Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸ್ನೇಹಿತರ ದಿನಾಚರಣೆ

ನೋವಿಗೆ ಸ್ಪಂದಿಸಿದ
ಆತ್ಮೀಯ ಹೃದಯಗಳೇ.....
ಸೋತು ಕುಳಿತಾಗಲೆಲ್ಲ
ಧೈರ್ಯ ಹೇಳಿದ ಮನಸ್ಸುಗಳೇ....
ಕಷ್ಟ ನಷ್ಟಗಳು ಎದುರಾದಾಗ
ಸಹಾಯ ಮಾಡಿದ ಕೈಗಳೇ....
ಕಣ್ಣೀರು ಬಾರದಂತೆ ಕಾದು
ಸಾಂತ್ವನ ನೀಡಿದ ಜೀವಗಳೇ....
ನಿಮಗಿದೋ ನನ್ನ ಹೃದಯಪೂರ್ವಕ ಸ್ನೇಹಿತ ದಿನಾಚರಣೆಯ ಶುಭಾಶಯಗಳು.....



ಜಯಾ ಪಿ ...... ✍️

- Jaya

06 Aug 2023, 06:50 pm

satyada shodha

ಒಂದೂರಿನಲ್ಲಿ ಇಬ್ಬರು ಅಕ್ಕ ತಂಗಿಯರಿದ್ದರು. ರಾಧಾ ಮತ್ತು ಸೀತಾ. ರಾಧಾ ತುಂಬ ಒಳ್ಳೆಯವಳು ; ಆದರೆ ಸೀತಾ ತುಂಬ ದುರಾಸೆಯವಳು. ಒಂದು ದಿನ ಅವರ ತಾಯಿ ರಮ್ಯ ಇಬ್ಬರನ್ನು ಹತ್ತಿರ ಕರೆದು" ನೋಡಿ ಮಕ್ಕಳೇ ನಾನು ಇನ್ನೂ ಹೆಚ್ಚು ದಿನ ಬದುಕುವುದಿಲ್ಲ , ನಾನು ಸತ್ತರೆ ನನ್ನ ಆಸ್ತಿ ರಾಧಾಳಿಗೆ ಸೇರುತ್ತೆ ಏಕೆಂದರೆ ರಾಧಾ ನಿನಗಿಂತ ದೊಡ್ಡವಳು ಸೀತಾ ಗೊತ್ತಾಯ್ತಾ . ರಾಧಾ ನೀನು ಆಸ್ತಿ ಬಂದಾಗ ಜಂಬದಿಂದ ಮರೆಯಬೇಡ ನಿನ್ನ ತಂಗಿನ ಚೆನ್ನಾಗಿ ನೋಡಿಕೋ ಈಗ ಹೋಗಿ ಮಲಗಿ" ಎಂದಳು. ರಾಧಾ ಅಳುತ್ತಾ ಹಾಸಿಗೆಯ ಮೇಲೆ ಬೋರಲಾಗಿ ಮಲಗಿದಳು ಆಗ ಸೀತ "ಯಾಕೆ ಅಳ್ತಿದ್ದಿಯ ಅಕ್ಕ"ಎಂದಳು. ಆಗ ರಾಧಾ "ನೋಡಿದೆಯಾ ಸೀತ ಅಮ್ಮ ಹೇಗೆಲ್ಲಾ ಮಾತಾಡುತ್ತಾರೆ. ಸಾಯುವುದಂತೂ. ಹಾಗೇನಾದರೂ ಆದರೆ ಅಮ್ಮ ಹೋದ್ರು ನಾನು ಬದುಕುವುದಿಲ್ಲ "ಎಂದು ಬಿಕ್ಕಿಬಿಕ್ಕಿ ಅತ್ತಳು. ಆಗ ಸೀತಾ "ಹೋಗಿ ಸುಮ್ನೆ ಮಲಗು" ಎಂದು ಬೈತಾಳೆ. ಸ್ವಲ್ಪ ಹೊತ್ತಿನ ನಂತರ ರಾಧಾ ಮಲಗಿದ್ದನ್ನು ಖಾತ್ರಿಪಡಿಸಿಕೊಂಡು