Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನಸ್ಸಿನ ವೀಣೆ

- ನೆನಪಿನ ಕವಿತೆ

20 Sep 2023, 04:49 pm

ಸಾಲದ ಪ್ರೀತಿ

ಇದ್ದಾಗ ಜೊತೆ ನೀನು
ಮರೆವೇ ನನ್ನನ್ನೇ ನಾನು

ನಿನ್ನ ಮೊಗವ ನೋಡುತ್ತಾ
ಕುಳಿತೆನು ಕಾಲ ಕಳಿಯುತ್ತಾ

ಕೂತಿಹೆ ನಿನ್ನ ಬಳಿ
ಚಿಂತೆಯ ಮೂಟೆಯ ತಳ್ಳಿ

ನೀನಾಡುವ ಮಾತನು ಕೇಳುತ್ತಾ
ಸರಿ ಪಡಿಸಿದೆನ್ನ ಚಿತ್ತ

ನೀ ಕೇಳಿದನ್ನು ಕೊಡಿಸುತ್ತ
ಜಾಸ್ತಿ ಆಯ್ತು ಸಾಲದ ಮೊತ್ತ

ಅದ ತೀರಿಸಲು ವದ್ದಾಡುತ್ತ
ಹೊರಟು ಹೋದೆ ಊರಿನತ್ತ

- Maheshkumar Swami

17 Sep 2023, 10:27 pm

vabbanti

ನನ್ನ ವಬ್ಬಂಟಿಯಾಗಿಸಿ ನೀ ನಡೆದೆ
ಹೇಳಲಾಗದೆ ನಾ ಮೂಕನಾದೆ
ಹಿಂತಿರುಗಿ ನೋಡದೆ ನೀ ಸಾಗಿದೆ
ಮೌನದಿ ಅವಿತು ನಾ ಸುಮ್ಮನಾದೆ

ಮನದಲ್ಲಿ ಕುಳಿತಿಹುದು ನೂರಾರು ಮಾತು
ಬಂದ ತೊಂದರೆಗಳ ಹೇಳದೆ ಅಲ್ಲೇ ಅವಿತಿತ್ತು
ನೀನರೇವೆ ಅದರ ಭಾವನೆ ಯಂದು ಸುಮ್ಮನಿತ್ತು
ಅದನರಿಯದೆ ನಿನ್ನ ಪಾಡಿಗೆ ನೀ ಸಾಗುತ್ತಿದ್ದೆ

ನೊಂದ ಮನಸಿಗೆ ಇದು ತಿಳಿದರೆ ಸಾಕಿತ್ತು
ತನ್ನವರು ಯಾರಿಲ್ಲ ಜೋಟಿಗಿರುವವರು ಯಾವತ್ತೂ
ಇದು ನಿನ್ನ ಪಯಣ ಈ ಮನ ನಿನ್ನ ಸ್ವತ್ತು
ಇದ ತಿಲಿಪಡಿಸಿ ಈ ಸತ್ಯದ ಮಾತು

- Maheshkumar Swami

17 Sep 2023, 10:25 pm

ನಿನಗೆ ನಿಡಿರುವ ಸ್ಥಾನ ಯಾವತ್ತೂ ನಾಶವಾಗುದಿಲ್ಲ...

ಸುಲಭವಾಗಿ ಮರೆತು ಬಿಡಲು ನನ್ನ ನಿನ್ನ
ಪರಿಚಯ ನಿನ್ನೆ ಮೊನ್ನೆಯದಲ್ಲ....
ನಿನ್ನ ಮರಿಯುತ್ತಿನಿ ಎಂದು ಬಾಯಿಂದ ಹೇಳಬಹುದು
ಆದರೆ ಮನಸ್ಸಿಂದ ಹೇಳಲು ಸಾದ್ಯವಿಲ್ಲ....
ಹೊರಟು ನಿಂತಿರುವವನಿಗೆ ಬಿಳ್ಕೋಡುಗೆ ನೀಡು
ಆದರೆ ಏನನ್ನೂ ಹಾರೈಸಬೇಡ ಯಾಕೆಂದರೆ
ನನ್ನ ಮನಸು ಮತ್ತೊಮ್ಮೆ ನಿನ್ನತ್ತ ವಾಲಿಬಿಡುದರಲ್ಲಿ
ಯಾವ ಸಂಶಯವಿಲ್ಲ....
ನಾ ಎಷ್ಟೇ ದೂರ ಸಾಗಿದರೂ, ನನ್ನ ಮನದಲ್ಲಿ
ನಿನಗೆ ಅಂತ ನಿನಗೆ ನಿಡಿರುಲ ಸ್ಥಾನ
ಯಾವತ್ತೂ ನಾಶವಾಗುದಿಲ್ಲ......
ಎಮ್.ಎಸ್.ಭೋವಿ...✍️


