ಸೆರಗ ನೆರಿಗೆಯಲ್ಲಿಟ್ಟ ಮೊಹಬ್ಬತ್ತನ್ನು ಬಿಡಿಸುವ ನನ್ನ ಉಮೇದಿಗೆ ಅವಳೊಂದು ಕಿರು ನಗೆಯಿಟ್ಟು ಮಾಯಿಸುತ್ತಾಳೆ
ಮದಿರೆಯಂತಹ ನನ್ನ ಹೊಗಳಿಕೆಯ
ಅಮಲಿನ ಧಾವಂತಕ್ಕೆ ನಾಚುವುದು
ಮರೆಚುತ್ತಾಳೆ ಹಾಗೆಯೇ
ವಾಸ್ತವ ಒಲವಿನ ತಲಾಶೆಯ ಕೊನೆ ಇಶ್ಕ್ ಎಂದಾಗಲು ಕಡಲಲೆಯನ್ನು ಉಪಮೆಯಾಗಿಸುತ್ತೇನೆ
ಅವಳೊಳಗಿನ ಹುಣ್ಣಿಮೆ ನಾನಾಗಿರಬೇಕು ಉಬ್ಬಿಬಿಡುತ್ತೇನೆ ಕಂಡಾಗಲೆಲ್ಲ
ಮುಗಿಲೂರಿನ ಸರಕನ್ನು ಅಂಗೈಯಲ್ಲಿಟ್ಟು
ಮುದ್ದಾಡಿಸುವ ನನ್ನ ಪ್ರಬಲ ಆಸೆಯೊಂದು ಟಿಸಿಲೊಡೆಯುವುದು ಆವಾಗಲೇ
ಹೆಜ್ಜೆ ಜಾಡಿನ ಪರಾಮರ್ಶಿಸುವ ನನ್ನ ವಯಸ್ಸಿನ ಪರಿಧಿ ಗೊತ್ತಿಲ್ಲದೇ ಪ್ರಬುದ್ಧವಾಗುತ್ತದೆ ಸುದ್ಧಿಯಿಲ್ಲದೇ
ಅಂಗನವಾಡಿ ಅಕ್ಕಂದಿರೇ
ಬೆಂಗಳೂರ ರಸ್ತೇ ಬೀದೀಲಿ
ಅನ್ನಕ್ಕೆ ಕೈ ಒಡ್ಡಿ ನಿಂತೀರೆ?
ನಮ್ಮ ಪುಟ್ಟ ಕೂಸುಗಳ
ಸಂಬಾಳಿಸಲು ನೀವು ಪಟ್ಟ ಕಷ್ಟಗಳ
ಸರ್ಕಾರದ ಕಿವಿ ತುಂಬೀರೇ ?
ಮಂತ್ರಿ ಮಹೋದಯರಿಗೆ
ಕಂತ್ರಿ ಅಧಿಕಾರಿಗಳಿಗೆ
ಕುಂತುಂಡರೂ ತೀರದಷ್ಟು
ಕಂತೆ ಕಂತೆ ಹೊಂದಿರುವವರಿಗೆ
ಈ ಲೋಕ, ಈ ದೇಶ ಕಾಣಿರೆ.
ಪುಡಾರಿಗಳಿಗೆ ಸಾಕಾಗದಾಗ
ಲಕ್ಷ ಲಕ್ಷ ಗಿಂಬಳ
ರಾತ್ರೋ ರಾತ್ರಿ ಐದೇ ಮಿನಿಟಿನಾಗೆ
ಏರಿಸಿಕೊಳ್ವರು ತಮ್ಮ ಸಂಬಳ.
ನೀವೊ ಅ ಆ ಇ ಈ ಹೇಳಿ ಕೊಡೋ
ಬೇಲಿ ಬದಿಯ ಪಾಪದ ಹೂವುಗಳು
ಕೊಟ್ಟಾರೆಯೇ ನಿಮಗೆ
ಬಿಡಿಗಾಸು..
ತಾಕದಿರಲಿ ಈ ನೆಲಕೆ ನಿಮ್ಮ ನಿಟ್ಟುಸಿರು.
ಅಯ್ಯೋ ಅಕ್ಕಂದಿರಾ,
ದೂರದೂರಿಂದ ಇಷ್ಟು ದೂರ
ಬೇಡಿಕೆಯನೊತ್ತು ಯಾಕ ಬಂದೀರಾ?
ಮುಗಿಲಾಗೆ ಬಿದ್ದಿರಲಿಲ್ಲವೇ
ನಿಮ್ಮೂರಾಗೂ ಹಾಳು ಚಂದಿರಾ ?
ಜಗದ ಜನರ ಮೆಚ್ಚಿಸಬೇಕಿಲ್ಲ ....
ನನ್ನ ನಾನು ಅರಿತರೆ ಸಾಕು....
ಜಗದ ಜನರ ನಂಬಬೇಕಿಲ್ಲ....
ನನ್ನ ನಾನು ನಂಬಿದರೆ ಸಾಕು...
ಯಾರಿಗೆ ಯಾರು ಏನು ಅಲ್ಲ ....
ನನಗೆ ನಾನೇ ಎಲ್ಲಾ ....
ನನ್ನವರು ಎಂದು ನಂಬಿ ಕೇಡಬೇಡ ...
ನನ್ನವರತರ ನೀ ...
ನಟನೆಯ ನಂಬಿಕೆ ಮಾತ್ರ ಸಾಕು ಇನ್ನೂ ...
ರಚನೆಃಮಾದು ಜಗದಾಳ