Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮುತ್ತುಗಳನ್ನು ಆಯ್ದುಕೊಡಲೆ

ಮೋಹಿಸಿದಳಾ ಭಾನುಮತಿ ಕರ್ಣನನ್ನು .
ಪತಿಯ ಕೇಳಿದಳು ಕರ್ಣನ ಜೊತೆ
ಪಗಡೆಯಾಡಲು ಇಛ್ಛೆಯಾಗಿದೆ ಎಂದು .

ಸತಿಯು ಕೇಳಿದ ಕೂಡಲೆ ಆ ಕೌರವೇಂದ್ರನು
ಸಿದ್ದ ಮಾಡಿದನು ಪಗಡೆಯಾಟವ
ಪ್ರಾಣಸತಿ ,ಪ್ರಾಣ ಸ್ನೆಹಿತನ ನಡೆವೆ .

ಕೇಳಿದನಾ ಕರ್ಣ ನಾನು ಗೆದ್ದರೆ
ಬಹುಮಾನ ಏನು ಕೊಡುವೆ ಎಂದು .
ಭಾನುಮತಿ ನಸು ನಕ್ಕಿ ನನ್ನ ಕತ್ತಲ್ಲಿನ
ಮುತ್ತಿನ ಹಾರವೇ ನಿನ್ನದಾಗುತ್ತದೆOದು.

ಪಗಡೆಯಾಟ ಮನರಂಜಕವಾಗಿ ನಡೆಯಿತು
ಕೊನೆಗೂ ಸೋತಳಾ ಭಾನುಮತಿಯೂ
ಕರ್ಣ ಕೇಳಿದನು ತನ್ನ ಬಹುಮತಿಯ
ಅವಳು ಕೊಡಲು ಓಪ್ಪಲಿಲ್ಲ .

ಆದರೂ ಕರ್ಣ ಬಿಡದೆ ಅವಳ ಕೊರಳಿಗೆ
ಕೈ ಹಾಕಿ ಮುತ್ತಿನ ಹಾರವನ್ನು ಕಿತ್ತುಕೊOಡನು.
ಇದರಿಂದ ಮುತ್ತುಗಳೆಲ್ಲಾ ನೆಲದಲ್ಲಿ ನಗುತ್ತಾ ಜಾರಿಬಿದ್ದವು .

ಇದನ್ನು ಕಂಡ ದುರ್ಯೋಧನ ಕೇಳಿದನು
ಸ್ನೆಹಿತನನ್ನು ಮುತ್ತುಗಳನ್ನು ಆಯ್ದು ಕೂಡಲೇ
.........................? ಎಂದು .
ಎಂತಹ ಸ್ನೇಹವಿದು ಕೇಳಿದ ಕ್ಷಣವೇ
ಅಚ್ಚರಿಯಾಯಿತು.

- ಚುಕ್ಕಿ

10 Mar 2017, 08:04 pm

ನಾಯಿಪಾಡು

ಧನವಿರುವಾಗ ಬರುವರು ಎಲ್ಲರು,
ಧನಹೀನರಾಗಲು ದೂರ ಸರಿವರು,
ವಯಸ್ಸು ಮಾಗಲು, ಹಾಸಿಗೆ ಹಿಡಿಯಲು,
ತಿರುಗಿ ನೋಡುವರಿಲ್ಲ ನಿನ್ನೆಡೆಗೆ,
ಈ ಜೀವನವು ನಾಯಿಪಾಡು ಕಟ್ಟಕಡೆಗೆ,

ದೇಹದಲ್ಲಿ ಯೌವನವಿರಲು,
ತೋಳಿನಲ್ಲಿ ಬಲವಿರಲು,
ಖಜಾನೆಯಲ್ಲಿ ಧನವಿರಲು,
ಮುತ್ತುವರು ಎಲ್ಲ ನಿನ್ನ,
ಹಾಡಿ ಹೊಗಳುವರು ಪ್ರತಿ ಕ್ಷಣ.

