ಸುಡುವ ಬೇಸಿಗೆಯಲಿ ತಂಗಾಳಿಯ ತಂಪಂತೆ ನೀನು
ಬೆಂದು ಬಸವಳಿದ ಬಡಜೀವಕೆ ಅಮೃತದ ಜಲದಂತೆ ನೀನು
ಜಗನೋಡದೆ ಕುಳಿತಿರುವ ನನಗೆ ಕಣ್ಣಂತೆ ನೀನು
ದುಃಖಿತ ಜೀವನದ ಕ್ಷಣ ತೊರೆಯುವ ಆನಂದ ಚಿಲುಮೆಯಂತೆ ನೀನು
ಹಾಡಲಾಗದೆ ಕುಳಿತಿರುವ ಕೋಗಿಲೆಯ ಧ್ವನಿ ಸ್ಪೂರ್ತಿ ನೀನು
ಕಾನನದ ಸೌಂದರ್ಯಕ್ಕೆ ಹಸಿರು ಸೀರೆಯಂತೆ ನೀನು
ಸಪ್ತಸ್ವರ ನುಡಿಗಳ ನಾದವಿನೋದ ಆಲಾಪದಂತೆ ನಿನ್ನ ನುಡಿಗಳು
ನನ್ನ ಬದುಕಿನ ಕಥೆಯಲಿ ಬಂದ ನನ್ನ ಜೀವನ ಜ್ಯೋತಿಯು ನೀನು....
ಹಾಡಾಗಿ ಉಳಿಯುವುದೋ ಹಾಳಾಗಿ ಅಳಿಯುವುದೋ ತಿಳಿದಿಲ್ಲ ಈ ಕವನ.
ಅರಳಿ ಹಿಗ್ಗುವುದೋ ನರಳಿ
ಕುಗ್ಗುವುದೋ ತಿಳಿದಿಲ್ಲ ಈ ಕವನ.
ಆದರೂ ಬರೆಯುತ್ತಿರುವೆ ಇದನ್ನು
ನೆನಪಿಸಿಕೊಳ್ಳುತ್ತ ನಿನ್ನನ್ನ.(೧)
ಅದು ನನ್ನ ಜೀವನದ ಮರೆಯಲಾಗದ ದಿನ
ಅಂದೇ ಕಂಡದ್ದು ನಾ ನಿನ್ನ
ನೋಡುತ್ತಲೇ ಇದ್ದೆನು ನಾ ನಿನ್ನ
ಮಿಟುಕಿಸದೆ ಕಣ್ಣ
ಮೊದಲ ನೋಟಕ್ಕೆ ಮರೆತೇ ಮೈಮನ
ಬೆರೆತೆ ನೀ ನನ್ನ.(೨)
ಪ್ರೀತಿಯ ನಿವೇದನೆ ಮಾಡಲು
ಸಜ್ಜಾಗಿತ್ತು ನನ್ನ ಮನ.
ಆದರೂ ಏಕೋ ಅಳುಕಿತ್ತು ನೀ ಒಪ್ಪದಿದ್ದರೆ
ನಾ ಸೇರಬೇಕಿತ್ತು ಮಸಣ.
ಅಂತೂ ಹೃದಯದ ಹಠಕ್ಕೆ ಸೋತು
ತಿಳಿಸಿಯೇ ಬಿಟ್ಟಿದ್ದೆ ನನ್ನ ಪ್ರೀತಿಯನ್ನ.(೩)
ಈಗಲೂ ಪುಳಕಿತಗೊಳ್ಳುವೆ ನೆನೆಯುತ್ತ
ನೀ ನನ್ನ ಪ್ರೀತಿಯ ಒಪ್ಪಿದ ಕ್ಷಣ.
ಅಂದೇ ಅಲ್ಲವೇ ಶುರುವಾಗಿದ್ದು
ನಮ್ಮ ಒಲುಮೆಯ ಪಯಣ.
ಆ ಪ್ರಯಾಣಕ್ಕೆ ಬೇಕಿರಲಿಲ್ಲ
ನಮಗಾವುದೇ ಕಾರಣ.(೪)
ಈ ಪಯಣ ಸಾಗುತ್ತ
ತುಂಬಾ ಬದಲಾಗಿತ್ತು ನನ್ನ ಜೀವನ.
ಅದು ಎಷ್ಟೆಂಬುದು ತಿಳಿದದ್ದು
ಬಿಟ್ಟೋದಾಗಲೇ ನೀ ನನ್ನ.
ಕಳೆದೇ ಹೋಗಿದ್ದೆ ನಾ ನನ್ನ ಜೀವನದಿಂದ
ತುಂಬಿಹೋಗಿದ್ದೆ ನೀ ನನ್ನ ಜೀವನವನ್ನ.(೫)
ಬರೀಗೈಲಿ ನೀ ಬಿಟ್ಟುಹೋಗಲಿಲ್ಲ ನನ್ನ
ಕೊಟ್ಟು ಹೋಗಿದ್ದೆ ಸಾಲು ಸಾಲು ನೆನಪುಗಳನ್ನ
ಅದರಿಂದಲೇ ಆಗುತ್ತಿದೆ ಪ್ರತಿ ಕ್ಷಣ
ನೋವಿನ ಜನನ ಕಣ್ಣೀರಲಿ ಸ್ನಾನ.
ಇಷ್ಟಾದರೂ ನಾ ಕಾಣುತ್ತಿರುವೆ
ಮತ್ತೆ ನೀ ಬರುವೆ ಎಂಬ ನನಸಾಗದ ಕನಸನ್ನ.(೬)
ಕಿರುದಾರಿಯಲಿ ಬಚ್ಚಿಟ್ಟ ಪ್ರೀತಿ
ಅಲೆಯಾಗಿ ನನ್ನು ಸಾಗಿದೆ ಈ ರೀತಿ
ಮನಸ್ಸೆಂಬ ಪ್ರೀತಿಯ ಕಲೆಯಲ್ಲಿ ನಾನ್ನು
ಚಿತ್ರ ಬಿಡಿಸಿದೇ ನನ್ನಾಸೆಯಲ್ಲಿ
ಕಿರುದಾರಿಯಲಿ ಬಚ್ಚಿಟ ರೀತಿ
ಈ ಹಾಡಿನಲ್ಲಿ ನನ್ನ ಮನಸ್ಸೆಂಬ ಪ್ರೀತಿ..........