Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಏನು ವ್ಯತ್ಯಾಸ ಹೇಳು.....

ಏನು ವ್ಯತ್ಯಾಸ ಹೇಳು ನೀ ....
ನಿನಗೂ, ನನ್ನ ಉಸಿರಿಗೂ...
ಬದುಕಲಾರೆ ಎರಡೂ ಇಲ್ಲದೆ.

ಏನು ವ್ಯತ್ಯಾಸ ಹೇಳು ನೀ
ನನ್ನ ಈ ರಕ್ತಕು, ನೀ ಕೋಟ್ಟ ನಿನ್ಯೆದೆಯಾ ಜೀವಾಮೃತಕು
ಜೀವವಿದು ನಿನ್ನ ಭೀಕ್ಷೆ ಅಲವೇ.

ಮೂರ್ಖ ನಾ ನಿನ್ನ ಪ್ರೀತಿಯ
ಪದಗಳಲ್ಲಿ ಅಳೆಯುವ
ವ್ಯರ್ಥ ಪ್ರಯತ್ನದಲ್ಲಿ.

ಅಳೆಯುವ ಪ್ರೀತಿ ನಿನ್ನದಲ್ಲ
ಮರೆವ ಜೀವ ನೀನಲ್ಲಾ
ಬದುಕ ಸವೆಸಿ, ನನ್ನ ಸಾಕಿ ಸಲುಗಿದ
ತಾಯಿ ನಿನಗಿಂತ ದೇವರಿಲ್ಲ.

- MK Reddy

06 Mar 2017, 10:00 am

ಹೇಳದ ಮಾತು

ಎದೆಯೊಳಗೇ ಉಳಿದಿವೆ
ಆಡದ ಮಾತುಗಳು,
ಅಡೆತಡೆಗಳು ಕಾಡಿವೆ
ಕೂಡಲು ಆಸ್ಪದವಿಲ್ಲವೇ?

ಅವೆತಿವೆ ಬಯಕೆಯ ಸಾಲುಗಳು,
ಬಾರದಾಗಿವೆ ಮನಸಿನ ಮಾತುಗಳು,
ಬರಿ ತೊದಲು ತುಟಿಯ ಅಂಚಲ್ಲಿ,
ಲಯವು ತಪ್ಪಿದೆ ಎದೆಯಲ್ಲಿ,
ಶ್ರುತಿಯಿರದ ಹಾಡಲ್ಲಿ,
ಆಲಾಪವಾಗುವುದು ಇನ್ನೆಲ್ಲಿ,
ನಿನ್ನನೊಲಿಸುವ ಮಾತೆಲ್ಲಿ.

ನಿನ್ನ ಬಿಟ್ಟುಕೊಟ್ಟು ,
ಹೃದಯದ ಬಡಿತ ನನ್ನ ಬಿಟ್ಟು,
ಇಳಿಸಂಜೆಯೆಡೆ ಮುಖಮಾಡಿದೆ,
ತುಸುಮಾತನ್ನೂ ಆಡದೆ,
ಭಾರವಾದ ಮಾನಸ್ಸನೂತ್ತು,
ಅರಳುವ ಮೊದಲೇ ಪ್ರೀತಿ ಹೂವು ಸತ್ತು.

-ಕನ್ನಡದ ಭಕ್ತ

- ಕನ್ನಡದ ಭಕ್ತ

06 Mar 2017, 06:38 am

ಓ ಅಮೃತ ಗಂಗೆ...

ಸುಡುವ ಬೇಸಿಗೆಯಲಿ ತಂಗಾಳಿಯ ತಂಪಂತೆ ನೀನು
ಬೆಂದು ಬಸವಳಿದ ಬಡಜೀವಕೆ ಅಮೃತದ ಜಲದಂತೆ ನೀನು
ಜಗನೋಡದೆ ಕುಳಿತಿರುವ ನನಗೆ ಕಣ್ಣಂತೆ ನೀನು
ದುಃಖಿತ ಜೀವನದ ಕ್ಷಣ ತೊರೆಯುವ ಆನಂದ ಚಿಲುಮೆಯಂತೆ ನೀನು
ಹಾಡಲಾಗದೆ ಕುಳಿತಿರುವ ಕೋಗಿಲೆಯ ಧ್ವನಿ ಸ್ಪೂರ್ತಿ ನೀನು
ಕಾನನದ ಸೌಂದರ್ಯಕ್ಕೆ ಹಸಿರು ಸೀರೆಯಂತೆ ನೀನು
ಸಪ್ತಸ್ವರ ನುಡಿಗಳ ನಾದವಿನೋದ ಆಲಾಪದಂತೆ ನಿನ್ನ ನುಡಿಗಳು
ನನ್ನ ಬದುಕಿನ ಕಥೆಯಲಿ ಬಂದ ನನ್ನ ಜೀವನ ಜ್ಯೋತಿಯು ನೀನು....