ಒಡಹುಟ್ಟಿದವರರೊಂದಿಗೆ ವಾತ್ಸಲ್ಯ ಬೆಳಸಿದೆ,
ಬಂಧು ಬಾಂಧವರನ್ನು ನನ್ನ ವರೆಂದೆ,
ಮಿತ್ರ ರೊಂದಿಗೆ ಕೂಡಿ ಆಡಿ ನಲಿದೆ,
ಅಂದು ನಿನ್ನನ್ನು ಎಲ್ಲರೂ ಬೆರೆತರು,
ಹೀಗೇಕೆ ಇಂದು ದೂರಾಗುತಿಹರು.

ದೇಹ ಮುಪ್ಪಾಗುವುದು ಕಳೆದಂತೆ ವರುಷಗಳು,
ಸಾಲಾಗಿ ಬರುವವು ನಿರಂತರ ರೋಗಗಳು,
ಅರಿತರೂ ಹತ್ತಿರ ಸುಳಿಯುವುದಿಲ್ಲ ಬಂಧಗಳು,
ನೋವಿನಲಿ ದಿನಗಳು ಕಳೆಯುವವು ನಿರಂತರ,
ಸಾವು ಕೂಡ ತಕ್ಷಣದಲಿ ಬರುವುದಿಲ್ಲ ಹತ್ತಿರ.

- ರವೀಂದ್ರಬಾಪೂರ(GNL)

10 Mar 2017, 07:07 pm

ಕಾಲದ ಒಲವು

ಬಳ್ಳಿ ಮರಕ್ಕೆ ಹಬ್ಬಿ
ಮರವು ಒಲವಿಂದ ಅಪ್ಪಿ
ಎರಡೂ ಪ್ರೀತಿಲಿ ಹಿಗ್ಗಿ
ಬೆರೆತ ಕಾಲವೇ ಸುಗ್ಗಿ!!

ಬೆವರ‌ ಹನಿಗಳ ಅಳಿಸಿ
ಬಿಸಿಲ‌ ಬೇಗೆಯ ಮರೆಸಿ
ಬೆಚ್ಚಗಿನ ಸುಖಕಾಗಿ ತನು
ಬಯಸೋ ಕಾಲವೇ ಮಾಗಿ!!

ಸುಗ್ಗಿ ಮಾಗಿಯ ನಡುವೆ
ಹಿಗ್ಗಿ ತೇಲುತ ತನುವು
ಬಯಸಿ ಬಂದಿದೆ ನಿನ್ನ
ಒಲವ ಬಯಕೆಯ ಹೊತ್ತು!!

ನೆತ್ತಿ ಸುಡುತಿಹ ಬಿಸಿಲ
ಬೇಗೆ ತಡೆಯಲು ಇರುಳ
ಇರುಳ ತಿರುವಲೂ ನೆರಳ
ಅರಸಿ ಬಂದಿದೆ ಮನವು!!

ತನುವ ಕಂಪನಗೊಳಿಸ
ಮಳೆಯ ಸಿಂಚನವಿರಿಸಿ
ಬಾ ಬಂದು ಸೇರಿಕೋ ನೀ
ಎಂದೆನ್ನ ಒಲವು ಕರೆದಿದೆ ನಿನ್ನ!!

- ಪಿ.ಜಿ.ಜ್ಯೋತಿ

10 Mar 2017, 05:58 pm

ಚಟ....

ಚಟವಿಲ್ಲ ನನಗೆ
ಹೀರಲು ಶೇಂಧಿ,
ಸೆದಲು ಬೀಡಿ,
ಹಾಕಲು ಎಲೆ ಅಡಿಕೆಯ.
ಆದರೆ,
ಆಡುವೆ ಮಾತುಗಳ,
ಕಟ್ಟುತ ನೂರಾರು ಕಥೆಗಳ,
ಚಟವೊಂದು ಬೇಕೇ ಇದಕ್ಕಿಂತ.

#ಮುಚ್ಚುಬಾಯ್ ಮಾನವ...

