Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಓ ಪ್ರೇಮವೇ...

"ದೂರವಾಗಿ.. ನೀ_ಇದ್ದರು !
ಒಂದೆ_ಸಮನೇ.. ಕಾಡುತಿದ್ದರು !
ಊಹ_ಪೋಹ ನಿನ್ನ ಕುರಿತು.. ನೂರಾರಿದ್ದರು !
ನಾ_ಅರಿತಿಹ.. ಪರಿಹೆ ನಂಬುವೇ !
ಸದಾ_ನಿನ್ನನ್ನೇ.. ಮನಸಾರೆ ಪ್ರೇಮಿಸುವೇ !!"
"ನಿನ್ನ ಹಾಜರಾತಿ ಎಂದು ತಪ್ಪದು.. ನನ್ನ ಮನದಲ್ಲಿ !
ನನ್ನ ಮನೆ_ಮನದೊಡತಿ ನೀನಾಗುವ.. ಸೂಚನೆ ನೀಡಿಲ್ಲಿ !
ನಿನ್ನ ಹೊರೆತು ಏನು ಬೇಡ !
ನಿನ್ನ ಜೊತೆಯೆ ನನಗೆಲ್ಲಾ ಕೂಡ !
ಯೋಚಿಸೋಮ್ಮೆ ನನ್ನ ಕುರಿತು.. ಓ ಪ್ರೇಮವೇ !!"
ಎಮ್.ಎಸ್.ಭೋವಿ...✍️

- mani_s_bhovi

05 Mar 2023, 02:57 pm

ಬದುಕು..

ಜೀವನವೆಂಬ ಕಾಲ ಚಕ್ರದೊಳಗೆ
ಮಾನವನೆಂಬ ಪಯಣಿಗ
ಉಸಿರೆಂಬ ಸಾರಥಿ ಸಾರೋಟನ್ನು ನಿಲ್ಲಿಸಿದಾಗ ಮಾನವನ ಬದುಕಿನ ಪಯಣವು ಮುಗಿದಿದೆ ಎನ್ನುವುದು ಮನವರಿಕೆ ಆಗುವುದು.
ಸಾರಥಿಯು ಚಕ್ರವನ್ನು ನಿಲ್ಲಿಸುವ ಮೊದಲೇ, ಈ ಕ್ಷಣ ನಿನ್ನದೆಂದು ಅದನ್ನು ಪೂರ್ತಿಯಾಗಿ ಬದುಕಿ ಖುಷಿಯಾಗಿ ಬಾಳುವುದನ್ನು ಕಲಿಯೆಂದು. ಆದರೆ ಈ ಮಂಕು ಮಾನವ ಜನ್ಮದ ಮನುಷ್ಯರು ಜೋಳಿಗೆ ಹಿಡಿದು ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ಅತಿಥಿಗಳು.ಕೆಲವರು ಜೋಳಿಗೆಯಲ್ಲಿ ಹಣ ಆಸ್ತಿ ,ವಿದ್ಯೆ, ಗೌರವ, ಘನತೆ ,ಅಹಂಕಾರ ಹೀಗೆ ಅವರವರಿಗೆ ತೋಚಿದ್ದು ತುಂಬಿಸಿಕೊಳ್ಳುತ್ತಾರೆ. ಆದರೆ ಹೊತ್ತು ತಿರುಗುವ ಕಾಲಚಕ್ರದ ಸಾರೋಟು ಮತ್ತು ಎಲ್ಲವನ್ನೂ ತುಂಬಿಸಿಕೊಳ್ಳುವ ಈ ಜೋಳಿಗೆ ಬಾಡಿಗೆ ಎನ್ನುವುದನ್ನೂ ಮರೆತು ಬಿಟ್ಟು ಮುಂದೆ ಸಾಗಬೇಕೆನ್ನುವ ಸತ್ಯವನ್ನು ಮರೆತು ಬಿಡುತ್ತಾರೆ.