ಸೀತ ಅವಳಮ್ಮನ ಕೋಣೆಗೆ ಹೋಗುತ್ತಾಳೆ. ಹೋಗಿ ಅವಳ ಅಮ್ಮಳನ್ನು ಎಬ್ಬಿಸುತ್ತಾಳೆ. ರಮ್ಯಾ ಎದ್ದು ಕುಳಿತುಕೊಳ್ಳುತ್ತಾಳೆ ಮತ್ತು ಸೀತ ಇಷ್ಟೊತ್ನಲ್ಲಿ ಏನ್ ಮಾಡ್ತಾ ಇದ್ದೀಯಾ? ಎಂದು ಕೇಳುತ್ತಾಳೆ ಆಗ ಸೀತ "ಏನು ಇಲ್ಲಮ್ಮ ನಾನು ಹೇಳಿದ ಹಾಗೆ ಬರೆದು ಕೊಡ್ತೀಯಾ"ಎಂದು ಕೇಳುತ್ತಾಳೆ ಏನು ಹೇಳು ಎಂದು ರಮ್ಯಾ ಬರೆಯಲು ಶುರು ಮಾಡುತ್ತಾಳೆ ಆಗ ಸೀತ ಸೀತಾ ನಾನು ಸಾಯ್ತಾ ಇದ್ದೀನಿ ರಾಧಾ ನನ್ನ ಕುತ್ತಿಗೆಯನ್ನು ಹಿಸುಕುತ್ತಿದ್ದಳು ನನ್ನನ್ನು ಕಾಪಾಡು. ಇಷ್ಟು ಬರಿ ಅಮ್ಮ ಸಾಕು ಎಂದಳು ರಮ್ಯಾ ಬರೆದುಕೊ ಕೊಟ್ಟು ಜಿಲ್ಲೆಯ ಇದು ಎಲ್ಲಾ ಯಾಕೆ ಎಂದು ಪ್ರಶ್ನಿಸುತ್ತಾರೆ ಆಗ ಸೀತಾ ಚೀಟಿಯನ್ನು ಕಸಿದುಕೊಂಡು ರಮ್ಯಾಳ ಎಂದರೆ ಅವಳ ತಾಯಿಯ ಕುತ್ತಿಗೆಯನ್ನು ಸಿಲುಕುತ್ತಾಳೆ ರಮ್ಯ ಸತ್ತಿದ್ದಾಳೆ ಎಂದು ಖಾತ್ರಿ ಖಾತರಿ ಪಡಿಸಿಕೊಂಡು ಚೀಟಿಯನ್ನು ಎತ್ತಿಕೊಂಡು ಎತ್ತಿಕೊಂಡು ತನ್ನ ಮಂಚದ ಪಕ್ಕ ತಾಳೆ ಮತ್ತು ರಾಧಾಳ ಹತ್ತಿರ ಹೋಗಿ ಜಾತಕ ಅಮ್ಮ ನಿನಗೆ ಕರೆದಿದ್ದಾರೆ ಎಂದು ಹೇಳುತ್ತಾಳೆ ರಾಧಾ ಅಮ್ಮನ ಕೋಣೆಗೆ ಹೋದ ತಕ್ಷಣ ಅಮ್ಮನ ಕೋಣೆಯ ಬಾಗಿಲನ್ನು ಮುಚ್ಚುತ್ತಾಳೆ ಮತ್ತು ರಾಜನ ಆಸ್ಥಾನಕ್ಕೆ ಬಂದು ಶ್ರೀ ಮಹಾ ರಾಜರೆ ನನ್ನಮ್ಮನನ್ನು ನನ್ನ ಅಕ್ಕ ದಾದಾ ಕೊಲ್ಲುತ್ತಿದ್ದಾಳೆ ಬನ್ನಿ ಎಂದು ಅಳುವಂತೆ ನಟಿಸುತ್ತಾರೆ ರಾಜಭಟರು ಅವಳನ್ನು ಹಿಂಬಾಲಿಸುತ್ತಾನೆ ರಾಧಾ ಏಕೆ ಬಾಗಿಲು ಮುಚ್ಚಿದಳು ನನ್ನ ತಂಗಿ ಸೀತಾ ಎಂದು ಎಂದು ಯೋಚಿಸುವಷ್ಟರಲ್ಲಿ ಬಾಗಿಲು ತೆರೆಯುತ್ತದೆ ನೋಡಿದರೆ ರಾಜಭಟರ ಜೊತೆ ಸೀತಾ ಸೀತಾ ಬಂದಿರುತ್ತಾಳೆ ನೋಡಿ ನೀವೇ ನೋಡಿ ನನ್ನ ಅಮ್ಮ ನನ್ನ ನನ್ನ ಅಕ್ಕ ರಾಧಾ ಸಾಯಿಸಿದ್ದಾಳೆ ಎಂದು ಬಿಕ್ಕಿ ಬಿಕ್ಕಿ ಅಳುವ ಹಾಗೆ ನಾಟಕ ಮಾಡುತ್ತಿದ್ದಾಗ ರಾಜಭಟರು ರಾಧಾ ರಾಧಾ ತನ್ನ ಅಮ್ಮನನ್ನು ಸಾಯಿಸಿದ್ದಾಳೆ ಎಂದು ಹೇಳಲು ಸಾಕ್ಷಿಗಳು ಏನು ಎಂದು ಘೋಷಿಸುತ್ತಾರೆ ಆಗ ಸೀತಾ ತನ್ನ ಮಂಚದ ಬಳಿಗೆ ಕರೆದುಕೊಂಡು ಹೋಗಿ ನೋಡಿ ರಾಧಾ ನನ್ನ ಅಮ್ಮನನ್ನು ಕುತ್ತಿಗೆ ಹಿಸುಕುವಾಗ ನನ್ನ ಅಮ್ಮ ಚೀಟಿಯನ್ನು ಎಸೆದರು. ನೀವೇ ಓದಿ ಎಂದು ಆಗ ರಾಜಭಟರು ರಾಜಭಟರು ಓದಿ ರಾಧಾಳನ್ನು ಬಂಧಿಸುತ್ತಾರೆ. ಆಗ ರಾಧಾ ಒಂದು ಚೀಟಿಯಲ್ಲಿ ಏನೋ ಬರೆದು ಅದನ್ನು ಮಡಿಚಿ "ಸೀತಾ ಇದನ್ನು ಎಲ್ಲಿಯಾದರೂ ತೆಗೆದು ಇಡು ಇದರಿಂದ ಒಮ್ಮೆ ಉಪಯೋಗಕ್ಕೆ ಬರುವುದು" ಎನ್ನುತ್ತಾಳೆ.ಆಗ ಸೀತ ಅದನ್ನು ಕಪಾಟಿನಲ್ಲಿ ಇಡುತ್ತಾಳೆ ಮತ್ತು ಅದರ ಜೊತೆ ಅರಮನೆಗೆ ಸೆರೆಮನೆಗೆ ಹೋಗುತ್ತಾಳೆ. ರಾಧಾ ಒಮ್ಮೆ ಸೆರೆಮನೆಯಲ್ಲಿ ಸಾಯಲು ಯತ್ನಿಸುತ್ತಾಳೆ ಆಗಮನ ಅವಳ ತಾಯಿಯ ಆತ್ಮವು ಬರುತ್ತದೆ ಅವಳಮ್ಮನ ಆತ್ಮ
ರಾಧಾ ರಾಧಾ ಯಾಕೆ ಸಾಯಲು ಹೋಗುತ್ತಿದ್ದೀಯಾ ಎಂದರು ಅಮ್ಮ ಹೇಳಮ್ಮ ನಿನ್ನನ್ನು ನಾನು ಸಾಯಿಸಿದ್ದು ಎಂದು ಎಲ್ಲರೂ ಭಾವಿಸಿದ್ದಾರೆ. ‌‌ನಿಜ ಹೇಳಮ್ಮ ಎಂದಾಗ ಅವಳ ಅಮ್ಮ ಸೀತಾ ಎಂದುತ್ತರಿಸಿದರು. ರಾಧಾ ತನ್ನ ಬಿಡುಗಡೆಯ ನಂತರ ಪೋಲಿಸರಿಗೆ ಎಲ್ಲ ತಿಳಿಸಿದಳು.ಪೋಲಿಸರು ಸೀತಾಳನ್ನು ಬಂಧಿಸಿದರು. ರಾಧಾ ಸೀತಾಳಿಗೆ ಅವತ್ತಿನ ಚೀಟಿಯನ್ನು ತರಲು ಮತ್ತು ಅದನ್ನು ಓದಲು ಹೇಳಿದಳು. ಸೀತಾ ಅದನ್ನು ತಂದು ಓದಿದಳು ಅದರಲ್ಲಿ ಬರೆದಿಟ್ಟು ಸತ್ಯ ಅಮರ ಸುಳ್ಳು ಕ್ಷಣಿಕ
ಧನ್ಯವಾದಗಳು
. ✍️ ನಿಶಾ