- MK Reddy

10 Mar 2017, 02:02 pm

ಎಲ್ಲದಕ್ಕೂ ಕಾರಣ ನೀನೇ

ನೀ ಬರುವ ಮೊದಲು
ನಾನು ನಾನಾಗಿದ್ದೆ

ನೀ ಬಂದ ಮೇಲೆ
ನಿನಗಾಗಿ ನಾನಿದ್ದೆ

ನೀ ಹೋದ ಮೇಲೆ
ಯಾರಿಗಿಲ್ಲ ಯಾರು.

- ಪ್ರತಾಪ ರಡ್ಡಿ

10 Mar 2017, 01:12 pm

ನೊಂದ ಪ್ರೇಮಿ

ಪ್ರೀತಿಯಲ್ಲಿ ಮೋಸವು ನಾ ಹೋದೆ
ಹೃದಯವು ಒಡೆದು ಚೂರಾಗಿದೆ

ಪ್ರೀತಿ ಮಾಡುವಾಗ ನಗುತಿತ್ತು ನನ್ನ ಮನ
ಪ್ರೀತಿಯಲ್ಲಿ ಸೋತಾಗ ಅಳುತಿದೆ ನನ್ನ ಮನ

ಕೇಳುತ್ತಿಲ್ಲ ನನ್ನ ಮಾತೇ ನನ್ನ ಹೃದಯ
ಅವಳದೆ ವಿಚಾರದಲ್ಲಿ ಮುಳುಗಿದೆ
ನನ್ನ ಹೃದಯ

ಯರಾದರು ಹೇಳಬನ್ನಿ ಇದಕ್ಕೆ ಬುದ್ಧಿ
ಅದಕ್ಕಾಗಿಯೇ ಬರೆದಿರುವೆ ಈ ಸುದ್ದಿ

- ಮೈನುಸಾಬ

10 Mar 2017, 10:38 am

ಸ್ವಗತ

ಕೊನೆಯುಸಿರಿನಲ್ಲೂ ಕೊನೆಯಾಗದ,
ಕನಸಿನಲ್ಲೂ ಕನವರಿಸುವ,
ಕಲ್ಲೆದೆಯನ್ನೂ ಕರಗಿಸಲ್ಲ,
ಕಾನನದಲ್ಲೂ ಕಾಡುವ,
ಕಿವಿಮುಚ್ಚಿದರೂ ಪಿಸುಗುಡುವ,
ತುಸು ನಗೆಯ, ನಸು ನಾಚಿಕೆಯ,
ಮುದ್ದು ಮೊಗದ ಮೋಹನಾಂಗಿ,
ಮರು ಮಾತಿಲ್ಲದೇ ಮರೀಚಿಕೆಯಾದಾಗ,
ಮನವು ಮರುಗುತ್ತಿತ್ತು,
ಮಾತು ಮೂಕವಾಗುತ್ತಿತ್ತು,
ಭಾವವು ಬತ್ತುತ್ತಿತ್ತು,
ಜೀವನವೇ ಸುಸ್ಥೆನಿಸಿತ್ತು.

ಕಿರುನಗೆಯಿಂದ ಕಂಬನಿಯನೊರಸಿದೆ,
ಪ್ರೀತಿಯನು ಜೀವಧಾರೆಯಾಗಿ ಹರಿಸಿದೆ,
ಜೀವಧಾರೆಯಾಗಿ ಹರಿದ ಜೀವನವನ್ನು,
ಸಾಗರದ ರೌದ್ರ ನರಕಕ್ಕೆ ನೂಕಿದೆ,
ಬಾಳು ಮೌನಗೀತೆಯಾಗಿ ನಲುಗುವ ಸ್ಥಿತಿ,
ಇದೇ ನನ್ನ ಮನೋ ವ್ಯಾಕುಲದ ಬೀಭತ್ಸ ರೀತಿ,
ನಿನ್ನ ಮೋಹಕ ಭಾಷೆಗೆ ಮಾರುಹೋದೆ,
ನನ್ನನ್ನೇ ನಾನು ಮಾರಿಕೊಡೆ.