- ಪ್ರಿಯಾಂಕ

05 Mar 2023, 01:39 pm

ಹಂಬಲ

ನಾನಡಿದ ನದಿಯ ತೀರ
ಕೈ ಬೀಸಿ ಕರೆದಿದೆ
ನಾವಾಡಿದ ಆಟವೆಲ್ಲ
ಕಣ್ಮುಂದೆ ಸರಿದಿದೆ

ಒಂದು ಎರಡು ಕಪ್ಪೆ ಚಿಪ್ಪು
ಹೆಕ್ಕಿ ಹೆಕ್ಕಿ ಮನಕೆ ಒನಪು
ನೀರಿಗೆ ಹಾರಿ ಈಜಲು
ಆಟ ಪಾಠ ಎಲ್ಲ ಸೊನ್ನೆ
ಅಮ್ಮ ಬರುವವಳು ಬೈಯ್ಯಲು

ಬಾ ಒಮ್ಮೆ ಮರಳಿ ನೀನು
ನನ್ನ ನಿ ಒಮ್ಮೆಸೇರು
ಇದೇ ನನ್ನ ಆಶಯ
ಬೇಡ ನಿನಗೆ ಸಂಶಯ
ಎಂದಿಹಳು ಪ್ರಕೃತಿ ಮಾತೆ
ನಮ್ಮ ದಾರಿ ಕಾಯುತ್ತ

- Vittal Jore

04 Mar 2023, 02:44 pm

ಆಸೆ...

"ಅವಳ ತುಟಿ_ಅಂಚಿನ ರಂಗೆಲ್ಲವ..
ಅಳಿಸುವಾಸೆ !
ಅವಳ ಮುಂಗುರುಳ_ಸೋಕಿ..
ಮೈ_ಮರೆಯುವಾಸೆ !
ಅವಳ ತೋಳಲ್ಲಿ..
ಶರಣಾಗಿ ಉಳಿಯುವಾಸೆ !
ಅವಳ ಕಂಗಳಲ್ಲಿ..
ನನ್ನೇ_ನಾ ಕಾಣುವಾಸೆ !
ಅವಳ ಅಪ್ಪುಗೆಯಲ್ಲೇ.. ಇರುವಾಸೆ !
ಅವಳ ಒಪ್ಪಿಗೆಯ.. ಕೇಳುವಾಸೆ !
ನನ್ನೊಲವ ಬೀದಿಯಲ್ಲಿ..
ಮನದಾಸೆಗಳ ಸಾಲಿನಲ್ಲಿ....
ಅವಳೇ ಮೊದಲೆನ್ನುವ ವಿಷಯ..
ತಿಳಿಸುವಾಸೆ !!"

- mani_s_bhovi

03 Mar 2023, 10:24 pm

ವಿರಹವ ದ್ವೇಷಿಸು...

ನೀನೇ ಇರಬೇಕು.. ನನ್ನ ಎಲ್ಲಾ ನಿದ್ರೆಯಲಿ...
ನೀನೇ ಬರಬೇಕು.. ಎಲ್ಲೇ ನಾ ಹೋದಲ್ಲಿ...
ತಂಗಾಳಿಗೂ ಬಿಸಿ ಸೋಕಿದೆ.
ನೀ ಸನಿಹ ಸಾಗಿದಾಗ...
ಮಳೆ ಹನಿಯೂ ಮುತ್ತಾಗಿದೆ.
ನಿನ್ನ ಅಂಗಾಲು ತಾಕಿದಾಗ...
ಸ್ವಲ್ಪ ಹುಚ್ಚ ನಾನು.. ಆದರೂ
ತುಸು ಪ್ರೀತಿಸು...
ಸಮೀಪದಲ್ಲೇ ಹಿತವಿದೆ.
ಕೊನೇವರೆಗೂ ವಿರಹವ ದ್ವೇಷಿಸು...
ಎಮ್.ಎಸ್.ಭೋವಿ...✍️

- mani_s_bhovi

28 Feb 2023, 10:37 pm

ಬಂಧ ಅನುಬಂಧ

ಯಾರು ಮಾಡಿದರು ಈ ಬಂಧ..??
ಯಾರನ್ನೋ ಪ್ರೀತಿಸುವುದು ಹೃದಯದಿಂದ..
ಇನ್ಯಾರನೋ ಜೊತೆಯಾಗುವುದು ಅನುಬಂಧ...

ವಿಧಿಯಾಟಕೆ ತಲೆಬಾಗಬೇಕೆ..??
ಪ್ರೀತಿಗಾಗಿ ಹುಡುಕಬೇಕೆ..??
ಎಲ್ಲವನು ಅನುಭವಿಸುತ್ತಾ ಮುಂದೆ ಸಾಗಬೇಕು...

ಜೀವನದ ಪಯಣದಲಿ
ಸಾಕಷ್ಟು ನಿಲ್ದಾಣಗಳು..
ಎಲ್ಲಿ ಕಳೆದು ಹೋಗಿರುವರು ನಮ್ಮವರು..??

