Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕವನದ ಶೀರ್ಷಿಕೆ ಅಷ್ಟೇ ಯೋಗ.

ನಮ್ಮ ನರಗಳ ಹುಣ್ಣಾದದಿ ನುಡಿಯುವ ಯೋಗ ಮಂತ್ರದ ಪ್ರಥಮ ಶಬ್ದ ಓಂಕಾರಾ.
ಹರಡಿದ ಭಾಗಗಳ ಒಗ್ಗೂಡಿಸಿ ರಚಿಸಿದರು ಪತಂಜಲಿ ಅಷ್ಟ ಯೋಗ.
ಸಾಧು ಸಂತರ ಅರಿವಿನ ತೀಕ್ಷ್ಣತೆಯ ಹೆಚ್ಚಿಸಿದೆ ಧ್ಯಾನ ಮಾರ್ಗ.
ನಮ್ಮ ದೇಹ ಮನಸ್ಸುಗಳ ಸಂಯೋಜಿಸೋ ಕರ್ಮ ಯೋಗ,
ಆಸನಗಳ ಮೂಲಕ ಪೋಷಿಸುವುದು ಉತ್ತಮ ಆರೋಗ್ಯ.
ಪೌಷ್ಟಿಕ ಆಹಾರ ದೇಹದ ಸದೃಢತೆಗೆ ಸಂಜೀವಿನಿ ಆದರೆ,
ಯೋಗ ನಮಗೆ ಕ್ರಮಬದ್ಧ ಜೀವನಶೈಲಿಯನ್ನು ಕಲಿಸುತ್ತದೆ.
ರೋಗದ ಕಿಡಿಗಳ ದೂಡಿ,, ನಮ್ಮ ಚೆಲುವಿಗೆ ಹೊಂಬೆಳಕ್ಕಾಗಿರೋ ಯೋಗಭ್ಯಾಸ,
ಆಸೆಗಳ ನಿಯಂತ್ರಿಸಿ, ನಮಗೆ ಸಕಲ ತ್ಯಾಗದ ಶ್ರೇಷ್ಠತೆಯ ಬೋಧಿಸುವ ಹವ್ಯಾಸ.
ಹಂಸ ನಡೆಯೊಳ್ ಬೆರಗುಗೊಳಿಸಿದೆ ಜಗದ ಜನರ ನಮ್ಮ ಭಾರತೀಯ ಯೋಗ,
ಏಕಾಗ್ರತೆ ಸಾಧಿಸಲು ನೆರವಾಗಿದೆ ನಮಗೆ ಬ್ರಾಹ್ಮಿ ಯೋಗ.
ಚಲಿಸೋ ರಕ್ತದ ಸಮಸ್ಥಿತಿ ನಮ್ಮ ಪ್ರಾಣಯಾಮದಿಂದ,
ಜನಜೀವನ ಮೌಲ್ಯದ ದರ್ಶನ ದೊರೆಯುವುದು ಪಥಂಜಲಿ ಯೋಗ ಶಾಸ್ತ್ರದಿಂದ.

- nagamani Kanaka

21 Jun 2023, 09:21 pm

ತಾಯಿ

ಗಿಡದಲ್ಲಿ ಇರುತ್ತದೇ ಹೂವು
ಮರದಲ್ಲಿ ಇರುತ್ತದೇ ಮಾವು
ಇವೆಲ್ಲವನ್ನೂ ನೋಡುತ್ತೆವೆ ನಾವು
ಸಮುದ್ರದಲ್ಲಿ ಸಿಗುತ್ತೆ ಮುತ್ತು
ನಮ್ಮ ಶರೀರಕ್ಕೆ ಸಾಕು ತಾಯಿಯ ಕೈ ತುತ್ತು
ಅದುವೇ ನಮ್ಮಯ ತಾಕತ್ತು
ನಮಗೇ ಗೊತ್ತಿತ್ತು ತಾಯಿಯ ಪ್ರೀತಿ
ಆದರೆ ಅವರಲ್ಲಿತ್ತು ಕೋಪಕ್ಕೆ ಮಿತಿ

