Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನುಡಿದರೆ ನಾಲಿಗೆಯ ಪಾಪ ಕಳೆದಂತೆ,
ಆಲಿಸಿದರೆ ಕರ್ಣಗಳಿಗೆ ಪುಣ್ಯ ದೊರೆತಂತೆ,
ಬರೆದರೆ ಹಸ್ತಕ್ಕೆ ಬಲವು ಬಂದಂತೆ,
ಕರುನಾಡಲ್ಲಿ ಇದ್ದರೆ ಸ್ವರ್ಗದಲಿ ನಿಂತಂತೆ,
ಅನ್ಯ ಭಾಷೆಯ ಮೋಹಕ್ಕೆ ಸಿಲುಕಿ,
ಕನ್ನಡವನ್ನು ಮರೆಯುವಿರಲ್ಲ,
ಏನಿದು ಅವಕೆ?
- ಮೈನುಸಾಬ
07 Mar 2017, 06:17 pm
ಯುಗ-ಯುಗ ಸಾಗಲಿ ಯುಗಾದಿ
ಬಾಳಿಗೆ ಹಾಕುವೆನು ಇಂದೇ ಬುನಾದಿ||ಪಲ್ಲವಿ||
ಬೇವು-ಬೆಲ್ಲದ ಹಂಚಿಕೆ
ಕಷ್ಟ-ಸುಖದ ಪತಾಕೆ|
ಭಾರತೀಯರೆಲ್ಲರ ಹೊಸ ದಿನ
ಸಂತಸವೂ ಮನೆ-ಮನೆಗೂ ಈ ದಿನ||೧||
ಅರಿಯರು ಯಾರು ಈ ದಿನ
ಜನವರಿಯೇ ಎಲ್ಲರ ದೃಷ್ಟಿಯಲಿ ಹೊಸದಿನ|
ಕುಣಿಯೋಣ ಬನ್ನಿ ಈ ದಿನ
ನಲಿಯೋಣ ಬನ್ನಿ ಹೊಸದಿನ||೨||
ಎಲ್ಲಾರೂ ಒಟ್ಟಾಗಿ ಸೇರೋಣ
ಸಂತಸವೂ ಎಲ್ಲಾರಿಗೂ ಹಂಚೋಣ|
ಮೂಡಿ ಬರುವೆನು ರವಿ ಇಂದು
ಹೀಗೆ ಇರಲಿ ಬಾಳಲ್ಲೆಂದು||೩||
ದುಃಖವ ಇಂದು ಮರೆಮಾಡಿ
ಸುಖದಿಂದ ಸಂತಸದಿ ಕುಣಿದಾಡಿ|
ಎಲ್ಲರ ಒಡಗೂಡಿ ಹೋರಾಡಿ
ಯುಗಾದಿಗೆ ಶುಭ ಹಾಡಿ||೪||
- ಕೆ.ಕೆ.ನಂದಾದೀಪ್(ಕೋಲಾರದ ಕಂದ)
07 Mar 2017, 05:54 pm
ಬಾ ಬಾ ಚಿಟ್ಟೆ
ಬಣ್ಣದ ಚಿಟ್ಟೆ
ಹೂವಿನ ರಸವನು
ನೀ ಹೀರಲು ಬಾ||೧||
ಬಾ ಬಾ ನವಿಲೇ
ಚಿನ್ನದ ನವಿಲೇ
ಗೆರೆಯನು ಬಿಚ್ಚುತ್ತಾ ಹಾಡುತಾ
ನಮ್ಮೊಡನೆ ನಲಿಯಲು ಬಾ||೨||
ಬಾ ಬಾ ಕೋಗಿಲೆ
ಸುಂದರ ಕೋಗಿಲೆ
ಕುಹೂ-ಕುಹೂ ಹಾಡನ್ನು
ಹಾಡಲು ಬಾ||೩||
ಬಾ ಬಾ ಗಿಳಿಯೇ
ಪಂಜರ ಗಿಳಿಯೇ
ಸುಂದರ ಭವಿಷ್ಯವು
ಹೇಳಲು ನೀ ಬಾ ಬಾ||೪||
ಬನ್ನಿ ಬನ್ನಿ ಮಕ್ಕಳೇ
