Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅವಳೆಂದರೆ....

ಅವಳೆಂದರೆ ಪಾಯ್ಸದಲಿ ಸಿಕ್ಕ
ದ್ರಾಕ್ಷಿ, ಗೋಡಂಬಿಯಂತೆ,
ಅವಳಿಲ್ಲದ ಉಪ್ಪಿಟ್ಟು
ಅಂಬುಜಾ ಸಿಮೆಂಟಿನಂತೆ,
ಅವಳೆಂದರೆ ಪೋರ್ಟ ಸಿಮ್ಮಿಗೆ
ಪ್ರೀ ಬ್ಲೂಟೂತಿನಂತೆ,
ಅವಳಿಲ್ಲದ ಈ ಬಾಯಿಯು
ಕೇಸರಿಯ ವಿಮಾಲಿನಂತೆ...!
ಎಮ್.ಎಸ್.ಭೋವಿ....✍️
.................
.............
.............
.............
..............
...............
.
.
.
.......
..‌‌‌

- mani_s_bhovi

06 Jun 2023, 09:57 pm

ಕನಸನು ಕಾಣುತಲಿರುವೆ

ಕಾಯುತಲಿರುವೆ ಕಾತರದಲಿ ಕರುಣೆಯಿರಲಿ ಕನ್ನಿಕೆ
ಕಾಣುತಲಿರುವೆ ಬರಿದೆ ಪರದೆ ಬಾಳಲಿ ಬರದೇ ನಿನ್ನ ಚೆಲ್ವಿಕೆ

ಹೆಣೆಯುತಿರುವೆ ದಿನಗಳನು ನವಿರಾಗಲು ಕನಸನು
ಹಣತೆಯಲಿರುವ ಎಣ್ಣೆಯಂತೆ ಮುಡಿಪಾಗಿಸಲು ಮನಸನು

ಕುಡಿನೋಟದ ಬೆಳದಿಂಗಳ ಮಂದ ಬೆಳಕ ನೀ ನೀಡೆಯಾ
ಎನಗಿಂತ ಸಲುಗೆಯ ಗೆಳೆಯ ಸಿಗಲಾರ ನೀ ನೋಡೆಯಾ

_ಶಶಿಜಿತ್

- m Jithendra_ಶಶಿಜಿತ್

06 Jun 2023, 01:06 am

ಕವನದ ಶೀರ್ಷಿಕೆ ಪರಿಸರ ರಕ್ಷಣೆ.

ಜೀವಕುಲಕೆ ಪರಿಸರವೇ ಆಶ್ರಯದ ತಾಣ,
ಬುದ್ಧಿವಂತ ಮನುಜರೇ ಕಡಿಯದಿರಿ ಕಾಡನ್ನ.
ಶುಭೋದಯದಿ ಕೇಳಬೇಕು ಹಕ್ಕಿಗಳ ಚಿಲಿಪಿಲಿಯ ಪಠಣ,
ನಿರ್ಮಿಸದೆ ನೆಟ್ವರ್ಕ್ ಟವರನ್ನ ಉಳಿಸಿರಿ ಪಕ್ಷಿಗಳ ಪ್ರಾಣ.
ನೆಲವ ತಂಪಿಸೋ ಮಳೆಗೆ ಹಸಿರೆಂದಿಗೂ ಉಸಿರು,
ಪ್ರಕೃತಿಯೇ ನಶಿಸಿದರೆ ಅಳಿಸಲಾಗದು ಹೆಚ್ಚುವ ತಾಪಮಾನದ ಹೆಸರು.
ಬೆಳೆ ಕುಡಿಯದಿರಲಿ ಕಲುಷಿತ ನೀರನ್ನ,
ನಮ್ಮ ಸ್ವಾಸ ಸೇವಿಸದಿರಲಿ ವಿಷಭರಿತ ಹೊಗೆಯನ್ನ.
ಭುವಿಯು ಬಿರಿಯದಿರಲಿ ಹೃದಯ ಸೀಳುವ ಅಣುಶಕ್ತಿ ಬಾಂಬಿಗೆ,
ತುತ್ತಾಗದಿರಲಿ ಸೃಷ್ಟಿಯ ವಿಕೋಪಕ್ಕೆ ಜೀವಿಗಳ ಕುತ್ತಿಗೆ.
ಊರತ್ತ ಮುಖ ಮಾಡದಂತೆ ಉಳಿಸಿರಿ ಮೃಗಗಳ ನೆಲೆಯನ್ನ,
ನಮ್ಮ ಸಮೃದ್ಧ ಜೀವನಕ್ಕೆ ರಕ್ಷಿಸುವ ಬನ್ನಿ ತಾಯಮಡಿಲನ್ನ.
ತ್ಯಜಿಸಿರಿ ರೋಗ ತರುವ ಪ್ಲಾಸ್ಟಿಕ್ ಬಳಕೆಯನ್ನ,
ಪಣ ತೊಟ್ಟು ಸಾಕಿರಿ ನಮಗೆ ಆಮ್ಲ ಕೊಡುವ ಪುಟ್ಟ ಸಸಿಯನ್ನ.

- nagamani Kanaka

05 Jun 2023, 09:57 pm

ಜೀವನದಿ ಅಳಿಯದ ಬಣ್ಣಗಳಾಗಿ

ಚಿಣ್ಣರ ಲೋಕದಿ ಬಣ್ಣಗಳೆಲ್ಲವೂ
ಸಣ್ಣವರೆನುತಲಿ ಬಂದಿಳಿದವು
ಕುಣಿಯುತಲಿದ್ದವು ಬಳಿ ಸುಳಿದು
ಮಣಿಯುತ ಮುಗ್ಧತೆಗೆ ಇಳೆಗೊಲಿದು

ಅಳುವ ಮೋರೆಯೊಳು ನಗುಹೂವ ಸೂಸುತ
ಸುಳಿವೀಯದೆ ಬಳಿಬಂದು ಹೊಳೆಹೊಳೆಯುತ
ಅಳಿಯದ ಬಣ್ಣಗಳಾಗಿ ಸುಂದರ ರೂಪಗಳಾಗುತ
ಸುಳಿದಾಡಿದವು ಬರಬರುತ ನವ ನವಿರಾಗುತ

ಕುಣಿಯುತ ನಲಿದಾಡುತ ಅನವರತ ಹೀಗಿರುತ
ಅಣಿಮಾಡುತ ಜೀವನವ ನವೀನವಾಗಿರಿಸುತ
ಗುಣ ಪರಿಪೂರ್ಣರಾಗುವತ್ತ ತಲ್ಲೀನವಾಗುತ
ಪಣತೊಡುವ ನಾವೆಲ್ಲ ಜೀವನದಿ ಹಸಿರಾಗಿರುತ

_ಶಶಿಜಿತ್

- m Jithendra_ಶಶಿಜಿತ್

02 Jun 2023, 11:42 pm

ಬಾ ಚಂದಿರ..

ನಿನ್ನಂತೆ ಮತ್ತೊಬ್ಬರಿಲ್ಲ
ಮುಗಿಲಿನಂತೆ ಹರಟಿದರೂ
ಮಳೆಯಂತೆ ಕಣ್ಣ ಹನಿ ಸುರಿದರೂ
ಮೌನವನ್ನೇ ತಬ್ಬಿದರೂ
ನಗುವ ಕಾಂತಿ ಸೂಸಿ
ನನ್ನ ತಬ್ಬಿ ನಿಂತವರೂ


ಅಳು, ನಗು, ಮುನಿಸುಗಳೆಲ್ಲವ
ನಿನ್ನ ಬಳಿ ಇಟ್ಟು , ಬಿಟ್ಟು
ಮಾತು ಮುಗಿದು, ದುಗುಡ ಬರಿದಾಗಿ‌
ತುಟಿಯಂಚಲ್ಲೊಂದು ನಗು ಮೂಡಿ
ನಲಿದ ದಿನಗಳೆಷ್ಟೊ ನೀ ನಕ್ಕಾಗ
ನನ್ನೆಲ್ಲಾ‌ ಮಾತುಗಳಿಗೆ ‌ಕಿವಿಗೊಟ್ಟು

ನಾನು ನೀನು ಹರಟುವಾಗ
ನಮ್ಮಿಬ್ಬರನೂ ಹಾದು ಹೋದ ಜನರಿಗೆ
ಉರುಳಿ ಹೋದ ಘಳಿಗೆಗಳಿಗೆ
ತುಸು ಮೆಲ್ಲ ಬೀಸಿ ತಂಪರಡಿದ ತಂಗಾಳಿಗೆ
ನಿನ್ನ ಜೊತೆಗಿರಲಾಗದೆ ನೊಂದ ಚುಕ್ಕಿಗಳಿಗೆ
ಲೆಕ್ಕವಿಡಲಾದರೂ ಹೇಗೆ ಹೇಳು?