ಯಾರಿಗಾಗಿ ಅಲೆದಾಟ..
ಯಾರಿಗಾಗಿ ಪರದಾಟ..
ಪ್ರಶ್ನೆಗಳ ಹಿಂದಿದೆ ಓಟ..

ನೆನ್ನೆ ಇದ್ದವರು ಈಗಿಲ್ಲ..
ಮಾನವ ತನ್ನ ದುರಾಸೆ ಬಿಡಲಿಲ್ಲ..
ಕಾಲಗರ್ಭದಲಿ ಸೇರುವುದೆಲ್ಲ..

ತನುಮನಸು✍️

- Tanuja.K

28 Feb 2023, 09:59 pm

ನೀವು ನಮಗೆ ಯಾಕೆ ಅರ್ಥವಾಗಲಿಲ್ಲ ನೀವು ನಮಗ

ನೀವು ನಮಗೆ ಯಾಕೆ ಅರ್ಥವಾಗಲಿಲ್ಲ

ನೀವು ನಮಗೆ ಯಾಕೆ
ಅರ್ಥವಾಗಲಿಲ್ಲ
ಹೋರಾಡಿದಿರಿ
ಗಲ್ಲಿ ದಿಲ್ಲಿ ಸುತ್ತಿ
ಕುಳಿತಲ್ಲಿ ನಿಂತಲ್ಲಿ ನೆನದು
ಅದೇ ಊರು ಕೇರಿ ಮರೆತು
ನಮಗೆಲ್ಲ ಕನಸು ಚೆಲ್ಲಿ ಜಿಗಿದುಬಿಟ್ಟು
ಜೋಗುಳ ಹಾಡಿ ನೀವು ಬೆಳ್ಳಿ ಚಿಕ್ಕಿ
ಮೂಡಿಸಿ
ಮಗ್ಗುಲಲ್ಲಿ ಮುಳ್ಳಾಗಿ
ಮೂಲೆಗುಂಪು ಮಾಡಿ
ಅಂಗದೊಳಗೆ ಲಿಂಗವ ಹಿಡಿದು ಅನಂತದೊಳು ಮನವ
ಮಡಿಗೆ
ಮನಸೋತಿರಿ ನೀವು
ಯಾರಿಗೆ ಬೇಕು ಅಂಬೇಡ್ಕರ್
ಇರುಳಾಗುವುದನ್ನೇ ಕಾದು
ಪರದೆಯ ಮೇಲೆ ಮಾದಕ ನಗು
ಅದೆಂತಹಾ ಸೇವೆಯ ಸೋಗು ಮಿಂಚಿನ ಸಂಚಾರ
ಅದೆಂತಹ ಹೋರಾಟ
ಹಾಗೆ ಹಾಗೆ ನೀವು ದಣಿವಿಲ್ಲದ ಅಂಗ ಪೂಜೆಯೊಳಗೆ
ಲಿಂಗಪೂಜೆ ಮರೆತೇ ಹೋಯ್ತು
ಆದರೂ ಮತ್ತೇ ಮತ್ತೇ ಅಂಬೇಡ್ಕರ್
ಪ್ರತಿ ಕ್ಷಣವೂ ಸ್ಮೃತಿಯಲ್ಲಿ
ಏನು ಮಾಡಲು ಗದ್ದುಗೆ ಹಿಡಿದಿರಿ
ಏನು ಮಾಡಿದಿರಿ
ಸ್ವಯಂ ಘೋಷಿತ ಬಿರುದುಗಳು
ಬಾವಲಿಯಂತೆ ಜಾತಿ ಹೋರಾಟಕ್ಕೆ ಜೋತು ಬಿದ್ದು
ಏನಾಯ್ತು ಕೊನೆಗೆ
ಜೇನು ಮೆತ್ತಿದ ಅಲಗು
ನೆಕ್ಕಿ
ನಾಲಗೆ ಕುಯ್ದುಕೊಂಡು
ಜನ ದ್ರೋಹಿಗಳಾಗಿ
ಕರ ಪತ್ರ
ಅಯ್ಯೋ
ದೇಹ ಜೀವ
ಕೂಡುವ ಮುನ್ನ ಯೋಚಿಸಲಿಲ್ಲ ಯಾಕೆ ಮನ್ಮಥರುಗಳಾಗಿ ಬಿಟ್ಟಿರಿ
ವೈಭವವ ಹೊದ್ದು
ಗಲ್ಲಿ ಸಣ್ಣದು ಮಾಡಿ ಾದರ ಕಥೆ ದೊಡ್ಡದು
ಮರೆಯಬಾರದಾಗಿತ್ತು
ಗಲ್ಲಿ ನೀವು ಮರೆಯಬಾರದಿತ್ತು
ಅಂಬೇಡ್ಕರ್ ನಮಗೆಲ್ಲ ಗುರುವಾಗಿಬಿಟ್ಟಾಗ
ಹಾಳು ಮಾಡಿ ಹೋಳಾಗಿ
ಹಾಳಾಗಿಹೋಗಿದ್ದೇವೆ
ನೀವು ದ್ರೋಹಿಗಳಾಗಿ ಮಡಿ ಮುಡಿಯಲಿ ಮುಳುಗಿಸಿ ಮೆರೆದು ಬಿಟ್ಟಿರುವದಕ್ಕಾಗಿ
ನಿಮಗೊಂದು ನನ್ನ ಧಿಃಕಾರ ಆಯ್ತಿತು ಈಗಲಾದರೂ ಬನ್ನಿ ಸಂವಿಧಾನವ ಓದೋಣ ಹೊಸ ಬದುಕು ಕಟ್ಟಿಕೊಳ್ಳೋಣ

