Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಣ್ಣಲ್ಲೆ ಇರುವೆ....

ಇಂದು ನೀ ನನ್ನ ಅಗಲಿ ಹೋದರೂ..
ನಿನ್ನ ನೆನಪುಗಳಿಂದ ಮಾಸಿ ಹೋದರೂ..
ಎಂದಾದರೂ ನಾ ನಿನ್ನ ನೆನಪುಗಳಲ್ಲಿ ಮೂಡಿದರೆ ಹುಡುಕದಿರು ನೀನನ್ನ...
ಮತ್ತೆಲ್ಲಿಯೂ.. ನಾನಿನ್ನ ಕಣ್ಣಲ್ಲೇ ಇರುವೆ;
ಒಂದು ಹನಿ ಕಣ್ಣೀರಾಗಿ…!

-

02 Apr 2017, 09:45 am

ಗಡುಸಾದ ಮಾತು

ಕಹಿ ನೋವ ಬದಿಗಿರಿಸಿ
ಸಿಹಿ ನೋವ ಜೊತೆಯಲಿ ಬೆರೆಸಿ
ಹರುಷವ ಹೊನಲ್ಲೂ ಇದರೊಡನೆ
ಕಲಿಸಿ ಬೆರೆಸಿ 
ಸವಿದು ನೋಡ ಸವಿಯಾಗಿಹುದು
ಜೀವನದ ರಸವ 
ಗಳಿಗೆ ಗಮನಿಸಿದೆ ಚಿಲುಮೆ ತಿರುಗುತ್ತಿದೆ .
ಮಂಕಾದ ಮಾತು ಗಡುಸಾಗಿದೆ
ತಿಳಿದು ನೋಡಾ ನೋಟದ
ಕಲ್ಪನೆಯ ಹಿಂದಿನಾಚೆಯ ಮಲ್ಲಿಗೆಯ ಹಾಸಿಗೆ
ಸುರಿದೆ ಸುರಿಮಳೆಯ ಮಾತಿನ ಮಹಿಮೆ
ತಿಳಿಯದಿದ್ದೋಡೇ ನಾನಾಗ ಹುಚ್ಚನಾದೆ ..
ಮಂಕುತಿಮ್ಮ್

- ಪ್ರದೀಪ.ಮ.ಪಾಡಮುಖೆ

01 Apr 2017, 11:14 pm

ನಡೆ ಮುಂದೆ

ನಡೆ ಮುಂದೆ ನೀ
ಹಿಂತಿರುಗಿ ನೋಡದೆಲೆ
ಸಾವಿನ ಮನೆಯ ಹೊಸ್ತಿಲಿಗೆ
ನೀ ಹೋಗಿ ಸೇರುವ ವರೆಗೆ...

ಇಟ್ಟು ನಡೆ ದಿಟ್ಟ ಹೆಜ್ಜೆ
ಅಂಜದೆಲೆ ನಡೆದಂತೆ ಗಜ ಪಡೆ
ಊಳಿಡಲಿ ನೂರು ನಾಯಿಗಳ ಹಿಂಡು
ಸಹಿಸದೆಲೆ ನಿನ್ನೇಳಿಗೆಯನು ಕಂಡು
ಜಗ್ಗದಿರು ಕುತಂತ್ರಿಗಳ ಕಾಟಕ್ಕೆ
ಕೂರದಿರು ಸುಖ ರಸದೂಟಕ್ಕೆ.

ಆಗಿದ್ದು ಸಾದಿಸು
ಆಗದ್ದು ದೂರ ಬಿಸುಟು
ಅಹೋರಾತ್ರಿ ಶ್ರಮಿಸು
ಮೀಟುತ್ತಿರು ಬದುಕ ದೋಣಿ ಹುಟ್ಟು.
ಅದರಲ್ಲೇ ಇಹುದು
ಬಾಳ ಪಯಣದ ಗುಟ್ಟು.

- ಶ್ರೀಗೋ.

01 Apr 2017, 09:45 pm

ಹಿತಾಸೆಯೇ ಚಂದ

ಮೋಡ ಕವಿಯಿತು ಮಳೆ ಶುರುವಾಯಿತು.
ತಂಪಾದ ಗಾಳಿ ನನಗೆ ತಾಗಿತು.