- Nisha anjum

05 Aug 2023, 08:31 pm

chandira

ರಾತ್ರಿ ವೇಳೆ ರಾಜುವಿನ ತಾಯಿ ಅವನಿಗೆ ಊಟ ಮಾಡಿಸುತಿದ್ದಾರೆ . ಆಗ ಮೇಲೆ ನೋಡಿದ ರಾಜು)
ರಾಜು :-ಅಮ್ಮ ಮೇಲೆ ಏನಿದೆ?
ಅಮ್ಮ :- ಆಕಾಶ
ರಾಜು:-ಹೌದಾ? ಅದರಲ್ಲಿ ಕೆಲವು ಚುಕ್ಕಿ ಹಾಗೆ ಇದೆ.
ಆ.. ಅದೇನು ಚಪಾತಿ ಹಾಗೆ ಇದೆ??
ಅಮ್ಮ: ಮಗು ಅದು ಚುಕ್ಕಿ ಅಲ್ಲಪ್ಪ ನಕ್ಷತ್ರ. ಅದು
ಚಪಾತಿ ಅಲ್ಲಾ ಚಂದ್ರ ಕಣೋ
ರಾಜು : ಹೌದಾ ನಾನು ಚಂದ್ರನ ಜೊತೆ
ಮಾತನಾಡುತ್ತೇನೆ.
ಅಮ್ಮ: (ನಗುತ್ತಾ) ಆಯ್ತು
( ಅಮ್ಮ ಮಲಗಲು ಹೊರಟರು)
ರಾಜು: ಚಂದ ಮಾಮ .......
( ರಾಜುವಿನ ಮುಗ್ಧತೆಗೆ ಚಂದಿರ ಪ್ರತ್ಯಕ್ಷನಾದ)
ಚಂದ್ರ: ಏನು ರಾಜು
ರಾಜು: ಏನು ಇಲ್ಲ ಇಡೀ ಹಳ್ಳಿ ಜನ ಮಲಗಿದ್ದಾರೆ.
ನೀನು ಮಲಗೂದಿಲ್ಲವಾ?
ಚಂದ್ರ: ಇಲ್ಲಪ್ಪ ನಾನು ಮಲಗಿದ್ರೆ ಹಳ್ಳಿಗೆ ಬೆಳಕು
ನೀಡೋರು ಯಾರು? ಅಲ್ವಾ
ರಾಜು : ಹೌದು ಆದ್ರೆ ನಿನ್ ಮನೆ ಎಲ್ಲಿದೆ?
ಚಂದ್ರ : ನನಗೆ ಮನೆ ಇಲ್ಲ ಪುಟ್ಟ
ರಾಜು : ಹಾಗಾದ್ರೆ ನಿಂಗೆ ಚಳಿ ಬಿಸಿಲು ಆಗಲ್ವಾ
ಚಂದ್ರ: ನಾನು ಹಗಲಲ್ಲಿ ಇರೋದಿಲ್ಲ . ಬಾನಿನಲ್ಲಿ ಚಳಿ.ಅನಿಸುವುದಿಲ್ಲ. ಇಲ್ಲಿ ಕಾಮನಬಿಲ್ಲು