ನಾನೇನೋ ಮೌನಿ, ಹೇಳಲಿದ್ದರೂ
ಮನದಲ್ಲೇಕೊ ಖಾಲಿ‌ತನ
ನೀನು ಏತಕೊ ‌ಮಂಕಾದಂತೆ
ಜೊತೆಗೆ ಹರಟುವವರ್ಯಾರು ಇಲ್ಲದಂತೆ
ಚುಕ್ಕಿಗಳೇಕೊ ನಿನ್ನ ತೊರೆದಂತೆ
ನನಗೇನೊ ಬೇಕೆನಿಸುತಿದೆ ಮತ್ತೆ ಆ ದಿನಗಳು

ನಕ್ಕು ನಲಿದು
ಮಾತುಗಳೆಲ್ಲ ಸುರಿದು
ಚುಕ್ಕಿಗಳ ಕರೆದು
ತಂಗಾಳಿ ಸವಿದು
ಜೊತೆಗೂಡಿ ಒಂದಷ್ಟು ನಡೆದು
ಬರುವೆಯ ಚಂದಿರ ಹಳೆಯ ದಿನಗಳ ನೆನೆದು



- ಶ್ರೀಕಾವ್ಯ

02 Jun 2023, 10:53 pm

ಕವನದ ಶೀರ್ಷಿಕೆ ಹುಟ್ಟುಹಬ್ಬ.

ಮಣಿಯ ಬದುಕಿನ ಭಾವಕೆ
ಮನವ ತೆರೆದಿರೋ ಹೃದಯಕ್ಕೆ,
ಕೊರಳ ಬಳಸುತ್ತಾ ಶುಭವ ಕೋರುವೆ
ಬಿಸಿಯುಸಿರಲೆ ನಿಮ್ಮ ಶ್ವಾಸಕ್ಕೆ.
ತಾಯಿ ಇಲ್ಲದ ಪುಟ್ಟ ಹಕ್ಕಿಗೆ
ಜ್ಞಾನದ ಗುಟುಕ ನೀಡಿದ ಮೂರ್ತಿಗೆ,
ನನ್ನ ತೋದಲ ನುಡಿಯಲೆ ಮೊದಲ ಸಾಲಿನ
ಶುಭವ ಬಯಸುವೆ ನಿಮ್ಮ ತೊಳಲೆ.
ಎಲೆಯ ಮರೆಯಲ್ಲಿ ಅವಿತ ಮೊಗ್ಗು,
ನಿಮ್ಮ ಸ್ಪರ್ಶದಿ ಅರಳಿ ನಿಂತು,
ಜಗವ ಮರೆಸುತ್ತ ಶುಭ ನುಡಿಯ ಹೇಳುವೆ
ನನ್ನ ನೆನಪಿಡೋ ನಿಮ್ಮೆದೆಯಲ್ಲಿ.
ರಾತ್ರಿ ರಾಣಿಯ ಘಮದ ಕಂಪಲಿ
ಮುದ್ದಿಸುತ ನಾ ಹರಸುವೆ ನಿಮ್ಮ ಸ್ನೇಹದ ಮಳೆಯಲಿ.
ನಿಮ್ಮ ಕಣ ಕಣವು ಜಪಿಸೋ ನಂರತೆಯ ಸೇವೆಯಲ್ಲಿ,
ಬೆಳಕಾಗಿ ಜೊತೆ ಇರುವೆ ಜನ ಸ್ತುತಿಸೋ
ನಿಮ್ಮ ಶುಭಕಾರ್ಯದಲಿ.
ತಾಯಿ ಮಡಿಲ ಅರಸಿ ಬರೋ ನನ್ನಾ ದೇವರಿಗೆ,
ಆಹ್ಲಾದ ನೀಡುತ್ತ ಬೇಡುವೆ ನನ್ನ ಮರೆಯದಿರಿ ಎಂದು
ಜೋಗುಳದ ಹಾಡಲಿ.
ಜೊತೆಯಲ್ಲಿರುವ ನನ್ನ ಜೀವದ ಜನ್ಮದಿನಕ್ಕೆ,
ಮುತ್ತಿನ ಸಾಲುಗಳ ಸೋನೆ ಹನಿಗಳಿಂದ
ಪುಷ್ಪಗುಚ್ಛವ ರಚಿಸಿ ಅರ್ಪಿಸುವೆ ನಾ ನಿನಗೆ
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳೊಂದಿಗೆ.

