣಾದ ನವಿಲೂಗರಿ
ಕೈ ಚಾಚಿ ಬೆರಳು ತೋರಿ.

ನಾ ನಿನ್ನ ರೇಗಿಸಲು
ಅದು ಬೇಡ ಎಂದೆನಲು
ನೀ ಮುನಿದೆ ನನ್ನ ಮೇಲೆ.
ನೋಡಲದು
ಸೊಗಸು ಕೇಳೆ.

ಮುನಿಸಲ್ಲು ನೀ ಚಂದ
ಅದಕಾಗಿ ನಾ ನಿನ್ನ
ಆಥರ ಸತಾಯಿಸಿದೆನು

ನಿನ್ನೊರತು ಯಾರತ್ರ
ನಾ ಹೀಗೆ ಆಡುವೆನು
ತಪ್ಪಿದ್ರೆ ಕ್ಷಮಿಸೆ ನೀನು.

ಎಂದು ನಾ ಕೇಳಲು
ಅಳುವೊಡನೆ ನೀ ನಗಲು
ಅಪ್ಪಿದೆ ನನ್ನನಲ್ಲೆ
ನನ್ನ ನೀ ಒಬ್ಳೆ ಬಲ್ಲೆ

ಈ ರೀತಿ ಸಾಗುತಿಹ
ಕನಸಿನಲಿ ಮಜವಿತ್ತು
ಅಷ್ಟರಲಿ ಸೂರ್ಯ ಬಂದ.
ಕಣ್ಬಿಟ್ಟಿ ಕೋಳಿಗಳ ಕೂಗಿನಿಂದ.

- ಮಧುಕೇಶವ್

08 Dec 2017, 05:09 pm

ನಮ್ಮನೆ.....

ಕಲ್ಪನೆಯ ತವರುರು ನಮ್ಮನೆ
ಕನಸುಗಳ ಮರೆಯೋರು ನಮ್ಮನೆ
ಅರಿಯೋರು ಯಾರಿಲ್ಲ ನಮ್ಮನೆ
ಮರೆತು ದೂರಾದರೆ ನಮ್ಮನೆ

ನಗುವ ಹೋ ಮಾಲೆ ನಮ್ಮನೆ
ಹರಿವ ಸಿರಿಯುರು ನಮ್ಮನೆ
ಮುಗಿಲ ಮಳೆಯುರು ನಮ್ಮನೆ
ಹೋಳೆವ ಮುಂಗಾರು ನಮ್ಮನೆ

ಹಸಿರ ದಿಬ್ಬಣ ನಮ್ಮನೆ
ಹಕ್ಕಿಗಳ ತವರುರು ನಮ್ಮನೆ
ಪ್ರಾಣಿಗಳ ಗಣಿಯುರು ನಮ್ಮನೆ
ಮುತ್ತಿನಂಗಳ ನಮ್ಮನೆ

ಕಾಣದ ಕಡಲುರು ನಮ್ಮನೆ
ಚೆಂದುಳ್ಳಿ ತೋಟ ನಮ್ಮನೆ
ಬಂದುಗಳ ನೆಲೆಯುರು ನಮ್ಮನೆ
ಅರಸಿ ಬಂದವರು ನಮ್ಮನೆ.......

ಮರೆಯದೆ ಇರುವರೆ ಸುಮ್ಮನೆ
ನಮ್ಮನೆ ನಮ್ಮನೆ ನಮ್ಮನೆ.......

- ರಾಗಸಿರಿ....

08 Dec 2017, 04:21 pm

ಮುದ್ದು ಗಿಳಿ.....

