Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸುಮಾರು ದಿನಗಳಿಂದ ನಿನ್ನನ್ನು..

ಸುಮಾರು ದಿನಗಳಿಂದ ನಿನ್ನನ್ನು ಕಣ್ಣಾರೆ ನೋಡಬೇಕೆಂಬ ನನ್ನ ಆಸೆ ಈಡೇರುವ ಸಮಯ ಸಮಿಪಿಸುತ್ತಿದೆ .. ಗೆಳತಿ. ಆದರೂ ನಿನ್ನ ನಗು ಮೊಗ. ನಿನ್ನ ಅಧರ. ನಿನ್ನ ನಯನ..ನಿನ್ನ ಮೊಗ ಅರಳಿರುವ ಹೂ..ಮಿನುಗುವ ತಾರೆಯಂತೆ ನಿನ್ನ ನಯನ..ನೋಡಲು ಕಾತರ ..ಒಂದೇ ಒಂದು ಬಾರಿ ಆದರೂ ನಿನ್ನನ್ನು ನೋಡುವ ನನ್ನ ಈ ಮಹದಾಸೆ ನೆರವೇರಿಸು, ಜೀವನವೆಲ್ಲ ನಿನ್ನ ನೆನಪಲ್ಲೇ ಕಳೆದು ನಿನಗೆ ಎಂದಿಗೂ ಚಿರಋಣಿಯಾಗುವೆ..
ಅನು..

- Anu...

14 Mar 2017, 07:21 pm

ಮರಳಿ ನೀ ಬರುವ ದಿನದ...

ಮರಳಿ ನೀ ಬರುವ ದಿನದ
ನಿರೀಕ್ಷೆಯಲ್ಲಿ ಎಷ್ಟೂಂದು
ಸಡಗರ ಗೊಂಡಿದೆ ನನ್ನ ಮನ

ನಿನ್ನಿಗಿಷ್ಟದ ಸಂಗಂತಿಗಳ ಸಂತೋಷ
ಗಳ ಬೇಕು ಬೇಡಗಳ ಸಂಗ್ರಹದಿ
ಮೆಲುಕು ಹಾಕುತ್ತಿದೆ ಆ ದಿನಗಳ

ನೆನಪಿನ ಅಂಗಳದಿ ಅಡ್ಡಾಡುತ್ತಿದೆ
ನಿನ್ನ ಕಂಡ ಮೊದಲ ದಿನದ ಆಭೂತ
ಪೂರ್ವ ಆ ಕ್ಷಣ

ಅಯಸ್ಕಾಂತ ಸೆಳೆತದ ಕಂಗಳು
ಕೆಂಪು ರಂಗಿನ ತುಟಿಗಳು ಹೊಂ
ಬಣ್ಢದ ಕದಪುಗಳು

ಅಂದದ ಮೊಗದಲ್ಲಿ ಪೂರ್ಣ
ಚಂದಿರನ ಕಳೆ ತುಂಬಿಕೊಂಡಿದ್ದ
ಚಂದ್ರಮುಖಿ

ಸೌಂದರ್ಯದ ಗಣಿ ನೀ ಅಂದೇ
ಆದೆ ನನ್ನ ಎದೆ ಅರಮನೆಯ
ಮಹಾರಾಣಿ

- Anu...

14 Mar 2017, 07:18 pm

ಭಾಸ್ಕರ

ಮೂಡಣದಿ ಮೂಡುತಿಹನು ಭಾಸ್ಕರ
ಜಗವ ಬೆಳಗುವ ನಿನಗಿದೋ ನಮಸ್ಕಾರ

ಹುಲ್ಲುಗಳಿ ಇಬ್ಬನಿಯ ವಜ್ರದ ಹಾರ
ಅಲ್ಲಲ್ಲಿ ಹಕ್ಕಿಗಳ ಚಿಲಿಪಿಲಿಯ ಕಲರವ

ತೂಲಗುವನು ಭೂಮಿಯ ಅಂಧಕಾರ
ಜೀವಸಂಕುಲಗಳಿಗೆ ಜೀವಾಧಾರ
ಕೊಡುವನು ರೋಗಕ್ಕೆ ಔಷಧಿಯಂತೆ ಪರಿಹಾರ

- ಅರುಣ್. ಕೆ. ಗಟ್ಟಿ. ಕಾಪಿಕಾಡ್

14 Mar 2017, 02:55 pm

ಹಲ್ಕಾ ಕವನ

#ಹಲ್ಕಾ_ಕವನ

ಶಾಂತ ಕಡಲೊಳಗೆ ಅವಳೊದೊಂದು
ವಿನಾಃ ಕಾರಣ ಯುದ್ಧ ಜರಗುತ್ತದೆ
ತೊಟ್ಟಿಲ್ಲಲ್ಲಿದ್ದ ಸೌಮ್ಯತೆಯೊಂದು
ಬೆಚ್ಚಿ ಬೀಳುತ್ತದೆ...!!

