Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನ ಕವನ

ನಾ ಬರೆಯುವ ಮುನ್ನ,
ಕೇಳಿತೆನಗೆ ಎನ್ನ ಮನ,
ಯಾರಿಗಾಗಿ ಈ ಕವನ?

ಕ್ಚಣಕಾಲ ಯೋಚಿಸಿತು ನನ್ನ ಮನ,
ಹೌದಲ್ಲ, ಯಾರಿಗಾಗಿ ಈ ಕವನ?
ನನಗಾಗಿ, ನನ್ನ ಮನ ತೃಪ್ತಿ ಗಾಗಿ,
ಆಸಕ್ತಿ ತುಂಬಿದ ಓದುಗರಿಗಾಗಿ,
ಓದಿ ಮನಸೂರೆಗೊಂಡು ಹರಸುವರಿಗಾಗಿ.

ಕವನ ಬರೆಯಲು ನಾನೇನು ಕವಿಯಲ್ಲ,
ಶಬ್ದಗಳ ಭಂಡಾರ ನನ್ನಲ್ಲಿಲ್ಲ ,
ಕಾವ್ಯಲೋಕದ ಅರಿವು ನನಗಿಲ್ಲ ,
ನಾ ಬರೆಯುವುದು ನನ್ನ ಸವಿನೆನಪಿಗಾಗಿ,
ಅರ್ಥಪೂರ್ಣ ವಾದ ಕಾಲ ಹರಣಕ್ಕಾಗಿ.

ಇದು ಕವನವಲ್ಲ, ನನ್ನ ಅನುಭವ,
ಅಂದು ನಾ ಕಂಡ ವಾಸ್ತವ,
ನನಗನಿಸಿತು ಸತ್ಯ ಸಂಗತಿಯ ಬಿಚ್ಚಿಡುವ,
ಈ ಸಾಲುಗಳಲ್ಲಿ ಬರೆದ ಹಲವು ನುಡಿ,
ನಾ ನಡೆದು ಬಂದ ಭೂತಕಾಲದ ಕನ್ನಡಿ.

- ರವೀಂದ್ರಬಾಪೂರ(GNL)

05 Mar 2017, 09:57 am

∆! ಧರೆಗೆ ದೊಡ್ಡವಳು... !∆

" ಸಕಲ ಕೋಟಿ ಜೀವರಾಶಿಯ ಪೊರೆಯಲು
ತಾಯ ಸೃಷ್ಟಿಸಿದ ಬ್ರಹ್ಮ
ಆ ತಾಯಿಯ ಋಣ ತೀರಿಸಲಾಗದು ನೀ!
ಎತ್ತು ಬಂದರೂ ಹತ್ತು ಜನ್ಮ
ಹಲವು ಧರ್ಮಗಳಿಗಿಂತ ಮಿಗಿಲೋ!
ಈ ಮಾನವನ ಮಹಾಜನ್ಮ
ಸಾರ್ಥಕಪಡಿಸಿಕೋ ಅದೇ ನಿನ್ನ ನಿತ್ಯ ಕರ್ಮ."

ಬರಹ../
@(ರಾಮಲಿರಾಮ)(ಹೆಚ್.ಆರ್.ಡಿ)@

- RAMAPPA DUMMADI

04 Mar 2017, 10:34 pm

ಸಹನ

ನನ್ನ ಸನಿಹದಲ್ಲಿ ಕೂತು
ನೀನು ನನ್ನ ಸ್ನೆಹಿತಳಾದೆ .
ಧರಣಿಯ ಮಗಳು
ನೀನಲ್ಲದಿದ್ದರು ........

ನನ್ನ ನೋವಿಗೆ ಸ್ಪಂದಿಸಿದೆ
ನನ್ನ ನಲಿವಲ್ಲಿ ನಗುವಾದೆ
ಎಂದೇOದಿಗೂ ಮರೇಲಾಗದ
ಪ್ರಾಣ ಸ್ನೆಹಿತೆ ನೀನಾದೆ ಸಹನಾ.......