- Nisha anjum

05 Aug 2023, 08:30 pm

buddha

You make a dark also light

- Nisha anjum

05 Aug 2023, 08:29 pm

Kaliyuga

ಬುದ್ಧಿವಂತಿಕೆ ಯಲ್ಲಿ ಶಶಿಯಲ್ಲಿ ಪಾದವಿತ್ತು
ಸಮುದ್ರ ರಾಜನ ಭೇದಿಸಿ ಪಳೆಯುಳಿಕೆ ಪಡೆದ
ವಾಯುವನ್ನು ಬಂಧಿಸಿ ಅಡುಗೆ ಮಾಡಿದ
ವರುಣನ ಕಲುಷಿತ ಮಾಡಿದ
ಆಧುನಿಕ ಮಾನವ ಮತ್ತೆ ಏಕೆ ಎನಿಸುವೆ ಆ ಸತ್ಯಾಯುಗದಕತೆಯನ್ನ
ಇದ್ದರೆ ನೀನು ಅಲ್ಲಿ ನಿರ್ಮಿಸುತ್ತಿದೆ
ಮತ್ತೊಂದು ಕಲಿಯುಗವ ನ್ನು ನನ್ನಾತ್ಮಾ ಲಿಂಗ

- Nisha anjum

05 Aug 2023, 08:28 pm

jangama

ಗುರು ಲಿಂಗ ಅನುಭವ ಸ್ವರೂಪಿ
ಸಾಕ್ಷಾತ್ರಿಪೂರಂತಕ ರೂಪಿ
ಚೈತನ್ಯ ಸ್ವರೂಪಿ
ಜಂಗಮ ಬಾರಯ್ಯ

ವಿಭೂತಿ ಲೇಪಿತ ಮಸ್ತಕ
ನಿನ ಮಾತೆ ಶಿವ ಪುಸ್ತಕ
ಗೌರಿ ಶಂಕರ ರೂಪಿ
ಅರ್ಧನಾರೀಶ್ವರ ತದ್ರೂಪಿ
ಭಿಕ್ಷೆ ದಾನಿಸುವೆ
ಶರಣು ಜಂಗಮ ಬಾರಯ್ಯ

ವೇದಕಿಂತ ಮಿಗಿಲು
ನಿನ್ನ ಶುದ್ಧ ನುಡಿಯ ಹೊನಲು
ವೇದದಿ ಎರಡುಂಟು
ಶ್ಲೋಕದಿ ಬರಡುಂಟು
ಜಂಗಮ ಗೆ ಶಿವ ಜಂಗಮಗೆ
ಅವನ ಭಕ್ತಿ ಗೆ ಎರಡು ಮಾತಿಲ್ಲ

ಪುಷ್ಪ೦ ಫಲಾ ದಿ ಕೃಪಾಕರ
ಜ್ವಾಲಾ೦ ಜಲ ಪರಿವರ್ತಿತ ದಿವಾಕರ
ದಯಾಕರ ಶೋಭಿತ ಪಶುಪತಿನಾಥ
ನಾನಾ ರೂಪಿತ ಮಾಹೇಶ್ವರ