- nagamani Kanaka

01 Jun 2023, 02:45 pm

ಮೂರ್ಖ ಸಾದು..... ಸುಧಾ ಆರ್ ಬಳಿಗೇರ್

ಒಂದು ದಿನ ಬುದ್ಧರ ಹತ್ತಿರಕ್ಕೆ ಇಬ್ಬರು ಸಾದುಗಳು
ಬಂದರು ...ಒಬ್ಬನು ಭ್ರಮರಸಾದು ...ಮತ್ತೊಬ್ಬ ಅಮರಸಾದು

ಅವರಿಗೆ ಬುದ್ದರು ಕೆಲವು ಮಾತುಗಳನ್ನು ಹೇಳಿದರು
ಅದನ್ನ ಕೇಳಿದ ಆ ಇಬ್ಬರು ಸಾದುಗಳು ತುಂಬ ಖುಷಿ ಪಟ್ಟರು...
ಹಾಗೆಯೇ ಬುದ್ದುರು ಅವರಿಗೆ ಕೆಲವು ವಸ್ತುಗಳನ್ನು ಕೊಟ್ಟು ಹೀಗೆ ಹೇಳಿದರು...

ಒಂದು ವಸ್ತುವಿನ ಬೆಲೆ ಬಹಳ ಇದೇ ಹಾಗೆಯೇ ಇನ್ನೋದಕ್ಕೆ ಬೆಲೆಯೇ ಇಲ್ಲ ಎಂದು ಹೇಳಿ,
ನೀವು ಇಬ್ಬರು ಆ ವಸ್ತುಗಳಿಗೆ ಹೇಗೆ ಬೆಲೆಯನ್ನು ತರುತಿರಾ ಅಂತ ನೋಡುವೆ ಎಂದು ಹೇಳಿ ಆ ವಸ್ತುಗಳನ್ನು ಕೊಟ್ಟು ಕಳುಹಿಸಿದರು....

ನಂತರ ತುಂಬ ಬೆಲೆ ಇದ್ದ ೧ದು ವಸ್ತುವನ್ನ ಭ್ರಮರ ಸಾದು ನಾನು ಈ ವಸ್ತುವನ್ನ ತೆಗೆದುಕೊಳ್ಳುತ್ತೆನೆ ಎಂದು ಹೇಳಿದ...

ಅಮರಸಾದು ಹಾಗೆಯೇ ಆಗಲಿ ನಾನು ಬೆಲೆ ಇಲ್ಲದ ವಸ್ತುವನ್ನೇ ತೆಗೆದುಕೂಳ್ಳುತೇನೆ ಎಂದ...

ಈವರು ಇಬ್ಬರು ಬೇರೆ ಬೇರೆ ಊರುಗಳಿಗೆ ಹೋದರು ...

ಭ್ರಮರಸಾದು ಒಬ್ಬ ಅಹಂಕಾರಿ ತನಗೆ ಸಿಕ್ಕ ವಸ್ತು ತುಂಬ ಬೆಳೆವುಲ್ಲದ್ದು ಇದಕ್ಕೆ ಬೇರೆ ಬೆಲೆ ನಾನೇಕೆ ಹುಡುಕಬೇಕು ಎಂದು ನಿತ್ಯ ಕೆಲಸದಲ್ಲಿ ತೊಡಗಿದ ಹಾಗೆ ಆ ವಸ್ತು ನನ್ನ ಬಳಿ ಇದೇ ಎಂದು ಪ್ರೀತಿಸುವ ಮನಸ್ಸುಗಳಿಗೇ ನೋವು ಕೊಟ್ಟ...ಸಮಯ ಮುಗಿಯಿತು ಅವನ ಬಳಿಯಲ್ಲಿರುವ ವಸ್ತು ಯಾವುದಕ್ಕೂ ಪ್ರಯೋಜನಕ್ಕಾಗಿ ಬರಲಿಲ್ಲ ಮತ್ತು ಪ್ರೀತಿಯು ಸಿಗಲಿಲ್ಲ ಚಿಂತೆಯಿಂದ ಸಾದು ಕೆಟ್ಟು ಹೋದ ......