ನಾನು ದಡ್ಡನೆಂಬ ಅರಿವು ಬಂದದ್ದು ಆಗಲೇ,
ಎಂತಹ ಸ್ಥಿತಿಯಲ್ಲೂ ನಲುಗದ ನಾನು,
ನಿನ್ನ ಮನೋ ವಿಕಾರದ ಅಪದೆಸೆಯಿಂದ,
ನರಳುವ ಸ್ಥಿತಿ ತಂದುಕೊಂಡೆ.

ಕಣ್ಮುಚ್ಚಿದರೂ ನಿರಂತರ ಸುಳಿಯುವ
ಆ ನಿನ್ನ ಚಿರಂತನ ಮೋಹಕ ಪ್ರತಿಮೆ.
ಹೆಣ್ಣಿನ ಬಣ್ಣದ ಮನಸ್ಸನ್ನು ಅರ್ಥ ಮಾಡಿಕೊಳ್ಳದ ನಾನು ಬುದ್ಧಿವಂತನೇ? ಅಲ್ಲ ದಡ್ಡ.
ಅಲ್ಲ ಬುದ್ಧಿವಂತ.
ಬುದ್ಧಿ ಬಂದ ಮೇಲಾದರೂ ಬದುಕು, ಬದುಕಿಸು.
ಬಾಳು ಇಂದು-ನಾಳೆ ಮುಗಿದು ಹೋಗುವದಲ್ಲ.,
ಅದು ನಿರಂತರ, ನಿತ್ಯ ನೂತನ..

ಬಾ.ಸಂ.ಪಾ....

- ಅಭಿರಾಮ್

10 Mar 2017, 09:35 am

ಸುಮಧುರತೆ

ಗುಣದಲಿ ಸಿಹಿತನ
ಹೃದಯದಿ ಸಿರಿತನ
ಮಾತಿನಲಿ ಮಾಧುರ್ಯ
ನೀ ಬೆಳೆಸಿಕೊ

ದಯೆಯನು‌ ತೋರು‌ ಬಾ
ಕ್ಷಮೆಯ ಕೇಳು ಬಾ
ಬದುಕಲಿ ಬಾಂಧವ್ಯ‌ ನೀ ಬೆಳೆಸಿಕೊ

ಮನದಲಿ ಭಾವವು
ಬದುಕಲು ಪ್ರೀತಿಯು‌
ಸಂಬಂಧ ಉಳಿಯಲು‌ ಸಹನೆ ಬೆಳೆಸಿಕೊ

ನಿನ್ನವರು ಯಾರಿಲ್ಲ
ನಿನಗೆ ನೀನೆ ಎಲ್ಲ
ಬದುಕಲು ಒಳ್ಳೆತನ ನೀ ಬೆಳೆಸಿಕೊ

ಬದುಕಿನ ಬಣ್ಣವು
ಹಲವು ವಿಧ ವಿಧ
ನಿನ್ನಾಸೆ ಬಣ್ಣವ ನೀ ಹುಡುಕಿಕೋ

ನೊಂದದೆ ಮುನ್ನಡಿ
ನಲಿಯುತ ಜೊತೆಗೂಡಿ‌
ಮಣ್ಣಾಗೋ‌ ಮುನ್ನವೆ ಕೀರ್ತಿ ಗಳಿಸಿಕೊ...

- kirti

10 Mar 2017, 06:49 am

ಅಂತರಂಗ

ಹಾರುವ ಹಕ್ಕಿ
ಮನುಜನ ಮನಸ್ಸು
ಒಂದೆ ತರ
ಸದಾ‌ ಹಾರುವಾಸೆ
ಎತ್ತರೆತ್ತರ ಹಾರಿ
ಗಗನ ಮುಟ್ಟುವಾಸೆ
ಮನುಜನಲ್ಲಿ
ಸ್ವಾರ್ಥದ ಅತಿ ಆಸೆ
ಬಯಸಿದಷ್ಟು ಬಯಕೆಗಳ
ತಲುಪಲು ಮಾನವೀಯತೆ
ಮರೆಯುವ ದುರಾಸೆ

