Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅವಳೆಂದರೇ...!

" ಅವಳೆಂದರೇ...!
ಹೀಗೆ
ಪ್ರೀತಿ ತುಂಬಿದ ಕಡಲು,
ಅವಳ ಒಡಲು
ಸ್ನೇಹ ತುಂಬಿದ ಮುಗಿಲು,
ಅವಳ ಮಡಿಲು
ನೂರುಕಾಲ
ಸುಖವಾಗಿರಲಿ
ನನ್ನವಳು."
#HRD#

- RAMAPPA DUMMADI

08 Mar 2017, 11:18 am

-:ಮನವು ಮಾತಾಡುವ ಮುನ್ನ:-

ಮನವು ಮಾತಾಡುವ ಮುನ್ನ,
ಕಣ್ಣಲಿ ಕನಸಿತ್ತು, ಮನಸಲಿ ಛಲವಿತ್ತು,
ಮಾತಲಿ ಧ್ರುಡತೆ ಇತ್ತು, ನಿರ್ದಾರದಲಿ ಅಛಲತೆ ಇತ್ತು.
ಮನವು ಮಾತಾಡುವ ಮುನ್ನ,
ನಾನು ನಾನಾಗಿದ್ದೆ, ಬಾನು ಮನದುಂಬಿ ನೋಡುತ್ತಿದ್ದೆ,
ತನುವನು ಸೋನೆಮಳೆಗೆ ಚಾಚುತ್ತಿದ್ದೆ,
ಬಾಳನು ಸಂಭ್ರಮಿಸುತ್ತಿದ್ದೆ.
ಮನವು ಮಾತಾಡಿದಾಗ,
ಬಾವದ ಅಲೆಯಲ್ಲಿ ಒಲವು ಮೂಡಿದಾಗ,
ಕಳೆದು ಹೋದೆ, ಕರಗಿ ಹೋದೆ,
ಗುಲಾಮನಾಗಿ ಹೋದೆ.
ನನ್ತನ ನನ್ನಲಿ ಅಳಿಸಿ ಹೋಯಿತು.
ಮನವು ಮಾತಾಡಿದಾಗ,
ಮನವು ಮನದೊಡಗೂಡಿ,
ಮೂಕ ಭಾವಗಳಿಗೆ ಅರ್ಥ ಹುಡುಕುತ್ತಿತ್ತು,
ವ್ಯರ್ಥ ಆಶೆಗಳಿಗೆ ಜೀವ ತುಂಬುತ್ತಿತ್ತು,
ಕನಸು-ನನಸುಗಳ ಅಂತರವನ್ನು ಅಳಿಸಿ ಹಾಕಿತ್ತು.
ಮನವು ಮಾತಾಡಿದಾಗ,
ಮೂರ್ಖ ಮನಕೆ ತನ್ನ ಅಸ್ತಿತ್ವದ ಚಿಂತೆ,
ವಾಸ್ತವದ ಕ್ರೂರತೆಯ ಪರಿ ಮನದ ಭಾವವ ಕದಡಿತ್ತು.
ಎದ್ದು ನೋಡಿದಾಗ ಎಲ್ಲವೂ ಅಯೋಮಯ,
ಭಾವಶೂನ್ಯತೆ ಸಂಧಿಗ್ಧತೆ.
ಎದ್ದೆ, ಹೊರನಡೆದೆ,
ಒಲುಮೆ-ಕಂಗಳ ಚಲುವೆಯೊಡಗೂಡಿ,
ಚಹ ಕುಡಿದು "ಉಫ" ಎಂದೆ.
ಮತ್ತದೇ ಕಣ್ಸಮರ,
ಮತ್ತೆ ಮಾತಾಡಿತು ಮನ,
ಅದು ಯಾವತ್ತು ಹೊತ್ತೊಯ್ಯುವುದೋ ನನ್ನ ಹೆಣ.
ಬಾ.ಸಂ.ಪಾ

- ಅಭಿರಾಮ್

08 Mar 2017, 11:13 am

ಜಾತಿ

ಎಲ್ಲಿದೆ ಜಾತಿ ತಿನ್ನುವ ಅನ್ನಕ್ಕಿಲ್ಲದ ಜಾತಿ...
ಕುಡಿಯುವ ನೀರಿಗಿಲ್ಲದ ಜಾತಿ...
ಉಸಿರು ನೀಡುವ ಗಾಳಿಗಿಲ್ಲದ ಜಾತಿ...
ಸುಡುವ ಬೆಂಕಿಗಿಲ್ಲದ ಜಾತಿ...
ಉಡುವ ಬಟ್ಟೆಗಿಲ್ಲದ ಜಾತಿ...
ನೀಡುವ ಕೈಗಳಿಗಿಲ್ಲದ ಜಾತಿ...
ಪ್ರಾಣಿ ಪಕ್ಷಿಗಳಿಗಿಲ್ಲದ ಜಾತಿ...