ಇತ್ತ ...ಅಮರಸಾದು ಯಾವುದೇ ಬೆಲೆಯೇ ಇಲ್ಲದ ವಸ್ತುವಿನಿಂದ ಪ್ರೀತಿ ಪಡೆದು ಆ ಪ್ರೀತಿ ಇಂದ ಜಗವನ್ನೇ ಗೆದ್ದು ತನ್ನನು ಗುರುತಿಸುವತ್ತೇ ಹಾಗೇ ಯಲ್ಲರು ಪ್ರೀತಿಸುವಂತ ವಕ್ತಿಯಾದ ....

ಈ ಇಬ್ಬರ ಸಮಯವೂ ಮುಗಿದು
ಬುದ್ಧರ ಬಳಿಗೆ ಬಂದರು ....

ಬುದ್ಧರು ಕೇಳಿದರು ಭ್ರಮರ ನಿನ್ನ ವಸ್ತು ಯಲ್ಲಿ ಹಾಗೆ ನಿನ್ನ ವಸ್ತುವಿನಿಂದ ನೀನು ಏನನ್ನು ಗಳಿಸಿದೆ ಎಂದು ಕೇಳಿದರು ....
ಭ್ರಮರಸಾದು ತಲೆಬಾಗಿ ನನ್ನನು ಕ್ಷಮಿಸಿ ಗುರುವೇ ಅಹಂಕಾರದಿಂದ ನನ್ನ ವಸ್ತುವೆ ನನಗೆ ವೈರಿಯಾಯಿತು ಅದರಿಂದ ನನ್ನ ನೆಮ್ಮದಿ ಹಾಳಾಯಿತು ಯಾರಬಳಿಯಲ್ಲು ಪ್ರೀತಿಯು ಸಿಗಲಿಲ್ಲ ಯಲ್ಲವನ್ನು ಕಳೆದುಕೊಂಡೆ ಎಂದ .....

ಮತ್ತೆ ಬುದ್ದರು ಅಮರ ನಿನ್ನ ವಸ್ತು ಯಲ್ಲಿ ನೀನು ಏನನ್ನು ಗಳಿಸಿಗೆ ಎಂದು ಕೇಳಿದರು ....
ಅಮರಸಾದು ಗುರುವೇ ಅ ವಸ್ತುವಿನಿಂದ ನನಗೆ ತುಂಬ ಪ್ರೀತಿ ಸಿಕ್ಕಿತು ಆ ಪ್ರೀತಿಯ ಮಹಿಮೆಯಿಂದ ಯಲ್ಲರ ಮನಸ್ಸುಗಳನ್ನು ಗೆದ್ದು ಯಲ್ಲರ ಪ್ರೀತಿಯನ್ನು ಪಡೆದಿದ್ದೇನೆ ಎಂದ ....

ಆಗ ಬುದ್ದರು ಹೀಗೆ ಹೇಳಿದರು ಪ್ರೀತಿಯಿಂದ ಏನು ಬೇಕಾದರೂ ಪಡೆಯಬಹುದು ...ಆದರೆ ನೋವು ಕೊಡುವವರಿಗೆ ದೇವರು ಯಲ್ಲವನ್ನು ಕಸಿದಿಕೊಳ್ಳುತ್ತಾನೆ ....ಪ್ರೀತಿಸುವವರಿಗೆ ಯಲ್ಲವನ್ನು ಸಮಯ ನೋಡಿ ಹೆಚ್ಚು ಹೆಚ್ಚು ಕೊಡುತ್ತಾನೆ ಇಷ್ಟೇ ಜೀವನ ಎಂದ .....

ಆಗ ಅಮರಸಾದು ಪ್ರೀತಿ ಇಲ್ಲದ ಆ ಭ್ರಮರ ಸಾದುವಿಗೆ ಪ್ರೀತಿಯ ಮಾತುಗಳನ್ನು ಆಡುತ್ತಾ ನೊಂದ ಅವನ್ನನ ಪ್ರೀತಿಸಿದ .....

ಸುಧಾ ಆರ್ ಬಳಿಗೇರ್




- ಸುಧಾ ಆರ್ ಬಳಿಗೇರ

01 Jun 2023, 09:42 am

ಕನ್ನಡಿಗರು....

ಸುತ್ತ ಮುತ್ತ ಭಾಷೆಗಳು ಎಸಗುವ
ದೌರ್ಜನ್ಯ...
ಆಗಲು ಕನ್ನಡಿಗರು ತೋರಿಸಿದ ಶಾಂತಿ ಸೌಜನ್ಯ....