ಪುಟಾಣಿ ಮಕ್ಕಳೇ
ಆಟವ ಆಡಲು ನೀವು ಬನ್ನಿ
ಆಡುತ್ತಾ ನಲಿಯೋಣ ಎಂದೆಂದೂ||೫||
- ಕೆ.ಕೆ.ನಂದಾದೀಪ್(ಕೋಲಾರದ ಕಂದ)
07 Mar 2017, 05:36 pm
ವೇಷ ನೋಡಿ ಭಾಷೆ ನೋಡಿ ನಮ್ಮ ದೇಶ ಭಾರತ
ಭಾರತ ಮಾತೆಯ ಮಕ್ಕಳೆಂದು ನಮಗೆಲ್ಲ ಸಂತಸ ||ಪಲ್ಲವಿ||
ಭಾರತ ಮಾತೆಯ ಮುದ್ದಿನ ಮಕ್ಕಳು
ನಮ್ಮ ತಾಯಿ ಭಾರತಿ|
ಸಿಂಹದಂತೆ ಮೆರೆಯುತ್ತಿದೆ
ನಮ್ಮ ದೇಶದ ಸಿಂಹಲಾಂಛನ||೧||
ಮೂರು ಬಣ್ಣ ಮಧ್ಯೆ ಒಂದು ಚಕ್ರ
ಒಳಗೊಂಡ ಬಾವುಟ ನಮ್ಮ ಕೇತನ|
ನೀರಿನಲ್ಲಿ ಬೆಳದಿರುವ ಕಮಲ
ನಮ್ಮ ರಾಷ್ಟ್ರ ಪುಷ್ಪ ಇದೇ ನಮ್ಮ ಚೇತನ||೨||
ಮುಂದೆ ಮುಂದೆ ಸಾಗುತಿದೆ
ನಮ್ಮ ದೇಶದ ಪ್ರಾಣಿ ಹುಲಿ|
ಗೆರೆ ಬಿಚ್ಚಿ ಆಡುತ್ತಿದೆ
ನಮ್ಮ ದೇಶದ ಪಕ್ಷಿ ನವಿಲು||೩||
ಕಂಠ ಬಿಚ್ಚಿ ಹಾಡುತಿದೆ
ನಮ್ಮ ದೇಶದ ಹಿಂದೂಸ್ತಾನಿ ಸಂಗೀತ|
ಸಪ್ತ ಸ್ವರಗಳು ಬಾಜಿಸುತ್ತಿವೆ
ನಮ್ಮ ತಾಯಿ ನೆಲದಲ್ಲಿ||೪||
ಕೈ ಕಾಲು ಆಡಿಸುತ್ತಿದೆ
ನಮ್ಮ ದೇಶದ ಭರತನಾಟ್ಯ|
ಭಾರತಾಂಬೆಯ ಮುದ್ದಿನ ಮಕ್ಕಳ ರುದ್ರನಾಟ್ಯ
ನಮ್ಮ ತಾಯಿ ಮಡಿಲಲ್ಲಿ||೫||
- ಕೆ.ಕೆ.ನಂದಾದೀಪ್(ಕೋಲಾರದ ಕಂದ)
07 Mar 2017, 05:16 pm
ನಕ್ಕಾಗ ನೀ ಹೂಗೊಂಚಲು,
ಸಿಗ್ಗು ನಿನ್ನಪ್ಪಿ ಮುದ್ದಿಡಲು,
ಮೂಕವಿಸ್ಮಿತನಾದಂತೆ ಮನವು ಹಾಲ್ಗಡಲು,
ನಳ ನಳಿಸಿ ನಲಿದಿವೆ ಕೆಂಪು ಅದರಗಳು,
ಎವೆ ಬಿಡದೆ ದಿಟ್ಟಿಸಿವೆ ಕಂಗಳು,
ಮೂಗುತಿಯು ಮಿಂಚಿಹಳು,
ಮಾದವನ ಮನವಿರುಳು,
ತೊಳೆದಿರಲು ಕತ್ತಲು,
ಇನ್ನೆಲ್ಲಾ ಬರಿ ಹಗಲು,
ಗುಳಿ ಕೆನ್ನೆಯಾ ಹೊರಳು,
ಕರೆದಿರಲು ಇನಿಯನನು,
ಚುಂಬನವನಿತ್ತು ಶೃಂಗಾರವಿರಲು.