- mani_s_bhovi

16 Sep 2023, 10:11 pm

ಹೇಳು ಗೇಳತಿ...

ಸೇವಕನಾಗುವೆ
ರಾಣಿಯಾಗುವೆಯ ಹೇಳು....
ಭಿಕ್ಷುಕನಾಗುವೆ
ದಾನ ಮಾಡುವೆಯ ಹೇಳು....
ಕನಸಲ್ಲಿ ಬರುವೆ
ನಿದ್ರಿಸುವೆರ ಹೇಳು....
ಗುಡಿ ಕಟ್ಟುವೆ
ದೇವತೆಯಾಗುವೆಯ ಹೇಳು....
ಭಯ ಪಡುವೆ
ಪಿಶಾಚಿಯಾಗುವೆಯ ಹೇಳು....
ಶಿವನಂತೆ ವಿಷ ಕುಡಿಯುವೆ
ಪಾರ್ವತಿಯಾಗುವೆಯ ಹೇಳು....
ಎಮ್.ಎಸ್.ಭೋವಿ....✍️
.
.
.
.
.
.

- mani_s_bhovi

15 Sep 2023, 11:58 pm

ಜೀವನದಲ್ಲಿ ಒಮ್ಮೆ ಬಂದು ಹೋದಳು



ಒಬ್ಬಂಟಿಯಾಗಿ ಇದ್ದವನನ್ನ ಜಂಟಿ ಮಾಡಿದಳು,
ಖುಷಿಯಾಗಿ ಇದ್ದವನನ್ನು ಪ್ರೀತಿಯಲ್ಲಿ ಮುಳುಗಿಸಿದಳು,
ಜೀವನದಲ್ಲಿ ಒಮ್ಮೆ ಬಂದು ಹೋದಳು.

ಮತ್ತೆ ಯಾವಾಗ ಬರುತ್ತಾಳೆಯೋ ನನ್ನ ಜೀವನದಲ್ಲಿ,
ಅವಳಿಗಾಗಿ ಸದಾ ಕಾಯುತ್ತಿರುವೆ ನನ್ನ ಮನಸಿನಲ್ಲಿ,
ಮತ್ತೆ ಅವಳು ಸಿಗುತ್ತಾಳೇ ಎನ್ನುವ ನಂಬಿಕೆಯಲ್ಲಿ .

ಯಾವಾಗ ಬಂದು ಸೇರುತ್ತಾಳೋ ನನ್ನವಳಾಗಿ,
ಯಾಕೆ ಇಂತ ತೊಂದರೆ ಕೊಡುತ್ತಾಳೋ ಅವಳಾಗಿ,
ಯಾರಿಗಾಗುತ್ತಳೋ ಮನೆಯ ಸೊಸೆಯಾಗಿ.



ಪುಸ್ತಕ ಪ್ರೇಮಿ ಹರಿಯಬ್ಬೆ ನಾಗಭೂಷಣ ಡಿ

- ಹರಿಯಬ್ಬೆ ನಾಗಭೂಷಣ ಡಿ

13 Sep 2023, 08:43 pm

ಉತ್ತರಿಸು ನೀ ಬೇಗನೇ...

ಯೋಚಿಸುವೆ ನನ್ನಲ್ಲಿ ನಾ ಒಮ್ಮೆ,
ಏಕೆ ತೋರಿದೆ ಮನವು ನಿಮ್ಮಲಿ ಒಲುಮೆ,
ತೋರುವಿರಾ ನಿಮ್ಮ ಮನದ ನಿಲುಮೆ,
ಕಾಯುತಿರುವೆ ನಾ ಕಾತೊರೆದು ನಿಲುವ,
ದಯಮಾಡಿ ಸ್ವೀಕರಿಸಿ ನನ್ನೀ ಒಲವ,
ಇಂತಿ ನಿಮ್ಮವ, ಮರೆತೂ ಮರೆಯದವ...
----- tippu -----

- tippu

10 Sep 2023, 08:29 pm

ಮರೆತೂ ಮರೆಯದಿರು ಮನವೇ...

