Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಯಾಕಿಷ್ಟು ದ್ವೇಷ ನನಗೆ ಪ್ರೀತಿಯ ಮೇಲೆ?
ಏನು ತಪ್ಪು ಪ್ರೀತಿಯದು?
ಸ್ವತಂತ್ರವದು ಪ್ರೇಮಿಗಳದು
ಹಂಚಲು ಪ್ರೀತಿಯ ಜಗಕೆ..
ಯಾರು ನಾ ಕೇಳಲು?
ಯಾರು ನಾ ಅಡ್ಡಿಪಡಿಸಲು?
ಕೊಂಬೊಂದು ಮೂಡಿರಲು ನನಗೆ,
ಮರುಳಾಗಿ ಯಾವುದೋ
'ಪ್ರೀತಿ ಪ್ರೇಮಗಳಿವು ಪುಸ್ತಕದ ಬದನೆಕಾಯಿ'
ಎಂಬ ಸಿದ್ಧಾಂತಕೆ.
ತಾತ ಹೇಳಿಕೋಟಿಲ್ಲವೇ ನಮಗೆ ?
ಗೆಲ್ಲುವುದು ಹೇಗೆ ಜಗವ ಪ್ರೀತಿಯಲ್ಲೇ.....
ಮತ್ತೆನು ಬೇಕು ನಮಗೆ ಪ್ರೀತಿಸಲು ಪ್ರೀತಿಯಾ?
ಕಿವಿಗಳಿವು ಮುಚ್ಚಿಕೊಳ್ಳೊಣ
ಬೊಗಳೆ ಸಿದ್ಧಾಂತ ರಾಮಣ್ಣರಿಗೆ.
ಪ್ರೀತಿಯದು ಮಧುರ
ಪ್ರೀತಿಯದು ಸುಂದರ
ಪ್ರೀತಿಯದು ನಿಸ್ಕಲ್ಮಶ
ಪ್ರೀತಿಯದು ಪರಿಶುದ್ಧ
ಸಾಲವು ಪದಗಳು ವರ್ಣ್ಣಿಸಲು ಪ್ರೀತಿಯ
ಪ್ರೀತಿಯದು ಅನಂತ.
ಕೊನೆಯದಾಗಿ ಒಂದೇ ಒಂದು ಕೋರಿಕೆ
ಮಾಡದಿರಿ ಪ್ರೀತಿಯ ವ್ಯಾಪಾರ
ಪ್ರೀತಿಯೊಂದೇ ಈ ಜಗಕೆ
ನಿಸ್ಸ್ವಾರ್ಥ ಆಧಾರ.....
- MK Reddy
09 Mar 2017, 09:26 pm
ಎರಡು ಎತ್ತು ಮೇಯಿಲಿಕ್ಕೆವೆ
ಎರಡು ಬೆಕ್ಕು ಊಟಕ್ಕೆ ಕುಂತಿವೆ
ಎತ್ತು ಮೇಯಿತಿಲ್ಲ ತಲೆ ಎತ್ತಿದೆ...
ಬೆಕ್ಕು ತಿನ್ತಿಲ್ಲ ತಲೆ ತಗ್ಗಿಸಿದೆ..
ಎರಡು ಮಾತಾಡೋದಿಕ್ ನಿಂತಿವೆ
ಮೂರು ಗಿಣಿ ಬಂದಿವೆ
ಆರು ಕೋಗಿಲೆ ಜೋತೆಲಿ ಬಂದಿವೆ
ಒಂದು ಆನೆ ಎಳ್ಕೋಂಡ್ ಬಂದಿವೆ
ನೋಡ್ತಿವೆ ನೋಡ್ತಿವೆ......