ಗಲ್ಲವಿನ್ನಷ್ಟು ಸೆಳೆಯುತಿರಲು,
ಬೆರಳು ಸೇರಿಸಿ ಬೆರೆತಿಹಳು,
ಒಂದಷ್ಟು ಚೆಲುವ ವರಿಸಿಹಳು,
ಪ್ರೇಮವಿತ್ತು ಬರಸೆಳೆದಿಹಳು,
ಬಾಳಿಗೊಂದು ಮೌಲ್ಯವಿವಳು,
ಮಿನುಗಿ ಹೊಳೆವ ಹರಳು...
-ಕನ್ನಡದ ಭಕ್ತ
- ಕನ್ನಡದ ಭಕ್ತ
07 Mar 2017, 12:18 pm
ನಿನ್ನ ಕಳೆದುಕಂಡ ನೋವು
ಬೇವಿನ ಕಹಿಯಾಗಿದೆ
ಆ ನೋವಿನ ಕಲೆಯು
ನನ್ನೆದೆಗೆ ಅಳಿಸದ ಮಸಿಹಾಕಿದೆ
ನಗಲು ಆಗದೆ ಬಾಳಲು ಬಿಡದೆ
ಕಣ್ಮುಚ್ಚಿ ಕಣ್ಣೀರಿಗೆ ಕರೆ ಮಾಡಿದೆ
ನನ್ನೊಲವ ಜೀವದ ಗೆಳೆಯ ನೀನು
ನೀ ಮರೆತರೆ ಜೀವನವಿರುವುದೇ
ಹನಿ ಹನಿ ಕಣ್ಣೀರಿನ ಭಾವದಲಿ
ಪದಗಳು ಜೋಡನೆಯಾಗಿವೆ
ಪದಗಳು ಸೇರಿ ಸಾಲಾಗಿ
ಮನಸ್ಸಿನ ಪುಟದಲಿ ಕವನ ಮೂಡಿದೆ.
✍
- kirti
07 Mar 2017, 12:15 pm
ಬೇಸರವಾಗದಿರು ಮನವೇ
ಬೇರೆಯವರ ಬಯಕೆಗಾಗಿ
ಅವರಾಡುವ ಮಾತಿಗಾಗಿ
ಸಂಬಂಧಗಳ ಕಹಿತನಕ್ಕಾಗಿ
ಬೇಸರವಾಗದಿರು ಮನವೇ
ಬಯಸದೆ ಬಂದಿರುವ ದು:ಖಕ್ಕಾಗಿ
ಸ್ನೇಹದಲಿ ಹುಳಿಹಿಂಡುವ ಜೀವಕ್ಕಾಗಿ
ನಂಬಿಕೆದ್ರೋಹ ಮಾಡುವ ಪ್ರೀತಿಗಾಗಿ
ಬೇಸರವಾಗದಿರು ಮನವೇ
ಕಾರಣ ತಿಳಿಯದೆ ಬರುವ ಕಣ್ಣೀರಿಗಾಗಿ
ಬವನೆಯ ಅರಿಯದ ಮನಗಳಿಗಾಗಿ
ನೀನೆ ಅವರ ಬೇಸರಕ್ಕೆ ಕಾರಣವಾಗಿ
ಬೇಸರವಾಗದಿರು ಮನವೇ
✍
- kirti
07 Mar 2017, 12:12 pm
ಕಣ್ತುಂಬ ನಿದ್ದೆ
ಕಣ್ಣಿನ ರೆಪ್ಪೆಯಡಿ ಕನಸಿನ ಕನವರಿಕೆಗಳು
ನಾ ಮುಂದು ನೀ ಮುಂದು
ಮನದ ಬಾಗಿಲು ತಟ್ಟುವ
ಕನಸಿನ ಕಳ್ಳ ಕ್ಷಣಗಳು
ಕಣ್ತೆರೆದು ನೋಡಿದರೆ
ಅಧ್ಬುತ ಜಗತ್ತು
ಒಮ್ಮೆಲೆ ಮುತ್ತಿಗೆ ಹಾಕುವ
