ಸುಮ್ಮನೆ ಸತ್ತು ಬಿಡಿ
ಏಕಾಂತದೆ ಮನದೊಳಗೆ ಬಂದ ಕನಸನ್ನು
ನನಸಾಗಿಸುವ ನವ್ಯ ಚಿಂತನೆಗಳೇ...
ಜಾತಿಗಳು ಮತವಾಗತೊಡಗಿದೆ
ನೀತಿ ನಿಯಮ ತಪ್ಪಿದೆ.
ಬೆಳಕನ್ನೂ ಕ್ಷಣದಲ್ಲಿ ಕತ್ತಲಾಗಿಸುವ
ಕಂಡೂ ಕಾಣದ ಕೈಗಳು
ಕಾಣದಂತೆ ವ್ಯವಸ್ಥೆಯ
ತಮ್ಮ ಕಪಿಮುಷ್ಠಿಯಲ್ಲಿ ಹಿಡಿದು
ಕೊಂಡಿದೆ... ಅಯ್ಯೋ ಗಟ್ಟಿಯಾಗಿ
ಹೇಳದಿರಿ ಸಮತಟ್ಟವಾದ ಭುವಿಯಲ್ಲಿ
ಗುಂಡಿಗಳು ಬಿದ್ದಿವೆ. ..
ನಿಜ ಸುಳ್ಳು ಎಲ್ಲರಿಗೂ ಗೊತ್ತಿಲ್ಲವೆಂದೇನಲ್ಲ
ಕರ್ತವ್ಯದ ಚುಕ್ಕಾಣಿ ಹಿಡಿದಿರುವ
ಕೈಗೆ ಸಂಕೋಲೆ ತೊಡಿಸಿ ಅಧಿಕಾರ
ನೀಡಲಾಗಿದೆ...
ಅಂದ್ಯಾರೋ ಹೇಳಿದ ಮಾತು
ಇಂದು ನಿಜವೆನಿಸತೊಡಗಿದೆ
ಬದುಕಬೇಕೆಂದರೆ ಜಗದ
ಜನರೊಳಗೆ ಮಾತು ಬೆಳ್ಳಿ ಅಲ್ಲ ( ತಳ್ಳಿ)
ಮೌನ ಬಂಗಾರವಾಗಿದೆ...!!
ಅನು..
ನಾನಾಗ ಚಿಕ್ಕವನಾಗಿದ್ದೆ
ಆಳವಾಗ ಸ್ನೇಹವಿರುತ್ತಿತ್ತು
ಹೊಡೆದಾಟ ಬಡಿದಾಟ ದೂರು ಚಾಡಿ
ಇಂದಿನಂತೆ ಅಂದೂ ಇರುತ್ತಿತ್ತು
ಆದರೆಂದೂ ಸ್ನೇಹ ಕುಂದುತ್ತಿರಲಿಲ್ಲ
ಪ್ರೀತಿಗೀತರ ಬರವಿರಲಿಲ್ಲ
ಗೆಳೆಯರನೇಕ ಈಗಲೂ ಇದ್ದಾರೆ
ಆದರೆಲ್ಲೂ ಸ್ನೇಹದ ಸುಳಿವಿಲ್ಲ
ಎಲ್ಲಾದರೂ ಮಿತ್ರರ ಮಿಲನವಾದರೆ
“ಹಾಯ್ ಬಾಯ್” ಹೇಳಿ ಮುನ್ನಡೆಯುತ್ತಾರೆ
ಸಭೆ ಸಂಭ್ರಮ ನಡೆದರೆ
ಹಬ್ಬ ಪರ್ವದ ದಿನ ಬಂದರೆ
ಹುಟ್ಟು ಸಾವಿನ ಸಂದರ್ಭಗಳಲಿ
ಅಥವಾ ಯಾವುದೇ ಭಾನುವಾರ
ರಿಂಗಣಿಸುತ ಒಂದು ‘ಕರೆ’ ಬರುತ್ತದೆ
ಇಲ್ಲವೆಂದರೆ ಒಂದು ಎಸ್ಎಂಎಸ್
ಬಹುಶಃ ನೆಂಟಸ್ತಿಕೆಗಳೀಗ ಬದಲಾಗುತ್ತಿದೆ
ಅನು..
ಇಬ್ಬರು ಪ್ರೇಮಿಗಳು ಅವರ
ವಯಸ್ಸು ಆಗಿತ್ತು ಅರವತ್ತು.
ತಾತ ಇದ್ದರು ಊರಿನಲ್ಲಿ
ಅಜ್ಜಿ ಇದ್ದರು ಮಗನ ಮನೆಯಲ್ಲಿ.