ನಿಶಾ ಅಂಜುಮ್
- Nisha anjum

- Nisha anjum

05 Aug 2023, 08:28 pm

olitu

ಮಣಿಪುರದ ಅರಸ ಮಣಿಕಂಠ ತುಂಬಾ ಬುದ್ಧಿವಂತ
ಮತ್ತು ಸತ್ಯವಂತ ಆಗಿದ್ದನು.ಅವನು ವಾಸುದೇವ ಕೃಷ್ಣನ ಪರಮಭಕ್ತ ನಾಗುವುದರ ಜೊತೆ ರವಿ ಅಸ್ತ ಕಾಲದಲ್ಲಿ ಸಂಧ್ಯಾವಂದನೆ ಮಾಡುವುದ ಮರೆಯುತ್ತಿರಲಿಲ್ಲ.ಅವನ ಪತ್ನಿ ಭಾರ್ಗವಿದೇವಿ ತುಂಬಾ ಜಾಣೆ ಮತ್ತು ರಾಧಾ ಕೃಷ್ಣರ ಪರಮ ಭಕ್ತ ಆಗಿದ್ದಳು. ಅವಳು ಯಾವಾಗಲೂ ಶಂಕರನ ಧ್ಯಾನದಲ್ಲಿ ಶಿವ ಶಿವ ಎನ್ನುತ್ತಿದ್ದಳು. ಒಂದು ದಿವಸ ಒಬ್ಬ ವಯಸ್ಸಾದ ಮುದುಕಿ ಅವರ ಅರಮನೆ ಹತ್ತಿರ ಬಂದಳು .
ಮತ್ತು ತಾಯಿ ಭವತಿ ಭಿಕ್ಷಾಂ ದೇಹಿ ಎಂದಳು
ಆಗಿ ರಾಣಿ ನಿನಗೆ ಏನು ಬೇಕು ಅಂದಳು .ಆಗ ಆಕೆ ನಿನ್ನ ಸಂಪತ್ತು ಎಂದಳು.ಆಗ ರಾಣಿ ಅರೆ ತಾಯಿ ಇದೆಲ್ಲ ನಿನ್ನದೇ ನನಗೇಕೆ ಕೇಳುವೆ ಏನಲಾಗಿ ಆ ಮುದುಕಿ ನಿಜ ರೂಪದಲ್ಲಿ ದೇವತೆ ಆಗಿದ್ದಳು.ನಂತರ ಆ ದೇವತೆ ಕರುಣಭಾವದಿಂದ ಅವಳನ್ನು ಅಪ್ಪುಗೆಯ ಅರಸಿ ನಿಂಗೆ ಏನು ವರ ಬೇಕು ಎಂದು ಕೇಳಿದಳು.ನೀನೇ ಸಾಕು ನಿನ್ನ.ದರುಷನವೆ ಸಾಕು ತಾಯಿ ಎನಲು .ಅವಳ ಕೈಗೆ ಮಾಗುವನ್ನಿತ್ತು ತಗೋ ಇದುವೇ ನಿನಗೆ ನನ್ನ ಪ್ರಸಾದ ವೆಂದು ಮಾಯವಾದಳು.


ನಿಶಾ ಅಂಜುಮ್

- Nisha anjum

05 Aug 2023, 08:27 pm

nature

Always sun rises in the east
It's shinging fire ball fill with hot
Our whole earth revolves around that
Such awesome nature that we have

Water evaporates and come to the earth
By the part of rain on the ground
This rain had gave many plants birth
Such awesome nature that we have

Plants absorb CO2 and gives oxygen
Which air would give breath to human
It's usefull but it's invisible
Such awesome nature that we have

From microorganisms to gaints.
Its give all type of shelter
It care us more than our mom
Such awesome nature that we have

We are making these all dirty
Present also needs these
We have to love and protect them
To make the earth to tell true as
Such awesome nature that we have

Nisha anjum


- Nisha anjum

05 Aug 2023, 08:17 pm

ನೀನಿರಲು ನನ್ನ ಸನಿಹ

ನೀನಿರಲು ನನ್ನ ಸನಿಹ
ಇನ್ಯಾರು ಬೇಡ ನಿನ್ನ ವಿನಹ
ಒಮ್ಮೆ ನನ್ನ ಸಮೀಪಿಸಿ ನೋಡು
ನನ್ನದೆಯ ತುಂಬಾ ನಿನ್ನದೆ ಹಾಡು.....