ಬಿಸಿ ಬಿಸಿಯ ಕಾಫಿ ನನ್ನ ಕೈ ಸೇರಿತು
ಮಳೆ ನಿಂತಾಗ ಮಣ್ಣಿನ ಘಮ ಘಮ ಮನಸೆಳೆಯಿತು.

ಮಳೆಯಲ್ಲಾಡುಲು ನನಗೇಷ್ಟೋ ಆಸೆ .
ನಿಂತ ನೀರಿನಲ್ಲಿ ಆಡಲು ಅಷ್ಟೊಂದು ಮಜವಲ್ಲ.
ಕಡಲಲ್ಲಿ ಎಷ್ಟು ಆಡಿದರೂ ನನಗೆ ತೃಪ್ತಿಯಾಗಲ್ಲ .

ಸವಿಯದ ಹಣ್ಣಿನ ರುಚಿ ಹೇಗಿದ್ದರೂ ಚಂದ .
ಅನ್ನುವ ಹಾಗೆ ಮಳೆಯಲ್ಲಾಡುವ
ಹಿತಾಸೆಯೇ ಚಂದ.

- ಚುಕ್ಕಿ

01 Apr 2017, 05:56 pm

ಪ್ರೀತಿಗೆ ಸಿಕ್ಕು ಹಾಳಾಗದಿರಲಿ ಹರೆಯ

ಸಮುದ್ರದಲ್ಲಿ ಬಿಟ್ಟ ಕಾಗದದ ಹಡಗಿನಂತೆ ಈ ಹದಿಹರೆಯದ ಪ್ರೀತಿ
ಯಾರೂ ತಿಳಿಯರು ಇದರ ರೀತಿ ನೀತಿ
ಟೈಟಾನಿಕ್ ನಂತಹ ಬೃಹತ್ ಹಡಗೇ ಮುಳುಗಿಹೋಯ್ತು ಸಮುದ್ರದಲ್ಲಿ
ಇನ್ನು ಈ ಸಣ್ಣ ಕಾಗದದ ಹಡಗು ಉಳಿದೀತೆ ಹೇಳಿ.

ಪ್ರೀತಿಯೆಂಬುದು ಜೀವನದಲ್ಲಿ ಯಾವಾಗಲೋ ಮಾಡಬೇಕಾದ ಸವಾರಿ
ಅದಕ್ಯಾಕೆ ಇಂದಿನಿಂದಲೇ ಮಾಡುವೆ ತಯಾರಿ
ಈ ಜೀವನವೆಂಬುದು ಬೃಹತ್ ಸಂತೆ
ಇಲ್ಲಿ ನೀ ತರಬೇಡ ಪ್ರೀತಿಯ ಕಂತೆ.

ಮೊದಲು ಜೀವನವ ಸಾರ್ಥಕವಾಗಿ ಬಾಳು
ನಂತರ ನಿಲ್ಲುವುದು ನಿನ್ನ ಹಿಂದೆ ಹುಡುಗಿಯರ ಸರತಿ ಸಾಲು
ಹರೆಯದಲ್ಲಿ ಹುದುಗಿರುತ್ತದೆ ಏನನ್ನೋ ಸಾಧಿಸುವ ಕಿಚ್ಚು
ಆ ಕಿಚ್ಚನು ಆರಿಸುವ ನೀರಿನಂತೆ ಈ ಪ್ರೀತಿಯ ಹುಚ್ಚು.

ಜೀವನದಲ್ಲಿ ಕೊಡಬೇಡ ಪ್ರೀತಿಗೆ ಮೊದಲ ಸ್ಥಾನ
ಅದರಿಂದ ನಿನಗೆ ಸಿಗುವುದು ಕೇವಲ ಅವಮಾನ
ತಂದೆ ತಾಯಿ ಗುರುಗಳು ಜೀವನದಲ್ಲಿ ತುಂಬಾ ಮುಖ್ಯ
ಇವರ ಮುಂದೆ ಪ್ರೀತಿಯೆಂಬುದು ಅಶಖ್ಯ.

ಜೀವನದಲ್ಲಿ ಒಮ್ಮೆ ಮಾತ್ರ ಸಿಗುವುದು ಹರೆಯ
ಪ್ರೀತಿಗೋಸ್ಕರ ಹಾಳು ಮಾಡಬೇಡ ಈ ಅಮೂಲ್ಯ ಸಮಯ
ನಿನಗಾಗಿ ಕಾಯುತಿರುವುದು ಉಜ್ವಲ ಉಷೆ
ಅದ ನೋಡಲು ನೀ ಇಳಿಸಿಕೊಳ್ಳಬೇಕು ಪ್ರೀತಿಯ ನಶೆ.