- ಚುಕ್ಕಿ

04 Mar 2017, 07:14 pm

ಪಲ್ಲವಿ

ತಿಲಿಸಲಾಗದ ಭಾವ ನನ್ನೊಳಗಿರುವ ನಿನಗೆ.
ಗೆಳತಿ ನಾಳೆಯ ದಿನಕೆ ಕಾಲಿಡುವ ಆಸೆ ನನಗೆ ನಿನ್ನ ಜೊತೆ ಸೇರಿ ........
ಪ್ರತಿ ಕ್ಷಣ ನಿನ್ನ ನಗುವಿನ ಜೊತೆ ಸಮಯ ಕಳೆಯಲು ಆಸೆ ನನಗೆ .

ಪ್ರೀತಿಯ ಚಿಲುಮೆಯಲಿ ಮುತ್ತಿಗಾಗಿ
ಪರದಾಡೋ ಜವಾನ ನಾನು .
ನಕ್ಷತ್ರ ಮಂಡಲದಲ್ಲಿ ನನ್ನ ನಗುವಿಗಾಗಿ
ಹುಡುಕಾಡೋ ನವನೀತೆ ನೀನು .

ಮತ್ತೆ ಮತ್ತೆ ಹುಡುಕುತಿರುವೆ
ನೆಪವೋಂದು ನಿನ್ನ ನೋಡಲು .
ಕೋಟಿ ನಿಮಿಷಗಳು ಸಾಲಲ್ಲ
ನಿನ್ನ ನೆನೆಯಾಲು .

ಒಮ್ಮೊಮ್ಮೆ ಅನಿಸುತ್ತೆ ನನಗೆ ಸಮಯವೆOಬ
ಶತ್ರುವನ್ನು ಹಿOದಕ್ಕೆತಲ್ಲಿ ನಾನುಟ್ಟಿದ ಮೊದಲ
ಕ್ಷಣವೆ ನಿನ್ನ ಪರಿಚಯ ಮಾಡಿಕೋಂಡಿರ ಬೇಕೇಂದು ......

ಮಗುವಂತೆ ನಿನ್ನ ಮುಗ್ದವಾದ ಮಾತು
ಏಷ್ಟು ಕೇಳಿದರು ಸಾಲಲ್ಲ ಅದರ ಮತ್ತು.
ಪಲ್ಲವಿಯಾಗೆ ಪರಿಚಯವಾಗಿ
ನನ್ನ ಹ್ರುದಯ ಬಡಿತಕ್ಕೆ ಅನುಪಲ್ಲವಿಯಾದೆಯಾ
ಪ್ರೀತಿಯ ಗೆಳತಿ ...................!!!

- ಚುಕ್ಕಿ

04 Mar 2017, 06:38 pm

ಒಲವಿನ ಕವನ..‌‌

ಕನಸಿನ ತಾರೆ,
ಒಲವಿನ ಮಾಯೆ ಅವಳು.
ವಿಶ್ವ ಸುಂದರಿಯೂ ,
ವಿಶ್ವ ಮಾತೆಯೂ ಅವಳು...
ಕವಿತೆಯ ಅನುಪಲ್ಲವಿ,
ಅವಳೇ ನನ್ನ ಪ್ರೀತಿಯ ಪಲ್ಲವಿ..........

- sharanu

04 Mar 2017, 06:25 pm

ಬಯಸುವೆನು ನಿನ್ನ ಸನಿಹ...

ಗೆಳತಿಯು ನೀ ಎನ್ನ
ಹಗಲಿರುಳು ಪೊರೆವೆ
ಬಾಳೆಂಬ ವೀಣೆಯನು
ಸಂತಸದಿ ನುಡಿಸುವೆ

ಗೊಂಬೆಯಂತೆ ಮೃದುವಾಗಿ ಅಪ್ಪಿದೆ
ಮುದ್ದಿನಲಿ ಸಿಂಗರಿಸಿ ಮೈಮರೆತೆ
ಕಾಣದ ಅನುಬಂಧ ನೀ ಬೆಸೆಯುತಾ
ಪ್ರೀತಿಯ ಸೆರೆಯಲಿ ಬಚ್ಚಿಟ್ಟೆ
ನೋವು ನಲಿವಲಿ ಒಂದಾಗಿ ಬೆರೆಯುತಾ
ಬದುಕ ಯಾನಕೆ ದಿಕ್ಸೂಚಿಯಾದೆ

ಬಯಸುವೆನು ನಿನ್ನ ಸನಿಹ
ಈ ಉಸಿರ ಕೊನೆತನಕ
ಬೇಡುವೆನು ನಿನ್ನ ಒಲವ
ಈ ಜನುಮ ಇರುವತನಕ...