ನಿನ್ನದು ಕೊನೆಯಿರದ ಮೌನದ ಪ್ರಲಾಪ
ಎಂದಿಗೆ ತೋರುವೆ ನಿನ್ನ ಮಾತಿನ ಸಲ್ಲಾಪ
ನಿನ್ನ ಮಾತೆ ಆಗಲಿ ನನಗೆ ಕೊನೆಯಿರದ‌ ಆಲಾಪ
ತಿರುಗಿ ನೋಡು ಒಮ್ಮೆ ನನ್ನ ಮನಸಿನ ವಿಲಾಪ
ನೀನೆನೆ ನನ್ನ ಎಂದಿಗೂ ಮುಗಿಯದ‌ ಪ್ರೀತಿಯ ರೂಪ....

ನೀನೆದುರು ಬಂದರೆ ಏನೊ ಪುಳಕ‌
ಕನಸಿನೂರಲು ನಿನ್ನ ನೋಡಲು ನಿಲ್ಲದು ತವಕ
ನೀ ನನಗೆ ಕಾಣದಿದ್ದರೆ ನಾನಗುವೆ ಭಾವುಕ
ನಿನ್ನ ಜೊತೆಯಲಿ ಕಳೆಯುವ ಘಳಿಗೆಗಳೆ ನನಗೆ ರೋಚಕ
ಏತಕೆ‌‌ ನಾನೆಂದರೆ‌ ನಿನಗೆ ಇಂತ ಕುಹಕ‌
ನಿನ್ನ ನಗುವೆ ನನ್ನ‌ ಉಸಿರಾಟಕೆ ವಾಹಕ

ನಿನ್ನ ಒಲವಿನ ಹಾಡಿಗೆ ಆಗಲೇನು ವಾದಕ
ಒಪ್ಪಿ ಬಿಡಿಸು ನೀನಿರದ ನೋವು ನೀಡುವ ಬಾದಕ
ಬಂದರೆ ನೀನು ನಾನೆ ಆ ಖುಷಿಗೆ ಧನಿಕ
ನಾನು ನಿನ್ನ ಪ್ರೀತಿ‌ ಪೂಜಿಸೊ‌ ಆರಾಧಕ
ಇನ್ನ‌ೂ ನೋಡಬೇಡ ಒಪ್ಪಿ ಬರಲು ಜಾತಕ

- Shankru Badiger

03 Aug 2023, 10:38 pm

ಕಾರ್ಗತ್ತಲು ತುಂಬಿದ ಕನಸಿನಲ್ಲಿ ನೀ ಬಂದೆ ಬೆಳಕಾಗಿ.....
ಸುರಿವ ಮಂಜಿನಡಿಯಲ್ಲಿ ಕಂಡೆ ನಿನ್ನನ್ನು ರವಿಯ ಹೊಂಗಿರಣವಾಗಿ.....
ಕತ್ತಲೆ ತುಂಬಿದ ಕಾನನದಲ್ಲಿ ಕಂಡೆ ನಿನ್ನನ್ನು ಹೊಳೆವ ಮಲ್ಲಿಗೆಯಾಗಿ.....
ಹದಗೆಟ್ಟ ಹೃದಯವು ಹಿಡಿತವ ಸಾಧಿಸುತ್ತಿದೆ ನೀ ಇರಲು ಜೊತೆಯಾಗಿ....
ಓ ಕಣ್ಣಂಚಿನ ಚಿಲುಮೆಯೆ ಕಾಣಸಿಗು ಪ್ರತಿದಿನ ನನಗಾಗಿಯೆ....
-KP

- Prashanth KP

03 Aug 2023, 01:09 am