ಕಪ್ಪು ಹುಡುಗನ ಸಿಗರೇಟು
ಮುತ್ತಿಟ್ಟ ಮಸಿತುಟಿಯೆಂದರೆ
ಅವಳಿಗೆ ಅದೇನೋ ಮೋಹ
ಕಚ್ಚಿ ಹೋಗುತ್ತಾಳೆ ಅದು ಕೂಡ
ಅರಿವೇ ಆಗದೇ..

ನಿಮಿಷಗಳ ತರುವಾಯ
ಎಚ್ಚೆತ್ತರೆ ಅದೇ ಗುಳಿಕೆನ್ನೆಯ
ಸುಗಂಧ ಕಿಟಕಿ ಸಂಧಿನೊಳಗೆ
ಪಸರಿಸುತ್ತದೆ
ಮುಂದಿನ ನಿದ್ದೆಗೆಲ್ಲಾ ಭಗ್ನಪ್ರಾಪ್ತಿ.!

ಸಂವೇಗಗಳ ಲೆಕ್ಕ ಹಾಕುವ
ಅವಳೊಳಗಿನ ಬಡಿತಗಳು
ಚೂರು ತಪ್ಪದೇ ಕಾಡಲು
ಶುರುವಿಡುತ್ತದೆ
ನಿಮಗೇನು ಗೊತ್ತು!?ಕಾಡಿದರೆ
ಮಾತ್ರ ಕೂಡುವ ಫಲ ದೊರೆಯುವುದು.!!


#ಅವಿಜ್ಞಾನಿ

- ಅವಿಜ್ಞಾನಿ

14 Mar 2017, 01:06 pm

ಮೌನ

ಮೌನವಿOದು ನನ್ನ ಕೊOದು
ನಿನ್ನ ಕಡೆಗೆ ಸೆಳೆಯುತಿದೆ
ನಾನಿರುವೆ ನಿನ್ನ ಕಾಯಲೇಂದು .

ನಿನ್ನ ಮೊಗವ ನೇರಾವಾಗಿ
ನೋಡಲು ಆಗುತಿಲ್ಲಾ .....
ನನ್ನ ಕಣ್ಣ ತೋರಲಾಗುತ್ತೀಲ್ಲ .

ಎಂದೂ ನಿನ್ನ ಬಿಡನೆOಬ
ಬರೆವಾಸೆ ನಿನ್ನಲ್ಲಿ .......
ಎಂದಾದರೂ ನಿನ್ನ ಸೇರುವೆನೆOಬ
ಆಸೆ ನನ್ನಲ್ಲಿ ...........

ಕಾಯಲೇನು ಒಂದು ಯುಗವು ನಾನು
ಎಂದು ನಿನ್ನ ಪ್ರೀತಿ ನನ್ನ ಕೇಳುತಿದೆ .
ಉತ್ತರ ನೀಡೇ ಗೆಳತಿಯೇಂದು .

ನನ್ನ ಬಳಿ ಇಲ್ಲ ಅದಕ್ಕೆ ಉತ್ತರ
ಯಾಕೆOದರೆ ಈ ಜಗವು ನನ್ನ
ನನ್ನಲ್ಲೆ ಉಳಿಸಿಲ್ಲ ಕಣೋ ......

- ಚುಕ್ಕಿ

14 Mar 2017, 12:46 pm

ಸಾಂಗತ್ಯ ಮೂಡಿ

ತನುವು ಹರಿದು ನಿನ್ನೆಡೆ,
ಮನವು ಎಲ್ಲೆ ಮೀರಿ ಕಾಡಿದೆ,
ಕದಡಿ ಕಾಮನೆಯ ಜೇನನು,
ತುಮುಲ ಹೆಚ್ಚಿಸಿ ಅನುವು ನೀನು..