ಜೀವನದಲ್ಲಿ ಇರಲಿ ಸಾಧಿಸುವ ಛಲ
ಪ್ರೀತಿ ಮಾಡಿ ಆಗಬೇಡ ಚಂಚಲ
ಪ್ರೀತಿಯ ಹತಾಶೆಯಿಂದ ಕೆಡಿಸಿಕೊಳ್ಳಬೇಡ ನೆಮ್ಮದಿ
ಈ ಲೋಕದಲ್ಲಿ ನಿನ್ನನ್ನು ಪ್ರೀತಿಸುವವರಿದ್ದಾರೆ ಎಷ್ಟೋ ಮಂದಿ
ಪ್ರೀತಿಗೂ ಇದ್ದೇ ಇದೆ ಸೂಕ್ತ ಕಾಲ
ಅದಕ್ಕೆ ಹರೆಯವಲ್ಲ ಸಕಾಲ.

- ಅಕವಿ

01 Apr 2017, 03:44 pm

ಮರೆತಿಲ್ಲ

ನಿನ್ನ ನೋಡುವ ತವಕದಲ್ಲಿ
ನನ್ನ ನಾನು ಮರೆತೆ ನಿನ್ನಲ್ಲಿ
ಹಿಂತಿರುಗಿ ನೋಡದೆ ಹೋದೆ ನೀ
ನಾನಿರುವ ಧೈರ್ಯದಲಿ .

ಅಂದಿನಿಂದ ಕಾದಿರುವೆ ನೀ
ಬರುವ ದಾರಿಲಿ.
ಒಮ್ಮೆಯೂ ನೋಡಿಲ್ಲ ನಿನ್ನ
ಹೆಜ್ಜೆಗುರುತು ಆ ಸ್ಥಳದಲ್ಲಿ .

ಅರಿಯದೆ ಹೊದೆಯೋ
ನನ್ನ ಮರೆತು ಹೊದೆಯೋ
ನನಗಿನ್ನೂ ತಿಳಿದಿಲ್ಲ.......

ಆದರೆ ನನ್ನ ಹೃದಯ ನಿನ್ನ
ಪ್ರೀತಿಸುವುದು ಮಾತ್ರ ಮರೆತಿಲ್ಲ....

- ಚುಕ್ಕಿ

01 Apr 2017, 03:20 pm

ಬಿಗಿದ ನೇಣುಕುಣಿಕೆಯಲಿ...

ಸಂಭ್ರಮಗಳ ನಡುವೆ
ಹೀಗೆ ಬಂಧಿಸಿಡು
ಬಿಗಿಯಾದ ನೇಣಿನಕುಣಿಯಲಿ
ಹಾಗೆ ಉಸಿರುಗಟ್ಟಲಿ
ನೋಡುವ ಕಣ್ಣಗಳಲಿ ಹನಿಯೊಡೆಯಲಿ
ಕೈಕಾಲುಗಳು ಜೋತು
ಬೀಳಲಿ
ನಿಶಕ್ತಿ, ನಿಶ್ಯಬ್ಧ ತಂಗಾಳಿ
ಸೇರಲಿ

ಇಲ್ಲೇ ಇಲ್ಲೇ ನೋವುಂಡವರ ತಾಪ
ಬಸಿದು ಬೆರೆತು
ಹಸಿದ ಒಡಲಲಿ
ಬೇಯುತ್ತಿದೆ
ಕಾಣದ ದೇವರಿಗೂ ಹನಿ ಬೆವರಿನ ನೈವೇದ್ಯವಿತ್ತೂ

ನಿಲ್ಲಿ, ಸಂ'ಭ್ರಮಿ'ಸಿ
ಉಸಿರು ತನ್ನತಾನೆ
ನೀಗುತಿದೆ
ನನ್ನ ಬೀಗಿ ಹಿಡಿದಿರುವುದು
ನೇಣಿನ ಕುಣಿಕೆಯಲ್ಲ
ಸ್ವಾತಂತ್ರ್ಯದ ಚಹರೆಗಳವು
ಪಹರೆಗೆ ನಿಂತ
ನಿಮ್ಮನುಮನಗಳ ಅಂತೆಕಂತೆಗಳಿಗೆ...‌

ಮತ್ತೆ ಹುಟ್ಟಿಬರುವೆನೆಂಬ
ಭ್ರಮೆಗಳ ಕಳಚಿ
ಹಕ್ಕಿಗಿಲ್ಲದ, ಗಾಳಿಗಿಲ್ಲದ
ಬೆಳಕಿಗಿಲ್ಲದ...