ಅಂದವಾದ ನಿನ್ನ ಕಣ್ಣ ಕುಡಿನೋಟ,
ತಂದಿದೆ ಮನದಲ್ಲೇನೋ ತೊಳಲಾಟ,

ನಿನ್ನ ಅಂದದ ಮೊಗವ ಕಾಣಲು,
ಕಾತೊರೆದು ಕುಳಿತಿವೆ ನನ್ನ ಕಂಗಳು,
ಇನ್ನು ಅರ್ಥವಾಗದೇ ನಿನಗೆ ಆ ಕಂಗಳಾ ಅಳಲು?,

ಏನ ಮಾಡಿದೆ ಮೋಡಿ,
ಕಣ್ಣಂಚಿನಲಿ ನೀ ನೋಡಿ,
ಪ್ರೀತಿಯಲಿ ಕೇಳುವೆ ನಾ ಧೈರ್ಯವ ಮಾಡಿ,
ಪ್ರೀತಿಯರಿತೆಯಾದರೆ ತಿಳಿಸು ನೀ ನೆಪದಿ ಕರೆಯನು ಮಾಡಿ,

ದೂರ ಮಾಡದಿರು ನನ್ನ ಬೀಸೋ ಗಾಳಿಗೆ ತೂರಿ,
ಕಾದು ಕುಳಿತಿದೆ ಮನ ತನ್ನ ಮಂಡಿಯ ಊರಿ,
ನಿನಗಾಗಿ ಬರೆದೆ ಕವನ ಮನದ ಇಂಗಿತ ತೋರಿ,

ಮರೆತೂ ಮರೆಯದಿರು ಮನವೇ,
ನನ್ನೊಲವಿನಾ ಒಲವೇ...
----- tippu -----





- tippu

10 Sep 2023, 12:01 am

ಕವನದ ಶೀರ್ಷಿಕೆ ಪ್ರೇರಣೆ.