ಈರಣ್ಣ ಕೋಸಗಿ

- Earanna Kosagi

27 Feb 2023, 03:06 pm

ನೀನೇ ನನ್ನ ನೆಚ್ಚಿನ ಸ್ವಪ್ನ....

ಹರೆಯ ಪುಲ್ಲೂ ಕರಗಿಸಿ
ನಿನ್ನ ಬೆನ್ನಿನ ಬೆವರಾಗಿಸುವೆ...
ಹೃದಯ ಪೂರ್ತಿ ಪ್ರೀತಿಸಿ
ಸದ್ದೇ ಇರದಂತೆ ಮುದ್ದಿಸುವೆ...
ನಿನ್ನೆಸರ ಇಡುವೆ ಮಳೆಯೇ
ನಿಲ್ಲದ ಊರಿಗೆ....
ಬೆಂಬಿಡದೆ ಹಿಂಬಾಲಿಸುವೆ
ನಿನ್ನ ಸಣ್ಣ ಬೈಗುಳಕೆ....
ಪ್ರೀತಿಸು ಒಮ್ಮೆ.. ನೀನೇ ನನ್ನ
ನೆಚ್ಚಿನ ಸ್ವಪ್ನ....
ಸಾಯಿಸು ಒಮ್ಮೆ.. ಹೇಳದೇ
ಸಣ್ಣ ಕಾರಣ....
ಎಮ್.ಎಸ್.ಭೋವಿ...✍️

- mani_s_bhovi

26 Feb 2023, 11:25 pm

ನಿನ್ನ ಭೇಟಿ ಯಾವಾಗ.??

ಸಣ್ಣದೊಂದು ಬೇಸರ ಮೂಡಿದೆ ನಿನ್ನ ಮೇಲೆ..
ನೆನಪಾಗುತ್ತಿಲ್ಲವೆ ನಾನು..?? ಹೇಳು ನೀನು ಈಗಲೆ..
ಯಾಕಾಗಿ ಕಾಯಿಸುವೆ ನನ್ನ ನೀನು..
ಭರವಸೆಯು ಬರಿ ಮಾತಾಯಿತೇನು..
ಸಮಯವಿಲ್ಲವೆ ನನಗೆ ಸಮಯ ನೀಡಲು..??
ಇಷ್ಟೊಂದು ನೋವೇಕೆ ನೀ ದೂರ ಇರಲು..??
ಕಣ್ತುಂಬ ನೋಡುವಾಸೆ ನಿನ್ನ..
ಸನಿಹವಾಗಲು ಏನೋ ಭಯ ಕಾಡಿದೆ ನನ್ನ..
ಕಲ್ಪನೆಯಲಿ ಕಟ್ಟಿರುವ ನಿನ್ನ ನೋಡಲು ಮನ ತವಕಿಸುತಿದೆ..
ಹಾಗಿದ್ದು ಆಗುವ ಭೇಟಿಯಲಿ ಸಣ್ಣದೊಂದು ಅಳುವಿದೆ..
ಏನಾಗಬಹುದು ನೀ ಎದುರಿಗೆ ಬಂದರೆ..??
ಪದಗಳೆಲ್ಲಿಹುದು ಬಣ್ಣಿಸಲು ಸಂತೋಷವೆ ಬರೆ....

