ಸದಾ ಶಾಂತವಾದ ಸರೋವರದಂತಿದ್ದ ನನ್ನ ಮನಕೆ ,
ಪ್ರೀತಿಯೆಂಬ ಕಲ್ಲನೆಸೆದು
ಸದಾ ಅನುಮಾನವೆಂಬ ಅಲೆಯಂತೆ
ನನ್ನನ್ನು ಸುತ್ತಿ ಬಳಸಿ ಚುಚ್ಚಿ ಚುಚ್ಚಿ
(ಕೊಳದ) ಮನದ ಶಾಂತತೆಯನ್ನು ಕದಡಿದ
ಮೋಹಿನಿ ? ಮಾಯಾಂಗನೆ ? ನಾನು
ಪರಿತಪಿಸುವ ಸ್ಥಿತಿಯ ಕಂಡು
ಅಪಹಾಸ್ಯ ಮಾಡಿ ನಗುವಷ್ಟು
ವಿನೋದವಾಯಿತೇ ? ಈ ಬಾಳು
ಬರೀ ಗೋಳು, ಗೋಳು .........
ರಚನೆ ..... ಈರಣ್ಣ . ಹೆಚ್
ನನ್ನೊಳಗಿನ ಪ್ರತಿ ಭಾವಕ್ಕೂ
ಕನಸಿನ ರೂಪ ಕೊಟ್ಟಾಗ
ಹುಟ್ಟಿದ ಕವಿತೆಗಳು
ಬರೆಯಲು ಕುಳಿತರೆ ನನ್ನ ಮನಸ್ಸೇ ಖಾಲಿ
ಯೋಚಿಸಿದಾಗ ತಿಳಿಯಿತು
ನನ್ನ ಭಾವನೆಗಳೆ ನೀ ಕದ್ದಿರುವೆ
ನಿನ್ನ ಸವಿಯಾದ ಮಾತು ಕೇಳಿ
ನಾ ಕವಿಯಾದೆ ಗೆಳತಿ
ಕ್ಷಣ ಕ್ಷಣಕೂ ನೆನಪಾದ ನಿನ್ನ ಹೆಸರು
ನಿನ್ನ ಹೆಸರೊಂದಿಗೆ
ನಾ ಮರೆತೆ ನನ್ನ ಉಸಿರು...!!!
ಅಂತರ್ಜಾಲದಲ್ಲಿ
ಮಾತಾಡಲು ಸ್ಥಳ ಕೊಟ್ಟ
ನಮ್ಮೊಳಗಿನ ಕವಿಯನ್ನು ಬಡಿದೆಬ್ಬಿಸಿದ
ನಮ್ಮ ಪಿಸುಮಾತುಗಳನ್ನು ಆಳಿಸಿದ
ನಮ್ಮ ಅರ್ಥವಿಲ್ಲದ ತರ್ಕವಿಲ್ಲದ ಪದ್ಯಗಳನ್ನು
ಆಕಳಿಸದೆ ಓದಿದ ಹಾಡಿದ
ಎಲ್ಲಾ ಓದುಗರಿಗೆ ಬರಹಗಾರರಿಗೆ
ಪಿಸುಮಾತು ತಂಡದವರಿಗೆ
ನನ್ನ ಹೃದಯಪೂರ್ವಕ ನಮಸ್ಕಾರಗಳು....
ಈ ನಗರದ ಸೀಮೆಂಟು ಮಹಡಿಗಳ ಮೇಲಿಂದ
ಹನಿಯಿಕ್ಕುತಿದೆ ತೊಟ್ಟಿಕ್ಕುತಿದೆ
ಮೇಲೆ ನಭದಲ್ಲಿ ಕರಿ ಮೋಡಗಳ ಸಾಲು
ಇರುವೆಗಳ ಸಾಲಂತೆ , ಗಡಿ ಇಲ್ಲದಂತೆ
ಸಾಗುತಿದೆ ಎತ್ತಲೋ ಗೊತ್ತಿಲ್ಲ ಗುರಿ ಇಲ್ಲದೆಡೆಗೆ
ಅಂತೂ ಹನಿ ಇಕ್ಕುತಿದೆ , ತೊಟ್ಟಿಕ್ಕುತಿದೆ
ಅಂತೂ ಇದೂ .................
ಸೀಮೆಂಟು ಮಹಡಿಗಳ ಮೇಲಿಂದಿಳಿಯುವ ಮಳೆ
ಇದು ಮಳೆಯೇ ?
ರಚನೆ..... ಈರಣ್ಣ .ಹೆಚ್
ಸಂಭ್ರಮದಿ ಸಡಗರದಿ ಹೊರಟಿದ್ದೆ ನಾನು,
ಸಂತೋಷವ ಹಂಚಿಕೊಳ್ಳಲೆಂದು
ಹೊರಟಿದ್ದೆ ನಾನು, ಹೊರಟಿದ್ದೆ ನಾನು
ಹೊರಟಿದ್ದೆ , ಸ್ವಲ್ಪ ದೂರ ಸಾಗಿಯೂ ಸಾಗಿದ್ದೆ .
ಸವಿಕನಸ ಸಿಹಿ ಕನಸ ಕಾಣುತಲಿ
ಆಗಲೇ ನಂದಬೇಕೇ ಜ್ಯೋತಿ ? ಬೇಕೇ ? ಜ್ಯೋತಿ .
ಜ್ಯೋತಿ ನಂದಿತು ಕತ್ತಲೆ ಆವರಿಸಿತು .
ಆದರೂ ಸಾಗಿದ್ದೆ ತನ್ನ ಗುರಿಯತ್ತ.
ಗುರಿ ಸಮೀಪಿಸಿತ್ತು ಹತ್ತಿರಾಗಿತ್ತು.
ಅಕ್ಕ ಪಕ್ಕದ ಮನೆಯ ಮುಂದಣ ಬೆಳಕು,
ನಂದಿತು ಜ್ಯೊತಿ ನಂದಿತು.
ಆಸೆಯಿಂದ ತಂದುದ ಕೊಡಲು
ಮಾತನಾಡಿಸಿದೆ ಬಾಲೆಯ ಮುದ್ದು ಬಾಲೆಯ
ದನಿ ಮಾತ್ರ ಕೇಳುತಿತ್ತು, ಚಿತ್ರ ಕಾಣದಾಗಿತ್ತು.
ಹೇಳಲಿಲ್ಲವೇ ನಂದಿತು, ಜ್ಯೋತಿ ನಂದಿತು.
ಮಾತುಕತೆ ಸಾಗಿತ್ತು ಸ್ಮಶಾನ ಯಾತ್ರೆಯಂತೆ
ಬೆಳಕ ತಾ ಎಂದು ಕೂಗಿತ್ತು ಬಾಲೆಯಾ ದನಿ
ಅದಕುತ್ತರ ಬಂದಿತ್ತು ಪುಟ್ಟಿಯಿಂದ ..........
ಕತೆ ಅಲ್ಲಿಗೆ ಮುಗಿದಿತ್ತು , ಆದರೂ ಮನಸಿತ್ತು.
ರಚನೆ ..... ಈರಣ್ಣ . ಹೆಚ್.