- Indushekar Chinivar

04 Mar 2017, 06:04 pm

ಗೆಳಯ

ಕಳೆದು ಹೋಗಿದೆ ನನ್ನ ಗಮನ
ನಿನ್ನ ನೆನೆವ ಕೆಲಸದಲ್ಲಿ .
ನನ್ನಲ್ಲೇ ನಾನಿಲ್ಲ ನಿನ್ನ
ಹುಡುಕುವ ಪ್ರಯತ್ನದಲ್ಲಿ .

ನಿನ್ನನ್ನು ಪ್ರತಿಕ್ಷಣ ನೆನೆಯಲು
ನಾ ನಿನ್ನ ತಾಯಿಯಲ್ಲ .....
ಅನುದಿನ ನಿನ್ನ ಜೊತೆಗಿರಲು
ನಾ ನಿನ್ನ ಗೆಳತಿಯಲ್ಲಾ ....

ನಾನು ಕೇವಲ ನಿನ್ನ ಹ್ರುದಯ
ನಿನ್ನ ಪ್ರೀತಿಯೆOಬ ಉಸಿರಿನಿಂದ
ಜೀವಿಸುತ್ತಿರುವ ಗೆಳಯ ........

- ಚುಕ್ಕಿ

04 Mar 2017, 05:10 pm

ಉಳಿಯುವುದೋ ಅಳಿಯುವುದೋ ತಿಳಿದ

ಹಾಡಾಗಿ ಉಳಿಯುವುದೋ ಹಾಳಾಗಿ ಅಳಿಯುವುದೋ ತಿಳಿದಿಲ್ಲ ಈ ಕವನ.
ಅರಳಿ ಹಿಗ್ಗುವುದೋ ನರಳಿ
ಕುಗ್ಗುವುದೋ ತಿಳಿದಿಲ್ಲ ಈ ಕವನ.
ಆದರೂ ಬರೆಯುತ್ತಿರುವೆ ಇದನ್ನು
ನೆನಪಿಸಿಕೊಳ್ಳುತ್ತ ನಿನ್ನನ್ನ.(೧)

ಅದು ನನ್ನ ಜೀವನದ ಮರೆಯಲಾಗದ ದಿನ
ಅಂದೇ ಕಂಡದ್ದು ನಾ ನಿನ್ನ
ನೋಡುತ್ತಲೇ ಇದ್ದೆನು ನಾ ನಿನ್ನ
ಮಿಟುಕಿಸದೆ ಕಣ್ಣ
ಮೊದಲ ನೋಟಕ್ಕೆ ಮರೆತೇ ಮೈಮನ
ಬೆರೆತೆ ನೀ ನನ್ನ.(೨)

ಪ್ರೀತಿಯ ನಿವೇದನೆ ಮಾಡಲು
ಸಜ್ಜಾಗಿತ್ತು ನನ್ನ ಮನ.
ಆದರೂ ಏಕೋ ಅಳುಕಿತ್ತು ನೀ ಒಪ್ಪದಿದ್ದರೆ
ನಾ ಸೇರಬೇಕಿತ್ತು ಮಸಣ.
ಅಂತೂ ಹೃದಯದ ಹಠಕ್ಕೆ ಸೋತು
ತಿಳಿಸಿಯೇ ಬಿಟ್ಟಿದ್ದೆ ನನ್ನ ಪ್ರೀತಿಯನ್ನ.(೩)

ಈಗಲೂ ಪುಳಕಿತಗೊಳ್ಳುವೆ ನೆನೆಯುತ್ತ
ನೀ ನನ್ನ ಪ್ರೀತಿಯ ಒಪ್ಪಿದ ಕ್ಷಣ.
ಅಂದೇ ಅಲ್ಲವೇ ಶುರುವಾಗಿದ್ದು
ನಮ್ಮ ಒಲುಮೆಯ ಪಯಣ.
ಆ ಪ್ರಯಾಣಕ್ಕೆ ಬೇಕಿರಲಿಲ್ಲ
ನಮಗಾವುದೇ ಕಾರಣ.(೪)