ಅರಳಿ ಕುಸುಮ ಬಾಲೆ,
ಮುಡಿದು ಜಾಜಿ ಮಲ್ಲೆ,
ಮರುಳು ಮಾಡಿ ಮರದ ಮನವ,
ತೋಳ ತಾಗಿ ತೂಗಿ ತನುವ..

ತಾಳದಿರು ಕೊಂಚ,
ಅವಸರದಿ ಅಪಹರಿಸಿ,
ಆಕಾಂಷೆಗಳ ಗಮಕ ಹಾಡಿ,
ಲಯವು ತಪ್ಪದೆ ಸಾಂಗತ್ಯ ಮೂಡಿ..

-ಕನ್ನಡದ ಭಕ್ತ

- ಕನ್ನಡದ ಭಕ್ತ

14 Mar 2017, 12:39 pm

ಗೆಳತಿ

ಹುಣ್ಣಿಮೆ ರಾತ್ರಿ
ಆ ಚಂದಿರನ ರೀತಿ
ಮಿನುಗುವಳು ಈಕೆ
ನನ್ನ ಪ್ರೇಮ ಸ್ವರೂಪಿ
ಹೆಸರು ಮನಸ್ವಿ
ಸುಂದರ ಸ್ವರೂಪಿ

- Chandan

14 Mar 2017, 12:14 pm

ಹೊರಟಿರುವೆ

ಯಾತಕ್ಕೆ ಈ ಜೀವನ
ಕಣ್ಣೀರಿನಲ್ಲಿ ಕರಗಿ ಹೋಗಿರುವೆ ನಾ .
ಯಾರು ಬೇಡ ನನಗೆ
ಎಂದೂ ನೋಂದಿಲ್ಲ ಈ ಮಟ್ಟಿಗೆ .

ಬರಿಯಲು ಆಗುತ್ತಿಲ್ಲ ಈ ಕವನ
ಕಣ್ಣೀರು ಕೂಡ ಅಡ್ಡಿ ಬಿದ್ದಿದೆನಾ .
ಕರಗಿ ಹೋಗುವ ಕಾಲದ ಮುಂದೇ
ತಲೆ ಬಾಗಿ ಕಣ್ಣೀರಿಡುತ್ತಿರುವೇ .

ನೂರು ಕಷ್ಟ ಬಂದರು ನಗುತಿದ್ದೇ ನಾ
ಆದರೇ ಆ ನಗುವಿಗೂ ನನ್ನ ಬಳಿ ಬರಲು
ಇಷ್ಟವಾಗುತ್ತಿಲ್ಲ .
ನನ್ನ ಕಣ್ಣಿಗೂ ಬೆಸರವಾಯಿತೆನೊ ಅತ್ತು ಅತ್ತು
ನನ್ನನ್ನೇ ಬೈಯುವಂತಿವೇ .

ಯಾರು ಇಲ್ಲದ ಮೌನದೂರಿಗೆ
ಬಂದುವಾಗಿ ಹೊರಟಿರುವೆ ............

- ಚುಕ್ಕಿ

14 Mar 2017, 10:27 am

ಪ್ರೀತಿಯ ರಂಗು

ಏಳು ರಂಗಂತೆ ನಿನ್ನ ಪ್ರೀತಿಯ ರಂಗು
ಬಾನ ಏರೋದು ಮನದ ಆಸೆಯ ಕಂಡು!!
ಕಂಡ ಕನಸೆಲ್ಲ ಗರಿಗೆದರಿ ಕುಣಿದಾಡಿದೆ
ನನ್ನ ತನುವೀಗ ರೆಕ್ಕೆ ಬಿಚ್ಚಿ ಹಾರಾಡಿದೆ!!

ನೀನು ಸನಿಹಕ್ಕೆ ಬಂದಾಗ ನಾ ಬೆವರಿದೆ
ಈ ಒಲವಲ್ಲಿ ಬಿಸಿ ಉಸಿರು ಬೆರೆತಂತಿದೆ!!
ನಿನ್ನ ಪ್ರೀತಿಯ ಹೊಂಗಿರಣಕ್ಕೆ ನಾ ಸೋತರೆ
ನನ್ನ ಒಲವಿಂದ ಹೂ ಮಳೆ ತಾ ಸುರಿವುದು!!