ಓ ನನ್ನ ಮುದ್ದು ಗಿಳಿಯೆ
ನಿ ಎಕೆ ಹಾರುತಿಯೆ
ನನ್ನ ಎದೆಯಂಬ ಪುಟ್ಟ
ಗುಡಿಯ ಮಾಡಿರುವೆ ನಿನಗೆ
ಇದ್ದು ಬಿಡಬಾರದೆ ಅಲ್ಲೆ
ರಾಣಿಯಂತೆ.....
ಹೊತ್ ಹೊತ್ಗೆ ಕಾಳು ಕಡಿ
ತಂದಿಡುವೆ ನಿ ವಲ್ಲೆ ಅಂದರು
ನಿನ ಬಾಯಗೆ ಸುರಿವೆ
ಕತ್ತಲೆಯ ಈ ಲೋಕದಲ್ಲೀ
ಹಾರಿ ಹೋಗಿ ಹೇಗೆ ಬದುಕುವೆ ನೀ
ನನ್ನ ಅಗಲಿ ........
ದುಷ್ಟ ರಣಹದ್ದುಗಳು
ನಿನ್ನನ್ನು ಕೋಂದರೆ
ನನ್ನ ಗತಿ ಎನೆ ಮುದ್ದು ಗಿಳಿ...
ರೆಕ್ಕೆ ಬಂದಿತ್ತೆಂದು ಹಾರಿ ಹೋಗಬೇಡವೆ
ನನ್ನ ಎದೆಯ ಆಸರೆಯ ಅಗಲಿ.....
ಓ ನನ್ನ ಮುದ್ದು ಗಿಳಿಯೆ.....

- ರಾಗಸಿರಿ....

08 Dec 2017, 04:02 pm

"ನಿವೇದನೆ•••••"

ಇಟ್ಟಿದ್ದೆ ಎದೆತುಂಬ ಕನಸುಗಳ ನಕ್ಷತ್ರ
ಪ್ರೀತಿ ಗೆರೆಯನು ಎಳೆದು ಬಿಡಿಸಿದ್ದೆ ನಿನ ಚಿತ್ರ...

ಅಪ್ಪನಾಣತಿಯಂತೆ ನೀನೆತ್ತ ನಡೆದೆ
ಪುಟ್ಟ ಮಗುವಿನ ತೆರದಿ ನಾ ಅತ್ತು ಕರೆದೆ...

ಎಷ್ಟು ಕೂಗಿದರು ನೀ ಕೇಳದೆ ಹೋದೆ
ನಂಬಿದ ಹ್ರುದಯಕೆ ದ್ರೋಹ ಬಗೆದೆ

ಇಂದಿಗೂ ನಿನ್ನ ನೆನಪಲ್ಲೇ ಬದುಕಿದೆ
ನನ್ನ ತೊರೆಯಬೇಡ ಮರಳಿ ಬಾರದೆ...

- Basawaraj

08 Dec 2017, 02:55 pm

ಎದೆಯ ಹಾಲು

ಹೆತ್ತ ತಾಯಿಯ ಎದಯ ಹಾಲು ವಿಷವ
ಚಿಮ್ಮಿತು ಅಹಂಕಾರದ ಕಡು ಸ್ವಾರ್ಥದಲ್ಲಿ.
ಅಡ್ಡಿಯಾಗಿದೆ ಕರುಳ ನಂಟು ಕೊಂದು
ಹಾಕಲು ಕರುಳ ಕುಡಿಯನು.

ಕತ್ತು ಹಿಸುಕಿ ಸಾಯಿಸಿದರೆ ಸತ್ತ ವರದಿ ತಾನೆತ್ತ ಕೇಳುವೇನೋ ಎಂದು ಹೃದಯಕ್ಕೆ ಚೂರಿ ಬಗೆದು ಮಾತಿದಿನಿಂದ ಇಂಚಿಂಚು ಗಾಸಿ ಮಾಡಿ ನರಕ ತೋರುತಿರುವೆಯ ?

ಒಂದೇ ಉಸಿರು ಕಟ್ಟಿ ಸತ್ತುಹೋಗುವಳೆಂದು ಇಂದು!
ಮಲತಾಯಿ ಅಲ್ಲದಿದ್ದರೂ ಮರುಳು ತಾಯಿ ಆಗಿಹೋದೆ ಕಟುಕರಿಗೂ ಕೀಳಾಗಿ ನನ್ನ ಕಾಡಿ ನಕ್ಕು ನಲಿದೆ.