ಯುದ್ಧದಲ್ಲಿ ಕುಗ್ಗದಿರಲು ತನ್ನ ಕವನಗಳ ಮೂಲಕ ಉರಿದುಂಬಿಸಿದ ಕುವೆಂಪು...
ಅವರ ಕನ್ನಡದ ಕವನಗಳ ಕೇಳುವ ಈ ಕಿವಿಗಳು ಇಂಪು...

ನಾವು ಕನ್ನಡಿಗರು, ಕುಗ್ಗದೆ ಇಗ್ಗಿ ಎದುರಾಳಿಗಳ ಎಡೆ ಮುರಿಯುವ ವೀರ ಕನ್ನಡಿಗರು...

- Abhishek

31 May 2023, 06:52 pm

ನನ್ನ ಪ್ರೀತಿಯ ಬಯಕೆ.. ❤️

ನಗು ಮೊಗದ ಚೆಲುವನ ಕಾಣಲು
ಹಂಬಲಿಸುತಿದೆ ನನ್ನ ನಯನಗಳು
ಕುಡಿನೋಟವ ಬೀರು ಒಮ್ಮೆಯಾದರೂ...

ಕೋಮಲ ಸ್ಪರ್ಶದ ಸುಖವ ಸವಿಯಲು
ನನ್ನ ಒರಟು ಕೈಗಳು ಇಚ್ಛೆಸುತಿವಿ
ಒಮ್ಮೆ ನನ್ನ ಸೋಕಬಾರದೆ..?

ಬದುಕಿನ ಪಯಣವ ನಿನ್ನೊಡನೆ ಸವೆಯಲು
ಕಾತರಗೊoಡಿವೆ ನನ್ನ ಪಾದಗಳು
ಒಮ್ಮೆ ನನ್ನ ಜೊತೆಯಾಗಿ ಸಾಗಬಾರದೆ..?

ಬೆವರಿನ ಕಂಪನು ಸೆಳೆಯಲು
ನನ್ನ ನಾಸಿಕವು ತುಡಿಯುತಿದೆ
ಒಮ್ಮೆ ಘಮ ಸೋಸಬಾರದೆ..?


ಲೀಲಾಜಲವಾಗಿ ನುಡಿವ ಮಾತನ್ನು ಕೇಳಲು
ಪರಿತಪಿಸುತಿವೆ ನನ್ನ ಕರ್ಣಗಳು
ಒಮ್ಮೆ ಮಾತನಾಡಬಾರದೆ..?

ಮನದ ತುಂಬ ಮೂಡಿವೆ ನಿನ್ನ ಸೇರುವ ಬಯಕೆ
ಬಾಳಿಬಿಡು ಒಮ್ಮೆ ನನ್ನ ಬದುಕಿನ ಜೊತೆಗೆ.....

- bhagya g s

29 May 2023, 11:36 pm

ಹಸಿರಾದ ನನ್ನ ಮನಸ್ಸು.... ಸುಧಾ ಆರ್ ಬಳಿಗೇರ್

ಕಣ್ತುಂಬ ನೀನೇ ತುಂಬಿರಲು
ಬೇರೇನು ನೋಡಲಿ .......
ಮನದಲ್ಲಿ ನೀನೇ ಕುಳಿತಿರಲು .....
ಬೇರೆ ಯಾರನ್ನು ಬೇಡಲಿ......

ಪದಗಳೇಲವು ನೀನಾಗಿರುವೆ
ಏನೆಂದು ಮತ್ತೆ ಬರೆಯಲಿ......
ನಿತ್ಯವು ನಿನ್ನ ನಗುವು ಹೂವಾಗಿರುವಾಗ
ನಾನ್ಯಾಕೆ ಬಾಡೋ ಹೂ ಮುಡಿಯಲಿ......


ಬಂಗಾರದ ಮನಸ್ಸು ನಿನ್ನದಿರುವಾಗ
ಕದ್ದುಹೊಯ್ಯೋ ವಡವೆ ನಾನೇಕೆ ತೊಡಲಿ.....
ದಿನವೂ ಖುಷಿಯ ಅಲೆಯು ಏಳುವಾಗ
ನಾನೇಕೆ ಕಣ್ಣೀರ ಬಿರುಗಾಳಿ ಕರೆಯಲಿ.....

ಹಸಿರಾದ ನನ್ನ ಮನಸ್ಸು ಸಾದ ನಿನ್ನಲಿ.....

ಸುಧಾ ಆರ್ ಬಳಿಗೇರ್ .....


- ಸುಧಾ ಆರ್ ಬಳಿಗೇರ

29 May 2023, 12:47 pm