- Irayya Mathad

06 Mar 2017, 06:30 am

ನೆನಪಾಯಿತು

ಇಳಿ ಸಂಜೆ ಹೊತ್ತಲ್ಲಿ ಮರೆತುಹೋದ
ಮಾತೊOದು ನೆನಪಾಯಿತೇ ಗೆಳಯ .....
ನೂರು ಬಾರಿ ನೋಡಿರುವೆ
ಜೀವ ನಿನಗೆ ನೀಡಿರುವೆ ಆದರೂ
ನೀ ಕೊಡುವ ಸಮಾದನಕ್ಕಾಗಿ ಕಾದಿರುವೆ .

ಎಲ್ಲೆಲ್ಲೋ ಸುತ್ತಾಡಿ ಯಾರಾರನ್ನೋ ಕಂಡು
ನಿನ್ನ ಬಳಿ ಬಂದು ಸೇರಿರುವೆ .
ಇನ್ನಾದರೂ ಅರಿತುಕೊ ಮನದಲ್ಲಿನಾ ಮಾತು .
ಈ ಜನ್ಮದ ಕಡೆವರೇಗು ಕೈ ಹಿಡಿದು ನಡೆಯುವೆ.

ನೀನಿಲ್ಲದ ಕ್ಷಣ ಜೀವವೇ ನಿಂತೋಗಿ
ನಿನ್ನ ಜೊತೆಗೂಡಿ ನಾ ಬರುವೆ .........
ಚಿತೆಯಲ್ಲದರೂ ,ವ್ಯಥೆಯಲ್ಲದರೂ .

ಅOಬರದಿ ನಿನ ನೋಡಿ ನಗಲೆನಗೆ ಆಸೆಯಿಲ್ಲ
ನಿನ ನಗುವಿಗೆ ಹೆಸರಾಗಿ ,ಮೆರೆಯದ ನೆನಪಾಗಿ
ನಿನ್ನಲ್ಲೇ ಉಲಿಯವ ಪ್ರೀತಿಯಾಗಲು
ಅನುಮತಿ ನೀಡುವೆಯಾ ಇನಿಯ...........

- ಚುಕ್ಕಿ

06 Mar 2017, 04:19 am

ಹೇಳದ ಮಾತುಗಳು

ಎದೆಯೊಳಗೇ ಉಳಿದಿವೆ
ಆಡದ ಮಾತುಗಳು,
ಅಡೆತಡೆಗಳು ಕಾಡಿವೆ
ಕೂಡಲು ಆಸ್ಪದವಿಲ್ಲವೇ?

ಅವಿತಿವೆ ಬಯಕೆಯ ಸಾಲುಗಳು,
ಬಾರದಾಗಿವೆ ಮನಸಿನ ಮಾತುಗಳು,
ಬರಿ ತೊದಲು ತುಟಿಯ ಅಂಚಲ್ಲಿ,
ಲಯವು ತಪ್ಪಿದೆ ಎದೆಯಲ್ಲಿ,
ಶ್ರುತಿಯಿರದ ಹಾಡಲ್ಲಿ,
ಆಲಾಪವಾಗುವುದು ಇನ್ನೆಲ್ಲಿ,
ನಿನ್ನನೊಲಿಸುವ ಮಾತೆಲ್ಲಿ.

ನಿನ್ನ ಬಿಟ್ಟುಕೊಟ್ಟು ,
ಹೃದಯದ ಬಡಿತ ನನ್ನ ಬಿಟ್ಟು,
ಇಳಿಸಂಜೆಯೆಡೆ ಮುಖಮಾಡಿದೆ,
ತುಸುಮಾತನ್ನೂ ಆಡದೆ,
ಭಾರವಾದ ಮಾನಸ್ಸನೂತ್ತು,
ಅರಳುವ ಮೊದಲೇ ಪ್ರೀತಿ ಹೂವು ಸತ್ತು.