ಹಾರುವ ಹಕ್ಕಿಗೆ‌
ತಿಳಿದಿಲ್ಲ
ಅದು‌ ತಲುಪಿರುವುದು
ಬಿಳಿ ಮೋಡ
ಅಜ್ಞಾನದಲಿ ಮಾನವನಿಗೆ
ತಿಳಿದಿಲ್ಲ
ಬದುಕೆಂಬುದು ಚದುರಂಗದಾಟ
ತನ್ನ ಆತ್ಮ ದೊರೆತರೆ
ಗೆಲುವು
ದೊರಯದೆ ಹುಡುಕಾಡುತಿರೆ
ಸೋಲು

ಬದುಕು ಭವ್ಯವಾಗಲು
ನಿನ್ನನ್ನು ಮೊದಲು ನೀ‌ ಅರಿ
ತ್ಯಾಗದಲ್ಲಿರೊ ಸುಖವ ಅರಿ
ಬಯಕೆಯೆಂಬ ನೀರ್ಗುಳ್ಳೆ ಮರಿ
ಮಾನವೀಯತೆ ನಿನಗೊಂದೆ ಸರಿ
ಸಾಯುವ ಮುನ್ನ‌ ಆತ್ಮವ‌ ಅರಿ

- kirti

10 Mar 2017, 06:48 am

ಕೆOಪಾದ ಕನ್ನಿOದೆ

ಕೆOಪಾದ ಕನ್ನಿOದೆ ಬಚ್ಚಿಟ್ಟ ಮಾತೋಂದು
ನಿನಗೆ ತಿಳಿಯದ ಹಾಗೆ ನಾ ನೊಡ್ಲ .

ಪ್ರತಿಯೊOದು ಪದವನ್ನು ಮುತ್ತಾಗಿ ನಾ ಮಾಡಿ
ನಿನ್ನ ಅಭಿಷೇಕದ ಹಾಗೆ ಅರ್ಚಿಸ್ಲ .

ನಿನಗೆದುರಿ ನಿನ್ನಿOದೆ ನಿoತಂತ ನೆರಳನ್ನು
ನನ್ನ ರೂಪದಲಿ ಇಂದು ನಾ ತೊರ್ಲ.

ಕಿರು ಕೋನೆ ಅಂಚಲ್ಲಿ ಅಡಗಿರುವ ನಗುವನ್ನು
ಕೆಲವು ಮಾತನು ಹೇಳಿ ಹೊರತರ್ಲ .

ನಿನ್ನ ಕೋಪವನಿಂದು ಗಾಳಿಗೆ ನಾ ತೂರಿ
ನನ್ನ ಮೇಲಿನ ಪ್ರೀತಿ ಕರೆತರ್ಲ .

ನಿನ ರೂಪ ನನಗಿಟ್ಟು ಅದಕೋಂದು ಹೆಸರಿಟ್ಟು
ನಿನ್ನನ್ನು ನನ್ನಲ್ಲಿ ನಾ ಕಣ್ಲಾ .

ಅಡಿಗಡಿಗೆ ಮಣ್ಣಾಗಿ ಪ್ರತಿ ಹೆಜ್ಜೆಗುವ್ವಾಗಿ
ಕಾಲು ಸವಿಯದ ಹಾಗೆ ನಾ ಕಾಯ್ಲ.

ಆ ನೀಲಿ ಗಗನದಲ್ಲಿ ಮಿನುಗುವ ತಾರೆ ನಿನಾದಗ
ನಿನ್ನ ಪ್ರತಿನಿತ್ಯ ನೋಡುವ ಪ್ರೇಯಸಿ ನಾನಾಗ್ಲ.

ಕಡೆವರೆಗೂ ನಿನ್ನ ಹ್ರುದಯದಲ್ಲಿನ ಬಡಿತವಾಗಿ
ನಿನ್ನ ಜೀವನದಲ್ಲಿನ ಪ್ರತಿಯೋಂದು ಕ್ಷಣಕ್ಕೂ
ಜೊತೆಯಾಗ್ಲ ನಿನ್ನ ಅರ್ಧಾoಗಿಯಾಗ್ಲ .

- ಚುಕ್ಕಿ

09 Mar 2017, 11:54 pm