Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀನು...

ಕಣ್ಣಲ್ಲಿ ನೀ ತುಂಬಿರಲು ಕತ್ತಲಿಗೆ ಬೆಳಕಾದಂತೆ,
ಹೃದಯದಿ ನೀ ತುಂಬಿರಲು ಮರುಭೂಮಿಯು ಹಸಿರಾದಂತೆ,
ಮನದಲಿ ನೀ ತುಂಬಿರಲು ದೇಹಕ್ಕೆ ಉಸಿರಾದಂತೆ,
ಕನಸಲಿ ನೀ ತುಂಬಿರಲು ನನ್ನ ಗೆಲುವಿಗೆ ಹೆಸರಾದಂತೆ.

- basavarajsirnayakpreethu

23 Mar 2017, 03:48 pm

ಬದುಕೆಂದರೆ....

ಬದುಕೆಂದರೆ....
ಅನಿಶ್ಚಿತ,
ಅಲಿಖಿತ ಸಂವಿಧಾನ.
ವೈರುಧ್ಯಗಳ ಕದನ ಮುಗಿದ ಮೇಲಿನ ಸಂಧಾನ.
ಬದುಕೆಂದರೆ....
ನನಸಾಗಲೂ ಬಹುದಾದ ತಿರುಕನ ಕನಸು.
ಹತೋಟಿಗೆ ಸಿಗದ ಹದಿಹರೆಯದ ಹೆಣ್ಣಿನ ಮನಸು.
ಬದುಕೆಂದರೆ....
ತಪ್ಪೇ ಮಾಡದೆ,ಅಪರಾಧಿಯಾದಂತಹ ಖೈದಿ.
ಸತ್ತ ಮೇಲೆ ಪ್ರಖ್ಯಾತವಾದವನ ಸಮಾಧಿ.
ಬದುಕೆಂದರೆ....
ಬಯಸಿದ್ದನ್ನು ಪಡೆದೇ ತೀರುವ ಕೆಟ್ಟ ಹಠಮಾರಿ.
ಯಾರ ಮಾತನ್ನೂ ಕೇಳದ, ತನ್ನಿಚ್ಛೆಯಂತೆ ನಡೆವ ಸರ್ವಾಧಿಕಾರಿ.

- basavarajsirnayakpreethu

23 Mar 2017, 03:43 pm

ಕನಸುಗಳು

ನಿನ್ನ ಪಾದಗಳ ಅಡಿ
ನನ್ನ ಕನಸುಗಳ ಚೆಲ್ಲಿರುವೆ
ಮೃದುವಾಗಿ ನಡೆ
ಎಚ್ಚರವಾದೀತು.

ಹಗಲು ಕನಸಲ್ಲವಿದು
ಗೆಳತಿ ಮೃದುವಾದ
ಮನಸ್ಸುನನ್ನ ಮನಕೆ
ನೀನೇ ಒಡತಿ ಇದು ಆಗಲಿ
ನನಸು ಭಾರದ ಹೆಜ್ಜೆ ಇಡಬೇಡ

ನೋವು ಆದೀತು
ನೀನು ಎಷ್ಟೇ ದೂರವಿದ್ದರು
ಆಗಸದಿಂದ ನೋಡುವೆನೇ
ಸಂತಸದಿ ಇರು ನೀನು
ಎಂದು ದೇವರ ಬೇಡುವೆನೇ
ಕನಸಿನ ಮೇಲೆ ಓಡಬೇಡ
ನಿಂತು ಹೋದೀತು.

- basavarajsirnayakpreethu

23 Mar 2017, 03:18 pm

ಲೆಕ್ಕ ತಪ್ಪಿದ ಅಲೆ

ಸೆರಗ ನೆರಿಗೆಯಲ್ಲಿಟ್ಟ ಮೊಹಬ್ಬತ್ತನ್ನು ಬಿಡಿಸುವ ನನ್ನ ಉಮೇದಿಗೆ ಅವಳೊಂದು ಕಿರು ನಗೆಯಿಟ್ಟು ಮಾಯಿಸುತ್ತಾಳೆ
ಮದಿರೆಯಂತಹ ನನ್ನ ಹೊಗಳಿಕೆಯ
ಅಮಲಿನ ಧಾವಂತಕ್ಕೆ ನಾಚುವುದು
ಮರೆಚುತ್ತಾಳೆ ಹಾಗೆಯೇ