ಧರ್ಮದೆಲ್ಲೆಗಳ, ಕುಬ್ಜ ಜಾತಿಗಳ ಮೀರಿ
ಕಪ್ಪುಬಣ್ಣವ ಹಾಸಿ
ಮಲಗುತ್ತೇನೆ...

ತಂತಾನೆ ಬೇರೆಯುವೆ ಈ ಜಗದೊಳಗೆ ಬಿಗಿದ ನೇಣಿನ ಕುಣಿಕೆಯಲಿ...

- ram purshi

01 Apr 2017, 01:29 pm

ಮಾಯ ಆಗ್ಬೇಡ

ಮಾಯ ಆಗ್ಬೇಡ ಮನಸಿಗೆ
ಬೇಜಾರ್ ಆಗುತ್ತೆ .
ಸುಮ್ಮನಿರಬೇಡ ಹೃದಯ
ಮಾತಿಲ್ಲದೆ ಮೌನವಾಗುತ್ತೆ.

ದೂರವಾಗಬೇಡ ಕಣ್ಣು
ಕಂಬನಿಯಲ್ಲಿ ಕರ್ಗೋಗುತ್ತೆ.
ಒಂದು ಕ್ಷಣವೂ ನನ್ನ ಬಿಟ್ಟು
ಹೋಗಬೇಡ ನನ್ನ ಉಸಿರೆ ನಿಂತೋಗುತ್ತೆ.

- ಚುಕ್ಕಿ

01 Apr 2017, 12:49 pm

ಪ್ರೀತಿ

ನಾವಿಬ್ಬರು ನಡೆಯುವಾಗ
ಒಂದೇ ನೆರಳು ಬೀಳುವುದೇಕೆ ....
ಆ ಒಂದೇ ನೆರಳಿನಲ್ಲಿ
ನಾವಿಬ್ಬರು ಕಾಣುವುದೇಕೆ ...!!

- ವಿನುತ ಕಿರಣ್ ಗೌಡ

01 Apr 2017, 10:22 am

ಹುಚ್ಚರು

ಶೋಧಿಸುತಿರುವೆ ಹೃದಯದಲ್ಲಿಳಿದು ನೀನು ನೆಲೆಸಿದ ಕುರುಹು ಬಸಿದು ಬಸಿದು
ಮಾಸಿದ ನೆನಪಿನ ಕಲೆಗಳು ಮನದಿಂದ ಹೊರಬಿದ್ದವು ಬಣ್ಣ ಬಳಿದುಕೊಳ್ಳುತ್ತಾ

ನಿನಗೆ ಅಪರಂಜಿಯ ಪಟ್ಟಕೊಟ್ಟು ನಾನು ಜನರಿಗೆ ಅಪಹಾಸ್ಯನಾದೆ ನನಗೆ ನಾನೇ ಪ್ರಶ್ನೆಯಾದೆ ಬದುಕಿನ ಆದಿ ಅಂತ್ಯ ಅರಿಯದೆ

ನದಿಯೂಁಚಿಂತಿಸುತ್ತಿದೆ ನಾನು ಯಾವಾಗ ಹೇಗೆ ಮುಳುಗುವೆ ಎಂದು ದೋಣಿ ಸಜ್ಜಾಗಿದೆ ಲಗಾಮು ಮರೆತು ಲಂಗರಿಲ್ಲದ ಕಡೆ ಸಾಗಲು

ಯಾರೊ ಗೀಚಿದ ಅಮರಪ್ರೇಮದ ಸಾಲು ಅಮ್ರತವೆಣಿಸಿ ಹೃದಯಕಿಳಿಸಿ ಖಚಿತ ಉಡುಗೊರೆ ಪಡೆದು ಶೋದನೆ ಮುಗಿಸಿ ಶೋಕಸಾಗರದಲ್ಲಿ ನನ್ನವರನು ಅದ್ದಿದೆ..
✍ಆದಿಲ್ ಕೋಟೇಶ್ವರ

- adilsha

01 Apr 2017, 08:31 am