ತಾತ ದಿನ ಕರೆ ಮಾಡುತ್ತಿದ್ದರು ಅಜ್ಜಿಗೆ
ಅಜ್ಜಿ ದಿನಾಲು ತಾತ ಕರೆ ಬರುವ ಸಮಯಕ್ಕೆ
ಸರಿಯಾಗಿ ಚನ್ನಾಗಿ ರೆಡಿಯಾಗಿ ಕೂರುತ್ತಿದ್ದಳು
ಫೋನ್ ನಲ್ಲಿ ಮಾತಾಡಲು.
ಇದನ್ನು ದಿನಾ ಗಮನಿಸುತ್ತಿದ್ದ ಮಮ್ಮಗಳು
ಕೇಳಿದಳು ಅಜ್ಜಿಯಾಕೆ ನೀನು ದಿನ ಕರೆಬರುವ
ಸಮಯಕ್ಕೆ ರೆಡಿಯಾಗಿ ,ಹೂ ಮುಡಿದು ,ಬೊಟ್ಟಿಟ್ಟು,ಬಳೆ ತೊಟ್ಟು
ಕೂರುತ್ತಿಯಾ ಎಂದು.
ಅಜ್ಜಿ ಹೇಳಿದಳು ಮಗು ನಿಮ್ಮ ತಾತ
ನನ್ನನು ಮದುವೆಯಲ್ಲಿ ಈ ರೀತಿಯೆ
ನೋಡಿದರು ಅವಗಿಂದ ದಿನಾಲು ಈಗೆ
ಅವರಿಗಾಗಿ ರೆಡಿಯಾಗೋದು ನನಗಿಷ್ಟ ಎಂದು.
ಆಗ ಮಮ್ಮಗಳು ಆದ್ರೂ ಅಜ್ಜಿ ನೀನು
ತಾತನಿಗೆ ಕಾನಲ್ವಲ್ಲ ಅದ್ರಲ್ಲೂ ಅವ್ರಿಗೆ
ಈಗ ಕಣ್ಣು ಸಹ ಕಾಣಲ್ಲ ಎಂದಳು.
ಹಾಗ ಅಜ್ಜಿ ನಗುತ್ತ ಮಗು ನಂಗೂ ಗೊತ್ತಮ್ಮ
ತಾತನಿಗೆ ನಾನು ಕಾಣಲ್ಲ, ಕಣ್ಣು ಕಾಣಲ್ಲ ಅಂತ ಅವ್ರು ನನ್ನಕಣ್ಣಿಂದ ನೋಡಿ ಇಷ್ಟ ಪಟ್ಟಿಲ್ಲ ಮನಸ್ಸಿನಿಂದನೋಡಿ ಇಷ್ಟ ಪಟ್ರು
ಈಗ್ಲೂ ಹಾಗೇ ನೋಡ್ತಾರೆ.
ಅವ್ರು ನೋಡಿದ್ರು ನೋಡಿಲ್ಲ ಅಂದ್ರು ನಾನು
ಅವರಿಗಾಗಿ ರೆಡಿ ಆಗ್ತೀನಿ ಅವ್ರು ನನಗಾಗಿ
ಕರೆ ಮಾಡ್ತಾರೆ ಫೋನ್ ನಿಂದ ಅಲ್ಲ
ಪ್ರೀತಿಯಿಂದ ಎಂದಳು.
ಅಷ್ಟರಲ್ಲಿ ತಾತನ ಕರೆ ಬಂತು ಅಜ್ಜಿ
ಓಡಿ ಹೋದಳು ಮಾತಾಡಲು.
ಪ್ರೀತಿ ಇಬ್ಬರು ವ್ಯಕ್ತಿಗಳ ಮಧ್ಯೆ ಅಲ್ಲ
ಎರಡು ಹೃದಯಗಳ ಮಧ್ಯೆ.........
ಕೈ ತುತ್ತ ತಿಂದ ಶ್ವಾನವು
ಯಜಮಾನನ ಕಾಲೇ ಕಡಿವಂತೆ
ಬೆವರೆ- ನೀರಾಗಿ ಹರಿದು
ಬೆಳೆದ ಮರವು,ಒಡೆಯನ
ಶಿರದ ಮೇಲೆರಗುವಂತೆ
ಬೇಲಿಯೇ ಎದ್ದು ಹೊಲ ಮೇಯ್ದಂತೆ
ಹಿಂಡಿನಿಂದ ಕುರಿ ಕದ್ದ ತೊಳದಂತೆ
ಮನೆಯಿಂದ ಅಗಲಿಸಿತು ಮನವ