ಮಾತಡ್ಲಿಕ್ಕೆ ಶುರು ಮಾಡಿವೆ
ಮೋಲಗಳು ಒಡೋಡಿ ಬರ್ತಿವೆ
ಆಮೆಗಳು ನಿದಾನ್ಕೆ ಬರ್ತಿವೆ
ಜಿರಾಪೆ ಜಿಂಕೆ ಕೂಗ್ತಿವೆ
ಸಿಂಹ ಹುಲಿ ಘರ್ಜಿಸ್ತಿವೆ
ಮಾತಾಡೋಣ ಮಾತಾಡೋಣ ಅಂತಿವೆ
ಯಾರು ಮಾತಾಡ್ಲೆಯಿಲ್ಲ....
ಮಾತಾಡ್ಲಿಕ್ಕೆ ಎನು ಇಲ್ಲ....
ಇದನ್ ರಾತ್ರಿ ಮಾತಾಡೋಣ ಅಂತಿವೆ
ರಾತ್ರಿ ಮುಗಿದೆ ಹೋಗಿದೆ...
ಬೆಳಗ್ಗೆ ಕೋಳಿಗಳು ಕೂಗಿವೆ...
ಬೆಳಗ್ಗೆ ಸೂರ್ಯ ಬಂದಾಗಿದೆ....
ಕೋತಿ ಒಂದು ಬೇಗ ಎದ್ದಿದೆ
ಎಲ್ಲೆಲ್ಲೂ ಎಲ್ಲೆಲ್ಲೂ ಸದ್ದು ಸದ್ದು ಅಂತಿದೆ
ಕುರಿ ಮೇಯಿಸುವ ಎದ್ದಾಗಿದೆ
ಇಲ್ಲಿಗೆ ಎಲ್ಲ ಮುಕ್ತಾವಾಗಿದೆ.....
- ಅಗಸ್ತ್ಯ
09 Mar 2017, 08:30 pm
ಈ ಜಗಕೆ ನಾನೇಕೆ ಬಂದಿಹೆನೋ ತಿಳಿಯದದು,
ಇಚ್ಛೆ ಕೇಳುವವರಿಲ್ಲ, ಗುಟ್ಟು ಬಿಚ್ಚುವವರಿಲ್ಲ,
ಮರುಭೂಮಿಯಲಿ ಗೋಳಿಡುವ ಬಿರುಗಾಳಿ ನಾನು, ಬರಿಗಾಳಿ ನಾನು.
ಬಾ. ಸಂ. ಪಾ.
- ಅಭಿರಾಮ್
09 Mar 2017, 07:08 pm
ಆಶ್ವಾಸನೆಗಳ ಮಹಾಪೂರ,
ಅಷ್ಲೀಲ ಮನದ ನೋಟ,
ಬೇಡಿ ಕಾಲ್ ಮುಗಿದು,
ಗದ್ದುಗೆ ಗಿಟ್ಟಿಸಿಕೊಂಡಮೇಲೆ,
ಗುಟ್ಟಾಗೇ ಉಳಿದೀತು,
ಆಶ್ವಾಸನೆಗಳ ಮಹಾಪೂರ.
ಅನುದಾನದ ಭರವಸೆ,
ಶ್ವೇತ ವರ್ಣದ ಉಡುಪು ನೈದು,
ಬಿಳಿ ಬಣ್ಣವ ಮೈಲಿಗೆ ಗೈದು,
ಅಂತರಾಳದಿ ಕ್ರೌರ್ಯವನೊಯ್ದು,
ಸುಟ್ಟು ಬೂದಿ ಯಾಗಿದೆ,
ಅನುದಾನದ ಭರವಸೆ.
ನಡು ಇರುಳಲೂ ಸ್ತ್ರೀ ಭದ್ರತೆ,
ಮಡದಿಯರ ಕೊರಳು ತುಂಬಿಸಲು,
ಜರದಾರಿ ಉಡುಪಿನಾಸೆ ಮೆರೆಸಲು,
ಡಾಬು ಕಟ್ಟಿ, ಮಗಳಿಗೆ ನಾಲ್ಕಾರು ಬಂಡಿಗಳು,
ಸಾಮಾನ್ಯ ಹೆಣ್ಣಿನ ಹರಣ ಇರುಳು ಕರಾಳ,
ಇನ್ನೆಲ್ಲಿಂದಾದೀತು ಸ್ತ್ರೀ ಭದ್ರತೆ.
