" ಸಕಲ ಕೋಟಿ ಜೀವರಾಶಿಯ ಪೊರೆಯಲು
ತಾಯ ಸೃಷ್ಟಿಸಿದ ಬ್ರಹ್ಮ
ಆ ತಾಯಿಯ ಋಣ ತೀರಿಸಲಾಗದು ನೀ!
ಎತ್ತು ಬಂದರೂ ಹತ್ತು ಜನ್ಮ
ಹಲವು ಧರ್ಮಗಳಿಗಿಂತ ಮಿಗಿಲೋ!
ಈ ಮಾನವನ ಮಹಾಜನ್ಮ
ಸಾರ್ಥಕಪಡಿಸಿಕೋ ಅದೇ ನಿನ್ನ ನಿತ್ಯ ಕರ್ಮ."
ತಿಲಿಸಲಾಗದ ಭಾವ ನನ್ನೊಳಗಿರುವ ನಿನಗೆ.
ಗೆಳತಿ ನಾಳೆಯ ದಿನಕೆ ಕಾಲಿಡುವ ಆಸೆ ನನಗೆ ನಿನ್ನ ಜೊತೆ ಸೇರಿ ........
ಪ್ರತಿ ಕ್ಷಣ ನಿನ್ನ ನಗುವಿನ ಜೊತೆ ಸಮಯ ಕಳೆಯಲು ಆಸೆ ನನಗೆ .
ಪ್ರೀತಿಯ ಚಿಲುಮೆಯಲಿ ಮುತ್ತಿಗಾಗಿ
ಪರದಾಡೋ ಜವಾನ ನಾನು .
ನಕ್ಷತ್ರ ಮಂಡಲದಲ್ಲಿ ನನ್ನ ನಗುವಿಗಾಗಿ
ಹುಡುಕಾಡೋ ನವನೀತೆ ನೀನು .
ಮತ್ತೆ ಮತ್ತೆ ಹುಡುಕುತಿರುವೆ
ನೆಪವೋಂದು ನಿನ್ನ ನೋಡಲು .
ಕೋಟಿ ನಿಮಿಷಗಳು ಸಾಲಲ್ಲ
ನಿನ್ನ ನೆನೆಯಾಲು .
ಒಮ್ಮೊಮ್ಮೆ ಅನಿಸುತ್ತೆ ನನಗೆ ಸಮಯವೆOಬ
ಶತ್ರುವನ್ನು ಹಿOದಕ್ಕೆತಲ್ಲಿ ನಾನುಟ್ಟಿದ ಮೊದಲ
ಕ್ಷಣವೆ ನಿನ್ನ ಪರಿಚಯ ಮಾಡಿಕೋಂಡಿರ ಬೇಕೇಂದು ......
ಮಗುವಂತೆ ನಿನ್ನ ಮುಗ್ದವಾದ ಮಾತು
ಏಷ್ಟು ಕೇಳಿದರು ಸಾಲಲ್ಲ ಅದರ ಮತ್ತು.
ಪಲ್ಲವಿಯಾಗೆ ಪರಿಚಯವಾಗಿ
ನನ್ನ ಹ್ರುದಯ ಬಡಿತಕ್ಕೆ ಅನುಪಲ್ಲವಿಯಾದೆಯಾ
ಪ್ರೀತಿಯ ಗೆಳತಿ ...................!!!
ಹಾಡಾಗಿ ಉಳಿಯುವುದೋ ಹಾಳಾಗಿ ಅಳಿಯುವುದೋ ತಿಳಿದಿಲ್ಲ ಈ ಕವನ.
ಅರಳಿ ಹಿಗ್ಗುವುದೋ ನರಳಿ
ಕುಗ್ಗುವುದೋ ತಿಳಿದಿಲ್ಲ ಈ ಕವನ.