ನಕಲಿ ಮಾಡಿ ನಿನ್ನ ನೀಚ ಬದುಕಿಗೆ ನನ್ನದೇ ಪ್ರತಿಬಿಂಬವನ್ನು ಅಂಟಿಸಿ ನನ್ನ ಭಾವ ಚಿತ್ರದಂತೆ ಲೋಕದೆಲ್ಲೆಡೆ ಸಾರಿ ನನ್ನ ಕಣ್ಣ ಹನಿಯ ಕುಡಿದು ಬದುಕುವೆಯ?

ಮೆಚ್ಚಿ ಬಂದ ಕಂದನಿಂದು ಚುಚ್ಚದೇನೆ ಹೊಂಚು ಹಾಕಿ ಕಟ್ಟ ಕಡೆಗೆ ಕೆಟ್ಟವಳೆಂದು ದೂರಿ ನೀನು ನನಗೆ ದೂರವಾಗುವೆಯ?

ಮಾತೃಮೂರ್ತಿ ಎಂದು ಕೊಂಡಾಡಿದ ಬಾಯಿಯಲ್ಲಿ ನೀನೊಂದು ಕಲ್ಲೆಂದು ಮಾನವತ್ವವಿಲ್ಲದ ರಾಕ್ಷಸಿಯೆಂದು ಕಂಬನಿಯೇ ನುಂಗಿ ಬದುಕುವಂತೆ ಮಾಡಿದೆಯಾ?

- ಚುಕ್ಕಿ

08 Dec 2017, 12:01 pm

ಅತ್ತವರು

ಬಿದ್ದ ಮರಕ ಅತ್ತವರಿಲ್ಲ
ಸೊತವಗ ಹೆಗಲ್ಯಾರು ಇಲ್ಲ
ಗಳಿಸಿದ್ದಕಿಂತ ಕಳಿದಿದ್ದ ಹೆಚ್ಚು ಆಯಸ್ಸ
ಉಸಿರಿನೊಡನೆ ಉರಿಯು ಸೆರಿ
ಸುಡುತಿದೆ ಮನವ ಕೌರವನ ತನವ

- ಕೌರವ

08 Dec 2017, 10:16 am

ಸೈನಿಕ, ಸೈನಿಕ


ನಿನ್ನಿಂದ ಕಲಿತು ಆದೆ ನಾ ಪ್ರಾಮಾಣಿಕ,
ನಿನ್ನಲ್ಲಿರುವ ಒಬ್ಬ ದುಖಿಃತನಾದ ಮೌನಿಕ,
ಆದರು ನೀನು ನಮ್ಮನ್ನು ಸದಾ ಕಾಯುವ ರಕ್ಷಕ,
ನೀನು ಎಂದಿಗೂ ಬಿಡುವುದಿಲ್ಲ ನಿನ್ನ ರಕ್ಷಣೆಯ ಕಾಯಕ,
ನಿನ್ನಲ್ಲು ಇರುವ ಒಬ್ಬ ಆಸೆಯೆಂಬ ಒಳ್ಳೆಯ ಮಾಂತ್ರಿಕ,
ನಮ್ಮೆಲ್ಲರಿಗೆ ಅಭಯ ನೀಡುತ್ತ,ನಮ್ಮಯ ಸುಖಕ್ಕೆ ನಿನ್ನ ಸುಖ ಬಿಟ್ಟು ದುಡಿಯುತ್ತಿರುವ ನೀನೆ ಮಹಾನ್ ಶ್ರಮಿಕ,
ನಿನ್ನ ಪ್ರತಿಯೊಂದು ಕಷ್ಟದ ಹೆಜ್ಜೆಗು ಇದ್ದೆ ಇದೆ ನಮ್ಮ ಬಹುಪರಾಕ,
ನಿನೊಬ್ಬ ಈ ದೇಶದ ಚಿತ್ರಿಕ,
ನಿನ್ನ ಜೊತೆ ಮತ್ತೊಬ್ಬನಿರುವ ರೈತನೆಂಬ ನಾಯಕ,
ನಿಮ್ಮಿಬ್ಬರನ್ನು ಕಡೆಗಣಿಸಿದವನೆ ದೊಡ್ಡ ಮೂರ್ಖ
......(ಮುಂದುವರೆಯುವುದು ಅನಂತದವರೆಗೆ)
"ಯುವಕ ಆಗಲು ಪ್ರಯತ್ನಿಸು ಸೈನಿಕ"