ಎಳೆಯಲಣುವಾದ ಎದೆ ತೇರಿನ
ಮುಹೂರ್ತವೆಲ್ಲಾ ಕನಸಿನಲ್ಲೇ ಆಗುತ್ತದೆ
ಎಣಿಕೆಗೆ ಸಿಗದ ನಭದೂರಿನ ಚುಕ್ಕಿಯವಳು ಮಿನುಗುತ್ತಾಳೆ ಮುತ್ತಿಟ್ಟಷ್ಟು
ಕಾವಲು ಹೃದಯದ ಕಿಮ್ಮತ್ತಿಲ್ಲದ ಒಲೈಕೆ ಕತ್ತಲಂತೆ ಸರಿದು ಹೋಗುತ್ತದೆ ಗೊತ್ತಾಗದೆ

ವಾಸ್ತವ ಒಲವಿನ ತಲಾಶೆಯ ಕೊನೆ ಇಶ್ಕ್ ಎಂದಾಗಲು ಕಡಲಲೆಯನ್ನು ಉಪಮೆಯಾಗಿಸುತ್ತೇನೆ
ಅವಳೊಳಗಿನ ಹುಣ್ಣಿಮೆ ನಾನಾಗಿರಬೇಕು ಉಬ್ಬಿಬಿಡುತ್ತೇನೆ ಕಂಡಾಗಲೆಲ್ಲ

ಮುಗಿಲೂರಿನ ಸರಕನ್ನು ಅಂಗೈಯಲ್ಲಿಟ್ಟು
ಮುದ್ದಾಡಿಸುವ ನನ್ನ ಪ್ರಬಲ ಆಸೆಯೊಂದು ಟಿಸಿಲೊಡೆಯುವುದು ಆವಾಗಲೇ
ಹೆಜ್ಜೆ ಜಾಡಿನ ಪರಾಮರ್ಶಿಸುವ ನನ್ನ ವಯಸ್ಸಿನ ಪರಿಧಿ ಗೊತ್ತಿಲ್ಲದೇ ಪ್ರಬುದ್ಧವಾಗುತ್ತದೆ ಸುದ್ಧಿಯಿಲ್ಲದೇ



ಅವಿಜ್ಞಾನಿ

- ಅವಿಜ್ಞಾನಿ

23 Mar 2017, 12:50 am

ಅಂಗನವಾಡಿ ಅಕ್ಕಂದಿರೆ..

ಅಂಗನವಾಡಿ ಅಕ್ಕಂದಿರೇ
ಬೆಂಗಳೂರ ರಸ್ತೇ ಬೀದೀಲಿ
ಅನ್ನಕ್ಕೆ ಕೈ ಒಡ್ಡಿ ನಿಂತೀರೆ?
ನಮ್ಮ ಪುಟ್ಟ ಕೂಸುಗಳ
ಸಂಬಾಳಿಸಲು ನೀವು ಪಟ್ಟ ಕಷ್ಟಗಳ
ಸರ್ಕಾರದ ಕಿವಿ ತುಂಬೀರೇ ?

ಮಂತ್ರಿ ಮಹೋದಯರಿಗೆ
ಕಂತ್ರಿ ಅಧಿಕಾರಿಗಳಿಗೆ
ಕುಂತುಂಡರೂ ತೀರದಷ್ಟು
ಕಂತೆ ಕಂತೆ ಹೊಂದಿರುವವರಿಗೆ
ಈ ಲೋಕ, ಈ ದೇಶ ಕಾಣಿರೆ.

ಪುಡಾರಿಗಳಿಗೆ ಸಾಕಾಗದಾಗ
ಲಕ್ಷ ಲಕ್ಷ ಗಿಂಬಳ
ರಾತ್ರೋ ರಾತ್ರಿ ಐದೇ ಮಿನಿಟಿನಾಗೆ
ಏರಿಸಿಕೊಳ್ವರು ತಮ್ಮ ಸಂಬಳ.
ನೀವೊ ಅ ಆ ಇ ಈ ಹೇಳಿ ಕೊಡೋ
ಬೇಲಿ ಬದಿಯ ಪಾಪದ ಹೂವುಗಳು
ಕೊಟ್ಟಾರೆಯೇ ನಿಮಗೆ
ಬಿಡಿಗಾಸು..
ತಾಕದಿರಲಿ ಈ ನೆಲಕೆ ನಿಮ್ಮ ನಿಟ್ಟುಸಿರು.