ಸಮಾಜಮುಖಿ ಇಲ್ಲಾರೂ?
ನಾಡ ಜನತೆಯ ಪ್ರತಿನಿದಿಯು ಯಾರು?
ಮನಸು ಕೂಗಿ ಹೇಳದೆ ಇವರಿಗೆ?
ಅಶ್ವಾಸನೆಗಳ ಕಿಂಚಿತ್ತು ಕಾಳಜಿ ಇಲ್ಲವೇ?
ಕರ್ಮವಿಹುದು ಸಾಹೇಬ ಎಚ್ಚೆತ್ತುಕೊ,
ತಡವಾದೀತು, ಸಮಯ ಬಾರದಾದೀತು,
ಅನ್ಯಾಯಗಳಿಗೆ ಇನ್ನಾದರೂ ಕೊನೆ ಕಂಡುಕೋ...
-ಕನ್ನಡದ ಭಕ್ತ
- ಕನ್ನಡದ ಭಕ್ತ
09 Mar 2017, 05:00 pm
ನಾನು ಈ ಜಗತ್ತಿಗೆ ಪಾದಾರ್ಪಣೆ ಮಾಡಿದಾಗ,
ಅರಿವೇ ಇಲ್ಲದೇ ಅಮ್ಮನುಡಿಯಲ್ಲಿ ಅತ್ತತ್ತು ಹೊರಳಾಡುವಾಗ ಈ ಜಡ ಜಗತ್ತಿನ ಪರಿವೇ ಇರಲಿಲ್ಲ.
ಮುಂಜೋಲಿ ಹೋಗುವಂತ ಪುಟ್ಟ ಹೆಜ್ಜಗಳನ್ನಿಡುವಾಗಲೂ ಅಮ್ಮನ ಕೋಮಲ ತೋಳುಗಳ ತಬ್ಬುಗೆಯ ಒಡನಾಟ,
ಕಾಲೂರಿ ಈ ಜಗತ್ತನ ಸಲುಗೆ ಪಡೆವ ಮನಸ್ಸಿಗೆ
ಶಾಲೆಯ ಸಂಸ್ಕೃತಿಯ ಪರಿಪಾಠ,
ಎದ್ದು ನೋಡುವ ಕಂಗಳಲಿ ಸೂಪ್ತವಾಗಿರುವ ಕನಸಿನ ಛಾಯೆ,
ಕಲಿವ ಬುದ್ಧಿಗೆ ಕಾಣುವ ಸೆಳಕೆಲ್ಲ ವಾಸ್ತವದಂತೆ ಭಾಸವಾದ ಪರಿ,
ಕಾಣುವ ಕಣ್ಣಿಗೆ ನೋಡುವ ಬೆಳಕೆಲ್ಲ ನಸುಕಿನ ಮಸುಕು, ಬೆಳೆಯುವ ಮನಸ್ಸಿಗೆ ಬದುಕಿನ ಸಂಕೀರ್ಣತೆ ಅರಿವು, ಇವೆಲ್ಲದರ ಮಧ್ಯೆ ಬೆಳೆಯುವ ನಾನಾತ್ಮ.
ಬಾ.ಸಂ.ಪಾ
- ಅಭಿರಾಮ್
09 Mar 2017, 04:44 pm
"ಅನ್ಯಾಯಕ್ಕೆ ಎಷ್ಟು ಆತುರವೋ ನ್ಯಾಯಕ್ಕೆ ಅಷ್ಟೇ ಸಹನೆ ಬೇಕು .
ಅನ್ಯಾಯಕ್ಕೆ ತಲೆಯನ್ನು ಚೆಂಡಾಡುವಾಸೆ ಇದ್ದರೆ ನ್ಯಾಯಕ್ಕೆ ಹೃದಯವನ್ನು ಗೆಲ್ಲುವಾಸೆ ಇರಬೇಕು .