ಆದರೂ ಬರೆಯುತ್ತಿರುವೆ ಇದನ್ನು
ನೆನಪಿಸಿಕೊಳ್ಳುತ್ತ ನಿನ್ನನ್ನ.(೧)
ಅದು ನನ್ನ ಜೀವನದ ಮರೆಯಲಾಗದ ದಿನ
ಅಂದೇ ಕಂಡದ್ದು ನಾ ನಿನ್ನ
ನೋಡುತ್ತಲೇ ಇದ್ದೆನು ನಾ ನಿನ್ನ
ಮಿಟುಕಿಸದೆ ಕಣ್ಣ
ಮೊದಲ ನೋಟಕ್ಕೆ ಮರೆತೇ ಮೈಮನ
ಬೆರೆತೆ ನೀ ನನ್ನ.(೨)
ಪ್ರೀತಿಯ ನಿವೇದನೆ ಮಾಡಲು
ಸಜ್ಜಾಗಿತ್ತು ನನ್ನ ಮನ.
ಆದರೂ ಏಕೋ ಅಳುಕಿತ್ತು ನೀ ಒಪ್ಪದಿದ್ದರೆ
ನಾ ಸೇರಬೇಕಿತ್ತು ಮಸಣ.
ಅಂತೂ ಹೃದಯದ ಹಠಕ್ಕೆ ಸೋತು
ತಿಳಿಸಿಯೇ ಬಿಟ್ಟಿದ್ದೆ ನನ್ನ ಪ್ರೀತಿಯನ್ನ.(೩)
ಈಗಲೂ ಪುಳಕಿತಗೊಳ್ಳುವೆ ನೆನೆಯುತ್ತ
ನೀ ನನ್ನ ಪ್ರೀತಿಯ ಒಪ್ಪಿದ ಕ್ಷಣ.
ಅಂದೇ ಅಲ್ಲವೇ ಶುರುವಾಗಿದ್ದು
ನಮ್ಮ ಒಲುಮೆಯ ಪಯಣ.
ಆ ಪ್ರಯಾಣಕ್ಕೆ ಬೇಕಿರಲಿಲ್ಲ
ನಮಗಾವುದೇ ಕಾರಣ.(೪)
ಈ ಪಯಣ ಸಾಗುತ್ತ
ತುಂಬಾ ಬದಲಾಗಿತ್ತು ನನ್ನ ಜೀವನ.
ಅದು ಎಷ್ಟೆಂಬುದು ತಿಳಿದದ್ದು
ಬಿಟ್ಟೋದಾಗಲೇ ನೀ ನನ್ನ.
ಕಳೆದೇ ಹೋಗಿದ್ದೆ ನಾ ನನ್ನ ಜೀವನದಿಂದ
ತುಂಬಿಹೋಗಿದ್ದೆ ನೀ ನನ್ನ ಜೀವನವನ್ನ.(೫)
ಬರೀಗೈಲಿ ನೀ ಬಿಟ್ಟುಹೋಗಲಿಲ್ಲ ನನ್ನ
ಕೊಟ್ಟು ಹೋಗಿದ್ದೆ ಸಾಲು ಸಾಲು ನೆನಪುಗಳನ್ನ
ಅದರಿಂದಲೇ ಆಗುತ್ತಿದೆ ಪ್ರತಿ ಕ್ಷಣ
ನೋವಿನ ಜನನ ಕಣ್ಣೀರಲಿ ಸ್ನಾನ.
ಇಷ್ಟಾದರೂ ನಾ ಕಾಣುತ್ತಿರುವೆ
ಮತ್ತೆ ನೀ ಬರುವೆ ಎಂಬ ನನಸಾಗದ ಕನಸನ್ನ.(೬)
ಮನದ ಮಂದಿರವ ತೆರೆದಿರುವೆ ನಿನಗಾಗಿ ನಾನು
ಒಳಗೆ ಬರಲಾರೆಯಾ ಒಮ್ಮೆಯಾದರೂ ನೀನು..
ಕಣ್ಣುಗಳು ಮನದ ಮಾತನ್ನು ಕೇಳದು
ಹೃದಯ ಒಳಗಿನ ಭಾವನೆ ಹೇಳದು..
ಆಸರೆಯ ಬಯಸಿ ಬಂದವಳು ನಾನು
ನಿರಾಸೆ ಮೂಡಿಸಿ ಹೊರಟವನು ನೀನು..
ರೆಕ್ಕೆ ಬಿಚ್ಚಿ ಹಾರುತ್ತಿದ್ದವಳು ನಾನು
ಹಾರಲಾರದ ನನ್ನ ಬಿಟ್ಟು ಹೋದವನು ನೀನು..