ಈ ಪಯಣ ಸಾಗುತ್ತ
ತುಂಬಾ ಬದಲಾಗಿತ್ತು ನನ್ನ ಜೀವನ.
ಅದು ಎಷ್ಟೆಂಬುದು ತಿಳಿದದ್ದು
ಬಿಟ್ಟೋದಾಗಲೇ ನೀ ನನ್ನ.
ಕಳೆದೇ ಹೋಗಿದ್ದೆ ನಾ ನನ್ನ ಜೀವನದಿಂದ
ತುಂಬಿಹೋಗಿದ್ದೆ ನೀ ನನ್ನ ಜೀವನವನ್ನ.(೫)

ಬರೀಗೈಲಿ ನೀ ಬಿಟ್ಟುಹೋಗಲಿಲ್ಲ ನನ್ನ
ಕೊಟ್ಟು ಹೋಗಿದ್ದೆ ಸಾಲು ಸಾಲು ನೆನಪುಗಳನ್ನ
ಅದರಿಂದಲೇ ಆಗುತ್ತಿದೆ ಪ್ರತಿ ಕ್ಷಣ
ನೋವಿನ ಜನನ ಕಣ್ಣೀರಲಿ ಸ್ನಾನ.
ಇಷ್ಟಾದರೂ ನಾ ಕಾಣುತ್ತಿರುವೆ
ಮತ್ತೆ ನೀ ಬರುವೆ ಎಂಬ ನನಸಾಗದ ಕನಸನ್ನ.(೬)

ನಾ ಮಾಡದ ತಪ್ಪುಗಳಿಗೆ ಮನ್ನಿಸೆನ್ನ
ಮತ್ತೆ ಸೇರು ಬಾ ನನ್ನ.

- ಅಕವಿ

04 Mar 2017, 04:51 pm

ಕಾದಿರುವೆ ನಿನಗಾಗಿ

ಮನದ ಮಂದಿರವ ತೆರೆದಿರುವೆ ನಿನಗಾಗಿ ನಾನು
ಒಳಗೆ ಬರಲಾರೆಯಾ ಒಮ್ಮೆಯಾದರೂ ನೀನು..
ಕಣ್ಣುಗಳು ಮನದ ಮಾತನ್ನು ಕೇಳದು
ಹೃದಯ ಒಳಗಿನ ಭಾವನೆ ಹೇಳದು..
ಆಸರೆಯ ಬಯಸಿ ಬಂದವಳು ನಾನು
ನಿರಾಸೆ ಮೂಡಿಸಿ ಹೊರಟವನು ನೀನು..
ರೆಕ್ಕೆ ಬಿಚ್ಚಿ ಹಾರುತ್ತಿದ್ದವಳು ನಾನು‌
ಹಾರಲಾರದ ನನ್ನ ಬಿಟ್ಟು ಹೋದವನು ನೀನು..

- ನಮಿತ ಗಟ್ಟಿ

03 Mar 2017, 09:46 pm

ಪಾತರಗಿತ್ತಿ

ರಂಗು ಹೆಪ್ಪುಗಟ್ಟಿ,
ರವಿಕೆಯ ಮೇಲೊಟ್ಟಿ,
ಮುದವ ತಂದಿದೆ,
ಮನವು ನೋವಮರೆತಿದೆ.
ಮೊಗ್ಗಿಗಿತ್ತು ಚುಂಬನ,
ಪ್ರೇಮಪತ್ರ ನೀಡಿದೆ,
ಹೂವ ಎದೆಯ ಹೊಕ್ಕಿದೆ...

ಬಳ್ಳಿ ಬಳುಕಿ ನಿಂತಿದೆ,
ಮೇಘಮಾಲೆಯ ಕಾದಿದೆ,
ಬಳ್ಳಿ ಕಾದು ನೊಂದಿದೆ,
ಬಳಿಗೆ ಬಂದು ನೆರವಿಗೆ,
ಬಾಳಿಸುವಾಸೆ ಹೂಡಿದೆ.
ಮಾತ ಕೇಳಿ ನಲಿದಿದೆ,
ಮರಳಿ ಜೀವ ಬಂದಿದೆ,
ಮುತ್ತನಿತ್ತು ಪೊರೆದಿದೆ,
ಪಾತರಗಿತ್ತಿಯೊಂದರ ನೆರವಿದೆ.

-ಕನ್ನಡದ ಭಕ್ತ

- ಕನ್ನಡದ ಭಕ್ತ

03 Mar 2017, 06:00 pm