ಅಯ್ಯೋ ಅಕ್ಕಂದಿರಾ,
ದೂರದೂರಿಂದ ಇಷ್ಟು ದೂರ
ಬೇಡಿಕೆಯನೊತ್ತು ಯಾಕ ಬಂದೀರಾ?
ಮುಗಿಲಾಗೆ ಬಿದ್ದಿರಲಿಲ್ಲವೇ
ನಿಮ್ಮೂರಾಗೂ ಹಾಳು ಚಂದಿರಾ ?

- ಶ್ರೀಗೋ.

22 Mar 2017, 10:53 pm

ಕನಸು ಮನಸಿನ ಪಿಸುಮಾತು

ಓ ಕನಸೆ ನೀ ಮನದ ಬಿಸಿತುಪ್ಪ
ನುಂಗಲಾರದೆ ಉಗುಳಲಾರದೆ
ತೊಳಲಾಡಿದೆ ಜೀವ ತಾಳಲಾರದೆ ನೋವ

ಬಾಯ ಗವಿತುಂಬ ಹೊಗೆ ತುಂಬಿ
ಸ್ಫೋಟವಾಗಲು ಕಾಯುತಿದೆ ಕ್ಷಣ
ನಿನ್ನೊಂದು ನೋಟಕೆ ಕರಗುತಿದೆ ಮನ

ಕರೆಗಂಟೆಯ ಮೀಟದೆ ನೀ ಮಾಡಿದೆ
ಅತಿಕ್ರಮ ಪ್ರವೇಶ
ನಿನ್ನ ದಾಳಿಗೆ ಮನದ ಬನದ ತರುಲತೆಗಳೆಲ್ಲ ಸರ್ವನಾಶ

ತೋಟದ ಮಾಲಿ ಬಂದರೇನು ಗತಿ
ಬೇಡ ಹೋಗು
ಬೇಲಿಯ ಮೀರಲು ಮಾಡಿಹೆಯಾ
ಕಪಟತನದ ಸೋಗು

ಮನಸಿನಾ ಮಾತಿಗೆ ಕನಸೆಂದಿತು
ಸೋಗಲ್ಲ ಚನ್ನೆ ನಿನ್ನದೇ ನೆರಳಿದು
ಸುತ್ತ ಮನಸಿನ ಬಯಕೆ ನಿನ್ನದೇ ಕನಸಿದು
ಕನಸಿನಾ ಮಾತಿಗೆ ಮನ ನಾಚಿ ಕೆಂಪೇರಿತು
ತಲೆಬಾಗಿ ಕಾಲ್ಬೆರಳಲಿ ನೆಲ ಗೀರಿತು

ಹಂಸಿನಿ

- ವಿಸ್ಮಯ

22 Mar 2017, 09:52 pm

ಹೃದಯದ ನಲ್ಲಿ

1.

ನೀ ತೋರಿದ ಪ್ರೀತಿಯ
ಸವಿನೆನಪುಗಳು ಮಾಸದೆ
ಹೃದಯದ ಮೂಲೆಯಲಿ
ಹಚ್ಚ ಹಸಿರಾಗಿವೆ ನಲ್ಲ

ಕೆನ್ನೆಯಿಂದಿಳಿದ ಕಣ್ಣೀರ
ಒರೆಸುತ್ತಿದ್ದ ಪರಿಗೆ
ಇಬ್ಬನಿಯ ಹಾಗೆ
ಕರಗಿ ಹೋಗುತ್ತಿದ್ದೆನಲ್ಲಾ!