ಜವಾಬ್ದಾರಿಯ ಕಸರತ್ತು
ಸಂಬಂಧಗಳ ಜಂಜಾಟ
ಭಾವನೆಗಳ ಪರದಾಟ
ಸ್ವಾರ್ಥಿಗಳ ದೊಡ್ಡಾಟ
ಅಹಂಕಾರಿಗಳ ಬಯಲಾಟ ನೋಡುವಂತದ್ದು
ಕಲ್ಪನೆಯ ಕನಸಿನಲ್ಲೂ
ವಾಸ್ತವಿಕತೆಯ ಬದುಕಿನಲ್ಲೂ
ಒಂದೇ ಬಿರುಗಾಳಿ ಬೀಸಿದೆ
ಅದು ಆಸೆಯ ಬಿರುಗಾಳಿ
ಬಿರುಗಾಳಿಯಲಿ ಸಿಲುಕಿದ
ಮನುಜರು ನಾವು
ಅಜ್ಞಾನದಿಂದ ಬಳಲುತಿರುವ
ರೋಗಿಗಳು ನಾವು
ಸ್ವಾರ್ಥಕ್ಕಾಗಿ ಬದುಕ್ಕುತ್ತಿರುವ
ಜೀವಿಗಳು ನಾವು
Siddhkirti
- kirti
07 Mar 2017, 11:46 am
ಬದುಕು ಬದುಕು ಬದುಕು
ಬದುಕಿನಲ್ಲಿ ಸುಂದರವಾಗಿ ಬದುಕುವರಿಗಿಂತ
ಬದುಕಿಗಾಗಿ ಬಳಲುವರೇ ಹೆಚ್ಚು..
ಬದುಕೊಂದು ರಂಗೋಲಿಯಂತೆ ಹಲವು ಕ್ಷಣಗಳ ಬಣ್ಣದ ರಂಗೋಲಿ ಬಿಡಿಸಿದಂತೆ ...
ಬದುಕೊಂದು ಭಾವಗೀತೆ ಇದ್ದಂತೆ ರಾಗಕ್ಕೆ ತಾಳ ತಾಳಕ್ಕೆ ಲಯ ಹಾಗೆಯೇ ಸಂಬಂಧಕ್ಕೆ ಪ್ರೀತಿ ಪ್ರೀತಿಯಲ್ಲಿ ನಂಬಕೆ ಇರಲೇಬೇಕು...
ಬದುಕೆಂದ ಮೇಲೆ ಸುಖವು ದು:ಖವು ಎದುರಿಸಬೇಕು ಧೈರ್ಯದಿಂದ ಬದುಕು ಗೆಲ್ಲುವ ಹಠವಾದಿ ನಾವಾಗಿರಬೇಕು..
ಬದುಕಿನಲಿ ಕನಸು ಕಾಣಬೇಕು ಗುರಿ ಸಾಧಿಸಲು ನಿದ್ದೆಗೆಡಬೇಕು ಸಾಧಿಸಿದ ಆನಂದಕೆ ಹರುಷದಿಂದಿರಬೇಕು
ನಮ್ಮ ಬದುಕನ್ನ ನಾವು ಬಹುಸುಂದರವಾಗಿ ಬದುಕಿ ಭವ್ಯವಾಗಬೇಕು..
✍
- kirti
07 Mar 2017, 11:43 am
ಬದುಕಿನಲಿ ಇರಲೊಂದು ಸೂತ್ರ
ಸಹಕಾರ ಸಹಬಾಳ್ವೆ ಯಾಗಬೇಕು ನಮ್ಮ ಮಂತ್ರ
ಎಂದೂ ಸುಳಿಯದಿರಲಿ ತಂತ್ರ ಕುತಂತ್ರ
ಅಂದಿಗೆ ನಮ್ಮ ಬದುಕು ಸ್ವತಂತ್ರ ಸ್ವತಂತ್ರ
- ಮೈನುಸಾಬ
07 Mar 2017, 11:29 am