ಬುದ್ಧ ಅಂಬೇಡ್ಕರರ ನೆಲದಲ್ಲಿ
ನಾನೊಬ್ಬ ಸ್ವಾತಂತ್ರ್ಯ ಪಕ್ಷಿ
ಇಲ್ಲಿ ಎಲ್ಲರು ಸಮಾನರು
ಇಲ್ಲಿ ಎಲ್ಲರು ಮನುಷ್ಯರು
ಇಲ್ಲಿದೆ ನ್ಯಾಯ ಪಶು ಪಕ್ಷಿಗೂ
ಗಿಡ ಮರ ಬಳ್ಳಿಗೂ.
ನಮ್ಮ ಶಾಂತಿಯ ನೆಲದಲ್ಲಿ
ಅಶಾಂತಿಯ ಆತ್ಮಗಳು
ಬಂದವರೆಲ್ಲರು ಹೊರಗಿನವರು
ಪ್ರಶಾಂತ ನೀರಿನಲ್ಲಿ ಕಲ್ಲು ಎಸೆದು
ಅಲೆಗಳು ಸೃಷ್ಟಿಸಿದಂತೆ
ಇವರ ಕೆಲಸಗಳು.
ನಮ್ಮ ಅರಿವು ನಮಗಿದೆ
ನಾವು ಯಾರು? ನಮ್ಮವರು ಯಾರು?
ತಿಳಿದವರು ನಾವು
ಮನುಷ್ಯರು ನೀವು
ನಮ್ಮಂತೆ ಮನುಷ್ಯರಾಗಿ ಬಾಳಿ
ನಮ್ಮ ನೆಲದಲ್ಲಿ ನಮಗೆ
ನೆಮ್ಮದಿಯಾಗಿ ಬದುಕಲು ಬಿಡಿ
ನಿಮ್ಮ ದ್ವೇಷ ನಿಮ್ಮ ಕೀಚ್ಚು ನಿಮ್ಮಲ್ಲಿರಲಿ
ದ್ವೇಷ ಕಿಚ್ಚಿಲ್ಲದ ಸ್ವಾತಂತ್ರ್ಯ ನಮ್ಮದಾಗಲಿ.
ಬೇಸರದ ಸಂಜೆ ಇದು
ನೀನಿರದೆ ನೊಂದು ಕಂಬನಿ ಮೂಡಿಹುದು..
ಹೇ ಏಕಾಂತವೇ ದೂರ ಸರಿದು ಬಿಡು..
ನನ್ನವನ ಒಲವಿನಲಿ ಮೀಯಲು ಅನುಮತಿ ನೀಡು
ವಿರಹವೇ ದೂರ ಸರಿಯೇ
ಒಲವಿನೌತಣವ ಉಣಬಡಿಸೇ..
ಪ್ರೀತಿಯ ಅಮಲಿದು..
ಸುಂದರ ಸೋಲಿದು..
ಮೌನದ ಮಾತಿದು...
ಆನಂದದ ನೋವಿದು..
ಎಲ್ಲವೂ ನಿನ್ನಿಂದಲೇ..
ಎಲ್ಲವೂ ನಿನಗಾಗಿಯೇ...
ಕಾಲು ದಾರಿ ಅಲ್ಲಿ ಸಿಕ್ಕ
ಯುವತಿಯ ನುಡಿಯದು
ಅಂಗೈ ನೋಡಿ ನುಡಿದ ನುಡಿಯದು
ಕಾಲುಂಗುರ ತೊಡಿಸಿ
ಕಣ್ಣಿಗೆ ಕಾಡಿಗೆಯ ತೊಡಿಸಿ
ಹೂವನ್ನು ಮುಡಿಸಿ
ಕೈ ಹಿಡಿದು ನಡೆಸುವ ಅರಸ ನನ್ನವನಂತೆ....
__✍️Rajitha
ಕೊಟ್ಟು ಕಾಡಿಸುವ ಅವಸರ....
ಸಿಕ್ಕವರೆಲ್ಲ ಕೊನೆವರೆಗೂ ಉಳುವರೆ
ಸವಿಗನಸ ಕೂಡಿಟ್ಟು ತೆರಳುವರೆ
ಯಾಕಿದೂ ಕೊಟ್ಟು ಕಾಡಿಸುವ ಅವಸರ
ನಿನಗೆ ಪರಮಾತ್ಮ.....?
_✍️Rajitha