ಬರೆದಿರುವವರು
ಪುನೀತ್ ಕುಮಾರ್ .ಎಸ್

ಬರೆದಿರುವವರು
ಪುನೀತ್ ಕುಮಾರ್.ಎಸ್

- Puneeth

20 Jun 2023, 10:53 am

ಕನಸಲ್ಲೂ ನೀನೇ ಹೆಚ್ಚು ಜೀವಕೆ

ಹತ್ತಿರದಲ್ಲಿದ್ದು ದೂರವಿರುವೆ ಏಕೆ..
ಕಣ್ಣಿಂದ ದೂರಾದರು, ಮನಸ್ಸಿನಿಂದ ಹತ್ತಿರ ನೀನು..
ಎಲ್ಲಿದ್ದರೂ ಹೇಗಿದ್ದರೂ ನನ್ನವನು ನೀನು..
ಪ್ರೀತಿ ಎಂಬುದು ಬರಿ ಮಾತಾಯಿತೇನು..?

ಹೇಗಾಯಿತು ಪ್ರೀತಿ ತಿಳಿದಿಲ್ಲ..
ನಿನ್ನ ಬಿಟ್ಟಿರಲು ಆಗುವುದಿಲ್ಲ..
ಕ್ಷಣ ಕ್ಷಣವು ನಿನ್ನ ನೆನಪು..
ನಿನ್ನ ಗುಂಗೆ ಹೆಚ್ಚು ಇಂಪು..

ತವಕ ಹೆಚ್ಚು ನಿನ್ನ ನೋಡಲು..
ಮನವು ಕಾದಿದೆ ಸನಿಹವಾಗಲು..
ಬೆಳಕಾಗಿ ಬಾ ಗೆಳೆಯ ಬದುಕಿಗೆ..
ಕನಸಲ್ಲೂ ನೀನೇ ಹೆಚ್ಚು ಜೀವಕೆ..

ತನುಮನಸು✍️

- Tanuja.K

19 Jun 2023, 09:07 pm

ಕವನದ ಶೀರ್ಷಿಕೆ ಅಪ್ಪನ ಮಮತೆ.

