ಅಪ್ಪಿ..
ನಿನ್ನ ಕನ್ನೋಟದ ಕಣ್ಣು ರೆಪ್ಪೆಗಳ ಕಂಡು ಕನಸು ಕಂಡವನು ನಾನು.
ನಿನ್ನ ಮುದ್ದು ಮುಖದ ಮಂದಹಾಸ ಕಂಡು ಮರಳಾದವನು ನಾನು.
ಎಷ್ಟೋ ಸಲ ನಿನ್ನ ಕಿರು ನಗೆಗಾಗಿ ಕಾಯುತ್ತಾ ನಿಂತವನು ನಾನು.
ನಿನ್ನ ಕಿರುಬೆರಳು ಹಿಡಿದು ನಡೆಯುವಾಗ ಈ ಜಗತ್ತೇ ನನ್ನದು ಎಂದವನು ನಾನು.
Love You Dada..
ಕಾಣದೆ ಕಂಡೆನು ಒಂದು ದಿನ
ಅದುವೇ ನಮ್ಮ ಭಾರತ ಮಾತೆ
ಬಡತನದ ಬೆಳದಿಂಗಳ ದೀಪ
ವೀರ ಸ್ವಾಮಿ ಸೀತಾಮಾತೆಯ ಪುತ್ರ
ಸೆಪ್ಟಂಬರ್ 5 ರಂದು ಜನಿಸಿದ ಕಣ್ಮಣಿ
ದಕ್ಷಿಣ ಭಾರತಕ್ಕೆ ಕಾಲಿಟ್ಟ ಸರ್ವಪಲ್ಲಿ
ವಿದ್ಯಾರ್ಥಿ ವೇತನದಿ
ಪ್ರೌಢ ಶಿಕ್ಷಣ ಮುಗಿಸಿದ ಪೌರ
ಕ್ರಿಶ್ಚಿಯನ್ ವಿದ್ಯಾ ಮಂದಿರದಿ
ತತ್ವಜ್ಞಾನಿ ಪದವಿ ಪಡೆದ ಪಂಡಿತ
ನೈತಿಕತೆ ವೇದಾಂತ ವಿಚಾರವಾದಿ
ಸ್ನಾತಕೋತರ ಪದವಿಯ ವಿದ್ಯಾರ್ಥಿ
ದೇಶ ಕಟ್ಟುವ ನಾಯಕ
ರಾಜ್ಯಸಭೆಯಲ್ಲಿ ಸಂಸ್ಕೃತ ಶ್ಲೋಕ ಪಠಿಸಿ
ಗಮನ ಸೆಳೆದ ಸಾಧಕ
ದೇಶದೊಳಗಿನ ಕಲಹಗಳಿಗೆ
ನಾಂದಿ ಹಾಡಿದ ಸುಧಾರಕ
ದೇಶದ ಅಭಿವೃದ್ಧಿಗೆ ಶ್ರಮಿಸಿದ ಗೀತಾಂಜಲಿ
ನಮ್ಮ ದೇಶದ ರಾಷ್ಟ್ರಪತಿ
ಹಸಿದವರ ಪಾಲಿನ ಅಮೃತವಾಣಿ
ಅನಾಥ ಮಕ್ಕಳ ಮಧುರ ವಾಣಿ
ಅಂದ ಕಂದಮ್ಮಗಳ ಕಣ್ಮಣಿ
ಶಿಕ್ಷಕ ವೃತ್ತಿಯ ಆಶಾಕಿರಣ
ಭಾರತ ಶಾಲೆಗಳಲ್ಲಿ ಭಾವ ಶಿರೋಮಣಿ
ನಮ್ಮಯ ಭಾರತರತ್ನ
ಅವರಿಗೊಂದು ಅಭಿಲಾಷೆ
ಹೆತ್ತವರ ಮುದ್ದಿನ ಕೂಸಗುವಾಸೆ
ಅವರಿಗೊಂದು ಕಡೆಯ ಆಸೆ
ಆದರ್ಶ ಶಿಕ್ಷಕರಾಗುವ ಆಸೆ
ಅವಿಸ್ಮರಣೀಯವಾಗಿ ಅಚ್ಚರಿಯಾಗಿ
ಎಲ್ಲರ ಮನದಲ್ಲಿ ಉಳಿಯುವ ಆಸೆ
ಅವರೇ ನಮ್ಮ ಬ್ರಹ್ಮ ವಿದ್ಯಾ ಭಾಸ್ಕರ
ಅಂದು ಅವರು ಜನ್ಮ ದಿನದ ನೆನಪು
ಇಂದು ಶಿಕ್ಷಕರಿಗೆ ಗೌರವ ಸಲ್ಲಿಸುವುದು ಶುಭಾಶಯಗಳು ಕೋರುವ ಸವಿನೆನಪು
ಅದುವೇ ನಮ್ಮ ಶಿಕ್ಷಕರ ದಿನವು
ಅವರೇ ನಮ್ಮಯ ಶಿಕ್ಷಕರು
ಅವರೇ ನಮ್ಮ ಸರ್ವಪಲ್ಲಿ ರಾಧಾಕೃಷ್ಣನ್ ರವರು
ನಾಡಿನ ಸಮಸ್ತ ಗುರು ವೃಂದಕ್ಕೆ
ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ಚಿರಕಾಲ ಸ್ಮರಿಸುವನು
ಶಿರವಾಗಿ ನಮ್ಮ ಗುರುಗಳ ಎದುರು.......