ಘಾಟ್ಬೊರಳ ಗ್ರಾಮದಿ ಮೂಡಿದ ಬಾಲ ಚಂದಿರ,
ಶಿವಲಿಂಗರ ಶಿಶುವಾಗಿ ವ್ಯಾಸರಾಯರಂತೆ ಪಡೆದರು ವಿದ್ಯಾಸಂಸ್ಕಾರ.
ಶಿಕ್ಷಕರ ಮಗನಾದ ಪರ್ವತಯ್ಯ ಸ್ವಾಮಿಗೆ ಲಭಿಸಿತು ಸರ್ಕಾರಿ ಉದ್ಯೋಗ,
ಜ್ಯೋತಿ ಬಾರಂತೆ ಶಿಕ್ಷಣ ಪ್ರಗತಿಗೆ ಶ್ರಮಿಸಲು ಹುಡುಕಿದರು ಹೊಸ ಮಾರ್ಗ.
ಸುಸಂಸ್ಕೃತ ಸಾತ್ವಿಕೆ ಪಾರ್ವತಿಯವರಿಗೆ ಮನಸೋತ ಕುವರ,
ಅನ್ಯೂನ್ಯತೆಗೆ ಹೆಸರಾದ ಅವರ ಬದುಕು ಎಷ್ಟು ಸುಂದರ!.
ಜನುಮದ ಜೋಡಿಗೆ ಆರು ಋತುಗಳ ಸ್ತುತಿಗೆ ಜನಿಸಿದರು 6 ಮಕ್ಕಳು,
ತಂದೆಯ ಶಿಸ್ತಿಗೆ ಹೆಸರಾದ ಭಾವೈಕ್ಯತೆ ಹೂಗಳು.
ಶಾರದೆಯಂತ ಸತಿಗೆ ತಮ್ಮ ಮಕ್ಕಳೊಂದಿಗೆ ಕೊಡಿಸಿದರು ಶಿಕ್ಷಣ.
ಶಿಕ್ಷಕಿಯಾಗಿ ಸ್ಮರಿಸುತ್ತಿಹ ರು ಪಾರ್ವತಿ ಪತಿಯ ಪ್ರೇರಣೆಯ ಅನುಕ್ಷಣ.
ಅಂದೆ ಹೆಣ್ಣಿನ ಸ್ವಾವಲಂಬನೆ ಬದುಕಿಗೆ ಶ್ರಮಿಸಿದ ಮಹಾಪುರುಷ,
ಸತಿಯ ವಚನಮೃತದಲ್ಲಿ ಅರಳಿದ ಮಕ್ಕಳ ಉಜ್ವಲ ಭವಿಷ್ಯವು ನೀಡಿದೆ ದಂಪತಿಗಳಿಗಿಂದು ಮರೆಯಲಾಗದ ಹರ್ಷ.
ಸ್ತ್ರೀಯರ ಸ್ವಾಭಿಮಾನದ ಬದುಕಿಗೆ ಸ್ಪೂರ್ತಿಯಾಗಿ ಸಮಾಜ ಸೇವೆಗೆ ಸತಿಯನ್ನು ಸಜ್ಜುಗೊಳಿಸಿದ ಮಹಾನ್ ನಾಯಕ,
ಗೃಹಲಕ್ಷ್ಮಿಯಾಗಿ ಪತಿಯ ಕನಸನ್ನು ನನಸಾಗಿಸಿದ ಪಾರ್ವತಿ ಅಮ್ಮನವರ ಸಾಧನೆಯೆ
ಹೆಣ್ಣು ಕುಲಕಿಂದು ಸ್ಪೂರ್ತಿದಾಯಕ.
ಶಿಕ್ಷಣಕ್ಕೆ ಮಾದರಿಯಾಗಿರುವ ಈ ಜೋಡಿಯನ್ನು ಮರೆಯಬಾರದು ನಾವು ಕೊನೆಯ ತನಕ,
ಇಂಥವರ ಸನ್ಮಾರ್ಗದಲ್ಲಿ ಬೆಳೆಯುವ ಮಕ್ಕಳ ಬದುಕು ಸಾರ್ಥಕ.
ಆದರ್ಶ ದಂಪತಿಗಳಾದ ನಿಮಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

- nagamani Kanaka

05 Sep 2023, 10:24 pm

happy teacher's day

ನಾ ಗುರುಗಳಿಗಾಗಿ ಬರೆದಿರುವೆ ಈ ಪುಟ್ಟ ಕವನ
ಆರಂಭದಲ್ಲಿಯೇ ನಾ ಹೇಳುವೆ ಹೃದಯವಂತ ಗುರುಗಳಿಗೆಲ್ಲ ಹೃದಯಪೂರ್ವಕ ನಮನ.
ಕಾರಣ ಇವರೆಲ್ಲ ನಮಗೆ ದೇವರ ಸಮಾನ.
ಭೂಮಂಡಲದಲ್ಲ್ಯಾರಿಲ್ಲ ಗುರುಗಳ ಸಮಾನ.
ದೇವರು ಕೊಟ್ಟ ಅಪರೂಪದ ಈ ವರದಾನ.
ಗುರುಗಳೆಲ್ಲರಿಗೂ ನಮ್ಮೆಲ್ಲರ ಭಾವದಾನ.
ವಿದ್ಯಾರ್ಥಿಗಳೆಂಬ ನೆಲಕೆ ಗುರುಗಳೆಲ್ಲರೂ ಬಿತ್ತುವರು ಜ್ಞಾನದ ಬೀಜಾನ.
ನೆಲವೆಂಬ ಹೃದಯದಿ
ಫಲವೆಂಬ ಜ್ಞಾನವ ಬೆಳೆಸುವುದು ಗುರುಗಳ ಮನ.
ಗುರುಗಳ ಪರಿಚಯ ನಮಗೆ ದೈವದತ್ತ ಬಹುಮಾನ.
ನಾ ಹೃದಯದಿ ಹೇಳುವೆನು ಕೊನೆವರೆಗೂ
ಗುರುಗಳಿಗೆ ಕೋಟಿ ಕೋಟಿ ಭಕ್ತಿಪೂರ್ವಕ ನಮನ...

- Shankru Badiger

05 Sep 2023, 03:21 pm