ಆದರಿಂದು ನನ್ನಾಸೆಗಳಿಗೆಲ್ಲಾ
ಒತ್ತಾಸೆಯಾಗಿದ್ದ ಗೆಳೆಯಾ
ಯಾರದೋ ಮಾತಿಗೆ ಕಿವಿಗೊಟ್ಟು
ಅಪಾರ್ಥದಲಿ ದೂರಾದೆಯಲ್ಲಾ
ಇದು ಯಾರ ತಪ್ಪು?
‌ ‌ ‌‌

- ಮಾದುಜಗದಾಳ

22 Mar 2017, 09:44 pm

ಅನ್ನವಾಗದ ಕವಿತೆಯ ಪದಗಳು

ನಾ ಕವಿತೆ ಬರೆಯುವಾಗೊಮ್ಮೆ
ಆಕಾಶದ ನೀಲಿ ಕಪ್ಪಿಡುತ್ತದೆ!
ಸೊಂಟ ಮುರಿದುಕೊಂಡ ಕಾಮನಬಿಲ್ಲು
ಅಧ೯ ಚಂದ್ರನ ತುದಿಗೆ ನೇಣು ಬಿಗಿದುಕೊಳ್ಳುತ್ತದೆ!

ಹಸಿದ ಹೊಟ್ಟೆಗೆ ಅಗುಳು ಅನ್ನವಾಗದ
ನನ್ನ ಕವಿತೆಯ ಪದಗಳು
ಉರಿಯೋ ಸೂಯ೯ನಿಗೆ ಕೆಂಡವಾಗುತ್ತವೆ!
ನಕ್ಷತ್ರಗಳು ಎದೆಯಿರಿಯುವ ಸಿಟ್ಟಿನಲಿ
ಅಲ್ಲಿಂದಲೇ ಕಣ್ಣು ಕೊರೆಯುತ್ತವೆ!

ನಾ ಕವಿತೆ ಬರೆಯುವಾಗೊಮ್ಮೆ
ಹೂವು ಗಭ೯ಪಾತಕ್ಕೊಳಗಾಗುತ್ತದೆ!
ನೊಂದವರ ಸತ್ತ ಕಣ್ಣುಗಳೊಳಗೆ
ಬೆಳದಿಂಗಳ ಬಿತ್ತದ ನನ್ನ ಕವಿತೆಯ ಕಂಡು
ದೀಪದ ಬತ್ತಿ ಬಾಣವಾಗಿ ನಾಟುತ್ತದೆ
ಅದರೊಳಗಿನ ಎಣ್ಣೆ ಉಸಿರುಗಟ್ಟಿಸಿ ಕೊಲ್ಲುತ್ತದೆ!

- ಮಾದು ಜಗದಾಳ (ಚಿಮ್ಮಡ )

- ಮಾದುಜಗದಾಳ

22 Mar 2017, 09:42 pm

ಜಗದಾಳ

ಜಗದ ಜನರ ಮೆಚ್ಚಿಸಬೇಕಿಲ್ಲ ....
ನನ್ನ ನಾನು ಅರಿತರೆ ಸಾಕು....
ಜಗದ ಜನರ ನಂಬಬೇಕಿಲ್ಲ....
ನನ್ನ ನಾನು ನಂಬಿದರೆ ಸಾಕು...
ಯಾರಿಗೆ ಯಾರು ಏನು ಅಲ್ಲ ....
ನನಗೆ ನಾನೇ ಎಲ್ಲಾ ....
ನನ್ನವರು ಎಂದು ನಂಬಿ ಕೇಡಬೇಡ ...
ನನ್ನವರತರ ನೀ ...
ನಟನೆಯ ನಂಬಿಕೆ ಮಾತ್ರ ಸಾಕು ಇನ್ನೂ ...
ರಚನೆಃಮಾದು ಜಗದಾಳ

- ಮಾದುಜಗದಾಳ

22 Mar 2017, 09:37 pm

ಗೆಳತನ

ನಿನ್ನ ನಗುವ ನೋಡಿದ
ಮೊದಲ ಕ್ಷಣವೇ ನನ್ನ
ಕಣ್ಣಲ್ಲಿ ಸೆರೆಯಾದೆ ನೀನು.

ನಿನ್ನಲ್ಲಿ ಮಧುರವಾದ
ಸ್ನೇಹವೆಂಬ ಭಾವನೆಯ
ಬಯಸುವ ಗೆಳತಿ ನಾನು.

ಇರಬಹುದೇ ಸ್ನೇಹಿತೆಯಾಗಿ ನಾನು
ಒಂದು ಜನ್ಮವ ಕಳೆದರೂ
ಮರೆಯುವುದಿಲ್ಲ ನಿನ್ನ ಗೆಳೆತನವ ನಾನು.

- ಚುಕ್ಕಿ

22 Mar 2017, 09:15 pm