ಕೈಯಲ್ಲಿ ಕೋಟಿ ಇದ್ದರು ಹಿರಿಯರ
ಕಂಡೊಡನೆ ಕಾಲಿಗೆ ಬೀಳೋದ ಸಂಸ್ಕಾರ
ಎಷ್ಟೇ ಆಧುನಿಕತೆ ಬಂದರು ಹಣೆಯ
ಮೇಲಿನ ಬೊಟ್ಟು ಸಂಸ್ಕಾರ
ಡಿಗ್ರಿ ಮೇಲೆ ಡಿಗ್ರಿ ಪಡೆದರು ಗುರುಗಳು
ಕಂಡಾಗ ತೋರುವ ಭಯ ಭಕ್ತಿ ಸಂಸ್ಕಾರ......
ಮೊದಲ ಪ್ರಯತ್ನದಲ್ಲಿ
ಗೆಲ್ಲುವವರು ಬದುಕಿನಲ್ಲಿ
ಗೆಲ್ಲಬಲ್ಲರು. ಆದರೆ
ಮೊದಲ ಪ್ರಯತ್ನದಲ್ಲಿ
ಸೋತವರು ಜಗತ್ತನ್ನೆ
ಗೆಲ್ಲಬಲ್ಲರು.ಯಾಕೆಂದರೆ
ಸಂಕಟದೊಂದಿಗೆ ಸೇಣೆಸಾಡುವ
ಮನಸ್ಸಿಗೇ ಛಲ ಹೆಚ್ಚು...................
ಕನ್ನಡದ ಹುಡುಗಿ ನಮ್ಮ ಸೌಪರ್ಣಿಕ
ಇವರಾಡುವ ಕನ್ನಡ ಮನಮೋಹಕ
ಇವಳ ಹಣೆಯ ಮೇಲಿದೆ ಕನ್ನಡದ ತಿಲಕ
ಇವಳೊಂದು ಅಪ್ಪಟ ಕನಕ
ಇವಳ ಸೌಂದರ್ಯ ನೋಡಿ ನಾನಾದೆ ಪುಳಕ
ಇವಳಿಗೆ ನನ್ನ ಈ ಕವಿತೆ ಸಮರ್ಪಕ.
.................................................
ನಾ ಬರೆದೆನು ನಿನಗಾಗಿ ಸುಂದರ ಕವನ
ಬರೆದ ಕವನಗಳಿಗೆ ಆದೆ ನೀ ಸಂಕಲನ
ನನ್ನ ಪ್ರತಿ ಪದಗಳ ಸಾಲಿನಲ್ಲಿ ನೀನೆ ತುಂಬಿ ಕಾಂಚನ
ನನ್ನ ಹೃದಯ , ಮನಸ್ಸಿಗೆ ನೀನೆ ಆಗಿರುವೆ ಸಿಹಿ ಸಿಂಚನ
ಇರಲಾರೆನು ನಿನ್ನ ಬಗ್ಗೆ ಕನಸು ಕಾಣದೆ ಪ್ರತಿದಿನ
ನಿನ್ನ ನೆನೆದು ನನ್ನ ಪ್ರೀತಿಗೆ ಕಾಯುವೆನು ಈ ಜೀವನ
ನಗುವ ಹೂವು ಕಂಡೆ ನಾನೊಂದು
ಆ ನಗುವಿಗೆ ಶರಣಾದೆ ಹುಣ್ಣಿಮೆಯ ಚಂದಿರನೆಂದು
ಹೂ ನಗುವಿನ ಪ್ರಭಾವಕ್ಕೆ ಹೃದಯವೇ ಹಣ್ಣಾಗಿದೆ ಇಂದು
ಚೆಲುವೆಯೇ ನಿನ್ನ ನೋಡಿದೆ ಪರಿಪರಿಯಾಗಿ ಹೂವೆಂದು
ಪರಿಮಳ ಬೀರುವ ಹೂವು ನೀನೆಂದು
ನಗುವೆ ನಿನ್ನ ಚಿನ್ನಾಭರಣ
ನಗುತಿರಲು ನೀನು ನನ್ನ ಬಾಳ ಬೆಳಗುವ ಹೊಂಗಿರಣ…