ನೆರೆಮನೆಯ ಜೀತದಲ್ಲಿ ಸವೆಯುತ ಅಪ್ಪ,
ಮಕ್ಕಳನ್ನು ಶಾಲೆಗೆ ಸೇರಿಸಿದರು.
ಹಿಂದೆ ಅನ್ನವಿರದ ದಿನಗಳಲ್ಲಿ ಅಪ್ಪ,
ನಮಗೆ ಗಂಜಿ ಕುಡಿಸಿ ಬೆಳೆಸಿದರು.
ಸೌಮ್ಯ ಸ್ವಭಾವದ ನಮ್ಮ ಅಪ್ಪನ ನಿರಂತರ ದುಡಿಮೆ,
ಕಲಿಸಿತು ನಮಗೆ ಜವಾಬ್ದಾರಿಯುತ ಬದುಕಿನ ನಿರ್ವಹಣೆ.
ಚಿಕ್ಕವಳಾಗಿ ನಾನು ಅಪ್ಪನ ಮಮತೆಯಲ್ಲಿ ಅರಳುವ ಮುನ್ನವೇ,
ಅವರು ನರಳತೊಡಗಿದರು ತಮ್ಮ ಕಾಯಿಲೆ ಏನೆಂದು ತಿಳಿಯದೆ.
ನನ್ನಮ್ಮ ಅಪ್ಪನಿಗಾಗಿ ತಿರುಗದ ಆಸ್ಪತ್ರೆಗಳಿಲ್ಲ,
ದೀರ್ಘಕಾಲ ನೋವಿನಿಂದ ನರಳಿದ ಅಪ್ಪ ನಮಗಾಗಿ ಉಳಿಯಲಿಲ್ಲ.
ನನ್ನ ಬದುಕಿಗೆ ಚುಕ್ಕಿಯ ಚಂದ್ರಮನಾಗಬೇಕಿದ್ದ ಅಪ್ಪ ಇಂದು ನೆನಪು ಮಾತ್ರ.
ಅಪ್ಪನಾಗಿ ನನ್ನ ಉಜ್ವಲ ಭವಿಷ್ಯಕ್ಕೆ ಸಾಕ್ಷಿಯಾಗಿರುವ ಅಮ್ಮನ ತ್ಯಾಗ ಶ್ಲಾಘನೀಯ,
ಅಪ್ಪನಿದ್ದರೆ ನನ್ನ ಜೀವನ ಇನ್ನೂ ಹೇಗಿರುತಿತ್ತೋ,
ಎಂಬ ಪ್ರಶ್ನೆಗೆ ಉತ್ತರವಿಲ್ಲ.
ಮಕ್ಕಳ ಸನ್ಮಾರ್ಗದ ಹಾದಿಯ ಸುಗಮಗೊಳಿಸಲು ಬೇಕು ಅಪ್ಪ,
ಕಣ್ಮರೆಯಲ್ಲೆ ನಮ್ಮ ಬಯಕೆಗಳ ಅರಿತು ಸಂತೃಪ್ತಿಗೊಳಿಸುವ ಭೂಪ.
ಕುಟುಂಬದ ಸಾರಥಿಯಾಗಿರೋ ಅಪ್ಪನ ನಾವ್ ಗೌರವಿಸಬೇಕು,
ನಮ್ಮ ಸೇವೆ ಅಪ್ಪನ ಹೆಸರ ಗುರುತಿಸುವಂತೆ ಇರಬೇಕು,
ಮಕ್ಕಳ ಸರ್ವಾಂಗೀನ ಪ್ರಗತಿಗೆ ಅಪ್ಪ ಜೊತೆಗಿದ್ದರೆ ಸಾಕು.

- nagamani Kanaka

18 Jun 2023, 11:43 pm

ಮರೆಯದೆಯಾ ಒಲವೇ..

ಕಾದು ಕಾದು ಸೋತಿಹೆನು
ಸನಿಹ ನೀನು ಬರಬಾರದೆ..
ದೂರ ಏಕೆ ನೀ ನಿಲ್ಲುವೆ..?
ಕರುಣೆ ತೋರಿ ಬರಬಾರದೆ..
ನಿನ್ನ ಅಗಲಿ ನಾ ಇರಲಾರೆನು..
ಪ್ರಾಣವೇ ನೀನು ಜೊತೆಗಾರನು..

ಮರೆಯಾದೆಯಾ ಒಲವೇ...
ಮರೆಯಾದೆಯಾ ...

ಮಾತುಗಳು ನಿಂತರೇನು
ಮನಸು ಕಾದಿದೆ ಇನ್ನು...
ತಿರುಗಿ ನೋಡು ಒಮ್ಮೆ ನೀನು
ನೆರಳಂತೆ ಹಿಂಬಾಲಿಸಿರುವೆ ನಾನು..
ಜನ್ಮ ಜನ್ಮ ನೀನೆ ಬೇಕು..
ನಿನ್ನ ಪ್ರೀತಿಯೊಂದೆ ಸಾಕು...
ಬಾರೋ ಬೇಗ ಗೆಳೆಯ
ನೀನೇ ಒಲವ ಇನಿಯ...

ಮರೆಯಾದೆಯಾ ಒಲವೇ....
ಮರೆಯಾದೆಯಾ.....

ತನುಮನಸು✍️

- Tanuja.K

18 Jun 2023, 10:22 pm

ಬೇಡವಾಗಿರುವೆ ನಿನಗೆ ನಾನು..