-ಕನ್ನಡ ಭಕ್ತ

- ಕನ್ನಡದ ಭಕ್ತ

06 Mar 2017, 12:02 am

ದರಿದ್ರನೆ ದಯನು

ದರಿದ್ರರುಎಂದು ಅವರು ದೂರಿದರು
ದಯವೆ ಕಾಪಾಡುವುದು ನಮ್ಮನೆಂದರು
ದಯವೆ ಧರೆಯಲಿ ದರಿದ್ರರನು ಹೊರದುರಲಿ
ಎಂದೆನುತನುತ......

ಪ್ರಾಣವನೆಂದು ತೊರೆಯವು ನಾವು
ನಮ್ಮನು ದೋಷಿಸಬಾರದು ಈ ಜಗದಲ್ಲಿ
ಬರುವುದು ಭರದಲಿ ತರುವುದು ತರದಲಿ
ಕೈ ಬಿಡದು ಎಂದಿಗೂ ಈ ಜಗವಣ್ಣ

ಈ ಜಗದ ತಂದೆ ಭರಮ ದೇವರು
ನೊಡಣ್ಣ.........

- Rajfrom Raj

05 Mar 2017, 11:17 pm

ಉಳಿಯುವುದೋ ಅಳಿಯುವುದೋ ತಿಳಿದ

ಹಾಡಾಗಿ ಉಳಿಯುವುದೋ ಹಾಳಾಗಿ ಅಳಿಯುವುದೋ ತಿಳಿದಿಲ್ಲ ಈ ಕವನ.
ಅರಳಿ ಹಿಗ್ಗುವುದೋ ನರಳಿ
ಕುಗ್ಗುವುದೋ ತಿಳಿದಿಲ್ಲ ಈ ಕವನ.
ಆದರೂ ಬರೆಯುತ್ತಿರುವೆ ಇದನ್ನು
ನೆನಪಿಸಿಕೊಳ್ಳುತ್ತ ನಿನ್ನನ್ನ.(೧)

ಅದು ನನ್ನ ಜೀವನದ ಮರೆಯಲಾಗದ ದಿನ
ಅಂದೇ ಕಂಡದ್ದು ನಾ ನಿನ್ನ
ನೋಡುತ್ತಲೇ ಇದ್ದೆನು ನಾ ನಿನ್ನ
ಮಿಟುಕಿಸದೆ ಕಣ್ಣ
ಮೊದಲ ನೋಟಕ್ಕೆ ಮರೆತೇ ಮೈಮನ
ಬೆರೆತೆ ನೀ ನನ್ನ.(೨)

ಪ್ರೀತಿಯ ನಿವೇದನೆ ಮಾಡಲು
ಸಜ್ಜಾಗಿತ್ತು ನನ್ನ ಮನ.
ಆದರೂ ಏಕೋ ಅಳುಕಿತ್ತು ನೀ ಒಪ್ಪದಿದ್ದರೆ
ನಾ ಸೇರಬೇಕಿತ್ತು ಮಸಣ.
ಅಂತೂ ಹೃದಯದ ಹಠಕ್ಕೆ ಸೋತು
ತಿಳಿಸಿಯೇ ಬಿಟ್ಟಿದ್ದೆ ನನ್ನ ಪ್ರೀತಿಯನ್ನ.(೩)

ಈಗಲೂ ಪುಳಕಿತಗೊಳ್ಳುವೆ ನೆನೆಯುತ್ತ
ನೀ ನನ್ನ ಪ್ರೀತಿಯ ಒಪ್ಪಿದ ಕ್ಷಣ.
ಅಂದೇ ಅಲ್ಲವೇ ಶುರುವಾಗಿದ್ದು
ನಮ್ಮ ಒಲುಮೆಯ ಪಯಣ.
ಆ ಪ್ರಯಾಣಕ್ಕೆ ಬೇಕಿರಲಿಲ್ಲ
ನಮಗಾವುದೇ ಕಾರಣ.(೪)

ಈ ಪಯಣ ಸಾಗುತ್ತ
ತುಂಬಾ ಬದಲಾಗಿತ್ತು ನನ್ನ ಜೀವನ.
ಅದು ಎಷ್ಟೆಂಬುದು ತಿಳಿದದ್ದು
ಬಿಟ್ಟೋದಾಗಲೇ ನೀ ನನ್ನ.
ಕಳೆದೇ ಹೋಗಿದ್ದೆ ನಾ ನನ್ನ ಜೀವನದಿಂದ
ತುಂಬಿಹೋಗಿದ್ದೆ ನೀ ನನ್ನ ಜೀವನವನ್ನ.(೫)