ದಿನ ಇರುಳಲ್ಲಿ ಕನಸಾಗಿ ನೀ ಬಂದರೆ
ಹಗಲೆಲ್ಲ ಭ್ರಮೆಯಂತೆ ನನ್ನ ಕಾಡುವೆ!!
ನನ್ನ ಏಕಾಂತಕೆ ತಂದೆ ನೀ ಕಾಂತಿಯ
ಸುರಿಸಿ ನನ್ನೊಳಗೆ ಹೊಸ ರಂಗಿನ ಪ್ರೀತಿಯ!!

- ಪಿ.ಜಿ.ಜ್ಯೋತಿ

14 Mar 2017, 08:42 am

ಹಲ್ಕಾ ಕವನ

ಈವರೆಗೆ ಅಮಾಯಕನಾಗಿದ್ದ ನನ್ನನ್ನು ಛೇದಿಸಿ ಬಿಟ್ಟ ಅಮಾನುಷ ವಾರ್ತೆ ಅವಳೊಂದಿಗೆ ಕಳೆದೊದದ್ದು ಎಂದೇಳುವಾಗ ನನ್ನ ವಯಸ್ಸಿನ ಪರಿಧಿಯು ಒಂದು ಹೆಜ್ಜೆ ಮುಂದಿಡುತ್ತದೆ

ಲೆಕ್ಕ ತಪ್ಪಿದ ಅಲೆಗಳ ಎಣಿಕೆ ಶುರು ಮಾಡಿದ ತರುವಾಯ ಅವಳೊಂದು ಕಡಲು ನನ್ನೊಳಗೆ
ಯಥಾಪ್ರಕಾರ ಕನಸಿನ ರಂಗಿನಾಟಕ್ಕೆ ಮುಹೂರ್ತವಿಟ್ಟು ಗತಿಸಿದ ಒಲವನ್ನು ಜೀವಂತವಿರಿಸುವ ಹಟಗಾತಿ..

ಗಾಳಿಗೆ ಸೋತ ಮೋಡದ ಭುಜಬಲದಂತೆ ಅವಳು ಎದೆಯೂರಿನಲ್ಲಿ
ತಾಕಲಾಟಕ್ಕೆ ಎಡೆ ಮಾಡಿಕೊಡುವಾಗ ಇನ್ನೂ ವಿಚಲಿತಗೊಳಿಸುವ ಉಮೇದಿನವಳು
ಕನಸಿಗೆ ಸೋಲಬಾರದೆಂದರೆ ನಿದ್ರಾದೇವಿಯೂ ಮುನಿಸಿಕೊಂಡಿದ್ದಾಳೆ..

ಅವಳ ನೆನಪಗಳು ವಂಚಿಸಿದ ರಾತ್ರಿಗಳೆಲ್ಲವೂ ಕನಸಿಗೆ ರಜೆ ಕೊಡುತ್ತಿತ್ತು
ಹಾಸು ಬೆನ್ನಿಗೆ ಎದೆಗೀರಿನ ಚಿತ್ರಣ ಕೊಡದ ನನ್ನ ಅಲ್ಪಾಯುಷಿ ಬಯಕೆಯೊಂದು ಸೋಲಬಾರದೆಂಬ ನಿಲುವಿನಲ್ಲಿದೆ
ಮುಗಿಲೂರಿನವಳು ಇಷ್ಟಕ್ಕೆ ಒಲವಿನ ಮಗ್ಗುಲು ಬದಲಾಯಿಸುತ್ತಾಳೆ

ಅವಳ ಒಲವೆಂದರೆ ಮರೀಚಿಕೆಯನ್ನೋದು ಪ್ರತಿಬಾರಿ ಸೋಲುವವನಿಗೆ ತಿಳಿದ ವಿಚಾರವೇ ಆಗಿದೆ
ಇಂತಿಷ್ಟು ಕಾಲಾವಧಿಯ ಪ್ರಣಯ ವಿನಿಮಯಕ್ಕೆ ಒಲವೆಂದು ಹೆಸರಿಟ್ಟಿದ್ದಾಳೆ ಅವಳು..

-ಅವಿಜ್ಞಾನಿ

- ಅವಿಜ್ಞಾನಿ

14 Mar 2017, 08:03 am