ಬಣ್ಣ ಬಣ್ಣದ ಕನಸು ಕಟ್ಟಿದ್ದೆ ನಾನು..
ಬಣ್ಣವ ಅಳಿಸಿ ಬರಿ ಚಿತ್ತಾರ ಉಳಿಸಿದೆ ನೀನು...
ನಿನ್ನನಪ್ಪಿ ಮಳೆಯಲಿ
ನೆನೆಯುವ ಆಸೆ ಅಂದು..
ಮಳೆಯೂ ನಾಚುವಂತೆ
ಕಣ್ಣೀರ ಕಡಲಲೇ ಮುಳುಗಿರುವೆ ಇಂದು..
ಕಿರು ಬೆರಳು ಹಿಡಿದು ನಡೆಯಬೇಕು
ನಿನ್ನೊಂದಿಗೆ ಬಹುದೂರ
ಒಂದು ಹೆಜ್ಜೆಯೂ ಜೊತೆಗಿಡದೆ
ನೀ ನನ್ನ ದೂಡಿದೆ, ಈ ನೋವೆ ಅಪಾರ...
ಬೇಕಾಗಿರುವೆ ನನಗೆ ನೀನು..
ಬೇಡವಾಗಿರುವೆ ನಿನಗೆ ನಾನು..

ತನುಮನಸು✍️

- Tanuja.K

18 Jun 2023, 09:55 pm

ಬಿರುಗಾಳಿಯ ಆಗಮನ

ಪ್ರಶಾಂತವಾಗಿದ್ದ ಕಡಲಿಗೆ
ಸುನಾಮಿಯ ರೌದ್ರ ನರ್ತನ..
ತಂಗಾಳಿಯ ತಂಪಿಗೆ
ಬಿರುಗಾಳಿಯ ಆಗಮನ..
ಕತ್ತಲು ತುಂಬಿದ ಬದುಕಿಗೆ
ನೀನೇ ಬೆಳಕೆಂದು ಭಾವಿಸಿದ್ದೆ..
ನೀ ಹಚ್ಚಿದ ದೀಪವ
ನೀನೇ ಆರಿಸಿ, ದೂರ ಸರಿದೆ..
ನೋವಿಗೆ ಔಷಧವಾಗಿದ್ದ ನೀನೇ
ಮತ್ತೆಂದೂ ವಾಸಿಯಾಗದ ಘಾಸಿ ಮಾಡಿದೆ..
ಕಾಯುವ ದೈವವೇ ಕೈ ಬಿಟ್ಟಾಗ
ನಂಬಿಕೆಯ ಮೇಲೆ ನಂಬಿಕೆ ಕಳೆದಿದೆ ಈಗ..

ತನುಮನಸು✍️

- Tanuja.K

18 Jun 2023, 08:49 am

ಕವನವೇ ಆಧಾರ

ನೂರಾರು ಆಸೆಗಳು ಮನದಲ್ಲಿ...
ಬರಿ ನೋವುಗಳೇ ತುಂಬಿವೆ ನನ್ನಲ್ಲಿ...
ಯಾಕೆ ಬೇಕಿತ್ತು ನನಗೆ ಈ ಜೀವನ..
ನೋವುಂಡ ಜೀವಕೆ, ಮತ್ತದೇ ನೋವಿನ ಔತಣ..
ಎಲ್ಲಿ ಹೋಯಿತು ಆ ನಿನ್ನ ಸ್ನೇಹ ಇಂದು..
ಕಾಣುತ್ತಿಲ್ಲವೆ ಅಂಗಲಾಚಿ ಬೇಡುತ್ತಿರುವುದು..
ಅಂದು ಪ್ರೀತಿಗೂ ಕವನವೇ ಜೊತೆಗಾರ..
ಇಂದು ದೂರಾದ ಸ್ನೇಹಕ್ಕೂ ಕವನವೇ ಆಧಾರ..