ಬರೀಗೈಲಿ ನೀ ಬಿಟ್ಟುಹೋಗಲಿಲ್ಲ ನನ್ನ
ಕೊಟ್ಟು ಹೋಗಿದ್ದೆ ಸಾಲು ಸಾಲು ನೆನಪುಗಳನ್ನ
ಅದರಿಂದಲೇ ಆಗುತ್ತಿದೆ ಪ್ರತಿ ಕ್ಷಣ
ನೋವಿನ ಜನನ ಕಣ್ಣೀರಲಿ ಸ್ನಾನ.
ಇಷ್ಟಾದರೂ ನಾ ಕಾಣುತ್ತಿರುವೆ
ಮತ್ತೆ ನೀ ಬರುವೆ ಎಂಬ ನನಸಾಗದ ಕನಸನ್ನ.(೬)

ನಾ ಮಾಡದ ತಪ್ಪುಗಳಿಗೆ ಮನ್ನಿಸೆನ್ನ
ಮತ್ತೆ ಸೇರು ಬಾ ನನ್ನ.

- ಅಕವಿ

05 Mar 2017, 10:36 pm

ದುರ್ಗದಾ ಸಿರಿ

ಹೇಗೆ ವರ್ಣಿಸಲಿ ತಿಳಿಯದಾಗಿದೆ ಗಂಡುಮೆಟ್ಟಿದ ನಾಡನು
ಏಳು ತುತ್ತಿನ ಕೋಟೆಯನು
ನೊಡಲಿದು ಬರಿ ಕಲ್ಲಿನ ಕೋಟೆ
ಒಳ ಇಣುಕಿ ನೋಡಲು ಕಲ್ಲು ಕಲ್ಲು
ಹಾಡುವುದು ಕವಿತೆ

ನೋಡಲ್ಲಿ ನಿಂತಿಹರು ಅಲಮೇಲು_ರಾಮಾಚಾರಿ
ಅದುವೇ ಝಂಡಾ ಬತೇರಿ
ಚಾಮಯ್ಯ ಮೇಷ್ಟ್ರು ಬಿದ್ದಾಸ್ಥಳ
ಅದುವೇ ನೋಡು ತುಪ್ಪದ ಕೊಳ

ಹೇಗೆ ವರ್ಣಿಸಲಿ ತಿಳಿಯದಾಗಿದೆ.....

ಹಳೇಶಿಲಾಯುಗದ ಮಾನವನ ನೆಲೆಎಂದೋ?
ರಾಮನ ಅಜ್ಞಾತ ವಾಸದ ಸ್ಥಳವೆಂದೊ?
ಅಶೋಕ ಮಯೂರರ ಶಾಸನವಿದು ಎಂದೋ?
ಗಂಡುಗಲಿ ಮದಕರಿಯ ನಾಡೆಂದೋ?
ವೀರವನಿತೆ ಓಬವ್ವಳ ಬೀಡೆಂದೋ?

ಏನೆಂದು ವರ್ಣಿಸಲಿ ತಿಳಿಯದಾಗಿದೆ.....

ನೋಡಲ್ಲಿ ಸ್ವಾಗತಿಸುತ ನಿಂತಿಹಳು ಬನಶಂಕರಿ
ಅಲ್ಲೆ ತುಸುದೂರದಿ ಕುಲದೇವತೆ ಉಚ್ಚಂಗಿ
ಬರಗೇರಮ್ಮ_ತಿಪ್ಪಿನಕಟ್ಯಮ್ಮ ಭೇಟಿ ಉತ್ಸವ
ಇದಕೆ ಸಾಕ್ಷಿ ನಗರದೇವತೆ ಏಕನಾಥೇಶ್ವರಿ ಅವ್ವ

ಒಂದಾನೊಂದು ಕಾಲದಿ ಇದಾಗಿತ್ತು ರಾಜಬೀದಿ
ಇಂದಾಗಿದೆ ಪಬ್ಬು ಬಾರು ಸೇಂದಿಯಂಗಡಿ
ಒಂದಾನೊಂದು ಕಾಲದಿ ಹೇಗಿತ್ತು ನಾಯಕರ ಗೈರತ್ತು
ಇಂದಾಗಿದೆ ಗಣಿಮಾಲೀಕರ ಸ್ವತ್ತು