ತಾಳ್ಮೆ ನ್ಯಾಯದ ಬುನಾದಿ .
ಕರುಣೆ ಅದರ ಕಿರೀಟ .."
- anand
09 Mar 2017, 01:38 pm
ಕಣ್ಣಂಚಿನಲಿ ತೊಟ್ಟಿಕ್ಕುವ ಕಂಬನಿ ಹಣಿಗಳು
ಮುತ್ತಿನಂತೆ ಮಿಟುಕಾಡಿ, ಅಳುಕಿ, ಬಳುಕಿ ಬಿರುಬಂಡೆಗೆ ಬಡಿದು, ಬಿರಿದು ಹೋದವು.
ಕ್ಷಣಮಾತ್ರದಲಿ ಮನವು ತೇವಭರಿತವಾಯಿತು.
ಬಿರಿದು ಛಿದ್ರಗೊಂಡ ಹನಿಗಳು,
ಒಳಮನಸ್ಸಿನ ಬೇಗುದಿಗೆ ಹಿಡಿದ ಕನ್ನಡಿಯಂತಿದ್ದವು,
ಮನದ ಭಾರ ತಳಮಳಗಳಿಗೆ
ಕಂಬನಿ ಮತ್ತು ಲೇಖನಿ ಸ್ಪಂದಿಸಿದವು.
ಆದರೂ ಲೇಖನಿಯ ಅವಸರಕ್ಕೂ ನಿಲುಕದಂತಹ ಮನೋಸಮರಗಳಿಂದ ನಾನು ಜರ್ಜರಿತನಾಗಿಬಿಟ್ಟೆ,
ಕೊನೆಗೆ ಲೇಖನಿಯ ಅವಸರಕ್ಕೂ ಪೂರ್ಣವಿರಾಮವನ್ನಿಟ್ಟುಬಿಟ್ಟೆ.........
ಬಾ. ಸಂ. ಪಾ.
- ಅಭಿರಾಮ್
09 Mar 2017, 12:30 pm
ಮನವು ಮಾತಾಡುವ ಮುನ್ನ,
ಕಣ್ಣಲಿ ಕನಸಿತ್ತು, ಮನಸಲಿ ಛಲವಿತ್ತು,
ಮಾತಲಿ ಧ್ರುಡತೆ ಇತ್ತು, ನಿರ್ದಾರದಲಿ ಅಛಲತೆ ಇತ್ತು.
ಮನವು ಮಾತಾಡುವ ಮುನ್ನ,
ನಾನು ನಾನಾಗಿದ್ದೆ, ಬಾನು ಮನದುಂಬಿ ನೋಡುತ್ತಿದ್ದೆ,
ತನುವನು ಸೋನೆಮಳೆಗೆ ಚಾಚುತ್ತಿದ್ದೆ,
ಬಾಳನು ಸಂಭ್ರಮಿಸುತ್ತಿದ್ದೆ.
ಮನವು ಮಾತಾಡಿದಾಗ,
ಬಾವದ ಅಲೆಯಲ್ಲಿ ಒಲವು ಮೂಡಿದಾಗ,
ಕಳೆದು ಹೋದೆ, ಕರಗಿ ಹೋದೆ,
ಗುಲಾಮನಾಗಿ ಹೋದೆ.
ನನ್ತನ ನನ್ನಲಿ ಅಳಿಸಿ ಹೋಯಿತು.
ಮನವು ಮಾತಾಡಿದಾಗ,
ಮನವು ಮನದೊಡಗೂಡಿ,
ಮೂಕ ಭಾವಗಳಿಗೆ ಅರ್ಥ ಹುಡುಕುತ್ತಿತ್ತು,
ವ್ಯರ್ಥ ಆಶೆಗಳಿಗೆ ಜೀವ ತುಂಬುತ್ತಿತ್ತು,
ಕನಸು-ನನಸುಗಳ ಅಂತರವನ್ನು ಅಳಿಸಿ ಹಾಕಿತ್ತು.