- SHASHI

08 Dec 2017, 10:05 am

ವ್ಯಾಪಾರಿ

ನನ್ನನು ಕನಿಷ್ಠವಾಗಿ ಕಂಡ ಮಾತ್ರಕ್ಕೆ
ನಿಮ್ಮ ಘನತೆ ಹೆಚ್ಚುವುದಿದ್ದರೆ ಅಷ್ಟಾದರು ಬದುಕು ಸಾರ್ಥಕಗೊಂಡಿದ್ದಕ್ಕೆ
ಹರ್ಷಿಸುತ್ತೇನೆಯೇ ಹೊರತು
ವ್ಯಕ್ತಿತ್ವಕ್ಕೆ ಕುಂದಾಯಿತೆಂದು ನಿಂದಿಸಲಾರೆ
ಪೂರ್ವಿಕರ ಗಂಟಾಗಲಿ
ಧನಿಕರ ನಂಟಾಗಲಿ ಇಲ್ಲದೆ
ಅಸ್ತಿತ್ವದುಳಿವಿಗೆ ಆಯ್ದುಕೊಂಡ ಜೀವನ
ನಿಮ್ಮ ದ್ರಷ್ಟಿಯಲ್ಲಿ ಕೇವಲವೆನಿಸಿದರೆ
ಸಂಕುಚಿತ ಮನೋಬಿಂಬವೇ ವಿನಹ
ಆಯ್ಕೆಯ ಅನಾರ್ಹತೆಯಲ್ಲ
ಅರಿವಿನೆಡೆಗೆ ಹರಿಯದ ಜಡ ಚಿತ್ತ
ಸೊಗಸಿಗು ತೆರೆಯದ ಅಂದತ್ವ
ವ್ಯಕ್ತಿ ವೈಕಲ್ಯಕ್ಕೆ ಸೃಷ್ಟಿ ಹೊಣೆಯಲ್ಲ
ಹೇಗೆಯೇ ಇರಲಿ ಆಂತರ್ಯ
ಹಣ ತೆರದಿದ್ದರೆ ಇಲ್ಲ ಔದಾರ್ಯ
ನನ್ನದು ವ್ಯವಹಾರಿಕ ಜಗತ್ತು
ಭಾವನೆಗಳಿಗಿಲ್ಲ ಕಾಸಿನ ಕಿಮ್ಮತ್ತು

- ಯು.ರಾಮು ಸಿರಿಗೆರೆ

08 Dec 2017, 09:52 am

ಸಾವಿನ ಪ್ರೀತಿ ....

ಸಾವನ್ನು ಹೂಡುಕಿಕೊಂಡು ಹೋಗುವ
ಮನಸ್ಸಿಗೆ ಪ್ರೀತಿಯ ಮಾತುಗಳು....

ಕ್ಷಣಗಳಲ್ಲಿ ಕಣ್ಣ ಮರೆಯಾಗುವ ಜೀವಕ್ಕೆ
ಬದುಕ ಬೇಕೆಂಬ ಆಸೆ....

ಗೆಳೆಯ ಈ ಜೀವ ಮಣ್ಣಿಗೆ ಹೋದರು
ನಾನು ನಿನ್ನನೇ ಪ್ರೀತಿಸುವೆ...

ಇಂತಿ ನಿನ್ನ ಪ್ರೀತಿಯ
ದಾಸಿ....

- sparsha surya

08 Dec 2017, 08:49 am