ತನುಮನಸು ✍️

- Tanuja.K

18 Jun 2023, 08:25 am

ನಿನದೆ ನೆನಪು ಬರುವೆಯಾ ನನ್ನ ಮುಂದೆ.....ಸುಧಾ ಆರ್ ಬಳಿಗೇರ

ಕನಸೋ ಇಲ್ಲ ನಿಜಾನೋ ಆದರೆ ಸದಾ ನೆನಪಾಗುವೆ ಸಮಯಕ್ಕೆ ಸರಿಯಾಗಿ ಹಸಿವಾಗುವಂತೆ....
ತಿನಿಸುವೆಯ ನಿನ್ನ ಪ್ರೀತಿಯ ಕೈ ತುತ್ತು....

ಬರೆಯಲು ಸಾದ್ಯವೇ ಅನಿಸುವುದು
ನಿನ್ನ ಮೇಲೆ ಕವಿತೆ ಕೈಯಲ್ಲಿ ಲೇಖನ ಇದ್ದರೆ....
ತರುವೆಯಾ ನನಗಾಗಿ ಪುಸ್ತಕದ ಉಡುಗೊರೆ....

ಕನಸಲ್ಲಿ ನಿನ್ನ ಕಂಡು ಕಾಣದೆ ಹುಡುಕುತ್ತಿರುವೆ ಹೀಗೆ ಏಕೆ ಕಾಡುವೆ
ಕರುಣೆ ಬಾರದೆ ನಿನಗೆ....
ನಿಂತುಬಿಡು ಒಮ್ಮೆ ಕಣ್ಣುಮುಂದೆ ಸರಿಯದಂತೆ ಹಿಂದೆ ಹಿಂದೆ....

ಸುಧಾ ಆರ್ ಬಳಿಗೇರ್.....






- ಸುಧಾ ಆರ್ ಬಳಿಗೇರ

17 Jun 2023, 01:45 pm

ಇದೆ ಕಣ್ಣಿಗೆ ಕಾಣುವುದಿಲ್ಲ

ಉಸಿರಾಡಲು ಗಾಳಿ ಇದೆ ಕಣ್ಣಿಗೆ ಕಾಣುವುದಿಲ್ಲ

ಮೈತುಂಬ ಗಾಯ ಕಣ್ಣಿಗೆ ನೋವು ಕಾಣುವುದಿಲ್ಲ

ನಾವು ಊಟವನ್ನು ಮಾಡಬಹುದು ಆದರೆ ಹಸಿವೂ ನಮಗೆ ಕಾಣುವುದಿಲ್ಲ

ಕೈ ಮಾಡಿ ಆಕಾಶ ತೋರಿಸಬಹುದು ಆದರೆ ಕೈಗೆ ನಿಲುಕುವುದಿಲ್ಲ

ನಿರು ಕುಡಿಯಬಹುದು ಮುಟ್ಟಿಗೆಯಲ್ಲಿ ಮುಟ್ಟಿಗೆ ಆಗಲಾರದು

ಒಬ್ಬರನ್ನು ಇನ್ನಬ್ಬರನ್ನೂ ಪ್ರೀತಿಸುತ್ತಾರೆ ಆದರೆ ಮನಸ್ಸು ಕಾಣುವುದೇ





ಆಹಾರ ವಾಸನೆಯನ್ನು ತೆಗೆದುಕೊಳ್ಳಬಹುದು ಆದರೆ ಕಣ್ಣಿಗೆ ಕಾಣುವುದಿಲ್ಲ

ಮಾವಿನ ಹಣ್ಣನ್ನು ರುಚಿ ಸವಿಯಬಹುದು ಆದರೆ ಕಣ್ಣಿಗೆ ಕಾಣುವುದೇ



- Karigouda Eattinamani

14 Jun 2023, 03:58 pm