ತನುಮನಸು✍️

- Tanuja.K

26 Feb 2023, 11:22 pm

ನಾನು ಪ್ರೀತಿಸುತ್ತೇನೆ ಪ್ರೀತಿಸುತ್ತೇನೆ ನೀವು ಮಾಡಿದ ಮ

ನಾನು ಪ್ರೀತಿಸುತ್ತೇನೆ

ಪ್ರೀತಿಸುತ್ತೇನೆ ನೀವು ಮಾಡಿದ ಮೋಸ ವಂಚನೆ ಸಹಿಸಿಕೊಂಡು

ನಾನು ನುಂಗುತ್ತೇನೆ ನೀವು ಇಟ್ಟ ವಿಷ ಗೊತ್ತಿದ್ದರೂ ಸಹ

ಕುಂಡಿಗೆ ಬರೆ ಹಾಕಿದರೂ ನಂಬುತ್ತೇನೆ ನಮ್ಮವರೆಂದು, ವಿಶ್ವಾಸ ದ್ರೋಹಬಗೆದರೂ ಸಹ

ನಿಮ್ಮ ಪ್ರೀತಿ ಮಾತಲಿ ಹೂಬುನೆಟ್ಟರೂ ಮನಸಿಗೆ ಗಾಯವಾದರೂ ಸಹ

ಬಣ್ಣದ ರಂಗೋಲಿ ಹಿಂದೆ ಮುಂದೆ ಹಾಕಿದಾಗಲೂ ಸಹ
ನಾನು ಬಿಗಿದಪ್ಪಿ ಪ್ರೀತಿಸುತ್ತೇನೆ.

ಜಾತಿಯ ವಿಷ ಬೀಜ ಬಿತ್ತದಾಗಲೂ ಮೀಸಲಾತಿಗೆ ವಿಶ್ವಾಸಘಾತುಕತನ ಮಾಡಿದಾಗಲೂ ಸಹ

ನಾನು ಹೋರಾಟ ಶಕ್ತಿಯನ್ನು ಪ್ರೀತಿಸುತ್ತೇನೆ ಅಭಿಮಾನಪಡುತ್ತೇನೆ
ಅದರ ಫಲಾವಾಗಿ ಬದಲಾದ ಕಾಲಮಾನಕ್ಕೆ ನೀವು ಬದಲಾಗುವಿರಿ ಎಂದು

"ಹೋರಾಟದವಸಾಗರಕ್ಕೆ ಸಾವಿರಾರು ನದಿಗಳು' ಇರುವಾಗ ಬಗುರಿ ಆಟ ಆಡಿಸಿದಾಗ ಗುಟ್ಟು ರಟ್ಟಾಗಿ ಎಷ್ಟು ದಿನ ನೀವು ಗದ್ದುಗೆ ಏರ ಬಲ್ಲಿರೆಂದು
ಅರಿತು ಮೋಸವಾಗುವುದಿಲ್ಲವೆಂದು
ನಿಮ್ಮ ನಡುವೆ ಪ್ರತಿಭಟಿಸಿ ನಮ್ಮ ಬದುಕು ಕಟ್ಟಿಕೊಂಡು

ಮತ್ತೆ ಮತ್ತೆ ಪ್ರೀತಿಸುತ್ತೇನೆ ಪ್ರೀತಿಸುತ್ತಲೇ ಇರುತ್ತೇನೆ
ನೀವು ಬದಲಾಗುವ ತನಕ ಮನುಷ್ಯರಾಗುವ ತನಕ

ಒಂದಿಲ್ಲ ಒಂದು ದಿನ ಬದಲಾಗುವಿರೆಂಬ ನಂಬುಗೆಯಿಂದ

ಪ್ರೀತಿಸುತ್ತಲೇ ಇರುತ್ತೇನೆ
ಬಾಳೇ ಗೊನೆಯಾಗುವ ತನಕ

ಹೋರಾಟಕ್ಕೆ ಫಲದೊರೆಯುವ ತನಕ ನಾನು
ಪ್ರೀತಿಸುತ್ತಲೇ ಇರುತ್ತೇನೆ..

ಡಾ.ಈರಣ್ಣ ಕೋಸಗಿ

- Earanna Kosagi

26 Feb 2023, 01:32 pm