ಮನವು ಮಾತಾಡಿದಾಗ,
ಮೂರ್ಖ ಮನಕೆ ತನ್ನ ಅಸ್ತಿತ್ವದ ಚಿಂತೆ,
ವಾಸ್ತವದ ಕ್ರೂರತೆಯ ಪರಿ ಮನದ ಭಾವವ ಕದಡಿತ್ತು.
ಎದ್ದು ನೋಡಿದಾಗ ಎಲ್ಲವೂ ಅಯೋಮಯ,
ಭಾವಶೂನ್ಯತೆ ಸಂಧಿಗ್ಧತೆ.
ಎದ್ದೆ, ಹೊರನಡೆದೆ,
ಒಲುಮೆ-ಕಂಗಳ ಚಲುವೆಯೊಡಗೂಡಿ,
ಚಹ ಕುಡಿದು "ಉಫ" ಎಂದೆ.
ಮತ್ತದೇ ಕಣ್ಸಮರ,
ಮತ್ತೆ ಮಾತಾಡಿತು ಮನ,
ಅದು ಯಾವತ್ತು ಹೊತ್ತೊಯ್ಯುವುದೋ ನನ್ನ ಹೆಣ.
ಬಾ.ಸಂ.ಪಾ...
- ಅಭಿರಾಮ್
09 Mar 2017, 12:04 pm
ನನ್ನ ದೇಹದಲ್ಲಿರುವ ಎಲ್ಲ ರಕ್ತವನ್ನು
ಅರ್ಪಿಸಿದೆ ಭಾರತ ದೇಶಕ್ಕೆ
ಒಂದು ಚಿಕ್ಕ ಕಣವು ಕೂಡ
ಉಳಿಸಲಿಲ್ಲ ನನ್ನ ದೇಹಕ್ಕೆ
ಪ್ರಪಂಚದಲ್ಲಿ ಸಾಕಷ್ಟು ಜನ ಸಾಯುತ್ತಾರೆ
ಆದರೆ,ದೇಶಕ್ಕಾಗಿ ಸಾಯುವವರು ಮಾತ್ರ ಹುತಾತ್ಮರೆನಿಸುತ್ತಾರೆ.
- ಮೈನುಸಾಬ
09 Mar 2017, 09:43 am
ನಾ ಕಂಡ ವಿಶ್ವದ ಮೊದಲ ಮಹಿಳೆ ನನ್ನಮ್ಮ...
ಹಸಿವಾದರೆ ತನ್ನೆದೆಯ ಕ್ಷೀರಾಮೃತ ಉಣಿಸಿದ ಮೊದಲ ಮಹಿಳೆ ನನ್ನಮ್ಮ...
ಅಂಬೆಗಾಲಿಟ್ಟು ಎಡವಿದಾಗ ಕೈಹಿಡಿದು ನಡೆಸಿದ ಮೊದಲ ಮಹಿಳೆ ನನ್ನಮ್ಮ...
ನಾ ಕಂಡ ವಿಶ್ವದ ಮೊದಲ ಮಹಿಳೆ ನನ್ನಮ್ಮ...
ತೊದಲು ನುಡಿಯುವಾಗ ತಿದ್ದಿ ಮಾತನಾಡಲು ಕಲಿಸಿದ ಮೊದಲ ಮಹಿಳೆ ನನ್ನಮ್ಮ...
ವಿದ್ಯೆ ಕಲಿಸಿದ ಮೊದಲ ಗುರು ನೀನೆ...
ಬದುಕಲು ದಾರಿ ತೋರಿದ ತಂದೆಯು ನೀನೆ...
ನನ್ನ ಮೊದಲ ಸ್ನೇಹಿತೆಯು ನೀನೆ...
ನಿನ್ನ ಸಮನಾರು ಇಹರು ಈ ಜಗದೊಳು ಸರ್ವವೂ ನೀನೆ ತಾಯಿ.......
- chinmayi
08 Mar 2017, 10:50 pm