ಆದರೇನಂತೆ ಎಷ್ಟು ಬಾರಿ ಬರೆದರೂ ನವಯೌವ್ವನೆಯು ಕವಿ ಸಾಹಿತಿಗಳಿಗೆಲ್ಲ
ಅದೆಷ್ಟುಬಾರಿ ಹತ್ತಿಇಳಿದರೂ ಜೋತಿರಾಜ್
ಅಲಿಯಾಸ್ ಕೋತಿರಾಜ್ ಮನಸಿಗೆ ತೃಪ್ತಿಯೇಇಲ್ಲ

ದಿನಮಣಿಯು ಪಡುವಣಕೆ ನೀಡಲು ಚುಂಬನ ನಾಚಿನೀರಾದ ನಲ್ಲೆಯ ಕೆಂಪುಕೆನ್ನೆಯಂತೆ ಕಂಗೊಳಿಸುವ ಕೋಟೆಯನು ನೋಡುವುದೇ ಸುಮಧುರವಾದ ಕ್ಷಣ

ಕ್ಷಮಿಸಿ ಇನ್ನೇನು ಹೇಳಲಾರೆ ಕರ್ಪೂರದ ಗೊಂಬೆ ನಾನು
ದುರ್ಗಾಸ್ತಮಾನವಾಗುತಿದೆ ಮುಗಿಸಲೇ ಈ ಹಂಸಗೀತೆಯನ್ನು

_ಹಂಸಿನಿ

- ವಿಸ್ಮಯ

05 Mar 2017, 06:58 pm

ಕಿರುದಾರಿಯಲಿ ಪ್ರೀತಿ ಹುಡುಕಿ

------- ಕಿರುದಾರಿಯಲಿ ಪ್ರೀತಿ ಹುಡುಕಿ --------



ಕಿರುದಾರಿಯಲಿ ಬಚ್ಚಿಟ್ಟ ಪ್ರೀತಿ
ಅಲೆಯಾಗಿ ನನ್ನು ಸಾಗಿದೆ ಈ ರೀತಿ
ಮನಸ್ಸೆಂಬ ಪ್ರೀತಿಯ ಕಲೆಯಲ್ಲಿ ನಾನ್ನು
ಚಿತ್ರ ಬಿಡಿಸಿದೇ ನನ್ನಾಸೆಯಲ್ಲಿ
ಕಿರುದಾರಿಯಲಿ ಬಚ್ಚಿಟ ರೀತಿ
ಈ ಹಾಡಿನಲ್ಲಿ ನನ್ನ ಮನಸ್ಸೆಂಬ ಪ್ರೀತಿ..........

- Ajay

05 Mar 2017, 03:39 pm

ಏನು ಬೇಕು ಪ್ರೀತಿಗೆ...?

ಆ ಸಂಜೆಯ ಮಬ್ಬುಗತ್ತಲು
ನನ್ನವಳು ನಡೆದುಬರಲು,
ಬಾಯ್ತೆರೆದು ನಾ ಅವಳ ನೋಡಲು
ಮೌನವು ಆವರಿಸಿತೇನಗೆ
ಆ ಗಜಿಬಿಜಿ ಸಂತೆಯಲು.

ಮೂರು ಬೆರಳಿನ ಹಣೆಯ ಮೇಲೆ
ಸಣ್ಣದೊಂದು ಕುಂಕುಮದ ಬೊಟ್ಟು
ಮಾರುದ್ದದ ಜಡೆಯಲಿ
ಮಲ್ಲಿಗೆ ಹೂವಿನ ಜುಟ್ಟು.

ಹೇಳಬೇಕೆಂದಿರುವೆ ಅವಳಿಗೆ ನನ್ನ ಪ್ರೀತಿ
ಆದರೆ ಗೋತಿಲ್ಲ ಅವಳ ಕುಲ ಗೋತ್ರ ಜಾತಿ
ಆದರೇನಂತೆ ,
ಅವಳದು ಹೆಣ್ಣು ಜಾತಿ
ನನ್ನದು ಗಂಡು ಜಾತಿ
ಬಿಟ್ಟು ಬೇರೇನು ಬೇಕು ಪ್ರೀತಿಗೆ......

- MK Reddy

05 Mar 2017, 03:00 pm