ತಿನ್ನುವ ಅನ್ನಕ್ಕೆ ಕೇಳುವೀರಾ ಯಾವ ಜಾತಿಯ ರೈತ ಬೆಳೆದಿರುವನೆಂದು
ಬೀಸುವ ಗಾಳಿಗೆ ಕೇಳುವೀರಾ ನಿನ್ನದು ಯಾವ ಜಾತಿ ಎಂದು
ಕುಡಿಯುವ ನೀರಿಗೆ ಕೇಳುವೀರಾ ನಿನ್ನದು ಯಾವ ಜಾತಿ ಎಂದು
ಉಡುವ ಬಟ್ಟೆಗೆ ಕೇಳುವೀರಾ ನೀನು ಯಾವ ಜಾತಿಯ ಕಾರ್ಮಿಕನ ಕಲೆ ಎಂದು


ಹಸಿವು ನೀಗಿದರೆ ಸಾಕು...
ದಾಹ ತೀರಿದರೆ ಸಾಕು...
ಮಾನ ಮುಚ್ಚಿದರೆ ಸಾಕು...
ಕಷ್ಟಕ್ಕೆ ದಾರಿ ಸಿಕ್ಕರೆ ಸಾಕು...
ಬೆಚ್ಚಗಿದ್ದರೆ ಸಾಕು...
ಮತ್ತೇಕೆ ನಮಗೆ ಜಾತಿ ಎಂಬ ಪದ ಬೇಕು?

- ಮೈನುಸಾಬ

08 Mar 2017, 11:11 am

ನಾನೊಂದು ಹೆಣ್ಣು

ನಾ ಬರೀ ಭ್ರೂಣವಲ್ಲ
ನಿನ್ನ ಬಯಕೆಗಳ ಪೊಟರೆಯಲ್ಲಿ ಹೊತ್ತಿದ್ದ ಬೆಂಕಿಆರಿಸಲು ಗರ್ಭಕೋಶವ ಪಣಕಿಟ್ಟು ನನ್ನತನವೆಂಬ ನನ್ನನ್ನೆ ಕಳೆದುಕೊಂಡವಳು ನಾನು

ನೀ ಕೊಟ್ಟು ಬಿಟ್ಟುಹೋದ ಕೂಸಿಗೆ ತುತ್ತಿಕ್ಕಲು ಹೆಣಗಾಡಿ ಕೀಚಕರ ದಾಹಕೆ ನೀರೆರೆದು ಕೆಟ್ಟವಳೆಂಬ ಪಟ್ಟ ಹೊತ್ತುವಳು ನಾನು

ಯಾರಿಗೂ ಕಾಣದಂತೆ ದುಃಖಗಳ ಮಗುಚಿಟ್ಟು ಜೀವನದ ಜರಡಿಯಲಿ ಹನಿಗಳು ಮೂಡದಂತೆ ಎದೆಗಪ್ಪಿ ಮುತ್ತಿಟ್ಟು ಮುಸುಕಿನಲಿ ನಿಂತು ಅತ್ತವಳು ನಾನು

ಪುಟ್ಟಕೂಸು ದೊಡ್ಡದಾಗಿ ನಾನಿಂದು ಬೇಡವಾಗಿ ಮುಪ್ಪಿನಲಿ ಮಗನ ನೆನೆದು ಅತ್ತು ಕಣ್ಣೀರಿಟ್ಟು ಜೀವನದ ಪಯಣವ ಮುಗಿಸಿ ಎಲ್ಲರನು ಕ್ಷಮಿಸಿ ಹೊರಟವಳು ನಾನು

ನನ್ನ ಗರ್ಭದಲ್ಲೆ ನನ್ನ ಉಳಿಸಿಕೊಳ್ಳಲು ಸೋತು ಸತ್ತವಳು ನಾನು
ಹೌದು ನಾ ಬರಿ ಭ್ರೂಣವಲ್ಲ ನಾನೊಂದು ಹೆಣ್ಣು

-ಹಂಸಿನಿ

- ವಿಸ್ಮಯ

08 Mar 2017, 09:30 am

ನನ್ನ ಪ್ರೀತಿಗೆಂದೂ ಸಾವಿಲ್ಲ...!!!

ಬೇಸಿಗೆಯ ಬೇಗೆಯಲಿ ಸೂರ್ಯ ಇಂದೇಕೋ
ಮೋಡಗಳ ಮರೆಯಲಿ ಅವಿತಿದ್ದಾನೆ
ಮಳೆ ಹನಿಯ ಮತ್ತಲ್ಲಿ
ಮೈ ಮನವ ತೋಯಿಸಿದ ವರುಣರಾಜ
ಮತ್ತೆ ಸುಮಧುರ ನೆನಪುಗಳ
ಹೊತ್ತು ತಂದಿದ್ದಾನೆ...
ಮಳೆಯಲಿ ನೆನೆಯುತ ನಿನ್ನನು ನೆನಸುತ
ತಂಪು ಗಾಳಿಯಲಿ ಬಿಸಿ ಅಪ್ಪುಗೆ ಬಯಸುತ
ಮುತ್ತಿನ ರೂಪದಲಿ ಮಳೆ ಹನಿ
ಭೂಮಿಯ ಚುಂಬಿಸಿದಾಗ
ಮತ್ತೆರಿಸಿದ ನಿನ್ನ ಚುಂಬನ ನೆನಪಾಯಿತು
ನನ್ನಿಂದ ದೂರ ನೀನಿದ್ದರೆ ಏನಂತೆ...?? 
ನನ್ನೆದೆಯಲಿ ಉಸಿರಾಗಿ ನಿನ್ನದೇ ಉಸಿರಿದೆ... 
ಜೀವನದ ಪ್ರತಿ ಪುಟದಲೂ ನಿನ್ನದೇ ಹೆಸರಿದೆ...
ಹಗಲು ರಾತ್ರಿ ಒಂದೇ ಯೋಚನೆ..
ಮುಗಿಯದ ಮೋಹ ತೀರದ ದಾಹ
ಋತುಗಳು ಬದಲಾಗಬಹುದು.
ನೀ ನನ್ನ ಮರೆಯಲೂಬಹುದು
ನೋವಲ್ಲಿ ನಾನು ಸಾಯಲೂ ಬಹುದು
ಆದರೆ...
ನಿನ್ನ ಪ್ರೀತಿಯಿಲ್ಲದೇ ನಾನಿಲ್ಲ...
ನನ್ನ ಪ್ರೀತಿಗೆಂದೂ ಸಾವಿಲ್ಲ...!!!

- Pb

07 Mar 2017, 09:23 pm

ಕನ್ನಡಿಗನ ಮನಸು

ನಾನು ಸಾಯುವ ಕ್ಷ ಣದಲ್ಲಿ
ಎಡಗೈ ನನ್ನ ಮೀಸೆಯ ಮೇಲಿರಲಿ,
ಬಲಗೈಯಲ್ಲಿ ತ್ರಿವರ್ಣ ಧಜವಿರಲಿ,
ನನ್ನ ಸುತ್ತ ಮುತ್ತಲು ಕನ್ನಡಿಗರ
ಸಾಲು ಇರಲಿ,
ನನ್ನ ನಾಲಿಗೆಯು ಕನ್ನಡವನ್ನೆ ನುಡಿಯುತ್ತಿರಲಿ,
ನನ್ನ ಎರಡು ಕಣ್ಣುಗಳಲ್ಲಿ
ಕರ್ನಾಟಕವೇ ಕಾಣುತಿರಲಿ,
ಹೀಗೆ ನನ್ನ ಮರಣವಾಗಲಿ.

- ಮೈನುಸಾಬ

07 Mar 2017, 07:33 pm

ಕನ್ನಡಿಗನ ಮನಸು

ನಾನು ಸಾಯುವ ಕ್ಷ ಣದಲ್ಲಿ
ಎಡಗೈ ನನ್ನ ಮೀಸೆಯ ಮೇಲಿರಲಿ,
ಬಲಗೈಯಲ್ಲಿ ತ್ರಿವರ್ಣ ಧಜವಿರಲಿ,
ನನ್ನ ಸುತ್ತ ಮುತ್ತಲು ಕನ್ನಡಿಗರ
ಸಾಲು ಇರಲಿ,
ನನ್ನ ನಾಲಿಗೆಯು ಕನ್ನಡವನ್ನೆ ನುಡಿಯುತ್ತಿರಲಿ,
ನನ್ನ ಎರಡು ಕಣ್ಣುಗಳಲ್ಲಿ
ಕರ್ನಾಟಕವೇ ಕಾಣುತಿರಲಿ,
ಹೀಗೆ ನನ್ನ ಮರಣವಾಗಲಿ.

- ಮೈನುಸಾಬ

07 Mar 2017, 07:33 pm

ಯಾರು ನೀ.....?

ನೀ ಯಾರೆಂದು ಅರಿಯೆನು ನಾ
ಮನ್ನಿಸು ಗೆಳತಿ .....ಹೃದಯಹೀನ ನಾ

ನೆನಪುಗಳ ತಿರುವಿಹಾಕಲಾರೆ
ತಾಳೆನು ಭಾರವ.....ಶಕ್ತಿ ಹೀನ ನಾ

ಸಹಜ ಮಾನವ ಭಾವನೆಗಳು
ಪ್ರೀತಿ ಪ್ರೇಮಗಳಿವು....
ಹುಳಿ ಖಾರ ಉಪ್ಪು ತಿಂದ ದೇಹವಿದು
ಅದರ ಗಾಳಕೆ ಸಿಕ್ಕಿರುವುದು.....

ನನ್ನ ಹೃದಯವಿಗ ನನ್ನ ಕೈಯಲ್ಲಿಲಾ
ಹುಚ್ಚು ಸ್ನೇಹಿತರು ನನ್ನವರು
ಕಸಿದುಕೊಂಡಿರುವರು ಜೋಪಾನ ಮಾಡಲು...

ನೀ ಯಾರೆಂದು ಅರಿಯೆನು ನಾ
ಮನ್ನಿಸು ಗೆಳತಿ .....ಹೃದಯಹೀನ ನಾ

- MK Reddy

07 Mar 2017, 07:08 pm

ಅರಿವು

ಅರಿವಿನ ಮನೆಯೊಳು ಗುರುವಿನ ಹುಡುಕಾಟ,ಅರಿಯದೇ ಕೂತ ಮನಸೊಳು ಪೊಳ್ಳು ಯೋಚನೆಗಳ ಅಲೆದಾಟ!
ಎಲ್ಲ ಬಲ್ಲವ ಮೇಲಿರುವಾಗ ನಮ್ಮದು ನಿಮ್ಮದು ಬರಿ ಚದುರಂಗದಾಟ!!

- ಮಲ್ಲಿಕಾರ್ಜುನ

07 Mar 2017, 06:54 pm

ಓ ರತ್ನಮಣಿ ರಮೆಯೆ

ಪದಗಳ ಹುಡುಕಲಾಗದು ನಿನ್ನ ವರ್ಣಿಸಲು
ಬಳಿಯಲ್ಲೆ ನೀನರಲು ಬದುಕಿಗೆ ಭಯವಿಲ್ಲ
ತೃಣಮಾತ್ರ ನಿನ್ನ ಮಾತಿನ ಸಿಹಿ ಸಾಕು ತಣಿದು ತಂಪಾಗಲು ನಾನು
ವಿಷಾದವಿಲ್ಲ ವಿನೋದವೆಲ್ಲ ವಿನಮ್ರತೆಯ ವೈಣಿಕೆ ನೀನಿರಲು
ಪ್ರೀತಿಯೊಳಗಿನ ಜೇನ ಹುಡುಕಲು ಕಾಯಲಿಲ್ಲ ಸಾವಿರ ದಿನ ನೋಡಿದಾಕ್ಷಣ ಸವಿದೆನು ಆ ಜೇನ ಸವಿಯನು
ನಲುಮೆಯ ಗೆಳತಿ ಸೌಂದರ್ಯದೊಡತಿ ಕಾಡದಿರು ನೀ ನನ್ನ ಪ್ರತಿದಿನ ಕನಸಲಿ....

- Irayya Mathad

07 Mar 2017, 06:45 pm